Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹಾವು ಏಣಿ ಆಟ

ನೂರು ಹಾವು ಕಚ್ಚಿದರು ನಿಲ್ಲದು ಏಣಿಯ ಹುಡುಕಾಟ
ಇದೆ ಅಲ್ಲವೆ ಜೀವನ ಕಲಿಸುವ ಪಾಠ
ಹಾವು ಏಣಿ ಅದೃಷ್ಟದ ಆಟವಂತೆ
ಜೀವನವಲ್ಲವೆ ನಿಜವಾದ ಅದೃಷ್ಟದಾಟ

ಅಲ್ಲಿ ಯಾರೋ ಅರಮನೆಯಲ್ಲಿ ಹುಟ್ಟಿದರು
ಇಲ್ಲಿ ಯಾರನ್ನೋ ಮುಳ್ಳಿನ ಬಲೆಯಲ್ಲಿ ಬಿಸಾಡಿದರು
ಅಲ್ಲಿ ಯಾರಿಗೋ ತಾಯಿಯೇ ದೇವತೆ
ಇಲ್ಲಿ ಯಾವುದೋ ಮಗುವಿಗೆ ತಾಯಿಯೇ ಮುಳ್ಳಾದಳು
ಜೀವನವಲ್ಲವೆ ನಿಜವಾದ ಅದೃಷ್ಟದಾಟ

- rashmi maladkar

23 Jan 2025, 06:45 pm

ನದಿ ಮತ್ತು ಕಡಲು ............

ಭವದ ಬಾವ ಬಾವನೆಗಳ ನೆನಪುಗಳ ಸರಮಾಲೆ
ತಂಗಾಳಿಯಂತೆ ಬೀಸುತಿತ್ತು ಮನಸ್ಸಿಗೆ ನೆಮ್ಮದಿ ತರುತ್ತಿತ್ತು ಅಲೆಯಲ್ಲಿ ಅಲೆ ಅಲೆಯಾಗಿ ತೇಲುವ ಮೋಡಗಳಲ್ಲಿ ಅವಿತರುವ ಆ ಬೆಟ್ಟಗುಡ್ಡಗಳನ್ನೆಲ್ಲ ಅಲೆಮಾರಿಯಂತೆ ಅಲೆದೆಲದು ಅದೇ ಸಾಲಿನ ಯಾವುದೋ ಬೆಟ್ಟವನ್ನು ಹತ್ತಿ ತುದಿಯಲ್ಲಿರುವ
ಆ ಒಂಟಿ ಬೇವಿನ ಮರದ ನೆರಳಲ್ಲಿ ಹರಡಿಕೊಂಡ
ಶತಮಾನಗಳ ಕಂಡ ಬಂಡೆಯ ಮೇಲೆ ಕುಳಿತು
ಸುತ್ತಲೂ ನೋಡಿದೆ ಆ ಹಚ್ಚ ಹಸುರಿನ ಪ್ರಕೃತಿಯ ಮಡಿಲು ಮೌನವನ್ನು ಮರೆಯುವಂತೆ ಮಾಡುವ
ಹಕ್ಕಿಗಳ ಚೆಲಿಪಿಲಿಯ ನಿನಾದ ಗಂದರ್ವ ಗಾನ
ಬದುಕಿನ ಅರ್ಥ, ನಿರರ್ಥಕತೆಯ ಬಗ್ಗೆ ಯೋಚಿಸುತ್ತ
ಆಕಾಶವನ್ನೊಮ್ಮೆ ದಿಟ್ಟಿಸುತ್ತ ಮಲಗಿದೆ.
........... ......... .........,

ಅನಾದಿಕಾಲದಿಂದ ಬೀಳುತ್ತಿರುವ ಸುರಿಮಳೆ,
ಜಡಿಮಳೆ, ಬಿರುಮಳೆ, ತುಂತುರು ಮಳೆ
ಜಿನಗು ಮಳೆಗಳ ಹನಿಗಳೆಲ್ಲ ಸೇರಿ ಚಿಕ್ಕ ಚಿಕ್ಕ
ತೊರೆಗಳಾಗಿ ಬಾಗಿ,ಬಳುಕಿ ಜಿಗಿದು ನಲಿದು ದುಮ್ಮಿಕ್ಕಿ ಪುಟಿದೆದ್ದು ಜಲಪಾತಗಳಾಗಿ ಯಾವುದೋ ಕಂದಕ
ಕಣಿವೆಗಳಲ್ಲಿ ಒಂದಾಗಿ ವರ್ತಮಾನದರೂಪ ಪಡೆದುಕೊಳ್ಳುತ್ತ ಎಲ್ಲ ಅಡೆತಡೆಗಳನ್ನು ದಾಟಿ ಋತುಮಾನ, ಕಾಲಮಾನಗಳಿಗೆ ತಕ್ಕಂತೆ ಹಿಗ್ಗುತ್ತ, ಕುಗ್ಗುತ್ತ, ಕರಗಿ, ಮರೆಯಾಗಿ, ಮರುಹುಟ್ಟು ಪಡೆಯುತ್ತ , ಅಲ್ಲಲ್ಲಿ ಹರಿವ ಹಳ್ಳಕೊಳ್ಳಗಳೆನ್ನೆಲ್ಲ ಒಡಲ್ಲಲ್ಲಿ ತುಂಬಿಕೊಳ್ಳುತ್ತ ಹರಿವು, ಹರವುಗಳನ್ನು ಬದಲಿಸುತ್ತ ಕ್ರಮಿಸುವಹಾದಿಯನ್ನು ಅನ್ವೇಷಿಸುತ್ತ ಸಕಲ ಜೀವರಾಶಿಗಳ ಜೀವಗಂಗೆಯಾಗಿ ಬದುಕಿನ ಸ್ಪೂರ್ತಿಯಾಗಿ ಸೃಷ್ಟಿಗೆ ಮರುಸೃಷ್ಠಿಯ ಕೊಡುಗೆಯ ನೀಡುತ್ತ ತನ್ನದೇ ಪ್ರಭಾವಳಿಯೋಂದನ್ನು ಬೆಳಸುತ್ತ
ತನ್ನ ಗುರಿ ಕಡೆಗೆ ಸಾಗುತಿತ್ತು.
...... ....... .......



ಯಾರೋ ಕೂಗಿ ಕರೆದಂತಾಗಿ ಎಚ್ಚರಗೊಂಡು
ಆ ದಿಕ್ಕಿನ ಕಡೆ ಹೋದೆ..............
ಆ ದನಿ ನದಿಯ ಸಮೀಪಕ್ಕೆ ಕರೆದೊಯ್ದಿತ್ತು.
ನದಿ ತನ್ನಷ್ಟಕ್ಕೆ ತಾನೆ ಆ ಪರಿಸರದ ತಾಳಕ್ಕೆ ತಕ್ಕಂತೆ
ರಾಗಬದ್ಧವಾಗಿ ಸುಶ್ರಾವ್ಯಾಗಿ ಹಾಡೊಂದನ್ನು ಹಾಡಿಕೊಳ್ಳುತಿತ್ತು. ನಾನು ಬಂದ ಕ್ಷಣಕ್ಕೆ ಹಾಡು
ನಿಲ್ಲಿಸಿ ಎಂದೋ ಪರಿಚಯವಿದ್ದಂತೆ ಮಾತೆಗಳೆದು
ತನ್ನ ಕಥೆಗಳನ್ನು ಹೇಳತೊಡಗಿತು .......,
........ ........ ........,

ನದಿ ತನ್ನ ಪಾತ್ರ ಹಿಗ್ಗಿಸುತ್ತ ವೇಗ ಹೆಚ್ಚಿಸುತ್ತ
ಗಮ್ಯ ಅಂದರೆ ಕಡಲನ್ನು ಸೇರುವ ಬಯಕೆ
ನಾನು ಅದನ್ನು ಅನುಸರಿಸುತ್ತ ಹೋದೆ
ಆ ತೀರದಲ್ಲಿ ನೆಡೆದು ಸಮುದ್ರಡದೆಗೆ
ನೇರವಾಗಿ ಹೊರಟೆ ಅವಳ ನಗು
ನಗುವಿನ ಅಲೆಗಳಾಗಿ ಮಾರ್ಪಟ್ಟು
ನನ್ನ ಪಾದಗಳನ್ನು ಸೋಕುತ್ತ ತನ್ನ ಎತ್ತರವನ್ನು
ಹೆಚ್ಚಿಸಿಕೊಳ್ಳುತ್ತಾ ಸಾಗುತ್ತಿದ್ದವು
ಅವಳು ಮತ್ತು ಅವಳ ನಗು ದೃಶ್ಯಕಾವ್ಯದಂತೆ
ಗೋಚರವಾಗತೊಡಗಿತು ನಾನು ತಿರುಗಿ ನೋಡದೆ
ಅವಳತ್ತ ಸಾಗಿದೆ ಆ ನಗುವಿನ ಅಲೆಗಳು
ನನ್ನ ಎದೆಯನ್ನು ಸ್ಪರ್ಶಿಸುತ್ತಿದ್ದಂತೆ ಬೆಳಕು ಚಿಮ್ಮಿದಂತಾಯಿತು ಅವಳು ತುಂಬಾ ಪ್ರೀತಿಯಿಂದ ಅರ್ದ್ರವಾಗಿ ನೋಡುತ್ತ ನನ್ನೆಡೆಗೆ ಕೈ ಚಾಚಿದಳು
ನಾನು ಕೈ ಚಾಚಿದೆ ಅಷ್ಟೇ.........
........, .......... ........,.
ಕಡಲು ಕೇಳಿತು " ನಾನೆಂದರೆ ಯಾಕೆ ಇಷ್ಟೊಂದು ಇಷ್ಟ ನಿನಗೆ?"
ನಾನು ಹೇಳಿದೆ "ನೀನು ನನ್ನ ಮನಸ್ಸಿನ ಅಭಿವ್ಯಕ್ತಿ ".
........,..............
(ದಿ.ಶ್ರೀ ನಾ ಡಿಸೋಜರವರ ಸ್ಮರಣೆ ಮತ್ತು ಆ
ಪಶ್ಚಿಮಘಟ್ಟಗಳ ನೆನಪು)

- ಶಶಿಧರ ಹೆಚ್ ಎನ್

23 Jan 2025, 09:31 am

ಒಲವು

ನವಿರಾದ ಭಾವನೆಗಳ ಕಲರವ...... ಕಣ್ಣ ಪ್ರತಿ ಕಂಬನಿ ಭೂ ಸ್ಪರ್ಶಿಸುವ ಮೊದಲೆ ಸಾಂತ್ವನ ನೀಡುವ ಜೀವ..... ಪರಿಶುದ್ದ ಹೃದಯಗಳ ಸಮಾಗಮ.........

...........ಪ್ರೀತಿಯಾ ಅಮ್ಮ & ಅಪ್ಪ ?

- Chaitra Patil

22 Jan 2025, 10:47 pm

ಜೀವನ?

"ಸೋಲು ಗೆಲುವುಗಳ ಅನಿರೀಕ್ಷಿತ ಬಂಧನ..... ವ್ಯಕ್ತಿಗಳ ವ್ಯಕ್ತಿತ್ವ ತಿಳಿಸುವ ಮೊದಲ ಕನ್ನಡಿ.......... ಭಾವನೆಗಳ ಭೂಗತ ಲೋಕದ ಧೋರೆ........ ಅಪರೂಪದ ಬಂಧನಗಳ ಸಮಾಘಮ...ವೆ... ನಮ್ಮ ಈ ಅಪರೂಪದ ಜೀವನ............."

.........ನಂದನ?

- Chaitra Patil

21 Jan 2025, 11:06 pm

ಜವಾಬ್ದಾರಿ

ರೆಕ್ಕೆ ಕಟ್ಟಿ ಬಾನೆತ್ತರಕ್ಕೆ ಹಾರಿದ್ದೆ ಅಂದು

ರೆಕ್ಕೆ ಮುರಿದು ಕೂತಿಹೆ ನಾನಿಂದು

ನನಸಾಗದೇ ನನ್ನಲ್ಲೇ ಉಳಿದಿದೆ ಕನಸೊಂದು

ಒಡೆದೋಗುತಿದೆ ಕನಸ್ಸು

ಜವಾಬ್ದಾರಿಯು ಹೆಗಲೇರಿ

ಧೈರ್ಯ ಮಾಡುತಿಲ್ಲ ಮನಸ್ಸು

ಕಾಲು ಚಾಚಲು ಹಾಸಿಗೆ ಮೀರಿ

✍? ಯಕ್ಷ

- pavan

18 Jan 2025, 10:16 am

ಶಿವನೇ ಕೇಳಿಸುತ್ತಿರುವುದೇನಪ್ಪ...

"ಕೊಟ್ಟಾದರು ಕೋಡು ಶಿವನೇ..
ಅವಳ ಸೂಚನೆಯೆನ್ನೆ.!
ಎಷ್ಟು ಕಾಯೋದು ನಾ_ಅವಳನ್ನ.!
ಇನ್ನೆಷ್ಟು ಪರೀಕ್ಷೆ ಮಾಡ್ತಿಯಪ್ಪ..
ನನ್ನ ತಾಳ್ಮೆಯನ್ನ.!
ಆದಷ್ಟು ಬೇಗನೆ ಕರಣಿಸೋ ಶಿವನೇ..
ನನ್ನವಳನ್ನ.!
ಅವಳಿಗೂ ತಿಳಿಸೋ ಶಿವನೇ..
ನಾ_ಅವಳ ಆಗಮನವ
ನಿರೀಕ್ಷಿಸುತ್ತಿರುವುದನ್ನ.!!"
ಎಮ್.ಎಸ್.ಭೋವಿ...✍️
.
.
.
.
.
.

- mani_s_bhovi

18 Jan 2025, 12:07 am

ಅಡಿ ಇಡಲು ನೀ ಚುಂಬಿಸುವುದು ಭೂತಾಯ ಮಡಿಲು
ನಗುತಾ ನನ್ನೆಡೆ ಬರುತಿರೆ ನಾಚುವುದು ಬೆಳ್ಮುಗಿಲು
ಕೋಪದಲ್ಲಿರೇ ನೀ ಕಾರ್ಮೋಡ ಸೀಳುವ ಬೆಂಕಿ ಸಿಡಿಲು
ಮೌನ ಮಾತಾಗಲು ಸದಾ ಭೋರ್ಗರೆವ ನೀಲಿ ಕಡಲು

✍? ಯಕ್ಷ

- pavan

17 Jan 2025, 08:01 pm

ದಿನಚರಿ

ಹೊತ್ತಾಗಲು ಕಾಫಿ ಹೀರಿ
ಮತ್ತೆ ಕೆಲಸ ಮಾಡಲು ಮತ್ತೇರಿ
ಕೆಳಗಿಳಿಸಲು ಜವಾಬ್ದಾರಿ
ದುಡಿವುದಾಗಿದೆ ದಿನಚರಿ
✍? ಯಕ್ಷ

- pavan

17 Jan 2025, 10:09 am

ಜೀವನ

ಎತ್ತ ಸಾಗುತ್ತಿದೆ ಈ ಯಂತ್ರದ ಜೀವನ
ಕೋನೆಯಾಗುತ್ತಿದೆ ಸುಖಕರ ಪಯನ

ಚಿಕ್ಕಮಕ್ಕಳಲ್ಲಿ ಹೆಚ್ಚುತ್ತಿದೆ ಮೊಬೈಲ್ ಗೀಳು
ಕೇಳುವರಿಲ್ಲ ತಂದೆ ತಾಯಿಗಳ ಗೋಳು

ಯುವಕರು ದಾಸರಾಗಿದ್ದಾರೆ ಪಬ್ಬು
ಡಾನ್ಸ್ ಗಳಿಗೆ
ಅಟೆಂಡೆನ್ಸ ಕಡಿಮೆಯಾಗುತ್ತಿದೆ ಕಾಲೇಜುಕ್ಲಾಸಗಳಿಗೆ

ಎಲ್ಲೆಲ್ಲೂ ತಾಂಡವಾಡುತ್ತೀದೆ ಹಿಂಸೆ
ಪುಸ್ತಕದಲ್ಲಿ ಮಾತ್ರ ಉಳಿದಿದೆ ಅಹಿಂಸೆ

ಪರಿಸರದಲ್ಲಿ ಹೆಚ್ಚುತ್ತಿದೆ ಕಾಡ್ಗಿಚ್ಚು
ಮನುಷ್ಯರಲ್ಲಿ ಕಡಿಮೆಯಾಗುತ್ತಿದೆ ಬಾಂಧವ್ಯದ ಕಿಚ್ಚು

ಅಂತ್ಯದ ಹತ್ತಿರವಾಗುತ್ತಿದೆ ಯುಗದ ಪಯನ
ಸಾಕಾರಗೊಳಿಸಿ ಈ ಸಂತೋಷದ ಜೀವನ

ವಿಶಾಲಾ ಮಂಜುನಾಥ

- laxmi

16 Jan 2025, 11:15 pm

ಕವನದ ಶೀರ್ಷಿಕೆ ಕರುಳ ದನಿ.


ಬತ್ತಿದ ಭಾವಕೆ ಕೊಳಲ ನಾದವಾದೆ, 

ಔಷಧಿ ಇರದ ಗಾಯಕ್ಕೆ ಮುತ್ತಿನ ಹನಿಯಾದೆ. 


ಉದರದ ಕಿಚ್ಚಿಗೆ ತುಂತುರು ಮಳೆಯಾದವನೆ, 

ಅಮ್ಮನ ಕರುಳ ದನಿ ನೀನೇ ಮಗನೆ. 


ಬಡತನದ ಸೂರಿಗೆ ಬಂದ ಚಂದ್ರನೇ ಬಹುಮಾನ, 

ದುಃಖವ ಮರೆಸುತ್ತಿತ್ತು ನಿನ್ನ ಕಿಲಕಿಲ ನಗೆಯ ನರ್ತನ. 


ಸೋರುವ ಕುಂಭದಂತೆ ನಿಲ್ಲದ ಕಷ್ಟಗಳು, 

ಕರುಳ ಬಳ್ಳಿಯನಗಲಿಸಿದವು ಆ ದಿನಗಳು. 


ಬಿಡುಗಾಸಿರದ ಸಮಯದಲ್ಲಿ ಬೆಳೆದಿರುವಿರಿ ನೀವ್, 

ನೆರೆಹೊರೆಯವರ ಪ್ರೀತಿಯ ಆಶ್ರಯದಲ್ಲಿ. 


ಪೋಷಿಸಿರುವೆ ಕಂದಮ್ಮ ಹಸಿವಿದ್ದರೂ ಕೈಚಾಚದೆ, 

ನೀವ್, ಸಾಧಿಸುವ ಛಲದಿ ಸಾಗಬೇಕು ಸ್ವಾಭಿಮಾನ ಬಿಡದೆ. 


ದಿಟ್ಟ ನೋಟವು ಪ್ರಾರ್ಥಿಸುವ ಮಗು ನೀನಾಗು, 

ಮುಪ್ಪಾದವರ ಸಲಹೋ ಸರದಾರನಾಗು. 


ನ್ಯಾಯ ಮಾರ್ಗದಿ ನಡೆದು ನಿಸ್ವಾರ್ಥಿಯಾಗು, 

ದುರ್ಗುಣಗಳ ದೂರವಿಟ್ಟು ನೃಪತುಂಗನಾಗು. 


ಧನ ಕನಕಾದಿಗಳ ಅಧಿಪತಿಯಾದರು ನೀ ಮಾನವನಾಗಿರು, 

ಸದಾ ಸಹಕರಿಸಿ ಹಾರೈಸಿದವರ ಮರೆಯದಿರು. 


ಸೌರಭದ ಸುಮದಂತೆ ಸೂಕ್ಷ್ಮವಾಗಿರು ಕಂದ, 

ನಿನ್ನ ಬಾಳ ಪಯಣದ ಸುಪ್ರಭಾತವೆ ಕೊಡುವುದು ನನಗೆ ಆನಂದ.

- nagamani Kanaka

14 Jan 2025, 09:16 pm