ನಗುನಗುತ ಇರಬೇಕು
ನೂರು ಆರಾಗಲಿ
ಆರು ನೂರಾಗಲಿ..
ನಕ್ಕು ನಗಿಸುತ ಬಾಳ್ಬೇಕು
ಯಾರೇನೇ ಅನ್ನಲಿ
ಯಾರೇನೇ ಮಾಡಲಿ..
ಆಗಿದ್ದು ಒಳ್ಳೆದೇ ಅನ್ಕೊಳಿ
ಆಗೋದು ಒಳ್ಳೆದೇ ಅನ್ಕೊಳಿ.. " ಪ "
ಇವತ್ತು ಇರೋರು ನಾಳೆ ಇರೋಲ್ಲ
ನಿನ್ನೆ ಅನ್ನೋದು ಮತ್ತೆ ಬರಲ್ಲ..
ನಾಳೆ ಏನಾಗುತ್ತೋ ಯಾರಿಗೂ ಗೊತ್ತಿಲ್ಲ
ಇವತ್ತು ಖುಷಿಖುಷಿಯಾಗಿರೋಣ ನಾವೆಲ್ಲ..
ಈ ಬಾಳು ಒಂದು ಹೂವಿನಂತೆ ಬ್ಯೂಟಿ
ಏನೇ ಮಾಡಿದ್ರೂ ಬಾಡೋದು ಗ್ಯಾರಂಟಿ..
ನಗುತ ಬಾಳಿದರೆ ಸ್ವರ್ಗವು ಆಗದು ನಿನಗೆ ಸಾಟಿ
ಅಂದದ ನಗುವ ನೋಡಿ ಆ ಚಂದ್ರನು ಮಾಡಬೇಕು ನಿನ್ನ ಭೇಟಿ..
ಜೀವನ ಒಂದು ಹಾವು ಏಣಿಯ ಆಟ
ಬಿಟ್ಟಾಕು ಫಸ್ಟ್ ಲಾಸ್ಟ್ ಅನ್ನೋ ಪಟ್ಟ..
ಏರಲೇಬೇಕು ಎಲ್ಲರೂ ಒಂದು ದಿನ ಚಟ್ಟ
ಅನುಕ್ಷಣ ಹಾರಿಸೋಣ ನಗುವಿನ ಪಟ..
ನೂರು ಕೋಟಿ ಕೊಟ್ಟರೂ ಸಿಗದು ನಗು ಎಂಬ ಬಂಗಾರ
ನೋವು ಸಾವಿರ ಇದ್ದರೂ ನಗುತಿದ್ದರೆ ನಿನಗೆ ನೀನೇ ಕುಬೇರ..
ಚಿಂತೆ ಎಂದಿಗೂ ತನುಮನ ಸುಟ್ಟು ಹಾಕುವ ಚಿತಾಗಾರ
ಅನುದಿನ ಅನುಕ್ಷಣ ಹೃದಯದಲ್ಲಿ ಹರಿಸಬೇಕು ಆನಂದ ಸಾಗರ..
ಬಾರೋ ಬಾರೋ ವೀರ ಕನ್ನಡಿಗ ಬಾರೋ
ಕನ್ನಡ ನೆಲಜಲ ರಕ್ಷಿಸಲು ಮುನ್ನುಗ್ಗಿ ಬಾರೋ..
ಬಾರೋ ಬಾರೋ ಧೀರ ಕನ್ನಡಿಗ ಬಾರೋ
ಕನ್ನಡ ನಾಡುನುಡಿ ಬೆಳೆಸಲು ಧುಮುಕಿ ಬಾರೋ..
ಸಿರಿಗನ್ನಡ ಗೆಲ್ಲಬೇಕು
ಸಿರಿಗನ್ನಡ ಬಾಳಬೇಕು.." ಪ "
ನೀ ಉಸಿರಾಡೋ ಗಾಳಿ ಕನ್ನಡ
ನೀ ತಿನ್ನೋ ಅನ್ನ ಕನ್ನಡ..
ನೀ ಕುಡಿಯೋ ನೀರು ಕನ್ನಡ
ನೀ ಬದುಕೋ ಊರು ಕನ್ನಡ..
ಮಾತೃಭೂಮಿಗಾಗಿ ಪ್ರಾಣ ನೀಡಲು ಸಿದ್ಧನಾಗೋ
ಪುಣ್ಯಭೂಮಿಯ ಋಣ ತೀರಿಸಲು ಬದ್ಧನಾಗೋ
ಓ ಕನ್ನಡಿಗ ..ಹೇ ಕನ್ನಡಿಗ..
ಕೃಷ್ಣ ಕಾವೇರಿ ನದಿ ಜಲಪಾತಗಳು
ಕನ್ನಡ ಡಿಂಡಿಮ ಬಾರಿಸುತ ಸಾಗುವ ಕನ್ನಡಾಂಬೆಯ ತೇರುಗಳು..
ಮಲೆನಾಡಿನ ಮನೋಹರ ಗಿರಿಶಿಖರಗಳು
ಕನ್ನಡ ಕಂಪನು ಚೆಲ್ಲುವ ಕೀರ್ತಿ ಪತಾಕೆಗಳು..
ಬೇಲೂರು ಹಂಪೆಯ ಗುಡಿ ಗೋಪುರಗಳು
ಕನ್ನಡಾಂಬೆಯ ವೈಭವ ಸಾರುವ ಕೀರ್ತಿ ಕಳಶಗಳು
ನಗುತ ನಿಂತ ನೂರಾರು ಶಿಲಾಶಾಸನಗಳು
ಸಾಹಸಗಾಥೆ ಸಾರುವ ಸಿರಿಗನ್ನಡದ ಸತ್ಯ ಪೀಠಗಳು
ಕನ್ನಡ ಮಣ್ಣಿನ ಕಣಕಣಗಳು
ಕರುಣೆ ಬಿತ್ತುವ ಕನ್ನಡಿಗರ ಹೊನ್ನಿನ ಮನಗಳು..
ಕನ್ನಡ ಕವಿಪುಂಗವರು,ಕನ್ನಡ ಗಾನಕೋಗಿಲೆಗಳು
ಕನ್ನಡಾಭಿಮಾನ ಹರಿಸುವ ಕನ್ನಡಾಂಬೆಯ ಜ್ಯೋತಿಗಳು..
ಕದನಕೆ ಅಳುಕದೆ ನಾಡನು ಕಟ್ಟಲು
ಹೋರಾಡಿದರು ಕನ್ನಡದ ರಾಜಮಹಾರಾಜರುಗಳು..
ಮರಣಕೆ ಅಂಜದೆ ನಾಡನು ರಕ್ಷಿಸಲು
ವೀರಮರಣವಾದರು ಕನ್ನಡದ ವೀರಾಧಿವೀರರುಗಳು.." "
ಓ ಕನ್ನಡಿಗ ಕನ್ನಡಕ್ಕಾಗಿ ನೀ ಎಚ್ಚರಗೊಳ್ಳು
ಓ ಕನ್ನಡಿಗ ಕನ್ನಡಕ್ಕಾಗಿ ನೀ ಸ್ಫೂರ್ತಿಗೊಳ್ಳು..
ನುಗ್ಗಿ ಬರಲಿ ನಾಡಿನೊಳಗೆ ಸಾವಿರ ಭಾಷೆಗಳು
ನರನಾಡಿಯಲ್ಲಿ ಭೋರ್ಗರೆಯಲಿ ಕನ್ನಡಾಭಿಮಾನದ ಸಾಗರಗಳು..
ಕನ್ನಡವೇ ನಿನ್ನ ಮಂತ್ರವಾಗಬೇಕು
ಕನ್ನಡವೇ ನಿನ್ನ ಅಸ್ತ್ರವಾಗಬೇಕು..
ಕನ್ನಡಾಭಿಮಾನಿಗಳಿಗೆ ನೀ ಮಾಡು ಕೋಟಿ ವಂದನೆ
ಕನ್ನಡ ದುರಾಭಿಮಾನಿಗಳಿಗೆ ನೀ ಕೊಡು ಚಾಟಿ ದಂಡನೆ..
ಕನ್ನಡ ಝೇಂಕಾರ ಮೊಳಗಲಿ ಯುಗಯುಗಗಳು
ಕನ್ನಡಿಗರ ಬಾಳು ಬಂಗಾರವಾಗಲಿ ಪ್ರತಿಕ್ಷಣಗಳು..
ತುತ್ತು ಕೊಡದ ತುಸು ಕರುಣೆ ಇಲ್ಲದ
ಕಟುಕರ ಅನ್ನಕ್ಕೆ ಕೈ ಹಾಕಿದ್ದೆ ಅವ
ಮಾಡಿದ ಮಹಾಪರಾಧ!
ದೇವರ ಹೆಸರಲ್ಲಿ ರಾಶಿ ರಾಶಿ ಹಾಲು ಬೆಣ್ಣೆ
ಕೊಂಡೊಯ್ದು ಕಲ್ಲ ಮೇಲೆ ಸುರಿವ
ಕಲ್ಲು ಹೃದಯದ ಮೂಡ ಜನಗಳಿಗೆ
ಎಲ್ಲಿಂದ ತಿಳಿಯಬೇಕು ಹಸಿದ ಹೊಟ್ಟೆಯ ನೋವು.
ಕೋಟಿ ಕೋಟಿ ಮೂಟೆ ಕಟ್ಟಿ ವಿದೇಶಕ್ಕೆ
ಹಾರುತಿಹರು ಸೂಟು ಬೂಟಿನ ಮಂದಿ.
ಮಣ ಭಾರದ ಬಂಗಾರ ಹೊತ್ತು ತಿರುಗುವ
ಮಾನಗೆಟ್ಟ ಸಿರಿವಂತಿಕೆಯ ಮಂಗಳೆಯರು.
ನಿಮ್ಮ ಸಿರಿವಂತಿಕೆಯ ಅಣು ಅಣುವಿನಲ್ಲೂ
ಅಡಗಿಹುದು ಯಾವುದೋ ಬಡವನ ಬೆವರು.
ತುತ್ತು ಕದ್ದವನು ಕಳ್ಳನಲ್ಲ,
ಸುಳ್ಳು ಹೇಳಿ, ಜನರ ವಂಚಿಸಿ ಬದುಕುವ
ರಾಜಕಾರಣಿಗಳು, ಜೊತೆಗೆ ಅಧಿಕಾರಿಗಳು
ಇವರಲ್ಲವೇ ಕಳ್ಳರು? ದೇಶ ಲೂಟಿ ಮಾಡುವ
ದೇಶದ್ರೋಹಿ ಉದ್ಯಮಿಗಳ ಯಾಕೆ
ಯಾರೂ ಬಡಿದು ಕೊಲ್ಲಲೊಲ್ಲರು ?
ಹೆಣೆಯುತಿದೆ ಬಲೆಯೊಂದು ಅಂತರ್ಜಾಲ
ಯುವ ಮನಸುಗಳ ಸಂಗಮ ಮೋಹಜಾಲ
ಸುಳಿಗೆ ಸಿಲುಕಿ ನಲುಗುತಿರೆ ಇಂದ್ರಜಾಲ
ದಾರಿ ತಪ್ಪಿಸಿ ಬಲೆಯ ಹಿಡಿದಿಹರು ಮೋಸಜಾಲ...
ಅರಿಯಬೇಕಿಲ್ಲಿ ಯುವ ಮನಸುಗಳು
ಹೆತ್ತವರ ಮಮಕಾರದ ವಾಂಛಲ್ಯದ ಕನಸುಗಳು
ಸೆಳೆಯುತಿದೆ ಅಂತರ್ಜಾಲದ ಜಾಹೀರಾತುಗಳು
ಸರಿದಾರಿಯ ತೋರಬೇಕಿದೆ ಹಿತ ಬಂಧುಗಳು...
ಸ್ನೇಹಿತರು ಸಿಗುವರು ನೂರು ಮಂದಿ ಬಾಳಿನಲ್ಲಿ
ಹೆತ್ತವರ ಕನಸು ಹೊಸಕಿ ಭ್ರಮೆಯರಸುವ ಕನಸಿನಲ್ಲಿ
ಸುಭದ್ರ ನಾಳೆಗಳು ಕಮರಿ ಬದುಕು ಘೋರ ನರಕದಲ್ಲಿ
ಬುಧ್ದಿ ಕಲಿತು ಬರುವ ದಾರಿ ಮರೆತು ಕಾಣದ ಲೋಕದಲ್ಲಿ...