Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀ ದೂರ ಸರಿದಂತಿದೆ

ನಿನ್ನೀಂದ ಬಯಸಿದ್ದೂ ನಾ ಏನು ಇಲ್ಲ
ಹೊರತು ಪಡಿಸಿ ನಿನ್ನಾ ಸ್ನೇಹ....
ಭಯಪಡದಿರೂ ನಾ ಕೇಳೆ ನಿನ್ನಾ ಆಸ್ತಿ-ಅಂತಸ್ತು.....
ನಾ ಹತ್ತಿರ ಬಂದಷ್ಟೂ ನೀ ದೂರ ಸರಿದಂತಿದೆ
ಏಕೋ ಏನೋ ನನ್ನೀಂದ ನಿನಗೆ ಕಿರಿ ಕಿರಿ ಆದಂತಿದೆ....
ಸರಿದು ಹೋಗುವೆ ನಿನ್ನೀಂದ ನಾ ದೂರ ಸರಿದು....
ಸದಾ ಸುರಿಯಲಿ.....ನನಗಲ್ಲದಿದ್ದರೂ
ನಿನಗಿಡಿಸಿದವರಿಗೆ ಸ್ನೇಹದ ಹೊನಲು!

- shruthi AS

27 May 2018, 03:08 pm

ತಂಗಾಳಿಯೇ...

ಅಪ್ಪುವೆಯೇಕೆ ತಂಗಾಳಿಯೇ
ಸುಖಸುಮ್ಮನೆ ಹೀಗೆ
ಇನಿಯನೇ ಬಳಿ ಬಂದು
ರಮಿಸಿ ಮುದ್ದಿಸಿದ ಹಾಗೆ

ಮುಂಗುರಳೇನು ಜೋಕಾಲಿಯೇ
ಆಡಿ ನಲಿಯಲು ನಿನಗೆ
ಹೇಳದೆ ಕೇಳದೆ ಜೀಕಿ
ಮರೆಯಾಗಿಬಿಡುವೆ ಎಲ್ಲಿಗೆ

ಕ್ಷಣದುಸಿರೇ ಉಡುಗೊರೆಯೇ
ಕಿರುನಗೆಯ ತರಲು ಮೆಲ್ಲಗೆ
ನೀ ಕಳ್ಳನೋ ಕರುನಾಳೊ
ಅರಿಯೇ ನಾ ತಿಳಿವ ಬಗೆ

ಮರುಳಿಯಾಗಿಬಿಡುವೆ ನೀ ಸುಳಿಯೇ
ವಿದಾಯದ ಕಂಬನಿ ಮಿಡಿದು ನೋವಿಗೆ
ತನು ಮನ ಉಲ್ಲಾಸಿಸುವವನೆ
ಹೀಗೆ ಸಾಗಲಾಗದೆ ನೀ ಜೊತೆಜೊತೆಗೆ

- ಶ್ರೀಕಾವ್ಯ

26 May 2018, 10:03 pm

ಪ್ರೀತಿಯಲಿ ನೋಂದ ಹೃದಯ

ಕಣ್ಣು ಕತ್ತಲಾಗಿದೆ ನಿನ್ನ
ಪ್ರೀತಿ ಕಾಣದೆ
ಮನಸ್ಸು ಮೌನವಾಗಿ ನಿನ್ನ
ಮಾತು ಕೆಳದೆ
ಕಣ್ಣ ತುಂಬಾ ನಿನ್ನ ಬಿಂಬ ಹಾವರಿಸಿದೆ
ಹೃದಯ ಮುಟ್ಟಿ ಹೇಳುವೆ ಕೇಳು
ಈ ಹೃದಯಕ್ಕೆ ನಿನ್ನನ್ನು ಪ್ರೀತಿ
ಮಾಡೋದು ಬೀಟ್ಟು ಬೆರೇನು ಗೊತ್ತಿಲ್ಲ..
ಓ ಹೃದಯ ವಾಸಿಯೇ
ಪ್ರೀತಿಯಲಿ ನೋಂದ ಹೃದಯ
ಮುರಳಿಧರ ವಿನಾಯಕ ಟೈಲರ್
ಕೇಸರಹಟ್ಟಿ

- Murali.T

25 May 2018, 09:26 pm

ಕಸವೇ ಖಾಯಿಲೆಗೆ ಮೂಲ

ಕಸವೇ ಖಾಯಿಲೆಗೆ ಮೂಲ
ಸ್ವಚ್ಛತೆಯೇ ಆರೋಗ್ಯಕ್ಕೆ ಬಲ..
ಮನೆ ಬೀದಿ ಕಸವನ್ನೆಲ್ಲ
ಒಂದೆಡೆ ಸೇರಿಸಬೇಕಲ್ಲ..
ಕಸದ ವಾಹನ ಬಂದಾಗೆಲ್ಲಾ
ಕಸವ ಸುರಿಯಬೇಕಲ್ಲ.. " ಪ "

ಪ್ಲಾಸ್ಟಿಕ್ ರಕ್ಕಸ ಕಣೋ
ಕಸವೇ ವಿಷ ಕಣೋ..
ಎಲ್ಲೆಂದರಲ್ಲಿ ನೀ ಎಸೆಯ ಬ್ಯಾಡ ಬ್ಯಾಡ
ಹಳದಿ ಡಬ್ಬ ಒಣ ಕಸಕೆ
ಹಸಿರು ಡಬ್ಬ ಹಸಿ ಕಸಕೆ..
ಸ್ವಚ್ಛತಾ ಆಂದೋಲನದಲ್ಲಿ ನೀ ಭಾಗಿ ಆಗು ಆಗಿರು..!!

ಕಸದ ನಿರ್ಮೂಲನೆ
ರೋಗದ ನಿರ್ಮೂಲನೆ
ಸ್ವಚ್ಛತಾ ಪಾಲನೆ ನೀ ಬಿಡಲೇ ಬ್ಯಾಡ ಬ್ಯಾಡ..
ನಾಡು ನಮ್ಮದೇ
ದೇಶವು ನಮ್ಮದೇ
ಅಂದು ಕೊಂಡು ನೀ ಬಾಳು ಬಾಳು ಓ..!!

- ಸುರೇಶ್ ಟಿ ವಿ

25 May 2018, 12:32 pm

ಮುದ್ದು ಪ್ರೀತಿ

ಪ್ರೀತಿಸಿ
ಹೊರೆಟು ಬಿಟ್ಟೆಯಾ
ಒಂಟಿಯಾಗಿ ಬಿಟ್ಟು
ಈ ಹೃದಯವನ್ನ
ಮೌನವೇ ಆವರಿಸಿದೆ
ಈ ಮನಸ್ಸಿನ ಮನೆಯಲ್ಲಿ
ಕಾರ್ಮೋಡ ಕವಿದಿದೆ
ನನ್ನೆದೆಯ ಗೂಡಲ್ಲಿ
ಅಂದು ನೋವು ಮರೆಸಿದ
ನಿನ್ನ ಮುದ್ದು ಪ್ರೀತಿ
ಇಂದು ಎಲ್ಲಿ ಹೋಯ್ತು
ಆ ನಿನ್ನ ಮುದ್ದು ಪ್ರೀತಿ
ಮರೆತರು ಮರೆಯಲಾಗುತ್ತಿಲ್ಲ
ನಿನ್ನ ಮುದ್ದು ಪ್ರೀತಿಯ ಗೆಳತಿ

ರಾಜು ಹಾಸನ

- ರಾಜು ಹಾಸನ

25 May 2018, 12:06 pm

ಕಾಲ್ಗೆಜ್ಜೆ ಉಡುಗೊರೆ....

ಅಂದು ನಾ ಕಟ್ಟಿದ ಕಾಲ್ಗೆಜ್ಜೆ ಇಂದು ಅದು ಕಾಡುತ್ತಿದೆ ನನ್ನನ್ನು...!!! ಇಂದು ಅದು ಕಾಡುತ್ತಿದೆ ನನ್ನನ್ನು ಓ ಗೆಳತಿ ಪ್ರೀತಿಯ ನೆನಪಲ್ಲಿ ನಾ ನಿನಗೆ ಕೊಟ್ಟ ಕೊನೆಯ ಕಾಣಿಕೆ...!!! ಎಂದು ಮರೆಯದಿರು ಈ ನನ್ನ ಕಾಣಿಕೆನಾ ಇದೇ ನನ್ನ ಬೇಡಿಕೆ... ಮುಗ್ಧ ಮನಸ್ಸು

- Prasad Suresh

24 May 2018, 10:57 am

ಜಾತ್ರೆ ಸಾಗಿದೆ..

ಕಿವಿಗವಡುಚಿಕ್ಕುವ ಜೋರು ಸದ್ದನು ಕೇಳಿ
ಬೆಚ್ಚಿ ಬಿದ್ದು ಎದ್ದು ಕುಳಿತೆ ಈ ನಡು ರಾತ್ರಿಯಲಿ.
ಊರ ಹೊರಗಿನ ನನ್ನ ಒಂಟಿ ಮನೆ ನಡುಗುತ್ತಿದೆ
ತಮಟೆ ಡೋಲು ವಾದ್ಯಗಳ ಸದ್ದು ಗದ್ದಲಕೆ,

ಎದ್ದು ನೋಡಿದರೆ ಸಾಗುತ್ತಿದೆ ದೊಡ್ಡಮ್ಮನ ಜಾತ್ರೆ
ಊರಿಗೆಲ್ಲ ದೊಡ್ಡ ಹಬ್ಬ, ಬೀದಿಯೆಲ್ಲ ಜನ ಜಂಗುಳಿ,
ಮನೆ ಮನೆಗೂ ಮರಿ ಹೊಡೆದು ತಿಂದುಂಡ ಜನರು
ಈ ರಾತ್ರಿಯಿಡೀ ಊರೆಲ್ಲಾ ತಿರುಗಾಡುತ್ತ ಜೀರ್ಣಿಸಿಕೊಳ್ಳುತಿಹರು.

ಹಾರುತ್ತಿವೆ ಬಣ್ಣ ಬಣ್ಣದ ಪಟಾಕಿ
ಅಂಬರಕ್ಕೆ ಮುತ್ತಿಕ್ಕಿ ಸಿಡಿಯುತ್ತಿವೆ ಬಣ್ಣದೋಕುಳಿ ಚೆಲ್ಲಿ,
ಕಿವಿ ತಮಟೆಯನು ಸೀಳಿ ಬೋರ್ಗರೆವ ಸದ್ದು
ಗಾಳಿಯೊಂದಿಗೆ ಬೆರೆಯುತಿರುವ ಗಂದಕ.

ಬೇರೆ ಬೇರೆ ತಂಡಗಳ ವಾದ್ಯ ಗುಂಪು
ಜಾನಪದ, ಆಧುನಿಕ, ಸಿನೆಮಾ ಸಂಗೀತ
ಡಿಸ್ಕೊ ಡ್ಯಾನ್ಸು, ಕರಡಿ ಹುಲಿ ಕುಣಿತ
ಜೊತೆಗೆ ನಡು ನಡುವೆ ಕುಡುಕರ ತಕದಿಮಿತ.

ಲಲನಾಮಣಿಯರೂ ಹೊರಟಿರುವರು ನಿದ್ದೆ ಬಿಟ್ಟು
ವೈಯ್ಯಾರದಿ ಹೊಸ ಜರತಾರಿ ಸೀರೆಗಳನು ಉಟ್ಟು
ಅಂದು ನನ್ನ ನಿದ್ದೆ ಕದ್ದವರೆಷ್ಟೋ,
ಪ್ರೀತಿಗಾಗಿ ಹಂಬಲಿಸಿ ಹೋದಾಗ ತಿರಸ್ಕರಿಸಿ ಮುನ್ನಡೆದವರೆಷ್ಟೋ..

ಎಲ್ಲರಿಗೂ ಅವರವೇ ನೂರಾರು ಕಾರಣಗಳು..
ಎಲ್ಲವನೂ ಮರೆತು ಸಾಗಿದೆ ಜಾತ್ರೆ
ನಡೆಯುತ್ತ ಇರುವ ವರೆಗೂ ಬಣ್ಣಗಳ ನೋಡುತ್ತ
ಅಂದಂದಿನ ಸುಖ ದುಃಖವ ಅಂದಂದೇ ಉಣ್ಣುತ್ತಾ..

ಕೊನೆಗೂ ಜಾತ್ರೆಯ ಜಂಗುಳಿ ದೂರಾಗುತ್ತಿದೆ
ಒಂಟಿ ಮನೆಯ ಬಾಗಿಲಿಗೆ ಮಿಡವೇ ಇಲ್ಲ,
ಜಗದ ಜಂಜಡವಿಲ್ಲದ ಮನೆಗೆ
ಬಾಗಿಲ ಗೊಡವೆಯು ಬೇಕಿಲ್ಲ.

- ಶ್ರೀಗೋ.

24 May 2018, 03:20 am

ಯಾರ ಗರ್ವ ಯಾರಿಗಾಗಿ

ನಾವು ನಮ್ಮವರು
ಎಂದು ಗರ್ವದಿಂದ
ಹೇಳುವ ಮುನ್ನ
ನಮ್ಮವರು ಯಾರು ಎಂದು ತಿಳಿಯೇ‌ ಓ ಮನಸ್ಸೇ
ನೀ ದುಡಿಯುವಾಗ ಎಲ್ಲರು ನಿನ್ನ ‌ಹಿಂದೆ ಮುಂದಿರುವರು
ನೀ ಕೈ ಕಟ್ಟಿ ಕುಳಿತರೆ
ಯಾರು ಇರುವುದಿಲ್ಲ
‌ ನಿನ್ನ ಹಿಂದೆ ಮುಂದೆ
ಆಗ ತಿಳಿಯುವುದು
ನಿನ್ನವರು ಯಾರು ಎಂದು

ರಾಜು ಹಾಸನ

- ರಾಜು ಹಾಸನ

23 May 2018, 11:34 am

ಮರುನೆನಪುಗಳು

ಕವಿದ ಕಾರ್ಮೋಡಗಳು
ನೆನಪಿಸುತಿಹವು
ಕೈಕೈ ಹಿಡಿದು ನಡೆದ ಆ,ಮುಂಗಾರಿನ ದಿನಗಳ
ಚಿಮುಚಿಮು ಜಿಟುಗುಟ್ಟುವ ಆ ಮಳೆ ಹನಿಯಲಿ
ನೆನಪಿದೆ ಬಾಲ್ಯದ
ಚೆಲ್ಲಾಟವಾಡಿದ ಕ್ಷಣಗಳು
ಮತ್ತೆ ಬರಬಾರದೆ ಓ ಬಾಲ್ಯವೇ
ನಿನ್ನೊಂದಿಗೆ ಕವಿಯಾಗುವ ಬದಲು
ಮಗುವಾಗಿರಲೇ ನಾ ಜೊತೆಯಲಿ

- ಎಸ್.ಬಿ

23 May 2018, 10:52 am

ಬೆಳದಿಂಗಳು

೧.ಕಣ್ಣ ಕಾಂತಿ

ಬೆಳದಿಂಗಳಿಗೂ ನಿನ್ನ ಕಣ್ಣ
ಕಾಂತೀಯೆ ಬೇಕಂತೆ
ಬೇಡಿದರದು ಮರುಗಿ
ಮಾರುಹೋಗದಿರು ಕಾಂತೆ
ಸಾವನೆ ನೋಡದಿರಬಹುದು
ನನ್ನ ಬಾಳ ಅಂತೆ ಕಂತೆ ಚಿಂತೆ
ಬೆಳಗಲಿರದೆ ನಿನ್ನ ಹಸನ್ಮುಖಿ
ಕಂಗಳೊಳಗಿನ ಹಣತೆ

***************************


೨.ನೋವಿನ ಹಂದರ

ಕನಸಿಗೆ ಕನ್ನ ಹಾಕುತಿವೆ
ನೋವಿನ ಹಂದರ
ಸೋಲೂ ನನಗೀಗ
ಹಿಂಬಾಲಿಸೊ ಸಹೋದರ
ಬೇಡವೆಂದು ದೂರ ಸರಿಸಲಾಗದೆ
ಮನಕೆ ಬೇಸರ
ಅನಿಸುತಿದೆ ಯಮಪಾಶವು
ಅತಿ ಸುಂದರ
ಬಾಳ ಬೆಳಗೊ ಬೆಳದಿಂಗಳ‌
ಸೂಸಲಾಗುವುದೆ ಚಂದಿರ
ಕತ್ತಲೊಳಗೆ ನರಳುತಿದೆ
ಮನಸಿನ ಮಂದಿರ

- ಶ್ರೀಕಾವ್ಯ

22 May 2018, 07:53 pm