ನೀನೇ ನನ್ನ ಉಸಿರ ಜ್ಯೋತಿ
ತೋರಿ ಮುಗುಳು ನಗುವಿನ ಪ್ರೀತಿ
ಮಾಡಿಕೂಂಡೆ ಕೈ ಕುಣಿತದ ಕೋತಿ
ಕಾಣ ಬೇಕಿದೆ ನಿನ್ನ ಇನ್ನೊಂದು ಸರತಿ
ತಿಳಿಸಬೇಕಿದೆ ನನ್ನೀ ಚಿಂತಾಜನಕ ಸ್ಥಿತಿ
ಎಂದಿಗೂ ಆಗಿರು ಹೃದಯದ ಬಡಿತಕ್ಕೆ ವಿಶೇಷ ಅತಿಥಿ
ಮರುಭೂಮಿಯ ಮನಸಲಿ ಬೀಸಿದೆ ನಿನ್ನದೇ ಗಾಳಿಯು ಅತಿ ಅತೀ....
ನನ್ನ ಆಸೆ ಒಂದು
ಕಣ್ಣ ಕನಸು ನೂರಾ ಒಂದು
ಮನದ ಬಯಕೆ ಪೂರೈಸಲೆಂದು
ಬಂದಿರುವೆ ನಾ ನಿನಗಾಗಿ ಇಂದು.
ಕಳೆದು ಹೋದ ಆ ಬಾಲ್ಯದ ದಿನಗಳು
ಮೂಡಿ ಬಂದವು ನನ್ನ ಕವನದ ರೂಪದಲಿ
ನೆನಪುಗಳು ಬಂದು ನೂಕುತಿವೆ ಭಾವನೆಯ ಕೂಪದಲಿ
ಎನಗೆ ಇದು ಶಾಪವೋ,ನೆನಪುಗಳ ಪ್ರಲಾಪವೋ
ನನಗೆ ತಿಳಿಯದೇ ಹೋದ ಹೊಸ ಆಲಾಪವೋ.
- ಉಮೇಶ್.
ಹೃದಯ ಕಾದಿಹುದು ನಿನ್ನ ನಿರೀಕ್ಷೆಯಲ್ಲಿ,
ಮನಸು ಉಸಿರಾಡುವುದು ನಿನ್ನ ನಿರೀಕ್ಷೆಯಲ್ಲಿ,
ನೋವು ನಲಿವಾಗುವುದು ನಿನ್ನ ನಿರೀಕ್ಷೆಯಲ್ಲಿ,
ಮೌನ ಮಾತಾಗುವುದು ನಿನ್ನ ನಿರೀಕ್ಷೆಯಲ್ಲಿ,
ನಿರ್ಜಿವಿ ಕನಸು ಪುನರ್ಜಿವಿಸುವುದು ನಿನ್ನ ನಿರೀಕ್ಷೆಯಲ್ಲಿ,
ಗಾಳಿ ಘಮಗೊಡುವುದು ನಿನ್ನ ನಿರೀಕ್ಷೆಯಲ್ಲಿ,
ನೀರು ನಿನ್ನ ಪ್ರತಿಬಿಂಬವಾಗುವುದು ನಿರೀಕ್ಷೆಯಲ್ಲಿ,
ಮಣ್ಣು ನನ್ನ ಆಕೃತಿ ಪಡೆವುದು ಬೆಳದಿಂಗಳ ಬೆಳಕಿನ ನಿನ್ನ ನಿರೀಕ್ಷೆಯಲ್ಲಿ,
ನನ್ನ ತನು ಮನ ಕಾದಿವುದು
ಜೊತೆಗಾರ ನಿನ್ನ ನಿರೀಕ್ಷೆಯಲ್ಲಿ,
ಕಾಣಲಾರೆನೋ ಕಾಣೆಯಾದೆಯೋ ಈ
ಕವನ ಚಾಳಿಯಲ್ಲಿ.......
ಚಿಕ್ಕಿ,ಚಿಕ್ಕಿ, ಚಿಕ್ಕಿ, ನನ್ನಯ ಪ್ರೀತಿಯ ಚಿಕ್ಕಿ,
ಎಲ್ಲರ ಬಾಯಲು ನೀರೂರಿಸುವ ರುಚಿ ರುಚಿಯಾದ ಚಿಕ್ಕಿ!
ಕಡಲೆ,ಕೊಬ್ಬರಿ,ಎಳ್ಳನು ಸೇರಿಸಿ ಬೆಲ್ಲದ ಪಾಕವ ಕಲೆಸಿ ಮಾಡಿದ
ರುಚಿ ರುಚಿಯಾದ ಚಿಕ್ಕಿ! 1!
ಕಬ್ಬಿಣ, ಪ್ರೋಟೀನ್, ಪೊಟ್ಯಾಶಿಯಂ, ಸೋಡಿಯಂ
ಎಲ್ಲವೂ ಉಳ್ಳ ರುಚಿಕರ ಚಿಕ್ಕಿ!
ಹಿರಿಯರ, ಕಿರಿಯರನೆಲ್ಲರ ಮೆಚ್ಚಿಸೊ
ರುಚಿ ರುಚಿಯಾದ ಚಿಕ್ಕಿ!2!
ಉಪದ್ರವಿಲ್ಲದೆ, ಕಹಿಯೂ ಅಲ್ಲದೆ
ಒಳಿತನೇ ಮಾಡುವ ಈ ಚಿಕ್ಕಿ!
ಖರ್ಚೂ ಕಡಿಮೆ, ವಿಧ ವಿಧ ರೂಪದ
ರುಚಿ ರುಚಿಯಾದ ಚಿಕ್ಕಿ!3!
ಬಂದ ನೋಡು ಮೊಬೈಲ್ ಎಂಬ ಮಹಾ ಮಾಂತ್ರಿಕ
ಹಿಡಿದ ನೋಡು ತನ್ನ ಮುಷ್ಟಿಯಲ್ಲಿ ಇಡಿಲೋಕ
ಕುಂತರೂ ನಿಂತರೂ ಇವನದೇ ಧ್ಯಾನ
ಮಲಗಿದರೂ ಎದ್ದರೂ ಇವನದೇ ಗಾನ
ಇವನೇ ಕೃಷ್ಣ, ಇವನೇ ರಾವಣ "ಪ"
ಇವನ ತಲೆಯಲ್ಲಿವೆ ಕಂಪನಿಗಳೆಂಬ ತಂತ್ರ
ಇವನ ಬಾಯಲ್ಲಿವೆ ಸಿಮ್ ಆಫರ್ ಗಳೆಂಬ ಮಂತ್ರ
ಇವನ ಮೈಯಲ್ಲಿವೆ ಆಪ್ ಗಳೆಂಬ ಅಸ್ತ್ರ
ಛಾರ್ಜರ್ ಎಂಬಾತ ಇವನ ಪ್ರಾಣಮಿತ್ರ
ಎಸೆಯುವನು ವ್ಯಾಲಿಡಿಟಿ ಎಂಬ ಬ್ರಹ್ಮಾಸ್ತ್ರ
ಇವನ ಮಾಟಕೆ ಹಳೆ ಜಾದೂಗಾರರೆಲ್ಲ ಅತಂತ್ರ "
ಇವನದು ಏಳುಸುತ್ತಿನ ಕೋಟೆ
ಚಕ್ರವ್ಯೂಹದಂತೆ ನಿನಗೆ ಇವನ ಬೇಟೆ
ಹೊರಬರಲಾಗದು ಕಟ್ಟುವವರೆಗೆ ನಿನ್ನ ಗಂಟುಮೂಟೆ " "
ನೀ ತಿಳ್ಕೋ ಇವನ ಪ್ಲಾನು
ಕಾಲ್ ಗಳು ಸರ್ಚ್ ಗಳು ನಿನ್ನ ಗನ್ನು
ಮೆಸೇಜ್ ಗಳು ವಿಡಿಯೋ ಗಳು ನಿನ್ನ ಕಣ್ಣು
ಸರಿಯಾಗಿ ಯ್ಯೂಸ್ ಮಾಡಿದರೆ ಆಗುವೆ ವಿನ್ನು
ಅಡ್ಡದಾರಿ ಹಿಡಿದರೆ ನೀ ಸೇರುವೆ ಮಣ್ಣು " "
ಹಿಂದು ಮುಸ್ಲಿಂ ಸಿಖ್ ಸಾಯಿ ಕ್ರೈಸ್ತನೆಂಬ ದೇಹದೋಳಗ
ಜಾತಿಯ ಮಠ ಕಟ್ಟಿ ಉಳಿದವರ ಬಾಳಿಗೆ ಬೆಂಕಿ ಹಚ್ಚಿ
ಕೆಂಪಾನ ರಕ್ತ ಭಾನೆತರಕ ಚೆಲ್ಲಿ
ಕೇಕೆ ಹಾಕುತ್ತಾ ಮನುಜ ನಗತಾನ
ಮನದೊಳಗೇ ಶಾಂತಿಲ್ಲ ಮಸಣದಲಿ ಜಾಗವಿಲ್ಲ
ಹಾದಿಯ ಹೆಣವಾಗಿ ಜಾತಿಯ ಕಿಚ್ಚಯೆರಚಿ..
ಹುಟ್ಟುವಾಗ ನೀ ಅಳುತಲೆ ಹುಟ್ಟೆದೆ
ಸತ್ತಾಗ ಬೆರೆಯವರನ್ನ ಅಳಿಸಿದೆ
ಜಾತಿ ಮತವೆಂಬ ಬಿಜವ ನೀ ಬಿತ್ತಿ ಸತ್ತು ನಿ ಉಳಿದೇ
ಆ ದೇವರ ಬಳಿ ನೀ ಹೋದಾಗ ಜಾತಿ ಎಂದರೆನ ನೀ ಕೆಳ
ಪಾಪಿ ದೇವರ ಲೋಕದ ಮ್ಯಾಲ ನಾ ಹರಿಸೆನೊ ರಕ್ತ ಎಂದ ಹೇಳ ............
........✍ಈಶ್ವರಯ್ಯ ಬಿದನೂರಮಠ