Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನ ಕಪ್ಪುಗೆಯ ರಾಣಿ

ಗುರಿ ಇಟ್ಟು ಹೋದೆ ಕಾಲೇಜಿಗೆ
ಪ್ರೀತಿ ಪ್ರೇಮ ಬೇಡವೆಂದು
ಅನಿಸಿತ್ತು
ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗ
ಬೇಕೆಂಬ ಆಸೆ ನನ್ನಲ್ಲಿ
ಆದರೆ ಕಾಲೇಜಿಗೆ ಬಂದಿಳಿದಳು
ಕಪ್ಪುಗೆಯ ರಾಣಿ.

ನೋಡುವುದಕ್ಕೆ ಚೆಂದವಿಲ್ಲದಿದ್ದರೂ
ನಾ ಬಿದ್ದೆ ಅವಳ ನಡೆತೆಗೆ
ಕೆಲವರು ಇದು ನಿನಗೆ ಬೇಡವೆಂದು
ಹೇಳಿದರೂ
ನನ್ನ ಮನಸ್ಸಿನ ದಾರೆ ಅವಳ ಗುನಕ್ಕೆ
ಕಟ್ಟಿಯಾಗಿತ್ತು.
ಸಮಯ ಬಂದಲ್ಲಿ ನಾ ಬಂದು
ಕೇಳುವೆ ನೆಂಬ
ಭರವಸೆಯನ್ನು ಕೊಟ್ಟೆ,
ಇದೀಗ ಕಾಯುತಿರುವೆ ಆ ಕರಗೆ

- Hasan Muhaz

23 Apr 2018, 07:10 am

ನಿನ್ನ , ಹರುಷದ ಆ ಕ್ಷಣ...

ಮುಖ ತುಂಬ ಮುಗ್ದ ನಗು
ಮನ ಬಿಚ್ಚಿ ಜಿಗಿದ
ಎದೆಯಾಳದ ಪಿಸುಮಾತು...
ನಿನ್ನ ಮನ ಗೆದ್ದು
ನೀ ಪಟ್ಟ ಸಂಭ್ರಮ

ನಾ ಕಂಡೆ ಇಲ್ಲ
ಈ ಲೋಕದೋಳಗೆ
ಕೋಟಿ ಜನರ
ಈ ಪರಿಯ ಸಂತಸ.

ನಿನ್ನ ಹರುಷದ
ಆ ಒಂದು ಕ್ಷಣ
ನೆನೆದರೆ ನಾ
ಮರೆಯುವೆ
ಈ ಲೋಕವೇ...

- Vamu Gavada

22 Apr 2018, 08:53 pm

ಬೇಕಾಗಿದ್ದಾರೆ...

ಬೇಕಾಗಿದ್ದಾರೆ...

ನಮಗೆ ಒಂದಿಷ್ಟು ಮಂದಿ
ನಿನ್ನೆ ಇಂದು ನಾಳೆಯು...

ಭಾರವೇ ಇಲ್ಲದ
ಹತ್ತಿಯಂತ ಕೆಲಸ
ಕತ್ತೆಯ ಸ್ವರ ಸಂಗೀತ
ಬಲ್ಲವರು...

ಬೇಕಾಗಿದ್ದಾರೆ...

ಹಸ್ತ ಪ್ರದರ್ಶನ
ಕೃಷಿ ಪ್ರದರ್ಶನ
ಪುಷ್ಪ ಪ್ರದರ್ಶನ
ಮಾಡಲು...

ಬೇಕಾಗಿದ್ದಾರೆ....

ಸುಳ್ಳು ಹೇಳಲು
ಕಪ್ಪುಧನ ಹಂಚಲು
ಉಚಿತ ಮಧ್ಯ ನೀಡಲು..
ಮಾಯಾವಿಗಳು...

ಬೇಕಾಗಿದ್ದಾರೆ....

ನನ್ನ ಮುಖಕ್ಕೆ ಬಣ್ಣ
ಪ್ರತಿಸ್ಪರ್ಧಿಗೆ ಸುಣ್ಣ
ಬಿದಿ ಜನರಿಗೆ ಕಣ್
ಸನ್ನೆ ಮಾಡಲು..

ಬೇಕಾಗಿದ್ದಾರೆ...

ಆಸಕ್ತಿ ಉಳ್ಳವರು
ಸಂಪರ್ಕಿಸಿ ಇಂದು
ನಿಮ್ಮೊಣೆಯ
ನಾಯಕರನ್ನು...
@@@@@

- Vamu Gavada

21 Apr 2018, 09:10 pm

ಶಾಯಿರಿ

ಬಾಯ್ಬಿರ್ದು ನನ್ನೆ ನುಂಗೋಕ್ ಕುಂತ ಎದೆಗೆ
ಸುರ್ದವವ ನೀ ತುಂತುರು ಮಳೆಯಂಗ
ಹೇಳ ಕೊಳೆ‌ ತೆಗೆದು ಕಳೆ ಕೊಟ್ಟು
ಎದೆಯೊಡ್ಲಲಿ ಹಸ್ರು ಚಿಗ್ರಿಸಿದ್ ನಿನ್ ಮರೆಯೋದೆಂಗ


ನಕ್ಕು ಬಿಡ ಒಮ್ಮೆ ಸ್ವಾತಿ ಮುತ್ತು ಎಲ್ಲೆಲ್ಲೂ ಚೆಲ್ದಂಗ
ಹರಿದೇ‌ ಬಿಡ್ಲಿ ನನ್ನೆದೆಯೊಳಗ ಬತ್ತದ ಪ್ರೀತಿ ಗಂಗ


ಎದೆಯಾಳದ ಕಪ್ಪೆಚಿಪ್ಪಿನೊಳಗ
ಬಿದ್ದು ಬಿಡೆ ಸ್ವಾತಿ ಮಳೆಯಂಗ
ಬಂದದ್ದು ಬರಲಿ ಬಾಳ್ನಾಗ
ಕಾಯ್ತೀನಿ ಸ್ವಾತಿ ಮುತ್ತ ಕಾದಂಗ

- ಶ್ರೀಕಾವ್ಯ

21 Apr 2018, 01:03 pm

ಮತ ಗೊಂದಲ !

ಒಬ್ಬ ಭ್ರಷ್ಟ, ಇನ್ನೊಬ್ಬ ದುಷ್ಟ
ಅವನು ಕಳ್ಳ, ಇವನು ಸುಳ್ಳ
ಆ ಪಕ್ಷ ಕೋಮುವಾದಿ
ಈ ಪಕ್ಷ ಜಾತಿವಾದಿ..
ಯಾರಿಗೆ ಮುದ್ರೆಯೊತ್ತಲಯ್ಯ ನಾನು?

ಅವನಿಗೆ ಗೊತ್ತಿದೆ ಕೋಟಿ ದೋಚುವ ಕಲೆ
ಇವನ ಕೈಗೆ ಅಂಟಿಕೊಂಡಿದೆ
ಅಮಾಯಕರ ರಕ್ತದ ಕಲೆ !
ಅದೋ ನಾಮಪತ್ರ ಸಲ್ಲಿಸಿ ಆಯ್ತು ಅತ್ಯಾಚಾರಿ
ಇದೋ ಕೈ ಮುಗಿದು ಬೇಡಿ ಬರುತಿಹನು
ನಿತ್ಯ ದುರಹಂಕಾರಿ..
ಯಾರಿಗೆ ಮುದ್ರೆಯೊತ್ತಲಯ್ಯ ನಾನು?

ಜನರ ಜೇಬಿಗೆ ಕತ್ತರಿ ಹಾಕುವ ಕದಿಮನೊಬ್ಬ
ತಿಜೋರಿ ದೋಚಿ ವಿದೇಶದಲ್ಲಿ
ಬಚ್ಚಿಡುವ ಭೂಪನೊಬ್ಬ.
ಕೊರಳ ಪಟ್ಟಿ ಹಿಡಿದು ಹೊಡೆದಾಡಿಕೊಂಡ
ಬದ್ದ ರಾಜಕೀಯ ವೈರಿಗಳು
ದಿನಾ ರಾತ್ರಿ ಒಂದೇ ತಟ್ಟೆಯಲ್ಲಿ
ಬಡವರ ಹೆಣ ತಿನ್ನುತಿಹರು!
ಯಾರಿಗೆ ಮುದ್ರೆಯೊತ್ತಲಯ್ಯ ನಾನು?

- ಶ್ರೀಗೋ.

20 Apr 2018, 11:21 pm

ಮಳೆ ಮತ್ತು ನಾನು

ಇಳೆಗೆ ತುಂತುರು ಮಳೆಯ ಸಿಂಚನ
ತನುವು ನೆನೆಯೇ ನವಿರಾದ ಕಂಪನ
ನಡುಗೋ ಅಧರಗಳ ನೋಡಿ ಮಳೆಹನಿಗೆ
ಬೇಕಿದೆ ಈಗಲೆ ಜೇನಸವಿಯ ಬಾಡಿಗೆ

ಅಪ್ಪಿ ಜೊತೆಯಾಗಿವೆ ಮೈಮರೆತು ಕೈಗಳು
ತಣ್ಣನೆ ಗಾಳಿಯು ತನುವ ಸೋಕಿ ಸಾಗಲು
ಜಾರಿದ ಮುಂಗರುಳದಂತು ಒಂದೇ ಯಾಚನೆ
ತುಟಿಯ ಅಂಚಲಿ ಕಿರುನಗೆಗಾಗಿ ನಿವೇದನೆ

ಮುನಿಸ ತೋರುತ ಕಾಡೋ ಮನಸು
ನಗುತಲೇ‌ ಹಾಗೆ ರಮಿಸುತಿದೆ ಈಗ ತುಸು
ಏತಕಿ ಎಂದೂ ಇರದ ಸವಿ ಬದಲಾವಣೆ
ತಿಳಿಯಲು ಶುರುವಿಟ್ಟಿದೆ ತನ್ನೊಳಗೆ ವಿಚಾರಣೆ

ಮುದ್ದಿಸಿ ಕಾಡುವಂತ ಸುಂದರ ಯಾತನೆ
ಬಿಸಿಯುಸಿರು ತಣಿದಿದೆ ಹಾಗೆ ಸುಮ್ಮನೆ
ಎಂದೂ ಹೀಗೆ ಇರಲಿ ಈ ಎಲ್ಲ ಭಾವನೆ
ತನುವ ತಣಿಸಿ ಮನವ ಕುಣಿಸಲೆನ್ನುವ ಕಾಮನೆ

- ಶ್ರೀಕಾವ್ಯ

20 Apr 2018, 08:33 pm

ಪರಿಸರ

"ಬೋಳಾದರೆ ಕಾಡು
ಹಾಳಾಗುವುದು ನಾಡು"

"ಬೆಳೆಸೋಣ ಪ್ರಕೃತಿ
ಉಳಿಸೋಣ ಸಂತತಿ"

"ನಿಸರ್ಗ ನಾಶ ಬಿಡು
ನಿತ್ಯ ಸಂತಸ ಪಡು"

"ಸಸಿ ಬೆಳೆಸಿ
ಬಿಸಿ ಇಳಿಸಿ
ಖುಷಿ ಹೆಚ್ಚಿಸಿ"

"ಬೆಳೆಸಿ ಗಿಡಮರ
ಗಳಸಿ ಸಡಗರ"

"ಹಾಕಿರಿ ಗಿಡಮರಗಳಿಗೆ ನೀರು
ಪಡೆಯಿರಿ ಉಪಯೋಗ ನೂರಾರು"

"ಮಾಲಿನ್ಯ ತಡೆ
ಆರೋಗ್ಯ ಪಡೆ"

"ಸ್ವಚ್ಛ ಗೊಳಿಸಿ ಈಗಲೇ
ದೂರ ಮಾಡಿ ಖಾಯಿಲೆ"

"ಬೆಳೆಸಿದರೆ ಮರ
ನೀಗುವುದು ಬರ"

"ಪ್ರಕೃತಿಯನ್ನು ಪ್ರೀತಿಸಿ
ದುರ್ಗತಿಯನ್ನು ತಪ್ಪಿಸಿ"

- ಸುರೇಶ್ ಟಿ ವಿ

20 Apr 2018, 02:58 pm

ನೀನು

ಮನ್ಸಿನ ಮನೆ ತುಂಬಾ ನಿನ್ ನೆನಪುಗಳ ರಂಗೋಲಿ ಬಿಡಿಸಿ ಕುಂತೀನಿ
ಅದರ ಅಂದ ಕೆಡಿಸ್ಲಿಕ್ಕಾದ್ರು ಬರ್ತೀಯೇನೊ ಅಂತ ಕಾಯ್ಲಿಕತ್ತೀನಿ
ಬಂದೋಗೊಮ್ಮೆ ಉಸಿರು ಹೆಸರು ರಂಗೋಲಿಯೊಟ್ಟಿಗ ಮಣ್ಣ ಸೇರಲಿಕ್ಕಾದ್ರು

------------------------------------------------------------------------


ತಂಗಾಳಿಯಂಗ ಮನಸ ಸೇರಿದವ
ಬಿರುಗಾಳಿಯಂಗ ಬೀಸಿ ಹೊಂಟಿದ್ದಿ
ತಿಳಿ ನೀರ ಕೊಳದಂಗಿದ್ದ ಮನ್ಸು ರಾಡಿಯಾಗದ
ಊಳೆತ್ತಿ ನನಗ ಮರುಜೀವ ಕೊಟ್ಟು
ಮೀನಿನಂಗ ಭಾವನೆಗಳು ನಲಿಯಾಕ ನೀ ಬರಬೇಕದ

- ಶ್ರೀಕಾವ್ಯ

20 Apr 2018, 11:28 am

ಕಲಹ

ಬುದ್ಧಿ ಮನಸುಗಳ ಕಲಹ
ನಿತ್ಯ ನೂರು ತರಹ
ಎದುರಾಗಿ ಕಾಡುವವು ಪುನಃ ಪುನಃ
ತುಟಿಗೆ ನಗುವ ಕಾಣದೆ ಶುರುವಾಗಿದೆ ವಿರಹ
ನೆಮ್ಮದಿಗೆಲ್ಲಿ ಜಾಗ ವಿರಹ ಕಳೆಯದ ವಿನಹ

- ಶ್ರೀಕಾವ್ಯ

20 Apr 2018, 11:26 am

ಶೋಧನೆ

ಕನಸಿನ ಮಳೆಯಲಿ
ತುಂತುರು ಹನಿಯಾಗಿ
ನಗು ಬೀರುವ ಮನದಲಿ
ಪ್ರೀತಿ ಅರಳಿಸು ಎದೆಯಲ್ಲಿ

ಕಟ್ಟಿದ ಕನಸೊಂದು
ಮನದಲಿ ನೆನಪಾಗಿ
ಬಯಸುತ್ತಿದೆ ನಿನ್ನ
ನಿಸರ್ಗದ ಮಡಿಲಿಲ್ಲಿ
ಜೀವನ ಜೋಕಾಲಿ ತುಗೋಣ ಬಾ

ಮಂಜು ಕವಿದ ಪ್ರೀತಿಗೆ
ಬೆಚ್ಚಗೆ ಕರಗಲು ನಿನ್ನ ಕಿರು ನಗೆ ಬೇಕು
ಬಾ ನನ್ನ ಸನಿಹಕೆ
ಸಮಯ ಸರಿಯುತ್ತಿದೆ ಮಿಂಚಾಗಿ
ಎಷ್ಟು ಕರೆದರೂ ಬಾರದ ನೆನಪಿನ ಕನಸ್ಸೊಂದು ತೂಗುತಿದೆ
ಪ್ರೀತಿಗೆ ಮನಸೋತ ಜೀವನದಲ್ಲಿ ಅನುರಾಗದ ಶೋಧನೆ

- ಎ ಜಿ ಶರಣ್

19 Apr 2018, 11:18 pm