ಕೆರೆ ಬತ್ತಿ ಬರಡಾದ
ಭೂಮಿಯನ್ನು ಹೋಲುತಿದೆ..!!
ನಿನ್ನ ನೆನೆದು ನಾ ಬರೆದ
ಕವನದ ಈ ಸಾಲು...............!!
ನಗುತಲೇ ನೀ ಓದು
ನುಡಿ ಮುತ್ತು ಖುಷಿ ಕೊಡಲಿ..!!
ಮೈ ಮರೆತು ಅಳಬೇಡ
ಕಣ್ಣೀರು ಬಿದ್ದಾವು ಜೋಪಾನ.!!
ಎಲ್ಲಿಂದ ಯಾಕಾಗಿ ಬರುತಿದೆ ಈ ಚಿಂತೆ...
ಕ್ಷಣ ಕ್ಷಣವೂ ನೋಡಿಕೊ ಅದರಲ್ಲಿ ಕುಂತೆ ...
ನೋಯುವ ಮನವೇರಲಿ ಬೇಯುವ ಚಿತೆ...
ಚಿಂತೆಯ ಮೂಲ ಕಂಡು ಆಗುವೆ ನಿಶ್ಚಿತಂತೆ...
ಬಂದ ಚಿಂತೆ ಬರಲು ಬಿಟ್ಟರೆ ನೀ ಅದರಂತೆ...
ಬಂದು ಹೋಗುವವು ನೆಂಟರು ಬಂದು ಹೋದಂತೆ...
ಯಾವ ಚಿಂತೆಯು ನಿನಗಂಟದು ಎಂದು ತಿಳಿದಂತೆ...
ಕಳಚುವವು ಭವದ ನಂಟು "ಅದು" ನಿನ್ನರಿವಿಗೆ ಬಂದಂತೆ...
ಅರಿವಿನ ಗುರು ನಿನ್ನೊಳಗೆ ಆವರಿಸಿ ನಿಂತಂತೆ...
ಚಿಂತೆಗಳ ತಂತಿಯನು ಬಿಗಿದು ಮೀಟಿದಂತೆ...
ಸುಜ್ಞಾದದ ಸ್ವರಗಳು ತಾನಾಗೇ ಸೃಜಿಸಿದಂತೆ...
ಮುಳ್ಳಾದ ಚಿಂತೆಗಳು ಹೂವಾಗಿ ಅರಳಿದಂತೆ...
ಮಳೆ ಮಳೆ ಜಿಟಿ ಜಿಟಿ ಮಳೆ
ಹಳ್ಳ ಕೊಳ್ಳ ಕೆರೆ ತುಂಬುವ ಮಳೆ
ನದ ನದಿಗಳು ತುಂಬಿ ಹರಿಯುವ ಮಳೆ
ರೈತರಿಗೆ ಬಿತ್ತಿ ಬೆಳೆ ಬೆಳೆಯುವ ಮಳೆ.
ಬರಗಾಲ ನೀಗಿಸುವ ಜಿಟಿ ಜಿಟಿ ಮಳೆ
ಡ್ಯಾಂ ತುಂಬಿಸುವ ಮಳೆ ಮಳೆ ಹೊಳೆ
ಮಳೆನಾಡಿನ ಮಳೆ ಹನಿ ಹನಿ ಮಳೆ
ಸಂಪತ್ತು ಸೃಷ್ಠಿಸುವ ಜೀವ ಉಳಿಸುವ ಮಳೆ.
ರಾಜಕೀಯ ಗೊತ್ತಿಲ್ಲ ಅನ್ಯಾಯ ಗೊತ್ತಿಲ್ಲ ಮಳೆಗೆ
ಮಳೆಯ ನಂಬಿ ಬದುಕ ಕಟ್ಟಿ ಬಾಳ ಸಾಗಿಸುವರು
ಮಳೆ ಇಲ್ಲದೆ ಬೆಳೆ ಇಲ್ಲ, ಬೆಳೆ ಇಲ್ಲದೆ ಆಹಾರ ಇಲ್ಲ
ಮಳೆ ಇಲ್ಲದೆ ಏನು ಇಲ್ಲ ಇಲ್ಲ, ಮಳೆ ಮಳೆ ಜೀವ ಮಳೆ.