ಅಮ್ಮಾ ಜ್ವರ ಬಂದಿದೆ ಎಂದು ಹೇಳುತ್ತಲೇ ಪರೀಕ್ಷೆಗೆ ಹೊರಡಲು ತಯಾರಿಯಲ್ಲಿದ್ದ ಮಗಳು ಅಪ್ಪನ ನೋಡಿದ ಆಕೆ ಅಪ್ಪಾ ನನ್ನ ಪರೀಕ್ಷೆ ಮುಗಿಸುವಷ್ಟರಲ್ಲೆ ನಿನು ನನ್ನ ಕರೆಯಲು ಬರಲೆ ಬೇಕೆಂದು ಹಠ ಮಾಡುವಷ್ಟರಲ್ಲೆ ಶಾಲಾ ವಾಹನ ಬಂದಿತ್ತು ಅಳುತ್ತಲೆ ಹೋರಟ ಮಗಳಿಗೆ ಪರೀಕ್ಷೆ ಚೆನ್ನಾಗಿ ಬರಿ ಮಗಳೇ ನಾ ನಿನ್ನ ಕರೆಯಲು ಸ್ವಲ್ಪ ಬೇಗನೆ ಬರುವೆ ಎಂದು ಹೇಳಿ ಮಗಳನ್ನ ಸಮಾಧಾನ ಮಾಡಿ ತನ್ನ ನಿತ್ಯದಂತೆ ಅಡವಿಗೆ ಹೋದ ಅಪ್ಪಾ.....
ಕೆಲಹೊತ್ತಾದ ಮೇಲೆ ಅಡವಿಯಿಂದ ಮನೆಗೆ ಬಂದ ಅಪ್ಪನಿಗೆ ನೆನಪಾದ ಮಮತೆಯ ಮಗಳ ಮಾತು... ಹೆಂಡತಿಗೆ ಹೇಳಿದನಂತೆ ಬೇಗ ಊಟ ಬಡಿಸು ಮಗಳ ಪರೀಕ್ಷೆ ಮುಗಿಯುವ ಸಮಯವಾಗಿದೆ ನಾ ಹೋಗಬೇಕೆಂದು ಆತುರದಿಂದಲೇ ಊಟ ಮುಗಿಸಿ ಹೋರಟ ಅಪ್ಪ ತನ್ನ ಗಂಡ ಕುಡಿದಿಲ್ಲವೆಂದು ಖುಷಿಯಿಂದಲೇ ಊಟ ಬಡಿಸಿದ ಹೆಂಡತಿಗೆ ಗೊತ್ತಿರಲಿಲ್ಲ ಮುಂದೆನಾಗುತ್ತೆ ಅನ್ನುವುದು.
ಇನ್ನೇನು ಶಾಲೆಗೆ ತಲಪುವಷ್ಟರಲ್ಲೆ ಗಮನ ಸೆಳೆದ ಕೆಟ್ಟ ಚಟ ಕುಡಿಯುವಂತೆ ಮಾಡಿ ನಶೆ ಮಾಡಿ ಬಿಟ್ಟಿತ್ತು ನಶೆಯಲ್ಲೆ ಶಾಲೆಗೆ ಹೋದ ಅಪ್ಪನನ್ನು ಮುಕ್ಯದ್ವಾರದಲ್ಲಿ ನಿಂತಿದ್ದ ಕಾವಲುಗಾರ ಒಳ ಹೋಗಲು ಬಿಡದ ಕಾರಣ ದ್ವಾರದ ಬಳಿಯೇ ಮಲಗಿರುತ್ತಾನೆ.
ಅಪ್ಪ ಬಂದಿರುತ್ತಾನೆಂದು ಪರೀಕ್ಷೆ ಮುಗಿಸಿ ಖುಷಿಯಿಂದ ಹೊರಬಂದ ಮಗಳು ನಶೆಯಲ್ಲಿದ್ದ ಅಪ್ಪನಿಗೆ ಹೊಡೆಯುತಿದ್ದ ಕಾವಲುಗಾರನ ಅಳುತ್ತಲೆ ತಡೆದು ಇವ್ರು ನಮ್ಮ ಅಪ್ಪಾ ಎಂದು ಹೇಳಿದ ಆಕೆ ಅಪ್ಪಾ.... ಎದ್ದೇಳಪ್ಪಾ... ಎಲ್ಲರು ಇ ಕಡೆಯೆ ನೋಡುತ್ತಿದ್ದಾರೆಂದು ಅಪ್ಪಣೆದೆಯ ಮೇಲೆ ಅಳುತ್ತಿದ್ದ ಆ ಮಗು ಹೋಗು ಬರುವವರಿಗೆಲ್ಲ ನಮ್ಮಪ್ಪನನ್ನ ಎಬ್ಬಿಸಿ...! ಏನಾಗಿದೆ ನೋಡಿ ಅಂಕಲ್ ಎಂದು ಗೋಗರೆದರೂ ಯಾರು ನೋಡಲೆ ಇಲ್ಲ ಆ ಮಗುವಿನ ಸಂಕಟ; ಕೆಲಕ್ಷಣಗಳ ಮೇಲೆ ಅಪ್ಪಣೆದೆಯ ಮೇಲೆ ಮಲಗಿಬಿಟ್ಟಿತ್ತು ಆ ಮಗು...!
ನಶೆಯಿಂದ ಹೊರಬಂದ ಅಪ್ಪನಿಗೆ ಕಂಡ ತನ್ನ ಕಂದಮ್ಮಗಳಿಗೆ ಬಿಗಿದಪ್ಪಿ ಅತ್ತು... ಮತ್ತೇ ಮನೆ ಕಡೆಗೆ ಹೋರಟ ಅಪ್ಪ ಮಗಳು...
ನನಗಾಗಿ ನಡು ರಾತ್ರಿ ಎದ್ದು
ಕುಂತವನು.....
ನನ್ನ ಒಂದು ಮಾತಿಗಾಗಿಯೇ
ಕಾಯುತ್ತಿರುವನು...
ನನ್ನಿಂದಲೇ ತನ್ನ ಮನಸ್ಸನ್ನು
ಕೆಡಿಸಿಕೊಂಡವನು..
ನನ್ನನೇ ಹೃದಯದ ರಾಣಿಯೆನ್ನಾಗಿ
ಮಾಡಿಕೊಂಡವನು..
ನನ್ನ ಜೊತೆಯಾಗಿ ಇರಲು
ಬಯಸಿದವನು....
ನನ್ನ ಪ್ರೀತಿಗಾಗಿ ಇಗಲು ಸಹ
ಹವನಿಸುತ್ತಿರುವನು...
ನನ್ನ ಭೇಟಿಗಾಗಿಯೇ
ಕಾಯುತ್ತಿರುವನು...
ಸಿಗಲಾರದ ಅದೃಷ್ಟವಂತ ಅವನು
ಮರೆಲಾಗದ ಅವನ ಪ್ರೀತಿ ನಾನು
ಇಂತಿ ನಿನ್ನವಳು
ಶ್ರೀ ❤️??☺️?
ಅಮ್ಮಾ ಜ್ವರ ಬಂದಿದೆ ಎಂದು ಹೇಳುತ್ತಲೇ ಪರೀಕ್ಷೆಗೆ ಹೊರಡಲು ತಯಾರಿಯಲ್ಲಿದ್ದ ಮಗಳು ಅಪ್ಪನ ನೋಡಿದ ಆಕೆ ಅಪ್ಪಾ ನನ್ನ ಪರೀಕ್ಷೆ ಮುಗಿಸುವಷ್ಟರಲ್ಲೆ ನಿನು ನನ್ನ ಕರೆಯಲು ಬರಲೆ ಬೇಕೆಂದು ಹಠ ಮಾಡುವಷ್ಟರಲ್ಲೆ ಶಾಲಾ ವಾಹನ ಬಂದಿತ್ತು ಅಳುತ್ತಲೆ ಹೋರಟ ಮಗಳಿಗೆ ಪರೀಕ್ಷೆ ಚೆನ್ನಾಗಿ ಬರಿ ಮಗಳೇ ನಾ ನಿನ್ನ ಕರೆಯಲು ಸ್ವಲ್ಪ ಬೇಗನೆ ಬರುವೆ ಎಂದು ಹೇಳಿ ಮಗಳನ್ನ ಸಮಾಧಾನ ಮಾಡಿ ತನ್ನ ನಿತ್ಯದಂತೆ ಅಡವಿಗೆ ಹೋದ ಅಪ್ಪಾ.....
ಕೆಲಹೊತ್ತಾದ ಮೇಲೆ ಅಡವಿಯಿಂದ ಮನೆಗೆ ಬಂದ ಅಪ್ಪನಿಗೆ ನೆನಪಾದ ಮಮತೆಯ ಮಗಳ ಮಾತು... ಹೆಂಡತಿಗೆ ಹೇಳಿದನಂತೆ ಬೇಗ ಊಟ ಬಡಿಸು ಮಗಳ ಪರೀಕ್ಷೆ ಮುಗಿಯುವ ಸಮಯವಾಗಿದೆ ನಾ ಹೋಗಬೇಕೆಂದು ಆತುರದಿಂದಲೇ ಊಟ ಮುಗಿಸಿ ಹೋರಟ ಅಪ್ಪ ತನ್ನ ಗಂಡ ಕುಡಿದಿಲ್ಲವೆಂದು ಖುಷಿಯಿಂದಲೇ ಊಟ ಬಡಿಸಿದ ಹೆಂಡತಿಗೆ ಗೊತ್ತಿರಲಿಲ್ಲ ಮುಂದೆನಾಗುತ್ತೆ ಅನ್ನುವುದು.
ಇನ್ನೇನು ಶಾಲೆಗೆ ತಲಪುವಷ್ಟರಲ್ಲೆ ಗಮನ ಸೆಳೆದ ಕೆಟ್ಟ ಚಟ ಕುಡಿಯುವಂತೆ ಮಾಡಿ ನಶೆ ಮಾಡಿ ಬಿಟ್ಟಿತ್ತು ನಶೆಯಲ್ಲೆ ಶಾಲೆಗೆ ಹೋದ ಅಪ್ಪನನ್ನು ಮುಕ್ಯದ್ವಾರದಲ್ಲಿ ನಿಂತಿದ್ದ ಕಾವಲುಗಾರ ಒಳ ಹೋಗಲು ಬಿಡದ ಕಾರಣ ದ್ವಾರದ ಬಳಿಯೇ ಮಲಗಿರುತ್ತಾನೆ.
ಅಪ್ಪ ಬಂದಿರುತ್ತಾನೆಂದು ಪರೀಕ್ಷೆ ಮುಗಿಸಿ ಖುಷಿಯಿಂದ ಹೊರಬಂದ ಮಗಳು ನಶೆಯಲ್ಲಿದ್ದ ಅಪ್ಪನಿಗೆ ಹೊಡೆಯುತಿದ್ದ ಕಾವಲುಗಾರನ ಅಳುತ್ತಲೆ ತಡೆದು ಇವ್ರು ನಮ್ಮ ಅಪ್ಪಾ ಎಂದು ಹೇಳಿದ ಆಕೆ ಅಪ್ಪಾ.... ಎದ್ದೇಳಪ್ಪಾ... ಎಲ್ಲರು ಇ ಕಡೆಯೆ ನೋಡುತ್ತಿದ್ದಾರೆಂದು ಅಪ್ಪಣೆದೆಯ ಮೇಲೆ ಅಳುತ್ತಿದ್ದ ಆ ಮಗು ಹೋಗು ಬರುವವರಿಗೆಲ್ಲ ನಮ್ಮಪ್ಪನನ್ನ ಎಬ್ಬಿಸಿ...! ಏನಾಗಿದೆ ನೋಡಿ ಅಂಕಲ್ ಎಂದು ಗೋಗರೆದರೂ ಯಾರು ನೋಡಲೆ ಇಲ್ಲ ಆ ಮಗುವಿನ ಸಂಕಟ; ಕೆಲಕ್ಷಣಗಳ ಮೇಲೆ ಅಪ್ಪಣೆದೆಯ ಮೇಲೆ ಮಲಗಿಬಿಟ್ಟಿತ್ತು ಆ ಮಗು...!
ನಶೆಯಿಂದ ಹೊರಬಂದ ಅಪ್ಪನಿಗೆ ಕಂಡ ತನ್ನ ಕಂದಮ್ಮಗಳಿಗೆ ಬಿಗಿದಪ್ಪಿ ಅತ್ತು... ಮತ್ತೇ ಮನೆ ಕಡೆಗೆ ಹೋರಟ ಅಪ್ಪ ಮಗಳು...
ಪನ್ನೀರಿನ ಅಭಿಷೇಕ ಮಾಡಬೇಕೆಂದಿದ್ದೆ
ನನ್ನವನಿಗೆ
ಕಣ್ಣೀರಿನ ಅಭಿಷೇಕ ಮಾಡುತ್ತಿರುವೆ ತಲೆದಿಂಬಿಗೆ
ಅಲೆಮಾರಿ ಮನಸ್ಸು ಅಲೆದ ಅಲೆದು ದಣಿದಿದೆ
ತುಸುಕಾಲ ನೀಡುವೆಯ ನಿನ್ನ ಮಡಿಲ ಆಸರೆ
ಆದರೆ ನೀ ಯಾಕೆ ನನ್ನ ಬಿಟ್ಟು ಹೋದೆ
ಎಂದು ಇಂದಿಗೂ ತಿಳಿಯದು
ನನಗೆ
ಮತ್ತೆ ಬರುವೆಯಾ ನೀ
ಮರಳಿ ??
ನಿನ್ನ ಪ್ರೀತಿಯ
ಶ್ರೀ ❤️?
"ಜೀವನದ ಅದೆಷ್ಟೋ ಜಂಜಾಟದಲ್ಲಿ
ಒಂದಿಷ್ಟು ನೆಮ್ಮದಿಯ ಪಯಣ
ಪಯಣದ ದೂರ ಹೆಚ್ಚಾದಂತೆ ಅನುಭವದ
ಕ್ಷಣಗಳು ಹೆಚ್ಚಾದವು.
ಅನುಭವದ ದಿನಗಳು...
ಅರ್ಥವಿಲ್ಲದ ನಿರ್ದಿಷ್ಟ ಜೀವನ...
ಈ ಪಯಣದಲ್ಲಿ ಅಲಲ್ಲಿ ಒಂದಿಷ್ಟು
ಪ್ರೀತಿ, ಪ್ರೇಮ, ಇವುಗಳ ಹೋರಾಟದಲ್ಲಿ
ನೆಮ್ಮದಿಯ ಹುಡುಕಾಟ..
ನಂಬಿದವಳು ಕೈ ಬಿಟ್ಟಾಗ ಅರಿವಾಯಿತು..
ಇದೆಲ್ಲ ಯೌವನದ ಒಂದಿಷ್ಟು ಹುಡುಗಾಟ"...
"ಮಳೆಬರುವುದು ನಿಂತರು
ಮರದಮೇಲಿನ ಹನಿಗಳು
ಬೀಳುವುದು ನಿಲ್ಲಲಿಲ್ಲ..
ಗುಡುಗು, ಸಿಡಿಲುಗಳು
ಬಿದ್ದುಹೋದರು..
ಅವುಗಳ ಶಬ್ದಗಳು ಕಿವಿಯಿಂದ ಮರೆಮಾಚಲಿಲ್ಲ
ಮಳೆಬಂದರು, ಸಿಡಿಲುಗಳು ಬಿದ್ದರು
ಊರೆಲ್ಲ ಕೆಸರಾದರೂ ಜನಗಳು
ಓಡಾಡುವುದು ಬಿಡಲಿಲ್ಲ..
ಪ್ರಕೃತಿಯಲ್ಲಿ ಏನೇ ಆದರೂ
ಯಾರೆ ಹೋದರು ತನ್ನ ಕೆಲಸ
ಮುಂದುವರೆಸುವುದು
ಪ್ರಕೃತಿಯ ನಿಯಮವಾಗಿದೆ..
ನಾವು ಸಹ ನಮ್ಮ ಜೀವನದಲ್ಲಿ
ಏನೆ ಆದರೂ, ಯಾರೆ ಬಂದು ಹೋದರು
ಹಿಗ್ಗದೆ, ಕುಗ್ಗದೆ ಎಲ್ಲವನ್ನು ಸಮಾನವಾಗಿ
ಮುಂದುವರೆಸುಕೊಂಡು ಹೋಗುವುದು
ನಮ್ಮೆಲ್ಲರ ಜೀವನದ ನಿಯಮವಾಗಿದೆ"...
ಈ ರಾಮ ಬೇಡಮ್ಮ ಶ್ಯಾಮ ಬೇಡಮ್ಮ
ರಾಜ್ಯ ಬೇಡಮ್ಮ ಪಟ್ಟದರೆಸಿಯಾದರೂ
ನಿಂದೆ ಕಟ್ಟುವ ಜನರು ಬೇಡಮ್ಮ!
ರಾಮ ದೇವರಾದರೆ ನಾನು ದೇವತೆಯಲ್ಲವೇ
ದೇವರ ಮೇಲಿರುವ ಭಕುತಿ ನಂಬಿಕೆ ನನ್ನಮೇಲಿಲ್ಲವೇ!
ಉಸಿರಿರದ ಸಂಸಾರದ ಭಾರ ಬೇಡಮ್ಮ
ಭಾವಗಳಿಗೆ ಬೆಲೆಯಿಲ್ಲದ ಬದುಕು ಬೇಡಮ್ಮ!
ಆಗಾಗ ನಡುಗುವೆನು
ಇರುಳು ಸರಿದು ಹೊತ್ತು ಹುಟ್ಟುವ
ಮುಂಜಾವಿನ ಮೌನದ ಸದ್ದಿಗೆ,
ರಾಮನಿರುವುದಿಲ್ಲ ಧೈರ್ಯ ಹೇಳಲು
ಮಗ್ಗುಲು ಬದಲಿಸಿ ತಡಕಾಡಿದಾಗ!
ತಪ್ಪು ಯಾರದಮ್ಮ ಎಂದು ಒಮ್ಮೆಯೂ
ಕೇಳಲಿಲ್ಲ ಪರಪಂಚ ನನ್ನನು, ದೋಷಿ
ನಾನಾದೆ ಮಾಡದ ತಪ್ಪುಗಳಿಗೆ ಹೆಣ್ಣಾದ ಮರುಗಳಿಗೆ!
ಉತ್ತರ ಕೊಡುವ ಗೋಜಿಗೂ ಹೋಗಲಿಲ್ಲ
ನಾನು, ಏಕೆಂದರೆ ತಪ್ಪು ಹೆಣ್ಣಿನದ್ದೇ ಅಲ್ಲವೇ
ಅವರು ಬರೆದುಕೊಂಡ ನೀತಿ ಪುಟಗಳಲ್ಲಿ ಹೆಣ್ಣಿಗೆ ಜಾಗವಿಲ್ಲವೇ!
ಮಡಿಲ ಮಗುವಾಗುವೆ ತಪ್ಪಿಯೂ ನನ್ನ
ಕೈ ಬಿಡದಿರು ನೀನು ಮತ್ತೆ ನನ್ನ ಕದ್ದರೆ, ಯುದ್ಧವೊಂದು ನಡೆದರೆ ಯಾವ ಕಾಡಿನ ಪಾಲಾದೇನೋ? ಕಂಡವರ ಬಾಯಲ್ಲಿ ಕರಗಿ ನೀರಾದೆನೋ? ಉತ್ತರವಿರದ ಪ್ರಶ್ನೆಗಳ ಸೊತ್ತಾದೆನೋ ನಾನು!
ನನ್ನೀ ನೆರಳಿಗೆ ಕರುಳ ನಂಟು ಬೆಸೆದುಬಿಡು ನಿನ್ನ ಹೃದಯಕ್ಕಂಟಿ ಉಸಿರಾಡುವೆ ಮತ್ತೆ ನಾನಾಗಿ ನನಗಾಗಿ..