Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಿಂಚುಳ್ಳಿಯ ಮಿಂಚು

ಕತ್ತಲೊಳಗೊಂದು ಮಿಂಚುಳ್ಳಿ
ಬಂದು ಬೆಳಕೊಂದ ಬಿರುತ್ತ
ನಾನೆ ಬೆಳದಿಂಗಳು ಎಂದು
ಬಾನೆಲ್ಲ ಹಾರಾಡುತ್ತಿದೆ ರೆಕ್ಕೆ ಬಿಚ್ಚಿ

ಬೊಗಸೆಯಲ್ಲಿ ಹಿಡಿದು ಬಚ್ಚಿಟ್ಟರೆ
ಬೆಳಂದಿಗಳ ಅಂದವು ಮರೆಯಾಗಿ
ಕತ್ತಲು ಮುಡುವುದೆನೂ
ಚಂದ್ರನ ಅಂದವು ಮರೆಯಾಗುವುದೆನು

ಪುಟ್ಟ ಮಿಂಚುಳ್ಳಿಯ ಸಣ್ಣದೊಂದು
ಇಡೆರದ ಬಯಕೆ ಇಡೆರಿಸುವ
ಮನಸೆಕೋ ಬೆಳಂದಿಗಳಿಗೆ ಇಲ್ಲ

ಮಿಚುಳ್ಳಿಯ ಮಿಂಚು ಮಿನು ಮಿನುಗುತ
ಹಾರಾಡುತಿದೆ ನಮ್ಮನೆ ಅಂಗಳದಲ್ಲಿ
ಆ ಬೆಳಂದಿಗಳ ಅಂದಕೆ ತಾನೆನು ಸರಿ ಸಾಟಿ ಎಂದು...................

- ರಾಗಸಿರಿ....

08 Feb 2018, 09:34 pm

ಮೌನ ರಾಗ

ಬದಲಿ ಹೃದಯ ಬೇಕು ನನಗೆ
ನೀನು ಬಿಟ್ಟು ಹೋದ ಸಲಿಗೆ
ಕೊನೆಯ ಮನೆಯ ಅಂಗಳದಲ್ಲಿ
ಒಲವ ಬಯಸೋ ಪಾಪಿ ನಾನು.....
ನಕಲಿ ಕನಸ ಕಂಡು ಮನಸು
ಅಸಲಿ ಹೆಸರ ಮರೆತೇ ಹೋಯ್ತು
ಚಿಗುರು ಮರದ ಎಲೆಗಳ ಊರಲೀ
ನಗುವ ತೊರೆದ ದಾಸ ನಾನು.....
###ಕೆ.ಜೆ.ಎಸ್.ಗೌಡ್ರು.ಹುಣಸೂರು.

- shasi kumar

08 Feb 2018, 08:37 am

ಅಮ್ಮ

ನೀನೆಷ್ಟೇ ಕಲಿತರು
ನಮಗೆಂದೆ ಮೀಸಲು
ಇಹುದೊಂದು ಕಾಯಕವು
ಪಾಕಶಾಲೆಯ ಹೊಣೆಗಾರಿಕೆಯು
ಎನ್ನಲು ನನ್ನವ್ವನಂದು
ಕುದಿಯಿತು ನನ್ನೊಳಗಿನ ರಕ್ತವು
ಆ ಅಬಲೆಯ ವೇದನೆ
ಹರಿಯದೆ ಮಾಡಿದೆನೆ
ಬಂದೀಖಾನೆಯಿಂದ ವಿಮುಕ್ತಳಾಗುವ ಶಪಥ
ನನ್ನೀ ಪಯಣದಲ್ಲಿ
ಕಣ್ಣೀರ ಕಡಲಿನಲ್ಲಿ
ಏನಾಗಿಹೆನೆಂದು ಚಿಂತಿಸಲಿಲ್ಲಿ
ತಿಳಿಯಿತು ತಡವಾಗಿಂದು
ನಾನೊಂದು ಕೈಗೊಂಬೆಯೆಂದು

ಜಪಿಸುತಿದ್ದೆನು ನಾನಂದು
ಉದ್ದರಿಸುವೆನು ಜಗವನೆಂದು
ಕಂಡ ಕಂಡ ದೈವಗಳಿಗೆ
ಆಸರೆ ನಾನಾಗುವೆನೆಂದು
ಶತಕೋಟಿ ಜೀವರಾಶಿಗಳಿಗೆ
ಆಶ್ರಯ ನೀಡಿ ಆದರಿಸುವ ದೇವನಿಗೆ
ನಾನಾಸರೆಯೇ............?

- ಶಕುಂತಲಾ

07 Feb 2018, 04:43 pm

ನಮ್ಮ ಸುಭಾಷ್ ಚಂದ್ರ ಬೋಸ್

ಅಪ್ರತಿಮ ದೇಶಪ್ರೇಮಿ
ನಮ್ಮ ಸುಭಾಷ್ ಚಂದ್ರ ಬೋಸ್..
ರಣವಿಕ್ರಮ ವೀರ ಸೇನಾನಿ
ನಮ್ಮ ಸುಭಾಷ್ ಚಂದ್ರ ಬೋಸ್..
ಅಗ್ರಗಣ್ಯ ಕ್ರಾಂತಿಕಾರಿ
ನಮ್ಮ ಸುಭಾಷ್ ಚಂದ್ರ ಬೋಸ್..
ಜನಮಾನ್ಯ ನೇತಾಜಿ
ನಮ್ಮ ಸುಭಾಷ್ ಚಂದ್ರ ಬೋಸ್.." ಪ "

ದೇಶದ ಮುಂದೆ ಐಸಿಎಸ್ ಹುದ್ದೆ ಕೇವಲ ಎಂದು
ದೇಶ ಸೇವೆ ನನಗೆ ಸಕಲ ಎಂದು..
ಕಣ್ಣಲ್ಲಿ ಸ್ವಾತಂತ್ರ್ಯದ ಕನಸು ಕಂಡು
ಗಾಂಧಿಯವರ ಅಹಿಂಸಾ ತತ್ವ ಬೇಡ ಎಂದು..
ಮನದಲ್ಲಿ ದೇಶಭಕ್ತಿ ತುಂಬಿ ಕೊಂಡು
ಸ್ವಾತಂತ್ರ್ಯಕ್ಕಾಗಿ ಸಂಘರ್ಷ ತತ್ವ ಅಸ್ತ್ರ ಮಾಡಿಕೊಂಡು..
ಸಿಂಹ ಸ್ವಪ್ನವಾಗಿ ಬ್ರಿಟಿಷ್ರ ಹುಟ್ಟಡಗಿಸಲು ಹುಟ್ಟಿ ಬಂದರೋ.....""

ಬ್ರಿಟಿಷ್ರ ಬಂಧನದಿಂದ ತಪ್ಪಿಸಿಕೊಂಡು
ದೇಶವಿದೇಶಗಳ ಸಹಾಯ ಪಡೆದುಕೊಂಡು..
ಐಎನ್ಎ ಸೈನ್ಯದ ನಾಯಕತ್ವ ವಹಿಸಿಕೊಂಡು
ದೆಹಲಿ ಚಲೋ ಎಂದು ಗರ್ಜಿಸಿ ಕೊಂಡು..
ಹೆಬ್ಬುಲಿಯಂತೆ ಮತ್ತೆ ನುಗ್ಗಿ ಬಂದರೋ
ಬಿಳಿಯ ದೊರೆಗಳ ಎದೆಯಲ್ಲಿ ಭಯವ ತಂದರೋ..." "

ನರನಾಡಿಯಲ್ಲಿ ಹೋರಾಡುವ ಹುಮ್ಮಸ್ಸು ತುಂಬಿ ಕೊಂಡು..
ರಕ್ತ ಕೊಡು ನನಗೆ ನೀನು ಎಂದು
ಸ್ವಾತಂತ್ರ್ಯ ಕೊಡುತ್ತೇನೆ ನಿನಗೆ ನಾನು ಎಂದು..
ಜೈಹಿಂದ್ ಎಂದು ಘೋಷಣೆ ಮೊಳಗಿಸಿಕೊಂಡು
ಬಿಳಿಯರ ರುಂಡ ಚೆಂಡಾಡಿದರು ನೋಡು..
ಮಾತೃಭೂಮಿಯಲ್ಲಿ ತ್ರಿವರ್ಣ ಧ್ವಜವ ಹಾರಿಸಿದರು ನೋಡು
ಭಾರತಿಯರ ಹೃದಯದಲ್ಲಿ ಅಮರರಾದರೂ ನೋಡು..." "

- ಸುರೇಶ್ ಟಿ ವಿ

07 Feb 2018, 09:11 am

ಅಮ‌ರ‌ ಪ್ರೇಮ‌ದ‌.....

ಹಕ್ಕಿಯೊಂದು ಹಾರಿ ಬಂದು ಎದೆಯ‌ ಮೇಲೆ ಕುಳಿತು ಹಾಡಿತು ಒಲ‌ವಿನ‌ ರಾಗ‌ದ‌ಲಿ
"ನೀನೆ ನ‌ನ್ನ‌ ಒಲ‌ವಿನ‌ ತಾರೆ
ನ‌ನ್ನ‌ ಚ‌ಲುವಿನ‌ ಒಲ‌ವ‌ ಧಾರೆ
ಮಿನುಗುವ‌ ದೀಪ‌ದ‌ ಹೊಳೆವ‌ ಜ್ವಾಲೆ
ಎಂದು ಮುಗಿಯ‌ದ‌ ಕಾವ್ಯ‌ ಮಾಲೆ
ಕ‌ಡ‌ಲ‌ ಅಲೆಯ‌ ಮೇಲ‌ರ‌ಳಿದ‌ ಚಿತ್ತಾರ ಕ‌ಲೆ
ನಾ ನಿನ‌ಗೆ ನೀ ನ‌ನ‌ಗೆ
ನ‌ಮ‌ದೆಂದು ಅಳಿಯದ ಗಂದ‌ರ್ವ‌ಗಾನ‌ದ‌
ಸ‌ಖೀಗೀತೆಯ‌ ಸುಖ‌ದ‌ ಅಮ‌ರ‌ ಪ್ರೇಮ‌ದ‌ ಕ‌ಥನ"
ಒಮ್ಮೆ ಹಾಗೇನುತ‌ ಒಮ್ಮೆ ಹೀಗೆನುತ
ಒಮ್ಮೆ ಮೇಲೇರಿ ಮ‌ತ್ತೋಮ್ಮೆ ಕೆಳ‌ಗಿಳಿದು
ಅತ್ತ‌ ಇತ್ತ‌  ಸುತ್ತ‌ ಮುತ್ತ‌ ಮೇರೆ ಮೀರುವ‌
ಸ‌ರಿಸಾಟಿಯಿಲ್ಲ‌ದ‌ ಹಾರಾಟ‌ದ‌ ಕ‌ನ‌ಸು ನಿನ‌ದು
ನೋವೊ ನ‌ಲಿವೊ ಕ‌ಷ್ಟ‌ವೊ ನ‌ಷ್ಟ‌ವೊ
ಇಷ್ಟ‌ಪ‌ಟ್ಟು ಕ‌ಟ್ಟಿಕೊಂಡ‌ ಬ‌ದುಕು ನ‌ನ‌ದು
ನೀನೊ ಪ್ರ‌ಕ‌ೃತಿಯ ‌ಸು‍ಂದ‌ರ‌ ಕ‌ನ‌ಸು
ನ‌ನ‌ದೊ ಸುಡುಭೂಮಿಯ‌ ಕ‌ಡುಮುನಿಸು
ನ‌ಮ‌ದಲ್ಲ‌ ಅಮ‌ರ‌ ಪ್ರೇಮ‌ದ‌ ಕ‌ಥೆ
ನ‌ಮ‌ದೆಂದು ನ‌ಲ್ಮೆಯ‌ ಸ್ನೆಹ‌ದ‌ ವ್ಯ‌ಥೆ

- ಶಶಿಧರ ಹೆಚ್ ಎನ್

06 Feb 2018, 10:53 pm

ದಿನ ನಿತ್ಯದ ಜಂಜಾಟ

ನಿಂತಲ್ಲಿ-ಕುಂತಲ್ಲಿ ಚಿಂತೆ.!
ಹೋದಲ್ಲಿ-ಬಂದಲ್ಲಿ ಗಾಬರಿ.!!
ಎದ್ದಲ್ಲಿ-ಬಿದ್ದಲ್ಲಿ ಆಲಸ್ಯ.!!!
ಗೆದ್ದಲ್ಲಿ-ಕದ್ದಲ್ಲಿ ತೋರ್ಪಡಿಕೆ.!!!!

ಒಂದರಗಳಿಗೆಯ ಸಿಟ್ಟು.!
ಒಂಚೂರಿಲ್ಲದ ತಾಳ್ಮೆ.!!
ತಟಗಿಲ್ಲದ ಸಹನೆ.!!!
ತಡಬಡಿಕೆಯ ಮೌನ.!!!!

ಮುಗುಚಿದ ಮನಸ್ಸು.!
ತೇದಕಿದ ಬುದ್ಧಿ.!!
ಮಿದುಕಿನ ಹೃದಯ.!!!
ಕೆದಕುವ ವಿಚಾರ.!!!!

- ಆರ್ ಎಸ್ ಸುಗ್ಗಿ.

06 Feb 2018, 08:21 pm

ಸಾಧನೆಯ ಹಾದಿ ನಮ್ಮ ಬಾಳಲಿ..

ಸಾಧನೆಯ ಹಾದಿಯಲಿ ಕಲ್ಲುಮುಳ್ಳುಗಳುಂಟು
ದೃಢ ನಿರ್ಧಾರಗಳು ಮನಸಿನಲ್ಲಿ ಹಾಗೇ ಉಳಿಯಲಿ
ಮಾಡಿದ ಸಂಕಲ್ಪವು ಮರೆಮಾಚದಿರಲಿ ಬದುಕಲಿ
ನೆನಪಿರಲಿ ನಮಗೆ ನಾನೊಬ್ಬ ಸಾಧಕನೆಂಬುವದ.

ಕೆಲಸದಲ್ಲಿ ನೂರೆಂಟು ಅಡಕು ತೊಡಕುಗಳುಂಟು
ಧೈರ್ಯವಿರಲಿ ನಷ್ಟವೊ ಲಾಭವೊ ಅದರೊಳಗುಂಟು
ಹಿಡಿದ ಕಾರ್ಯದಲಿ ಕೈ ಬಿಡದೆ ನಡಿಯುವದು ಬದುಕು
ಅಂಜದಿರಿ ಅಳುಕದಿರಿ ಸಾಧನೆಗೆ ಬೆಳಕು ನಿಮಗುಂಟು.

ಕಷ್ಟಗಳು ಬರುವದು ಮನುಷ್ಯನಿಗೆ ಹೊರೆತು
ಗಿಡ ಮರ ಬಳ್ಳಿ ಕಳ್ಳಿಗಳಿಗಲ್ಲ
ಗಿಡ ಮರಗಳ ಪೋಷಿಸಲು ನೂರು ಜನರುಂಟು ಈ ಜಗದೊಳಗೆ
ನಿನ್ನ ಕಾಲ ಮೇಲೆ ನೀ ನಿಲ್ಲುವದು ಆತ್ಮವಿಶ್ವಾಸ ನಿನ್ನ ಬಲ
ಹೆದರದಿರು ಸಾಧಕ ಗುರಿ ಮುಟ್ಟುವರೆಗು ನೀ ನಿಲ್ಲದಿರು.

ಗುರುವಿನ ಗಾದೆಗೆ ನೀ ತಲೆಬಾಗು
ನೀ ಎದ್ದು ನಿಂತಾಗಲೆ ಎಲ್ಲರು ತಲೆಬಾಗುವರು
ಹಿಡಿದ ಪಟ್ಟನು ಸಾಧಿಸಿ ತೋರಿಸು ಈ ಜಗಕೆ
ಎಂದಿಗು ಹಿಂಜರಿಯದಿರು ಬೇರೊಬ್ಬರ ಮನಕೆ.

ರಾತ್ರಿ ಹಗಲಿರುಳು ಶ್ರಮಿಸುವವನು ಸಾಧಕ
ಹೆದರಿ ಹಿಂದೆ ಸರಿಯುವವನು ನಿಸ್ಸಾಯಕ್
ನಿಮ್ಮ ಆಸೆಗಳ ಬೊಕ್ಕಸಕ್ಕೆ ಹಾಕಿರಿ ಕಡಿವಾಣ
ಇವೆಲ್ಲವನ್ನು ಮೀರಿ ನಿಂತವನೆ ಯೆಶಸ್ವಿ ಸಾಧಕನಾಗುವೆ ನೀ ಜಾಣ.
.......✍ಈಶ್ವರ್ ಬಿ

- ishwar

06 Feb 2018, 10:14 am

ಮುತ್ತು ಬೆಳಕೂ..

ಕತ್ತಲೋಂದು ಬಂದು
ಜಗವೆ ಮರೆ ಮಾಚಿದರೆನಂತೆ
ಕತ್ತಲನ್ನೆ ನುಂಗಿ ಬೆಳಕೋಂದ
ಚೆಲ್ಲೋಕೆ ಬರುವನೋಬ್ಬ ಚಂದ್ರ
ಆ ಆಗಸಕ್ಕೆ........ಭೂವಿಯಲ್ಲ
ಬೆಳಂದಿಗಳೆಂಬ ಮುತ್ತು ಮಳೆಗಳ
ಸುರಿಸೋಕೆ.........
ಎಲ್ಲವ ಮರೆತು ಮುದ್ದು ಮುದ್ದಾಗಿ
ಮಗುವಿನಂತೆ ಮಲಗಿರುವ
ಎಲ್ಲರ ಎಬ್ಬಿಸಿ ಅವರ ಗುರಿಯ ನೆನಪಿಸಿ
ಎಲ್ಲರ ಬಾಳ ಬೆಳಗಲೆಂದು
ಮುಂಜಾನೆಯ ಜಗದ ಅಂದವ
ಕಣ್ತುಂಬಿಕೊಳ್ಳಿರೋ
ಎಂದು ಎದ್ದು ಬರುವನೋಬ್ಬ ಸೂರ್ಯ
ಇಡಿ ಭೂಲೋಕವ ಬೆಳಗಲೆಂದು.....ಮುಂಜಾನೆಯ
ಸಹಿ ಮುತ್ತಗಳ ನಿಡೋಕೆ......
ದಿನವೆಲ್ಲ ಸಿಹಿಯಾಗಿರಲೆಂದು....

- ರಾಗಸಿರಿ....

06 Feb 2018, 07:07 am

ಅಂದಗಾತಿ

ಕುಡಿ ನೋಟಕ್ಕೆ
ನಾಚಿ ನೀರಾಗಿ
ಕಾಮನಬಿಲ್ಲಗಿ ಬಳುಕಿ
ರಂಗೋಲಿ ಬಿಡಿಸಿದೆ
ನನ್ನೆದೆಯ ಗುಡಿಯಲ್ಲಿ

ಪ್ರೀತಿಯ ಮುತ್ತಿಟ್ಟು
ಅಂಜಿಕೆಯ ನುಡಿ ನುಡಿದು
ಬೆಳ್ಳಿ ಚುಕ್ಕಿಯಾಗಿ ಕಂಗೊಳಿಸಿ
ಜಿಂಕೆಯಾಗಿ ನಲಿದಾಡಿದೆ
ನನ್ನೆದೆಯ ಹೊದೋಟದಲ್ಲಿ

ರಾಜು ಹಾಸನ

- ರಾಜು ಹಾಸನ

05 Feb 2018, 09:47 pm

ಕಾಣದೆ ಭಾವ

ನೋಡಿ ನಿನ್ನಯ ಮಂದಹಾಸದ ಜಲಪಾತ
ನಡೆದಿದೆ ಕಂಗಳ ಕಿರು ನೋಟದ
ಸನ್ನೆ ಸತತ
ನೀ ಬಂದು ನೋಡು ಕನಸುಗಳ ಕಾದಾಟದ ಪ್ರತಾಪ
ಮನದ ಆಳದಿ ಮೂಡಿದೆ
ತಿಳಿಯದ ಪ್ರಪಾತ

- Jyothi

05 Feb 2018, 08:47 pm