Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಜಣ ಜಣ ಕಾಂಚಾಣ

ಕುದಿರಿಯ ಮ್ಯಾಲೆ ಕತ್ತಿಯ
ಹಿಡಿದು ಸವಾರಿ ಕುಂತೈತೀ
ಹುಡುಕುಡುಕಿ ತಲೆಗಳ ತೆಗೆದು
ಜೇಂಕರಿಸುತ ನಲಿದೈತಿ

ಒದ್ದೊದ್ದು ಎದೆಯೆಲುಬುಗಳ
ಪುಡಿ ಮಾಡೈತಿ
ಮೊಣಕಾಲ್ ಕೈ ಕೀಲುಗಳ
ಮುರಿದು ಕುಣಿತೈತಿ

ಹೊಲ ಗದ್ದಿಗಳಾಗ ರಕ್ತದ
ಹೋಕುಳಿ ಹರಿದೈತಿ
ಅನ್ನದ ಪೈರ ಹಸಿರನು ನುಂಗಿ
ಬಡ ಬಾನಲಕೆ ಬೆಂಕಿ ಹಚೈತಿ

ಹಸಿರಿನ ನಾಡ ಚಿನ್ನದ ಬೀಡ
ಬೆತ್ತಲ ಮಾಡೈತಿ
ತುಳಿತುಳಿದು ಕಾಂಚಾಣ
ಜಣ ಜಣದ ಸದ್ದು ಹರಡೈತಿ

ಬಡವರ ನೆತ್ತರಲೇ ಮಿಂದೈತಿ
ಘರ ಬಡಿದಾಂಗ ಕುಂತೈತೀ
ಸಿಡಿಲೊಡೆದಾಂಗ ಬಿದೈತಿ
ಜಡವದು ಜಡವದು ಸತೈತಿ........ಡಿ.ಸಿ

- ಡಿ.ಸಿ.ಎನ್@100%

28 Dec 2017, 02:15 pm

ಸಣ್ಕತೆ

ನಿತ್ಯ ಕಡಲದಂಡೆ ವ್ಯತ್ಯಾಸವಿಲ್
ಆಗೊಮ್ಮೆ ಈಗೊಮ್ಮೆ ಸುಳಿವಾಗ
ಕಣ್ಣಿಗೆ ಕಂಡಿದ್ದೆಷ್ಟೋ, ಕಾಣದೆ ಉಳಿದದ್ದೆಷ್ಟೋ,
ದೂರ ದಿಗಂತದಿ ಕೈ ಕೂಡಿದ
ಭುಜಕೆ ಭುಜ ತಾಗಿಸಿದ
ಇಳಿಸಂಜೆಯ ಜೋಡಿ ಮೆಲ್ಲನೆ
ಹೆಜ್ಜೆ ಇರಿಸಿದೆ ಕಡಲ ತೀರವೇ
ಉಳಿದ ಒಂಟಿ ಅವನು,,.!

- sk

28 Dec 2017, 11:42 am

ಸುಳ್ಳೆ ಸುಳ್ಳು

"ಯಾರ ನಂಬಲಿ
ಅಸ್ಟುಇಷ್ಟ, ಇಷ್ಟು ಇಷ್ಟ ಎನ್ನುವರು,
ಸುಳ್ಳು ಸಂತೆಯಲ್ಲಿ.

"ಯಾರ ನಂಬಿದರಷ್ಟೇ
ಹಾಗೆ ಹೀಗೆ ಎಂದು ಕಾಗೆ ಹಾರಿಸುವರು,
ಸುಳ್ಳು ಸಂತೆಯಲ್ಲಿ.

"ಎಷ್ಟೇ ಪ್ರೀತಿಸಿದರಷ್ಟೇ
ಚಿತ್ರ ಬಿಡಿಸುವರು ಚಿತ್ತಾರದ ಮಾತುಗಳ,
ಸುಳ್ಳು ಸಂತೆಯಲ್ಲಿ.

"ಪರಿ ಪರಿಯಾಗಿ, ನಂಬಿಸಿ
ಕಟ್ಟುವರು ಸುಳ್ಳಿನ ಕಂತೆಯ,
ಸುಳ್ಳುಗಳ ಸಂತೆಯಲ್ಲಿ.

"ತಿಳಿಯೋ ಪೆದ್ದಣ್ಣ
ಮನುಜರ ಮರ್ಮವ,
ಸುಳ್ಳುಗಳ ಸಂತೆಯಲ್ಲಿ.

..............ರಾಜು

- ರಾಜು ಹಾಸನ

28 Dec 2017, 11:23 am

ಈ ಬೇಟಿ ಆದ ನಂತರ

ಈ ಬೇಟಿ ಆದ ನಂತರ
ಇನ್ನಿಲ್ಲ ಯಾವ ಅಂತರ!!
ಈ ನಮ್ಮ ಪ್ರೀತಿ ಸೋಜಿಗ
ನೀ ನನ್ನ ಪ್ರಾಣ ಓ ಸಖ!!

ಯಾರು ಚೆಲ್ಲಿ ಹೋದರೂ
ಬಣ್ಣವನ್ನು ಈ ಬದುಕಿಗೆ!!
ಯಾವ ಬೇಲಿ ಇರದೂ
ಇನಿಯ ನಮ್ಮ ನಲಿವಿಗೆ!!

ಮನಸಿನಲ್ಲಿ ನಿನ್ನ ಇರಿಸಿದೆ
ಬೆಚ್ಚನೆಯ ಪ್ರೀತಿ ಹೊದಿಸಿದೆ!!
ಕತ್ತಲಲ್ಲಿ ಬೆಳಕಿನಂತೆಯೇ
ನಾನು ನಿನ್ನ ಜೊತೆಗೆ ಸಾಗುವೆ!!

ನಮ್ಮ‌ ಪ್ರೀತಿ ಹೀಗೆ ಸಾಗಲು
ಒಂಟಿ ತನವು ಬಳಿಗೆ ಬಾರದು!!
ದೂರ ಎಂಬ ಮಾತು ದೂರಕೆ
ಸನಿಹ ಒಂದೇ ನಮ್ಮ ಸನಿಹಕೆ!

- ಪಿ.ಜಿ.ಜ್ಯೋತಿ

28 Dec 2017, 10:51 am

ದೇಶಭಕ್ತ

ವೀರ ಪುತ್ರನು ನೀನು
ಭಾರತ ಮಾತೆಯ ಕುಡಿ ನೀನು
ವೀರ ವನಿತೆಯ ಮಗು ನೀನು
ದೇಶಕೆ ಕಿತಿ೯ ತರುವೆಯಾ ನೀನು

ದೇಶ ಪ್ರೇಮದ ಭಕ್ತಿಯು
ನಿನ್ನಲಿ ಹರಿಯುವ ರಕ್ತವು
ಹಾಡುವುದು ನಿನ್ನೆದೆ ಗುಂಡಿಗೆಯು
ಎಂದು ನನ್ನ ದೇಶವೇ ಶ್ರೇಷ್ಠವು

ನಿನಗೆ ಋಣಿಯು ತಾನೆಂದು
ನಮಿಸುವೆ ನಿನ್ನಯ ಪಾದಕ್ಕೆಂದು
ನಿನೇ ಎನಗೆ ನೀಜ ದೈವ
ತುಂಬು ದೇಶ ಭಕ್ತಿಯ ಒಲವ

ನಿನ್ನಯ ಮಗುವು ತಾನೆಂದು
ಹೇಳುವ ಹೆಮ್ಮೆಯು ಎಷ್ಟೋಂದು
ನಿನಗಿಂತ ಮಿಗಿಲು ಯಾರೆಂದು
ಕೇಳಲು ಹೆತ್ತ ತಾಯಿ ಹೇಳುವಳು
ದೇಶವೇ ಮಿಗಿಲೆಂದು..
ದೇಶಕ್ಕಾಗಿ ಹೆತ್ತ ಮಗು ತಾನೆಂದು..

- Bhagya Girish

28 Dec 2017, 09:05 am

ಪ್ರೀತಿ........

ನನ್ನೆದೆಯಮೇಲೆ ಒರಗಿ
ಮಲಗು ನನ್ನ ಇನಿಯ
ನಿನ್ನೆಲ್ಲ ನೊವನ್ನು ಮರೆತು
ಮಗುವಂತೆ ಮುದ್ದಿಸುವೆ......
ನನ್ನ ಮಡಿಲಲ್ಲಿ ತಲೆಯಿಟ್ಟು
ಮಲಗು ನಿನ್ನೋಡಲ ಕಷ್ಟಗಳೆಲ್ಲ
ಮರೆತು ಹಸುಗುಸಂತೆ
ಜೊಗುಳವ ಹಾಡಿ ಮಲಗಿಸುವೆ.....
ಅಮ್ಮನಂತೆ.........

- ರಾಗಸಿರಿ....

28 Dec 2017, 07:49 am

ಜನ ಜಾತ್ರೆ

"ಹೊರಟಿತು ಹೊರಟಿತು
ಜನ ಜಾಗಮಗಿಸೋ ಜನ ಪರುಸೆ,
ಜನ ಸಾಗರದಂತೆ,
ನಮ್ಮೂರ ಜಾತ್ರೆಗೆ.

"ಹಿಂಡು ಹಿಂಡಾಗಿ
ಹೊರಟಿದೆ ತುಂಡೈಕ್ಕಳ ಹಿಂಡು,
ಹೆಣ್ಮಕ್ಕಳ ಗುಂಪು,
ನಮ್ಮೂರ ಜನ ಜಾತ್ರೆಗೆ.

"ದಂಡು ದಂಡಾಗಿ
ಹೊರಟಿದೆ ಹಿರಿಯರ ದಂಡು,
ಮುತೈದೆಯರ ಗುಂಪು,
ನಮ್ಮೂರ ಜಾತ್ರೆಗೆ.

"ಸಾಲು ಸಾಲಾಗಿ
ಮೆರವಣಿಗೆ ಹೊರೆಟರು
ಹೆಣ್ಮಕ್ಕಳು, ಹಣ್ಣುಕಾಯಿ ಹೊತ್ತು,
ನಮ್ಮೂರ ಜನ ಜಾತ್ರೆಗೆ.

"ಇಲ್ಲಿ ಅಲ್ಲಿ
ಎಲ್ಲಿ ನೋಡಿದರಲ್ಲಿ,ಬಣ್ಣ ಬಣ್ಣದ
ಹಸಿರು ತಳಿರುತೋರಣಗಳ ಸಿಂಗಾರ,
ನಮ್ಮೂರ ಜನ ಜಾತ್ರೆಗೆ.

"ಹೈ...ವೈ ಎಂದು
ಡೋಲು ತಮ್ಮಟೆ ಸದ್ದಿಗೆ,ಕುಣಿದು ಕುಪ್ಪಳಿಸಿ,
ಸಾಗಿದೆ ಪಡ್ಡೆ ಹೈಕ್ಕಳ ಪಡ್ಡೆ ಗುಂಪು
ನಮ್ಮೂರ ಜನ ಜಾತ್ರೆಗೆ.

"ಮೊಳಗಿತು ಮೊಳಗಿತು
ದೇವರ ನಾಮ,ನಾದ ಸ್ವರವಾಗಿ
ಮೇರಗುತಂದಿತು ಮುಗಿಲೆತ್ತರಕ್ಕೆ ,
ನಮ್ಮೂರ ಜನ ಜಾತ್ರೆಗೆ.

.............ರಾಜು

- ರಾಜು ಹಾಸನ

28 Dec 2017, 01:06 am

ಒಂಟಿ ಹೃದಯ....:(

ಯಾಕೆ ನನ್ನ ಜೀವನಕ್ಕೆ ಬಂದೆ
ಬಂದು ಯಾಕೆ ನನ್ನ ಪ್ರೀತಿ ಮಾಡಿದೆ
ಇಂದು ಯಾಕೆ ನನ್ನ ಬಿಟ್ಟು ಹೋದೆ

ನನಗೆ ನೀನೆ ಕಣೋ ನನ್ನ ಪ್ರಪಂಚ
ನಿನ್ನ ಬಿಟ್ಟು ಬೇರೆ ಏನು ಗೊತ್ತಿಲ್ಲ ಕಣೋ
ನನಗೆ ಅರಿಯದೆ ನನ್ನಲ್ಲಿ ಸೇರಿದೆ ನೀನು
ಇಂದು ಸಣ್ಣ ನೇಪ ಹೋಡ್ಡಿ ದೂರ ಹೋಗುತ್ತಿರುವೆ
ನನ್ನ ಮನಸ್ಸಿನ ಭಾವನೆ
ನನ್ನ ನೋವು
ನನ್ನ ಪ್ರೀತಿ
ಯಾವುದು ನಿನಗೆ ಅರ್ಥ ಆಗ್ತಿಲ್ವ

ನೀನ್ನ ಪ್ರಾಣಕಿಂತ ಹೆಚ್ಚಾಗಿ ಪ್ರೀತಿಸುತ್ತಿರುವೆ ಕಣೋ ಅರ್ಥ ಮಾಡಿಕೊ ನನ್ನ

ನನ್ನ ಬಿಟ್ಟು ಹೋಗುತಿದಿಯಾ ಹಾಗೆ ನಿನ್ನ ನೆನಪುಗಳನು ತಗೆದುಕೊಂಡು ಹೋಗು

ನೀನಿಲ್ಲದ ಪ್ರತಿ ಕ್ಷಣವು ನನಗೆ ನರಕ ಕಣೋ
ನೀನ್ನ ಬಿಟ್ಟಿ ಇರಲು ಆಗಲ್ಲ ಕಣೋ
ನಿನ್ನ ಜೊತೆ ಮಾತಡದೆ ಇರಲು ಆಗಲ್ಲ ಕಣೋ
ನನ್ನ ಪ್ರೀತಿ ನಿನಗೆ ಅರ್ಥ ಆಗ್ತಿಲ್ವ ಪೆದ್ದು

- Shilpa

27 Dec 2017, 10:51 pm

ನೆಲೆ ಇಲ್ಲದ ಜೀವ......

ನಿನಗೆಲ್ಲಿಯ ನೆಲೆ
ನಿನಗೆಲ್ಲಿಯ ಬೆಲೆ
ನಿನಗೆಲ್ಲಿಯ ಬಂದ
ನಿನಗೆಲ್ಲಿಯ ದಾರಿ
ನಿನಗೆಲ್ಲಿಯ ಒಡಲು
ನಿನಗೆಲ್ಲಿಯ ಬದುಕು
ನೀ ಹುಟ್ಟಿದ ಮನೆಯಲ್ಲೆ
ನಿನಗೆ ನೆಲೆ ಇಲ್ಲ ಎಂದಮೇಲೆ
ಕಣ್ಣಿದ್ದರು ಅಂದಕಾರವೆ
ತುಂಬಿರುವ ಈ ಲೋಕದಲ್ಲಿ
ಎಲ್ಲಿದೆ ನಿನಗೆ ನೆಲೆ
ತಾನುಟ್ಟಿದಾ ಮನೆಗೆ
ಹೋರೆಯಾದವಳು
ಮೆಟ್ಟಿದ ಮನೆಗೆ ಬೇಡವಾದವಳು
ಎಲ್ಲಿಯು ಸ್ಥಿರವಾಗಿ ಇಲ್ಲದವಳು
ಹೂವಾಗಿ ಅರಳುವ ಮುನ್ನ
ಬಾಡುತ ಬಾಡುತ ಬದುಕ
ಸವೆಸುವವಳು ಎಂದಿಗು
ತನಗಾಗಿ ಬದುಕದವಳು
ತನ್ನವರ ಎಳಿಗೆಗಾಗಿ ಶ್ರಮಿಸುವವಳು
ಜೀವವೆ ಬೆರೆಯವರಿಗೆ ಮುಡುಪಾಗಿಸುವವಳು
ಕೊನೆಯವರೆಗು ಎಲ್ಲಿಯು ನೆಲೆಕಾಣದವಳು
ಮಣ್ಣಲ್ಲಿ ಮಣ್ಣಾಗಿ ಭೂತಾಯಿಯ
ಒಡಲ ಸೆರುವವಳು.....

- ರಾಗಸಿರಿ....

27 Dec 2017, 09:40 pm

ದಾಹ

ನೊಂದ ಮನಸಿನ ದಾಹಕೆ
ಕಣ್ಣಿರಿನ ಮಳೆಸುರಿದರು
ದಾಹ ತೀರಲಿಲ್ಲ
ದಾಹನಿಗಿಸಲು
ನೆನಪಿನ ಅಲೆಗಳ ಮೊರೆಹೊದೆ
ಅಲೆಗಳ ರಭಸಕ್ಕೆ ನಿಲ್ಲಲಾಗಲಿಲ್ಲ

- ಮಲ್ಲೇಶ್ವರ ನಾಯಕ

27 Dec 2017, 06:17 pm