Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೇಮ‌ಕ‌ವಿತೆ

ನಾನು ಓದಿರುವ‌ ಎಲ್ಲ ಗ‌ದ್ಯ‌ ಪ‌ದ್ಯ‌ ಕ‌ಥೆ
ಕ‌ವ‌ನ‌ ಕ‌ವಿತೆಗ‌ಳಲ್ಲಿ‌ ನ‌ನ‌ಗಿಷ್ಟ‌ವಾದ‌ ಅತ್ಯಂತ‌
ಸ‌‌ರ್ವಶ್ರೇಷ್ಠ‌ವಾದ‌ ಸಾಲುಗ‌ಳ‌ನ್ನು ಹೆಕ್ಕಿ ಆಯ್ದು
ಜೋಡಿಸಿ ಮ‌ರುಜೋಡಿಸಿ ಪ್ರೇಮ‌ಕ‌ವಿತೆಯೊಂದ‌ನ್ನು ರ‌ಚಿಸಿ ನ‌ನ್ನ‌ವ‌ಳ‌ ಮುಂದಿಟ್ಟೆ "ಇದೇ ನ‌ನ್ನ‌ ಪ್ರೀತಿಯೆಂದು".
ಅಲ್ಲೇ ಇದ್ದ‌ ಬಂಡೆಯೊಂದ‌ರ‌ ಮೇಲೆ ಕುಳಿತು
ಓದಿ ಅರ್ಥೈಸಿ ವಿಮ‌ರ್ಶಿಸಿ ಪರಾಮ‌ರ್ಶಿಸಿ
ಸ್ವ‌ಲ್ಪ‌ ಹೊತ್ತು ಎತ್ತ‌ಲೋ ನೋಡುತ್ತ‌ ಮೌನ‌ದಿಂದ್ದ‌ಳು ನ‍ಂತ‌ರ‌ ನ‌ನ್ನೆಡೆಗೆ ನೋಡುತ್ತ‌
ಹೀಗೆಂದ‌ಳು "ಯಾರೋ ಇನ್ನಾರಿಗೋ ಬೇಯಿಸಿದ‌ ಮುೃಷ್ಟಾನ್ನ‌ವ‌ನ್ನು ನಿನ್ನ‌ ಪ್ರೀತಿಯೆನ್ನುವುದು ಎಷ್ಟು ಸ‌ರಿ"
ನಾನು ಎನ‌ನ್ನೊ ಯೋಚಿಸುತ್ತ‌ ಉತ್ತ‌ರಿಸಿದೆ
"ಈ ಪ್ರೀತಿ ಸ್ಪುರಿಸುವ‌ ಸಾಲುಗ‌ಳು ಸ‌ಮುದ್ರ‌ ಮಂಥ‌ನ‌ದ‌ಲ್ಲಿ ತೇಲಿ ಬಂದ‌ ಅಮುೃತ‌ದಂತೆ
ನ‌ಮ್ಮ‌ದೆ ಕ‌ನ‌ಸುಗ‌ಳ‌ ಕ‌ನ‌ವ‌ರಿಕೆಗ‌ಳ ಹಾಡಿನಂತೆ
ನ‌ಮ್ಮ‌ ಹೃದ‌ಯ‌ ಗೆದ್ದ‌ರೆ ಅವು ನ‌ಮ್ಮ‌ದೇ ಸಾಲುಗ‌ಳ‌ಲ್ಲ‌ವೆ"?
ಒಲ‌ವೇ ಸ‌ತ್ಯ‌ ಒಲ‌ವೇ ನಿತ್ಯ‌
ಒಲ‌ವೇ ನ‌ಮ್ಮ‌ಯ‌ ಜೀವ‌ನ‌.

- ಶಶಿಧರ ಹೆಚ್ ಎನ್

05 Feb 2018, 08:34 pm

ಕಾಡುವ ಪ್ರೀತಿಯ ಬಯಸಿ

ನೀನೇ ನನ್ನ ಉಸಿರ ಜ್ಯೋತಿ
ತೋರಿ ಮುಗುಳು ನಗುವಿನ ಪ್ರೀತಿ
ಮಾಡಿಕೂಂಡೆ ಕೈ ಕುಣಿತದ ಕೋತಿ
ಕಾಣ ಬೇಕಿದೆ ನಿನ್ನ ಇನ್ನೊಂದು ಸರತಿ
ತಿಳಿಸಬೇಕಿದೆ ನನ್ನೀ ಚಿಂತಾಜನಕ ಸ್ಥಿತಿ
ಎಂದಿಗೂ ಆಗಿರು ಹೃದಯದ ಬಡಿತಕ್ಕೆ ವಿಶೇಷ ಅತಿಥಿ
ಮರುಭೂಮಿಯ ಮನಸಲಿ ಬೀಸಿದೆ ನಿನ್ನದೇ ಗಾಳಿಯು ಅತಿ ಅತೀ....

- Jyothi

05 Feb 2018, 09:50 am

ನನ್ನ ಆಸೆ

ನನ್ನ ಆಸೆ ಒಂದು
ಕಣ್ಣ ಕನಸು ನೂರಾ ಒಂದು
ಮನದ ಬಯಕೆ ಪೂರೈಸಲೆಂದು
ಬಂದಿರುವೆ ನಾ ನಿನಗಾಗಿ ಇಂದು.
        ಕಳೆದು ಹೋದ ಆ ಬಾಲ್ಯದ ದಿನಗಳು
        ಮೂಡಿ ಬಂದವು ನನ್ನ ಕವನದ ರೂಪದಲಿ
        ನೆನಪುಗಳು ಬಂದು ನೂಕುತಿವೆ ಭಾವನೆಯ ಕೂಪದಲಿ
        ಎನಗೆ ಇದು ಶಾಪವೋ,ನೆನಪುಗಳ ಪ್ರಲಾಪವೋ
        ನನಗೆ ತಿಳಿಯದೇ ಹೋದ ಹೊಸ ಆಲಾಪವೋ.
                         - ಉಮೇಶ್.

- Umesh

04 Feb 2018, 09:51 pm

ಬೊಂಬೆಗಳು

ಕಾಲ ಎನ್ನೋ ಆಟದಲಿ ನಾವು ಎಂದು ಬೊಂಬೆಗಳು ಸೂತ್ರ ಮೇಲೆ ಇರುವಾಗ ಆಟ ಹೇಗೆ ಆಡುವುದು ಮನಸಲಿ ತುಂಬಿದ ನೋವುಗಳ ನಗುವಿನ ಮೂಲಕ ಮರೆಯುವುದೇ ನಗು ನಗುತ ಕನಸಲಿ ಬೆಳಕು ಹರಿಯುವುದು ನಸುಕಲಿ

- jyoti

04 Feb 2018, 07:45 pm

ನೀ ಬರಬೇಕಿದೆ

ಹಣೆಗಿಟ್ಟ ಬೊಟ್ಟೂ ಕೂಡ
ಅಣಕಿಸುತಿದೆ ಕಂಡಾಗಲೆಲ್ಲ ನನ್ನ
ಬೇಡವೆಂದರು ನೆನೆದು ನಿನ್ನ

ಕಿವಿ ತುದಿಯಲಿ ಸದಾ ಹರ್ಷದಲಿ
ಕುಣಿದಾಡುತ್ತಿದ್ದ ಓಲೆಯೂ ಮೂಕವಾಗಿದೆ
ನಿನ್ನ ಪಿಸು ನುಡಿಯ ಮಾತು ಕೇಳದೆ

ನಿಶ್ಯಬ್ಧ ಆವರಿಸಿದೆ ಮುಂಗುರುಳಿಗೆ
ಕುಳಿತು ಜೀಕುವ ಕೈ ಬೆರಳಿಲ್ಲದೆ
ಕಿವಿಯ ಹಿಂದೆ ಸರಿದು ಕಾಣದಾಗುತಿದೆ

ತುಟಿಗಳು ಬಂಧಿಯಾಗಿಬಿಟ್ಟಿವೆ
ತೆರೆವ ಕೀಲಿ ಎಲ್ಲಿಯೂ ಕಾಣದಾಗಿದೆ
ಜೋಪಾನವಾಗಿ ಕೀಲಿ ಎತ್ತಿಟ್ಟವನೇ ತೆರೆಯಬೇಕಿದೆ

ಕಂಬನಿ ಪ್ರವಾಹದಲಿ ಸಿಲುಕಿ
ಕಣ್ಣಾಲಿಯಲಿ ಕಾಡಿಗೆ ನಲುಗುತಿದೆ
ಅಕಾಲಿಕ ಮೃತ್ಯುವ ನೆನೆದು ಅಳುತಿದೆ

ಕಣ್ಣೀರ ಸಾಗರಕೇಕೊ ತೀರದ ಮೇಲೆ
ಎಂದೂ ತೀರದ ಪ್ರೀತಿ ಬಂದಂತಿದೆ
ಎಲ್ಲೆ ಮೀರಿ ಗಲ್ಲ ಸವರಿ ರಮಿಸುತಿದೆ

ಅಧರದ ಅಂಚಿನ ಜೇನ ಸವಿದು
ಕಣ್ಣನಿಯು ನಾನೇ ನಿನಗೆ ನಲ್ಲನೆನುತಿದೆ
ಅವನ ಮಾತ ಸುಳ್ಳಾಗಿಸಲಾದರು ನೀ ಬರಬೇಕಿದೆ

- ಶ್ರೀಕಾವ್ಯ

04 Feb 2018, 04:01 pm

ನಿನ್ನ ನಿರೀಕ್ಷೆಯಲ್ಲಿ

ಹೃದಯ ಕಾದಿಹುದು ನಿನ್ನ ನಿರೀಕ್ಷೆಯಲ್ಲಿ,
ಮನಸು ಉಸಿರಾಡುವುದು ನಿನ್ನ ನಿರೀಕ್ಷೆಯಲ್ಲಿ,
ನೋವು ನಲಿವಾಗುವುದು ನಿನ್ನ ನಿರೀಕ್ಷೆಯಲ್ಲಿ,
ಮೌನ ಮಾತಾಗುವುದು ನಿನ್ನ ನಿರೀಕ್ಷೆಯಲ್ಲಿ,
ನಿರ್ಜಿವಿ ಕನಸು ಪುನರ್ಜಿವಿಸುವುದು ನಿನ್ನ ನಿರೀಕ್ಷೆಯಲ್ಲಿ,
ಗಾಳಿ ಘಮಗೊಡುವುದು ನಿನ್ನ ನಿರೀಕ್ಷೆಯಲ್ಲಿ,
ನೀರು ನಿನ್ನ ಪ್ರತಿಬಿಂಬವಾಗುವುದು ನಿರೀಕ್ಷೆಯಲ್ಲಿ,
ಮಣ್ಣು ನನ್ನ ಆಕೃತಿ ಪಡೆವುದು ಬೆಳದಿಂಗಳ ಬೆಳಕಿನ ನಿನ್ನ ನಿರೀಕ್ಷೆಯಲ್ಲಿ,
ನನ್ನ ತನು ಮನ ಕಾದಿವುದು
ಜೊತೆಗಾರ ನಿನ್ನ ನಿರೀಕ್ಷೆಯಲ್ಲಿ,
ಕಾಣಲಾರೆನೋ ಕಾಣೆಯಾದೆಯೋ ಈ
ಕವನ ಚಾಳಿಯಲ್ಲಿ.......

- ಚುಕ್ಕಿ

04 Feb 2018, 12:02 pm

ಚಿಕ್ಕಿ

ಚಿಕ್ಕಿ,ಚಿಕ್ಕಿ, ಚಿಕ್ಕಿ, ನನ್ನಯ ಪ್ರೀತಿಯ ಚಿಕ್ಕಿ,
ಎಲ್ಲರ ಬಾಯಲು ನೀರೂರಿಸುವ ರುಚಿ ರುಚಿಯಾದ ಚಿಕ್ಕಿ!
ಕಡಲೆ,ಕೊಬ್ಬರಿ,ಎಳ್ಳನು ಸೇರಿಸಿ ಬೆಲ್ಲದ ಪಾಕವ ಕಲೆಸಿ ಮಾಡಿದ
ರುಚಿ ರುಚಿಯಾದ ಚಿಕ್ಕಿ! 1!

ಕಬ್ಬಿಣ, ಪ್ರೋಟೀನ್, ಪೊಟ್ಯಾಶಿಯಂ, ಸೋಡಿಯಂ
ಎಲ್ಲವೂ ಉಳ್ಳ ರುಚಿಕರ ಚಿಕ್ಕಿ!
ಹಿರಿಯರ, ಕಿರಿಯರನೆಲ್ಲರ ಮೆಚ್ಚಿಸೊ
ರುಚಿ ರುಚಿಯಾದ ಚಿಕ್ಕಿ!2!

ಉಪದ್ರವಿಲ್ಲದೆ, ಕಹಿಯೂ ಅಲ್ಲದೆ
ಒಳಿತನೇ ಮಾಡುವ ಈ ಚಿಕ್ಕಿ!
ಖರ್ಚೂ  ಕಡಿಮೆ, ವಿಧ ವಿಧ ರೂಪದ
ರುಚಿ ರುಚಿಯಾದ ಚಿಕ್ಕಿ!3!

-ಡಾ! ಸಿ. ಮುರಳೀಧರ

- ಡಾ!ಸಿ.ಮುರಳೀಧರ

03 Feb 2018, 03:00 pm

ನಲ್ಲೆಯ ನೆನಪು

ಕನಸಲಿ ಬಂದು ಕಾಡುವ ಕನ್ಯೆಯ ನಿದ್ದೆಯ ತೊರೆದು ಮರೆಬಹುದು,

ನೆನಪಲೆ ನಿಂತು ನಿತ್ಯವು ನೋಯಿಪ ನಲ್ಲೆಯನೆಂತು ನಾ ಮರೆಯುವುದು!!

ಓಗರದಲ್ಲಿಪ ಬೆಣ್ಣೆಯನೊಮ್ಮೆ ಪಕ್ಕಕೆ ಸರಿಸಿ ಉಣಲಹುದು,ಹಾಲಲೆ ಬೆರೆತಿಹ ಬೆಣ್ಣೆಯ ಜಿಡ್ಡನನೆಂತು ತಾನೆ ಹೊರ ಸರಿಸುವುದು!!

ನದಿಯಲಿ ಮುಳುಗುತ ಚಡಪಡಿಸುವನ ಹುಟ್ಟು ಹಾಕಿ ಉಳಿಸಲಹುದು,

ಸುನಾಮಿಗೆ ಸಿಲುಕಿದ ಅಂಬಿಗ ತನ್ನಯ ನಾವೆಯನೆಂತು ಉಳಿಸುವುದು!!

ಮುಂಜಾವಿನ ಮಂಜು, ತಂಗಾಳಿಯ ತಂಪು, ಹಚ್ಚನೆಯ ಹಸಿರುಗಳಿಲ್ಲದೆಯೂ ಇರಲಹುದು,

ಶ್ರವಣದಿ ಶ್ರಾವ್ಯ, ನೋಟದೆ ದೃಷ್ಟಿ, ಪ್ರಾಣದ ವಾಯುವ ತೊರೆದು ಹೇಗೆ ನಾ ಜೀವಿಪುದು!!

ಡಾ! ಸಿ. ಮುರಳೀಧರ

- ಡಾ!ಸಿ.ಮುರಳೀಧರ

03 Feb 2018, 02:57 pm

ಮೊಬೈಲ್ ಎಂಬ ಮಹಾ ಮಾಂತ್ರಿಕ

ಬಂದ ನೋಡು ಮೊಬೈಲ್ ಎಂಬ ಮಹಾ ಮಾಂತ್ರಿಕ
ಹಿಡಿದ ನೋಡು ತನ್ನ ಮುಷ್ಟಿಯಲ್ಲಿ ಇಡಿಲೋಕ
ಕುಂತರೂ ನಿಂತರೂ ಇವನದೇ ಧ್ಯಾನ
ಮಲಗಿದರೂ ಎದ್ದರೂ ಇವನದೇ ಗಾನ
ಇವನೇ ಕೃಷ್ಣ, ಇವನೇ ರಾವಣ "ಪ"

ಇವನ ತಲೆಯಲ್ಲಿವೆ ಕಂಪನಿಗಳೆಂಬ ತಂತ್ರ
ಇವನ ಬಾಯಲ್ಲಿವೆ ಸಿಮ್ ಆಫರ್ ಗಳೆಂಬ ಮಂತ್ರ
ಇವನ ಮೈಯಲ್ಲಿವೆ ಆಪ್ ಗಳೆಂಬ ಅಸ್ತ್ರ
ಛಾರ್ಜರ್ ಎಂಬಾತ ಇವನ ಪ್ರಾಣಮಿತ್ರ
ಎಸೆಯುವನು ವ್ಯಾಲಿಡಿಟಿ ಎಂಬ ಬ್ರಹ್ಮಾಸ್ತ್ರ
ಇವನ ಮಾಟಕೆ ಹಳೆ ಜಾದೂಗಾರರೆಲ್ಲ ಅತಂತ್ರ "

ಇವನದು ಏಳುಸುತ್ತಿನ ಕೋಟೆ
ಚಕ್ರವ್ಯೂಹದಂತೆ ನಿನಗೆ ಇವನ ಬೇಟೆ
ಹೊರಬರಲಾಗದು ಕಟ್ಟುವವರೆಗೆ ನಿನ್ನ ಗಂಟುಮೂಟೆ " "

ನೀ ತಿಳ್ಕೋ ಇವನ ಪ್ಲಾನು
ಕಾಲ್ ಗಳು ಸರ್ಚ್ ಗಳು ನಿನ್ನ ಗನ್ನು
ಮೆಸೇಜ್ ಗಳು ವಿಡಿಯೋ ಗಳು ನಿನ್ನ ಕಣ್ಣು
ಸರಿಯಾಗಿ ಯ್ಯೂಸ್ ಮಾಡಿದರೆ ಆಗುವೆ ವಿನ್ನು
ಅಡ್ಡದಾರಿ ಹಿಡಿದರೆ ನೀ ಸೇರುವೆ ಮಣ್ಣು " "

- ಸುರೇಶ್ ಟಿ ವಿ

03 Feb 2018, 09:03 am

ಲೋಕದ ಮ್ಯಾಗಲ ಪಾಪಿ ದೇವರ.....

ಲೋಕದ ಮ್ಯಾಗಲ ಪಾಪಿಯ ದೇವರು
ಜಾತಿಯಮ್ಯಾಲ ಹರಿಸ್ಯಾನು ರಕ್ತವ
ಪಾಪಿ ಮನುಜರು ಕಟುಕರ ಮನ ತಾಳಿ
ಜಾತಿಗಾಗಿ ಜೀವವ ಬಿಟ್ಟಾರು
ಸ್ವಚ್ಛಂದ ಜಗಕೆಲ್ಲ ಜಾತಿಯ ಕಳಂಕ ಹಚ್ಯಾರು ಬುದ್ದಿ ಹೆಚ್ಚಾದವರು......

ಹಿಂದು ಮುಸ್ಲಿಂ ಸಿಖ್ ಸಾಯಿ ಕ್ರೈಸ್ತನೆಂಬ ದೇಹದೋಳಗ
ಜಾತಿಯ ಮಠ ಕಟ್ಟಿ ಉಳಿದವರ ಬಾಳಿಗೆ ಬೆಂಕಿ ಹಚ್ಚಿ
ಕೆಂಪಾನ ರಕ್ತ ಭಾನೆತರಕ ಚೆಲ್ಲಿ
ಕೇಕೆ ಹಾಕುತ್ತಾ ಮನುಜ ನಗತಾನ
ಮನದೊಳಗೇ ಶಾಂತಿಲ್ಲ ಮಸಣದಲಿ ಜಾಗವಿಲ್ಲ
ಹಾದಿಯ ಹೆಣವಾಗಿ ಜಾತಿಯ ಕಿಚ್ಚಯೆರಚಿ..

ಹುಟ್ಟುವಾಗ ನೀ ಅಳುತಲೆ ಹುಟ್ಟೆದೆ
ಸತ್ತಾಗ ಬೆರೆಯವರನ್ನ ಅಳಿಸಿದೆ
ಜಾತಿ ಮತವೆಂಬ ಬಿಜವ ನೀ ಬಿತ್ತಿ ಸತ್ತು ನಿ ಉಳಿದೇ
ಆ ದೇವರ ಬಳಿ ನೀ ಹೋದಾಗ ಜಾತಿ ಎಂದರೆನ ನೀ ಕೆಳ
ಪಾಪಿ ದೇವರ ಲೋಕದ ಮ್ಯಾಲ ನಾ ಹರಿಸೆನೊ ರಕ್ತ ಎಂದ ಹೇಳ ............
........✍ಈಶ್ವರಯ್ಯ ಬಿದನೂರಮಠ

- ishwar

03 Feb 2018, 08:15 am