ನೆನಪಿನ ಹೊಳೆಯಲಿ..
ನಿನ್ನ ನೆನಪು ಮಸುಕು..
ಆದರೂ ಮನ ನಸುನಕ್ಕು..
ಹೇಳುತಿದೆ ಗೆಳತಿ..
ಬಾಳಿನ ಬವಣೆಯಲಿ..
ಕಳೆದುಹೋಗಿ..
ಸ್ನೇಹವೆಂಬ ಕಡಲಿನಲಿ..
ಮತ್ತೆ ಸಿಕ್ಕ ಸುಂದರ ಮುತ್ತು..
ನೀ ನನ್ನ ಬಾಳಿಗೆ ಯಾವತ್ತು....
ನಿನ್ನ ಕಂಡು ಮನವಾಗಿದೆ ಸುಂದರ ಪತಂಗ
ಹರುಷದಿ ಮಿಡಿದಿದೆ ನನ್ನೀ ಭಾವ ತರಂಗ
ಏನೋ ನುಡಿದಿದೆ ಹೃದಯ ಪ್ರೀತಿಯ ಮೃದಂಗ
ಆಗು ಇನಿಯ ನೀ ನಾ ತಿಳಿಯದ ಅಂತರಂಗ
ಮಾತು ಮೌನದ ನಡುವೆ ನಡೆದಿದೆ ಮೌನದ ಚಿತ್ರಾಂಗ
"ಕನ್ನಡ!!!"
ಬರೀ ಮೂರು ಅಕ್ಷರಗಳ ಪದವಾಗಿರಬಹುದು
ಆದರೆ ಎಲ್ಲ ಕನ್ನಡಿಗರ ಉಸಿರಾಗಿರುವುದು.
ಕರ್ನಾಟಕದ ಮಾತೃ ಭಾಷೆ ಇದು
ಕೆಂಪು-ಹಳದಿ ಬಣ್ಣದ ಉಡುಪು ತೊಟ್ಟು ನಿಂತಿರುವುದು.
ಪಂಪ , ರನ್ನರಿಂದ ಹಿಡಿದು ಕುವೆಂಪು, ಬೇಂದ್ರೆಯರ ವರೆಗೆ
ಕವಿತೆ, ಕಾವ್ಯ, ಸಾಹಿತ್ಯದ ಭಂಡಾರ ತಂದಿರುವರು ಇಲ್ಲಿಯವರೆಗೆ.
ವಚನಗಳಿಗೆ ಜನ್ಮ ಕೊಟ್ಟಂತಹ ಭಾಷೆ ಇದು
ಎಂಟು ಬಾರಿ ಜ್ಞಾನಪೀಠ ಪಡೆದ ಸಾಧನೆ ಇದರದ್ದು .
ಈಗ ಕನ್ನಡವು ಎಲ್ಲೂ ಮರೆಯಾಗಿ ಕೂತಿದೆ
ಎಲ್ಲೂ ಒಂದು ಮೂಲೆಯಲಿ ಕಂಬಳಿ ಹೊದ್ದು ಮಲಗಿದೆ .
ಮಲಗಿರುವ ಕನ್ನಡವನ್ನು ಸ್ವಯಂಪೂರಕವಾಗಿ ಎಬ್ಬಿಸುವುದು ಅನ್ವಯ
ಕನ್ನಡ ಎಂಬ ಭಾಷೆ "" ಇತ್ತು ..."" ಎಂದು ಹೇಳುವ ಸಂದರ್ಭ ಬಾರದ ಹಾಗೆ ನೋಡಿಕೊಳ್ಳುವುದು ನಮ್ಮ ಕಾರ್ಯ .
ಇಲ್ಲಿರುವ ಇತರ ಜನರಿಗೆ ಕನ್ನಡ ಕಲಿಸುವ ಪ್ರಯತ್ನ ಮಾಡೋಣ
" ಕನ್ನಡ್..." ಅಲ್ಲ " ಕನ್ನಡ ..." ಎಂದು ತಿಳಿಸೋಣ .
ಎಲ್ಲರು ಕೂಡಿ ನಮ್ಮ ನಾಡಿನ ಧ್ವಜವ ಹಾರಿಸೋಣ
ನಾವು ಕನ್ನಡಿಗರು ಎಂದು ಹೆಮ್ಮೆ ಇಂದ ಹೇಳೋಣ.
ರೈತನೇ ನಮಗೆಲ್ಲ ಅನ್ನದಾತ.
ನಾ ಹೇಳುತ್ತಿರುವೆ ನಿಮಗೆ ಪ್ರೀತಿ ಮಾತ.
ನಾವು ತಿನ್ನುವ ಆಹಾರದಲ್ಲಿ ಇಲ್ಲ
ಅವನ ಹೆಸರು.
ಅವನು ಬೆಳೆದಂತಹ ಪೈರಲಿತ್ತು .ಅವನ ಉಸಿರು.
ಬಡವನಿಗೆ ಗಂಜಿಗೆ ಗತಿ ಇಲ್ಲದಿದ್ದರೂ.
ನಮಗೆ ತಿನ್ನಲು ಅಹಾರ ಓದಗಿಸುವವನೆ ರೈತ. ಅವನೇ ನಮಗೆಲ್ಲ ಜೀವದಾತ.
ಕಾಲ ಕಾಲಕ್ಕೆ ಮಳೆ ಇಲ್ಲದಿದ್ದರೆ. ಬರುತ್ತಿತ್ತು
ಅವನ ಕಣ್ಣಲ್ಲಿ ನೆತ್ತರು.
ಬರಗಾಲದಲ್ಲಿ ಆಗುತ್ತಿತ್ತು ಭೂಮಿಯೆಲ್ಲ ಭಂಜರು .
ಅವನು ನೆತ್ತರು ಸುರಿಸಿ. ದಾನ್ಯವನ್ನು ಬೆಳೆಸಿ
ಅನ್ನ ನೀಡುವವನೇ ರೈತ.
ತನ್ನ ಕಣ್ಣಿರನ್ನು ಮರೆತು.
ನಮಗಾಗಿ ಮೈಯೆಲ್ಲ ಬೆವತು .
ಆಹಾರವನ್ನು ಬೆಳೆದ ರೈತನೇ ನಮಗೆಲ್ಲ ದೇವರು. ರೈತನನ್ನು ಗೌರವಿಸಿ.