ಈ ನನ್ನ ಪ್ರೀತಿಯೇ ಇಂದು ನಿನಗೆ ಹುಸಿಯಯೆನಿಸಿತೇ ಗೆಳೆಯ ..
ನಾ ಎಷ್ಟೋ ಬಾರಿ ಹೇಳಿದೆ ,ನಾ ನಿನಗೆ ಸರಿಜೋಡಿಯಲ್ಲಯೆಂದು ..
ನೀ ಅದ ಅರಿಯದೆ ಹುಚ್ಚು ಪ್ರೀತಿಯ ನನ್ನೆದೆಯಲ್ಲಿ ಹುಟ್ಟಿಸಿ ಹೆಮ್ಮರವಾಗಿ ಬೆಳೆಯುವಂತೆ ಮಾಡಿ ..
ಇಂದು ನನ್ನ,ನನ್ನಲ್ಲಿ ಹುಟ್ಟಿದ ಪ್ರೀತಿಯ ಬಿಟ್ಟು ಹೋಗುವ ಹುಚ್ಚು ಸಾಹಸ ಏಕೋ ಮಾಡುತಿರುವೆ ,
ತಾಳಲಾಗುತಿಲ್ಲ ಈ ವೇದನೆಯ ,ಸಹಿಸಿದಷ್ಟು ಹೆಚ್ಚು ನೋವು ಕಣ್ಣಿನ ನೀರಿನ ಹಾಗೆ ಹರಿಯಲಾರಂಭಿಸುತ್ತಿದೆ ಗೆಳೆಯಾ..
ಒಮ್ಮೆಯಾದರೂ ಹೇಳು ನಾ ನಿನ್ನ ಎಂದು ಬಿಟ್ಟು ಹೋಗಲಾರೆ ಎಂಬ ಮಾತು ...
ಹೃದಯ ನಿನ್ನೆ ಬೇಕು ಬೇಕು ಎಂದು ಅಂಬಲಿಸುತ್ತಿದೆ , ಹೃದಯದ ಬಡಿತ ಒಮ್ಮೆ ಕೇಳೋ ನನ್ ಗೆಳೆಯ ..
ಯಾವುದೋ ಒಂದು ಕಾರಣಕ್ಕೆ ನನ್ನ ಮುಗ್ದ ಪ್ರೀತಿಯಾ ಬಲಿ ಮಾಡುವುದು ಸರಿಯೇ ನಿನಗೆ .....
ನೀ ದುರಾಗುವ ಮಾತುಗಳು ಆಡಿದಾಗಳೆಲ್ಲ ,ನನ್ನ ಮನಸ್ಥಿತಿಯ ಬಗ್ಗೆ ಒಂದು ಬಾರಿಯಾದರೂ ಯೋಚಿಸೋ ....
ಯಾಕೋ ನನ್ನ ಜೀವನಕ್ಕೆ ಬಂದೆ
ಯಾಕೋ ನನಗೆ ಪೀತಿಯನ್ನು ಕೊಟ್ಟೆ
ಯಾಕೋ ನಾ ಸಾಯುವಷ್ಟು ನಿನ್ನ ಪೀತಿ ಮಾಡಿದೆ
ಯಾಕೋ ನನ್ನ ನೋವು, ನನ್ನ ಮಾತು ,
ನನ್ನ ಪೀತಿ , ನನ್ನ ಕಾಳಜಿ , ನನಗೆ ನಾಟಕದ ತರ ಕಾಣಿಸುತ್ತೆ
ಯಾಕೋ ನನ್ನ ಮೇಲೆ ಪೀತಿ ಇಲ್ವ ???
ಯಾಕೋ ನನ್ನ ಕಣ್ಣಲ್ಲಿ ನೀರು ನಿಲುತ್ತಿಲ್ಲ
ಅಂದು ತುಂಬಾ ಪೀತಿ ಕೊಟ್ಟೆ
ಇಂದು ಅದೇ ಪೀತಿನಾ ಕಾಲಿನಲ್ಲಿ ಒದ್ದು ಹೊಗಿರುವೆ
ನಾ ಮಾಡಿದ ತಪ್ಪು ಎನು ??
ನಾ ನಿನ್ನ ಪೀತಿ ಮಾಡಿದ್ದೆ ತಪ್ಪ ??
ಯಾವ ತಪ್ಪಿಗೆ ನನಗೆ ಈ ಶಿಕ್ಷೆ ??
ಅಷ್ಟೇ ಕಣ್ರೀ ಈ ಜನ
ಎಷ್ಟೇ ಡಂಗೂರ ಸಾರಿದ್ರೂ ಬಿಡಲ್ಲ ಇವರ ಬುದ್ದಿನಾ..
ನೋಟಿನ ಆಸೆಗೆ ಮಾರಿಕೊಳ್ತಾರೆ ಓಟನ್ನ
ಇನ್ನೇಲ್ಲಿ ಉದ್ದಾರ ಆಗುತ್ತೆ ಇವರ ಜೀವನ..
ಯಾರು ಜಾಸ್ತಿ ಕೊಡ್ತಾರೋ ಅವ್ರಿಗೆ ನಮ್ಮ ಓಟು ಅಂತಾರೆ
ಅವನು ನಮ್ಮ ಜಾತಿ ಅವನಿಗೆ ನಮ್ಮ ಸಪೋರ್ಟು ಅಂತಾರೆ..
ಶಿಷ್ಟ ನಾಯಕ ಇವ್ರಿಗೆ ಎಂದೂ ಬೇಕಿಲ್ಲ
ಭ್ರಷ್ಟ ಪಾತಕನಿಗೆ ಗೆಲ್ಲಿಸೋದು ಬಿಡಲ್ಲ..
ಸುಳ್ಳು ಭರವಸೆಗಳಿಗೆ ಜೈಕಾರ ಹಾಕ್ತಾರೆ
ಗುಳ್ಳೆ ನರಿಗಳಿಗೆ ಅಧಿಕಾರ ನೀಡ್ತಾರೆ..
ನೆಚ್ಚಿನ ನಾಯಕನ ವಹಿಸಿಕೊಂಡು ನೂರಾರು ಚರ್ಚೆ ಮಾಡೋದು ಬಿಡಲ್ಲ
ನಾಡಿನ ಸಮಸ್ಯೆಗಳನ್ನ ತಿಳಿದುಕೊಂಡು ಒಂಚೂರು ಯೋಚನೆ ಮಾಡೋದು ಇಲ್ಲ..