Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನದೆನ್ನುವದು ಏನಿದೆ ಎನಗೆ

ನನ್ನದೆನ್ನುವದು ಏನಿದೆ?

ಅಳುತಲಿ ಹುಟ್ಟಿ ನಾಮ ಪಟ್ಟವ ಕಟ್ಟಿ
ಹೆಸರಿಟ್ಟರು ಬೇರೊಬ್ಬರು ಎನಗೆ
ಹೆಣ್ಣು ಎಂಬ ಭೇದದಿಂದ ಬಾಲ್ಯ ಕಸಿದೆರೆನ್ನ
ಆಟ ಬಿಟ್ಟೆ ಪಾಠ ಬಿಟ್ಟೆ ದುಡ್ಡಿಗಾಗಿ ದುಡಿಮೆಗೆ ಹೊರಟೆ
ನನಗಾಗಿ ಅಲ್ಲಾ ನಮ್ಮವರಿಗಾಗಿ
ಅಳುತಲಿ ಹೇಳಿದೆ ನನ್ನದೆನ್ನುವದು ನನಗೆ ಏನಿದೆ.

ಬಾಲ್ಯ ಕಳಿದ ಹೊಸದರಲ್ಲಿ ಮನೆಗೆ ಭಾರವಾದೆ
ಇಲ್ಲ ಸಲ್ಲದ ಅಪಾದನೆಗೆ ನಾನು ಗುರಿಯಾದೆ
ಕಡಲಿನಾ ಒಡಲ ತೊರೆದ ಬಂದಿಯಾದೆ ಗಂಡನಿಗೆ
ವರುಷ ತುಂಬುವದ್ರೊಳಗೆ ಸಂತಾನವಾದವು ನಮ್ಮಿಬ್ಬರಗೆ
ಮತ್ತೆ ಕೆಲವು ದಿನಗಳು ಕಳೆದರೆ ಗಂಡನ ಪ್ರೀತಿ ಇಲ್ಲವಾಯಿತು
ಮತ್ತೆ ಅದೇ ಹಳೇ ದಿನಗಳು ಮರುಕಳಿಸಿದವಲ್ಲ
ಈ ಜಗದೊಳಗೆ ನನ್ನದೆನ್ನುವದು ನನಗೆ ಏನು ಇದೇ.

ಮಗುವಿನ ಮುಖ ನೋಡಿದೆ
ಬದುಕಿನಲಿ ಹರುಷ ಮತ್ತೆ ತುಂಬಿದೆ ಏನ ಮನದೊಳಗೆ
ಕಷ್ಟವೂ ನಷ್ಟವೂ ಸಮಾಜದಲ್ಲಿ ಮಗನಿಗೆ ಸ್ಥಾನವ ದೊರಕಿಸುವಲ್ಲಿ ಸಮಯಕಳೆದೆ
ಮಗನಿಗೆ ಮದುವೆ ಮಾಡಿ ಉಣ್ಣ ಬಾರದ್ದನ್ನು ನಾ ಉಂಡೆ
ಸೂಸೆಯಿಂದ ಭೈಸಿಕೋಂಡೆ ಮಗನಿಗೆ ನಡೆದ ವರದಿ ಒಪ್ಪಿಸಿದೆ
ಮತ್ತೆ ಮತ್ತೆ ಅನಿಸುವದು ನನ್ನದೆನ್ನುವದು ನನಗೇನು ಇದೇ.

ಉದಯ ಪೂರ್ವದೊಳು ಎಚ್ಚರಿಸಿದಾ ಮಗನು
ಅಚ್ಚರಿಯೇ ಕಾದಿತ್ತು ನನಗೆ ಆ ದಿನದಂದು
ಮಗುವಿನಂತೆ ಕೈ ಹಿಡಿದು ಕರೆದುಕೊಂಡು ಹೊರಟನು
ಅಂತ್ಯಕಾಲಕ್ಕೆ ಚಿಂತೆ ಇಲ್ಲದೆ ಸಂತೆಯಲ್ಲಿ ನಿದ್ದೆ ಬಂದಂತಾಯಿತು
ಹಾಗೆಯೆ ಎಚ್ಚರಿಕೆಯ ಗಂಟೆಯು ಹೊಡೆಯಿತು ವೃದ್ಧರ ಆಶ್ರಮ ಬಳಗಕ್ಕೆ ನಾ ಸೇರಿಕೊಳ್ಳಲು
ಆಶ್ರಮದ ಆಸನ ಬಿಟ್ಟರೆ ನನ್ನದೆನ್ನುವದು ನನಗೇನು ಇದೇ ಈ ಜಗದೊಳಗೆ........
✍ಈಶ್ವರ್ ಬಿ

- ishwar

03 Feb 2018, 08:12 am

ನಾನು ಕವಿಯಾದೆ

ನೀನು ದೂರವಾದೆ ಎಂದು
ನಾನು ವ್ಯಥೆಪಡುತ್ತಿಲ್ಲ ಗೆಳತಿ.
ಗರ್ವ ಪಡುತ್ತೇನೆ.
ಏಕೆಂದರೆ ?
ನೀನು ದೂರವಾದಾಗಿನಿಂದ
ನಾನೊಬ್ಬ ಕವಿಯಾಗಿರುವೆ.

ಪಿ.ಡಿ. ಮಂಜು

- Manjunath

02 Feb 2018, 07:22 pm

ಗರತಿ

ಮುದ್ದಾದ ಮಕ್ಕಳು ಮಡಿಲಲ್ಲಿ
ನಲಿದಿರಲು,ಅನ್ಯರ ಸಂಘ ನಿನಗೇಕೆ!ಗರತಿ
ಮುದ್ದಾಡಿ ನೋಡೆ ಮನೆದೇವರ

ಮುಗ್ದ ಇನಿಯನ ಕಣ್ಣೀಗೆ ಮಣ್ಣೆರಚಿ
ಮುಸುಕಿನ ಗುದ್ದಾಟ ನಿನಗೇಕೆ!ಮನೆಯೊಡತಿ
ಮಾಂಗಲ್ಯಭಾಗ್ಯ ಉಳಿಸಿಕೋ ಕೊನೆಗೆ

ರಜ ಒಡೆದು ಶುಚಿ ಮಾಡೋ
ಗರತಿ ನೀನು !ನೀನೆ ಕಸವಾಗೆ
ಕೊಳೆತು ನಾರುವುದೆ ಮನೆಯಂಗಳ

ಕರುಳಕುಡಿಗೆ ಸರಿ ದಾರಿ ತೋರಿ
ಬೆಳೆಸೋದು ನಿನ್ನ ಹೊಣೆ! ನೀನೆ ಹಾದಿತಪ್ಪೆ
ಸರಿದಾರಿ ತೋರೋರ ನಾ ಕಾಣೆ.

ಈ ಜಗದಲಿ ಭಾರತ ನಾರಿ
ತೋರುವಳು ಹಿರಿಮೆಗೆ ದಾರಿ
ನೀನಾಗದಿರು ಅದಕೆಂದು ಮಾರಿ
ತಿದ್ದಿಕೋ ನೀ ನಿನ್ನ ದಾರಿ.



ಶಾರಧ

- ಶಕುಂತಲಾ

02 Feb 2018, 03:57 pm

ಗ್ರಹಣ

ಕವಿದಿರುವ ಕಪ್ಪು ಅಂಗಳಲಿ
ತಾರೆಗಳ ಶ್ವೇತ ರಂಗೋಲಿ
ಕೆಂಪಾದ ಬೋಗುಣಿಯಾಗಿ
ಓಲಾಡಿದ ನಿರಾಧಾರವಾಗಿ
ಶಶಿಯು,ರವಿ-ಧರೆಯ ಜೊತೆಯಾಗಿ

ಅಪರೂಪದಲ್ಲಿ ಅಪರೂಪವಾಗಿ
ಮೂಡಿದೆ ನೀ ಬಾನಂಗಳಲ್ಲಿ ಚಿತ್ತಾರವಾಗಿ
ಆ ಅಂದವ ಕಾಣದೆ ಅವಿತು ಕುಳಿತೆವು
ಅಂಧರಾಗಿ ,ಮೌಢ್ಯಕೆ ವಶವಾಗಿ

ಸ್ತಬ್ದವಾಯಿತು ನಗರದ ಬೀದಿಗಳು
ನಿನಗಿಡಿದ ಗ್ರಹಣ ಬಿಡುವವರೆಗು
ಎಲ್ಲೆಲ್ಲು ಒಳಿತು- ಕೆಡುಕುಗಳ ಹಾವಳಿ
ನಮ್ಮ ಹಾರವರಿಗೆ ನಿನಾದೆ ಬಳುವಳಿ



ಶಾರಧ

- ಶಕುಂತಲಾ

02 Feb 2018, 03:36 pm

ನೆನಪುಗಳು

ನಾವಿಬ್ಬರೂ ಕುಳಿತಿದ್ದ ಜಾಗದಲ್ಲಿ
ನಾನಿಂದು ಏಕಾಂಗಿಯಾಗಿ ಕುಳಿತಿರುವೆ.
ಆದರೂ ಏಕಾಂಗಿ ಅನಿಸುತ್ತಿಲ್ಲ
ನಿನ್ನ ನೆನಪುಗಳು ನನ್ನ ಜೊತೆಗಿವೆ.

- Manjunath

02 Feb 2018, 08:25 am

ಮಂಜಿನ ಮಗಳು

ತಿಳಿ ಮಂಜಿನ
ಮಳೆ ಮಾತಿಗೆ
ಹಸಿರಾಗಿರೋ ಭೂಮಿಯೇ ಸಾಕ್ಷಿಯೂ...
ಚಂದ್ರ ಬಣ್ಣದ
ಚಂದಗಾತಿಗೆ
ತನುಹಾಡಿದೆ ಸುಂದರ ಗೀತೆಯೂ.....
ಅನುಗಾಲದ ಅನುರಾಗವೂ
ಅನುವಾದದಿ ಹಾಡಾಗಿದೆ.
ಅನುಬಿಂಬದ ಅನುಕರಣೆಯ
ಅನುಬಂದದಿ ಜೇನಾಗಿದೆ...
ಎಲ್ಲುಂಟು ಸಾಟಿ
ನನ್ನೆದೆಯ ಮೀಟಿ
ಕೊರೆಯುತ್ತಿರೋ ನಿನ್ನ ಬ್ಯೂಟಿಗೆ...
ಮೇಘವನು ದಾಟಿ
ಹೃದಯಕ್ಕೆ ನಾಟಿ
ಸೆಳೆಯುತ್ತಿರೋ ಕಣ್ಣಾ ಏಟಿಗೆ.....
ಕೆ.ಜೆ.ಎಸ್.ಗೌಡ್ರು.ಹುಣಸೂರು..

- shasi kumar

02 Feb 2018, 08:14 am

ಕನಸ ಕುವರಿ 2

ಕಣ್ಣುಬ್ಬಿನ ಸನ್ನೆಗೆ
ಎದೆ ಗೂಡಲಿ ಕದನ
ತುಟಿ ಸ್ಪರ್ಶದ ಮಾತಿಗೆ
ಮುಲುಗುಟ್ಟಿದೆ ಮಿಲನ....
ತಿಳಿ ಮುಗಿಲ ಮೇಲೆಲ್ಲಾ
ತಂಗಾಳಿಯ ವರಸೆ
ಬಿಳಿ ಬಣ್ಣ ನಾಚಿಸಿದೇ
ಕಣ್ಣಂಚಿನ ವರಸೆ...
ಕಸ್ತೂರಿಯ ಬಾವುಟವೂ
ನೆರಳಾಗಿ ಕಾದಿವುದು
ಚಿಟ ಪಟ ಮಳೆಹನಿಯ
ಕೊರಳಲ್ಲಿ ಮುತ್ತಾಗಿವುದು....
ಕೈ ಹಸ್ತದಿ ಹುಟ್ಟಿವುದು
ಗಿರಿ ಶೃಂಗದ ಸಿರಿಮೆ
ಮುಂಗುರುಳಿಗೆ ಸೋತೋಯ್ತು
ಕಾರಂಜಿಯ ಚಿಲುಮೆ....
::::: ಕೆ.ಜೆ.ಎಸ್.ಗೌಡ್ರು.ಹುಣಸೂರು.

- shasi kumar

02 Feb 2018, 06:31 am

ಕನಸ ಕುವರಿ

ತುಟಿ ಅಂಚಿನ ನಗುವಲ್ಲಿ
ಮಕರಂದದ ಜನನ.
ಕೆನೆಹಾಲಿನ ಕೆನ್ನೆಯಲಿ
ಬೆಳ್ಮುಗಿಲಿನ ಪಯಣ.
ತಿಳಿ ಗೋಡೆಯ ಹೃದಯಕ್ಕೆ
ತಂಪೆರುಚುವ ನಯನ.
ಬೆರಳಂಚಲೀ ಬೆರಗುತ್ತಿವೆ
ಬರೆದಂತಹ ಕವನ.....
ಉಸಿರಾಡುವ ಗೊಂಬೆಗೆ ಶೃಂಗಾರದ ಸೀರೆ
ಕೊರಳಪ್ಪಿ ಮುತ್ತಿಟ್ಟಿದೆ ಬಂಗಾರದ ತಾರೆ.
ಹೂ ರಾಶಿಗೂ ಬೇಕಂತೆ ಮುಡಿಯಲ್ಲಿ ಜಾಗ
ಮಲೆನಾಡು ಕಳಿಯುತ್ತಿದೆ ಈಗೀಗ ರಾಗ...
ಕೋಗಿಲೆಯು ತಲೆದೂಗಿದೆ ನೀನಾಡುವ ಸ್ವರಕೆ
ಮರೆತಂತ್ತಿದೆ ನವಿಲೆಲ್ಲ ಕುಣಿದಾಡುವ ಬಯಕೆ.
ಅಲೆ ಎಬ್ಬಿಸೋ ಕಡಲೆಲ್ಲ ಅಲೆದಾಡಿದೆ ನರಳಿ
ಹಸಿರೆಲೆಗಳು ಬಿಡುತ್ತಿಲ್ಲ ರವಿಕಿರಣದ ಚಹಳಿ....
::::: ಕೆ.ಜೆ.ಎಸ್.ಗೌಡ್ರು.ಹುಣಸೂರು..

- shasi kumar

01 Feb 2018, 09:07 pm

ಮುದ್ದು ಗುಲಾಬಿ......

ಕಿತ್ತು ತಿನ್ನುವ ಹುಳುಗಳ
ನಡುವೆ ನೀ ಹೇಗೆ ಹುಟ್ಟಿ
ಬೆಳೆಯುವೆ ಮುದ್ದು ಗುಲಾಬಿಯೆ
ಅದಕೆಂದೆ ಮುಳ್ಳಿನ ಹೋದಿಕೆಯ
ಜೊತೆಗೆ ಹುಟ್ಟಿ ಬರುವೆಯೆನೆ
ಆದರು ನಿನ್ನಂದಕ್ಕೆ ಸರಿ ಸಾಟಿ ಯಾರೆ
ಮುದ್ದು ಗುಲಾಬಿಯೆ
ನಾನಾಗಬಾರದಿತ್ತೆ ನಿನ್ನಂತೆ ಒಂದು
ಮಾತಾಡದ ಗುಲಾಬಿಯಂತೆ
ಯಲ್ಲವ ನೋಡಿ ಮೌನವಾಗಿಯೆ
ಅರಳಿ ಮುಡಿದವರ ಮುಡಿ ಎರಿ
ಅವರಂದ ಹೆಚ್ಚಿಸೋಕೆ
ಗುಡಿಯೋಳಗೆ ಕಲ್ಲಂತೆ
ಕೂತಿರುವ ದೆವರ ಮುದ್ದಿಸಿ
ಯಲ್ಲರ ಮನಸ ಕದ್ದು
ಮೌನವಾಗಿಯೆ ನಿನಂತೆ
ಮರೆಯಾಗೋಕೆ............

- ರಾಗಸಿರಿ....

01 Feb 2018, 08:35 pm

ಕತ್ತಲು-ಬೆತ್ತಲು

ಕತ್ತಲು ಬೆತ್ತಲಾಗಿ
ಅಲೆದಾಡುತ್ತಿತ್ತು.
ಬೆಳಕು ಎದುರು ಬಂದಾಗ
ನಾಚಿ ಮರೆಯಾಗಿತ್ತು.

ಪಿ.ಡಿ. ಮಂಜು

- Manjunath

01 Feb 2018, 07:31 pm