Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಏ ಗೆಳತಿ....?

?......ಏ ಗೆಳತಿ...?...ನೀ ಬಿಟ್ಟು ಹೋದ ಮರುಕ್ಷಣದಿಂದ....ಇಲ್ಲಿಯವರೆಗೂ.....?ನಾ ನಿನ್ನ ಜೀವನಕ್ಕೆ ಮುಳ್ಳಾಗಲಿಲ್ಲ....??...ನಿನಗೆ ಒಮ್ಮೆಯಾದರು ಅನ್ನಿಸಲಿಲ್ವ....ಗೆಳತಿ ಅವನಿಗೆ....?ಮೋಸ ಮಾಡ್ತಿದೀನಿ ಎಂದು....?ನೀ ಅವತ್ತು .... ಹೇಳಿದ ಮಾತು ?ನನಗೆ ಇವತ್ತು ನೆನಪಾಗುತ್ತಿದೆ ಗೆಳತಿ??ಅದು ಏನು ಗೊತ್ತ (((CHINNAMMA))) ""ನೀನು ನನ್ನುನ್ನ ಎಲ್ಲಿಗಾದರು ಕೂಗು ಅದು ಮದುವೆ ಗಾದರು ಸರಿಯೇ ಇಲ್ಲ ಸಾಯುವುದಕ್ಕಾದರು ಸರಿಯೇ ಎಂದು """ಹಾಗಾದರೆ ನಿಜ ಹೇಳು ನೀನು ಅವತ್ತು ನನ್ನ ಹತ್ತಿರ ಹೇಳಿದ ಮಾತು ಸುಳ್ಳ? ಅಥವಾ ನೀ ಪ್ರೀತಿ ಮಾಡಿದ್ದೇ.....ಸುಳ್ಳಾ??????........AK ?.........?

- Abhi uppar

18 May 2025, 04:54 pm

ಬಿಟ್ಟ ಹೋದವಳ ಬಗ್ಗೆ ಒಂದ ಮಾತು...

ಸಿಗಲಾರದಷ್ಟು ಪ್ರೀತಿಯನ್ನು ಕೊಟ್ಟೆ ಆದರೆ ಮರೆಯಲಾಗದಷ್ಟು ನೋವು ಕೊಟ್ಟಳು*?
______________________________
*ಹುಚ್ಚನಂತೆ ಪ್ರೀತಿಸಿದೆ ಆದರೆ ಕೊನೆಗೆ ಹುಚ್ಚನಾಗೆ ಮಾಡಿದಳು ?*__________________________
ತಾಯಿ ತರ ಪ್ರೀತಿ ಕೊಟ್ಟೆ ಕೊನೆಗೆ ನಾಯಿ ತರ ನೋಡಿದಳು ?*
____________________________
ಪ್ರೀತಿಯಲ್ಲಿ ಸಿಲುಕಿ ಕುಡುಕನಾಗಿ ಮಾಡಿದ ದೇವತೆ ಅವಳು
_______________________ ____
ತನ್ನ ಜೀವನಕ್ಕಾಗಿ ನನ್ನ ಜೀವನವನ್ನು ಹಾಳು ಮಾಡಿದ ಪುಣ್ಯಾತ್ಗಿತ್ತಿ ಕಣಯ್ಯ ಅವಳು
___________________________
ಮೋಸ ಮಾಡೋ ಅವಕಾಶ ನನಗೂ ಇತ್ತು ಆದರೆ ನಿಯತ್ತು ಕಾಯುತ್ತಿತ್ತು
__________________________
ಎದೆಯ ಬಾಗಿಲು ತಟ್ಟಿದವನಿಗೆ ಮನೆಯ ಬಾಗಿಲು ತಟ್ಟಿ ಕೇಳುವುದು ಕಷ್ಟವಾಗಿರಲಿಲ್ಲ ಯಾಕೋ ಅವಳೇ ಬೇಡವೆಂದಳು
___________________________
ನಾವು ಅಳುವಾಗ ಬಾರದವರು ನಮ್ಮನು ಉಳುವಾಗ ಬಂದರಂತೆ
_________________________
ಕಾಮಕಿದ್ದಷ್ಟು ಬೆಲೆ ಪ್ರೀತಿ ಕರುಣೆ ವಾತ್ಸಲ್ಯಕ್ಕೆ ಇದ್ದಿದ್ದರೆ ಇವತ್ತು ಎಷ್ಟೋ ಪ್ರೀತಿಗಳು ಒಂದಾಗುತ್ತಿದ್ದು
__________________________
ನನ್ನವಳಗಾಗಿ ಮನಸ್ಸು ಕೊಟ್ಟವನು ನಾನು ಮನೆಯವರ ಗೋಸ್ಕರ ನನ್ನನ್ನು ಬಿಟ್ಟ ಹೋದವಳು
__________________________
ದೇಹನೀಡಲು ಮುಂದದುವಳು ಕೊರಳು ಕೊಡುವುದಕ್ಕೆ ಏಕೆ ಹಿಂಜರದಳು
__________________________
ಅವಳು ಮೋಸ ಮಾಡಲಿಲ್ಲ ತಾಯಿಯ ಒಬ್ಬಳ ಮಾತಿಗೆ ಕರ್ತವ್ಯ ನಿಭಾಯಿಸುತ್ತಿರುವವಳು ಅವಳೇ ನನ್ನವಳು
___________________________
ಮೌನ ದೇವತೆ ಅವಳು ಮೌನವಾಗಿ ದೂರವಾದಳು ಅವಳೆಲ್ಲ ದೇವರು ಮೌನವಾಗಿ ಬಿಟ್ಟಿದೆ
___________________________ಕರುಣೆ ಎಂಬುದು ದೇವರಿಗಿಲ್ಲ ಪ್ರೀತಿ ಎಂಬುವುದು ಹುಡುಗಿಲ್ಲ
___________________________
ಸಿಕ್ಕಿದವಳು ಅಷ್ಟೆ ಬೇಗ !! ತಿರಸ್ಕರಿಸುವ ಅಷ್ಟೇ ಬೇಗ
_______________________

ಸಿಗದವರನ್ನು ಹುಡುಕಬೇಡ..
ಸಿಕ್ಕವರನ್ನು ಮರೆಯಬೇಡ..
ಬರದವರನ್ನು ಕಾಯಬೇಡ..
ಬಂದವರನ್ನು ಕಾಯಿಸಬೇಡ..
ಕೊಡದವರನ್ನು ಕೇಳಬೇಡ.. ಕೊಟ್ಟವರನ್ನು ಮರೆಯಬೇಡಿ ..
ಬದುಕಿದರೆ ಎದ್ದು ಬಿಡಿ..
ಸತ್ತರೆ ಹೋಗಿ ಬಿಡಿ....
_______________________
ಲವ್ ಮಾಡುವ ಧೈರ್ಯ ನನಗಿದ್ದರೆ ನಾನ್ಯಾಕೆ ಇಲ್ಲಿ ಬರೆಯುತ್ತಿದ್ದೆ....ಅರ್ಥಮಾಡಿಕೊಳ್ಳುವ ಜಾಣೆ ಅವಳಾಗಿದ್ದರೆ ಇಲ್ಲಿ ಏಕೆ ಓದುತ್ತಿದ್ದಳು.?
_________________________
ನೊಂದ ಹೃದಯ ???
_______________________
........ AK ?

- Abhi uppar

18 May 2025, 04:52 pm

ಪ್ರೀತಿಯೆಂದು ಕರೆಯಬಹುದೇ

ಮೋಹಗೊಂಡೆ ನಿನ್ನ
ನೋಡಿ ನಾನು
ಮನಸೂರೆಗೊಂಡೆ ನನ್ನ
ಮನಸ ನೀನು
ಕಾರಣವೇನೆಂದು ತಿಳಿಯದಾದೆ
ಪ್ರೀತಿಯೆಂದು ಕರೆಯಬಹುದೆ?.......

ನೀಲಾಕಾಶದಲಿ ಕಪ್ಪು ಮೋಡಗಳೊಳಗೆ
ಮಿಂಚಾಗಿ ಸುಳಿದೆ,
ಗಿರಿಶಿಖರ ಮುಗಿಲ
ಚುಂಬಿಸುವ ಗಳಿಗೆ
ನೀರಾಗಿ ಸುರಿದು ಹರಿದು
ಪ್ರೇಮಸಾಗರ ತುಂಬಿದೆ!
ಎಷ್ಟು ಮೊಗೆದರೂ
ಖಾಲಿಯಾಗುತ್ತಿಲ್ಲ
ಕಾರಣ ಮೊಹಬ್ಬತ್ ಇರಬಹುದೆ ?...

ಬಿಸಿಲು ಮಳೆಯೊಂದಿಗೆ
ಕಾಣಿಸಿಕೊಂಡ ಕಾಮನ ಬಿಲ್ಲು
ಕಟ್ಟುತ್ತಿದೆ ಹೃದಯದೊಳಗೆ
ತಾಜಮಹಲು
ಕಾಯಿಸದೆ, ಸತಾಯಿಸದೆ
ಕೊಟ್ಟು ಬಿಡು ನಿನ್ನ ಪುಟ್ಟ ಹೃದಯ
ನನ್ನ ಹೃದಯದೊಳಗೆ
ಪ್ರೀತಿಯ ಕಸಿ ಮಾಡಬೇಕಾಗಿದೆ
ಕಾರಣ ನಿನ್ನ ಮೇಲೆ ಸಿಕ್ಕಪಟ್ಟೆ ಲವ್ ಆಗಿದೆ?

ಡಾII ನಾಗೇಶ್ ಮೌರ್ಯ
9743907399

- ಡಾ ನಾಗೇಶ ಮೌರ್ಯ

17 May 2025, 09:29 am

ಹುಣ್ಣಿಮೆ ಬೆಳಕಾಯ್ತು

ಬೆಟ್ಟದಷ್ಟು ಕಷ್ಟಗಳು
ಜೀವನದಲ್ಲಿ ಕಂಡ ನಷ್ಟಗಳು
ಮರೆಯಲಾಗದ ಕಹಿ ನೆನಪುಗಳು
ನಿನ್ನೊಲವಿನ ನಗೆಗೆ ಕರಗಿದವು

ಅಮಾವಾಸ್ಯೆಯ ಕತ್ತಲು
ದ್ವೇಷದ ಜ್ವಾಲೆಗೆ ಹರಿದ ನೆತ್ತರು
ಕವಿದಿದೆ ಮನಕೆ
ಕಾರ್ಮೋಡದ ಕತ್ತಲು
ನಲ್ಲೇ ನಿನ್ನ ಕಾಲು ಗೆಜ್ಜೆಯ ಶಬ್ಧಕೆ
ಹುಣ್ಣಿಮೆ ಬೆಳಕಾಯ್ತು
ಪ್ರೀತಿಗೆ ಅಡಿಪಾಯವಾಯ್ತು

ಡಾII ನಾಗೇಶ್ ಮೌರ್ಯ





- ಡಾ ನಾಗೇಶ ಮೌರ್ಯ

17 May 2025, 09:26 am

ನಿನ್ನದೆ ಧ್ಯಾನದಲಿ

ಪ್ರೀಯೆ...
ಅಪರಿಚಿತಳಾಗಿ ಬಂದೆ
ನನ್ನ ಬಾಳಿನ ಪುಟಕೆ,
ಚಿರಸ್ಥಾಯಿಯಾಗಿ
ನೆಲೆಸಿ ಬಿಟ್ಟೆ ಹೃದಯದೊಳಗೆ,
ಸಿಟ್ಟು ಕೋಪ
ಸಿಡುಕು ಒಡಕು ಎಲ್ಲವೂ ನೋಡಿದೆ
ಆದರೂ ಬಯಸುತ್ತಿದೆ
ಮನಸ್ಸು ನಿನ್ನದೆ ಕಡೆಗೆ.....

ಸಖಿ...
ನಿನ್ನದೆ ಬಿಂಬ ಪ್ರತಿಬಿಂಬ ಕನ್ನಡಿಯೊಳಗೆ
ನಿತ್ಯವೂ ನಿನ್ನದೆ ಸಿಹಿ ಕುಣಿತ ಎದೆಯೊಳಗೆ
ಬಲ್ಲೆ ನಾನು ಕನ್ನಡದ ಕಾಗುಣಿತ
ತಿಳಿಯದಾದೆ ಪ್ರೀತಿಯ ಏರಿಳಿತ
ಮನಸಲಿ ರಾಗವಿಲ್ಲದ ಹಾಡಿನ ಕೇಕೆ
ಕೇಳುವವರಿಲ್ಲ ನನ್ನ ದಿನಚರಿಯ ಚಟುವಟಿಕೆ
ನಿನ್ನದೇ ಧ್ಯಾನದಲಿ
ಶುರುವಾಗಿದೆ ಹೊಸ ತಿಳಿವಳಿಕೆ.....

ಗೆಳತಿ....
ದೂರದಿಂದಲೆ ಸೆಳೆಯುತ್ತಿದೆ
ನಿನ್ನ ನಗು
ಪಕ್ಕದಲ್ಲಿ ಕೂತು
ಕೈ ಹಿಡಿದು
ಉಸಿರು ಬಿಗಿಹಿಡಿದು
ಕೇಳಬೇಕು ನಿನ್ನ ಮಾತು ಮೆಲ್ಲಗೆ
ಹೃದಯ ಹೊಡೆದು
ರಕ್ತ ಚೆಲ್ಲಿ ಚಿಗುರಬೇಕು
ಸೂಜಿ ಮಲ್ಲಿಗೆ
ಆ ಹೂವ್ವ ತಂದು ಅರ್ಪಿಸುವೆ
ನಿನ್ನ ಪಾದಕೆ
ಈಗಲಾದರೂ ನೀಡು ನನ್ನ
ಪ್ರೀತಿಗೆ ಸೂಚನೆ......

ಡಾII ನಾಗೇಶ್ ಮೌರ್ಯ
9743907399

- ಡಾ ನಾಗೇಶ ಮೌರ್ಯ

17 May 2025, 08:58 am

ಅಪ್ಪ

ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ದೇವರಿಲ್ಲ ಎಂಬ ಗಾದೆ ಮಾತು ಎಲ್ಲರಿಗೂ ಗೊತ್ತಿರುವ ವಿಷಯವೇ, ಹಿಂದಿನ ಕಾಲದಿಂದಲೂ ಋಷಿಮುನಿಗಳು,ಕವಿಗಳು ಅಮ್ಮನ ಬಗ್ಗೆ ನಾನಾ ಬಗೆಯಲ್ಲಿ ವರ್ಣಿಸುವುದು ನಮ್ಮೆಲ್ಲರಿಗೂ ತಿಳಿದಿರುವ ವಿಷಯವೇ, ಇಂದು ಜಗತ್ತಿನಲ್ಲಿ ಮಹಿಳೆಯರಿಗೆ ಮಹತ್ವದ ಸ್ಥಾನವಿದೆ. ಕವಿಗಳು ತಮ್ಮ ಕಾವ್ಯ ರಚನೆಗಳಲ್ಲಿ ಅಮ್ಮನ ಬಗ್ಗೆ ಆಕರ್ಷಕ ಭಾಷಾಶೈಲಿಯಲ್ಲಿ ವರ್ಣಿಸಿದ್ದಾರೆ. ಆದರೆ ಅಪ್ಪನ ಬಗ್ಗೆ ಯಾವುದೇ ಕಾವ್ಯ ಕಥೆಗಳಲ್ಲಿ ಉಲ್ಲೇಖವಿಲ್ಲದಿರುವುದು ನಮಗೆಲ್ಲರಿಗೂ ತುಂಬಾ ದುಃಖದ ಸಂಗತಿ ಎಂದು ಹೇಳಬಹುದು. ಜಗತ್ತಿನಲ್ಲಿ ಕೋಪಿಷ್ಟ ತಂದೆ ಹೊಡೆಯುವ ಅಪ್ಪಂದಿರು ಜಗತ್ತಿನಲ್ಲಿ ಎಲ್ಲಾದರೂ ಎರಡು ಪರ್ಸೆಂಟ್ ರಷ್ಟು ನಾವು ಕಾಣಬಹುದು ಆದರೆ ಪ್ರೇಮವನ್ನು ನೀಡುವ ಅಪ್ಪನ ಬಗ್ಗೆ ಏನು ಹೇಳುವಿರಿ?------.
ಏನಾದರೂ ನೋವು ಕಷ್ಟಗಳು ಬಂದರೆ ಅಮ್ಮನ ಅಳುತ್ತಾಳೆ ಅಮ್ಮ ನು ಅತ್ತು ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಾಳೆ.ಆದರೆ ಅಪ್ಪನು ಹಾಗಲ್ಲ ಏನೇನು ಕಷ್ಟಗಳು ಬಂದರೂ ಸಂಯಮದಿಂದಿರುತ್ತಾನೆ ಅಮ್ಮನಿಗೆ ಸಾಂತ್ವನ ಹೇಳುತ್ತಾನೆ ಆಗ ಅವಳನ್ನು ತಾನೇ ಸಮಾಧಾನ ಮಾಡುತ್ತಾನೆ. ಆಗ ಅಮ್ಮನಿಗಿಂತ ಸಾಂತ್ವನ ಹೇಳುವ ಅಪ್ಪನೇ ಶ್ರೇಷ್ಠನಾಗುತ್ತಾನೆ.ಯಾಕೆಂದರೆ ಉರಿಯುವ ದೀಪದಲ್ಲಿ ಜ್ಯೋತಿಗಿಂತ ದೀಪವೇ ಬಿಸಿಯಾಗಿರುತ್ತದೆ. ಆದರೆ ಮಹತ್ವ ಜ್ಯೋತಿಗೆ ಜಾಸ್ತಿ ಇರುತ್ತದೆ.ಎಲ್ಲರ ಎದುರು ಕಣ್ಣೀರು ಸುರಿಸುವ ಅಮ್ಮನನ್ನು ನೋಡುತ್ತೇವೆ. ಆದರೆ ಅಪ್ಪ ರಾತ್ರಿ ತಲೆ ದಿಂಬಿನಲ್ಲಿ ಮುಖಹುದುಗಿಸಿ ಮುಸುಮುಸು ಅಳುವುದನ್ನು ಮಾತ್ರ ನಾವು ನೋಡುವುದಿಲ್ಲ. ಅಲ್ಲೇ ನಾವು ತಪ್ಪು ಮಾಡುವುದು ತಂದೆಗೆ ಯಾವುದೇ ರೀತಿಯ ಕಷ್ಟಗಳು ನೋವುಗಳಿರುವುದಿಲ್ಲ ಎಲ್ಲವನ್ನು ಅಮ್ಮನೊಬ್ಬಳೇ ನಿಭಾಯಿಸುತ್ತಾಳೆ.ಎಂಬುದು ನಮ್ಮ ತಪ್ಪು ತಿಳುವಳಿಕೆ ಅಪ್ಪನಿಗೂ ಸಹ ಒಂದು ಮನಸ್ಸಿದೆ ಎಂಬುದನ್ನು ನಾವು ಅರಿತಿರಬೇಕು.

ನಡು ಜೀವನದಲ್ಲಿ ಹೆಂಡತಿ ತೀರಿ ಹೋದರೆ ಅಪ್ಪನು ತನ್ನ ಕಣ್ಣೀರನ್ನು ತಡೆಹಿಡಿದು ಮಕ್ಕಳಿಗೆ ಆಧಾರ ನೀಡುತ್ತಾನೆ. ದಿನಾಲು ಅಡುಗೆ ಮಾಡಿ ಬಡಿಸುವ ಅಮ್ಮ ಎಲ್ಲರಿಗೂ ನೆನಪುಳಿಯುತ್ತಾಳೆ. ಆದರೆ ಅಡುಗೆಗಾಗಿ ಸಾಮಾನು ತರುವ ಅಪ್ಪನನ್ನು ಎಲ್ಲರೂ ಸಹಜವಾಗಿ ಮರೆಯುತ್ತಾರೆ.

ತನ್ನ ಮನೆಗಾಗಿ ಪರದಾಟ.ಕಷ್ಟಪಡುವ ಪುರುಷ ಅಪ್ಪನು ನಿಜವಾಗಲೂ ಮಹಾನ್ ವ್ಯಕ್ತಿಯಾಗಿದ್ದಾನೆ.
ಶ್ರೀ ಕೃಷ್ಣನ ಅಮ್ಮ ದೇವಕಿ, ಯಶೋಧೇಯರ ಪ್ರಶಂಸೆಯನ್ನು ಎಲ್ಲಾ ಕಡೆಯೂ ಕೇಳುತ್ತೇವೆ. ಆದರೆ ಮಗನ ರಕ್ಷಣೆಗಾಗಿ ನಡುರಾತ್ರಿಯಲ್ಲಿ ಮಗನನ್ನು ತಲೆಯ ಮೇಲೆ ಹೊತ್ತುಕೊಂಡು ಪ್ರವಾಹದಿಂದ ತುಂಬಿದ ನದಿಯನ್ನು ದಾಟಿದ ಅಪ್ಪನಾದ ವಾಸುದೇವನನ್ನು ಮರೆಯಬಾರದು ಅಲ್ಲವೇ,,,,,,,,,

ಅಪ್ಪನ ಮಹತ್ವ ಯಾರಿಗೆ ಗೊತ್ತಾಗುತ್ತದೆ? ಚಿಕ್ಕಂದಿನಿಂದಲೇ ಅಪ್ಪ ತೀರಿ ಹೋದ ನಂತರ ಸಣ್ಣ ವಯಸ್ಸಿನಲ್ಲಿ ಅನೇಕ ಜವಾಬ್ದಾರಿಗಳನ್ನು ಹೊತ್ತು ಮಗನಿಗೆ ಮಾತ್ರ ನಿಜವಾದ ಅರ್ಥವೂ ತಿಳಿಯುತ್ತದೆ.

- ಮೇಘಾ ಬೆಳಧಡಿ

16 May 2025, 04:10 pm

ಕವನ ಬುದ್ಧ ಪೂರ್ಣಿಮಾ.


ಜಗದ ಬೆಳಕು ಉದಯಿಸಿತು ಮಾಯಾದೇವಿಯ ಉದರದಿಂದ,
ಕಪಿಲ ವಸ್ತುವಿನ ಜನಕೆ ಧನಕನಕಾದಿಗಳ ಹೊಳೆ ಹರಿಯಿತು ಮಹಾತ್ಮನ ಆಗಮನದಿಂದ.

ಮಗನ ಭವಿಷ್ಯ ಕೇಳಿ ಬೆಚ್ಚಿ ಬಿದ್ದ ರಾಜ ಶುದ್ಧೋದನ,
ಅರಮನೆಯಲ್ಲಿ ಕೊರತೆಗಳು ಸುಳಿಯದಂತೆ ಪೋಷಿಸಿದ ತಂದೆ ರಾಜಕುಮಾರನನ್ನ

ಹೊರ ಪ್ರಪಂಚಕ್ಕೆ ಕಾಲಿಟ್ಟ ಸಿದ್ಧಾರ್ಥನಿಗೆ,
ಕಂಡ ನಾಲ್ಕು ದೃಷ್ಯಗಳು ದಿಕ್ಸೂಚಿಗಳಾದವು ಕುಟುಂಬದ ವಿಮೋಚನೆಗೆ

ತಥಾಗತ ಮಾರ್ಗವ ಅರಸುತ್ತ ಹೊರಟ ಪ್ರಜಾಪತಿ ಸುತ,
ಸುಜಾತಳ ಪ್ರಸಾದ ಸ್ವೀಕರಿಸಿ ಧ್ಯಾನಾಸಕ್ತನಾಗಿ ದುಖಃದ ಮೂಲವನರಿತ.

ಾಸೆಗಳ ನಿಯಂತ್ರಣ ವರ್ತಮಾನದ ಚಿಂತನೆಗಳಿಗೆ ಶಕ್ತಿ,
ಮಿಡಿದ ಹೃದಯಗಳ ಉಪಚರಿಸುವ ಪ್ರವರ್ತನಗಳೇ ಸನ್ನಡತೆಗೆ ಸ್ಪೂರ್ತಿ.

ಜಾತಕ ಕಥೆಗಳ ಸಾರ ನಮ್ಮ ನಿತ್ಯ ಬದುಕಿಗೆ ಆಧಾರ,
ಅಷ್ಟಾಂಗ ಮಾರ್ಗಗಳ ಪಾಲನೆ ಶುದ್ಧ ಮನಸಿಗೆ ಆಹಾರ.

ಗೌತಮ ಬುದ್ಧನಾಗಿ ಗಳಿಸಿದ ಸಿದ್ಧಿಯ ವೈಶಾಕ ಪೂರ್ಣಿಮದಂದು,
ಅಂಧಕಾರವ ಅಳಿಸಿ ತನ್ನ ನಿಗ್ರಹಿಸಲು ಸ್ಥಳವಾಯಿತು ಬೋಧಿ ವೃಕ್ಷವಂದು.

ಶರಣಾದ ಶಿಷ್ಯರು ಹರಡಿದರು ಬುದ್ಧನ ತತ್ವಗಳ ಜಗದಗಲ,
ವಿಷ್ಣುವಿನ ಪ್ರತಿರೂಪಕ್ಕೆ ಸೋತು ಪ್ರಕೃತಿ ನಿಸ್ವಾರ್ಥದಿ ನಮಗೆ ನೀಡುತ್ತಿದೆ ಸರಕುಗಳ ಜಾಲ

ನೈತಿಕತೆ ನೆತ್ತರಾದರೆ ಸಿಗುವುದು ಆನಂದ,
ಕೈಹಿಡಿದ ಸ್ನೇಹ ಆತ್ಮ ಸಂಗಾತಿಯಾದರೆ ಕಳೆವ ಕ್ಷಣಗಳೆಲ್ಲ ಚಂದ.

ಜನನ, ಮರಣ ಮತ್ತು ಅಂತರಂಗದ ನವ ಜ್ಯೋತಿಗೆ ಗುರುವಾದ ದಿನವಿದು,
ಬುದ್ಧ ಪೂರ್ಣಿಮದ ಆಚರಣೆ ಎಂದರೆ ಸಾರ್ಥಕತೆಯ ನಿಲುವ ತಿಳಿಯುವುದು.

- nagamani Kanaka

12 May 2025, 01:27 pm

ಬದುಕು

ನನ್ನಬಾಳ ಪುಟಗಳ
ತಿರುವಿ ಹಾಕಿದರೆ ಸಿಗದು
ನನ್ನ ತಾಯಿ ತಂದೆಯ
ಅಪ್ಪುಗೆಯ ಒಲವು.

ತನ್ಮಡಿಲೊಳಗೆ
ಚಂದ್ರನ ಬೆಳದಿಂಗಳ
ರಸದೌತನ ನೀಡಿದಾಕೆ.
ಅವಳೇ ಮಮತೆಯ ಸಾಕರಾಮೂರ್ತಿ.

ಮಗಳಲ್ಲ ಮಗಳು
ತಾಯಲ್ಲ ತಾಯಿ
ಈ ಪ್ರೀತಿಗೆ ಸಮುದ್ರದಾಚೆಗಿದೆ
ತಂಪಾದ ಇಂಪಾದ ಪಿಸುಮಾತುಗಳ ಅಪ್ಪುಗೆ.

ನನ್ನನ್ನಗಲಿದೆ ಇಂದು
ನನ್ನಮನದಲ್ಲಿರುವೆ
ನೀನೆಂದೆಂದೂ ನನ್ನವರಿಂದು
ಯಾರು ಇಲ್ಲ ನಿನ್ನಗಲುವಿಕೆ ನನ್ನಲ್ಲಿಲ್ಲ.

ಹೃದಯದ ಬಡಿತದಿ
ನೀನಿರುವಿ ನಾಡಿಮಿಡಿತದಿ
ಬೆರೆತಿರುವೆ,,,, ಬದುಕುವ
ಹಂಬಲ ನೀಡಿರುವೆ ಅವಳೇ ನನ್ನವ್ವ ನನ್ನ ಸಾಕವ್ವಾ

- ಮೇಘಾ ಬೆಳಧಡಿ

12 May 2025, 01:27 am

ಕವನ ಅಮ್ಮನ ತ್ಯಾಗ.


ಮಡಿಲು ತುಂಬಿದ ಹೆಣ್ಣಿನ ಮೊಗದಲ್ಲಿ ಮೂಡುವುದು ಮಂದಹಾಸ,
ಕಷ್ಟಗಳ ಕರಗಿಸಿ ಹೊಸ ಕನಸುಗಳೊಂದಿಗೆ ಕಳೆವಳು ನವಮಾಸ.

ಸಡಗರದ ಐಸಿರಿಯೆ ಧರೆಗಿಳಿದ ಕಂದ,
ಮನೆಯವರ ಕೈಯಲ್ಲಿ ಹೊಳೆವ ಮಣಿಯಾಗಿ ಮೆರೆದ.

ಅಮ್ಮನ ಹಾರೈಕೆಯಲಿ ಸ್ವರ್ಗದ ಸುಖವಿತ್ತು,
ಹೃದಯದ ಗೋಪುರದಲ್ಲಿ ಮಗುವಿನ ಮುಂದಿನ ಭವಿಷ್ಯವಿತ್ತು.

ಅಪೂರ್ವ ಚಿಂತನೆಗಳ ಅಮ್ಮನ ಅರ್ಪಣೆಯ ಭಾವ,
ಬೆವರರಿಸಿ ದುಡಿದು ಬೆಳೆಯಲು ಅಸುಳೆಗೆ ಪ್ರೇರಣೆಯ ಜೀವ.

ಕಂದನ ಮಂಗಳ ಕಾರ್ಯಕ್ಕೆ ಸುಧೆಯು ಅಮ್ಮ,
ಹರ್ಷದಲಿ ಅಪ್ಪುವಳು ಮಕ್ಕಳು ಪ್ರಗತಿ ಕಂಡ ಜೀವನ.

ತ್ಯಾಗ ಪ್ರೀತಿಗೆ ಸಾಕ್ಷಿಯಾದ ಜನನೀ,
ಸಂಸಾರ ನಡೆಸುವಳು ಮಕ್ಕಳಿಗಾಗಿ ಬಚ್ಚಿಟ್ಟು ಕಂಬನಿ.

ಕೋಟಿ ಗಳಿಸಿದರು ಸಾಧ್ಯವೆ‌ ಕೊಳ್ಳಲು ದೇವತೆಯ ಕರುಣೆಯನ್ನ,
ಗಂಜಿ ಕುಡಿದರು ಬಿಡಬಾರದು ಸ್ವಾಭಿಮಾನವನ್ನ.

ಮಕ್ಕಳ ಕೋಪವ ಕೊನೆಗೊಳಿಸುವಳು ತಾಳ್ಮೆಯಲ್ಲಿ,
ಸುವ್ಯವಸ್ಥಿತ ನಾಗರೀಕನಾಗಲು ಬಯಸುವಳು ಪೊರೆವ ನಾಡಲ್ಲಿ.

ನೋಯಿಸದಿರು ಮಗುವೆ ಜನ್ಮವಿತ್ತ ತಾಯಿಯನ್ನ,
ಸದಾ ಪೂಜಿಸು ಶೋಕ ವಿಮುಕ್ತಿಮಾಡುವ ಸುಮತಿಯನ್ನ.

ಮಾತೆಯ ಮಮತೆಯ ಸ್ಮರಿಸಿ ಮಕ್ಕಳೆ ನಿಮ್ಮ ಸಂಸ್ಕಾರದಲಿ,
ಅಮ್ಮನಿಗೆ ಝೈಕಾರ ಮೊಳಗಿಸಿ ಶ್ರೇಷ್ಟತೆಯ ಕೀರ್ತಿಯಲಿ.

- nagamani Kanaka

11 May 2025, 06:06 pm

ಮಳೆಯಲ್ಲಿ

"ಮೊದಲ ಬಾರಿ ನಿನ್ನ ಕಂಡಾಗ
ಕಂಪಿಸಿತು ಈ ಹೃದಯ "
ಮತ್ತೆ ಯಾರೇ ಕಂಡರು ಪ್ರತಿಕ್ರಿಯೆಸದೆ
ಹೋಯಿತು ಈ ಹೃದಯ
ನಿನ್ನ ಕಣ್ಣುಗಳಲ್ಲಿ ನೀರ ನಾ ನೋಡಲಾರೆ
ನಿನ್ನ ಬಿಟ್ಟು ನಾ ಬದುಕಲಾರೆ
ನಿಂತಿದ್ದೆ ಕೆಲ ದಿನಗಳು ನಿನ್ನ ಹಗಲಿಮಳೆಯಲ್ಲಿ
ನಿನ್ನ ನೋಡಿದ ತಕ್ಷಣ ಸಿಡಿಲು ಬಡಿದಂತಾಯಿತು
ನನ್ನೆದೆಯಲ್ಲಿ

- Sanju gubbi Bhagya

11 May 2025, 04:23 pm