Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಶುಭೊದಯ..........

ಕತ್ತಲೊಂದು ಒಡಿ
ಬೆಳಕೊಂದು ಬಂದಾಯ್ತು
ಕನಸೊಂದು ಬಿದ್ದು
ಕಣ್ ತುಂಬಿ ಬಂದಾಯ್ತು
ಬದುಕಿನ ಶಾಲೆ ಶುರೂವಾಯ್ತು
ಪಾಠವ ಕಲಿಯುವ ಮನಸುಗಳು
ಎದ್ದು ಹೊಗುವ ಗಳಿಗೆ ಬಂದಯ್ತು
ಬೆಳಕೊಂದು ಬಂದಾಗ ಕಣ್ಮುಚ್ಚಿ
ಮಲಗಿದರೆ ಆ ಬೆಳಕು ನಮ್ಮನ್ನ
ನೊಡಿ ನಕ್ಕಿಬಿಟ್ಟಿತ್ತು ಎಳಿ ಬೆಳಗಾಯ್ತು
ಎಲ್ಲ.................

- ರಾಗಸಿರಿ....

25 Feb 2018, 06:52 am

ಮೋಹಿನಿ

ಏನನ್ನು ಅರಿಯದು ಹರೆಯ
ಎಲ್ಲವನ್ನೂ ಬಯಸುವುದು ಹೃದಯ
ಎತಕ್ಕು ಸಾಲದಾಗಿದೆ ಸಮಯ
ಏನೆಂದು ವರ್ಣಿಸಲಿ ನನ್ನ ಗೆಳತಿಯ

ಕಾಣಿಸದೆ ಬಣ್ಣಿಸಿದೆ ಹೇಗೆ
ಅರಿಯದೆ ಸೆಳೆದೆ ಹೇಗೆ
ಕೇಳದೆ ಕರೆದೆ ಹೇಗೆ
ಮರೆತು ಮರೆಯಾದೆ ಹೇಗೆ

ಬಳುಕುವ ಬಳ್ಳಿಗೆ ಮೆರಗು
ನೆಟ್ಟ ದೃಷ್ಟಿಗೆಲ್ಲ ಬೆರಗು
ಪಾರಿಜಾತವು ಹೊಲದು ನಿನ್ನ ಸೊಬಗು
ತುಂಬಿರುವುದು ರಸಬಳ್ಳಿಯ ಸೊಗಡು

ತಾಳಲಾರೆ ಈ ವಿರಹದ ನೋವು
ಉಚಿತವಲ್ಲವೆ ಈ ಸಮಯದಲ್ಲಿ ಸಾವು
ಮರೆಯುವುದುಂಟೆ ನಿಮ್ಮನ್ನು ನಾವು
ಮರೆಯಾಗದಿರಿ ನಮ್ಮಿಂದ ನೀವು

@ ಸಲಹು .......

- ಸದಾ

24 Feb 2018, 08:39 pm

ಬಯಸಿದೆ ಮನ ನಿನ್ನನ್ನೆ

ಮನವು ಇಂದು ಬಯಸಿದೆ
ನೀನು ಬೇಕೆಂದು.
ಕಂಗಳು ಕನಸು ಕಾಣುತ್ತಿದೆ
ನೀನ್ನ ನೋಡಲೆಂದು.
ಕಿವಿಗಳು ಬಯಸುತ್ತಿದೆ
ನಿನ್ನ ದ್ವನಿಗೆಂದು.
ಈ ಹೃದಯ ಬಯಸುತ್ತಿದೆ
ನಿನ್ನ ಪ್ರೀತಿಗೆಂದು
ಮಾಡಲೇನು ತಿಳಿಯದಾಗಿದೆ
ನೀನು ದೂರ ಇರುವೆ ಇಂದು.
ಇಲ್ಲಿ ನಾ ಒಬ್ಬೋಂಟಿಯಾಗಿರುವೆ
ಎಂದೆಂದೂ....

ನಿಮ್ಮ ಪ್ರೀತಿಯ ಹುಡುಗ "ರಾಜ್"

- ವರದ ಪ್ರೇಮ ಜೀವಿ

24 Feb 2018, 11:48 am

ಹಸಿವು

ಓ .. ಹಸಿವೆ
ನೀನೆಷ್ಟು
ಕ್ರೂರ..

ನಿನ್ನ ತಣಿಸಲು
ನನ್ನ ಈ
ಪ್ರಾಣವನ್ನೇ
ಅರ್ಪಿಸಬೇಕಾಯ್ತು...

✍ ಅಲ್ತಾಫ್ ಬಿಳಗುಳ

- ಅಲ್ತಾಫ್ ಬಿಳಗುಳ

24 Feb 2018, 10:45 am

ಸತ್ತಾಗ ಎಲ್ಲಾ ಹೊತ್ತುಕೊಂಡು ಹೋಗ್ತಿಯೇನಯ್ಯ

ಯಾಕೆ ದುಡ್ಡು ದುಡ್ಡು ಅಂತ ಸಾಯ್ತಿಯಾ
ಸತ್ತಾಗ ಎಲ್ಲಾ ಹೊತ್ತುಕೊಂಡು ಹೋಗ್ತಿಯೇನಯ್ಯ..
ಮಣ್ಣಿನೊಳಗೆ ಸಂಪತ್ತು ದುಡ್ಡು ಇಟ್ಟು ಮುಚ್ಚುವರೇನಯ್ಯ..
ಅಧಿಕಾರ ಅಹಂಕಾರ ಬಂಗಾರ ಬಡಿವಾರ
ಏಕಯ್ಯ..
ಲೋಕದೊಳಗೆ ನಾಲ್ಕು ಜನ ಮೆಚ್ಚುವಂತೆ
ಬಾಳಬೇಕಯ್ಯ.. " ಪ "

ಹುಟ್ಟು ಪಡೆದ ಮೇಲೆ
ಸಾವು ಬರಲೇಬೇಕಯ್ಯ...
ಅಡ್ಡದಾರಿ ತುಳಿದ ಮೇಲೆ
ತಲೆದಂಡ ಕಟ್ಟಲೇ ಬೇಕಯ್ಯ..
ದುರಾಸೆ ಎಂಬ ಭೂತ ಹಿಡಿದ ಮೇಲೆ
ಸಂತಸ ಎಂಬ ಸ್ನೇಹಿತ ನಿನಗೆ ಸಿಗೋದಿಲ್ಲಯ್ಯ..
ನಾನು ಎಂಬ ಜಂಭ ನೆತ್ತಿಗೇರಿದ ಮೇಲೆ
ನಗು ಎಂಬ ಹಬ್ಬ ನಿನ್ನ ಬಾಳಿಗೆ ಇಲ್ಲಯ್ಯ..
ಅನ್ಯರ ಕಾಸಿಗೆ ಕನ್ನ ಹಾಕಿದ ಮೇಲೆ
ಪುಣ್ಯದ ಜೋಳಿಗೆ ನಿನ್ನ ಜೊತೆಗೆ ಬರೋದಿಲ್ಲಯ್ಯ

ಮಾನವನಾಗಿ ಹುಟ್ಟಿದ ಮೇಲೆ
ಸಕಲ ಪ್ರಾಣಿಗಳಲ್ಲಿ ದಯೆ ಇರಬೇಕಯ್ಯ..
ಬದುಕಿನ ಬಂಡಿ ಏರಿದ ಮೇಲೆ
ಶಾಂತಿ ಸಹನೆಯ ದಾರಿ ಹಿಡಿಯಬೇಕಯ್ಯ..
ಮೇಲುಕೀಳು ಅನ್ನದೆ ನಗುತ ಬಾಳಿದ ಮೇಲೆ
ಎಲ್ಲೆಲ್ಲೂ ನಿನಗೆ ಭಗವಂತ ಕಾಣುವನಯ್ಯ..
ನಾಡು ಹೋಗು ಅನ್ನುವ ಮೊದಲೇ
ಪ್ರೀತಿಸ್ನೇಹದ ಕೋಟೆ ಕಟ್ಟಿ ಹೋಗಬೇಕಯ್ಯ..
ಕಾಡು ಬಾ ಎಂದು ಕರೆಯುವ ಮೊದಲೇ
ದ್ವೇಷ ಮೋಸದ ಮೂಟೆ ಸುಟ್ಟು ಹಾಕಬೇಕಯ್ಯ..

- ಸುರೇಶ್ ಟಿ ವಿ

24 Feb 2018, 09:43 am

ಪ್ರೇಮದ ಪೂಜೆ

ಪ್ರೇಯಸಿ ನಿನ್ನಯ ಪ್ರೇಮದ ಪೂಜೆಗೆ
ನಕ್ಷತ್ರದ ಹೂವು ಜಾರಿದೆ ಮೆಲ್ಲಗೆ!!
ನಿನ್ನ ಆಗಮನದ ಸುಂದರ ಸಂಜೆಗೆ
ಕನವರಿಸುತ ಮನ ದಾರಿಯ ಕಾದಿದೆ!!

ಪರದೆಯ ಹಿಂದೆ ಒಲವಿನ ನಂಟಿದೆ
ನಟಿಸುತ ಬಾರೇ ಪ್ರೀತಿಯ ಅಂಗಳಕೆ!!
ಸಂಪಿಗೆ ಕಂಪಿಗೆ ಚಂದಿರ ನಾಚಿದ
ಕಾತರಿಸಿದೆ ತನು ನಿನ್ನಯ ಸನಿಹಕೆ!!

ನಿಶಬ್ದದ ಈ ಸುಂದರ ಸಂಜೆಯು
ತಂಗಾಳಿಯ ಜೊತೆ ತಂಪನು ತಂದಿದೆ!!
ಮೆಲ್ಲಗೆ ನೀನು ಬಂದರೆ ಇಲ್ಲಿಗೆ
ನಿಲ್ಲದ ಕಾಲವು ನಿಲ್ಲುವ ಹಾಗಿದೆ!!

- ಪಿ.ಜಿ.ಜ್ಯೋತಿ

24 Feb 2018, 08:39 am

ಹೊಂಬೆಳಕ ಆರತಿ

ಹೊಂಬೆಳಕ ಆರತಿ
ನೇಸರನು ಸಾರಥಿ!!
ಮೂಡಣದಿ ಮುಗಿಲೇರಿ
ಮುಂಜಾನೆಯನು ಸಾರಿ!!

ಹೊಂಗಿರಣದ ನಡುವೆ
ರಂಗೇರಿದೆ ಚೆಲುವು!!
ಬಾನಂಗಳದ ಬಿಂಬ
ಈ ನನ್ನ ಕಣ್ಣ ತುಂಬ!!

ಹರಿಯುತಿಹ ಜರಧಾರೆ
ಪುಳಕದಲಿ ಬಳುಕಿಹುದು!!
ಮನದುಂಬಿ ಚಿಲಿಪಿಲಿಯ
ಹಕ್ಕಿಗಳು‌ ನಲಿದಿಹವು!!

ಎಲೆ ಮೇಲಿನ ಮಂಜಿನ ಹನಿಗಳು
ತಂಗಾಳಿಗೆ ತೂಗಿವೆ ತೆನೆಗಳು!!
ಇರುಳು ತುಂಬಿಹ ಧರೆಗೆ
ಬೆಳಕು ಹರಿದಿಹ ಗಳಿಗೆ!!

- ಪಿ.ಜಿ.ಜ್ಯೋತಿ

24 Feb 2018, 08:29 am

ಬಂದನಾ ಭಾಸ್ಕರ

ಕಣ್ಣುಜ್ಜುತ, ಮೈಮುರಿಯುತ
ಸಣ್ಣಗೆ ನಿದ್ದೆಗಣ್ಣಾಕಳಿಸುತ
ಮನದಿ ಮೀನಾಮೇಷದಿ
ಬರಲೋ ಬೇಡವೋ
ಎಂದುದಾಸೀನ ತೋರುತ
ಕಣ್ಣಿನ ಪಿಚ್ಚೊರೆಸುತ.......

ಕೊನೆಗೂ ಫಳಕ್ಕನೇ ನಕ್ಕನಾ ನೇಸರ
ಮೂಡಣವೆಲ್ಲಾ ಕೆಂದೋಕುಳಿ ಹಂದರ
ತೆಂಕಣ, ಬಡಗಣಗಳಲೆಲ್ಲಾ ಝೇಂಕಾರ
ನಮಿಪೆ ನಿನಗಿದೋ ಭಾಸ್ಕರ....

- Akku

24 Feb 2018, 07:14 am

ಮನಸು ಮುಸುಕಿದೆ

ಮುಸುಕು ಕವಿದಿದೆ ಮನಕ್ಕೆ
ಬುದ್ದಿಗೆ ಮಂಕು ಬಡಿದಿರುವುದು
ಮನೆಯವರ ಜಗಳ ಮನಸ್ತಾಪಗಳ ನಡುವೆ
ಮಾಡಿದೆನು ಹಲವು ತಪ್ಪುಗಳನು ಈ ಮುಸುಕಿನಲಿ
ನೋಯಿಸಿದೆನು ಹಲವು ಮನಗಳ
ಮುಸುಕು ಸರಿಯುವ ಹೊತ್ತಿಗೆ
ಮಿಂಚಿ ಹೊಗಿರಲು ಸಮಯ
ಮರುಗಿದೆನು ನೆಡೆದುದ ನೆನೆದು
ಮನವ ತಿಳಿಗೊಳಿಸಿ ನೆಡೆದರೆ ಸದಾ
ಬಾಳು ನಂದನವನ

- ರಘು

23 Feb 2018, 08:34 pm

ಹುಡುಕಿ ಕೊಡಿ

ಹೌದು, ನಾ ಕಳೆದು ಹೋಗಿರುವೆ.....
ಗೊತ್ತಿರದ ಸಂದಿಗಳಲಿ ಅಲೆಯುತಿರುವೆ
ಸುತ್ತೀ ಸುತ್ತೀ ಸುಸ್ತಾಗಿರುವೆ
ಮತ್ಯಾವ ಕಡೆ ಹೋಗುವುದೋ.....,
ಯಾವ ಕಡೆ ಹೋದರೆ ಸಿಗುವುದೋ
ಕಾಣದೇ ನೊಂದು ನಲುಗಿರುವೆ.....!

ಆದರೂ ಹುಡುಕುವುದ ಬಿಟ್ಟಿಲ್ಲ
ಭರವಸೆಯ ಭಾವವಳಿದಿಲ್ಲ
ಅಲೆದಲೆದು, ಸುಳಿಸುಳಿದು
ತಡಕಾಡಿ, ಮಿಡುಕಾಡಿ ಹುಡುಕಿ
ಪಡೆಯುವೆ, ಪಡೆದೇ ತೀರುವೆ.....
ಒಂದಿನ ನನ್ನ ನಾ ಪಡೆಯುವೆ.....

- Akku

23 Feb 2018, 07:11 pm