ನನ್ನ ಪ್ರೀತಿಯ ಕವಿತೆ
ಹೀಗೇಕೆ ನೀ ನನ್ನ ಕಾಡುತಿರುವೆ
ಮಲಗಿ ಕಣ್ಣ ರೆಪ್ಪೆ ಮುಚ್ಚಿದರು
ನಿನ್ನದೆ ಪದಗಳ ಕನಸಿನ ಮಂಪರು.
ಬೆಳಗಾಗುವ ತನಕ ತುಸು ತಾಳು
ಬಂಧಿಸಿಡುವೆ ನಿನ್ನ ಪದಗಳ ಮುತ್ತಿನ ಸಾಲು.
-ಉಮೇಶ್.
ಹೊಂಬಾಳೆ ಹುಟ್ಟಿದೆ ನಮ್ಮ
ತೊಟದಲ್ಲಿ ಪಸಲು ಕೊಡುವ ಕಾಲ ಬಂದಿದೆ
ಬೀಜ ವೊಂದು ಮೊಳಕೆಯಾಗಿ ಗಿಡವಾಗಿ
ಬೆಳೆದು ಕಾಯಾಗಿ ಹೂ ಬಿಟ್ಟು ಹರಳುವ ಕಾಲ
ನೊಡಿದಿರೆನು ಅದರಂದವ ಹೊಬಾಳೆ ಹೊನ್ನ
ಕಲಶವ ಮನೆ ಮನೆಯ ಶೂಭಾರಂಬಕ್ಕೆ
ಬೇಕಲ್ಲ ಅದರ ಸೊಬಗು ಇಲ್ಲದಿದ್ದರೆ
ಅಂದವೆ ಇಲ್ಲದ ಮನೆಯಂಗಳ
ಇವಳಿಲ್ಲದೆ ಜಾತ್ರೆಗೆ ಸಿಂಗಾರವೆ ಇಲ್ಲ
ಉರಂಗಳವೆಲ್ಲ ಗಮಗಮಿಸುವೆಯಲ್ಲೆ
ನೀ ಇಲ್ಲದೆ ಕಲಶವೆ ಇಲ್ಲದಾಗೆ....
ತೊಟವೆಲ್ಲ ತುಂಬಿಸಿದೆಯಲ್ಲೆ ನೀನ್ನ ಗಮಗಮ
ಪರಿಮಳವ ಎಲ್ಲಿಂದ ಕದ್ದು ತಂದಿಯೆ ಆ ಗಂದದ
ಪರಿಮಳವ ತೊಟವೆ ಸಿಂಗಾರ ಮಾಡಿರುವೆಯಲ್ಲೆ
ನಿನ್ನಂತೆ ನಾವಾಗಬಾರದಿತ್ತೆ.......
ಒಳ್ಳೆಯವರಿಗೆ ಕಾಲ ಈ ಲೋಕದೊಳಗೆ ಇಲ್ಲ
ತುಂಬಿ ತುಳುಕುತಿದೆಯಲ್ಲ ಕೆಟ್ಟ ಹುಳಗಳ ಜಾಲ..
ಹೊತ್ತಿ ಉರಿಯುತಿದೆಯಲ್ಲ ಪಾಪಿಗಳ ಜ್ವಾಲ
ಸುಟ್ಟು ಭಸ್ಮವಾಯಿತಲ್ಲ ಮನುಷ್ಯ ಧರ್ಮವೆಲ್ಲ..
ಬೇಡು ಕೊಂಡ್ರೆ ಯಾವ ಕೆಲಸ ನಡೆಯೋದಿಲ್ಲ
ದುಡ್ಡು ಕೊಟ್ರೆ ಎಂಥ ಕೆಲಸನೂ ನಿಲ್ಲೋದಿಲ್ಲ..
ಹೆಗ್ಗಣಗಳಂತೆ ಮಾಡಿಕೊಂಡವ್ರೆ ರಾಶಿ ರಾಶಿ ಬಿಲ
ತಲೆತಲಾಂತರಗಳು ಮುಕ್ಕುವಷ್ಟು ತುಂಬಿ ಇಡುವರಲ್ಲ..
ಎಲ್ಲೆಲ್ಲೂ ಕಟ್ಟಿಕೊಂಡವ್ರೆ ದೊಡ್ಡ ದೊಡ್ಡ ಕುಳಗಳ ಬಲ
ನ್ಯಾಯ ದೇವತೆಗೂ ಮಣ್ಣು ಮುಕ್ಕಿಸಿ ಮೆರಿತಾರಲ್ಲ..
ಗುಣವನ್ನು ಮಖಾಡೆ ಮಲಗಿಸಿದರಲ್ಲ
ಹಣವನ್ನು ಗುಡಿಸಿ ಗುಂಡಾಂತರ ಮಾಡಿದರಲ್ಲ..
ನಾವು ನಮ್ಮವರು ಅನ್ನೋದೆಲ್ಲ ನುಚ್ಚು ನೂರಾಗಿ ಮಣ್ಣು ಸೇರಿತಲ್ಲ..
ಪೊಳ್ಳು ಮಾತಾನಾಡಿ ಅರಮನೆ ಆಳುವರಲ್ಲ
ನೆರಳು ಇಲ್ಲದವರಿಗೆ ಸಣ್ಣ ಸೂರು ನೀಡಲಿಲ್ಲ..
ದೇಶದ ಕಥೆ ಕಿಂಚಿತ್ತೂ ಕೇಳೋದಿಲ್ಲ
ವೇಷ ಹಾಕ್ಕೊಂಡು ಮನುಷ್ಯರನ್ನ ಕಿತ್ತು ತಿನ್ತಾರಲ್ಲ..
ನೊಂದು ಬೆಂದವರಿಗೆ ಸಾಲ ಮರಣ ತಪ್ಪಲಿಲ್ಲ
ನುಂಗಿ ನೀರು ಕುಡಿವವರ ಕಪಟನಾಟಕ ನಿಲ್ಲಲಿಲ್ಲ.
ಅಧಿಕಾರ ದಾಹಕ್ಕಾಗಿ ಹೆಣಗಳ ಸಂತೆ ಮಾಡ್ತಾರಲ್ಲ
ಹೆಣ್ಣಿನ ಮೋಹಕ್ಕಾಗಿ ಸುಳ್ಳಿನ ಕಂತೆ ಕಟ್ತಾರಲ್ಲ..
ದೇವರು ದಿಂಡ್ರು ಅಂದ್ರೆ ಚಿನ್ನದ ಕಾಣಿಕೆ ನೀಡ್ತಾರಲ್ಲ
ಕೂಳು ಇಲ್ಲದೆ ನರಳುವವರಿಗೆ ಅನ್ನ ಕೊಡದೆ ಸಾಯಿಸ್ತಾರಲ್ಲ..
ದ್ವೇಷ ಮೋಸದ ಬೆಂಕಿ ಆರಿಸುವವರು ಯಾರು ಇಲ್ಲ
ಪ್ರೀತಿ ಸ್ನೇಹದ ಕಿಡಿ ಹೊತ್ತಿಸುವವರು ಎಲ್ಲೂ ಇಲ್ಲ..