Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪಯಣ

ಜನನದಿಂದಲೆ ಭೂಮಿಗೆ ಪಯಣ
ಬಾಲಕ ಬಾಲಕಿಯಾಗಿ ಭುವಿಗೆ ನಮಿಸುವೆ ನಮನ
ಅಮ್ಮ ಎಂದೋಡನೆ ಕನ್ನಡದ ಜನನ
ಶಾಲೆ ಸೇರುತ್ತಲೆ ಅಕ್ಕರದ ಕಲಿಕೆಗೆ ಆಗಮನ
ಯುವಕನಾಗುತ್ತಲೆ ನೌಕರಿಯ ಹುಚ್ಚುತನ
ನೌಕರಿಯು ಸಿಗದೆ ಹೊದರೇ ಜೀವನದ ಜಿಗುಪ್ಸೆತನ
ಪ್ರಾಯ ಬಂದೊಡನೆ ಮದುವೆಯ ಮುಂದಾಳುತನ
ಅಪ್ಪ ಎನ್ನುವ ಶಬ್ದ ಆಲಿಸಿದೊಡನೆ ಸಂಸಾರದ ಜವಾಬ್ದಾರಿತನ
ಷಷ್ಟಿಯಾದೊಡನೆ ಮಕ್ಕಳ ಕಲ್ಯಾಣದ ಮೌನ ಮನನ
ಅಜ್ಜ ಆದೊಡನೆ ಆರೋಗ್ಯದ ವೈಪರಿತನ
ಸಾವು ಬಂದರೇ ಕೈಲಾಸದ ಕಡೆಗೆ ಗಮನ ಎಲ್ಲರಿಗೂ ಹೇಳಿ ಹೊಗುವೇ ಬದುಕಿನ ಅಂತಿಮ ನಮನ
ಮರಣದೊಂದಿಗೆ ಮುಗಿಯಿತ್ತು ನಮ್ಮಿ ಜೀವನದ ಪಯಣ.........
............
..............................ಆನಂದ ಎಮ್

- Jehovah

21 Jan 2018, 10:47 am

ಸಿಹಿಗನಸು

ಚೆಂದಿರನಂತ ನಿನ್ನ ಮೊಗಕೆ
ಪುಷ್ಪಾರ್ಚನೆ ಮಾಡಲೇನು
ಮುದ್ದಾದ ನಿನ್ನ ಕೆನ್ನೆಗೆ
ಮುತ್ತೊಂದ ನೀಡಲೇನು.
ಮಳೆಯಲ್ಲಿ ಕೊಡೆಹಿಡಿದು
ಚಳಿಯಲ್ಲಿ ಬಿಗಿದಪ್ಪಿ
ನಿನ್ನೊಂದಿಗೆ ಸಾಗಲು ಕಾಯುತ್ತಿರುವೆ
ಗೆಳತಿ ನೀ ಎಲ್ಲಿರುವೆ.

....ನಿಮ್ಮ ಪ್ರೀತಿಯ ಹುಡುಗ "ರಾಜ್"

- ವರದ ಪ್ರೇಮ ಜೀವಿ

20 Jan 2018, 12:59 pm

ಒಂಟಿ ಜೀವವಿದು

ಇಂದೇಕೊ ಈ ಜೀವನ
ಬೇಸರವಾಗಿದೆ ಗೆಳತಿ.
ಎಲ್ಲಾ ಇದ್ದರೂ ಒಬ್ಬೊಂಟಿಯಂತೆ
ಈ ಜೀವನ ಸಾಗುತಿದೆ ಗೆಳತಿ.
ನಾನು ಒಂಟಿಯಾಗಿ ಸಾಗಿದರೆ
ನನ್ನಿಂದೆ ಬರುವುವವರು ಯಾರಿಲ್ಲ ಗೆಳತಿ.
ನನಗೆ ಎಷ್ಟೇ ಕಷ್ಟ ಬಂದರೂ ನನ್ನಿಂದೆ
ನೀ ಇರುವೆ ಎಂದುಕೊಂಡೆ ಗೆಳತಿ.
ಆದರೆ ಈ ಬಡಪಾಯಿ ಜೀವವ
ನೀನು ಬಿಟ್ಟೋದೆಯ ಗೆಳತಿ.
ನನಗೆ ಈಗ ಅರಿವಾಗಿದೆ
ಈ ಜೀವಕ್ಕೆ ಬೆಲೆ ಇಲ್ಲ ಎಂದು ಗೆಳತಿ.

ನಿಮ್ಮ ಪ್ರೀತಿಯ "ರಾಜ್"

- ವರದ ಪ್ರೇಮ ಜೀವಿ

20 Jan 2018, 12:52 pm

ಎಲ್ಲರೂ ಕಾಲ್ಎಳೆಯವ್ರೆ

ಎಲ್ಲರೂ ಕಾಲ್ಎಳೆಯವ್ರೆ
ಒಳ್ಳೆವ್ರು ಯಾರವ್ರೆ
ಈ ಮನ್ಷ ಯಾವುದಕ್ಕೂ ಸಹಿಸೋಲ್ಲ
ಎಲ್ಲದಕ್ಕೂ ತಲೆ ಹಾಕೋದು ಬಿಡೋಲ್ಲ

ಕೆಟ್ಹೋದ್ರೆ ಥೂ ಅಂತ ಉಗಿತಾರೆ ನೀತಿ ಪಾಠ ಹೇಳ್ತಾರೆ
ನೆಟ್ಗಿದ್ರೆ ಇವ್ನೇನ್ ಮಹಾ ಅಂತಾರೆ
ಸ್ವಲ್ಪ ಮೆತ್ಗಿದ್ರೆ ಬಂದ ಸತ್ಯಹರಿಶ್ಚಂದ್ರನ ತುಂಡು ಅಂತಾರೆ
ಸ್ವಲ್ಪ ಜೋರಾಗಿದ್ರೆ ಏನ್ ಧೀಮಾಕು ಏನ್ ಜಂಭ ಅಂತಾರೆ
ಈ ಮನ್ಷ ಬದ್ಕೋದು ಇಲ್ಲ
ಬದ್ಕೋಕು ಬಿಡೋಲ್ಲ

ಗೊತ್ತಿಲ್ಲ ಅಂದ್ರೆ ಏನ್ ಸಾಚಾ ಇವ್ನು ಅಂತಾರೆ
ಗೊತ್ತಿದೆ ಅಂದ್ರೆ ಏನ್ ನೀಚಾ ಇವ್ನು ಅಂತಾರೆ
ಸೋತಾಗ ಅಂಗಂತೆ ಹಿಂಗಂತೆ ನಮ್ಗ್ಯಾಕೆ ನಮ್ಗ್ಯಾಕೆ ಅಂತಾರೆ
ಗೆದ್ದಾಗ ಹೌದ ಹೌದ ಅವನು ನಮ್ಮವ್ನು ಅವನು ನಮ್ಮವ್ನು ಅಂತಾರೆ
ಬದುಕಿದ್ರೆ ಸತ್ತಾದ್ರು ಸಾಯಾಬಾರ್ದ ಅಂತಾರೆ
ಸತ್ತರೆ ಪಾಪ ಒಳ್ಳೆ ಮನ್ಷ ಹೋಗ್ಬಿಟ್ಟ ಅಂತಾರೆ

- ಸುರೇಶ್ ಟಿ ವಿ

20 Jan 2018, 07:32 am

ಇದು ನಮ್ಮ ಸಮಾಜ........

ಗೊತ್ತಿಲ್ಲ ಗುರಿ ಇಲ್ಲ ಯಾರಗೆ ಯಾರು ತಿಳಿದಿಲ್ಲ
ಯಾರೋ ಪದವಿ ಎರಲು ಇನ್ಯಾರೊ ಬಲಿಪೀಟವಂತೆ ಅದರ ಮೇಲೆ ಅವರ
ಬದುಕಿನ ಬಣ್ಣದ ಚಿತ್ತಾರವಂತೆ ನಾವು ನೋಡಿ
ಕಣ್ಣ ತುಂಬಿಸಿಕೋಳ್ಳಬೆಕಂತೆ ಹೋಟ್ಟೆ ಹಸಿದಿದ್ದರು ಜುಟ್ಟಿಗೆ ಮಲ್ಲಿಗೆ ಹೂವೋಂದು ಬೇಕಂತೆ.....

ಬನ್ರಪ್ಪೋ ಬನ್ರಿ ಕೆಳ್ರಪ್ಪೋ ಕೇಳ್ರಿ
ನಮಗೆನು ತಿಳಿದಿಲ್ಲ ತಿಳಿದೋರೆಲ್ಲ ಮಣ್ಣಲ್ಲಿ
ಮಣ್ಣಾಗಿ ಕಣ್ಮುಚ್ಚಿ ಮಲಗ್ಯಾರಲ್ಲ
ಮನುಷ್ಯ ಮನುಷ್ಯನನ್ನೆ ತುಳಿದು ಮೆಟ್ಟಿಲೆರಬೆಕಂತೆ ಇಲ್ಲದಿದ್ದರೇ ಬದುಕ ಇಲವಂತೆ
ಕಣ್ಮಂದೆ ಆನ್ಯಾಯವೆ ನಡೆಯುತ್ತಿದ್ದರು ನ್ಯಾಯ ಕೇಳುವವರು ಯಾರಿಲ್ಲ ಕಣ್ಮಚ್ಚಿ ಅಂದರಂತೆ ನಿಲ್ಲುವರಲ್ಲ.......

ಕೆಳಿರೋ ಎಲ್ಲ ನೋಡಿರೋ ಎಲ್ಲ ಈ ಜಗವ ನೋಡಿರೋ ಎಲ್ಲರ ಬದುಕ ನೋಡಿರೊ ಆದರೋಳಗೆ ನಮ್ಮನೆ ನಾವೆ ನೋಡಿಕೋಳ್ಳಿರೋ
ನಮಗಾಗೀ ನಾವೆ ಕಟ್ಟಿಕೋಂಡ ಲೋಕದೋಳಗೆ
ನಾವೆ ಪರರಂತೆ ಬದುಕ ಬೇಕಲ್ಲೋ ಸುಂದರವಾದ ಲೋಕದೋಳಗೆ ಕಪ್ಪಾದ ಚಾಯೆಯೋಂದು ಬಂದು ಆವರಿಸಿದಂತೆ ಈ ಸಮಾಜ.......

ಕಟ್ಟುಪಾಡುಗಳ ನಡುವೆ ನಾವು ಬದುಕಬೆಕಲ್ಲ
ಇಲ್ಲಿಯಾರು ನಮ್ಮವರಲ್ಲ ನಮ್ಮನ್ನೆ ನಾವು ನೋಡಿಕೋಂಡೂ ಬದುಕಬೆಕಿದೆ ಇಲ್ಲೀ
ಹುಟ್ಟೂವಾಗ ಯಾರಿಲ್ಲ ಹೋಗುವಾಗ ಯಾರಿಲ್ಲ ನಡುವೆ ಎಕೆ ಈ ಕಟ್ಟುಪಾಡುಗಳ ಸಮಾಜದೋಳಗೆ ನಾವು ನಮ್ಮತನವ ಕಳೆದು
ಬದುಕಬೆಂಕಂತೆ.........

ತನ್ನದೆ ಆದ ಸಂಸಾರ ಸುಖವಾಗಿ ಬದುಕಲು
ಸಮಾಜಕ್ಕೆ ಕೋಡಬೇಕಂತೆ ಸಂಪ್ರದಾಯಗಳ
ಬಳುವಳಿ ಇಲ್ಲದಿದ್ದರೆ ನಾವೆ ಮಾಡಿದ ಸಮಾಜ ನಮ್ಮನೆ ಹೋರಹಾಕುಂತಂತೆ.......

ನಾವು ಕಟ್ಟಿಕೋಂಡ ಸಮಜಕ್ಕೆ ನಮ್ಮನೆ ಆಳುವ ದೊರೆಬೇಕಂತೆ ಅವರ ಆಯ್ಕೆಯು ನಮ್ಮದೆ ಆದರು ನಮಗಿಲ್ಲಿ ಬೆಲೆ ಇಲ್ಲವಂತೆ
ಲಂಚ ಬ್ರಷ್ಠಾಚಾರ ದುರಾಸೆ ಹಣದಾಹ ಮೋಹ ಈ ಎಲ್ಲಭೂತಗಳ ತುಂಬಿರುವ ಸಮಾಜ....

ಕಂದನೋಬ್ಬ ಹುಟ್ಟಿ ಬೆಳೆದು ತನ್ನಂತೆ ತಾನು ಆಗಲು ಸಮಾಜದ ಎಲ್ಲರ ನಡುವೆ ಬದುಕಲು ಅವರಿಷ್ಟದಂತೆ ಬದುಕಬೇಕಂತೆ
ವಿದವೆಯೋಬ್ಬಳು ಮರುಮದುವೆಯಾದರೆ ಅವಮಾನವಂತೆ ಅದೆ ಗಂಡೊಬ್ಬನು ಮರು ಮದುವೆಯಾದರೆ ರಾಜನಂತೆ
ಹೆಣ್ಣೋಬ್ಬಳು ಗಂಡನನ್ನು ತೊರೇದರೆ ಅವಳಿಗೆ ಬದುಕುವ ಅರ್ಹತೆಯೆ ಇಲವಂತೆ ಹೆಣ್ಣೋಬ್ಬಳು ಒಂಟಿಯಾಗಿ ತನ್ನಂತೆ ತಾನು ಬದುಕಲು ಬಿಡದ ಸಮಾಜ .......

ಕಷ್ಟಪಟ್ಟು ಬೆವರು ಸುರಿಸಿ ಬೆಳೆಯ ಬೆಳೆದು ಎಲ್ಲರಿಗು ಅನ್ನ ಹಾಕುವ ರೈತನೋಬ್ಬ ಬಡವನಂತೆ
ಎಲ್ಲೋ ಮೊಸದಿಂದ ಸಂಪಾದಿಸಿ ಸುಮ್ಮನೆ ಕೂತು ತಿಂದು ತೇಗಿ ಬಿಕ್ಷುಕನಿಗೆ ಅನ್ನಹಾಕದ ಅಲ್ಪನೋಬ್ಬ ಶ್ರೀಮಂತನಂತೆ.......

ಇದು ನಮ್ಮ ಸಮಾಜ ನಮಗೆ ನಾವೆ ಹಾಕಿ ಕೋಂಡ ಕಬ್ಬಿಣದ ಸರಪಳಿಗಳ ಬೇಲಿ ಎಂದೆದಿಗು ಕಿತ್ತೂ ಬಿಡಿಸಿಕೋಳ್ಳಲಾಗದೆ ಕುಂತಲ್ಲೇ ಕೊರಗಿ ಮರಗಿ ಅಸ್ತಿಪಂಜರವಾಗುವ ವರೆಗೆ ನಮ್ಮನ್ನೂ ಬಿಟ್ಟೋಗದ ನಮ್ಮದೆ ಆದ ಸುಂದರವಾದ ಸಮಾಜ...........ಎಷ್ಟು ಚಂದದ ಸಮಾಜ

- ರಾಗಸಿರಿ....

19 Jan 2018, 05:32 pm

ಗಂಗವ್ವ ತಾಯೇ ನನ್ನವ್ವ ಮಾಯೇ

ಸಿಟ್ಟ್ಯಾಕೆ ಸಿಡುಕ್ಯಾಕೆ ಗಂಗವ್ವ
ಇದು ತರವಲ್ಲ ನಿನಗೆ ಹಡೆದವ್ವ
ನೀ ಸಿಟ್ಟಾದಗೆಲ್ಲಾ ಹೊಟ್ಟೆಗೆ ಹಿಟ್ಟಿಲ್ಲ
ಕರುಣೆಯ ತೋರಿ ಹರಸವ್ವ
ಈ ಮಕ್ಕಳ ರಕ್ಷಿಸು ಜಗದವ್ವ

ಒಣ ಒಣ ಒಣ ಮುನಿಸುಬ್ಯಾಡ
ಧಡ ಧಡನೇ ಸುರಿಯ ಬ್ಯಾಡ
ಗಂಗವ್ವ ಜಲಪ್ರಳಯ ಮಾಡಿಕೊಂಡು
ತವರಿಗೆ ಮರಳಬ್ಯಾಡ
ಹೇ ಮಾಯೇ ಬರಗಾಲ ತಂದುಕೊಟ್ಟು
ತವರ ಬಿಟ್ಟು ಹೋಗಬ್ಯಾಡ

ಕಾಲ ಕಾಲಕೆ ನೀ ಬಾರೇ
ಈ ತವರಿಗೆ ಸಿರಿಯ ನೀ ತಾರೇ
ಪ್ರೀತಿಯ ಸಂಭಂಧ ಬೆಸೆಯುವ ನೀರೇ
ಜಗಕ್ಕೆಲ್ಲಾ ಬೇಕಿದೆ ನಿನ್ನುಸಿರ ಹಸಿರೇ
ಈ ಧರಣೆಯ ತಣಿಸುವ ನಿನ್ನಾಸರೇ...

- Bhagya Girish

19 Jan 2018, 01:10 pm

ಪತ್ರಕತ೯ರ ಲೇಖನಿ

ಪತ್ರಕತ೯ರ ಲೇಖನಿಯದು
ಖಡ್ಗಕ್ಕಿಂತಲೂ ಬಲೂ ಚೂಪು
ಪ್ರತಿಯೊಂದು ಪದಗಳಲೂ ಮೂಡಿಸುವುದದು ಸಮಾಜೀಕ
ಕಳಕಳಿಯ ಚಾಪೂ..

ಲೇಖನಿಯಲ್ಲಡಗಿಹುದು ಅಗೋಚರ ಶಕ್ತಿ
ಬರವಣಿಗೆಯ ಶೈಲಿಯಲ್ಲಡಗಿದೆ ಅದರ ಯುಕ್ತಿ
ಕೊಡಿಸುವುದದು ಎಲ್ಲಾ ಜನಗಳಿಗೆ ದಬ್ಬಾಳಿಕೆಯಿಂದ ಮುಕ್ತಿ
ಲೇಖನಿ ಮೂಡಿಸುವುದು ಜನ ಮಾನಸದಲಿ
ದೇಶ ಭಕ್ತಿ

ಸತ್ಯದಿಂದ ಆಸತ್ಯವ ಕೊಂದು
ಧಮ೯ದಿಂದ ಅಧಮ೯ವ ಕೊಂದು
ಸಂಸ್ಕೃತಿಯಿಂದ ಸಾಹಿತ್ಯ ತಂದು
ದೇಶದ ಜನ ಮನಗಳ ನ್ಯಾಯ ಕಾಯುವ ಲೇಖನಿಯದು
ದೇಶ ಕಾಯುವ ವೀರ ಸೈನಿಕನಂತೆ
ಪತ್ರಕತ೯ರ ಲೇಖನಿಯದು

ಯಾವ ಆಸೆ ಆಮಿಷಗಳಿಗೂ ಲೇಖನಿಯ ತಲೆ ಕೊಡದಿರಿ
ಅದನ್ನು ಯಾರ ಯಾವುದರ ಗುಲಾಮರನ್ನಾಗಿಯೂ ಮಾಡದಿರಿ
ಸತ್ಯವ ಎತ್ತಿ ಹಿಡಿಯುವ ಸತ್ವಯುತ
ಖಡ್ಗವೆಂದೆ ಭಾವಿಸಿರಿ
ಅದು ದೇಶದ ಐದನೇ ಆಧಾರ ಸ್ತಂಭವೆಂಬುದ ಮರೆಯದಿರಿ

- Bhagya Girish

19 Jan 2018, 12:53 pm

ಕರುನಾಡು ನನ್ನ ಉಸಿರ ಗೂಡು

ಕರುನಾಡಿನ ಕಣ್ಮಣಿಗಳೇ
ನಾಡದೇವಿಯ ಒಡಲ ಕುಡಿಗಳೇ
ಹಾಡಿ ಐಕ್ಯತೆಯ ಹಾಡ
ಐಕ್ಯತೆಯಲಿ ಬಲವಿದೆ ನೋಡ

ಯಾವ ಭಾಷೆಯು ಬಂದರು
ನಾಡ ನುಡಿಯು ನಲುಗದು
ಯಾರೇ ಕತ್ತಿ ಮಸೆದರು
ನಾಡ ಪ್ರೇಮ ಬಗ್ಗದು

ಎಲ್ಲಿ ನೋಡಿದರಲ್ಲಿ ಚೆಲುವು
ಕೈಬೀಸಿ ಕರೆಯುವ ಒಡನಾಡಿಗಳ ಸ್ನೇಹವೂ
ಜಾತಿ ಧಮ೯ವ ಸುಟ್ಟು ಬಂದಿಹ
ನಾಡ ಪ್ರೇಮದ ಕುಸುಮವು
ಹಿರಿಯ ಕಿರಿಯರೆನ್ನದೆ
ಪ್ರೀತಿ ತೋರುವ ತಾಯ್ ನೆಲವು

ನನ್ನ ನಾಡು ಕರುಣೆಯ ಬೀಡು
ನಾಡಿನ ತುಂಬಾ ಒಲವಿದೆ ನೋಡು
ಕನ್ನಡ ನುಡಿಯ ಸವಿಯನು ಉಂಡು
ತಾಯ್ನಾಡಿನಲ್ಲಿ ಹರಿಯುವ ನದಿಗಳ ಸಂಭ್ರಮ ಕಂಡು
ನೀನು ಅಚ್ಚರಿ ಪಡುವೆ ಏನು
ಕನ್ನಡವದುವೇ ಸವಿಜೇನು

ಹಚ್ಚ ಹಸಿರಿನ ವನರಾಶಿ
ನಡುವೆ ಕುಳಿತರೆ ಪರಿಮಳ ಸೂಸಿ
ಪರಿಶುದ್ದ ಗಾಳಿಯು ಬರುವುದು
ನಿನ್ನನ್ನೆ ಹರಸಿ
ಹೇಳುತಾ ಎಂದೂ ಕನ್ನಡ ಬಳಸಿ
ಎಂದೂ ಕನ್ನಡ ಉಳಿಸಿ

- Bhagya Girish

19 Jan 2018, 12:09 pm

ಕಾಲದೊಂದಿಗೆ ನನ್ನವಳು..

ಮುಂಜಾನೆಯ ಮುಸುಕಿನಲಿ
ಅರುಣೋದಯದ ವೇಳೆಯಲಿ
ನೆನಪಾಗುವಳು ಅವಳು..
ರವಿಮಾಮನ ತಿಳಿಕಿರಣದಲಿ
ಎಲೆಯ ಮೇಲೆ ಕುಳಿತು
ಕೈಜಾರಿ ಹೋದ ಮಂಜಿನಂತೆ..!
ಆ ಇಬ್ಬನಿಯಂತೆ..!

ಮಧ್ಯಾಹ್ನದ ಹೂತ್ತಿನಲಿ
ಸುಡುಬಿಸಿಲ ಬೇಗೆಯಲಿ
ನೆನಪಾಗುವಳು ಅವಳು..
ಅಲೆದಾಡಿ, ತಿರುಗಾಡಿ
ಬಳಲಿ ಬೆಂಡಾಗಿ ಬಾಯಾರಿದ ಮನಕೆ
ದಾಹ ನೀಗಿಸಲು ಬಂದ ಗಂಗೆಯಂತೆ..!
ನಮ್ ತುಂಗೆಯಂತೆ..!

ಸೂರ್ಯಾಸ್ತದ ಸಮಯದಲ್ಲಿ
ಇಳಿಬಿಸಿಲ ಹೊತ್ತಿನಲಿ
ನೆನಪಾಗುವಳು ಅವಳು..
ಹೆಂಡ ಕುಡಿದ ಹುಚ್ಚು ಕುದುರೆಯಂತೆ
ಬೀದಿ ಬೀದಿಯಲಿ ತಿರುಗಿ ದಣಿದ ದೇಹಕೆ
ಮುದ ನೀಡಲು ಬೀಸುವ ಗಾಳಿಯಂತೆ..!
ತಂಗಾಳಿಯಂತೆ..!

ಹುಣ್ಣಿಮೆಯ ರಾತ್ರಿಯಲಿ
ತಿಳಿಹಾಲ ಬೆಳಕಿನಲಿ
ನೆನಪಾಗುವಳು ಅವಳು..
ಹಠ ಮಾಡಿ ಅಳುತಿರುವ
ಕರುಳ ಬಳ್ಳಿಗೆ
ಚಂದ ಮಾಮನ ತೋರಿಸುತ
ಲಾಲಿಯನು ಹಾಡುತಾ
ಕೈತುತ್ತು ತಿನಿಸುತ್ತಾ
ರಮಿಸುವ ಆ ತಾಯಿಯಂತೆ...!
ಮಹಾ ಮಾಯಿಯಂತೆ..!

~ ಸಿದ್ದು ಗುಂಡ

- - ಸಿದ್ದು ಕನ್ನಡಿಗ

19 Jan 2018, 12:07 pm

ಭಗೀರಥ ತಂದ ಗಂಗೆ

ಆಕಾಶ ಗಂಗೆಯನ್ನು
ಶಿವನ ಮುಡಿಗೆ ಬರುವಂತೆ ಮಾಡಿ
ಶಿವನ ಜಡೆಯಿಂದ ಭುವಿಗೆ ಬರಮಾಡಿ
ತನ್ನ ಬಂಧು ಭಾಂಧವರನ್ನುಳಿಸಿಕೊಂಡ ಭಗೀರಥ ತನ್ನ ಪರಿಶ್ರಮದ ಫಲವಾಗಿ
ಗಂಗೆಯ ಪಾವಿತ್ರ್ಯತೆಯ ಸಲುವಾಗಿ

ಆದರೆ ಅದೇ ಗಂಗೆ ಹರಿಯುತ್ತಿರುವಳು
ಕಲ್ಮಷ ತುಂಬಿದ ನೀರಿನ ಸೆಲೆಯಾಗಿ ಇಂದು
ರೋಗ ರುಜುನೆಗಳ ಹೋತ್ತು ತಂದು
ಸತ್ತ ಶವಗಳ ಸಂಸ್ಕಾರಕ್ಕೆಂದು ಬಂದು
ಜನಗಳೆಲ್ಲಾ ನಿತ್ಯ ಬಂದು ಮಿಂದು
ಗಂಗೆಯ ಕಲುಷಿತ ಮಾಡುವ ಜನಗಳ ಕಂಡು
ಮರುಗುತಿದೆ ಭಾರತಾಂಬೆಯ ಮನ
ಗಂಗೆಯ ವಾಸ್ತವ ಸ್ಥಿತಿಯ ಮನಗಂಡು

ಗಂಗೆಯ ಪಾವಿತ್ರ್ಯವನ್ನೂಳಿಸಲು ಶ್ರಮಿಸಬೇಕಿದೆ
ಮತ್ತೆ ಭಗೀರಥರಂತೆ ಪ್ರಯತ್ನಿಸಬೇಕಿದೆ
ಭಾರತ ಮಾತೆಯ ಮಕ್ಕಳಾಗಿ
ಸ್ವಚ್ಛತೆಯೋಂದಿಗೆ ಹೆಜ್ಜೆಯ ಹಾಕಬೇಕಿದೆ
ಗಂಗೆ ಪರಿಶುದ್ದವಾಗಿ ಹರಿಯುವಂತಹ
ಕೆಲಸಗಳ ಮಾಡಬೇಕಿದೆ
ಒಟ್ಟಾಗಿ ದೃಢ ವಿಶ್ವಾಸದಿ ದುಡಿಯಬೇಕಿದೆ
ಮತ್ತೋಮ್ಮೆ ದೇವಗಂಗೆಯ ಉಳಿಸಬೇಕಿದೆ

- Bhagya Girish

19 Jan 2018, 11:40 am