Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

""ಚಿಲಿ ಪಿಲಿ""

"ಸುಂದರವಾದ
ಬೆಳ್ಳಿ ಮೋಡಗಳ,ಬೆಟ್ಟ ಗುಡ್ಡಗಳ ನಡುವೆ
ಕಾವೇರಿ ತಾಯಿಯ ಮಡಿಲಲ್ಲಿ
ಸಿರಿ ಉಡುಗೆ ತೊಟ್ಟು ನಿಂತ್ತಿದೆ
ನನ್ನ ಜ್ಞಾನ ದೇಗುಲ,

"ಮುಂಜಾನೆಯ ಮಂಜಲಿ
ತಂಗಾಳಿಯ ಸುಳಿಯಲ್ಲಿ
ಸೂರ್ಯನ ಹೊಂಗಿರಣದಂತೆ
ಪ್ರಜ್ವಲಿಸುತ್ತಿದೆ ಜ್ಞಾನ ಮಂಟಪ
ನನ್ನ ಜ್ಞಾನ ದೇಗುಲ,

"ಒಂದಾನೊಂದು ಕಾಲದಲ್ಲಿ
ರೆಕ್ಕೆ ತೆರೆದು ಚಿಲಿ ಪಿಲಿ ಎಂದು
ಸ್ವಚಂದವಾಗಿ ಹಾರಡಿದೆವು
ಮಮತೆಯ ಮಂದಿರ ಜ್ಞಾನ ಬಂಡಾರದಿ,

***ರಾಜು ಗುಡಿ***ಹಾಸನ

- ರಾಜು ಹಾಸನ

21 Dec 2017, 12:16 pm

ಅಪ್ಪನೆನಿಸಿಕೊಂಡ ಆ ಕ್ಷಣ

ಹೇಗೆಂದು ವರ್ಣಿಸಲಿ ಅಪ್ಪನೆನಿಸಿಕೊಂಡ ಆ ಕ್ಷಣವನು
ಬಹು ಕಾಲದ ಆಸೆಯ ನೆರವೇರಿಸಿ
ಅಂದು ನೀ ಕೊಟ್ಟೆ ಸಹಿ ಸುದ್ಧಿಯ
ಜೇನಿಗಿಂತಲು ಮಿಗಿಲಾದ ಮನಸ್ಸಿಗೆ ಹಿತವಾದ ಖುಶಿಯನು
ನಮ್ಮಿಬ್ಬರ ಪ್ರೀತಿ ತುಂಬಿರಲು ನಿನ್ನುಧರದಲಿ
ನಾನೆ ಧನ್ಯನು ಇಂದು
ಎದೆಬಡಿತ ಕೇಳಿದ ಆ ಕ್ಷಣ ಮೈಯ್ಯಲೇನೋ ರೋಮಾಂಚನ
ಕಂಡು ಮಗುವಿನ ಚಲನವಲನ ತುಂಬಿತ್ತು ಎನ್ನ ಮನ
ಮರೆಯಲಾರೆ ಎಂದೆಂದಿಗೂ ಈ ನೀನಿತ್ತ ಉಡುಗರೆಯ
ಧನ್ಯವಾದಗಳು ನಿನಗೆ ಓ ನನ್ನ ನಲ್ಲೆ

- ರಘು

21 Dec 2017, 11:55 am

ಮುಂಜಾನೆ ಮಂಜಿನಲಿ

ಕನಸಿನಲಿ ಕಂಡ ನಿನ್ನ ಮೊಗವ
ಕಂಡೆ ನಾ ಮುಂಜಾನೆಯ ಮಂಜಿನಲಿ
ಏನೆಂದು ಹೇಳುವುದು ಚೆಲುವೆ
ನಕ್ಷತ್ರದ ಹೊಳಪು ಮೀರುವಂದದಿ
ಬಾನ ಬೆಳದಿಂಗಳ ಚಂದಿರನ ನಾಚುವಂದದಿ

ರಘು

- ರಘು

21 Dec 2017, 11:14 am

ಪ್ರೀತಿಸುವೇ, ಪ್ರೀತಿಸುತಲೆ ಇರುವೆ

"ಪ್ರೀತಿಸುವೇ, ಪ್ರೀತಿಸುತಲೆ ಇರುವೆ
ನನ್ನ ಪ್ರೀತಿಯ ಬಂಗಾರಿ
ಈ ಜೀವಾ ಮಣ್ಣು ಸೇರಿದರು,

ನೀ ಕಣ್ಣೀರು ಹಾಕದಿರು
ನನ್ನ ಬಂಗಾರಿ ಉಸಿರು ನಿಂತ
ಈ ನಿನ್ನ ಗೆಳೆಯನ ದೇಹದ ಮುಂದೆ,

ನಾ ಬಯಸುವೆ ನಾ ಸತರೂ
ಜಾರದಿರಲಿ ಕಂಬನಿ ನನ್ನ ಬಂಗಾರಿ
ನಿನ್ನ ಕಣ್ಣುಗಳಲ್ಲಿ ಎಂದು
ನಗು ತುಂಬಿರಲಿ ಸದಾ
ನನ್ನ ಬಂಗಾರಿ ನಿನ್ನ ಮನದಲಿ ಎಂದೆಂದಿಗೂ.

***ರಾಜು ಗುಡಿ*** ಹಾಸನ

- ರಾಜು ಹಾಸನ

21 Dec 2017, 12:53 am

ನಾನರಿಯದಾದೆನವ್ವ!

ತುಂತುರು ಮಳೆಗೆ
ಚುಂಬಿಸಿ ಬೀಸೋ ಗಾಳಿಗೆ
ಅಂಜದೆ ಬಾಳುವ ಆಲದಮರ
ನಾನೆಂದುಕೊಂಡಿದ್ದೆನವ್ವ !

ಖಡ್ಗದಿ ತುಂಡಾಗದ
ಬಡ್ಗೀಲಿ ಬಗ್ಗದ
ಕುಗ್ಗದ- ಬಗ್ಗದ ಲೋಹ
ನಾನೆಂದುಕೊಂಡಿದ್ದೆನವ್ವ!

ನಿಲ್ಲದೆ ಓಡುವ ನದಿಯಂತೆ
ಝಲ್ಲೆನಿಸುವ ಸುನಾಮಿಯಂತೆ
ಎಲ್ಲವ ಎದುರಿಸುವ ಧೀರೆ
‌ನಾನೆಂದುಕೊಂಡಿದ್ದೆನವ್ವ!

ಸುಂದರವಾದ ಬಳ್ಳಿಯ
ಸುಂದರವಾದ ಕಸುಮವಾಗಿ
ಸುಂದರ ನಿನ್ನ ಪಾದಬೆಳಗೋ ಹೂ
ನಾನೆಂದುಕೊಂಡಿದ್ದೆನವ್ವ!

ಅಡಿಗಡಿಗೆ ಎಡವುತ
ಅಡಿಗಡಿಗೆ ಕಂಬನಿ ಕರೆಯುತ
ಪಡಿಸಣಿ ಗೇಮೆಯು
ನನದಾಯಿತಲ್ಲವ್ವ!

ಕಾಣದ ನಿ‌ನಗಾಗಿ
ಕಾಣದ ದಾರಿಯಲಿ
ಕಣ್ಮುಚ್ಚಿ ಕರೆಯೋ
ವೇದನೆ ನನದಾಯಿತಲ್ಲವ್ವ!

ಎಂತಿರುವೆ ನೀನಾನರಿಯೆ
ಎಂದಿಲ್ಲಿ ಬರುವೆ ತಿಳಿಯೆ
ಅಂದಿಗಾಗಿ ಬಾಳುವಾಸೆ
ನನ್ನಲ್ಲಿರುವುದವ್ವ!

ನಿನಗಂದು ಒಡ್ಡಿದೆ ಆಮಿಷವ
ನನಗಾಗಿ ನೀಡೆಂದು ವಿದ್ಯೆಯ
ಮೌನವಾಗಿ ಮರೆಯಾದೆ ಏಕೋ
ನಾನರಿಯದಾದೆನವ್ವ!

ಎಲ್ಲವ ಗೆಲ್ಲುವ ಉಮ್ಮಸ್ಸು
ಬಲ್ಲವರಾರು ನಿನ್ನ ವರ್ಚಸ್ಸು
ಅಲ್ಲಗಳೆವರು ನನ್ನವರೆಂದು
ನಾನರಿಯದಾದೆನವ್ವ!

ಸಂಸಾರದಲ್ಲಿ ಬಂದಿಯಾದೆನು
ಸಂಸಿದ್ಧಿಗಾಗಿ ಪರಿತಪಿಸಿದೆನು
ಸಂಪೂರ್ಣವಾಗಿ ಮಣ್ಣಾಗುವೆನೆಂದು
ನಾನರಿಯದಾದೆನವ್ವ!



ಶಾರಧ

- ಶಕುಂತಲಾ

20 Dec 2017, 10:32 pm

ನಾ ಮಾಡಿದ ತಪ್ಪಾದರು ಏನೋ ....ಗೆಳೆಯ

ನೀನಿಟ್ಟ ಪ್ರೀತಿಯ ಮಾತೆ ಸುಳಾದರೆ , ಈ ನನ್ನ ಮನಸ್ಸು ಉಳಿಯುವುದೇ....
ನೀ ಕೊಟ್ಟ ಆಶ್ವಾಸನೆ ಇಂದು ಎನ್ ಆಯಿತೋ ....

ನೀನೇ ಇಂದು ನನ್ನ ಬಿಟ್ಟು ಹೊರಡುವ ಕಡು ನಿರ್ಧಾರವೇಕೋ ಮಾಡಿದೆ ....

ನೀ ಬಿಟ್ಟು ಹೊರಡುವ ಮುನ್ನ ಒಂದು ಬಾರಿ ನನ್ನ ನೆನೆಯೊ .....

ನನ್ನ ಬಿಟ್ಟು ಹೋಗೋ ತಪ್ಪಾದರೂ ನಾ ಮಾಡಿದ್ದಾದರು ಏನೋ ????

ನಾ ನಿನ್ನ ಹಚ್ಚಿಕೊಂಡಿದ್ದೆ ತಪ್ಪಾ , ನಿನ್ನ ಪ್ರೀತಿ ಮಾಡಿದ್ದೆ ತಪ್ಪಾ ... ಇಂತ ಶಿಕ್ಷೆ ವಿಧಿಸುವ ಬದಲು .....ಮರಣ ಬರುವಂತಾದರೆ ಎಷ್ಟೋ ಚೆನ್ನ ಗೆಳೆಯ .......

ನಿನಗೆ ನಾ ಬೇಡವಾಗಿರುವಾಗ ನಾ ಬದುಕಿದ್ದು ಸತ್ತಂತೆ

- Acchu love

20 Dec 2017, 09:50 pm

ಅರಿತವರಾರು......

ಬಾನಗಲದ ಮನಸೋನೆ
ನಿನ್ನಾರು ಸೇರ ಬಲ್ಲರೊ
ನಿನ್ನರಿತ ಮನಸ ಹೊರತು....

ಗಿರಿ ಎತ್ತರದ ನಿಲುವೋನೆ
ನಿನ್ನಾರೂ ಅಪ್ಪಿಕೋಳ್ಳುವರೋ
ನಿನ್ನರಿತ ಜೀವದ ಹೋರತು.....

ಧರೆಅಗಲದ ದಣಿಯೋನೆ
ನಿನ್ನಾರು ಅಳಿಯ ಬಲ್ಲರೋ
ನಿನ್ನರಿತ ಉಸಿರ ಹೋರತು.....

ನಿನ್ನರಿಯುವರಾರೋ ನಿನ್ನೋಳಗಿರುವ
ನಿನ್ನ ಹೋರತು.....

- ರಾಗಸಿರಿ....

20 Dec 2017, 09:47 pm

ಮರಳಿ ಬಾ......:(

ಮನಸ್ಸಿನಲ್ಲಿರೊ ನೋವು ಹೇಳಲಾಗುತ್ತಿಲ್ಲ
ಕಣ್ಣಂಚಿನ ನೀರು ನಿಲ್ಲುತ್ತಿಲ್ಲ
ನಿನ್ನ ಮರೆಯಲಾಗುತ್ತಿಲ್ಲ
ನಿನ್ನ ನೆನಪನ್ನು ಸಾಯಿಸಲು ಆಗುತ್ತಿಲ್ಲ
ನಿನ್ನ ನೆನಪು ನನ್ನನು ಪದೇ ಪದೇ ಸಾಯಿಸುತ್ತಿದೆ

ಯಾಕೆ ನೀ ನನ್ನಿಂದ ದೂರ ಇರುವೆ
ಯಾವುದೋ ಸಣ್ಣ ತಪ್ಪಿಗೆ ....
ಚಂದ್ರ ಇಲ್ಲದೆ ಆಕಾಶ ಇಲ್ಲ
ಕಣ್ಣು ಇಲ್ಲದೆ ರೆಪ್ಪೆ ಇಲ್ಲ
ಹೃದಯ ಇಲ್ಲದೆ ಬಡಿತ ಇಲ್ಲ
ನೀ ಇಲ್ಲದೆ ನಾ ಇಲ್ಲ

ಕ್ಷಮಿಸು ನನ್ನ ಮರಳಿ ಬಾ ......

- Shilpa

20 Dec 2017, 05:07 pm

ಜೀವನ

ಜೀವನವೇ ಅಲ್ಪ ಕಣೋ
ಮನದಲ್ಲಿ ಸಂತೋಷ ಕಾಣೋ
ಎಲ್ಲರನ್ನು ಪ್ರೀತಿ ಮಾಡು
ನೆಮ್ಮದಿಯ ಬಾಳ್ವೆ ಮಾಡು

ಇರೋದೆ ನಾಲ್ಕೇ ದಿನವೇ
ಕೇಳೆ ನನ್ನ ಒಲವೇ
ಮನುಜ ಜನ್ಮ ಶ್ರೇಷ್ಠವೇ
ಅದ ತಿಳಿದು ನಡೆ ಮನವೇ

ಏನ ಗಳಿಸಿದರೇನು,
ನೀ ಹೋತ್ತು ಹೋಯ್ಯೂವೆಯೇನು
ನೀ ಇಲ್ಲೇ ಇರುವೆಯೇನು
ವಿದಿ ಕರೆದಾಗ ಹೋಗಬೇಕು ನೀನು

ನೀ ಮಾಡಿದ ದಾನ
ಅದುವೆ ದೇವರ ದ್ಯಾನ
ತ್ಯಾಗಮಾಡುವ ಜೀವನ
ಸಾಥ೯ಕ ಬದುಕದು ಪಾವನ..
ಧಮ೯ದಿ ಬದುಕು ಮಾನವ
ಜೀವನ ದೇವರು ಕೊಟ್ಟ ವರದಾನ..

- Bhagya Girish

20 Dec 2017, 01:56 pm

ಒಲವಿನ ಕವಿತೆ

ಕೈಯಲ್ಲಿ ಹಿಡಿದ ಲೇಖನಿ ಕವಿತೆಯನು
ಬರಿಯೆಂದರೆ ನಿನ್ನ ವರ್ಣನೆ ಮಾಡುತ್ತಿದೆ
ನನಗೆ ತಿಳಿಯದೆನೆ!!

ನಾ ಬರೆದ ನೂರಾರು ಕವಿತೆ ಏತಕ್ಕೆ
ನೀ ಇಂದು ಓದುತ್ತಾ ಕುಳಿತೆ,
ಕನ್ನಡಿಯ ಮುಂದೆ ನಿಂತು ನೋಡು
ನಿನ್ನ ಒಂದೇ ಪ್ರತಿಬಿಂಬ ಆ ನೂರು ಕವಿತೆಗಳಲ್ಲಿ
ನಿನಗೆ ಕಾಣಲಿಲ್ಲವೇನು ಒಲವೇ!!

- ಚುಕ್ಕಿ

20 Dec 2017, 12:53 pm