Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ರೈತ ರೈತ ರೈತ

ರೈತ ರೈತ ರೈತ
ಅನ್ನ ನೀಡುವ ಭಗವಂತ
ರೈತ ರೈತ ರೈತ
ಬಾಳು ಬೆಳಗುವ ಭಾಗ್ಯದಾತ
ರೈತ ರೈತ ರೈತ
ಪ್ರೀತಿ ಹಂಚುವ ಸ್ನೇಹಿತ "ಪ"

ಮಳೆರಾಯ ಜಿಗಿದು ಬಂದರೆ
ಹರುಷದಲಿ ಹಾಡುತ ಕುಣಿಯುವನು..
ನೇಗಿಲ ಹಿಡಿದು ನಿಂತರೆ
ಹೊಲದಲಿ ಹೊನ್ನಿನ ಬಿತ್ತನೆ ಮಾಡುವನು..
ಭೂತಾಯಿಯ ಮೊಗವ ಕಂಡರೆ
ನಿತ್ಯವೂ ಮುತ್ತಿನ ವಂದನೆ ಮಾಡುವನು..
ಬಾನೇತ್ತರ ಕುಣಿದು ಬಾಳಿನ ತೆನೆ ಬೆಳಗಿದರೆ
ಮನಸಲಿ ನಗುವಿನ ಸೋನೆ ಸರಿಸುವನು..

ಪ್ರತಿಫಲ ಏನೇ ಬಂದರೂ
ನಗುತ ಬದುಕಿನ ಬಂಡಿ ನಡೆಸುವನಿವನು..
ದುಡಿಮೆಯೇ ನಿಜ ದೇವರು
ಎಂಬ ಜೀವನ ನುಡಿ ಸಾರುವನಿವನು..
ಏನಾಗಲಿ ಎಲ್ಲರಿಗಾಗಿ ಬೆವರು
ಸುರಿಸಿ ದುಡಿದು ಹಸಿವ ನೀಗುವನಿವನು..
ಎಂದೂ ಸುಖವಾಗಿರಲಿ ಸರ್ವಜನರು
ಎಂದು ಶಕ್ತಿ ತುಂಬುವ ಮಹಾಸಂತನಿವನು..
ಈ ರೈತ ರೈತ ರೈತ

- ಸುರೇಶ್ ಟಿ ವಿ

26 Jan 2018, 04:15 pm

ನೆನಪುಗಳು (ಪ್ರೀತಿಗಾಗಿ)

ಕಣ್ಣ ಹನಿಗಳು ಮರೆತರೂ ನಿನ್ನ
ಈ ಹೃದಯವು ಮರೆಯಲಾಗದು
ಕಣ್ಣ ಹನಿಗೇನು ಗೊತ್ತು
ಹೃದಯಕ್ಕೆ ಆದ ನೋವು
ನಾನತ್ತರೂ, ನಕ್ಕರೂ
ಕಣ್ಣೀರಿನ ಬಣ್ಣ ಬದಲಾಗದು
ನೀ ಜೊತೆಯಲ್ಲಿದ್ದರೂ, ಇಲ್ಲದಿದ್ದರೂ
ನಿನ್ನ ನೆನಪನ್ನೆಂದು ಅಳಿಸಲಾಗದು

- Lohith

26 Jan 2018, 02:23 pm

ಕನಸು

ನಿನ್ನ ಕನಸುಗಳಿಲ್ಲದೆ ದಿನ ರಾತ್ರಿ ಪೂರ್ತಿ ಆಗುತ್ತಿಲ್ಲ ...
ನಿನ್ನ ನೆನಪುಗಳಿಲ್ಲದೆ ದಿನ ಆರಂಭ ವಾಗುತಿಲ್ಲ .
ಕಣ್ಣ್ಮುಚ್ಚಿ ಕಣ್ಣ ತೆರೆಯುವ ಮುನ್ನ ..
ಕಲ್ಪನೆಗಳಾಗಿ ಬಳಿ ಸುಳಿದು ..
ಕವಿತೆಗಳ ಬರೆಸುವ ನನ್ನವಳೇ ..
ನೀ ನನ್ನೆದುರು ಬರದೆ ಕವಿತೆಯಲ್ಲೆಕೆ ಅಡಗಿ ಕುಳಿತೆ ....!!

- Lohith

26 Jan 2018, 08:30 am

ಮುದ್ದು ಕಂದಮ್ಮಾ

ಓಡೋಡಿ ಬಾ ನನ್ನ ಮುದ್ದು ಕಂದ .
ನಿನಗಾಗಿ ತಂದೆನು ಬೆಳದಿಂಗಳೂಟ ಉಣಿಸಲು ,ಹಸಿದು ದಣಿದಿರುವೆ ನೀ ಓಡೋಡಿ ಬಾರೋ ನನ್ನ ಮುದ್ದಿನ ಕೂಸೆ ....

ಚಂದಮಾಮನ ಬೆಳದಿಂಗಳ ಊಟ ಉಣಿಸಿ ,ಕಥೆ ಹೇಳುವೆ ನಾ ವೀರ ದೀರರ ಕಥೆ ಹೇಳುವೆ ನಾ .. ಮುದ್ದು ಮೊಗದ ನನ್ನ ಗೊಂಬೆಯೆ ಓಡೋಡಿ ಬಾರೋ ಈ ಅಮ್ಮನ ಕಾಡಿಸದೆ ಬಾರೋ ನನ್ನ ಮುದ್ದು ಕಂದಮ್ಮಾ....

- Acchu love

25 Jan 2018, 11:45 pm

ಬಾಲ ಕಾರ್ಮಿಕ

ಓ ಮುದ್ದು ಬಾಲಕ
ನೀನಾದೆಯಾ ಬಾಲಕಾರ್ಮಿಕ
ತೊರೆದೆಯಾ ಓದುಬರಹದ ಶಾಲಾ ಕಾಯಕ
ನೀನಾದೆಯಾ ಕೂಲಿಗೆ ದುಡಿಯುವ ಕಾರ್ಮಿಕ "ಪ

ಕಿತ್ತುತಿನ್ನುವ ಬಡತನ ಕಿತ್ತಾಡುವ ಜನಮನಕೆ
ಬಲಿಯಾಯಿತೆ ನಿನ್ನ ಸವಿಯಾದ ಎಳೆತನವೇ
ಆಟವಾಡುವ ಕನಸು ಕಾಣುವ ವಯಸಿಗೆ
ನೋವುನುಂಗುವ ದುಡಿದುಸಾಕುವ ಕೊಡುಗೆಯೇ

ಆಟದ ಕಟ್ಟೆಯಲ್ಲಿ ಕುಣಿಯುವ
ಸಂತಸ ಎದೆಯಂಗಳದಲಿ..
ಊಟದ ತಟ್ಟೆಯಲ್ಲಿ ಅನ್ನ ಇಡುವ
ಕೆಲಸ ಹಸಿವಿನ ಕೊಳದಲಿ..
ಅಕ್ಷರ ಕೋಟೆ ಕಟ್ಟುವ
ತವಕ ಮನದಲಿ..
ಹಸಿದ ಹೊಟ್ಟೆ ತುಂಬಿಸುವ
ಕಾಯಕ ಎದುರಲಿ..
ಪೆನ್ನು ಪುಸ್ತಕ ಗೆಳೆಯರ ಬಳಗ ನೀ ನೋಡಲಿಲ್ಲ..
ಕಿರಾತಕ ಜನರ ಕಾಳಗ ನಿನ್ನ ಬಿಡಲಿಲ್ಲ..

- ಸುರೇಶ್ ಟಿ ವಿ

25 Jan 2018, 07:29 pm

ಅವಳದೇ ನೆನಪು...

ತೇಲುತ್ತಿರುವೆನು ನಾನು
ನನ್ನ ಗೆಳತಿಯ ನೆನಪಿನಲ್ಲಿ
ಕಾಡುತ್ತಿರುವಳು ಅವಳು
ನನ್ನ ನಿದ್ದೆಯ ಸಿಹಿಕನಸಿನಲ್ಲಿ!

ಹೃದಯದ ತುಂಬೆಲ್ಲ ಆವರಿಸಿ
ಕಾರಣವೇ ಇಲ್ಲದೆ ಹುಚ್ಚು ಹಿಡಿಸುತ್ತಾಳೆ
ಮೌನದಲೇ ಎಲ್ಲವ ಉತ್ತರಸಿ
ಮಾತೊಂದನೂ ನೀಡದೆ ಪ್ರಶ್ನೆಯಾಗಿದ್ದಾಳೆ!

ಹುಚ್ಚುಹುಡುಗ ನಾನು, ಅವಳ ಪ್ರೀತಿಯಲ್ಲಿ
ಕಣ್ಣೆದುರು ನಿಲ್ಲದೆ, ಕಾಡಿಸುತ್ತಾಳೆ ನಿರಾಶೆಯಲ್ಲಿ
ಸುಂದರ ಬದುಕು ಕಾದಿದೆ ನಿನಗಿಲ್ಲಿ
ನೀ ಬಂದು ಸೇರಲಾರೆಯ ನನ್ನ ತೋಳಿನಲ್ಲಿ!

- ಪ್ರಿಯಾಂಕ

25 Jan 2018, 04:44 pm

ಒಡೆದ ಗಟ್ಟಿ ಹೃದಯ

ನೀನು ಬಂದೆ ಬೆಳದಿಂಗಳ
ಬಾಲೆಯಂತೆ......
ಆದರೆ ಆಗಲಿಲ್ಲ ನನ್ನ
ಮಕ್ಕಳಿಗೆ ತಾಯಿಯಂತೆ...

ಆದರು ನಾ ತೆಲೆ ಕೆಡಸಿಕೊಳ್ಳದಂತೆ
ಅದೆ ಮತ್ತೋಂದು ಮದುವೆ
ಜೋಡಿಯಂತೆ.....

ಈಗ ಅವಳು ನನ್ನ ಮಕ್ಕಳಿಗೆ
ತಾಯಿಯಂತೆ........
ಅರಳುತಿಹವು ನನ್ನ ಮಕ್ಕಳು
ಕಮಲದಂತೆ....

ಜೋಪಾನವಾಗಿರುವೆವು ನಾನು
ನನ್ನ ಮಕ್ಕಳು ಅವಳ ಪ್ರೀತಿಯ
ಬಲೆಯಲ್ಲಿ ಎಂದಿನಂತೆ......

- Mahantesh Hosamani

25 Jan 2018, 11:47 am

ಪ್ರೇಯಸಿಗಾಗಿ

ಕಾದಿದ್ದೆ ನಿನಗಾಗಿ
ನೀನು ಮೂಡಿ ಬಂದೆ ಶಶಿಯಾಗಿ
ಆ ಶಶಿ ಬೆಳಕಲಿ ಹುಟ್ಟಿತು ಪ್ರೀತಿ ಮೊಗ್ಗಾಗಿ....

ಆ ಮೊಗ್ಗು ಅರಳಿತು ಹೂವಾಗಿ
ಸೂರ್ಯನ ಕಾಂತಿಯಿಂದಾಗಿ
ನಾನು ಆ ಹೂವಿಗೆ ಹಾರಿ
ಬರುವ ದುಂಬಿಯಾಗಿ .....

ಕಾದಿರುವೆ ನಿನಗಾಗಿ
ಹೇಳು ನೀನು ಮಕರಂದವನು
ಹೊರ ಸೊಸುವೆ ನನಗಾಗಿ ....

ಪ್ರೇಯಸಿ ನಾನಿರುವುದೆ
ನಿನಗಾಗಿ ....
ಒಪ್ಪುವೆಯಾ ನನ್ನ ಪ್ರೀತಿಯ
ನನಗಾಗಿ......

- Mahantesh Hosamani

25 Jan 2018, 11:28 am

ಏತಕೀ ಕೋಪ

ಏತಕೀ ಕೋಪ ರಾಧೆಯ ರಮಣ
ಪ್ರಯೋಗಿಸಬೇಡ ಇರಿವ ಮೌನ ಬಾಣ
ಕಾಣುವಾಸೆ ನಿನ್ನ ಸೂಜಿಗಲ್ಲ ಕಣ್ಣ
ತಿರುಗಿ ನೋಡೊಮ್ಮೆ ಸೋತ ಹೆಣ್ಣ

ಮುರಳಿ ನಾದದ ಪ್ರೇಮಸ್ವರ ಕೇಳದಿದ್ದರೆ
ಮನಕದ್ದವನ ತುಂಟ ನಗು ಕಾಣದಿದ್ದರೆ
ತಂಗಾಳಿಯಂತೆ ರಮಿಸುವ ಕೃಷ್ಣನೇ‌ ಇರದಿದ್ದರೆ
ಈ ರಾಧೆಗೆಂದೂ ಜೊತೆಯು ಕಣ್ಣೀರೆ

ಮದನನೇ ನಿನ್ನ ಕಟು ಮುನಿಸು
ಕೊಲ್ಲುವ ಮುನ್ನ ನನ್ನ ಪ್ರೇಮಿಸು
ನೀನಿರದ ನಾನು ಬರಿಯ ಕನಸು
ಗೋಪಾಲನೆ ಈ ಗೋಪಿಯ ಉಳಿಸು

ಮುರಳೀದರ ಒಲುಮೆಯಲೇಕೆ ಈ ಅಪಸ್ವರ
ಪೂಜಿಸುವ ರಮಣಿಯ ಮಾಡುವೆಯ ದೂರ
ಪ್ರೀತಿಸಿಗದ ಮನಸೆಂದು ಭೂಮಿಗಿಂತ ಭಾರ
ಹಿಡಿದ ಕೈಯ ಬಿಡಿಸಿ ಹೋಗದಿರೊ ಅಭ್ಯಂಕರ

- ಶ್ರೀಕಾವ್ಯ

25 Jan 2018, 12:45 am

ಯಾವ ಕಡೆ ನಿನ್ನ ನಡೆ

ಯಾವ ಕಡೆ ನಿನ್ನ ನಡೆ
ಏಕೆ ಈನಡೆ ಮನುಷನಾದೊಡೆ
ಸತ್ತಾಗ ಬರುವುದೇನು ನೋಟಿನ ಗುಡ್ಡೆ
ನಿನಗೆ ಕೊಡುವುದು ಹಿಡಿ ಮಣ್ಣು ಅಡಿ ಬಂಡೆ
ಜಗದಾಟದಲಿ ನಿನಗಿಲ್ಲದಿರಬಹುದು ಅಡೆತಡೆ
ದೇವನಾಟದಲಿ ನಿನ್ನ ಸ್ವಾರ್ಥಕ್ಕಿದೆ ನಿಲುಗಡೆ "ಪ"


ಹೆಣ್ಣಿನ ಶೋಷಣೆ ಒಂದು ಕಡೆ
ಹೊನ್ನುಮಣ್ಣಿಗಾಗಿ ವಂಚನೆ ಇನ್ನೊಂದು ಕಡೆ
ಏನು ಹೀನ ನಿನ್ನ ನಡೆ ಎಲ್ಲಾ ಕಡೆ
ಒಪ್ಪತ್ತಿನ ಊಟಕ್ಕಾಗಿ ಬವಣೆ ಒಂದು ಕಡೆ
ಮೋಜಿನ ಆಟಕ್ಕಾಗಿ ವಂಚನೆ ಇನ್ನೊಂದು ಕಡೆ
ಎಷ್ಟೂ ಕ್ರೂರ ನಿನ್ನ ನಡೆ ಎಲ್ಲಾ ಕಡೆ
ಎಲ್ಲೆಲ್ಲೂ ಮೆರೆಯುತಿದೆ ದ್ವೇಷ ಮೋಸದ ದರೋಡೆ


ಎಷ್ಟು ದಿನ ಬದುಕಿರುವೆ ಓ ಹೆಬ್ಬಂಡೆ
ನಿನ್ನಲ್ಲಿರೋ ಸ್ವಾರ್ಥಕೆ ನೀಡೋ ಬಿಡುಗಡೆ
ಇರುವಷ್ಟು ದಿನ ಸಾಗುತಿರೋ ಬೆಳಕಿನೆಡೆ
ನಾಲ್ಕು ಜನರ ಮನಸಲ್ಲಿ ಒಳ್ಳೆಯ ಹೆಸರು ಪಡೆ
ಕೆಡವೋ ನೀನು ಅಪಕಾರ ಎಂಬ ತಡೆಗೋಡೆ
ಕಟ್ಟೋ ನೀನು ಉಪಕಾರ ಎಂಬ ಪ್ರೀತಿ ಸ್ನೇಹದ ಪಡೆ
ಸೇರಬೇಕು ನೀನು ದಾನಧರ್ಮದ ದಂಡೆ

- ಸುರೇಶ್ ಟಿ ವಿ

24 Jan 2018, 04:14 pm