ಖಾಲಿ ದಿನಗಳು
ಅವರು ಮನಸ್ಸಿನಲ್ಲಿ ನೋವಿನಿಂದ ಬರೆಯುತ್ತಾರೆ
ಇದು ಕವನ ಅಲ್ಲ.
ಶಾಂತಿಯಿದ್ದರೂ ಸಹ
ಈ ದೇಹಕ್ಕೆ
ಯಾವುದೇ ಪರಿಹಾರವಿಲ್ಲ
ಸಮುದ್ರವು ಉಸಿರಾಗಿದೆ
ಮಳೆಕಾಡು ಸ್ಫೋಟಿಸಿದೆ,
ಆದರೆ ಹೃದಯವು ಸುಸ್ತಾಗಿರಲಿಲ್ಲ.
ಕಣ್ಣೀರಲ್ಲಿ ಆಡುತಿರೋ ಮಿಂಚುಳ್ಳಿಯ ಮೀನೇ
ನಿನ್ನ ಒಳ ಗುಂಡಿಗೆಯಲಿ ಇರೋ ಬಣ್ಣವಾದರು ಏನೇ ?
ಹಿಡಿಯಲು ಹೋದರೆ ಜಾರಿ ಹೋಗೋ ಜಾಣೆ
ಬಳಿಯಲ್ಲಿ ಬಂದರೆ ಈ ನಾಚಿಕೆ ಏಕೋ ಕಾಣೆ.
ಎಲ್ಲೋ ಹುಟ್ಟಿ ಏನೋ ಮುಟ್ಟಿ ಹೇಗೋ ಬೆಳೆದೆ ನೀನು
ಕನಸು ಕಟ್ಟಿ ಗುಂಡಿಗೆ ತಟ್ಟಿ ಕೂಡಿಕೊಂಡೆ ನಾನು
ಇದು ಈರ್ವರೂ ಸೇರಿ ಹೊಸೆದ ಕಾದಲ ಹಾರವೇನೋ
ಅದು ನೂರು ಏಡುಗಳ ದಾಟಿ ತಾಳಿಕೊಳ್ವದೇನೋ..
ಹೆಜ್ಜೆಗಳು ಒಂದೊಂದೂ ತುಂಬಾ ವಜ್ಜೆಯಂತೆ
ಮಜಲುಗಳು ನೂರಾರು ಸುಡುವ ಮೆಟ್ಟಿಲಂತೆ
ನಡೆವ ಹಗ್ಗ ತೂರಾಡಿ ತಲೆ ಸುತ್ತುತಿಹುದು
ನೆಲ ಮಾತ್ರ ಎಟುಕದಂತೆ ದೂರ ಸಾಗುತಿಹುದು..
ಮೂಕ ಪ್ರಾಣಿಗಳ ಅಂತಿಮ ಯಾತ್ರೆ
ನರರಿಗೆ ಉತ್ಸವದ ಜಾತ್ರೆ
ಕಾಲನು ಬಂದು ಸೆಳೆದಾಗ ನರನ
ಗೋಳಿಡುವರು ಈ ಜನ
ಕಾಲನು ಹಿಡಿದು ಕತ್ತರಿಸುವಾಗ
ಅರಸುವುದು ಒಡತಿಯ ತಾನಾಗ
ಮೂಕವೇದನೆಯ ಮುಗಿಸುವುದು
ಮೌನದಲಿ ಪರರತೃಪ್ತಿಗಾಗಿ
ಕಣ್ಣೀರ ಕಡೆಯ ಹನಿಯೂ ಅವಳ ಹೆಸರೇಳಿ ಹೊರಬಂದಿತ್ತು
ಕಾಣದ ಕಡಲೆಡೆಗೆ ಜೀವನ ಪ್ರಯಾಣ ಮೊದಲಾಗಿತ್ತು
ನೆನಪುಗಳ ಬೀದಿಯಲ್ಲಿ ನೆನಪುಗಳ ಮಾರಣಹೋಮ ನಡೆದಿತ್ತು
ಎದೆಯ ಚಂದ್ರಿಕೆಯಲ್ಲಿ ಅಚ್ಚೊತ್ತಿದ್ದ ಅವಳ ಹೆಜ್ಜೆ ಗುರುತು ನನ್ನನ್ನೆ ಅಣಕಿಸುತ್ತಿತ್ತು
ನನ್ನವರಲ್ಲದವರೆಲ್ಲ ಕರುಣೆ ತೋರಿ
ಕಣ್ಣೀರಾಕುವರು ನನ್ನ ಪಾರ್ಥಿವ ದೇಹ ನೋಡಿ,
ಗುಣಗಾನವ ಮಾಡಲಾರಂಭಿಸುವರು ನಾ ಮಾಡದಿರುವ ಮಾಡಿರುವ ಸರಿ ತಪ್ಪುಗಳ ಎಣಿಸಿ ಜವರಾಯನಿಗೆ ಲೆಕ್ಕ ಕೊಡಲೆಂದು ಶರೀರ ಸುಡುವ ಮುನ್ನ ಅಳುವ ನೆವದಲ್ಲಿ!!
ನನ್ನ ನಾ ಅಗಲಿದಲ್ಲಿ ನೆಂಟಸ್ತಿಕೆಯ ನಂಟು ಹಾಕಿ ಕೂಡಿಟ್ಟ ಗಂಟು ದೋಚಲು ಹಾಜರಾಗುವರು ನನ್ನ ಧನ, ಮಾನ ಮರ್ಯಾದೆಗಳನ್ನು ಹರಾಜಾಕಳು!!
ಉಸಿರಾಡುವ ಉಸಿರಿಗೆ ತುತ್ತು ಅನ್ನ ಹಾಕಲಾಗದವರು ಹೆತ್ತ ತಂದೆ-ತಾಯಿ ಅಣ್ಣ- ತಂಗಿ ,ತಮ್ಮ ಎಂದು ಬಾಂಧವ್ಯ ಬೆಳೆಸಿಕೊಳ್ಳುವರು ಮಣ್ಣ ಅಡಿ ಅಲುಗಾಡದೆ ನಾ ಮಲಗಿರಲು ಕಾಲ ತೊಳೆದು ಹಾಲು ಹಾಕಿ ನನ್ನ ನೆತ್ತಿಗೆ!!
ನನ್ನ ಕಟ್ಟಿಕೊಂಡ ಪಾಪದವಳು ಹೆಂಡತಿಯೊಬ್ಬಳ ಗೋಳೋಯ್ಯುಕೊಳ್ಳುವರು ಹಣೆಯ ಸಿಂಧೂರ ಅಳಿಸಿ ಬಳೆಯ ಹೊಡೆದು ರಕ್ತ ಸುರಿಸಿ,
ಕಾಲುಂಗುರ ಕಿತ್ತೆಸೆದು ಮಾಂಗಲ್ಯವ ಮಾರಿ ತಿಂದು!!
ಬಂದೂಕುಗಲಿಲ್ಲದ ಉಗ್ರರಿವರು,
ಹೆಸರುವಾಸಿ ಆಗದ ದರೋಡೆಕೋರರು
ಇವರು ಎತ್ತ ನೋಡಲಿ ಈ ಸತ್ತ ಜನರ
ಕುಖ್ಯಾತ ನಟನೆಯ,
ಹೇಗೆ ಸಾರಲಿ ಪದಗಲಿಲ್ಲದ ಪ್ರತಿಭೆಯ!!
ನೀಲ ಕೇಶ ರಾಶಿಯ ತಗೆಸಿ, ಈಚಲು ಚಾಪೆ ನೆಲಕ್ಕೆ ಹಾಸಿ ಮೂರು ತುಂಡಾದ ಕಂಬಳಿ ಹೊದಿಸಿ ನೂಕದಿರಿ ನನ್ನವಳ
ರಂಗು ಮಾಸಿದ ಸೀರೆಯುಡಿಸಿ ಇರಲಿ ಜೀವಂತ ನನ್ನ ನಗು ಅವಳಲ್ಲಿ ,ಹಣೆಯ ಸಿಂಧೂರ ಜರುಗದೆ ಹಣೆಯಲ್ಲಿ ಘಮಗುಡುವ ಮಲ್ಲಿಗೆ ಅವಳ ಶಿಗೆಯಲ್ಲಿ......
ಆ ಒಂದು...
ದಿನದ ಬೇಟಿ
ಮಾಡಿತು ನನ್ನ
ಹೃದಯ ಲೂಟಿ
ಹಾಯಾಗಿದ್ದೆ...
ನನ್ನ ಲೋಕದಲಿ
ಹೇಗೋ ಬಿದ್ದೆ
ನಿನ್ನ ಪ್ರೀತಿಯಲಿ
ಗೊತ್ತಾಗದೇ...
ಬೆಳೆಯಿತು ಸಲುಗೆ
ಗಗನವೇ ಆಯಿತು
ನಮ್ಮ ಮೇಲ್ಹೊದಿಗೆ
ಗೊತ್ತಾಯಿತು...
ನೀನಿನ್ನು ಸಿಗುವುದಿಲ್ಲ
ಗಮನವಿಟ್ಟು ಕೇಳು
ನಿನ್ನೆಂದಿಗೂ ಮರೆಯುವುದಿಲ್ಲ
ಮರು ಜನ್ಮ...
ಅಂತೆನಾದರೂ ಇದ್ದರೆ
ಮರೆಯದೇ ಬಂದು ಸೇರು
ನಂಪ್ರೀತಿಗದೇ ಉಡುಗೊರೆ
ಹೇ ಹೃದಯ ಹೇಗೆ ಮರೆಯಲ್ಲಿ ಅವಳನ್ನು
ನಿನ್ನ ಪ್ರತಿ ಬಡಿತದಲ್ಲು ಅವಳ ಹೆಸರು ಕೂಗುವಾಗ
ಪ್ರತಿ ಕ್ಷಣದಲ್ಲೂ ಅವಳ ನೆನೆಯುವಾಗ
ಆಕೆ ಪ್ರೀತಿಯಲ್ಲಿ ಏನೂ ಜಾದು ಮಾಡಿದಳೊ ತಿಳಿಯುತ್ತಿಲ್ಲ
ಪ್ರತಿ ಕ್ಷಣವು ಈ ಹೃದಯ
ಅವಳ ಪ್ರೀತಿಯನ್ನೆ ಬಯಸುತ್ತಿದೆ
ಆದರೆ ಆಕೆ ಇಂದೂ ಮಾಯವಾದಳೂ ಎಲ್ಲಿ.
ಆಕೆಗಾಗಿ ಕಾಯುತಿರುವೆ ನಾ ಇಲ್ಲಿ...