Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿನ ನೋಡುವ ಆಸೆ

ಕಣ್ಣಲ್ಲಿ ನಿನ್ನ ರೂಪವೇ,
ಎದೆಯಲ್ಲಿ ಧ್ಯಾನವೇ ,
ನನ್ನಾಸೆ ನಿನ್ನ ಸ್ನೇಹವೆ,
ನನ್ನುಸಿರು ನಿನಗಾಗಿಯೇ.

ಆ ಊಹೆಯ ತಿಳಿಸಲು ನಿನಗೆ
ನನ್ನ ಭಾಷೆ ಈ ಮೌನವೇ,
ಮನದಲ್ಲಿ ಬಚ್ಚಿಟ್ಟ ರಹಸ್ಯಗಳನು
ಹುಡುಕಾಡುವ ನಿನ ನೋಟ ತಡಿಯುದೆಗೆ?

ನಿನ ನೀಲಿ ಕಣ್ಣಲ್ಲಿ ಬಿದ್ದು ಒದ್ದಾಡುತಿರುವ ನನ್ನ ಮನಸು ತೇಲುವುದೇಗೆ ?
ಕಚಗುಳಿ ಹಿಡುತಿರುವ ನಿನ ತುಂಟ ಚೇಷ್ಟೆಗಳ ಜೊತೆಗೆ ಏನೆಂದು ನಾ ಬೀಳಲಿ?

ಅದರುತಿರುವ ತುಟಿಗಳನ್ನು ನಾನಿಂದು ಬೇಡುತಿರುವೆ ಎದೆಯಲ್ಲಿನ ಮಾತೆನೆಂದು!
ತಲೆ ಬಾಗಿ ನಾನಿಂದು ನಿನಗಾಗಿ
ಕಾದಿರುವೇ ನಿನ ಶೌರ್ಯ ನೋಡಲೆಂದು.

ನೋಡುತ್ತಲೇ ವೇಳೆಯೆಲ್ಲಾ ಬೆಳಕಾಗಿ ಕರಗುತಿದೆ ಹೇಗೆಂದು ನಾ ತಡಿಯಲಿ ನಿನ್ನ ನೋಡುವ ಆಸೆಯನು!

- ಚುಕ್ಕಿ

24 Dec 2017, 03:28 pm

ಬೆಳಕ ಚೆಲ್ಲುತಿರು

ಕರೆದು ಕರೆದು ಕರಗೋಯ್ತು ನನ್ನ ಧ್ವನಿ,
ಬರೆದು ಬರೆದು ಸೊರಗೋಯ್ತು ನನ್ನ ಕರ,
ಏತಕ್ಕೆ ಇಷ್ಟೊಂದು ಕಟುವಾಗಿದೆ ನಿನ್ನ ಮನಸು ಕೇಳಲಿಲ್ಲವೇ ನನ್ನ ಸ್ವರವೂ.

ಬರಬಾರದೆ ಒಮ್ಮೆ ನಾನಿರುವೆನೆಂದು ನಿನ್ನಲ್ಲೇ,
ಸಿಗಬಾರದೆ ಒಮ್ಮೆ ನಿನ್ನ ನೆರಳ ಹುಡುಕಾಡುವ ಸಮಯ ಉಳಿಸಲೇನೆಗೆ,
ಹೆಜ್ಜೆ ಇತ್ತ ಕಡೆಯಲ್ಲಿ ಪಾದ ಸವಿದ ಕ್ಷಣದಲ್ಲಿ ನೊಂದಿತು ನನ್ನ ಮನ ನಿನ್ನ ಕಾಲ ಕೆಳಗೆ ಹೂವಾಗಿ ಸೇರಲಿಲ್ಲವೆಂದು.

ಬಂದಿ ಆಗದಿರು ಸದ್ದಿಲ್ಲದ ಭಾವನೆಗಳ ಬವಣಿಯಲ್ಲಿ,
ಮಮತೆ ಗುಡಿಯ ಮಾತೆಯಾಗಿರು,
ನೆನೆದ ಮನಗಳ ಕರೆಗೆ ಓಗೊಟ್ಟು ಕರೆವ ಮುನ್ನ ಕಾರ್ತಿಕ ದೀಪವಾಗಿ ಬೆಳಕ ಚೆಲ್ಲುತಿರು.

- ಚುಕ್ಕಿ

24 Dec 2017, 03:04 pm

ಕುಳಿರ್ಗಾಳಿ

ಹೇಮಂತ ಋತುವಿನ ಧಾವಂತ ನೋಡಿರಿ
ಏನಂತ ಹೇಳಲಿ, ನಾನೆಂತ ನುಡಿಯಲಿ
ಹಾಸಿಗೆ ಬಿಟ್ಟೇಳಲು ಬಿಡದಿದು ಏಳಾದರು ಗಂಟೆ
ತುಂಟಿ ಹುಡುಗಿಯೊಬ್ಬಳು ಎಲ್ಲೆಲ್ಲೋ
ಕಚಗುಳಿಯ ಇಟ್ಟಂತೆ.

ತುಂಟ ಗಂಡ ಬರಸೆಳೆದುಕೊಂಡ
ಎಂದೋ ಮರೆತು ಬಿಟ್ಟಿದ್ದ ಹಳೆ ಹೆಂಡತಿಯನ್ನ,
ಹೊಸ ಪ್ರೇಮಿಯ ಮೈ ಬಿಸಿಯು ಸಾಲದು
ಚಳಿಯ ನೀಗಿ ಪುಳಕಿತಗೊಳಿಸಲು
ಯುವ ಮನಸುಗಳನ್ನ..

ಎಷ್ಟು ಹೊದ್ದು ಮಲಗಿದರೂ
ಮತ್ತಷ್ಟು ಒದ್ದು ಬರುತಿಹುದು,
ಯಾವುದೋ ಸಂದು ಗೊಂದುಗಳಲ್ಲಿ ತೂರಿ
ನಾನಿರುವೆನೆಂದು ಇರಿದು ಚಳಿಯ ಚೂರಿ
ಅಯ್ಯೋ ಇದೆಂಥ ಚೆಲ್ಲಾಟದ ಚಂದ್ರ ಚಕೋರಿ!

ರೈತ ಕಂಬಳಿ ಹೊದ್ದು ಹೊರಟ ಹೊಲಕೆ
ಚಳಿಗೆ ಹೆದರಿ ಕುಳಿತರೆ ಅದು ಬದುಕೇ ?
ತಲೆಯ ಕೆರೆದು ಬರೆಯ ಹೊರಟ ಕವಿಗೆ
ಚಳಿಯ ವರ್ಣನೆಗೆ ಹೊಸ ಪದಗಳ ಬಯಕೆ.

- ಶ್ರೀಗೋ.

24 Dec 2017, 07:39 am

ಕನ್ನಡಿ

ನೀ ನಕ್ಕಾಗ ನಗುವೆನು
ನೀ ಅತ್ತಾಗ ಅಳುವೆನು
ತೋರುವೆ ನೀನ್ನದೆ ಆಕೃತಿಯನು
ಕನ್ನಡಿ ಒಳಗೆ ಚಿತ್ರವನು

ನೀ ಹೇಗೆ ಇರುವೆಯೋ
ನಾ ಹಾಗೆ ಇರುವೆನು
ಮನದಲಿ ನೂರು ಭಾವನೆಯು
ನೋಡಲು ನಿನ್ನ ರೂಪವನು

ನೀನೇ ನಾನು,ನಾನೇ ನೀನು
ನೀ ಕೋಟ್ಟಿದ್ದನ್ನೆ ಕೊಡುವೆನು ನಾನು
ಎಂದು ಹೇಳುವ ಕನ್ನಡಿ ತಾನು
ಜೀವನ ಸತ್ಯವ ತಿಳಿಸುವೆನು
ನಿನ್ನ ಭಾವದ ಮುನ್ನುಡಿಗೆ
ಕನ್ನಡಿಯಾಗಿ ನಿಂತಿಹೆನು


ವಂಚನೆಮಾಡಿ ನಟಿಸುವಕಲೆಯ
ಬಿಟ್ಟಬಿಡು ನೀನು
ಹಮ್ಮು ಬಿಮ್ಮಿನ ಬಿಗುಮಾನವನು
ಎಂದೂ ತೋರದಿರು ನೀನು
ಕಾಣುವೇ ನಿನ್ನ ಪ್ರತಿಬಿಂಬವನು
ನನ್ನ ಮಾತನ್ನು ಕೇಳು,
ನಿನ್ನ ಮನದಂತೆ ತಾನು
ನಿನ್ನ ಕೈಗನ್ನಡಿ ನಾನು

- Bhagya Girish

23 Dec 2017, 07:14 pm

ಓರೆ ಕಣ್ಣಿನ ಬೆಡಗಿ

ಕೊಲ್ಲಬೇಡ ಚೆಲುವೆ ಎನ್ನನೀ ಆ ನಿನ್ನ ಓರೆ ಕಣ್ಣಿನ ಬಾಣದಲಿ
ಮನ ಸೋತೆ ಆ ನಿನ್ನ ನೋಟಕೆ
ಸೆಳೆವುದು ಎನ್ನನು ನಿನ್ನ ಸನಿಹಕೆ
ನಿನ್ನ ಮೊಗದ ಸೊಬಗನ್ನು ಎನಿತು ಬಣ್ಣಿಸಲಿ
ನೂರಮಡಿ ಮಾಡಿಹುದು ನಿನ್ನ ಸೊಬಗ ಆ ನಿನ್ನ ಓರೆ ಕಣ್ಣು

- ರಘು

23 Dec 2017, 06:11 pm

ಕನ್ನಡ

ಕಣಕಣದಲ್ಲೂ ಕನ್ನಡ ಪಸರಿಸಲಿ
ಪ್ರತಿಮನುಜನು ಕನ್ನಡ ಅನುಸರಿಸಲಿ
ಪ್ರತಿಯುಸಿರಲಿ ಕನ್ನಡ ಸಂಚರಿಸಲಿ
ಈ ಕನ್ನಡದಿಂದ ಭೇದಭಾವ ಮರೆಯಲಿ

ಕನ್ನಡಕ್ಕೆ ಕನ್ನಡವೇ ಸಾಟಿ
ಹೇಗಿದ್ದರೂ ಸರಿ ನಿನ್ನ ಧಾಟಿ
ಕನ್ನಡಿಗರು ಕೋಟಿ ಕೋಟಿ
ಎಲ್ಲ ಭಾಷೆಗಳಿಗಿಂತ ಕನ್ನಡವೇ ಗಟ್ಟಿ

ಕನ್ನಡಿಗ ಶಿವಾ... ಧನ್ಯವಾದಗಳು

- ಸಕ್ಕತ್ ಲಾಜಿಕ್ ಶಿವಾ

23 Dec 2017, 05:34 pm

ಓ ನನ್ನ ಒಲವೆ

ಓ ನನ್ನ ಚೆಲುವೆ ಓ ನನ್ನ ಒಲವೆ
ನಿನ್ನ ಆ ಮೋಹಕ ಕಣ್ಣಗಳಲಿ ಕಣ್ಣಿಟ್ಟು ನೋಡಲು
ಕಂಡೆನು ನಾ ನನ್ನನಲ್ಲಿ ಬಿಂಬ ಪ್ರತಿಬಿಂಬ
ಮುಳುಗಿದೆನು ಆ ಸಾಗರದಾಳದಲಿ ಕಂಡೆ ನಾ ಮುತ್ತುಗಳು
ಪೋಣಿಸಿದೆವನು ನಿನಗಾಗಿ ಮುತ್ತಿನಾರವನು
ನೀ ತೋರಿದಾ ಒಲುಮೆ ಹೇಗೆ ಮರೆಯಲಿ ಚೆಲುವೆ
ಎಂದೆಂದಿಗೂ ಋಣಿಯು ನಾ ನಿನಗೆ ಓ ನನ್ನ ಒಲವೆ

- ರಘು

23 Dec 2017, 01:12 pm

ಸ್ನೇಹ

( ಸ್ನೇಹ )
ಮಾತು ಕೊಡುವವರು ಹ್ರುದಯವಂತರು.
ಕೊಟ್ಟ ಮಾತು ಉಳಿಸಿ ಕೊಳ್ಳುವವರು
ನಿಷ್ಠಾವಂತರು.
ಮಾತುಕೊಡುವ ದೇಹವನ್ನು ಸ್ರುಷ್ಟಿಸುವವರು. ಬಗವಂತರು.ತಂದೆ . ತಾಯಿ.
ಮಾತಿನ ಜೊತೆ ವಿಶ್ವಾಸ ತುಂಬಿ.
ಕೈ ಹಿಡಿದು ನಡೆಸುವವರು .
ನಿಜವಾದ ಸ್ನೇಹಿತರು.
ಸ್ನೇಹದ ಮೇಲಿನ ಸಂಶಯಕ್ಕೆ ಸ್ತಳವಿಲ್ಲ .ಪ್ರೀತಿ‌ ವಿಶ್ವಾಸಕ್ಕೆ ಬೆಲೆ ನಮ್ಮಲ್ಲೆಲ್ಲ .
ನಮ್ಮೆಲ್ಲರ ಸ್ನೇಹಕ್ಕೆ‌ ಕೊನೆ ಎಂಬುದೇ ಇಲ್ಲವೇ ಇಲ್ಲ .

( ನೆನಪಿನ ನಾವಿಕ ಸಂತೋಷ್ )

- ಸಂತೋಷ್//ಜೀತು

23 Dec 2017, 01:06 pm

ಜೀತದಾಳು

ಸಿರಿವಂತರ ಹೆಗಲ ಮೇಲೆ ಏರಿ ಕುಂತ ಸಿರಿತನ,
ಬಡವರನು ಅವರ ಕಾಲ ಕೆಳಗೆ ದೂಳಿನಂತೆ ಮಾಡಿತಲ್ಲಾ?

ದಿನಗೂಲಿ ಮಾಡುವಂತ ಬಡಜನರಿಗೆ ದುಡ್ಡಿನ ಬಲೆ ಎಸೆದು ಜೀತದಾಳುಗಳಾಗಿ ಮಾಡುವರಲ್ಲ ಮರಣದ ವರೆಗೂ.

ಕೊರಳಿಗೊಂದು ಸರಪಳಿ ಇಲ್ಲ ಆದರೂ ನೋಡುವರು ಯಜಮಾನರು ಕುನ್ನಿಗಳಂತೆ ನಮ್ಮನ್ನೆಲ್ಲಾ,
ಯಾವ ಸಂವಿಧಾನದಲ್ಲಿ ರಚಿತವಾಗಿದೆ ಈ ನೀತಿ ದುಡ್ಡಿರುವವರು ಮಾತ್ರ ದೊಡ್ಡವರೆಂದು ಮಿಕ್ಕಿದವರು ಅವರ ಕೆಲಸದವರೆಂದು?

ಹೊಟ್ಟೆ ಪಾಡಿಗಾಗಿ ಬೆಟ್ಟವನ್ನಾದರು ಕೊರೆದು ಉರುಳಿಸುವ ಕೆಲಸ ಕೈಗೆತ್ತಿಕೊಳ್ಳುವರು ಬಡವರು,
ಒಪ್ಪೋತ್ತು ಊಟವಿಡದೆ ದುಡಿಸಿಕೊಳ್ಳುವರು ದಯನೀಯ ದುರುಳರು.

ಜೀತ ನೀಡುವುದರ ಬದಲಾಗಿ
ಕೊಟ್ಟ ಸಾಲಕ್ಕೆ ಬಡ್ಡಿಯೆಂದು ಹಿಡಿಯಷ್ಟು ಧಾನ್ಯಗಳನು ಕೈಯಲಿಟ್ಟು, ಕೈ ತೊಳೆದು ಕೊಳ್ಳುವರು ಕೊಟ್ಟೆವೆಂದು ಸಂಬಳವನ್ನು.

- ಚುಕ್ಕಿ

23 Dec 2017, 12:29 pm

ಪ್ರೀತಿ ಬಿಟ್ಟವಾ......

ಬರಿದಾದ ಹೃದಯದಲ್ಲಿ ಪ್ರೀತಿಯ ಸಸಿ ನೆಟ್ಟಿದವ ನೀ...

ಪ್ರೀತಿಯ ಬಳ್ಳಿ ಹೂ ಬಿಡುವ ಮುನ್ನ ನೀನೇಕೋ ಚಿವಿಟಿದೆ ಇಂದು....

ಕಾಯುತಿರುವೆ ಮತ್ತೆ ಆ ಬಳ್ಳಿಯ ಹೂ ಬರಬಹುದೇನೋ ,ಆ ಹೂ ಅನ್ನು ಜೋಪಾನ ಮಾಡಲು.

ನೀನೇ ರೂಪಿಸಿದ ಚಿತ್ತಾರ ಈ ಹೃದಯಕ್ಕೆ,ಇಂದು ನೀನೇ ಬಾರದಾಗಿರುವಾಗ ಈ ಹೃದಯ ಉಳಿಯುವುದೇ ಗೆಳೆಯ

ನೀ ನನ್ನ ಬಿಟ್ಟು ಹೋಗುವ ಕಲ್ಪನೆ ಕೂಡ ಊಹಿಸಲು ಅಸಾಧ್ಯ ಕಣೋ ಗೆಳೆಯ

- Acchu love

23 Dec 2017, 09:58 am