Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೆನಪುಗಳ ಸಾಲು

ಮತ್ತೆ ನೆನಪಾಗುತಿದೆ ನಿನ್ನೊಂದಿಗೆ ಇಟ್ಟ ಹೆಜ್ಜೆ ಗುರುತುಗಳ ಸಾಲು.....
ಮರೆಯಲಿ ನಾ ಹೇಗೆ ಆ ನಿನ್ನ,ಪಿಸುನುಡಿಯ ಮೆಲ್ನುಡಿಯ ಸಾಲು....
ಕರಗಳ ಜೋಡಿಸಿದ ಆ ದಿನಗಳು ಕರಗಿ ಹೋದಿತೆ ಅಷ್ಟು ಸುಲಭವಾಗಿ...!?
ಕೋಪಿಸಿಕೊಂಡಾಗಲೆಲ್ಲ ಬರೆದ ಕವನಗಳ ಸಾಲು ಮರೆಯಲಿ ಹೇಗೆ ನೀ ಹೇಳು...!?
ನೆನಪುಗಳೊಂದಿಗೆ ನೆನಪು ನೆನಪಿಸುತಿದೆ
ಪ್ರತಿ ಕ್ಷಣ ನಿನ್ನೊಂದಿಗೆ ಕಳೆದ ಹೊಳಪು
ನೀ ಇಲ್ಲದ ಈ ದಿನವೇ ಬರೀ ನೆನಪಾಗಿದೆ
ನೆನಪಲ್ಲೆ ಸಾಗುತಿದೆ ಈ ಬದುಕು
ಬರೆದಷ್ಟು ಮರೆಯದೇ ಹೋಗಿದೆ
ನೀ ಬಿಟ್ಟು ಹೋದ ನೆನಪು
ಪದೇಪದೇ ನೆನಪಿಸುತ್ತಲೇ ಇದೆ ನೀ ಮುದ್ದಾಡಿ ಕಳೆದ ಸಮಯಗಳ ನೆನಪು
ಜಿನುಗುವ ಧರೆಯಂತೆ, ಉರಿಯುವ ರವಿಯಂತೆ
ಬೀಸುವ ಗಾಳಿಯಂತೆ ನೆನಪು ನೆನಪಾಗಿ
ನೋಯಿಸುತಿದೆ, ಬೇಸರಿಸುತಿದೆ , ಮೌನವಾಗಿಸುತಿದೆ ನೆನಪೆಂಬ ನೆನಪು

- ಎಸ್.ಬಿ

22 May 2018, 05:37 pm

ಎದೆಯೇಕೋ ಭಾರವೆನಿಸಿದೆ

ಎದೆಯೇಕೋ ಭಾರವೆನಿಸಿದೆ ಮನ ತಣಿಸುವ ನಿನ್ನ ಮಾತಿಲ್ಲದೆ..... ಗಿಜಿಗುಡುವ ಸಂತೇಲೂ ಕೂಡಾ ನೀರವಮೌನ ಭಾಸವಾದಂತಿದೆ
ತುಸು ನನ್ನೀ ಹೃದಯದ ಬಡಿತ
ಏರುಪೇರಾದಂತಿದೆ.....
ಚೂರಾದರೂ ಕರುಣೆ ಇರಲಿ
ಭರವಸೆಗಳು ಚೂರಾಗುವ ಮುನ್ನ!

- shruthi AS

22 May 2018, 09:05 am

ಪ್ರಶಸ್ತಿ

ಮೂರು ತಿಂಗಳು ಕಳೆದರೆ ಸಾಕು
ತುಂಬಲು ನನಗರವತ್ತಾರು,
ಪ್ರಶಸ್ತಿಗಿನ್ನೂ ಎರಡು ದಶಕಗಳು
ಕಾಯುವುದೆಂದರೆ ಬೇಜಾರು.


ವಿಠ್ಠಲ್ ವಿ ಪಿ ಸಿ

- Vittal Bajari

21 May 2018, 02:35 pm

ನಿಜವಾದ ದೇಶ ಪ್ರೇಮಿ

ದೇಶದ ನಿಜವಾದ ದೇಶಪ್ರೇಮಿ
ದೇಶದ ಗಡಿಕಾಯುವ ಸಿಪಾಯಿ..
ದೇಶಸೇವೆಗೆ ಗರ್ವಪಡುವ ಗವಾಯಿ ಇವನು
ತಾಯ್ನಾಡಿನ ರಕ್ಷಣೆಗೆ ಪ್ರಾಣ ಕೊಡುವ ತ್ಯಾಗಮಯಿ ಇವನು.. " ಪ "

ದೇಶಪ್ರೇಮಿಯ ರಕ್ಷಿಸುವ ಧೀರ ಇವನು
ದೇಶದ್ರೋಹಿಯ ಸಂಹರಿಸುವ ವೀರ ಇವನು..
ನಡೆಸುವನು ಕಠಿಣ ಸಮರಾಭ್ಯಾಸ
ಆಗುವನು ಉಕ್ಕಿನ ಶರೀರದ ಮನುಷ..
ಪ್ರತಿಕ್ಷಣ ಎಚ್ಚರ
ಗನ್ನು ಕ್ಷೀಪಣಿ ಪಿರಂಗಿ ಇವನ ಅಸ್ತ್ರ
ತನುಮನ ದೇಶಪ್ರೇಮದ ಮಂತ್ರ..
ಘೋರ ಕದನಕೂ ಸಿದ್ಧ
ವೀರ ಮರಣಕೂ ಬದ್ಧ..
ದೇಶದಲ್ಲಿ ಶಾಂತಿ ಐಕ್ಯ ಕಾಪಾಡುವ ಧ್ಯೇಯ ಇವನದು..

ಊರನ್ನು ರಕ್ಷಿಸುವ ಶೂರ ಇವನು
ಉಗ್ರನನ್ನು ಬೇಟೆಯಾಡುವ ವ್ಯಾಘ್ರ ಇವನು
ನೆಲ ಜಲ ಗಾಳಿಯಲ್ಲಿ
ಬೆಂಕಿ ಗುಂಡು ಸಿಡಿದು ಬರಲಿ
ಇವ ನುಗ್ಗುವ ಪರಿ ಚಿರತೆಯೇ ಸರಿ..
ಕೊರೆಯೋ ಚಳಿಗೆ ನಡುಗದೆ
ಗುಡುಗೋ ಮಳೆಗೆ ಬಗ್ಗದೆ
ಇವ ಘರ್ಜಿಸುವ ಪರಿ ಸಿಂಹವೇ ಸರಿ..
ರಕ್ತ ಸುರಿಯಲಿ ಮಾಂಸ ಖಂಡ ಉದುರಲಿ
ಇವ ಬಿಡನು ತನ್ನ ಗುರಿ..
ನಗುತ ಪ್ರಾಣ ಬಿಡುವನಿವನು ವಿಜಯ ಪತಾಕೆ ಹಾರಿಸಿ..
ಇವನ ತ್ಯಾಗ ಬಲಿದಾನವನ್ನು ಸ್ಮರಿಸಿ ವಂದಿಸುವ ಕರ್ತವ್ಯ ನಮ್ಮದು..

- ಸುರೇಶ್ ಟಿ ವಿ

20 May 2018, 10:59 am

ಮಧುರ ಕನಸಿನ ಚಪ್ಪರ

ನಾ ಕಟ್ಟಿದ್ದೆ ವಿಶಾಲ ಕನಸಿನ ಚಪ್ಪರ
ಕಂಬವೆಂಬ ನಿನ್ನ ಪ್ರೀತಿಯೆ ಅದಕ್ಕೆ ಆಧಾರ
ಮುಕುಟದಲ್ಲಿ ಸ್ವರ್ಣ ಕಲಶದ ಶೃಂಗಾರ
ಕಂಬಗಳನ್ನು ಬಿಗಿದಿದ್ದವು ಮುತ್ತಿನ ಹಾರ
ಆ ಮುತ್ತಿನ ಹಾರ ದಲ್ಲಿ ಎರಡು ಪ್ರಕಾರ
ಒಂದು ಕೋಪವೆಂಬ ಮುತ್ತಿನ ಹಾರ
ಮತ್ತೊಂದು ಪ್ರೀತಿವೆಂಬ ಮುತ್ತಿನ ಹಾರ
ಪ್ರೀತಿ ವೆಂಬ ಮುತ್ತಿನ ಹಾರ ಹತ್ತಿರ ಹತ್ತಿರ
ಕೋಪವೆಂಬ ಮುತ್ತಿನ ಹಾರ ದೂರ ದೂರ
ಚಪ್ಪರವ ಕಾಣಲು ಬರುವನು ನೇಸರ
ಇರುಳಲ್ಲಿ ಇಣುಕಿ ನೋಡುವನು ಚಂದಿರ
ರವಿ ಚಂದ್ರರ ನಡುವೆ ಉಂಟು ನಂಬಿಕೆ ಪರಸ್ಪರ
ಆದರೆ ನಮ್ಮಲ್ಲಿ ಪ್ರತಿ ಸಣ್ಣ ವಿಷಯವೂ ಗಂಭೀರ
ಕೊನೆಗೆ ವಚನವು ಆಗುವುದು ಭಯಂಕರ
ದೂರವಾಗಲಿ ಅಸಮಾಧಾನ ಕೋಪ ಅಹಂಕಾರ
ನಂಬಿಕೆ ಗೌರವ ದಿಂದ ನಡೆದರೆ ಪರಸ್ಪರ
ಜೀವನವಾಗುದು ನೆಮ್ಮದಿಯ ಮಹಾಸಾಗರ
ಮರೆತುಬಿಡು ನಿ ಎಲ್ಲವ; ನನ್ನ ಮಧುರ
ಮತ್ತೆ ಆರಂಭವಾಗುದು ಬೇಡ ಶೀತಲಸಮರ
ಬಾ ಸಂಗಾತಿ ಕಟ್ಟುವ ಕನಸಿನ ಚಪ್ಪರ
ಸ್ವರ್ಣ ಕಲಶ ಸ್ಪರ್ಶಿಸಲಿ ಬಾನಂಬರ
ನಾ ಕಟ್ಟಿದ್ದೆ ವಿಶಾಲ ಕನಸಿನ ಚಪ್ಪರ
ಕಂಬವೆಂಬ ನಿನ್ನ ಪ್ರೀತಿಯೆ ಅದಕ್ಕೆ ಆಧಾರ

- ಬೊಳ್ಳಿ ಬೊಲ್ಪು

20 May 2018, 10:46 am

ಮಳೆಗಾಲ

ಅಂಬರದ ತುಂಬೆಲ್ಲ ನೆರೆದಾವು ಕರಿ ಮೋಡ
ದಿಗಂಬರದ ಭುವಿ ಮೇಲ ಸುರಿದಾವು ಮಳೆ ನೋಡ
ಪಳ್ಳನೆ ಹೊಳೆದ ಮಿಂಚು ಸುಳಿಯ ಕಳ್ಳಾಟ
ಜಳ್ಳನೆ ನೊರೆಯುಕ್ಕಿ ಹರಿದ ಹಳ್ಳದ ಹಸಿ ನೋಟ..

ಕಲ್ಲಡಿಗೆ ಮಲಗಿದ್ದ ಕಪ್ಪೆಗಳು ಕುಮುಟಿ ಎದ್ದು
ಗಂಟಲ ಒರಟು ಗಾಯನದ ಕಿವಿಗವಡುಚ್ಚಿದ ಸದ್ದು
ಕುಮುಸಲು ಮಟ್ಟಿಯ ಪೊದೆಯ ಒಳಗೆ
ಹುದುಗಿದ್ದ ವರಲೆಯ ಹುತ್ತದಿಂದೆದ್ದ
ಹೆಗ್ಗಾಲಣಬೆಯ ಬಿಳಿ ಮೊಟ್ಟೆ ಮೊಗ್ಗು.

ಗಂಡು ಹೆಣ್ಣು ಮೀನು ಕೂಡಿ
ಮಳೆಯ ಹೊಳೆಗೆ ನಲಿದು ಆಡಿ
ಮೊಟ್ಟೆಯಿಟ್ಟು ಮರಿಯ ಮಾಡಿ
ಬಿಡಲು ಗುಂಪುಗೂಡಿ ಹೊರಟ ಮೋಡಿ.

ಕಂಬಳಿ ಕೊಪ್ಪೆ ಹಾಕಿಕೊಂಡು,
ಕೈಲಿ ಹುಲ್ಲುಗತ್ತಿ ಹಿಡಿದುಕೊಂಡು
ಸೊಪ್ಪು ಸದೆಯ ತರುವೆನೆಂದು
ಹೊರಟಿರುವ ಹಳ್ಳಿ ಹೈದ.

ನೆಲವ ನೆನೆಸಿ, ಹೊಲವ ತೋಯಿಸಿ
ಉತ್ತು ಬಿತ್ತು ಬೆಳೆವ ರೈತನೊಲವ ಗಳಿಸಿ
ಸುರಿವ ಮಳೆಯೇ, ಸಲಿಲ ಸಿರಿಯೇ
ಸುರಿಯೆ ಹರಿಯೆ ಇಳೆಯ ಪೊರೆಯೆ !

- ಶ್ರೀಗೋ.

20 May 2018, 06:28 am

ತಂಗಿಗಾಗಿ

ಒಂಟಿಯಾದ ಜೀವಕ್ಕೆ
ಅಣ್ಣನ ಸ್ಥಾನ ಕೊಟ್ಟು
ಅಪ್ಪ ಅಮ್ಮನ ಪ್ರೀತಿಯ ಮರೆಮಾಚಿದೆ
ನನ್ನ ಮುದ್ದು ತಂಗಿ ನೀ
ನೀ ಇಂದು, ಎಂದೆಂದಿಗೂ
ನನ್ನ ಪುಟ್ಟ ತಂಗಿಯಾಗಿರು
ಮುಂದಿನ ಜನ್ಮ ಇದ್ದರೆ
ನಿನ್ನ ಮಡಿಲ ಕಂದನಾಗಿ ಹುಟ್ಟಿ
ನಿನ್ನ ಋಣವ ತೀರಿಸುವೇ
ಈ ಸಂಬಂಧ ಅನುಬಂಧ
ಚಿರಕಾಲ ಸಾಗಲಿ

ರಾಜು ‌ಹಾಸನ

- ರಾಜು ಹಾಸನ

19 May 2018, 03:55 pm

ಗಜಲ್

ಹೇಳಲಾಗದೆ ಉಳಿದ ಮಾತು ಮೌನದ ಅರಮನೆಯೊಳಗೆ ಬಂದಿಯಾಗಿದೆ ಚಂದಿರ
ಮಾತಾಗದ ಮೌನ‌ ಕೊರಳೊಳಗಿನ ಉಸಿರ ಕದಿಯುತಿದೆ ಚಂದಿರ

ಹಸಿ ಕನಸು ಹುಸಿ ನನಸಿನಾಟಕೆ ಮರುಳಾಗಿ ರೆಕ್ಕೆ ಬಿಚ್ಚಿ ಮೇಲೆ ಹಾರಿ ಹಾರಿ ಸೋತು ಕೆಳಗೆ ಬೀಳುತಿದೆ ಚಂದಿರ

ಜಗದ ಬೆಳಗೊಳಗೂ ಮನದೊಳಗೆ ಮಬ್ಬುಗತ್ತಲು
ಎದೆಗಣ್ಣಿಗೆ ಕತ್ತಲಾವರಿಸಿ ದಾರಿ ತೋರಿಸಿರೆಂದು ಕೇಳಲಾಗದೆ ಹೆಜ್ಜೆ ತಪ್ಪಿದೆ ಚಂದಿರ

ಸೆರೆ ಸಿಕ್ಕ ಮಾತು ಬಿಡುಗಡೆಯ ಬಯಸಿ ಸೆರೆಮನೆಯ
ಆಚೆಯ ಬೆಳಕ ಕಣ್ತುಂಬಿ ಹಗುರಾಗಿ‌ ಹಾರಲು ಹವಣಿಸುತಿದೆ ಚಂದಿರ

ಮಾತು ಗಲ್ಲಿಗೇರಿ ನೇಣಿನ‌ ಕುಣಿಕೆಯೊಳಗೆ ವಿಲವಿಲನೆ ಒದ್ದಾಡಿ
ಶ್ರೀಕಾವ್ಯಳ ಜೀವವನೆ ಹೊತ್ತೊಯ್ಯುವ ಮುನ್ನ ನೀನಾದರು ಮಾತಿಗೆ ಧ್ವನಿಯಾಗಬೇಕಿದೆ ಚಂದಿರ

- ಶ್ರೀಕಾವ್ಯ

18 May 2018, 06:13 pm

ಮುಂಜಾನೆ

ಮುಂಜಾನೆ ರಂಗೇರೊ ಬಾನ
ನೋಡಿ ಪಿಳ್ಳೆ ಹಾಡೈತೆ ಗಾನ
ಎತ್ತಲೊ ಸರಿಸಿ ಬೆಳ್ಳಿ ಚಂದಿರಾನ
ಅವರಸದಾಗ ನೇಸರ ಬರುತಿರುವಾನ

ಹಾರಾಡಿ ಹಾಡ್ಯಾವ ಬಾನಾಡಿ
ನಲಿಯಾಕ ತನ್ನವರ ಒಡಗೂಡಿ
ಕತ್ತಲಾಗ ಅಳ್ತಿದ್ದ ಹೂವು ಮುದುಡಿ
ಕಿಲಕಿಲ ನಕ್ಕೈತೆ ಸುಗಂಧಾವ ಹರಡಿ

ಮಂಜಿನ್ ಹನಿ ಹನಿಯ ಮಾಲೆ
ಎಲ್ಲೆಲ್ಲೂ ಚೆಲ್ಲೈತೆ ಎಲೆ ಮ್ಯಾಲೆ
ಕಾದು ಕುಂತವ್ನೆ ಬಿಸಿಲ ಜವರಾಯ
ಹೊತ್ತೋಗಲು ಎಲೆಮ್ಯಾಗಲ ಹನಿಯ

ಹೊಂಬಣ್ಣ‌ ರವಿ ಕಿರಣಗಳ ರಾಶಿ
ಚುಂಬಿಸ್ಯಾವ ಭುವಿಯ ರಮಿಸಿ
ಇರುಳು ತಂದ ವಿರಹ ಮರೆಸಿ
ಅಪ್ಪಿ ಮುದ್ದಿಸಿ ಅವಳ ಪ್ರೇಮಿಸಿ

- ಶ್ರೀಕಾವ್ಯ

17 May 2018, 07:21 pm

ಜೂಜಾಟ

ಪಾಂಚಾಲಿಯ ಸೀರೆಯ
ಸೆಳೆದರದು ಅಂದಿನ ಮಹಾಭಾರತ
ನಾಯಕರಿಗೆ ಆಮಿಷ ಒಡ್ಡಿ
ಸೆಳೆಯುತಿಹರು ಇದು ಇಂದಿನ ಭಾರತ

ತಿಳಿದು ತಿಳಿಯದಂತೆ ಕೂತಿದೆ
ನಮ್ಮ ಈ ಕಾರ್ಯಂಗ
ಸರ್ವಾಧಿಕಾರ- ಪ್ರಜಾಪ್ರಭುತ್ವ
ಎರಡು ಒಂದೆ ಅಂಗ
ಭಯೋತ್ಪಾದಕರಿಗು-
ಭಾರತದ ನಾಯಕರಿಗು-
ಇಲ್ಲ ಅಣುವಷ್ಟು ವತ್ಯಾಸ

ತ್ಯಾಜ್ಯ ತೆಗೆಯುವವರೆ
ತ್ಯಾಜ್ಯದ ನಿಮ್ರಾತೃಗಳಾದರೆ
ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಬಂದವರೆ ಭ್ರಷ್ಟಾಚಾರಿಗಳಾದರೆ
ಬೇಲಿಯೆ ಎದ್ದು ಹೊಲ ಮೇಯ್ದರೆ
ರಕ್ಷಿಸುವರಾರು ಭಾರತಮಾತೆಯ

ಹಣ ಪಡೆದು ಮತ ನೀಡದಿರಿ
ಎನ್ನುವರು ನಮ್ಮ ನಾಯಕರು
ಹಣ ಪಡೆದು ಮತ ನೀಡಿದರೆ
ಅದು ಭ್ರಷ್ಟಾಚಾರ
ಕೋಟಿ- ಕೋಟಿ ನೀಡಿ
ಕೊಂಡರೆ ಇದು ಯಾವ ಆಚಾರ?

ಶಕುಂತಲಾ

- ಶಕುಂತಲಾ

17 May 2018, 10:40 am