ನಾ ಗಿಚಿದೆ ಒಂದು ಕವಿತೆ
ನನ್ನೆದೇಯ ಪುಟವ ತೆರೆದು
.......................
ಒಲವಿನ ಲೇಖನಿಯ ಹಿಡಿದು
ನನ್ನೋಲವ ಕಥೆಯನ್ನೆಲ್ಲ
ಬರೆಸಿಟ್ಟೆ ಅದರಲ್ಲಿ...
ಅಲೆಯಂತೆ ಬರುತಿಹುದು
ಪದಗಳಾ ಸಾಲು
ಎಷ್ಟು ಗೀಚಿದರು ಮುಗಿಯುತಿಲ್ಲ
ಪದಪುಂಚಗಳ ಸಾಲು
ಪುಟತಿರುಗಿಸಿದಂತೆಲ್ಲ ಮುರುಕಳಿಸುತಿದೆ
ಸಿಹಿಕಹಿ ನೆನಪುಗಳೇಲ್ಲ
ನಾ ಆಡದ ಒಂದೊದು ಮಾತು
ಪದಗಳಂತೆ ಬರೆದಿಡುವ
ಪುಟಗಳ ಸಾಲು......
ಹೋಸ ಚಿಗುರಿನಂತೆ
ಚಿಗುರೊಡೆಯುತಿದೆ ಭಾವನೆಗಳ
ಸಾಲು ದಿನಗಳು ಮುಗಿದಂತೆ
ಹೊಸ ದಿನಗಳೂ ಬರುವಂತೆ
ಎಂದಿಗು ಮುಗಿಯದ ಈ ನನ್ನ ಕವಿತೆ
ಪುಟಗಳು ಮುಗಿಯದಿರಲಿ ಈ
ಒಲವಿನ ಕವಿತೆಗೆ....
ನಾ ಬರೆದಿಟ್ಟ ನನ್ನೋಲವ ಪುಸ್ತಕದಲ್ಲಿ.......
ಬಿಸುವ ಕಲ್ಲಿನ ರಬಸವನ್ನು
ಒನಕೆಯ ಮಿಡಿತದಲ್ಲಿರುವ ಗಟ್ಟಿತನವನ್ನು
ರಂಟೆ ಕುಂಟೆಗಳ ನಂಟನ್ನು
ಮರೆತ್ತಿದ್ದೆವೇ ನಾವು ಮರೆತ್ತಿದ್ದೆವೆ
ಮಂಜಿನ ಹನಿಗಳ ನಡುವೆ ಕೆಲಸಕ್ಕೆ ಹೋಗುವ ಜನರನ್ನು
ಗರತಿಯರ ಬಾಯಲ್ಲಿ ಬರುವ ಜನಪದ ಹಾಡುಗಳನ್ನು
ಡೊಳ್ಳು ಕುಣಿತ ವೀರಗಾಸೆಯಂತಹ ಕಲೆಗಳನ್ನು
ಮರೆತ್ತಿದ್ದೆವೆನಾವು ಮರೆತ್ತಿದ್ದೆವೆ
ಗೌರಿ ಹಬ್ಬದಲ್ಲಿ ರೇಷ್ಮೆಯ ಸೀರೆ ಉಟ್ಟು ಬರುವ ಚಲುವೆಯರನ್ನು
ಅದನ್ನು ನೋಡಲು ಕುಳಿತ ಹುಡುಗರ ಗುಂಪನ್ನು ಕಣ್ಸನ್ನೆ ಮೂಲಕ ಉಂಟಾಗುವ ತುಂಟ ಪ್ರೀತಿಯನ್ನು
ಮಾತು ಕತೆಗಳೊಲಿಲ್ಲದೆ ಅನುಭವಿಸುವ ವಿರಹ ವೇದನೆಯನ್ನು
ಮರೆತ್ತಿದ್ದೆವೆ ನಾವು ಮರೆತ್ತಿದ್ದೆವೆ.
ಅಜ್ಜ ಅಜ್ಜಿಯರು ಕತೆ ಹೇಳುವ ರೀತಿಗಳು
ಹಬ್ಬ ಹರಿದಿನಗಳಲ್ಲಿನ ಆಟೋಟಗಳು
ದೊಡ್ಡಾಟ ಬಯಲಾಟ ನಾಟಕಗಳು ಅಳಿವಿನಂಚಿನಲ್ಲಿ ಇವೆ ಇವು ಅಳಿವಿನಂಚಿನಲ್ಲಿವೆ..
ತನ್ನ ಪಕ್ಕದಲ್ಲೆ ಸತ್ತರು ತಿರುಗಿ ನೋಡದವರು
ನಮಗೆ ಯಾಕೆ ಬೇಕೆಂದು ಸುಮ್ನೆ ಹೋರಡುವರು
ತಮಗೆ ಅದೇ ರೀತಿಯಾದಗ ಅಳುಕಿ ಅಂಜುವರು
ಒಳ್ಳೆಯವರು ಜನ ಒಳ್ಳೆಯವರು....
ಪುಕಸಟ್ಟೆ ದುಡ್ಡಿಗೆ ಬಾಯ್ ಬೀಟ್ಟು ಕೂರುವರು
ಆದರೂ ದಾನ ಮಾಡದ ಮನಸ್ಸೇ ಇಲ್ಲದವರು
ಕಾಗೆಗೂ ಕೂಡ ಅನ್ನ ಹಾಕದವರು..
ಸಿಕ್ಕಪಟ್ಟೆ ಅನ್ನವನ್ನು ಎಲ್ಲಿಯಂದರಲ್ಲಿ ಚೆಲ್ಲುವರು
ಒಳ್ಳೆಯವರು ಜನ ತುಂಬ ಒಳ್ಳೆಯವರು..
ಕಾಲಕ್ಕೆ ತಕ್ಕಂತೆ ವೇಷವನು ಹಾಕುವರು
ಬಾಯ್ತುಂಬ ಸುಂದರ ಮಾತುಗಳನ್ನು ಹಾಡುವರು
ಏನು ಅರಿಯದ ಜನರ ತಲೆಯನ್ನು ಕೇಡಿಸುವರು
ತಮ್ಮ ಕೆಲಸ ವಾಗುವ ವರೆಗೂ ಪಾಪ ಪುಣ್ಯ ಅನ್ನುವರು
ಒಳ್ಳೆಯವರು ಜನ ತುಂಬ ಒಳ್ಳೆಯವರು