Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನದ ಮಾತು

ಹೇಳಿಬಿಡಲೇ ನಾನು ನಿನಗೆ
ನನ್ನೊಳಗವಿತಿರುವ ಗುಟ್ಟು
ಮನದ ಬೇಗೆಯನರುಹಿ
ಹಗುರಾಗಬೇಕಿದೆ ಈ ಹೃದಯವು
ಪ್ರೀತಿಯ ಅಪ್ಪುಗೆಯ
ಬಯಸಿದೆ ಈ ಮನವು
ಸಂತೈಸುವ ಹೊಣೆ ಈಗ ನಿನ್ನದು.....
ಅತ್ತು ಹಗುರಾಗಲು
ಬೇಕಿದೆ ಮಮತೆಯ ಮಡಿಲು
ನೀ ತೋರುವೆಯಾ ಭರವಸೆಯ ಬೆಳಕು
ಮೌನದಿ ಕಾಳಜಿಯ, ಪ್ರೇಮದ ಒಲುಮೆಯ
ನೀಡುವೆಯಾ ನನಗಾಗಿ ನೀನು.....
ಇರುವೆಯಾ ನನ್ನೊಂದಿಗೆ ಎಂದೂ.....

- ಸಖೀ

26 Apr 2025, 09:25 pm

ಕುಡಿದರೆನಾಯ್ತು ಅಪ್ಪನ ಪ್ರೀತಿ ಪ್ರೀತಿಯೆ ಅಲ್ಲವೆ

ಅಮ್ಮಾ ಜ್ವರ ಬಂದಿದೆ ಎಂದು ಹೇಳುತ್ತಲೇ ಪರೀಕ್ಷೆಗೆ ಹೊರಡಲು ತಯಾರಿಯಲ್ಲಿದ್ದ ಮಗಳು ಅಪ್ಪನ ನೋಡಿದ ಆಕೆ ಅಪ್ಪಾ ನನ್ನ ಪರೀಕ್ಷೆ ಮುಗಿಸುವಷ್ಟರಲ್ಲೆ ನಿನು ನನ್ನ ಕರೆಯಲು ಬರಲೆ ಬೇಕೆಂದು ಹಠ ಮಾಡುವಷ್ಟರಲ್ಲೆ ಶಾಲಾ ವಾಹನ ಬಂದಿತ್ತು ಅಳುತ್ತಲೆ ಹೋರಟ ಮಗಳಿಗೆ ಪರೀಕ್ಷೆ ಚೆನ್ನಾಗಿ ಬರಿ ಮಗಳೇ ನಾ ನಿನ್ನ ಕರೆಯಲು ಸ್ವಲ್ಪ ಬೇಗನೆ ಬರುವೆ ಎಂದು ಹೇಳಿ ಮಗಳನ್ನ ಸಮಾಧಾನ ಮಾಡಿ ತನ್ನ ನಿತ್ಯದಂತೆ ಅಡವಿಗೆ ಹೋದ ಅಪ್ಪಾ.....
ಕೆಲಹೊತ್ತಾದ ಮೇಲೆ ಅಡವಿಯಿಂದ ಮನೆಗೆ ಬಂದ ಅಪ್ಪನಿಗೆ ನೆನಪಾದ ಮಮತೆಯ ಮಗಳ ಮಾತು... ಹೆಂಡತಿಗೆ ಹೇಳಿದನಂತೆ ಬೇಗ ಊಟ ಬಡಿಸು ಮಗಳ ಪರೀಕ್ಷೆ ಮುಗಿಯುವ ಸಮಯವಾಗಿದೆ ನಾ ಹೋಗಬೇಕೆಂದು ಆತುರದಿಂದಲೇ ಊಟ ಮುಗಿಸಿ ಹೋರಟ ಅಪ್ಪ ತನ್ನ ಗಂಡ ಕುಡಿದಿಲ್ಲವೆಂದು ಖುಷಿಯಿಂದಲೇ ಊಟ ಬಡಿಸಿದ ಹೆಂಡತಿಗೆ ಗೊತ್ತಿರಲಿಲ್ಲ ಮುಂದೆನಾಗುತ್ತೆ ಅನ್ನುವುದು.
ಇನ್ನೇನು ಶಾಲೆಗೆ ತಲಪುವಷ್ಟರಲ್ಲೆ ಗಮನ ಸೆಳೆದ ಕೆಟ್ಟ ಚಟ ಕುಡಿಯುವಂತೆ ಮಾಡಿ ನಶೆ ಮಾಡಿ ಬಿಟ್ಟಿತ್ತು ನಶೆಯಲ್ಲೆ ಶಾಲೆಗೆ ಹೋದ ಅಪ್ಪನನ್ನು ಮುಕ್ಯದ್ವಾರದಲ್ಲಿ ನಿಂತಿದ್ದ ಕಾವಲುಗಾರ ಒಳ ಹೋಗಲು ಬಿಡದ ಕಾರಣ ದ್ವಾರದ ಬಳಿಯೇ ಮಲಗಿರುತ್ತಾನೆ.
ಅಪ್ಪ ಬಂದಿರುತ್ತಾನೆಂದು ಪರೀಕ್ಷೆ ಮುಗಿಸಿ ಖುಷಿಯಿಂದ ಹೊರಬಂದ ಮಗಳು ನಶೆಯಲ್ಲಿದ್ದ ಅಪ್ಪನಿಗೆ ಹೊಡೆಯುತಿದ್ದ ಕಾವಲುಗಾರನ ಅಳುತ್ತಲೆ ತಡೆದು ಇವ್ರು ನಮ್ಮ ಅಪ್ಪಾ ಎಂದು ಹೇಳಿದ ಆಕೆ ಅಪ್ಪಾ.... ಎದ್ದೇಳಪ್ಪಾ... ಎಲ್ಲರು ಇ ಕಡೆಯೆ ನೋಡುತ್ತಿದ್ದಾರೆಂದು ಅಪ್ಪಣೆದೆಯ ಮೇಲೆ ಅಳುತ್ತಿದ್ದ ಆ ಮಗು ಹೋಗು ಬರುವವರಿಗೆಲ್ಲ ನಮ್ಮಪ್ಪನನ್ನ ಎಬ್ಬಿಸಿ...! ಏನಾಗಿದೆ ನೋಡಿ ಅಂಕಲ್ ಎಂದು ಗೋಗರೆದರೂ ಯಾರು ನೋಡಲೆ ಇಲ್ಲ ಆ ಮಗುವಿನ ಸಂಕಟ; ಕೆಲಕ್ಷಣಗಳ ಮೇಲೆ ಅಪ್ಪಣೆದೆಯ ಮೇಲೆ ಮಲಗಿಬಿಟ್ಟಿತ್ತು ಆ ಮಗು...!
ನಶೆಯಿಂದ ಹೊರಬಂದ ಅಪ್ಪನಿಗೆ ಕಂಡ ತನ್ನ ಕಂದಮ್ಮಗಳಿಗೆ ಬಿಗಿದಪ್ಪಿ ಅತ್ತು... ಮತ್ತೇ ಮನೆ ಕಡೆಗೆ ಹೋರಟ ಅಪ್ಪ ಮಗಳು...

- Shreya Ramaje

25 Apr 2025, 09:35 pm

ಅವನು ❤️

ನನಗಾಗಿ ನಡು ರಾತ್ರಿ ಎದ್ದು
ಕುಂತವನು.....
ನನ್ನ ಒಂದು ಮಾತಿಗಾಗಿಯೇ
ಕಾಯುತ್ತಿರುವನು...
ನನ್ನಿಂದಲೇ ತನ್ನ ಮನಸ್ಸನ್ನು
ಕೆಡಿಸಿಕೊಂಡವನು..
ನನ್ನನೇ ಹೃದಯದ ರಾಣಿಯೆನ್ನಾಗಿ
ಮಾಡಿಕೊಂಡವನು..
ನನ್ನ ಜೊತೆಯಾಗಿ ಇರಲು
ಬಯಸಿದವನು....
ನನ್ನ ಪ್ರೀತಿಗಾಗಿ ಇಗಲು ಸಹ
ಹವನಿಸುತ್ತಿರುವನು...
ನನ್ನ ಭೇಟಿಗಾಗಿಯೇ
ಕಾಯುತ್ತಿರುವನು...
ಸಿಗಲಾರದ ಅದೃಷ್ಟವಂತ ಅವನು
ಮರೆಲಾಗದ ಅವನ ಪ್ರೀತಿ ನಾನು
ಇಂತಿ ನಿನ್ನವಳು
ಶ್ರೀ ❤️??☺️?

- Prabha Magadum

25 Apr 2025, 03:03 pm

ನನ್ನವನು ❤️

ಆಕಸ್ಮಿಕವಾಗಿ ನಿನ್ನ ಪರಿಚಯ,
ಮೌನದಲ್ಲಿ ಅರಳಿದ
ಅನುರಾಗವಾಯಿತು.
ಸಿಗದೆ ಇದ್ದರೂ ಹೃದಯದ ಗುಡಿಯೊಳಗೆ
ನಕ್ಷತ್ರದಂತೆ ಹೊಳೆಯುವೆ ನೀನು.

ನೀನು ನನ್ನ ಶ್ಯಾಮ, ನಾನು ನಿನ್ನ ರಾಧೆ,
ಅವಕಾಶ ಸಿಕ್ಕರೆ, ಮುಂದಿನ ಜನ್ಮದಲ್ಲಿ
ಹುಟ್ಟಿ ಬರುವೆ ನಿನಗಾಗಿ ಮಾತ್ರ,
ನಿನ್ನವಳಾಗಿ,ನಿನ್ನಲೇ ಲೀನವಾಗಲು,


ಇಂತಿ ನಿನ್ನವಳು
ಶ್ರೀ ?❤️

- Prabha Magadum

24 Apr 2025, 02:47 pm

ಕುಡಿದರೆನಾಯ್ತು ಅಪ್ಪನ ಪ್ರೀತಿ ಪ್ರೀತಿಯೆ ಅಲ್ಲವೆ

ಅಮ್ಮಾ ಜ್ವರ ಬಂದಿದೆ ಎಂದು ಹೇಳುತ್ತಲೇ ಪರೀಕ್ಷೆಗೆ ಹೊರಡಲು ತಯಾರಿಯಲ್ಲಿದ್ದ ಮಗಳು ಅಪ್ಪನ ನೋಡಿದ ಆಕೆ ಅಪ್ಪಾ ನನ್ನ ಪರೀಕ್ಷೆ ಮುಗಿಸುವಷ್ಟರಲ್ಲೆ ನಿನು ನನ್ನ ಕರೆಯಲು ಬರಲೆ ಬೇಕೆಂದು ಹಠ ಮಾಡುವಷ್ಟರಲ್ಲೆ ಶಾಲಾ ವಾಹನ ಬಂದಿತ್ತು ಅಳುತ್ತಲೆ ಹೋರಟ ಮಗಳಿಗೆ ಪರೀಕ್ಷೆ ಚೆನ್ನಾಗಿ ಬರಿ ಮಗಳೇ ನಾ ನಿನ್ನ ಕರೆಯಲು ಸ್ವಲ್ಪ ಬೇಗನೆ ಬರುವೆ ಎಂದು ಹೇಳಿ ಮಗಳನ್ನ ಸಮಾಧಾನ ಮಾಡಿ ತನ್ನ ನಿತ್ಯದಂತೆ ಅಡವಿಗೆ ಹೋದ ಅಪ್ಪಾ.....
ಕೆಲಹೊತ್ತಾದ ಮೇಲೆ ಅಡವಿಯಿಂದ ಮನೆಗೆ ಬಂದ ಅಪ್ಪನಿಗೆ ನೆನಪಾದ ಮಮತೆಯ ಮಗಳ ಮಾತು... ಹೆಂಡತಿಗೆ ಹೇಳಿದನಂತೆ ಬೇಗ ಊಟ ಬಡಿಸು ಮಗಳ ಪರೀಕ್ಷೆ ಮುಗಿಯುವ ಸಮಯವಾಗಿದೆ ನಾ ಹೋಗಬೇಕೆಂದು ಆತುರದಿಂದಲೇ ಊಟ ಮುಗಿಸಿ ಹೋರಟ ಅಪ್ಪ ತನ್ನ ಗಂಡ ಕುಡಿದಿಲ್ಲವೆಂದು ಖುಷಿಯಿಂದಲೇ ಊಟ ಬಡಿಸಿದ ಹೆಂಡತಿಗೆ ಗೊತ್ತಿರಲಿಲ್ಲ ಮುಂದೆನಾಗುತ್ತೆ ಅನ್ನುವುದು.
ಇನ್ನೇನು ಶಾಲೆಗೆ ತಲಪುವಷ್ಟರಲ್ಲೆ ಗಮನ ಸೆಳೆದ ಕೆಟ್ಟ ಚಟ ಕುಡಿಯುವಂತೆ ಮಾಡಿ ನಶೆ ಮಾಡಿ ಬಿಟ್ಟಿತ್ತು ನಶೆಯಲ್ಲೆ ಶಾಲೆಗೆ ಹೋದ ಅಪ್ಪನನ್ನು ಮುಕ್ಯದ್ವಾರದಲ್ಲಿ ನಿಂತಿದ್ದ ಕಾವಲುಗಾರ ಒಳ ಹೋಗಲು ಬಿಡದ ಕಾರಣ ದ್ವಾರದ ಬಳಿಯೇ ಮಲಗಿರುತ್ತಾನೆ.
ಅಪ್ಪ ಬಂದಿರುತ್ತಾನೆಂದು ಪರೀಕ್ಷೆ ಮುಗಿಸಿ ಖುಷಿಯಿಂದ ಹೊರಬಂದ ಮಗಳು ನಶೆಯಲ್ಲಿದ್ದ ಅಪ್ಪನಿಗೆ ಹೊಡೆಯುತಿದ್ದ ಕಾವಲುಗಾರನ ಅಳುತ್ತಲೆ ತಡೆದು ಇವ್ರು ನಮ್ಮ ಅಪ್ಪಾ ಎಂದು ಹೇಳಿದ ಆಕೆ ಅಪ್ಪಾ.... ಎದ್ದೇಳಪ್ಪಾ... ಎಲ್ಲರು ಇ ಕಡೆಯೆ ನೋಡುತ್ತಿದ್ದಾರೆಂದು ಅಪ್ಪಣೆದೆಯ ಮೇಲೆ ಅಳುತ್ತಿದ್ದ ಆ ಮಗು ಹೋಗು ಬರುವವರಿಗೆಲ್ಲ ನಮ್ಮಪ್ಪನನ್ನ ಎಬ್ಬಿಸಿ...! ಏನಾಗಿದೆ ನೋಡಿ ಅಂಕಲ್ ಎಂದು ಗೋಗರೆದರೂ ಯಾರು ನೋಡಲೆ ಇಲ್ಲ ಆ ಮಗುವಿನ ಸಂಕಟ; ಕೆಲಕ್ಷಣಗಳ ಮೇಲೆ ಅಪ್ಪಣೆದೆಯ ಮೇಲೆ ಮಲಗಿಬಿಟ್ಟಿತ್ತು ಆ ಮಗು...!
ನಶೆಯಿಂದ ಹೊರಬಂದ ಅಪ್ಪನಿಗೆ ಕಂಡ ತನ್ನ ಕಂದಮ್ಮಗಳಿಗೆ ಬಿಗಿದಪ್ಪಿ ಅತ್ತು... ಮತ್ತೇ ಮನೆ ಕಡೆಗೆ ಹೋರಟ ಅಪ್ಪ ಮಗಳು...

- Shreya Ramaje

24 Apr 2025, 01:05 pm

ನನ್ನವನು ❤️??

ಪನ್ನೀರಿನ ಅಭಿಷೇಕ ಮಾಡಬೇಕೆಂದಿದ್ದೆ
ನನ್ನವನಿಗೆ
ಕಣ್ಣೀರಿನ ಅಭಿಷೇಕ ಮಾಡುತ್ತಿರುವೆ ತಲೆದಿಂಬಿಗೆ
ಅಲೆಮಾರಿ ಮನಸ್ಸು ಅಲೆದ ಅಲೆದು ದಣಿದಿದೆ
ತುಸುಕಾಲ ನೀಡುವೆಯ ನಿನ್ನ ಮಡಿಲ ಆಸರೆ
ಆದರೆ ನೀ ಯಾಕೆ ನನ್ನ ಬಿಟ್ಟು ಹೋದೆ
ಎಂದು ಇಂದಿಗೂ ತಿಳಿಯದು
ನನಗೆ
ಮತ್ತೆ ಬರುವೆಯಾ ನೀ
ಮರಳಿ ??
ನಿನ್ನ ಪ್ರೀತಿಯ
ಶ್ರೀ ❤️?




- Prabha Magadum

21 Apr 2025, 10:01 pm

"ನೆಮ್ಮದಿಯ ಹುಡುಕಾಟ"


"ಜೀವನದ ಅದೆಷ್ಟೋ ಜಂಜಾಟದಲ್ಲಿ
ಒಂದಿಷ್ಟು ನೆಮ್ಮದಿಯ ಪಯಣ
ಪಯಣದ ದೂರ ಹೆಚ್ಚಾದಂತೆ ಅನುಭವದ
ಕ್ಷಣಗಳು ಹೆಚ್ಚಾದವು.
ಅನುಭವದ ದಿನಗಳು...
ಅರ್ಥವಿಲ್ಲದ ನಿರ್ದಿಷ್ಟ ಜೀವನ...
ಈ ಪಯಣದಲ್ಲಿ ಅಲಲ್ಲಿ ಒಂದಿಷ್ಟು
ಪ್ರೀತಿ, ಪ್ರೇಮ, ಇವುಗಳ ಹೋರಾಟದಲ್ಲಿ
ನೆಮ್ಮದಿಯ ಹುಡುಕಾಟ..
ನಂಬಿದವಳು ಕೈ ಬಿಟ್ಟಾಗ ಅರಿವಾಯಿತು..
ಇದೆಲ್ಲ ಯೌವನದ ಒಂದಿಷ್ಟು ಹುಡುಗಾಟ"...

- ಎ.ಆರ್.ರಾಹುಲ್.

- ?.?.?????.

21 Apr 2025, 04:23 pm

"ಪ್ರಕೃತಿಯ ನಿಯಮ"

"ಮಳೆಬರುವುದು ನಿಂತರು
ಮರದಮೇಲಿನ ಹನಿಗಳು
ಬೀಳುವುದು ನಿಲ್ಲಲಿಲ್ಲ..
ಗುಡುಗು, ಸಿಡಿಲುಗಳು
ಬಿದ್ದುಹೋದರು..
ಅವುಗಳ ಶಬ್ದಗಳು ಕಿವಿಯಿಂದ ಮರೆಮಾಚಲಿಲ್ಲ
ಮಳೆಬಂದರು, ಸಿಡಿಲುಗಳು ಬಿದ್ದರು
ಊರೆಲ್ಲ ಕೆಸರಾದರೂ ಜನಗಳು
ಓಡಾಡುವುದು ಬಿಡಲಿಲ್ಲ..
ಪ್ರಕೃತಿಯಲ್ಲಿ ಏನೇ ಆದರೂ
ಯಾರೆ ಹೋದರು ತನ್ನ ಕೆಲಸ
ಮುಂದುವರೆಸುವುದು
ಪ್ರಕೃತಿಯ ನಿಯಮವಾಗಿದೆ..
ನಾವು ಸಹ ನಮ್ಮ ಜೀವನದಲ್ಲಿ
ಏನೆ ಆದರೂ, ಯಾರೆ ಬಂದು ಹೋದರು
ಹಿಗ್ಗದೆ, ಕುಗ್ಗದೆ ಎಲ್ಲವನ್ನು ಸಮಾನವಾಗಿ
ಮುಂದುವರೆಸುಕೊಂಡು ಹೋಗುವುದು
ನಮ್ಮೆಲ್ಲರ ಜೀವನದ ನಿಯಮವಾಗಿದೆ"...

- ಎ.ಆರ್.ರಾಹುಲ್.


- ?.?.?????.

18 Apr 2025, 09:07 am

ರಾಮ ಬೇಡಮ್ಮ ಶ್ಯಾಮ ಬೇಡಮ್ಮ

ಈ ರಾಮ ಬೇಡಮ್ಮ ಶ್ಯಾಮ ಬೇಡಮ್ಮ
ರಾಜ್ಯ ಬೇಡಮ್ಮ ಪಟ್ಟದರೆಸಿಯಾದರೂ
ನಿಂದೆ ಕಟ್ಟುವ ಜನರು ಬೇಡಮ್ಮ!

ರಾಮ ದೇವರಾದರೆ ನಾನು ದೇವತೆಯಲ್ಲವೇ
ದೇವರ ಮೇಲಿರುವ ಭಕುತಿ ನಂಬಿಕೆ ನನ್ನಮೇಲಿಲ್ಲವೇ!
ಉಸಿರಿರದ ಸಂಸಾರದ ಭಾರ ಬೇಡಮ್ಮ
ಭಾವಗಳಿಗೆ ಬೆಲೆಯಿಲ್ಲದ ಬದುಕು ಬೇಡಮ್ಮ!

ಆಗಾಗ ನಡುಗುವೆನು
ಇರುಳು ಸರಿದು ಹೊತ್ತು ಹುಟ್ಟುವ
ಮುಂಜಾವಿನ ಮೌನದ ಸದ್ದಿಗೆ,
ರಾಮನಿರುವುದಿಲ್ಲ ಧೈರ್ಯ ಹೇಳಲು
ಮಗ್ಗುಲು ಬದಲಿಸಿ ತಡಕಾಡಿದಾಗ!

ತಪ್ಪು ಯಾರದಮ್ಮ ಎಂದು ಒಮ್ಮೆಯೂ
ಕೇಳಲಿಲ್ಲ ಪರಪಂಚ ನನ್ನನು, ದೋಷಿ
ನಾನಾದೆ ಮಾಡದ ತಪ್ಪುಗಳಿಗೆ ಹೆಣ್ಣಾದ ಮರುಗಳಿಗೆ!

ಉತ್ತರ ಕೊಡುವ ಗೋಜಿಗೂ ಹೋಗಲಿಲ್ಲ
ನಾನು, ಏಕೆಂದರೆ ತಪ್ಪು ಹೆಣ್ಣಿನದ್ದೇ ಅಲ್ಲವೇ
ಅವರು ಬರೆದುಕೊಂಡ ನೀತಿ ಪುಟಗಳಲ್ಲಿ ಹೆಣ್ಣಿಗೆ ಜಾಗವಿಲ್ಲವೇ!

ಮಡಿಲ ಮಗುವಾಗುವೆ ತಪ್ಪಿಯೂ ನನ್ನ
ಕೈ ಬಿಡದಿರು ನೀನು ಮತ್ತೆ ನನ್ನ ಕದ್ದರೆ, ಯುದ್ಧವೊಂದು ನಡೆದರೆ ಯಾವ ಕಾಡಿನ ಪಾಲಾದೇನೋ? ಕಂಡವರ ಬಾಯಲ್ಲಿ ಕರಗಿ ನೀರಾದೆನೋ? ಉತ್ತರವಿರದ ಪ್ರಶ್ನೆಗಳ ಸೊತ್ತಾದೆನೋ ನಾನು!

ನನ್ನೀ ನೆರಳಿಗೆ ಕರುಳ ನಂಟು ಬೆಸೆದುಬಿಡು ನಿನ್ನ ಹೃದಯಕ್ಕಂಟಿ ಉಸಿರಾಡುವೆ ಮತ್ತೆ ನಾನಾಗಿ ನನಗಾಗಿ..

- ಚುಕ್ಕಿ

16 Apr 2025, 10:01 pm

ಕ್ರಾಂತಿಕಾರಿ ಅಂಬೇಡ್ಕರ್

ಓ ಕ್ರಾಂತಿಕಾರಿಯೇ
ನಿನ್ನ ಕನಸು ನನಸಾಗುವ
ಸಮಯವಿನ್ನೆಲ್ಲಿ.

ದಲಿತರ ಜೀವನ
ಕಗ್ಗತ್ತಲೆಯ ಪರಿಯಲಿ
ಸಾಗುತಿದೆ ಬದಲಾಗದ
ಪರಿಸರದಲಿ...


ಅಕ್ಷರಸ್ಥರು ಮಿತಿ ಮೀರಿದರು
ಜ್ಞಾನಿಗಳಲ್ಲ
ಅಂಧಕಾರದ ಯುಗ
ನಡೆಯುತಿದೆ,,,,,,,,,, ಈಗಲೂ,,,,,,,,,,


ಸಮಾನತೆ ತಿಳಿಸಿದೇ ನೀ
ಸಂವಿಧಾನದಲಿ
ಆದರೆ ಅದು ಕೇವಲ ಪುಸ್ತಕೀಯ
ದಲಿತರು ಹಾಗೆಯೇ ಇಂದು,,,,,,,,,,,,,


ನಿನ್ನಯ ದೀಪದ ಬೆಳಕಿನಲಿ
ಸ್ವಪ್ನವ ಕಂಡರಿವರು
ಆದರೆ ಅಂಧಕಾರದ ಕತ್ತಲೆ
ಧಾವಿಸಿದೆ ಇಂದು,,,,,,,,,

ಓ ಕ್ರಾಂತಿಕಾರಿಯೇ
ನಿನ್ನ ಕನಸು ನನಸಾಗುವ
ಸಮಯವಿನೆಲ್ಲಿ,,,,,,,,,,




- ಮೇಘಾ ಬೆಳಧಡಿ

16 Apr 2025, 08:45 pm