Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

...ನನ್ನಪ್ಪ...

"ಶಾಲೆಗೆ ಸೀರಿಸಲು ಬಂದ ನನ್ನಪ್ಪ...
ನನ್ನ ಮಗ ಓದಿ ದೊಡ್ಡ ವ್ಯಕ್ತಿಯಾಗಲಿ ಎಂದ ನನ್ನಪ್ಪ..
ವರ್ಷದಲ್ಲಿ ಒಂದು ಬಾರಿಯು ನನ್ನ ಬಗ್ಗೆ ವಿಚಾರಿಸಲು
ಶಾಲೆಗೆ ಬರಲಿಲ್ಲ ನನ್ನಪ್ಪ...

ನನ್ನ ಮಗ ಓದುವುದರಲ್ಲಿ ಹಿಂಜರಿಯುವುದಿಲ್ಲ ಎಂದು
ನಂಬಿಕೆ ಇಟ್ಟ ನನ್ನಪ್ಪ...
ಓದಿ ನನ್ನ ನೋಡಿಕೋ ಅನ್ನಲಿಲ್ಲ ನನ್ನಪ್ಪ...
ಓದಿ ನಿನ್ನ ಜೀವನ ನೀ ಕಟ್ಟಿಕೊ ಎಂದ ನನ್ನಪ್ಪ...

ಇತರ ಸ್ನೇಹಿತರ ಜೊತೆ ಸುತ್ತಾಡಿದರು ಕೇಳಲಿಲ್ಲ ನನ್ನಪ್ಪ..
ನನ್ನಂತೆ ಕುಡುಕನಾಗಬೇಡ ಎಂದು ಬುದ್ದಿಹೇಳಿದ ನನ್ನಪ್ಪ..
ಕಷ್ಟಪಟ್ಟು ಜಮಿನ್ದಾರ ಮನೆಯಲಿ ಕೆಲಸ ಮಾಡುವಾಗ ನನ್ನಪ್ಪ..
ಜಮಿನ್ದಾರು ಮಗನ ಬಗ್ಗೆ ಕೇಳಿದಾಗ ನನ್ನಪ್ಪ..

ತನ್ನೆಲ್ಲ ಕಷ್ಟಗಳನ್ನು ಒಂದೇ ಕ್ಷಣ ಮರೆತು ತನ್ನ ಮಗನ ಬಗ್ಗೆ
ಹೆಮ್ಮೆಯಿಂದ ಹೇಳಿಕೊಂಡ ನನ್ನಪ್ಪ"...

- ಎ.ಆರ್.ರಾಹುಲ್



- ?.?.?????.

08 Apr 2025, 07:33 am

ಎಲೆ?☘️??

ವಸಂತ ಬಂದಾಗ ಚಿಗುರುವೆ ನೀನು
ಬೇಸಿಗೆ ಬಂದಾಗ ಉದರುವೆ ನೀನು
ಮರಳಿ ವಸಂತ ಬರೋವರೆಗೂ ಕಾಯುವೆ ನೀನು ಮತ್ತೆ ಮತ್ತೆ ಚಿಗುರುವಿ ನೀನು
ಪ್ರಕೃತಿಯ ಸೌಂದರ್ಯವನ್ನು ಹೆಚ್ಚಿಸುವೆ ನೀನು ನೀನು ಉದರುವಾಗ ಏನೋ ಕಳೆದುಕೊಂಡಿರುವ ಬಾವ ನಮಗ
ಮತ್ತೆ ಮತ್ತೆ ಚಿಗುರುತ್ತಿರು ನೀನು ಪ್ರಕೃತಿಯ ಸೌಂದರ್ಯ ಹೆಚ್ಚಿಸುತ್ತಿರು ನೀನು.

@ಎಸ್ ಕೆ 216

- shridhar KARAGANVI

06 Apr 2025, 11:21 am

ಕವನದ ಶೀರ್ಷಿಕೆ ನಾಗಲೋಕದ ಪುಷ್ಪಗಳ ಪುಟ್ಟಜೋಡಿ.


ಮಲ್ಲಿಗೆ ಮದರಂಗಿಲಿ ಕೆಂಪಾಗಿ ಅರಸಿತು ಸುಗಂಧರಾಜನ,
ಮಿಂಚಿನ ಬೆಳಕಲಿ ಕಣ್ಮುಚ್ಚಿ ಹುಡುಕುವೆ ನಿ ಸಿಗೋ ತನ.

ಸಂಪಿಗೆ ಧಮಲು ಸೆಳೆಯಿತು ಹುಣ್ಣಿಮೆಯಲಿ ಹೊಳೆಯೋ ಸಾಮ್ರಾಟನನ್ನ,
ಬಿರಿದ ನೈದಿಲೆ ನಾಟ್ಯಧಿ ತಬ್ಬಿತು ಮಧುವ ಹೀರೋ ಭ್ರಮರವನ್ನ.

ನಾಗಲೋಕದ ಪುಷ್ಪಗಳ ಪುಟ್ಟಜೋಡಿಗೆ ಪ್ರಕೃತಿ ಬೆಳಗಿತು ಆರತಿ,
ಮುಳ್ಳಲ್ಲಿ ನಗುವ ಗುಲಾಬಿಯಂತೆ ಗೂಡಲ್ಲಿರುವ ಪ್ರೀತಿ.

ಭಾವದೆಲೆಗಳ ಪೋಣಿಸಿ ಅರ್ಪಿಸಿದೆ ಭೀಮನ ಪ್ರಾರ್ಥಿಸಿ,
ನಮ್ರತೆಗೆ ಮನ ಬೆರೆಯಿತು, ಸೋಮರಸವನ್ನು ಲೇಪಿಸಿ.

ಜೇನ ಹನಿಯ ಕಡಲಲ್ಲಿ ಮುಳುಗಿದೆ ಸುಮದ ದಂಡು,
ಬೆಳಕು ಬಯಸದ ರಾತ್ರಿ ರಾಣಿ ಬೆಳದಿಂಗಳೊಂದೆ ಸಾಕೆಂದಿದೆ ಸಿಹಿಯನ್ಉಂಡು.

ಸಪ್ತ ವಾರವು ಜಪಿಸೋ ಮಂತ್ರ,
ಬಿಡದೆ ಶಿವನ ಮೂಡಿ ಸೇರೋ ಅಸ್ತ್ರ.

ತೇಲೋ ಮೋಡದ ಹಾಗೆ ಹೂಗಳ ಮನದಿ ಮೊಧವಿರಲಿ,
ಓಡುವ ಕಾಲದ ನೆನಪುಗಳು ಶ್ರೀಗಂಧದಂತಿರಲಿ.

ಮಾಸದು ಮಮತೆ
ಕರಗೋ ಸಂಜೆಯಂತೆ,
ಶುದ್ಧವಾದ ಸ್ನೇಹ
ನೊರೆ ಹಾಲಂತೆ.

- nagamani Kanaka

05 Apr 2025, 03:56 pm

ಕವನದ ಶೀರ್ಷಿಕೆ ಸದೃಶ ದೇವರು.

ಕಿಟಕಿ ಇರದ ಗೂಡಿಗೆ ಕನ್ನಡಿಯಾದವರು,
ಸಫಲತೆಯ ದಾರಿಗೆ ಜ್ಞಾನದ ಬೆಳಕಾದರು.

ಹಿಂಜರಿಕೆ ದುಗುಡವ ದೂರ ಸರಿಸಿದವರೂ,
ಪ್ರತ್ಯಕ್ಷ ನಡೆಗೆ ಧೈರ್ಯ ತುಂಬಿದರು.

ಮೊಗ್ಗಿನ ಮನಸ್ಸಿಗೆ ಮೌಲ್ಯಾಮೃತ ಹರಿಸಿದವರು,
ಸನ್ಮಾರ್ಗವ ಪರಿಪಾಲಿಸೋ
ಶಿಶುವ ಕಂಡು ಖುಷಿ ಪಟ್ಟರು.

ನಿಸ್ವಾರ್ಥ ಸೇವೆಗೆ ಹೆಸರಾದವರು,
ಪ್ರಾಮಾಣಿಕ ಕೃತಿಗೆ ಸ್ಫೂರ್ತಿ ತುಂಬಿದರು.

ಸಂಸಾರದ ನಿರ್ವಹಣೆಗೆ ಮಾರ್ಗದರ್ಶಕರಾದವರು,
ಸಂಬಂಧದ ಸೇತುವೆ ಕಳಚದಂತೆ ಸಹಕರಿಸುತ್ತಿರುವರು.

ಸೋತಾಗ ಬೈಯದೆ ಬುದ್ಧಿ ಹೇಳಿದವರು,
ಗೆದ್ದಾಗ ಹೃದಯ ತುಂಬಿ ಆಶೀರ್ವದಿಸಿದರು.

ಅಂತರಂಗದ ಅಧ್ಯಯನ ಮಾಡಿದವರು,
ಉನ್ನತ ವಿದ್ಯೆಗೆ ಗುರುವಾದರೂ.

ವೇದಿಕೆಯ ಮಾತುಗಳಿಗೆ ಪ್ರೇರಣೆ ನೀಡಿದವರು,
ಎತ್ತರದ ಸ್ಥಾನದಲ್ಲಿ ನೋಡಲು ಬಯಸಿದರು.

ಜಿಗುಪ್ಸೆಯ ಜೋಗಿಯನ್ನು ವಾತ್ಸಲ್ಯದಿ ಪೊರೆದವರು,
ಪ್ರಪಂಚವ ಮರೆವಷ್ಟು ಪ್ರೀತಿಸಿದರು.

ಬಚ್ಚಿಡುವ ಮುತ್ತಂತೆ ಜೊತೆಯಾದವರು,
ನೆತ್ತರ ಕಣ ಕಣದ ಸ್ಮರಣೆಯಲ್ಲಿ ಬೆರೆತರು.

ಧನ್ಯತೆಯ ಜೀವನಕ್ಕೆ ಸಾಕ್ಷಿಯಾದವರು,
ಪುಟಿಯುವ ಭಾವಕೆ ಸಂಜೀವಿನಿಯಾದರೂ.

ನಾಲಿಗೆ ಮಲಗುವ ತನಕ ನುಡಿಯ ಸಾಲಿಗೆ ಸಾಹುಕಾರರು,
ಪ್ರಬುದ್ಧ ಸಮಾಜಕ್ಕೆ ಇವರೇ ಸದೃಶ ದೇವರು.

- nagamani Kanaka

05 Apr 2025, 03:49 pm

ನನ್ನ ಹೃದಯದ ವೀಣೆ...

ಬರೆಯುವೆ ಮನತೋಚಿದ ಹಾಗೆ
ಸಾಹಿತ್ಯವೋ ಕವನವೋ
ಗೋತ್ತಿಲ್ಲ ನನಗೆ..
ಸಾಹಿತ್ಯವಾದರೆ ನೀನೇ ಅದರ ಗಾಯಕಿ
ಈ ಕವಿಯ ಕವನ ಕೇಳದೆ
ನೀನಾದೆ, ಯಾರಿಗೋ ನಾಯಕಿ
ಇದಕ್ಕೆಲ್ಲಾ ಕಾರಣ ನೀನೇ
ನೀ ಎದುರಾದರೆ ಈಗಲೂ ಮೀಟಿದಂತೆ
ನನ್ನ ಹೃದಯದ ವೀಣೆ....
ಎಮ್.ಎಸ್.ಭೋವಿ...✍️
.
.

- mani_s_bhovi

04 Apr 2025, 06:31 pm

"ಹುಚ್ಚು ಮನಸಿನ ಹತ್ತು ಮುಖಗಳು"

"ಇಲ್ಲಿ ಕೆಲವರ ಮೇಲೆ ಪ್ರೀತಿ
ಕೆಲವರ ಮೇಲೆ ಸಿಟ್ಟು,
ಕೆಲವರ ಮೇಲೆ ಕಾಮ,ಮೋಹ,
ಇತ್ಯಾದಿಗಳೆಲ್ಲ ನಾ ಕಂಡಾಗ
ನನಗೆ ತಿಳಿದಿದ್ದು (ಅನಿಸಿದ್ದು)
ಈ ಪ್ರಪಂಚದಲ್ಲಿ ಇಲ್ಲಾದಕ್ಕಿಂತ
ಅತಿವೇಗವಾಗಿ ಬದಲಾಗುವುದು
ಮನುಷ್ಯನ ಮನಸ್ಸು, ಆಲೋಚನೆಗಳು
ಮಾತ್ರ.. ಇದು ಹುಚ್ಚು ಮನಸಿನ ಹತ್ತು
ಮುಖಗಳು"..!
-ಎ.ಆರ್.ರಾಹುಲ್

- ?.?.?????.

04 Apr 2025, 07:57 am

"ಇದು ರಾಮಾಯಣ ಅಲ್ಲ"

"ನಾ ಕಾಯುತ್ತಿದೆ ಅವಳಿಗಾಗಿ
ಶಬರಿಯಂತೆ
ನೀ ಸಿಗಬೇಕ್ಕಿತ್ತು ನನಗೆ
ಸೀತೆಯಂತೆ
ಆದರೆ ನಿನ್ನ ಗಂಡ ನಿನ್ನ ಹೊತ್ವೈದ
ರಾವಣನಂತೆ...
ಯುದ್ಧ ಮಾಡಿ ನಿನ್ನ ಪಡೆಯಬೇಕು
ಅಂದ್ರೆ ಇದು
ರಾಮಾಯಣ ಅಲ್ಲ
ನಿಜ ಜೀವನ"....!

-ಎ.ಆರ್.ರಾಹುಲ್..

- ?.?.?????.

04 Apr 2025, 07:56 am

"ಸಮಾನತೆಯ ಹರಿಕಾರ"

"ಹೆಣ್ಣನ್ನು ಊಹಿಸಿ
ರಾಮಾಯಣ ಬರೆದರೂ
ಹೆಣ್ಣನ್ನು ಬಣ್ಣಿಸಿ
ಮಾಹಾಭಾರತವನ್ನು ಬರೆದರೂ
ಹೆಣ್ಣನ್ನು ಊಹಿಸಿ, ವರ್ಣಿಸಿ, ಬಣ್ಣಿಸಿ.
ಹಲವಾರು ಕವಿಗಳು ಕಥೆ,
ಕಾದಂಬರಿಗಳನ್ನು ಬರೆದರೂ..
ಆದರೆ ಹೆಣ್ಣಿನ ಹಕ್ಕುಗಳ
ಬಗ್ಗೆ ಬರೆದವರು..
ಡಾ//ಬಿ,ಆರ್,ಅಂಬೇಡ್ಕರ್...ಮಾತ್ರ"..!

- ?.?.?????.

04 Apr 2025, 07:55 am

ಅಂಬೇಡ್ಕರ್ ರವರು

ಶ್ರೇಷ್ಠ -ಕನಿಷ್ಠದ ನೋವು ತಿಂದವರು
ಕನಿಷ್ಠದ ಅನಿಷ್ಟಕೆ "ಕಾವು" ಕೊಟ್ಟವರು
ಮಾನ-ಅಪಮಾನದ ಅಂಚಲ್ಲಿ ಬೆಂದವರು
ಅಪಮಾನದ ಕಂಚಿಗೆ "ಧೈರ್ಯ"ದ ನೀರು ಎರೆದವರು

ಹಸಿವು-ಬಡತನದ ಬ್ಯಾನಿಯ ತಿಂದವರು
ಬಡತನದ ಬ್ಯಾನಿಗೆ "ಅಕ್ಷರ"ದ ಮಾತ್ರೆ ನುಂಗಿದವರು
ಹೊಂಚು-ಸಂಚಿನ ಭಂಡತನಕೆ ಬಳಲಿದವರು
ಸಂಚಿನ ಡೋಂಗಿಗೆ "ಸಾಹಸ"ದ ತೀರ್ಥ ಕುಡಿಸಿದವರು

ಮಣ್ಣು-ಹೆಣ್ಣಿನ ಗೋಳನು ಕಣ್ಣಾರೆ ಕಂಡವರು
ಹೆಣ್ಣಿನ ಬಾಳಿಗೆ ಮಣ್ಣಿನ "ಋಣ"ವ ತೀರಿಸಿದವರು
ಪರಿಸರ-ಪ್ರಕೃತಿಯು ಕೆಲವರಿಗೇ ಯಾಕೆ? ಅಂದವರು
ಪ್ರಕೃತಿಯ ಸಂಸ್ಕೃತಿಯು "ಎಲ್ಲರಿಗೂ" ಎಂದವರು

ರೂಪಾಯಿ-ನೋಟಿನ ವಯ್ಯಾರ ನೋಡಿದವರು
ನೋಟಿನ ಸಿಂಗಾರದ ಪ್ಲೇಟಿಗೆ ಕಪಾಟು ಬಡಿಸಿದವರು
ಛಿದ್ರ -ಭದ್ರತೆಗೆ ಪೆನ್ನಿನ ಇಂಕನು ಸವಸಿದವರು
ಭದ್ರತೆಗೆ ಗೀಚಿದ ಪೆನ್ನಿಗೆ "ಮಸಿ"ಯ ಹಚ್ಚದವರು
ಸುಗ್ಗಿ..










- ಆರ್. ಎಸ್ .ಸುಗ್ಗಿ

03 Apr 2025, 08:45 pm

ಸಂಸ್ಕೃತಿ...

ಅರ್ಥಯಿಸಿಕ್ಕೊಳ್ಳವವಳು ಬೇಕು,,
ಅರ್ದಕ್ಕೆ ಬಿಟ್ಟು ಹೋಗುವವಳಲ್ಲ...!
ಸಹಿಸಿಕೊಳ್ಳವವಳು ಬೇಕು,,
ಸಮಯ ನೋಡಿ ಸಾಧಿಸುವವಳಲ್ಲ...!
ತನು ಮನ ಸರ್ವಸ್ವವನ್ನು ಕೊಡುವವಳು ಬೇಕು,
ದುರಾಸೆಯ ದರ್ಪದವಳಲ್ಲ...!
ನಂಬಿಕೆ ನೀಡುವವಳು ಬೇಕು,
ನಾಟಕ ಆಡುವವಳಲ್ಲ...!
ತಾಯಿಯಂತೆ ನೋಡಿಕೊಳ್ಳವವಳು ಬೇಕು,,
ಹೆತ್ತವರನ್ನೇ ಹೊರಗಾಕುವಂತೆ ಹೇಳುವವಳಲ್ಲ...!
ಎಮ್.ಎಸ್.ಭೋವಿ...✍️
.
.

- mani_s_bhovi

03 Apr 2025, 04:46 pm