ಬದಲಿ ಹೃದಯ ಬೇಕು ನನಗೆ
ನೀನು ಬಿಟ್ಟು ಹೋದ ಸಲಿಗೆ
ಕೊನೆಯ ಮನೆಯ ಅಂಗಳದಲ್ಲಿ
ಒಲವ ಬಯಸೋ ಪಾಪಿ ನಾನು.....
ನಕಲಿ ಕನಸ ಕಂಡು ಮನಸು
ಅಸಲಿ ಹೆಸರ ಮರೆತೇ ಹೋಯ್ತು
ಚಿಗುರು ಮರದ ಎಲೆಗಳ ಊರಲೀ
ನಗುವ ತೊರೆದ ದಾಸ ನಾನು.....
###ಕೆ.ಜೆ.ಎಸ್.ಗೌಡ್ರು.ಹುಣಸೂರು.
ಅಪ್ರತಿಮ ದೇಶಪ್ರೇಮಿ
ನಮ್ಮ ಸುಭಾಷ್ ಚಂದ್ರ ಬೋಸ್..
ರಣವಿಕ್ರಮ ವೀರ ಸೇನಾನಿ
ನಮ್ಮ ಸುಭಾಷ್ ಚಂದ್ರ ಬೋಸ್..
ಅಗ್ರಗಣ್ಯ ಕ್ರಾಂತಿಕಾರಿ
ನಮ್ಮ ಸುಭಾಷ್ ಚಂದ್ರ ಬೋಸ್..
ಜನಮಾನ್ಯ ನೇತಾಜಿ
ನಮ್ಮ ಸುಭಾಷ್ ಚಂದ್ರ ಬೋಸ್.." ಪ "
ದೇಶದ ಮುಂದೆ ಐಸಿಎಸ್ ಹುದ್ದೆ ಕೇವಲ ಎಂದು
ದೇಶ ಸೇವೆ ನನಗೆ ಸಕಲ ಎಂದು..
ಕಣ್ಣಲ್ಲಿ ಸ್ವಾತಂತ್ರ್ಯದ ಕನಸು ಕಂಡು
ಗಾಂಧಿಯವರ ಅಹಿಂಸಾ ತತ್ವ ಬೇಡ ಎಂದು..
ಮನದಲ್ಲಿ ದೇಶಭಕ್ತಿ ತುಂಬಿ ಕೊಂಡು
ಸ್ವಾತಂತ್ರ್ಯಕ್ಕಾಗಿ ಸಂಘರ್ಷ ತತ್ವ ಅಸ್ತ್ರ ಮಾಡಿಕೊಂಡು..
ಸಿಂಹ ಸ್ವಪ್ನವಾಗಿ ಬ್ರಿಟಿಷ್ರ ಹುಟ್ಟಡಗಿಸಲು ಹುಟ್ಟಿ ಬಂದರೋ.....""
ಬ್ರಿಟಿಷ್ರ ಬಂಧನದಿಂದ ತಪ್ಪಿಸಿಕೊಂಡು
ದೇಶವಿದೇಶಗಳ ಸಹಾಯ ಪಡೆದುಕೊಂಡು..
ಐಎನ್ಎ ಸೈನ್ಯದ ನಾಯಕತ್ವ ವಹಿಸಿಕೊಂಡು
ದೆಹಲಿ ಚಲೋ ಎಂದು ಗರ್ಜಿಸಿ ಕೊಂಡು..
ಹೆಬ್ಬುಲಿಯಂತೆ ಮತ್ತೆ ನುಗ್ಗಿ ಬಂದರೋ
ಬಿಳಿಯ ದೊರೆಗಳ ಎದೆಯಲ್ಲಿ ಭಯವ ತಂದರೋ..." "
ನರನಾಡಿಯಲ್ಲಿ ಹೋರಾಡುವ ಹುಮ್ಮಸ್ಸು ತುಂಬಿ ಕೊಂಡು..
ರಕ್ತ ಕೊಡು ನನಗೆ ನೀನು ಎಂದು
ಸ್ವಾತಂತ್ರ್ಯ ಕೊಡುತ್ತೇನೆ ನಿನಗೆ ನಾನು ಎಂದು..
ಜೈಹಿಂದ್ ಎಂದು ಘೋಷಣೆ ಮೊಳಗಿಸಿಕೊಂಡು
ಬಿಳಿಯರ ರುಂಡ ಚೆಂಡಾಡಿದರು ನೋಡು..
ಮಾತೃಭೂಮಿಯಲ್ಲಿ ತ್ರಿವರ್ಣ ಧ್ವಜವ ಹಾರಿಸಿದರು ನೋಡು
ಭಾರತಿಯರ ಹೃದಯದಲ್ಲಿ ಅಮರರಾದರೂ ನೋಡು..." "
ಸಾಧನೆಯ ಹಾದಿಯಲಿ ಕಲ್ಲುಮುಳ್ಳುಗಳುಂಟು
ದೃಢ ನಿರ್ಧಾರಗಳು ಮನಸಿನಲ್ಲಿ ಹಾಗೇ ಉಳಿಯಲಿ
ಮಾಡಿದ ಸಂಕಲ್ಪವು ಮರೆಮಾಚದಿರಲಿ ಬದುಕಲಿ
ನೆನಪಿರಲಿ ನಮಗೆ ನಾನೊಬ್ಬ ಸಾಧಕನೆಂಬುವದ.
ಕೆಲಸದಲ್ಲಿ ನೂರೆಂಟು ಅಡಕು ತೊಡಕುಗಳುಂಟು
ಧೈರ್ಯವಿರಲಿ ನಷ್ಟವೊ ಲಾಭವೊ ಅದರೊಳಗುಂಟು
ಹಿಡಿದ ಕಾರ್ಯದಲಿ ಕೈ ಬಿಡದೆ ನಡಿಯುವದು ಬದುಕು
ಅಂಜದಿರಿ ಅಳುಕದಿರಿ ಸಾಧನೆಗೆ ಬೆಳಕು ನಿಮಗುಂಟು.
ಕಷ್ಟಗಳು ಬರುವದು ಮನುಷ್ಯನಿಗೆ ಹೊರೆತು
ಗಿಡ ಮರ ಬಳ್ಳಿ ಕಳ್ಳಿಗಳಿಗಲ್ಲ
ಗಿಡ ಮರಗಳ ಪೋಷಿಸಲು ನೂರು ಜನರುಂಟು ಈ ಜಗದೊಳಗೆ
ನಿನ್ನ ಕಾಲ ಮೇಲೆ ನೀ ನಿಲ್ಲುವದು ಆತ್ಮವಿಶ್ವಾಸ ನಿನ್ನ ಬಲ
ಹೆದರದಿರು ಸಾಧಕ ಗುರಿ ಮುಟ್ಟುವರೆಗು ನೀ ನಿಲ್ಲದಿರು.
ಗುರುವಿನ ಗಾದೆಗೆ ನೀ ತಲೆಬಾಗು
ನೀ ಎದ್ದು ನಿಂತಾಗಲೆ ಎಲ್ಲರು ತಲೆಬಾಗುವರು
ಹಿಡಿದ ಪಟ್ಟನು ಸಾಧಿಸಿ ತೋರಿಸು ಈ ಜಗಕೆ
ಎಂದಿಗು ಹಿಂಜರಿಯದಿರು ಬೇರೊಬ್ಬರ ಮನಕೆ.
ರಾತ್ರಿ ಹಗಲಿರುಳು ಶ್ರಮಿಸುವವನು ಸಾಧಕ
ಹೆದರಿ ಹಿಂದೆ ಸರಿಯುವವನು ನಿಸ್ಸಾಯಕ್
ನಿಮ್ಮ ಆಸೆಗಳ ಬೊಕ್ಕಸಕ್ಕೆ ಹಾಕಿರಿ ಕಡಿವಾಣ
ಇವೆಲ್ಲವನ್ನು ಮೀರಿ ನಿಂತವನೆ ಯೆಶಸ್ವಿ ಸಾಧಕನಾಗುವೆ ನೀ ಜಾಣ.
.......✍ಈಶ್ವರ್ ಬಿ
ಕತ್ತಲೋಂದು ಬಂದು
ಜಗವೆ ಮರೆ ಮಾಚಿದರೆನಂತೆ
ಕತ್ತಲನ್ನೆ ನುಂಗಿ ಬೆಳಕೋಂದ
ಚೆಲ್ಲೋಕೆ ಬರುವನೋಬ್ಬ ಚಂದ್ರ
ಆ ಆಗಸಕ್ಕೆ........ಭೂವಿಯಲ್ಲ
ಬೆಳಂದಿಗಳೆಂಬ ಮುತ್ತು ಮಳೆಗಳ
ಸುರಿಸೋಕೆ.........
ಎಲ್ಲವ ಮರೆತು ಮುದ್ದು ಮುದ್ದಾಗಿ
ಮಗುವಿನಂತೆ ಮಲಗಿರುವ
ಎಲ್ಲರ ಎಬ್ಬಿಸಿ ಅವರ ಗುರಿಯ ನೆನಪಿಸಿ
ಎಲ್ಲರ ಬಾಳ ಬೆಳಗಲೆಂದು
ಮುಂಜಾನೆಯ ಜಗದ ಅಂದವ
ಕಣ್ತುಂಬಿಕೊಳ್ಳಿರೋ
ಎಂದು ಎದ್ದು ಬರುವನೋಬ್ಬ ಸೂರ್ಯ
ಇಡಿ ಭೂಲೋಕವ ಬೆಳಗಲೆಂದು.....ಮುಂಜಾನೆಯ
ಸಹಿ ಮುತ್ತಗಳ ನಿಡೋಕೆ......
ದಿನವೆಲ್ಲ ಸಿಹಿಯಾಗಿರಲೆಂದು....