ಕತ್ತಲೊಂದು ಒಡಿ
ಬೆಳಕೊಂದು ಬಂದಾಯ್ತು
ಕನಸೊಂದು ಬಿದ್ದು
ಕಣ್ ತುಂಬಿ ಬಂದಾಯ್ತು
ಬದುಕಿನ ಶಾಲೆ ಶುರೂವಾಯ್ತು
ಪಾಠವ ಕಲಿಯುವ ಮನಸುಗಳು
ಎದ್ದು ಹೊಗುವ ಗಳಿಗೆ ಬಂದಯ್ತು
ಬೆಳಕೊಂದು ಬಂದಾಗ ಕಣ್ಮುಚ್ಚಿ
ಮಲಗಿದರೆ ಆ ಬೆಳಕು ನಮ್ಮನ್ನ
ನೊಡಿ ನಕ್ಕಿಬಿಟ್ಟಿತ್ತು ಎಳಿ ಬೆಳಗಾಯ್ತು
ಎಲ್ಲ.................
ಮನವು ಇಂದು ಬಯಸಿದೆ
ನೀನು ಬೇಕೆಂದು.
ಕಂಗಳು ಕನಸು ಕಾಣುತ್ತಿದೆ
ನೀನ್ನ ನೋಡಲೆಂದು.
ಕಿವಿಗಳು ಬಯಸುತ್ತಿದೆ
ನಿನ್ನ ದ್ವನಿಗೆಂದು.
ಈ ಹೃದಯ ಬಯಸುತ್ತಿದೆ
ನಿನ್ನ ಪ್ರೀತಿಗೆಂದು
ಮಾಡಲೇನು ತಿಳಿಯದಾಗಿದೆ
ನೀನು ದೂರ ಇರುವೆ ಇಂದು.
ಇಲ್ಲಿ ನಾ ಒಬ್ಬೋಂಟಿಯಾಗಿರುವೆ
ಎಂದೆಂದೂ....
ಯಾಕೆ ದುಡ್ಡು ದುಡ್ಡು ಅಂತ ಸಾಯ್ತಿಯಾ
ಸತ್ತಾಗ ಎಲ್ಲಾ ಹೊತ್ತುಕೊಂಡು ಹೋಗ್ತಿಯೇನಯ್ಯ..
ಮಣ್ಣಿನೊಳಗೆ ಸಂಪತ್ತು ದುಡ್ಡು ಇಟ್ಟು ಮುಚ್ಚುವರೇನಯ್ಯ..
ಅಧಿಕಾರ ಅಹಂಕಾರ ಬಂಗಾರ ಬಡಿವಾರ
ಏಕಯ್ಯ..
ಲೋಕದೊಳಗೆ ನಾಲ್ಕು ಜನ ಮೆಚ್ಚುವಂತೆ
ಬಾಳಬೇಕಯ್ಯ.. " ಪ "
ಹುಟ್ಟು ಪಡೆದ ಮೇಲೆ
ಸಾವು ಬರಲೇಬೇಕಯ್ಯ...
ಅಡ್ಡದಾರಿ ತುಳಿದ ಮೇಲೆ
ತಲೆದಂಡ ಕಟ್ಟಲೇ ಬೇಕಯ್ಯ..
ದುರಾಸೆ ಎಂಬ ಭೂತ ಹಿಡಿದ ಮೇಲೆ
ಸಂತಸ ಎಂಬ ಸ್ನೇಹಿತ ನಿನಗೆ ಸಿಗೋದಿಲ್ಲಯ್ಯ..
ನಾನು ಎಂಬ ಜಂಭ ನೆತ್ತಿಗೇರಿದ ಮೇಲೆ
ನಗು ಎಂಬ ಹಬ್ಬ ನಿನ್ನ ಬಾಳಿಗೆ ಇಲ್ಲಯ್ಯ..
ಅನ್ಯರ ಕಾಸಿಗೆ ಕನ್ನ ಹಾಕಿದ ಮೇಲೆ
ಪುಣ್ಯದ ಜೋಳಿಗೆ ನಿನ್ನ ಜೊತೆಗೆ ಬರೋದಿಲ್ಲಯ್ಯ
ಮಾನವನಾಗಿ ಹುಟ್ಟಿದ ಮೇಲೆ
ಸಕಲ ಪ್ರಾಣಿಗಳಲ್ಲಿ ದಯೆ ಇರಬೇಕಯ್ಯ..
ಬದುಕಿನ ಬಂಡಿ ಏರಿದ ಮೇಲೆ
ಶಾಂತಿ ಸಹನೆಯ ದಾರಿ ಹಿಡಿಯಬೇಕಯ್ಯ..
ಮೇಲುಕೀಳು ಅನ್ನದೆ ನಗುತ ಬಾಳಿದ ಮೇಲೆ
ಎಲ್ಲೆಲ್ಲೂ ನಿನಗೆ ಭಗವಂತ ಕಾಣುವನಯ್ಯ..
ನಾಡು ಹೋಗು ಅನ್ನುವ ಮೊದಲೇ
ಪ್ರೀತಿಸ್ನೇಹದ ಕೋಟೆ ಕಟ್ಟಿ ಹೋಗಬೇಕಯ್ಯ..
ಕಾಡು ಬಾ ಎಂದು ಕರೆಯುವ ಮೊದಲೇ
ದ್ವೇಷ ಮೋಸದ ಮೂಟೆ ಸುಟ್ಟು ಹಾಕಬೇಕಯ್ಯ..
ಮುಸುಕು ಕವಿದಿದೆ ಮನಕ್ಕೆ
ಬುದ್ದಿಗೆ ಮಂಕು ಬಡಿದಿರುವುದು
ಮನೆಯವರ ಜಗಳ ಮನಸ್ತಾಪಗಳ ನಡುವೆ
ಮಾಡಿದೆನು ಹಲವು ತಪ್ಪುಗಳನು ಈ ಮುಸುಕಿನಲಿ
ನೋಯಿಸಿದೆನು ಹಲವು ಮನಗಳ
ಮುಸುಕು ಸರಿಯುವ ಹೊತ್ತಿಗೆ
ಮಿಂಚಿ ಹೊಗಿರಲು ಸಮಯ
ಮರುಗಿದೆನು ನೆಡೆದುದ ನೆನೆದು
ಮನವ ತಿಳಿಗೊಳಿಸಿ ನೆಡೆದರೆ ಸದಾ
ಬಾಳು ನಂದನವನ
ಹೌದು, ನಾ ಕಳೆದು ಹೋಗಿರುವೆ.....
ಗೊತ್ತಿರದ ಸಂದಿಗಳಲಿ ಅಲೆಯುತಿರುವೆ
ಸುತ್ತೀ ಸುತ್ತೀ ಸುಸ್ತಾಗಿರುವೆ
ಮತ್ಯಾವ ಕಡೆ ಹೋಗುವುದೋ.....,
ಯಾವ ಕಡೆ ಹೋದರೆ ಸಿಗುವುದೋ
ಕಾಣದೇ ನೊಂದು ನಲುಗಿರುವೆ.....!
ಆದರೂ ಹುಡುಕುವುದ ಬಿಟ್ಟಿಲ್ಲ
ಭರವಸೆಯ ಭಾವವಳಿದಿಲ್ಲ
ಅಲೆದಲೆದು, ಸುಳಿಸುಳಿದು
ತಡಕಾಡಿ, ಮಿಡುಕಾಡಿ ಹುಡುಕಿ
ಪಡೆಯುವೆ, ಪಡೆದೇ ತೀರುವೆ.....
ಒಂದಿನ ನನ್ನ ನಾ ಪಡೆಯುವೆ.....