Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಂಧನ

ಉದಿಸಿದೆ ನೀ ಉದರದಿಂದ
ಆಯಾಗಿ ಹಾರಾಡುವ ಹಕ್ಕಿಯಂತೆ
ಬೆನ್ನತ್ತಿ ಬರುವುದು ಸಮಾಜದಿಂದ
ಒಂದೊಂದಾಗಿ ಬಂಧನದ ಕಂತೆ ಕಂತೆ

ಮಾಂಸದ ಮುದ್ದೆಯಂತೆ
ನೀ ಬಂದೆ ನನ್ನ ಕಣ್ಣ ಮುಂದೆ
ಈ ಜಗದ ಜನಜಂಗುಳಿಯ
ನೀ ಕಂಡು ಭಯದಿ ಬೆದರಿದೆಯಂತೆ

ನೀನಿಂದು ಸ್ವಚ್ಛಂದ ಆಗಸದಂತೆ
ನೀನಿಂದು ಶ್ವೇತ ಫಲಕದಂತೆ
ನೀನಾಗು ಕಡಲೊಳಗಿನ ಮುತ್ತಂತೆ
ನೀನಾಗು ಕುಸುಮದೊಳಗಿನ ಗಂಧದಂತೆ

ಆಸರೆಯ ವರವಾಗಿ
ನೀ ಬರುವೆ ಎಂದಿದ್ದರು
ಮನೆ ಬೆಳಗೊ ವಧುವಾಗಿ
ನೀ ಬಂದು ಎಲ್ಲರ ಆಲಿಂಗಿಸಿದೆ

ಬೇಡವೆಂದರು ಬೆನ್ನಟ್ಟೀತೆ
ಗಂಡೆಂಬ ಆ ಗುಮ್ಮ
ಯಾರು ಬಲ್ಲರು ?
ನೀನಾಗಬಹುದು ಈ ಜಗದಮ್ಮ




ಶಾರಧ

- ಶಕುಂತಲಾ

06 Jan 2018, 06:52 pm

ಕಳೆದು ಹೋದೆ ನಿನ್ನ ಕಂಡು

ನಿದಿರೆ ಬರದು ನನಗೆ ಇನ್ನೂ
ಕಾಡಿದೆ ನೀ ನನಗೆ ನನ್ನೊಳಗೆ ನೀನಾಗಿ

ಲೋಕವೆ ನಾಚುವ ಸೌಂದರ್ಯ ಗಣಿಯಾಗಿ
ತಣಿಸಿದೆ ನನ್ನ ಮನವ ಜೇನಿನ ಮಾತಲ್ಲಿ
ಕಣ್ಣತುಂಬುವಂತೆ ಮೋಡಿಯ ನೀ ಮಾಡಿ

ಆಕಾಶ ಚುಕ್ಕಿಗಳೆ ನಿನ್ನ ಮುಡಿಗೆ ಹೂವಾಗಿ
ಸೂರ್ಯ ಚಂದ್ರರೆ ಇನ್ನೂ ನಿನ್ನಯ ನಯನವಾಗಿ
ನನ್ನ ಉಸಿರಲ್ಲಿ ನೀನು ನೀನೆ ಉಸಿರಾಗಿ

ನಾಚಿದೆ ಕೆಂಗುಲಾಬಿ ನಿನ್ನ ನಗುವ ಕಂಡು
ನಿನ್ನಯ ವಯ್ಯಾರಕೆ ಸರಿಸಾಟಿ ಬೇರೆ ಏನು
ಮರೆತೋಯಿತು ನಾಟ್ಯವ ನವಿಲು ನಿನ್ನ ಕಂಡು

ಏಳು ಸಾಗರ ದಾಟೋ ಧೈರ್ಯವು ನನ್ನದಾಯಿತು
ಜಗವ ಗೆಲ್ಲುವ ಛಲವು ನನ್ನಲಿ ಮೂಡಿಯಾಯಿತು
ನೀ ಜೊತೆಗಿದ್ದರೆ ಬೇರೆ ಏನು ಬೇಡವಾಯಿತು...

- Irayya Mathad

06 Jan 2018, 12:45 pm

ಮಂಜು ನಂಜಾಯಿತೆ

( ಮಂಜು ನಂಜಾಯಿತು)
ಮುಂಗುರುಳ ಮುಂಜಾನೆಯ
ಮಂಜನ್ನು ಇಷ್ಟ ಪಟ್ಟ ಮಂದಾರದ ಹೂವೆ.
ಮರೆಯಬಾರದೀ ಮಂಜ ಹನಿಯನ್ನು.
ನಿನ್ನ ಹೆಸಳಿನಿಂದ ಜಾರಿ‌ ಬೀಳುವವರೆಗೂ.
ನನ್ನ ನೆನಪಂತೆ ನಿನ್ನನ್ನೆ ಹಿಂಬಾಲಿಸುವ ನನ್ನ ಮನಸ್ಸಿನಂತೆ.

ನಾ ನಡೆಯುವ ದಾರಿಯಲ್ಲಿ ನಿನ್ನ
ಕಣ್ಣೀರಿನ ಓಂದು ಹನಿಯು ಬೀಳಬಾರದೆಂಬ ಶ್ರಮದಲ್ಲಿ ನಿ‌ನ್ನ ಸೇರುವ ದಾರಿ ನನಗೆ ತಪ್ಪಿ ಹೊಯಿತು.
ಅರ್ದದಲ್ಲಿ ಮುರಿದುಬಿದ್ದ ಹಗಲು ಕನಸ್ಸಂತೆ ನಮ್ಮಿಬ್ಬರ ಪ್ರೀತಿ‌.
ನನ್ನಿಂದ ನೀ‌ಅಗಲಲು ಕವಲೊಡೆದ ದಾರಿಯಂತಾಗಿದೆ ನನ್ನ ಈ ಬದುಕು

(ನೆನಪಿನ ನಾವಿಕ ಸಂತೋಷ್)

- ಸಂತೋಷ್//ಜೀತು

06 Jan 2018, 10:08 am

ಕಳೆದ ಹೃದಯ

ನಿನ್ನನು ಕಂಡು ಮೊದಲು
ಉಸಿರು ಕೂಡ ಆಗಿದೆ ತೊದಲು
ಮಾಡಲೇ ಹೃದಯ ಅದಲು ಬದಲು
ಒಪ್ಪಿಸಿ ನನ್ನ ಹರಿಸುವೇ ಪ್ರೀತಿಯ ಹೊನಲು
ಎಲ್ಲೇಲೂ ನಿನ್ನದೇ ಅಮಲು ಅಮಲು ಅಮಲು....

- Jyothi

06 Jan 2018, 01:07 am

ಹುಡುಕಾಟ

ಬಾನಲಿ ಆ ಸೂರ್ಯನ ಉದಯ
ನಿನ್ನ ಸೇರಲು ಕಾದಿಹೆ ಸಮಯ
ಹೇಳೇ ನೀನೇ ನನ್ನ ಕಾಡುವ ಹೃದಯ
ಎಂದು ನೀ ನನರಿವೆ ನನ್ನ ಪ್ರೀತಿಯ ಪರಿಯ


ಸೂರ್ಯ ಚಂದ್ರರೇ ಕೇಳಿ ಇದು ಕಳುವಾಗಿರೋ ಕುತುಹಲದ ಕನಸು
ಭೂಮಿ ಬಾನಿಗೂ ತಿಳಿಯದು ಎಂದು ಅವಳೇ ನನ್ನ ಸಿಹಿ ಮುನಿಸು
ನೀನೇ ಬಂದು ಪ್ರೀತಿಯ ಸೆರೆ ಬಿಡಿಸು
ನಿನ್ನ ನಗುವಿನ ಹೊನಲನು ಹರಿಸು
ಎಂದೂ ಸಿಗದಿರೋ ಪ್ರಶ್ನೆಗೆ ಒಲವಿನ ಉತ್ತರಿಸು... ನೀನೇ ಪರಿಹರಿಸು....


ನಿನ್ನ ನಗುವಿನ ಹಾಡು ಕೇಳಿದೆ ಇಂಪನ
ಹೃದಯದಿ ಆಗಿದೆ ತಿಳಿಯದ ಕಿರು ಕಂಪನ
ನಿನ್ನನು ಕಾಯುತ್ತಾ ಮುದವಾಗಿ ಏರಿದೆ ಮಂಪನ
ಕನಸಲಿ ನಡೆದಿದೆ ಮಾತು ಮೌನಗಳ ಮಂಥನ
ಓ ಪ್ರೀತಿಯೇ ಏನೀ ಹುಡುಗಾಟ
ನಿನಗಾಗಿಯೇ ನಾನಿನ್ನೂ ಹುಡುಕಾಟ.....

- Jyothi

04 Jan 2018, 11:42 pm

ಕನವರಿಕೆ 

ಕುಂಟು ನೆಪಕೆ 
ಕೆಂಪೇರುವ ನಿನ್ನ ಕೆನ್ನೆಯಾಣೆ 
ಕೆಂಪೇರಿದಷ್ಟು ಅರಳುವ 
ಆ ಮುದ್ದು ಕಂಗಳ ಆಣೆ 
ಪಿಸುಮಾತಿನ ನಿನ್ನ ಬೈಗುಳ 
ಹಾಡಿದಂತೆ ಕಿವಿಯಲಿ ಜೋಗುಳ 
ಜೊತೆಯಲ್ಲಿ ಬಾಳುವ ಕನಸು 
ನೆನೆದರೇ ಪ್ರತಿ ಕ್ಷಣ ಸೊಗಸು 

ಮುದ್ದು ಗೆಳತಿಯೇ 
ಮನದ ಒಡತಿಯೇ 
ನಿನ್ನ ಹುಸಿಮುನಿಸೇ 
ನನಗೆ ಸಿಹಿತಿನಿಸು 

- ಚಿದಾನಂದ

04 Jan 2018, 10:35 pm

ಅವಳ ಪ್ರೀತಿ

ಅವಳ ಪ್ರೀತಿ ಮಾತು
ಮನಸ ಕದ್ದು ಹೋಯ್ತು
ಹಣೆ ಮೇಲಿಟ್ಟ ಹೂ ಮುತ್ತು
ಕಲ್ಲಿಗೂ ಜೀವ ಹೊತ್ತು ತಂತು

ಸುರಿಸಿದೆ ಕನಸಿನ ವರ್ಷ
ಒಂದು ಮೆಲು ಪ್ರೀತಿ ಸ್ಪರ್ಶ
ಅವಳಿರಲು‌ ಸನಿಹ ಏನೊ ಹರ್ಷ
ಮರೆಯಾಗಲೆನ್ನೊಳಗೆ ಶುರು ಸಂಘರ್ಷ

ಅವಳಿಗೊರಗಿದರೆ ಸುಮ್ಮನೆ ಹಾಗೆ
ಕಣ್ಣೀರು ಕರಗಿಬಿಡುವುದು ತಿಳಿಯದು ಹೇಗೆ
ಅವಳಿರೆ ಕೈ ಹಿಡಿದು ಜೊತೆಜೊತೆಗೆ
ನಡೆದುಬಿಡುವೆ ಕರೆದರು ಜಗದಾಚೆಗೆ

ಬಿರಿದ ಭುವಿಗಿಳಿದ ಮಳೆಹನಿ‌ ಅವಳು‌
ಪ್ರೀತಿ ತುಂಬಿ ನಿಂತಿದೆ ನನ್ನೆದೆ ಒಡಲು
ಅವಳ ಸ್ವಚ್ಛ ಪ್ರೀತಿಯ ಅಮಲು
ಸಾವು ಬಂದರು ಬಿಡದು ನಾ ಹೋಗಲು

- ಶ್ರೀಕಾವ್ಯ

04 Jan 2018, 09:40 pm

ಹೃದಯ ಕದ್ದ ಪೋರಿ

ಹೃದಯಕ್ಕೆ ಚೂರಿ ಹಾಕೋ ಪೋರಿ
ಏನೇ ನಿನ್ನ ಹಠ ಸುಕುಮಾರಿ,
ನಿನ್ನ ಕಣ್ಣ ಕೊಳದಲ್ಲಿ ಈಜುವಾಸೆ ವಯ್ಯಾರಿ.

ತುಟಿಗೆ ಹಚ್ಚಿದ ರಂಗು ಬಿಸಿ ಏರಿಸಿದೆ ನಂಗೂ,
ಅಂಕುಡೊಂಕು ಮೈಮಾಟ ಸೊಗಸಾದ
ಅಂಗಗಳ ಕಣ್ಣಾಮುಚ್ಚಾಲೆ ಆಟ.

ಬಿಳಿ ಕಮಲದಂತ ಪಾದದ ಓಡಾಟ,
ಜಾರಿ ಬಿದ್ದಂತಿದೆ ನನ್ನೆದೆಯ ಉಸಿರಾಟ
ನಿನ್ನ ನಗೆಯಲ್ಲಿ,
ನಿನ್ನ ನೋಡುವುದೇ ಆಗೋಯ್ತು
ನನಗೆ ಪ್ರತಿ ದಿನದ ಚಟ.

ಅಂದವ ಮುಚ್ಚಿಡುವ
ಚೆಲುವು ಚಿತ್ತಾರದ ವಸ್ತ್ರಗಳು,
ಉಡುಪಿಲ್ಲದ ಮನಸ ರಮಿಸಲು
ಹಾತೊರೆಯುತ್ತಿವೆ ನನ್ನ ಕಣ್ಣಲ್ಲಿನ
ಕನಸುಗಳ ಸಾಲುಗಳು.

ದಿಕ್ಕು ತೋಚದೆ ನನ್ನ ಹುಡುಕುತಿರುವ
ಸುಕೋಮಲ ಕೂದಲ ಪರದಾಟ,
ಕ್ಷಣಕ್ಕೊಮ್ಮೆ ಇಲ್ಲಿರುವೆನೆಂದು ಸದ್ದು
ಮಾಡುವ ಬಳೆಗಳ ಸನ್ಹೆಯಾಟ.

ಬೆರಗಾದೆ ಬೆಡಗಿ ಏನೇ ನಿನ್ನ
ಆಕರ್ಷಕ ನಡುಗೆ, ಮಾತೊಂದು ಬಾರದೆ
ಪದಗಳಲ್ಲಿ ಮಲಗಿರುವೇ ನಿನ್ನ ಅಂದವ
ಸವೆಯುತ ನೀ ಕೊಟ್ಟ ಒಲವಲ್ಲಿ ಹುಡುಗಿ.

- ಚುಕ್ಕಿ

04 Jan 2018, 07:14 pm

ರೈತರು

ರೈತರು ರೈತರು ರೈತರು
ಭೂವಿಯನು ನಂಬಿ ಬದುಕುವರು
ಹಗಲಿರುಳೆನ್ನದೆ ದುಡಿಯುವರು
ಬೆವರನು ಬಸಿದು ಬೆಳೆಯುವರು

ಅನ್ನವ ನೀಡುವ ದೇವರು
ದೇಶದ ಬೆನ್ನೆಲಬು ಇವರು
ನೆಗಿಲ ಯೋಗಿಗಳೋ ಇವರು
ದಣಿವನೆ ಅರಿಯದ ಶ್ರಮಿಕರು
ರೈತರು ರೈತರು ರೈತರು

ಧರಣಿಯ ಉಳುವರು ಪ್ರೀತಿಯಲಿ
ಸಂತೋಷದಿ ನಲಿವರು ಮಳೆಯಲಿ
ಕೂಡಿ ದುಡಿವರು ಸ್ನೇಹದಲಿ
ಪ್ರೀತಿಯ ಮಕ್ಕಳು ಭೂ ತಾಯಿಯ
ಮಡಿಲಲಿ...
ಅನ್ನವ ನೀಡುವ ಅನ್ನ ದಾತರ
ನಮಿಸಿ ಮನದಲ್ಲಿ..
ಹೇಳಿ ಮಣ್ಣಿನ ಮಕ್ಕಳೇ ನಿಜ ದೇವರು
ಈ ಧರಣಿಯ ಒಡಲಲಿ
ರೈತರು ರೈತರು ರೈತರು

- Bhagya Girish

04 Jan 2018, 12:38 pm

ಮರ

( ಮರ )

ನಾನೊಂದು ಮರವಾಗಿದ್ದಾಗ.
ನನ್ನವಳ ಮನಸ್ಸು ಅದಕ್ಕೆ ಧರೆಯಂತೆ .
ಕಲ್ಪನೆಗಳಲ್ಲಿ ನಾನು ಅದಕ್ಕೆ ನೀರುಣಿಸುವ
ಕೆರೆಯಂತೆ .
ಅವಳ ಮುಗ್ದ ಪ್ರೀತಿ. ಬುಡದಲ್ಲಿ
ಕವಲೋಡೆದಿರುವ ಬೇರಂತೆ.

ನನ್ನಲ್ಲಿ ಮಿಡಿಯುತ್ತಿರುವ ಹ್ರುದಯದ
ತುಡಿತ .ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪದಂತೆ.
ಮರದಿಂದ ಹೊರಬಂದ ಕಲ್ಮಶವಿಲ್ಲದ ಗಾಳಿ ಎನು ಅರಿಯದ ಮುಗ್ದ ಪ್ರೀತಿಯಂತೆ.

ಓಂದು ಸುಂದರ ಮರ ಅದೆಷ್ಟೋ ಪ್ರೇಮಿಗಳ ನೆಲೆಯಂತೆ.
ಅಮ್ರುತ ಶಿಲೆಯಲ್ಲಿ‌ ಕೆತ್ತಿದ ಶಿಲೆಯಂತೆ‌.
ಕಲ್ಪನೆಗಳಲ್ಲಿ ಅದು ನೀಲ ಕಡಲ ಅಲೆಯಂತೆ


ನೆನಪಿನ ನಾವಿಕ ಸಂತೋಷ್

- ಸಂತೋಷ್//ಜೀತು

04 Jan 2018, 10:32 am