ನೀರವ ಮೌನದ ಒಂಟಿ ಮನೆಯ ಮುಂದೆ
ಅಳುತ್ತಿದ್ದೇನೆ ಒಬ್ಬಂಟಿಯಾಗಿ...
ಮುಸುಕಿದೆ ಸುತ್ತಲೂ ಅಂಧಕಾರ,
ಸನಿಹ ಸೇರುತ್ತಿದ್ದಾರೆ ಒಬ್ಬೊಬ್ಬರಾಗಿ..
ಸೂತಕದ ಛಾಯೆ ಆವರಿಸಿದೆ ಸುತ್ತಲೂ,
ಕಾರಣವ ತಿಳಿಯದೆ ಮನುಜರು..
ಸಂತೈಸುತ್ತಿದ್ದಾರೆ ನೊಂದುಕೊಂಡು
ಯಾಕೀ ವೇದನೆ?
ಪ್ರಶ್ನೆಗಳು ಕಾತರದಿ ಕಾಯುತ್ತಿದೆ,
ಉತ್ತರ ಮಾತ್ರ ಯಾರಿಗೂ ತಿಳಿದಿಲ್ಲ
"ಕಣ್ಣೀರು ಇಳಿಯುತ್ತಿದ್ದ ಕನ್ಯೆಯ ಮೊಗ
ಬಾಡಿ ಹೋದ ಕುಸುಮದಂತಿದೆ"
ಯಾರೋ ಪಿಸುಗುಟ್ಟಿದ ಮಾತುಗಳು
ನನ್ನನು ತಲುಪಿ ಗಾಯವ ಮಾಡುತ್ತಿದೆ.
ಸಮಯ ಉರುಳುತ್ತಿದೆ,ಆತಂಕ ಹೆಚ್ಚುತ್ತಿದೆ
ಕರುಣೆಯು ಅಗಾದವಾಗಿದೆ.
ಮನಸು, ಹೃದಯದ ತುಂಬಾ ತುಂಬಿಕೊಂಡ
ನೋವಿನ ಯಾತನೆ ಸುಡುತ್ತಿದೆ
ಅಪರಾಧಿಯ ಹುಡುಕಲು ಹೃದಯ ಹಿಂಜರಿಯುತ್ತಿದೆ
ಮನಸ್ಸು ಕಲ್ಲಿನಂತೆ ಕುಳಿತಿದೆ...
ಎಷ್ಟೋ ವರುಷಗಳಿಂದ ನನ್ನ ಜೊತೆಗಿದ್ದ
ಮೊಗದಲ್ಲಿ ಸುಮದಂತೆ ಅರಳುತ್ತಿದ್ದ
"ನಗುವಿನ ಕೊಲೆಯಾಗಿದೆ"
ಕಣ್ಣುಗಳು ಅತ್ತು ಅತ್ತು ಸೋತುಹೋಗಿವೆ...
ಕಾರಣವ ತಿಳಿದ ಮನುಜರು
ಚಿತೆಯ ತಯಾರಿಯಲ್ಲಿದ್ದಾರೆ
ಇನ್ನೇನು ಚಿತೆಯಲ್ಲಿಡಲು
ಹೊತ್ತುಕೊಂಡು ಹೋಗುತ್ತಿದ್ದಾರೆ
ನನ್ನೊಂದಿಗೆ ಜೊತೆಯಾಗಿದ್ದ ನಿನ್ನನು
ಆಹುತಿ ಮಾಡಲು ನನಗಿಷ್ಟವಿಲ್ಲವೇ?
ನಾನೇನು ಮಾಡಲಿ
ಮರಳಿ ನೀನಾದರು ಬಂದು ನನ್ನಲಿ ಸೇರಿಕೋ,
ಕರೆದಾಗ ನೀನೆಲ್ಲಿ ಬರುವೆಯಾ ಇನ್ನು?
ವಿಧಿಯಾಟ ನೋಡು
ಕೊನೆಗೂ ನನ್ನ ಕೈಯಿಂದಲೇ ಕೊಳ್ಳಿ ಇಟ್ಟುಕೊಂಡೆಯಾ?
ಬದುಕ ತುಂಬಾ ಅಳುವನ್ನು ತಂದಿಟ್ಟೆಯಾ?
ನಾ ಏನು ಮಾಡಲಿ
ಅಗಲಿಕೆಯು ಅನಿವಾರ್ಯವಾಗಿದೆ!
ಮೇಘಮಾಲೆ
ಮುಗಿಲೋಳಗೆ ಅಡಗಿರುವ
ಮುಗಿಲ ಮಾಲೆ
ಅಲೆ ಅಲೆ ಯಾಗಿ
ಹರಿದು ಬರುವಳು
ಭುವಿಯ ಮಾಲೆ
ಹೊಸ ಬೆಳಕ ತರುವ
ಮಿಂಚು ಮಾಲೆ
ಬಾನೆತ್ತರಕ್ಕೆ ಎಗರಿ
ಯಾರಿಲ್ಲದ ಮಾಯ ಮಾಲೆ
ಪ್ರೀತಿ ಬೆಸುಗೆ ಹಾಕುವ
ಮದುರ ಮಾಲೆ
ಬಾನಾಗಲದ ತುಂಬ
ಚಿತ್ತಾರ ಬಿಡಿಸಿ
ಕಣ್ಣ ತುಂಬಿಸುವ
ಚಿತ್ತ ಮಾಲೆ.........
ಮನಸುಗಳ ಬೆಸೆದು
ಬಂದವ ಕಟ್ಟಿ ಹೊಸ
ಸೃಷ್ಟಿಯ ಬೆಸವ ಬಂದ ಮಾಲೆ......
ಕನಸುಗಳ ಕಟ್ಟಿ ಮನಸುಗಳಿಗೆ
ತಂದೆಸೆದು ಗುರಿಯ ತೊರಿಸೋ
ಕಂದ ಮಾಲೆ.........
ಋತುಚಕ್ರ ಉರುಳಿಸಿ
ಋತುವಿನ ಒಳಗೆ ಹೊಸ
ಚಿಂಗುರಿನ ಜೊತೆಗೆ ಬೆರೆವ
ವಂಸತ ಮಾಲೆ......
ಯಲ್ಲರೆದೆಯಲಿ ಹೊಸ ತನವ
ತಂದು ಹೊಸ ಹಾದಿಗೆ
ಕರೆದೊಯ್ಯವ ಚೆಲುವ ಮಾಲೆ....
ಮುಗಿಲೋಳಗೆ ಮರೆಯಾಗಿ
ಹಗಲಿರುಳು ಜೊತೆಯಾಗಿ
ಮಾಯೆಯಂತೆ ದಿನ ಸಾಗಿಸೋ
ದೈವ ಮಾಲೆ..........
ಮೇಘ ಮಾಲೆ ಯೋಳಗೆ
ಸುಗಂದ ವಿಲ್ಲದ ಎಂದು ಬಾಡದ
ಮಂದಾರ ಮಾಲೆಗಳು............
ಅತ್ತಿಂದೆತ್ತ ಸಾಗುತಿಹರು
ಸಾಲು ಸಾಲಾಗಿ, ಸವಾರಿ
ಹೊರಟಂತಿದೆ ಶಿಕಾರಿಗೆ
ಮುನಿದಿಹನೇನೋ
ಮಿತ್ರನಿಲ್ಲದ ನೆಲೆಗೆ ದಾವಿಸಲು
ಬಾಯ್ಬಿರಿದು ನಿಂತ
ಇಳೆಯಲಿ
ಭಗ ಭಗನೆ ಸುಡುತಿಹ
ಧರೆಯಲಿ
ಕಾದು ಕಾದು ಅಂಧರಾದವರ
ಹೊಲಗಳಲಿ
ಪಶು ಎಲುಬುಗಳೇ ತುಂಬಿದ
ಮೈದಾನದಲಿ
ಒಣಕೊಂಬೆಗಳ ಹೊತ್ತು ನಿಂತ
ಶೃಂಗಗಳಲಿ
ಹಬ್ಬದ ಒಣ ತಳಿರು ತೋರಣ ಕಂಡ
ಮನೆ ಮನೆಯ ಮನದಂಗಳದಲಿ
ನಿಂದು.....
ಘಳಿರು ಘಳಿರುಮನೆ ಕಂಬನಿ
ಸುರಿಸಿ ನಡೆಯ ಬಾರದೇ........ ಡಿ.ಸಿ