Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮರೆಯಾಗಿ......

ಕಾಣದ ದೈವವೋಂದು
ತಾನಾಗಿಯೇ ಬಳಿ
ಬಂದು ಸ್ವರ್ಗವೆ
ನಚುವಂತ ಪ್ರೀತಿಯ
ಉಣಬಡಿಸಿ ಕಣ್ಣ ರೆಪ್ಪೆ
ಬಡಿಯುವಷ್ಟರಲ್ಲಿ ಮಿಂಚಿನಂತೆ
ದೂರವಾಯಿತೆ ಆ ಕೈಗಳು.......

ಉಣಿಸಿಕೊಂಡ ಮನಸೊಂದೆ
ಇಗ ಒಂಟಿ ಉಣಬಡಿಸಿದ ಕೈಗಳಿಗೆ
ನೆನಪಿಲ್ಲ ಉಣಿಸಿಕೊಂಡವರಿಗೆ
ಹಸಿವಿಲ್ಲ ಮರೆತು ಮುಂದೆ ಸಾಗದೇ
ಬೇರೆ ದಾರಿಯೆ ಇಲ್ಲ.........

- ರಾಗಸಿರಿ....

29 Dec 2017, 01:00 pm

ಬೇತಾಳ....

ನೀ ಎಕೆ ಹೀಗೆ ಕಾಡುವೆ
ಪದೆಪದೆ ಕಣ್ಣೋಳಗೆ
ಕೂತಿರುವೆ ನಿನೋಂದು
ಕಪ್ಪು ಗುಡ್ಡೆ ಯಂತೆ....
ನೀ ಇಲ್ಲದೆ ನೋಟವೆ
ಇಲ್ಲವಂತೆ......


ಹೆಜ್ಜೆ ಹೆಜ್ಜೆಗು ಬಂದು
ಅಡ್ಡಲಾಗುವೆ ಶತ್ರುವಿನಂತೆ
ನೀ ಇಲದೆ ದಾರಿಯೆ
ಇಲ್ಲದಂತೆ...........


ಕುಂತರು ನಿಂತರು ಎದ್ದರು
ಬಿದ್ದರು ಹಿಂದೆಯೆ ಇರುವೆ
ಬೆನ್ನು ಬಿಡದ ಬೇತಾಳದಂತೆ
ನೀ ಇಲ್ಲದೆ ಗುರಿಯೆ
ಇಲ್ಲದಂತೆ.......


ಕತ್ತಲಲ್ಲಿ ಕಣ್ಣ ಕಟ್ಟಿ
ಬಂದು ಕಾಡುವೆಯಲ್ಲ
ಮೊಹಿನಿಯಂತೆ ನೀ ಇಲ್ಲದೆ
ನಿದ್ದೆ ಬಾರದಂತೆ......


ಎಂದು ನನ್ನೋಳಗೆ
ಸೆರಿಕೊಂಡಿರುವೆಯಲ್ಲ ಎಂದೆದು
ನನ್ನಗಲಿ ಹೋಗದ ದೆವ್ವದ ಹಾಗೆ...........
ಪ್ರೀತಿ........ಹೀಗೆ........ಇದೆ ರೀತಿ......

- ರಾಗಸಿರಿ....

29 Dec 2017, 12:10 pm

ದಲ್ಲಾಳಿಗಳ ಬಗ್ಗೆ

ತೋರದಿರಿ ತೋರದಿರಿ ದಲ್ಲಾಳಿಗಳೆ ದರ್ಪ
ನ್ಯಾಯಕ್ಕೂ ಅನ್ಯಯಕ್ಕೂ ನೀವೇ ಕಾರಣವಪ್ಪ.
ರೈತರಿಂದ ಹಣತಿಂದು ಬಂದಿದೆ ಹೊಟ್ಟೆ ದಪ್ಪ
ನಿಮ್ಮ ಹೊಟ್ಟೆ ತುಂಬುವುದು ಅವರಿದಂತಾ ತೀಳಿತೆನಪ್ಪ....


ರೈತರ ಕಣ್ಣಿರಿನಲ್ಲಿ ಸ್ನಾನ ಮಾಡುವ ಆಸೆ ನೀಮಗೇಕಪ್ಪ
ಸ್ಯಾಪಲ್ ಹೇಸರಿನಲ್ಲಿ ತುಂಬುವುದು ನಿಮ್ಮ ಚೀಲ ದಪ್ಪ
ತೂಕಗಳಲ್ಲಿ ಮೋಸ ನಿಮಗೆ ಕಾಮನ್ ಅಪ್ಪ
ಅದನ್ನ ಬಿಟ್ಟು ಸ್ವಲ್ಪ ಮಾನವೀಯತೆ ಕಡೆ ನಿವ್ ನೊಡ್ರಪ್ಪ..

ದುಡ್ಡು ಗಳಿಸೋದೆ ಜೀವನವಲ್ಲ..
ಪಾಪ ಪುಣ್ಯಗಳಿವೇ ಮರಿಬಾರ್ದು ನಾವೇಲ್ಲ.
ಮೋಸ ವಂಚನೆ ತುಂಬಿವೇ ಜಗವೆಲ್ಲ.
ಅದರಲ್ಲಿ ಇದು ಒಂದ್ ಭಾಗ ಅನ್ಕೊಂಡ್ ಸುಮ್ನಿರಕಾಗಲ್ಲ....

ಕೇಳು ದೇಶಕ್ಕೆ ಅನ್ನ ನೀಡುವ ರೈತ
ನಿನ್ನ ಕಣ್ಣಿರಿಗೆ ಬೆಲೆ ಇಲ್ಲ ತೀಳಿತಾ..
ಭೂ ಮಾತೆ ನಿನ್ನ ಕೈ ಬೀಡುವುದಿಲ್ಲ.
ಯಾರನ್ನು ನಂಬಿಕೊಂಡು ನೀ ಕೆಲಸ ಮಾಡಲ್ಲ..
ವರುಷದಲ್ಲಿ ವರುಣನ ದರುಶನವಾದರೆ ಸಾಕು......


ಇದು ನಮ್ಮುರಿನ ರೈತರನ್ನು ಮತ್ತು ದಲ್ಲಾಳಿಗಳನ್ನ ನೋಡಿ ಬರ್ದಿದ್ದು..

ಅಮರ್ತ್ಯ ಮಾರುತಿ...

- ಅಮರ್ತ್ಯ ಮಾರುತಿ

29 Dec 2017, 11:55 am

ಮೀನು

ಹೆಸರಿಲ್ಲದ ಮೀನು
ಉಂಡವರ
ಪಾಲಿಗದು ಜೇನು,
ಹುಟ್ಟಿದ್ದೆಲ್ಲೋ ಹಳ್ಳಿಗಾಡಿನ
ತೊರೆಯಲ್ಲಿ ತಾನು,
ಗೊತ್ತಿಲ್ಲ ಅದಕ್ಕೆ ಸಮುದ್ರದ
ಯಾವ ಕಾನೂನು.

ನದಿ ನೀರನ ಸಿಹಿಯ
ಕೇಳ್ಪಟ್ಟಿತು
ಈ ಬಣ್ಣ ಬಣ್ಣದ
ಪುಟ್ಟ ಮೀನು,
ಕೇಳಿದ್ದೆ ತಡ ಕಾಲ್ಕಿತ್ತು ಓಡಿತು
ತೊರೆಯಿಂದ ತಾನು.

ಕಂಗೊಳಿಸುವ ಚಿತ್ತಾರಗಳ
ಮದಿರೆ
ಸವಿದ ಮೀನು, ನೂತನ
ಸಂಗಡಿಗರೊಡನೆ ಆಡಿದ ಆಟವ
ಏನೆಂದು ಹೇಳಲಿ ನಾನು.

ನದಿಯದಡದಿ ಮರಡಿಯ ಜರಡಿ
ಹಿಡಿಯಲು ಬಂದ ಗರ್ಭಿಣಿಯ
ನೋಡುತ ನಿಂತ ಮೀನು,
ನೆನೆಯಿತು ತಾಯಿ
ಮಡಿಲ ಮಮತೆಯ ನೆಲವನು.

ನೀರ ರಭಸಕೆ ಕೊಚ್ಚಿ ಸಾಗಿತು
ಭವಭಯದಿ ಮನನೊಂದು ಮೀನು,
ನೂರು ನದಿಗಳ ಸಂಗಮ ನೋಡಿ ಅದರ ಕಂಗಳರಳಿದ ಬಗೆ ಅದೇನು.

ಕಡಲ ಭಾಷೆ ಅರಿಯದೆನೆ ಬೆಳೆದು
ನಿಂತಿತು ಮೀನು,
ಬಾಲ್ಯವ ನೆನೆದು ಚಿಮುಕಿಸಿತು ಕಣ್ಣೀರ ಹೊಳೆಯನು.

- ಚುಕ್ಕಿ

29 Dec 2017, 10:57 am

ಕುವೆಂಪು

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಕುವೆಂಪು
ಕನ್ನಡ ನಾಡಿನ ರತ್ನಕಿರೀಟ ಕುವೆಂಪು
ತುಂಬಿರುವರು ತಾವು ಬರೆದಿರುವ
ಪ್ರತಿಯೊಂದು ಕನ್ನಡ ಪದಗಳಲ್ಲೂ,
ತಮ್ಮ ಕನ್ನಡಪ್ರೇಮದ ಕಂಪು ಕಂಪು
ಕನ್ನಡ "ಕವಿಚಕ್ರವತಿ೯" ಕುವೆಂಪು.
....... ಸಣ್ಣ ಕವಿ
ರಘುವಿಜಯ ಕಸ್ತೂರಿ

- ರಘುವಿಜಯ ಕಸ್ತೂರಿ

29 Dec 2017, 10:44 am

ಇಬ್ಬನಿ

ತಿಳಿಗಾಳಿಯ ತುಂಟಾಟ ನೋಡಿ ಮನಸೋತೆ,
ತಂಪಾದ ಇಬ್ಬನಿಯ ಚೆಲುವಿಗೆ
ಶರಣಾದೆ.

ತುಸು ಮೆಲ್ಲೆನೆ ಉಸಿರಾಡಿ ಘಮ ಘಮಿಸುವ ಕಾಫಿ ಕೈಯಲ್ಲಿ ಹಿಡಿದು,
ಭಾರವಾದ ಕಣ್ಣ ರೆಪ್ಪೆ ಬಲವಂತವಾಗಿ ತಗೆಯುತ್ತ ಎದ್ದು ಏಳದ ಹಾಗೆ ಕಂಬಿಳಿಯೊದು ಕುಳಿತಿರುವೆ.

ಮುಂಜಾನೆ ಆದಿತೆಂದು ಮುಸಿ ಮುಸಿಯ
ನಗುವು ಚೆಲ್ಲುತ್ತಾ....

- ಚುಕ್ಕಿ

29 Dec 2017, 08:55 am

ಹಳ್ಳಿ ಹೈದ

"ಮುಂಜಾನೆಗೆ ಕಣ್ಣೊಸಕಿ
ತಲೆಗೆ ಪೇಟ ಕಟ್ಟಿ,
ಎತ್ತು ಕಟ್ಟಿ,ನೇಗಿಲ ಹಿಡಿದ
ತುಂಡು ಚಡ್ಡಿಯಾ
ಹಳ್ಳಿ ಹೈದ ನಾ.

"ಮಂಜು ಕವಿದರು
ಸೋನೆ ಸುರಿದರೂ,
ಸುಡು ಬಿಸಿಲೆ ಸುಟ್ಟರು, ಜಗ್ಗದೆ
ನೇಗಿಲ ಹಿಂದೆ ಸುತ್ತಿದ
ಹಳ್ಳಿ ಹೈದ ನಾ.

"ಅಂಜದೆ ,ಅಳುಕದೆ
ಕುಗ್ಗದೇ, ಹಿಗ್ಗದೇ,
ಉಳುಮೆ ಮಾಡಿ ಹೊತ್ತು ತಂದ್ದ,
ಮೂರೋತಿನ ಅನ್ನದ ಬುತ್ತಿ
ಹಳ್ಳಿ ಹೈದ ನಾ.

"ದುಡಿಯಲು ಅಂಜದ
ಬಯಲುಸೀಮೆಯ ಗಂಡು
ಗುಡುಗು ಸಿಡಿಲಿಗೆ ಜಗ್ಗದ
ಬಂಟದ್ದೆಯ ಬಂಡ
ಹಳ್ಳಿ ಹೈದ ನಾ.

ರಾಜು

- ರಾಜು ಹಾಸನ

29 Dec 2017, 01:42 am

ಜೊತೆಗಾತಿ.

ಬಿಸಿಲು ಬೆಂಗಾಡಿನ ಬಸವಳಿದ
ನನ್ನ ಬಾಳ ಪಯಣದಲ್ಲಿ
ನೀನೇಕೆ ಜೊತೆಯಾದೆ ಒಲವೇ
ನಿನಗೆ ಬೇರೇನೂ ಕೆಲಸ ಇರಲಿಲ್ಲವೇ ?

ಕೆಸರಿನ ಸಮಾಜದಲ್ಲಿ ಮೊಳೆತು ಅರಳಿದ
ಕಂಪು ಸೂಸಿ ನಗೆಯ ಹರಡಿದ
ಕೆಂಪು ತಾವರೆಯು ನೀನು,
ದಿಕ್ಕು ದೆಸೆಯಿಲ್ಲದೆ ಬಂದು
ಬಾಂಧವ್ಯಗಳ ಕಿತ್ತೆಸೆದು,
ತಿಲಾಂಜಲಿಯಿತ್ತು ಹೊರಟಿದ್ದೆ ನಾನು
ಬಿಟ್ಟೆಲ್ಲ ಸಂಪ್ರದಾಯಗಳ
ಬೇಡವಾಗಿತ್ತು ಇನ್ನೆಂದೂ
ಈ ಹುಲು ಮಾನವರ ಸಹವಾಸ
ಹೇಳಿ ಬಿಟ್ಟಿದ್ದೆ ಎಲ್ಲಾ ಸಂಕೋಲೆಗಳಿಗೂ ವಿದಾಯ,

ಆದರೂ ಎಲ್ಲಿಂದ ಬಂದು ನೀನು ಆತುಕೊಂಡೆಯೋ ನಾನರಿಯೆ,
ಬಿಟ್ಟೆನೆಂದರೂ ಬಿಡದೀ ಮಾಯೆ
ಬಟ್ಟಲು ಕಂಗಳ ಮೋಹಕ ಛಾಯೆ
ನಿನ್ನ ಮೋಹದ ಸಂಕೋಲೇ ಕಳಚಿ ಮುಂದೆ ಓಡಲೇ?
ನಿನ್ನ ಕೈ ಹಿಡಿದು ನನ್ನೊಡನೆ ಎಳೆದು ಸಾಗಲೇ ?
ಅರಿತೇನೆಂದರೂ ಅರಿಯಲಾರೆನು ಹೆಣ್ಣೇ
ನಮ್ಮ ಈ ಸಲುಗೆಯ ಕೊನೆಯನ್ನು.
ಮರೆತೇನೆಂದರೂ ಮರೆಯಲಾರೆ ಹೆಣ್ಣೇ
ನಿನ್ನ ಈ ಮಮತೆಯ ಸವಿಯನ್ನು.

- ಶ್ರೀಗೋ.

28 Dec 2017, 10:52 pm

ಅರಸರಸೀ ಬಂದಳೋ.......

ಅರಸರಸೀ ಬಂದಳೋ ಸರಸಿ
ಅಂಬೆಗಾಲಿಟ್ಟು ಕರೆದಳೋ ಮುನಿಸಿ
ಪ್ರೀತಿಯ ಶಿಖರವ ಉಣಿಸ ಬಯಸುತಿಹಳು
ಚಂದ್ರನ ನೋಡಿ ನಾಚಿ ಮರೆಯುತಿಹಳು
ಕೆನ್ನೆಗಲ್ಲವ ಸವರಿ ಹಿಂಡುತಿಹಳು
ಸಿಹಿಯಾದ ನೋವ ಸವಿಸುತಿಹಳು
ಗೆಜ್ಜೆಸದ್ದಲಿ ನನ್ನೇ ಮರೆಸುತಿಹಳು
ಸದ್ದಿಲ್ಲದೇ ಚಂದ್ರನ ಚುಂಬಿಸಿ ನಾಚುತಿಹಳು

- ಡಿ.ಸಿ.ಎನ್@100%

28 Dec 2017, 02:38 pm

ನನ್ನಯ ಹರಕೆ

ಹುಚ್ಚಪ್ಪಗಳಿರ ಎಚ್ಚೆತ್ತುಕೊಳ್ಳಿ
ಅಚ್ಚರಿಗಳೇ ಕಾದಿದೆ ಮುಂದೆ
ಅದೋ ನಿಮ್ಮ ಕರ್ಮ
ಅರಿತು ಬಾಳಿರೋ ಕರ್ಮದ ಮರ್ಮ

ಅವರಿವರ ಆಶ್ವಾಸನೆಗಳ ಹಾರಕೆ
ಮಾರುಹೋಗಿ ಬಾಗಿ ತಲೆತಗ್ಗಿಸದಿರಿ
ಅಕ್ಕ-ಪಕ್ಕದ ಚಾತುರ್ಯಗಳ ಬಿಡಿ
ನಿಮ್ಮ ದಾರಿಯ ಹದ ಮಾಡಿ

ಮಕ್ಕಳ ಪಾಲಿಗೆ ವಿಧ್ಯಾಸ್ತಿಯ ಹರಿಸಿ
ಕಾಂಂಚಾಣನ ಭೀತಿಯ ಹೊಡೆದೋಡಿಸಿ
ಸತ್ಯ ನ್ಯಾಯ ಧರ್ಮದ ಜಾಡಲಿ ನಡೆಸಿ
ಧೀನರ ಪಾಲಿಗೆ ಆಲದ ಮರವಾಗಿ ನಿಲಿಸಿ

- ಡಿ.ಸಿ.ಎನ್@100%

28 Dec 2017, 02:25 pm