ಪ್ರೀತಿಯ ತೋರಿ ಮನವ
ಕೊಳ್ಳೆ ಹೊಡೆದು
ದುಖಃವ ಮರೆಸಿ
ನಗುವ ಕಲಿಸಿ
ಇಂದು ನನ್ನ
ಬಿಟ್ಟು
ಕಣ್ಣಿರ ಕೊಂಡು ಹೋದೆಯಲ್ಲೆ ಗೆಳತಿ
ನೀ ಬಾರದಿದ್ದರು ನನ್ನ ಕಣ್ಣಿರ
ಮರುಕಳಿಸು ಗೆಳತಿ
ನಿನ್ನ ನೆನಪಲ್ಲೆ ಅತ್ತುಅತ್ತು ಸಾಯುವೆ ಗೆಳತಿ
ಕಣ್ಣಿರ ಮರುಕಳಿಸು
ಅಂಜಿಕೆಗೂ ಹೆದರಿಕೆ ಆಗುವಂತೆ ನೂರು
ಪಾಠ ಕಲಿಸಿದ ಜೀವನ ಶಾಲೆಗೆ ನನ್ನ ನಮನ.
ಗಮನಾರ್ಹ ನಾ ಸಲ್ಲಿಸಿದ ರೊಕ್ಕ
ಕಣ್ಣೀರಾದುದು ವಿಷಾದ,ಆದರುನೂ ಚಿಂತೆ ಇಲ್ಲ ಚಿತೆ ಸೇರುವವರೆಗೂ ನಾ ಈ ಮಿತ್ಯ ಲೋಕದ ಪಾಠಗಳನ್ನು ಮರೆಯುವುದಿಲ್ಲ.
ಕೆಟ್ಟದೊಂದು ಕಾಲ ಒಳ್ಳೆಯ ಘಳಿಗೆ
ಬರುವುದು ಬಹು ವಿರಾಳ, ಇತ್ತೀಚೆಗೆ ಈ ಜಗತ್ತಿನಲ್ಲಿ ಜೀವಿಸುವ ಜನರಿಗೆ ನಟಿಸಿವುದು
ಬಲು ಸರಳ.
ನಾ ಕೊಟ್ಟ ಮಾತುಗಳಿಗೆ ಬದ್ಧಳಾಗಿ ಬದುಕಬೇಕೆಂದು ಬಯಸುವವರು ತಾವು ಇತ್ತ ಭಾಷೆಗೆ ಗಡಿದಾಟದೆ ವ್ಯವಹರಿಸುವುದು ಮುಖ್ಯವೆಂದು ಮರೆಯಬಾರದೆಂದಿಗೂ!!
ಅನುಭವ ಇತ್ತ ಕಹಿ ತುತ್ತು ವಯಸ್ಸು
ತಿಳಿಯಲು ಇನ್ನು ಉಳಿದಿರುವ ಸಹಿ ತುತ್ತು ,
ಇನ್ನು ಬಾಕಿ ಇವೆ ಸಾವಿರಾರು ಗಮ್ಮತ್ತು ,
ಕಣ್ಣು ಕಾಣದ ಅಮಲು
ಕಾರ್ಮೋಡ ಕವಿದ ಮುಗಿಲು
ನೋಡಲು ಕಾಯುತ್ತಿರುವ ಒಡಲು
ಸಲ್ಲಿಸುತ್ತಿದೆ ಒಂದು ನಮನ
ಬೇಡವೆಂದರೂ ಜರುರಾಗಿ ಹಾಜರಿರುವ ಪ್ರತಿದಿನದ ಮುಂಜಾವಿಗೆ.
ಕಣ್ಣೊಳಗೆ ಅವಿತು ಇಣುಕುತಿದೆ
ಕಂಬನಿಯ ಸಾಲೋಂದು
ಮನಸೋಳಗೆ ಅವಿತು ಮನೆ
ಮಾಡಿಬಿಟ್ಟಿದೆ ಮನೆಯ ತುಂಬೆಲ್ಲ
ನೊವೂಗಳ ಹೋಳೆಯೊಂದು
ತಾನು ಅಲ್ಲಿ ಇರಲಾಗದೆ
ಹೊರಗೆ ಬರಲೆ ಎಂದು
ಇಣುಕಿ ಇಣುಕಿ ನೋಡುತಿದೆ
ನನ್ನ ಕಣ್ಣಲ್ಲಿ ನಾ ಹೇಳಬೆಕೆಂದಿದೆ
ಒಂದೆ ಒಂದು ಮಾತೆಂದು
ಬಂದು ಬಿಡೂ ಹೊರಗೆ ಎಂದು.....
ನನಗಲ್ಲಿ ಜಾಗವಿಲ್ಲ ಹೋರಗಿನ ಲೋಕಕ್ಕೆ
ನಾ ಬಂದು ಬಿದ್ದು ಬಿಡಲೆ ಎಂದು
ಕಣ್ಣಲ್ಲೆ ತಿವಿಯುತಿದೆ......ಕಣ್ಣೋಳಗಿನ
ಕಂಬನಿಯೊಂದು.......
ಬಿಂದು ಬಿಂದು ಮಳೆ ಬಿದ್ದು ಭೂಮಿ ಆಯ್ತು ಬಂಗಾರ...
ಬಾನು ಭೂಮಿಯ ಮುತ್ತಿಡಲು ಮಳೆ ಒಂದೇ ಆಕಾರ..
ಎಷ್ಟು ಚಂದ ಮಣ್ಣು ವಾಸನೆ
ಮಳೆ ಹನಿ ಬಿದ್ದೊಡನೆ..
ಎಂತಾ ಸೆಳೆತ ಧರೆಯ ನರ್ತನೆ
ಮಳೆ ನೀರು ಕಂಡೊಡನೆ.....
####ಕೆ.ಜೆ.ಎಸ್.ಗೌಡ್ರು.ಹುಣಸೂರು.
ಅಮ್ಮ ಅಮ್ಮ ನನ್ನಮ್ಮ
ನಾನು ಉಸಿರಾಡುವ ಉಸಿರು ನೀನು..
ಅಮ್ಮ ಅಮ್ಮ ನನ್ನಮ್ಮ
ನಾನು ಪೂಜಿಸುವ ದೇವರು ನೀನು..
ಕೋಟಿ ಜನ್ಮ ಪಡೆದರೂ
ನಿನ್ನ ತ್ಯಾಗ ಮರೆಯೋಕ್ಕಾಗಲ್ಲ..
ಮುಕ್ಕೋಟಿ ದೇವರಲ್ಲಾ
ನಿನ್ನ ಪ್ರೀತಿಗೆ ಬೆರಗಾಗಿ ಕೈಮುಗಿದು ನಿಂತರಲ್ಲ..
ಬಾಳಲ್ಲಿ ಆಗಸದಷ್ಟು ನೋವು ಕಂಡರೂ ನೀನು
ನನ್ನಲ್ಲಿ ತೀರದಷ್ಟು ಸಂತಸ ತಂದೆ ನೀನು..
ಅತ್ತಾಗ ಲಾಲಿಜೋ ಎಂದು
ದಿನಪೂರ್ತಿ ಹಾಡಿದೆ ನೀನು..
ಸೋತಾಗ ಗೆದ್ದೇಗೆಲ್ಲುವೆ ಎಂದು
ಜೀವನಸ್ಫೂರ್ತಿ ತುಂಬಿದೆ ನೀನು..
ನಿನ್ನೆದೆಯ ಹಾಲಲಿ ಪ್ರೇಮಾಮೃತವ ಬೆರೆಸಿದೆ ನೀನು
ನಿನಗಾಗಿ ಈದೇಹದ ರಕ್ತ ಎಷ್ಟು ಹರಿಸಿದರೂ ತೀರದು ನಾನು..
ನಿನ್ನ ಬೇಕುಬೇಡವೆಲ್ಲ ನನಗಾಗಿ ಮುಡಿಪಾಗಿಟ್ಟೆ ನೀನು
ನಿನ್ನ ನಗುವಿಗಾಗಿ ಪ್ರಾಣ ಕೊಟ್ಟರೂ ಸಾಲದು ನಾನು..
ನಿನ್ನ ಕರುಣಾಸಾಗರದಲ್ಲಿ ತೇಲಿದ
ನಾನೇ ಕೋಟಿ ಕೋಟಿ ಸಿರಿವಂತ..
ನಿನ್ನ ಮಮತೆಯ ಮುಗಿಲಲಿ ಮಿನುಗಿದ
ನನಗೆ ಬೇಡ ಇನ್ಯಾವ ಭಗವಂತ..
ಕೋಟಿ ನಕ್ಷತ್ರಗಳ ಬೆಳಕು ಅಮ್ಮ
ಜೀವಕೋಟಿಗೆ ಬಂಗಾರದ ಬದುಕು ನೀಡುವಳು ಅಮ್ಮ..
ಕಂದನು ಎಂತವನಾಗಿರಲಿ,ಎಲ್ಲೆ ಇರಲಿ
ಅಮ್ಮನ ಪ್ರೀತಿ ಬದಲಾಗದು ಈ ಜಗದಲ್ಲಿ..
ಈ ಭೂಮಿ ಆಗಿರುವುದು ನಾಕ
ಈ ಅಮ್ಮ ಇರುವ ತನಕ
ಈ ಅಮ್ಮ ಇರುವ ತನಕ...
ಕಾರಣ ತಿಳಿಸದೆ ಒಪ್ಪಿದೆ ಈ ಹೃದಯ
ಕಾದಿರುವೆ ಕಣ್ಮುಚ್ಚದೆ ನೀ ಬರುವ ದಾರಿಯ
ಬರುವೆಯಾ ಓ ಜೀವವೇ ನೀನೇ ನನ್ನ ಒಲವು
ನಡೆಸುತ ಸವೆಸುತ ಸಾಗುವ ಈ ಬಾಳ ಹಾದಿಯ..
ಹೇಗೆ ಕಳೆಯಲಿ ನಿನ್ನ ಸನಿಹವಿಲ್ಲದ ಈ ಸಂಜೆಯ
ಬಿರಿದ ಮನದಲಿ ಒಮ್ಮೆ ಬಂದು ನೆಲೆಸೆಯಾ
ಕಣ್ಣಲಿ ಬಚ್ಚಿಟ್ಟು ಕಾಪಿಡುವೆ ಒಮ್ಮೆ ಬಾರೆಯಾ
ಕೇಳೆ ಚೆಲುವೆ, ನಿನ್ನ ಜೊತೆಗೆ ಇರುವೆ ಎಂದಿಗೂ ಎಂದೆಂದಿಗೂ
ಕಣ್ಣಿನ ರೆಪ್ಪೆಯು ಸೋತಿದೆ ಕನಿಕರಿಸೆಯಾ
ಇರುಳೆಲ್ಲ ಹಗಲಾಗಿದೆ ಕೇಳುತ ನಿನ್ನ ಕನವರಿಕೆಯಾ
ಹಾಡಿದೆ ನಿನ್ನಯ ಒಲವಿನ ಕವಿತೆಗೆ ಈ ಹೃದಯ
ಬಾ ಒಲವೇ ಈ ಮನದಿ ಕಟ್ಟಿರುವೆ ನಿನಗಾಗಿ ಗುಡಿಯಾ..
ಕಾರಣ ತಿಳಿಸದೆ ಒಪ್ಪಿದೆ ಈ ಹೃದಯ
ಕಾದಿರುವೆ ಕಣ್ಮುಚ್ಚದೆ ನೀ ಬರುವ ದಾರಿಯ
ಬರುವೆಯಾ ಓ ಜೀವವೇ ನೀನೇ ನನ್ನ ಒಲವು
ನಡೆಸುತ ಸವೆಸುತ ಸಾಗುವ ಈ ಬಾಳ ಹಾದಿಯ..