Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಂಗಾರದ ಪುಟದಂತೆ ತೆರೆದ ಮನ.


ಕೆಸರಾಗಿದೆ ಮನದ ಕೊಳ,
ಗಾಳಕ್ಕೆ ಸಿಲುಕಿದ ಚಿಂತನೆಗಳಲ್ಲಿ.
ಸುಂಟರಗಾಳಿ ಸುತ್ತುತ್ತಿದೆ ನಿರ್ಧಾರವಿಲ್ಲದ ಮೆದುಳಿನಲ್ಲಿ,
ಅಮೃತವನುಣಿಸಿ ಜೊತೆಯಾಗುವವರಿಲ್ಲ ಭೂಮಂಡಲದಲ್ಲಿ.

ಕಲ್ಲಂತೆ ಗಟ್ಟಿಯಾಗಿರಬೇಕು ನಮ್ಮೊಳಗೆ ನಾವು,
ಹಾಲಂತೆ ತಿಳಿಯಾಗಿದ್ದರೆ ಕಾಡದು ನೋವು.
ಸಜ್ಜನರ ಮೊಗದಲ್ಲಿ ಸಂತಸದ ಚೆಲುವು,
ಶುದ್ಧ ಮನಸ್ಸೊಂದು ಮುಗುಳ್ನಗೆಯ ಹೂವು.

ಬೇವಂತ ಕಷ್ಟಗಳ ಅಪ್ಪಿಕೊಳ್ಳಬೇಕು ಮೊದಲು,
ಜ್ಞಾನವಿರಬೇಕು ತಟಸ್ಥ ಗುರಿಯ ವಿಮರ್ಶಿಸಲು.
ಉತ್ಸಾಹದ ಕೆಲಸವೇ ಮಾಧುರ್ಯದ ಸಾಲು,
ಸೃಜನತೆ ಸಂಶೋಧಕರ ಪಾಲು, ಪ್ರಶಸ್ತಿ ಪಡೆಯಲು.

ಬಂಗಾರದ ಪುಟದಂತೆ ತೆರೆದ ಮನ,
ತಾಳ್ಮೆಯ ಸಿರಿಯಲ್ಲಿ ಮೆರೆಯುವ ಚೇತನ.
ಪಾದರಸದಂತೆ ಬೆರೆಯುವರು ಸಮಾಜವನ್ನ,
ಮಾನವ ಬದಲಾಗಿ ಬೆಳೆಸಿಕೊಳ್ಳಬೇಕು ಇಂತಹ ವ್ಯಕ್ತಿತ್ವವನ್ನ.

- nagamani Kanaka

08 May 2025, 04:02 pm

ಕವನ ಸಮಾಜದ ನಂದಾದೀಪ.


ಕಾಯಿ ಸಿಕ್ಕಾಗ ಹಣ್ಣು ಮಾಡುಲು ಹುಡುಕುವ ಪ್ರಯತ್ನದ ಮಾರ್ಗಗಳೇ ಕ್ರಿಯಾಶೀಲತೆ,
ರಸಾ ತುಂಬಿದ ಹಣ್ಣನ್ನು ಬಳಸುವ ವಿಧಾನವೇ ಆತ್ಮಿಯತೆ.

ತಂಪೆರೆವ ವೃಕ್ಷಕ್ಕೆ ನೆಮ್ಮದಿಯ ನೀರಾಗಬೇಕು,
ಸುಸ್ತಿಗೆ ಆಸರೆಯಾದ ನೆರಳನ್ನು ಜೀವನದ ಪಯಣದಲ್ಲಿ ನೆನಪಿಡಬೇಕು.

ಬಾಹ್ಯ ನೋಟ್ಟಕ್ಕೆ ಸೆರೆಯಾಗುವುದು ಪ್ರಕೃತಿಯ ಸೌಂದರ್ಯ,
ವಾಸ್ತವ ಸನ್ನಿವೇಷ ಅರಿಯಲು ತೆರೆಯುವುದು ಉದಾತ್ತ ಗುಣಗಳ ಆಂತರ್ಯ.

ಕಾಲಗಳು ಬದಲಾದಂತೆ ಚಿಂತನೆಗಳು ಬದಲಾಗಬೇಕು,
ಹಿಂದಿನದನ್ನು ಆಪೇಕ್ಷಿಸದೆ ಕಷ್ಟವಾದರೂ ಇಂದಿನ ಜೊತೆ ನಡೆಯಬೇಕು.

ಪ್ರಾಣವಿರದ ದೇಹಕ್ಕಿಲ್ಲ ಮೌಲ್ಯ,
ನಿರ್ಧಾರಿತ ಹೃದಯಕ್ಕೆ ಅರ್ಥವಾಗದು ಭಿನ್ನಹದ ತಾತ್ಪರ್ಯ.

ಬಿದ್ದಾಗ ಎತ್ತಿದವರು ನನ್ನವರೆಂದು ಬೀಗಬೇಡ,
ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿ ಮುಂದೆ ನಡೆಯಬೇಕು ನೋಡ.

ಬಯಕೆಗಳ ಸಾಲು ತಿರಸ್ಕಾರದ ಪ್ರತೀಕ,
ವಿನಮ್ರತೆಗೆ ತೆರೆಯದ ಸ್ನೇಹ ನಿರರ್ಥಕ.

ಪಡೆದ ಜ್ಞಾನದ ಅನುಭವಗಳೇ ಮುಂದಿನಮಾರ್ಗದರ್ಶಕ,
ಸಮಾಜದ ನಂದಾದೀಪವಾಗಿ ನೊಂದವರ ಕಣ್ಣೀರೊರೆಸುವುದೇ ಸಾರ್ಥಕ.

- nagamani Kanaka

08 May 2025, 03:57 pm

ಅವಳು

ಅವಳನು ನೋಡಲು ಸಾಲದು ನನ್ನ ಎರಡು ಕಣ್ಣು...!
ಅವಳಿಗಾಗಿ ಆದರೂ ಸರಿಯೆ ನಾ ಮಣ್ಣಲ್ಲಿ ಮಣ್ಣು...!
ಅವಳೆ ನನ್ನ ಮನೆಯ ದೀಪ ಹಚ್ಚುವ ಹೆಣ್ಣು.............!!

- Harish Gowda

08 May 2025, 09:05 am

ಚಿಕನ್ ಪ್ರಭಾವ

ದೇಹಕ್ಕೆ ಕೊಡದಿದ್ದರೆ ದಂಡನೆ....................!
ದೇಹ ಆಗುವುದು ದುಂಡನೆ........................!
ಮನಸು ಎಷ್ಟೇ ಮಾಡಿದರು ಖಂಡನೆ.............!
ನಾಲಿಗೆ ಮಾತ್ರ ಕೇಳುವುದು ಚಿಕನ್ ತುಂಡನೆ...!!

- Harish Gowda

04 May 2025, 11:45 am

ಮನದ ಮಾತು

ಹೇಳಿಬಿಡಲೇ ನಾನು ನಿನಗೆ
ನನ್ನೊಳಗವಿತಿರುವ ಗುಟ್ಟು
ಮನದ ಬೇಗೆಯನರುಹಿ
ಹಗುರಾಗಬೇಕಿದೆ ಈ ಹೃದಯವು
ಪ್ರೀತಿಯ ಅಪ್ಪುಗೆಯ
ಬಯಸಿದೆ ಈ ಮನವು
ಸಂತೈಸುವ ಹೊಣೆ ಈಗ ನಿನ್ನದು.....
ಅತ್ತು ಹಗುರಾಗಲು
ಬೇಕಿದೆ ಮಮತೆಯ ಮಡಿಲು
ನೀ ತೋರುವೆಯಾ ಭರವಸೆಯ ಬೆಳಕು
ಮೌನದಿ ಕಾಳಜಿಯ, ಪ್ರೇಮದ ಒಲುಮೆಯ
ನೀಡುವೆಯಾ ನನಗಾಗಿ ನೀನು.....
ಇರುವೆಯಾ ನನ್ನೊಂದಿಗೆ ಎಂದೂ.....

- ಸಖೀ

26 Apr 2025, 09:25 pm

ಕುಡಿದರೆನಾಯ್ತು ಅಪ್ಪನ ಪ್ರೀತಿ ಪ್ರೀತಿಯೆ ಅಲ್ಲವೆ

ಅಮ್ಮಾ ಜ್ವರ ಬಂದಿದೆ ಎಂದು ಹೇಳುತ್ತಲೇ ಪರೀಕ್ಷೆಗೆ ಹೊರಡಲು ತಯಾರಿಯಲ್ಲಿದ್ದ ಮಗಳು ಅಪ್ಪನ ನೋಡಿದ ಆಕೆ ಅಪ್ಪಾ ನನ್ನ ಪರೀಕ್ಷೆ ಮುಗಿಸುವಷ್ಟರಲ್ಲೆ ನಿನು ನನ್ನ ಕರೆಯಲು ಬರಲೆ ಬೇಕೆಂದು ಹಠ ಮಾಡುವಷ್ಟರಲ್ಲೆ ಶಾಲಾ ವಾಹನ ಬಂದಿತ್ತು ಅಳುತ್ತಲೆ ಹೋರಟ ಮಗಳಿಗೆ ಪರೀಕ್ಷೆ ಚೆನ್ನಾಗಿ ಬರಿ ಮಗಳೇ ನಾ ನಿನ್ನ ಕರೆಯಲು ಸ್ವಲ್ಪ ಬೇಗನೆ ಬರುವೆ ಎಂದು ಹೇಳಿ ಮಗಳನ್ನ ಸಮಾಧಾನ ಮಾಡಿ ತನ್ನ ನಿತ್ಯದಂತೆ ಅಡವಿಗೆ ಹೋದ ಅಪ್ಪಾ.....
ಕೆಲಹೊತ್ತಾದ ಮೇಲೆ ಅಡವಿಯಿಂದ ಮನೆಗೆ ಬಂದ ಅಪ್ಪನಿಗೆ ನೆನಪಾದ ಮಮತೆಯ ಮಗಳ ಮಾತು... ಹೆಂಡತಿಗೆ ಹೇಳಿದನಂತೆ ಬೇಗ ಊಟ ಬಡಿಸು ಮಗಳ ಪರೀಕ್ಷೆ ಮುಗಿಯುವ ಸಮಯವಾಗಿದೆ ನಾ ಹೋಗಬೇಕೆಂದು ಆತುರದಿಂದಲೇ ಊಟ ಮುಗಿಸಿ ಹೋರಟ ಅಪ್ಪ ತನ್ನ ಗಂಡ ಕುಡಿದಿಲ್ಲವೆಂದು ಖುಷಿಯಿಂದಲೇ ಊಟ ಬಡಿಸಿದ ಹೆಂಡತಿಗೆ ಗೊತ್ತಿರಲಿಲ್ಲ ಮುಂದೆನಾಗುತ್ತೆ ಅನ್ನುವುದು.
ಇನ್ನೇನು ಶಾಲೆಗೆ ತಲಪುವಷ್ಟರಲ್ಲೆ ಗಮನ ಸೆಳೆದ ಕೆಟ್ಟ ಚಟ ಕುಡಿಯುವಂತೆ ಮಾಡಿ ನಶೆ ಮಾಡಿ ಬಿಟ್ಟಿತ್ತು ನಶೆಯಲ್ಲೆ ಶಾಲೆಗೆ ಹೋದ ಅಪ್ಪನನ್ನು ಮುಕ್ಯದ್ವಾರದಲ್ಲಿ ನಿಂತಿದ್ದ ಕಾವಲುಗಾರ ಒಳ ಹೋಗಲು ಬಿಡದ ಕಾರಣ ದ್ವಾರದ ಬಳಿಯೇ ಮಲಗಿರುತ್ತಾನೆ.
ಅಪ್ಪ ಬಂದಿರುತ್ತಾನೆಂದು ಪರೀಕ್ಷೆ ಮುಗಿಸಿ ಖುಷಿಯಿಂದ ಹೊರಬಂದ ಮಗಳು ನಶೆಯಲ್ಲಿದ್ದ ಅಪ್ಪನಿಗೆ ಹೊಡೆಯುತಿದ್ದ ಕಾವಲುಗಾರನ ಅಳುತ್ತಲೆ ತಡೆದು ಇವ್ರು ನಮ್ಮ ಅಪ್ಪಾ ಎಂದು ಹೇಳಿದ ಆಕೆ ಅಪ್ಪಾ.... ಎದ್ದೇಳಪ್ಪಾ... ಎಲ್ಲರು ಇ ಕಡೆಯೆ ನೋಡುತ್ತಿದ್ದಾರೆಂದು ಅಪ್ಪಣೆದೆಯ ಮೇಲೆ ಅಳುತ್ತಿದ್ದ ಆ ಮಗು ಹೋಗು ಬರುವವರಿಗೆಲ್ಲ ನಮ್ಮಪ್ಪನನ್ನ ಎಬ್ಬಿಸಿ...! ಏನಾಗಿದೆ ನೋಡಿ ಅಂಕಲ್ ಎಂದು ಗೋಗರೆದರೂ ಯಾರು ನೋಡಲೆ ಇಲ್ಲ ಆ ಮಗುವಿನ ಸಂಕಟ; ಕೆಲಕ್ಷಣಗಳ ಮೇಲೆ ಅಪ್ಪಣೆದೆಯ ಮೇಲೆ ಮಲಗಿಬಿಟ್ಟಿತ್ತು ಆ ಮಗು...!
ನಶೆಯಿಂದ ಹೊರಬಂದ ಅಪ್ಪನಿಗೆ ಕಂಡ ತನ್ನ ಕಂದಮ್ಮಗಳಿಗೆ ಬಿಗಿದಪ್ಪಿ ಅತ್ತು... ಮತ್ತೇ ಮನೆ ಕಡೆಗೆ ಹೋರಟ ಅಪ್ಪ ಮಗಳು...

- Shreya Ramaje

25 Apr 2025, 09:35 pm

ಅವನು ❤️

ನನಗಾಗಿ ನಡು ರಾತ್ರಿ ಎದ್ದು
ಕುಂತವನು.....
ನನ್ನ ಒಂದು ಮಾತಿಗಾಗಿಯೇ
ಕಾಯುತ್ತಿರುವನು...
ನನ್ನಿಂದಲೇ ತನ್ನ ಮನಸ್ಸನ್ನು
ಕೆಡಿಸಿಕೊಂಡವನು..
ನನ್ನನೇ ಹೃದಯದ ರಾಣಿಯೆನ್ನಾಗಿ
ಮಾಡಿಕೊಂಡವನು..
ನನ್ನ ಜೊತೆಯಾಗಿ ಇರಲು
ಬಯಸಿದವನು....
ನನ್ನ ಪ್ರೀತಿಗಾಗಿ ಇಗಲು ಸಹ
ಹವನಿಸುತ್ತಿರುವನು...
ನನ್ನ ಭೇಟಿಗಾಗಿಯೇ
ಕಾಯುತ್ತಿರುವನು...
ಸಿಗಲಾರದ ಅದೃಷ್ಟವಂತ ಅವನು
ಮರೆಲಾಗದ ಅವನ ಪ್ರೀತಿ ನಾನು
ಇಂತಿ ನಿನ್ನವಳು
ಶ್ರೀ ❤️??☺️?

- Prabha Magadum

25 Apr 2025, 03:03 pm

ನನ್ನವನು ❤️

ಆಕಸ್ಮಿಕವಾಗಿ ನಿನ್ನ ಪರಿಚಯ,
ಮೌನದಲ್ಲಿ ಅರಳಿದ
ಅನುರಾಗವಾಯಿತು.
ಸಿಗದೆ ಇದ್ದರೂ ಹೃದಯದ ಗುಡಿಯೊಳಗೆ
ನಕ್ಷತ್ರದಂತೆ ಹೊಳೆಯುವೆ ನೀನು.

ನೀನು ನನ್ನ ಶ್ಯಾಮ, ನಾನು ನಿನ್ನ ರಾಧೆ,
ಅವಕಾಶ ಸಿಕ್ಕರೆ, ಮುಂದಿನ ಜನ್ಮದಲ್ಲಿ
ಹುಟ್ಟಿ ಬರುವೆ ನಿನಗಾಗಿ ಮಾತ್ರ,
ನಿನ್ನವಳಾಗಿ,ನಿನ್ನಲೇ ಲೀನವಾಗಲು,


ಇಂತಿ ನಿನ್ನವಳು
ಶ್ರೀ ?❤️

- Prabha Magadum

24 Apr 2025, 02:47 pm

ಕುಡಿದರೆನಾಯ್ತು ಅಪ್ಪನ ಪ್ರೀತಿ ಪ್ರೀತಿಯೆ ಅಲ್ಲವೆ

ಅಮ್ಮಾ ಜ್ವರ ಬಂದಿದೆ ಎಂದು ಹೇಳುತ್ತಲೇ ಪರೀಕ್ಷೆಗೆ ಹೊರಡಲು ತಯಾರಿಯಲ್ಲಿದ್ದ ಮಗಳು ಅಪ್ಪನ ನೋಡಿದ ಆಕೆ ಅಪ್ಪಾ ನನ್ನ ಪರೀಕ್ಷೆ ಮುಗಿಸುವಷ್ಟರಲ್ಲೆ ನಿನು ನನ್ನ ಕರೆಯಲು ಬರಲೆ ಬೇಕೆಂದು ಹಠ ಮಾಡುವಷ್ಟರಲ್ಲೆ ಶಾಲಾ ವಾಹನ ಬಂದಿತ್ತು ಅಳುತ್ತಲೆ ಹೋರಟ ಮಗಳಿಗೆ ಪರೀಕ್ಷೆ ಚೆನ್ನಾಗಿ ಬರಿ ಮಗಳೇ ನಾ ನಿನ್ನ ಕರೆಯಲು ಸ್ವಲ್ಪ ಬೇಗನೆ ಬರುವೆ ಎಂದು ಹೇಳಿ ಮಗಳನ್ನ ಸಮಾಧಾನ ಮಾಡಿ ತನ್ನ ನಿತ್ಯದಂತೆ ಅಡವಿಗೆ ಹೋದ ಅಪ್ಪಾ.....
ಕೆಲಹೊತ್ತಾದ ಮೇಲೆ ಅಡವಿಯಿಂದ ಮನೆಗೆ ಬಂದ ಅಪ್ಪನಿಗೆ ನೆನಪಾದ ಮಮತೆಯ ಮಗಳ ಮಾತು... ಹೆಂಡತಿಗೆ ಹೇಳಿದನಂತೆ ಬೇಗ ಊಟ ಬಡಿಸು ಮಗಳ ಪರೀಕ್ಷೆ ಮುಗಿಯುವ ಸಮಯವಾಗಿದೆ ನಾ ಹೋಗಬೇಕೆಂದು ಆತುರದಿಂದಲೇ ಊಟ ಮುಗಿಸಿ ಹೋರಟ ಅಪ್ಪ ತನ್ನ ಗಂಡ ಕುಡಿದಿಲ್ಲವೆಂದು ಖುಷಿಯಿಂದಲೇ ಊಟ ಬಡಿಸಿದ ಹೆಂಡತಿಗೆ ಗೊತ್ತಿರಲಿಲ್ಲ ಮುಂದೆನಾಗುತ್ತೆ ಅನ್ನುವುದು.
ಇನ್ನೇನು ಶಾಲೆಗೆ ತಲಪುವಷ್ಟರಲ್ಲೆ ಗಮನ ಸೆಳೆದ ಕೆಟ್ಟ ಚಟ ಕುಡಿಯುವಂತೆ ಮಾಡಿ ನಶೆ ಮಾಡಿ ಬಿಟ್ಟಿತ್ತು ನಶೆಯಲ್ಲೆ ಶಾಲೆಗೆ ಹೋದ ಅಪ್ಪನನ್ನು ಮುಕ್ಯದ್ವಾರದಲ್ಲಿ ನಿಂತಿದ್ದ ಕಾವಲುಗಾರ ಒಳ ಹೋಗಲು ಬಿಡದ ಕಾರಣ ದ್ವಾರದ ಬಳಿಯೇ ಮಲಗಿರುತ್ತಾನೆ.
ಅಪ್ಪ ಬಂದಿರುತ್ತಾನೆಂದು ಪರೀಕ್ಷೆ ಮುಗಿಸಿ ಖುಷಿಯಿಂದ ಹೊರಬಂದ ಮಗಳು ನಶೆಯಲ್ಲಿದ್ದ ಅಪ್ಪನಿಗೆ ಹೊಡೆಯುತಿದ್ದ ಕಾವಲುಗಾರನ ಅಳುತ್ತಲೆ ತಡೆದು ಇವ್ರು ನಮ್ಮ ಅಪ್ಪಾ ಎಂದು ಹೇಳಿದ ಆಕೆ ಅಪ್ಪಾ.... ಎದ್ದೇಳಪ್ಪಾ... ಎಲ್ಲರು ಇ ಕಡೆಯೆ ನೋಡುತ್ತಿದ್ದಾರೆಂದು ಅಪ್ಪಣೆದೆಯ ಮೇಲೆ ಅಳುತ್ತಿದ್ದ ಆ ಮಗು ಹೋಗು ಬರುವವರಿಗೆಲ್ಲ ನಮ್ಮಪ್ಪನನ್ನ ಎಬ್ಬಿಸಿ...! ಏನಾಗಿದೆ ನೋಡಿ ಅಂಕಲ್ ಎಂದು ಗೋಗರೆದರೂ ಯಾರು ನೋಡಲೆ ಇಲ್ಲ ಆ ಮಗುವಿನ ಸಂಕಟ; ಕೆಲಕ್ಷಣಗಳ ಮೇಲೆ ಅಪ್ಪಣೆದೆಯ ಮೇಲೆ ಮಲಗಿಬಿಟ್ಟಿತ್ತು ಆ ಮಗು...!
ನಶೆಯಿಂದ ಹೊರಬಂದ ಅಪ್ಪನಿಗೆ ಕಂಡ ತನ್ನ ಕಂದಮ್ಮಗಳಿಗೆ ಬಿಗಿದಪ್ಪಿ ಅತ್ತು... ಮತ್ತೇ ಮನೆ ಕಡೆಗೆ ಹೋರಟ ಅಪ್ಪ ಮಗಳು...

- Shreya Ramaje

24 Apr 2025, 01:05 pm

ನನ್ನವನು ❤️??

ಪನ್ನೀರಿನ ಅಭಿಷೇಕ ಮಾಡಬೇಕೆಂದಿದ್ದೆ
ನನ್ನವನಿಗೆ
ಕಣ್ಣೀರಿನ ಅಭಿಷೇಕ ಮಾಡುತ್ತಿರುವೆ ತಲೆದಿಂಬಿಗೆ
ಅಲೆಮಾರಿ ಮನಸ್ಸು ಅಲೆದ ಅಲೆದು ದಣಿದಿದೆ
ತುಸುಕಾಲ ನೀಡುವೆಯ ನಿನ್ನ ಮಡಿಲ ಆಸರೆ
ಆದರೆ ನೀ ಯಾಕೆ ನನ್ನ ಬಿಟ್ಟು ಹೋದೆ
ಎಂದು ಇಂದಿಗೂ ತಿಳಿಯದು
ನನಗೆ
ಮತ್ತೆ ಬರುವೆಯಾ ನೀ
ಮರಳಿ ??
ನಿನ್ನ ಪ್ರೀತಿಯ
ಶ್ರೀ ❤️?




- Prabha Magadum

21 Apr 2025, 10:01 pm