ದಿನ ಕಳೆದ ಹಾಗೆ ಅವಳ ನೆನಪು.
ಅತಿಯಾಗಿದೆ ಈ ಮನಕೆ.
ಹಗಲು ಎನ್ನದೆ ರಾತ್ರಿ ಎನ್ನದೆ.
ಕನಸು ಕಾಣುವ ಸಮಯ
ರಾತ್ರಿ ಇರಬಹುದು.
ಹಗಲು ಇರಬಹುದು.
ಆದರೆ ಅವಳ ನೆನಪುಗಳು
ಹೆಚ್ಚಾಗಿ ಕಾಡುತ್ತಿವೆ...
ಹಗಲಿರುಳು ಎನ್ನದೆ...
ನಾಡೆಂದರೆ ನಾಡು ನನ್ನ ಕನ್ನಡ ನಾಡು
ನುಡಿಯೆಂದರೆ ನುಡಿ ನನ್ನ ಕನ್ನಡ ನುಡಿ..
ಕರ ಮುಗಿದು ಬಾರೋ
ನನ್ನ ಕನ್ನಡ ದೇಗುಲದ ಒಳಗೆ..
ಅಭಿಮಾನ ಸುರಿದು ಪ್ರಾರ್ಥಿಸೋ
ತಾಯಿ ಭುವನೇಶ್ವರಿಯ ಪ್ರೀತಿಗೆ.." ಪ "
ಕುಡಿಯೋ ನೀ ತುಂಗಾ ಕಾವೇರಿ ನೀರನ್ನ
ಆಗುವುದು ನಿನ್ನ ಜನುಮ ಪಾವನ..
ನೋಡೋ ಮಲೆನಾಡ ಸೊಬಗು ಕಣ್ಣಾರ
ಕುಣಿಯುವುದು ನಿನ್ನ ಮನ ಮುಗಿಲೇತ್ತರ..
ಮೊದಲ ಸಲದ ನೋಟಕ್ಕೆ
ಅವಳೇ ನನ್ನವಳೆಂದೆ
ಪ್ರೀತಿಯ ಅಲೆಯಲ್ಲಿ ಬಿದ್ದ . ಹೃದಯದ ಮಾತು
ಪ್ರೆಮಂಕುರದಲಿ ಪ್ರೇಮದ ಹೂವ ಅರಳಿಸಿದವಳು....
ಭಗವಂತ ಹೆಣೆದ ಬಲೆಗೆ ಸಿಲುಕಿದೆವು ನಾವು
ನೂರೆಂಟು ಕನಸುಗಳ ಕಟ್ಟಿ ಬದುಕಿ ತೋರಿಸಬೇಕು ಜಗಕೆ
ಮನದ ಮಾತುಗಳ ಹಂಚಿಕೆ ಈ ವೇದಿಕೆ
ಕಂಡು ಕಾಣದ ವೇದನೆಯ ಮಾತು ಇಂದೇಕೆ
ಇದು ಮೊದಲ ಸಲದ ಪ್ರೆಮಂಕುರದ ಮಾತು....
ಎಡವುತ್ತಲೇ ಇರುತ್ತವೆ ಆಗಾಗ ಹೃದಯಕ್ಕೆ
ಚಿಕ್ಕದೋ ದೊಡ್ಡದೊ ಗಾಯ ಮಾಡಿ ನಗುವ
ಬಹುರೂಪಿ ಪ್ರೀತಿಯ ಕಲ್ಲುಗಳು,
ಎಷ್ಟು ಬದಿಗೆ ಸರಿದು ನಡೆದರೂ ಬಿಡವು
ಮತ್ತೆ ನಮ್ಮ ದಾರಿಗೆ ಬಂದು ಎಡವದೇ ಇರವು
ರಕ್ತ ಒಸರದಿದ್ದರೇನಂತೆ, ಹೃದಯದ ಅನು-
ರಕ್ತ ಬಾವನೆ ಬಿರಿಯಲಾರದೇನು ?
ಕಲ್ಲುಗಳು ಕರಗಲಾರವು ಪ್ರೀತಿಯ ಕಣ್ಣೀರಿಗೆ
ಕೊಲ್ಲುವುದನಷ್ಟೇ ಬಲ್ಲವು ಬಂದವರನು ದಾರಿಗೆ
ಎಂತ ಹುಚ್ಚರಯ್ಯ ನಾವು,
ಎಡವಿದ ಕಲ್ಲನ್ನೂ ತಡವಿ ಮುದ್ದಾಡುವೆವು
ಮತ್ತೆ ಅದು ಗುದ್ದಿ ಮನದ ನೆಲವ ಪುಡಿ
ಗೈವದೆಂಬ ಹಿಡಿ ನೆನಕೆಯೂ ಇಲ್ಲದೇ.
ಎಡವಿ ಬಿದ್ದರೂ ಲೆಕ್ಕವಿಲ್ಲದಷ್ಟು ಸಲ,
ಮೈ ಕೊಡವಿ ನಡೆವೆ ಮುಂದೆ ಅದೇನು ಮನೋಬಲ
ಮತ್ತೊಂದು ಮುಗ್ದ ಕಲ್ಲು ಕಾಲಿಗಡರಿ
ತೊಡರಿ ನೀ ಮುಗ್ಗರಿಸಿ ಬೀಳುವ ವರೆಗೆ !
ಭುವಿಯ ಭಾಗ್ಯ ಜೀವಿಯೇ
ನಿನ್ನ ಬೀಳ್ಕೊಡುವ ಮುನ್ನ
ಆಗು ಈ ಜಗದ ಆಶಾಕಿರಣ..
ಜೊತೆ ಬರೋದಿಲ್ಲ ನೀ ಕೂಡಿಟ್ಟ ಆಸ್ತಿ ಹಣ
ಜೊತೆ ಬರೋದೊಂದೆ ನೀ ಮಾಡಿದ ಧರ್ಮ ದಾನ
ಜೀವನ ಜನನ ಮರಣ ನಡುವಿನ
ಒಂದು ರೋಚಕವಾದ ಕ್ರೀಡಾಂಗಣ..
ಎಲ್ಲರಲ್ಲಿ ಒಬ್ಬನಾಗಿ ನೀನು
ಆಟವಾಡಬೇಕು ಪ್ರತಿದಿನ..
ವಿನಯ ಎಂಬ ನಿಯಮ
ಪಾಲಿಸಬೇಕು ಪ್ರತಿಕ್ಷಣ..
ಅಹಂಕಾರ ಎಂಬ ಗೆರೆ
ತುಳಿಯಬಾರದು ನಿನ್ನ ತನುಮನ..
ಆತ್ಮವಿಶ್ವಾಸದಿಂದ ಸಂತಸದಿಂದ
ಸಾಗಬೇಕು ಆಟದ ಪಯಣ..
ಗೆದ್ದರೆ ನೀನು ಪಡೆಯುವೆ
ಬಹುದೊಡ್ಡ ಸ್ಥಾನಮಾನ..
ಸೋತರೆ ಬಿಟ್ಟು ಹೋಗಬೇಡ
ನೀನು ಗೆಲುವಿನ ನಿಲ್ದಾಣ..
ಕಲಿಯಬೇಕು ನೀನು ಆಟದಲ್ಲಿ
ಏಟುಗಳ ಚಪ್ಪಾಳೆಗಳ ನೀತಿಪಾಠವನ್ನ.." 1 "
ಅಪ್ಪ ಅಮ್ಮನ ಹೃದಯದಲ್ಲಿ
ಕಟ್ಟಬೇಕು ನೀನು ನಗುವಿನ ಗಗನ..
ಕಟ್ಟಬೇಕು ಈ ಭೂಮಿಯಲ್ಲಿ
ನೀನು ಪ್ರೀತಿ ಸ್ನೇಹದ ಬಣ..
ಮಾಡಬೇಡ ನೀನು ಯಾರಿಗೂ
ದ್ವೇಷ ಮೋಸದ ಕದನ..
ಉಣಿಸಬೇಕು ನೀನು ಎಲ್ಲರಿಗೂ
ಶಾಂತಿ ಸಹನೆಯ ಭೋಜನ..
ಮೆಚ್ಚಬೇಕು ಜಗವೆಲ್ಲಾ
ನಿನ್ನ ಜೀವನ ವಿಧಾನ..
ಸಾರಬೇಕು ಬಲ್ಲವರೆಲ್ಲಾ
ನಿನ್ನ ಸಾಧನೆಯ ಕಥನ....." 2"
ಈ ಲೋಕ ನಿನಗೆ ಇಹಲೋಕ
ಪಾಪಕ್ಕೆ ನೀ ಕಡಿವಾಣ ಹಾಕಬೇಕು
ಪುಣ್ಯದ ಚಿಲವ ಮನಿ ಮನಗಳಿಗೆ ನೀ ಹಂಚಬೇಕು
ಕೊನೆಗೆ ಸಾಗುವೆ ನೀ ಪರಲೋಕ...
ದಾರಿಯಲಿ ತುತಾಗಭೂದು ನಿನ್ನ ಪಾಪದ ಚೀಲ
ಪುಣ್ಯದ ಲೆಕ್ಕವು ಹೆಚ್ಚಾದರ ನೀ ಕೆಳ
ಬೆನ್ನಿಗೆ ಬಾರವಲ್ಲ ನಿನ್ನ ಪುಣ್ಯದ ಚೀಲ
ನೀ ಹೂಗುವದಾರಿಯಲಿ ಹೇಳಬ್ಯಾಡ ನೀ ಸುಳ್ಳ....
ಪರಲೋಕದಲ್ಲಿ ಮೆಚ್ಚತಾನ ನಿನ್ನ ಶಿವನು
ಯಾರಿಗು ಮಾಡದಿರು ಮೋಸವನ್ನು
ಮೃತು ಲೋಕಕ್ಕೆ ಕಾಲಿಟ್ಟರ ಬೆಂಕಿ ಹಚ್ಚತಾನ ನಿನಗೆ ಯಮನು
ಪಾಪದ ಲೆಕ್ಕ ತಪ್ಪಲಾರ ಎಂದಿಗು ಅವನು...
ಮಾಡದಿರು ಮೂಸವ ಮನುಜ ನೀ ಹುಟ್ಟಿದ ಜಗಜಂತುಗಳಿಗೆ
ಪ್ರೀತಿ ಪ್ರೇಮದಿಂದ ಪುಣ್ಯದಲೆಕ್ಕ ಹೆಚ್ಚಿಸು ನಿನ್ನ ಅಣು ಅಣುವಿನೂಳಗು
ಹೆಚ್ಚೆಚ್ಚು ಪ್ರೀತಿ ಕಳೆಯುವದು ದ್ವೇಷದಾ ಭೀತಿ ನಿನ್ನದ ಈ ಜಗದೊಳಗೆ....
ಮಾಡದಿರು ಮನುಜ ನೀ ಮೂಸವ
ಹುಟ್ಟಿದ ಜಗಜಂತುಗಳಿಗೆ.........✍ಈಶ್ವರ್ ಬಿ....