Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀಲಿ ಉಡುಗೆಯ ವಯ್ಯಾರಿ

ನೀಲಿ ಉಡುಗೆಯನು ತೊಟ್ಟು
ನಡೆದಿಹಳೋ ಹುಡುಗಿ
ಒಂದೊಂದೇ ಲಗು ಹೆಜ್ಜೆಗಳನು ಇಟ್ಟು,
ಒನಪು ವಯ್ಯಾರದ ನಡಿಗೆ

ಹೆರಳು ಹರಡಿದೆ ಕೆರಳಿ
ಹುರಿ ಮಯ್ಯ ಬೆನ್ನ ತುಂಬಾ
ಜಿಪುಣ ಗ್ರೇಸರ ಶಿಲ್ಪಿಯೊಬ್ಬ
ಕಡೆದನೇನೋ ಸಣ್ಣ ಸೊಂಟ
ತಪ್ಪನರಿತು ತಿದ್ದಿಕೊಂಡ
ಕಟಿಯ ಕೆಳಗೆ ಹಿಂಭಾರ ತಂದ.

ಹರೆಯ ಸೊಕ್ಕಿ, ಪ್ರಣಯ ಉಕ್ಕಿ
ತೃಪ್ತಗೊಂಡ ಸಿಂಹಿಣಿಯೊಂದು
ಆಗಷ್ಟೇ ಉಂಡು, ತುಸು ಗರ್ವವನು ಕೊಂಡು
ನಡೆದಂತೆ ಕಾಣುತಿಹುದು
ನಲ್ಮೆಯರಸಿಯ ನಡಿಗೆಯಿಂದು.

ಏನೋ ಯೋಚನೆ,
ಎತ್ತಲೋ ಸೂಚನೆ
ಏನೇನು ಅರಸಿಹುದೋ ಈ ಚೆಲುವಿಯ ಚಿತ್ತ.
ಹಿಂದೆಯೇ ಇರುವೆನು,
ಜೊತೆಯಲೇ ಬರುವೆನು
ನನ್ನರಸಿ ನಡೆದು ಕರೆದುಕೊಂಡು ಹೋದತ್ತ !

- ಶ್ರೀಗೋ.

23 Dec 2017, 07:28 am

ಕನ್ನಡಿ ಎದುರಿನ ಹುಡುಗಿ

ಯಾಕೆ ಹಾಗೆ ತಟ್ಟನೆ ತಿರುಗಿ
ನಿಂತೆ ಹೇಳೇ ಚೆಲುವೆ ?
ಕನ್ನಡಿ ನಿನಗೇನಾದರೂ ಸೋತು
ಕಣ್ಣು ಹೊಡೆಯಿತೆ ?
ನಿನ್ನ ಸುಂದರ ಮೊಗದ ಹಿಂದೆ
ಅಡಗಿರುವ ನೋವು
ಅಚಾನಕವಾಗಿ ನಿನಗೆ ಕಂಡು ಬಿಟ್ಟಿತೇ ?
ಎಲ್ಲೋ ದೂರದಲ್ಲಿ ಒಂದು ಮಗುವು
ಅಮ್ಮಾ ಎಂದ ಹಾಗೆ ದ್ವನಿಯು ಕೇಳಿತೆ ?

ಎಲ್ಲಾ ಭಾವುಕ ಸರಕುಗಳ
ಬದಿಗಿರಿಸಿ ಕೊಂಚ ನಗು ಚೆಲ್ಲು ಸುಂದರಿಯೇ,
ನಿನ್ನ ಚಂದ್ರ ವದನದಲ್ಲಿ ಅರಳಿರುವ
ಪ್ರೇಮ ಪುಷ್ಪದ ಗಂಧವನು ನೀನರಿಯೇ.

ಬಿಡು ಉಪಯೋಗವಿಲ್ಲದ ಬಿಗುಮಾನ
ಕೊಡು ಸ್ವಾರ್ಥವಿಲ್ಲದ ನಗುವ ಸಮ್ಮಾನ
ಪಡು ನಿನ್ನಷ್ಟಕ್ಕೆ ನೀನೇ ಹೇಳಿಕೊಂಡು ಸಮಾಧಾನ
ಯಾರಿಗಿಲ್ಲ ಇಲ್ಲಿ ನಿನ್ನ ಕಶ್ಟ ಕೇಳುವ ವ್ಯವಧಾನ.

- ಶ್ರೀಗೋ.

23 Dec 2017, 07:12 am

ಜಗಳ

ಕಾರಣವೇ ಬೇಕಿಲ್ಲ ಜಗಳಕ್ಕೆ ಈ ಜನಕ್ಕೆ
ಜರುಗಿದ್ದು ಒಂದಾದರೆ ಆಡುವುದು ಇನ್ನೊಂದು
ಮಾತು, ಹೇಳುವುದು ಬೇರೊಂದು ಕಥನ.

ಮಾತೊಂದೆ ಇವರ ಅಸ್ತ್ರ,
ನರವಿಲ್ಲದ ನಾಲಿಗೆಗೆ ಅಡ್ಡಿ ಏನು ಈ ಮನುಜರಿಗೆ,
ಪ್ರತಿಯೊಂದು ನಲಿವನ್ನು ನೂಕಿ ಹಾಕಿ ಪಾತಾಳಕ್ಕೆ
ಮಾತಲ್ಲಿ ಕೊಂಡು ತರುವರು ತಪ್ಪಿತಸ್ಥ ಭಾವನೆ
ಮನಕ್ಕೆ.

ಪಾಪ ಎಂಬುದು ಕೂಡಿಟ್ಟ ಬುತ್ತಿಯಂತೆ ಒಬ್ಬರ ಕಣ್ಣೀರು ನುಂಗಿ ಈ ಕ್ಷಣದ ನಗುವು ಪಡೆದರೆ
ನೋವು ಮರಳಿ ಬರುವುದು ನಿಮ್ಮೆಡೆಗೆ ಬಿಡದ
ಬೇತಾಳನಂತೆ ಬೆನ್ನೇರಿ.

ಎಲ್ಲರಲ್ಲೂ ಮೆಚ್ಚುಗೆ ಪಡೆಯುವ ಹುಚ್ಚು
ಏತಕೆ ಈ ಮನಸ್ಸಿಲ್ಲದ ಸ್ವಾರ್ಥಪರರಿಗೆ,
ನೋವು ಕೊಟ್ಟ ನಡೆತೆಯೇ ಸರಿಯೆಂದು
ಸಮರ್ಥಿಸಿಕೊಳ್ಳುವವರು ನೋಡಿದವರ
ಮುಂದೆಯೇ.

ಜಗಳ ಮಾಡದಿದ್ದರೆ ನೋವು ಕೊಡದಿದ್ದರೆ
ಊಟ ಸೇರದೇನೋ!
ಕಣ್ಣೀರ ಕಾಣದಿದ್ದರೆ ಕುಡಿದ ನೀರು ಗಂಟಲು
ಇಳಿಯದೇನೋ!
ಒಂದು ತಿಳಿಯದು ನನಗೆ ಇಂದು ಈ ಜೀವವಿಲ್ಲದ
ಜಗಳದಿಂದ ಜೀವಿ ಹಿಂಡುವುದೇಕೆಂದು?

- ಚುಕ್ಕಿ

22 Dec 2017, 11:35 pm

ಅಂಬರದ ಕಣ್ಣವಳು

ಅಂಬರದ ಕಣ್ಣವಳು ಕಾಡಿಗೆ
ಇಲ್ಲದೇನೆ ಮಿಂಚನ್ನು ಚೆಲ್ಲಿದವಳು,
ಬೆಳದಿಂಗಳ ಕರಿಮೋಡ ಸರಿಸಿ ಶಶಿಯಂತೆ ಕಂಡವಳು.

ಕಣ್ಣಲ್ಲೇ ನಕ್ಕು ಕ್ಷಣಬಿಡದೆ ಕಾಡುವವಳು,
ಕೆಂದಾವರೆ ತುಟಿಯವಳು,
ಉಸಿರ ಬಿಸಿಗೆ ಮುನಿದು ಮಲಗುವವಳು,
ಲಾಂಛನವಿಲ್ಲದ ಲಕುಮಿ ಅವಳು.

ಎದೆಯಲ್ಲಿನ ಪ್ರೀತಿಯ ಮೀಟಿ
ಕನಸುಗಳ ಕಪಾಟಿಯಲ್ಲಿ ಕಳೆಯಲಾಗದ ನೆನಪುಗಳನು ತುಂಬಿ ಮುಸಿ ಮುಸಿ ನಗುವವಳು,
ಕಣ್ಣ ಅಂಚಲ್ಲಿ ಕಿಂಚಿತ್ತು ಭಾವನೆಗಳ ಬಂಡಿ ಇಟ್ಟಿರುವಳು ಮಾತಲ್ಲಿ ಹೇಳದ ಮೌನವನ್ನು ಕುಡಿನೋಟದಲ್ಲೇ ತಿಳಿಸುವಳು.

ನನ್ನ ನಗುವಿನ ಹೊಳಪು ತುಂಬಿ ಬಿಗುತಿಹಳು ರೆಪ್ಪೆಯ ಅತ್ತಿತ್ತಾ ಆಡಿಸುತ್ತಾ ನನ್ನ ಉಸಿರಿನ ಸದ್ದು ಎಣಿಸುತ್ತಾ.........

- ಚುಕ್ಕಿ

22 Dec 2017, 09:56 pm

ಮುಗುಳ್ನಗೆ

ಮನಕ್ಕೆ ಖುಶಿಯ ಕೊಡುವುದು ಆ ನಿನ್ನ ಮುಗುಳ್ನಗೆ
ಮೆರಸುವುದು ಮನದೊಳಗಿನ ದುಗುಡಗಳನೆ
ಕೊಡುವುದೆನಗೆ ಉತ್ಸಾಹ ಹುಮ್ಮಸ್ಸು
ತರಿಸುವುದು ಎನ್ನ ಮೊಗದಲೂ ಅದೆ ಮುಗುಳ್ನಗೆ
ಕಾಯುತಿರುವೆನಾ ಮತ್ತೆ ನೋಡಲು ನಿನ್ನ ಆ ಮುಗುಳ್ನಗೆ

- ರಘು

22 Dec 2017, 09:27 pm

ಯಂತಾ ಕಾಲ ಬಂತು

ಯಂತಾ ಕಾಲ‌ ಬಂತು ಸುನಾಮಿಯ ತರ
ಆಧುನಿಕ ಕಾಲ ಬಂತು...


ಪಂಚೆ ಪೈಜಾಮುಗಳ ಮುಂದೆ ಪ್ಯಾಂಟ್ ಟೀ ಶರ್ಟ ಗಳು ಬಂತು...
ಲಂಗ ದಾವಣಿಗಳ ಮುಂದೆ ಜೂಡಿದಾರ
ನೈಟಿಗಳು ಬಂತು
ಅಂಚೆ ತಂತಿಗಳ ಮುಂದೆ ಜಂಗಮವಾಣಿಯ ಅಲೆಯು ಉಂಟಾಯಿತು...
ಯಂತಾ ಕಾಲ ಬಂತು ಸುನಾಮಿ ತರ ಆಧುನಿಕ ಕಾಲ ಬಂತು...||

ಅರಿಶಿನ ಕೇಸರಿಯಾ ಸ್ಥಾನದಲ್ಲಿ ಪೇರ್
ಅಂಡ್ ಲವ್ಲಿ ಬಂತು.
ಕುಂಕುಮ ವಿಭೂತಿಯಾ ಮುಂದೆ ಸ್ಟಿಕ್ಕರ್
ಚುಕ್ಕಿಗಳು ಬಂತು..
ಓಡಾಟ ಅಲೇದಾಟಗಳ ನಡುವೆ ವಿಷ ಉಗುಳುವ ಯಂತ್ರಗಳು ಬಂತು..
ಬಾನೆತ್ತರಕ್ಕೆ ಬೆಳೆದ ಮರಗಳಿಗೆ ಕುತ್ತು
ಉಂಟಾಯಿತು..||
ಯಂತಾ ಕಾಲ ಬಂತು ಸುನಾಮಿಯ ತರ
ಆಧುನಿಕ ಕಾಲ ಬಂತು..

ಹಣದಾಸೆಗೆ ಮನುಷ್ಯರನ್ನು ಕೊಲ್ಲುವ ಜರ್ಜರಿತ
ಕಾಲ ಬಂತು..
ಮೊಸ ವಂಚನೆಗಳಿಗೆ ದಾರಿಯು
ಸುಲಭವಾಯಿತು...
ಪಾಪ ಪುಣ್ಯಗಳೆಂಬ ನೆಲೆಯು ಲೆಕ್ಕಕ್ಕೆ
ಸಿಗದಷ್ಟು ಬೇಳೆಯಿತು...
ಆಗಾದರೂ ನಾವ್ ತುಂಬ ಒಳ್ಳೆಯ ಜನ ಎಂದು ಹೇಳಿಕೊಂಡು ತಿರುಗುವ ಕಾಲ ಬಂತು.||
ಯಂತಾ ಕಾಲ ಬಂತು ಸುನಾಮಿಯ ತರ ಆಧುನಿಕ ಕಾಲ ಬಂತು...

ಮಂಗಳಕ್ಕೆ ರಾಕೆಟ್ ಕಳುಹಿಸುವಂತಾ
ಬುದ್ದಿವಂತರ ಕಾಲ ಬಂತು..
ಅಂಗಾದರೂ ಮೂಢನಂಬಿಕೆಗಳನ್ನು ಹೊಗಲಾಡಿಸದಾಯಿತು..
ಕಣ್ಣು ಕಿವಿ ಮೂಗೆಂಬ ಪಂಚೆಂದ್ರಿಯಗಳ ಮೇಲೆ
ಇಡಿತ ಕಡಿಮೆಯಾಯಿತು..‌
ಇದರಿಂದ ಅತ್ಯಾಚಾರ ಅನಾಚಾರಗಳ ಸಂಖ್ಯೆಯು ಹೆಚ್ಚಾಯಿತು....||

ಯಂತಾ ಕಾಲ ಬಂತು ಸುನಾಮಿಯ ತರ
ಆಧುನಿಕ ಕಾಲ ಬಂತು ..||


ಅಮರ್ತ್ಯ ಮಾರುತಿ ಯಾದವ್..

- ಅಮರ್ತ್ಯ ಮಾರುತಿ

22 Dec 2017, 07:33 pm

ನಿನ್ನ ಹೆಸರು

ಹೇ ಹುಡುಗೀ..!
ಅಲೆ ತಲುಪದ ತೀರದಲ್ಲಿ
ನಿನ್ನ ಹೆಸರ ಬರೆಯ ಹೋದೆ
ಕರಿಗಪ್ಪು ಹಸಿ ಮೋಡವೊಂದು
ನನ್ನ ಅಣಕಿಸಿ ಒಳಗೊಳಗೇ ನಕ್ಕಿತು...

- S@andeeps@ndi

22 Dec 2017, 07:24 pm

ನೀಲವೇಣಿ

ಮೇಘಶ್ಯಾಮನ
ಮುರಳಿ ಲೋಲನ
ಗೊಲ್ಲ ಗೌಡನ
ನಲ್ಲ ನಯನನ
ಧರ್ಮ ಗುರುವಿನ
ಮಧುರ ಮಾತಿನ
ನ್ಯಾಯ ಬೋಧನ
ನೆನೆದು ಹಾಡುತಿರಲು

ನೀಲವೇಣಿಯವಳು ಬಾಗಿ
ಇಣುಕಿ ನೋಡುತಿಹಳು
ಕಣ್ಣ ರಪ್ಪೆಯ ಕುಣಿಸುತಲವಳು
ಅರ್ದಚಂದ್ರನ ಮರೆಮಾಚಿ ನಿಂತು
ಇಂಪ ಧನಿಯ ನಗುವ ಬೀರುತಿಹಳು

ಗೆಜ್ಜೆ ಕಾಲ್ಗಗಳ ಸದ್ದಲೇ ಅವಳು
ಹಿಂದೆಜ್ಜೆ ತಾಳ ಹಾಕುತಲವಳು
ಮಿಂಚಂತೆ ಹೊಳೆದು ಮಾಯವಾದಳು.

- ಡಿ.ಸಿ.ಎನ್@100%

22 Dec 2017, 05:12 pm

ಒಂದು ಕವಿತೆ.......

ನಾ ಗಿಚಿದೆ ಒಂದು ಕವಿತೆ
ನನ್ನೆದೇಯ ಪುಟವ ತೆರೆದು
.................‌‌‌......
ಒಲವಿನ ಲೇಖನಿಯ ಹಿಡಿದು
ನನ್ನೋಲವ ಕಥೆಯನ್ನೆಲ್ಲ
ಬರೆಸಿಟ್ಟೆ ಅದರಲ್ಲಿ...
ಅಲೆಯಂತೆ ಬರುತಿಹುದು
ಪದಗಳಾ ಸಾಲು
ಎಷ್ಟು ಗೀಚಿದರು ಮುಗಿಯುತಿಲ್ಲ
ಪದಪುಂಚಗಳ ಸಾಲು
ಪುಟತಿರುಗಿಸಿದಂತೆಲ್ಲ ಮುರುಕಳಿಸುತಿದೆ
ಸಿಹಿಕಹಿ ನೆನಪುಗಳೇಲ್ಲ
ನಾ ಆಡದ ಒಂದೊದು ಮಾತು
ಪದಗಳಂತೆ ಬರೆದಿಡುವ
ಪುಟಗಳ ಸಾಲು......
ಹೋಸ ಚಿಗುರಿನಂತೆ
ಚಿಗುರೊಡೆಯುತಿದೆ ಭಾವನೆಗಳ
ಸಾಲು ದಿನಗಳು ಮುಗಿದಂತೆ
ಹೊಸ ದಿನಗಳೂ ಬರುವಂತೆ
ಎಂದಿಗು ಮುಗಿಯದ ಈ ನನ್ನ ಕವಿತೆ
ಪುಟಗಳು ಮುಗಿಯದಿರಲಿ ಈ
ಒಲವಿನ ಕವಿತೆಗೆ....
ನಾ ಬರೆದಿಟ್ಟ ನನ್ನೋಲವ ಪುಸ್ತಕದಲ್ಲಿ.......

- ರಾಗಸಿರಿ....

22 Dec 2017, 02:10 pm

ಪುಟ್ಟನ ಮನೆ

ನಮ್ಮನೆ ಒಂದು ಪುಟ್ಟ ಗೂಡು
ಎಲ್ಲರು ಕೂಡಿರೋ ಜೇನುಗೂಡು
ಪ್ರೀತಿ ಮಮತೆಯೆ ಆಧಾರ ನೋಡು
ಕೂಡಿ ಹೇಳುವ ಒಲವಿನ ಹಾಡು

ಅಣ್ಣ ಅಕ್ಕ ಅಮ್ಮ ಅಪ್ಪ
ಚಿಕ್ಕಮ್ಮನ ಜೋತೆ ಚಿಕ್ಕಪ್ಪ
ನನ್ನ ಮುದ್ದಿನ ದೊಡ್ಡಪ್ಪ
ಅಜ್ಜಿಯ ನಗಿಸುವ ತಾತಪ್ಪ
ಇವರ ಕಣ್ಮಣಿ ನಾನಪ್ಪ

ನಮ್ಮ ಮನೆಯಲಿ ಪ್ರತಿದಿನ ಹಬ್ಬವೇ
ನಿತ್ಯವೂ ಸಡಗರ ಸಂಭ್ರಮವೇ
ನಂಬಿಕೆಯ ಹರಸುವ ಮನವದುವೇ
ಸಂಭಂದಗಳ ಗಟ್ಟಿಗೊಳಿಸುವೆ

ಸ್ವಗ೯ವೇ ನಾಚುತ್ತೀದೆ ನಮ್ಮನ್ನು ನೋಡಿ
ನಾನು ಬರಲೇ ನಿಮ್ಮಯ ಜೋಡಿ
ಏನ್ನುತ ಬರುತಿದೆ ಓಡಿ ಓಡಿ
ನಮ್ಮಯ ಜೋತೆಗೂಡಿ
ವಿಶ್ವಾಸದಿ ಕೈ ನೀಡಿ.....
ಪ್ರೀತಿಯೆ ನಮ್ಮ ಒಡನಾಡಿ..

- Bhagya Girish

22 Dec 2017, 11:06 am