ಕಣ್ಣಂಚಿನ ಹನಿಗೆನು ಗೊತ್ತು
ಮನದಾಳದ ನನ್ನಂತರಾಳದ ನೋವು...
ಆ ಹನಿ ಸಂತೋಷಕ್ಕೂ ಸೈ ದುಃಖಕ್ಕೂ ಸೈ...
ಕಣ್ಣಂಚಿನಲಿ ಸದಾ ಇರುತ್ತದೆ.,,,
ಸಂತೋಷಕ್ಕಾದರೂ ಸರಿ
ದುಃಖಕಾದರೂ ಸರಿ
ಕಣ್ಣೊಳಗಿಂದ ಧರೆಗುರುಳುತ್ತದೆ.,,,
ನೀ ಬಿಟ್ಟೋದರು,,,
ನೀ ಕೊಟ್ಟ ಪ್ರೀತಿ ನನ್ನಂತರಾಳದಲಿ
ಕಣ್ಣು ಮುಚ್ಚುವರೆಗೂ ಸದಾ ಇರುತ್ತದೆ....
ಕೈಯಲ್ಲೊಂದು ಬಂದೂಕಿದೆ.. ಎದೆಯಲ್ಲೊಂದು ನೋವು ಇದೆ..
ಬೆನ್ನ ಹಿಂದೆ ಸಾವು ಇದೆ.. ಕಣ್ಣ ಮುಂದೆ ಗುರಿಯಿದೆ..
ಕೊರೆಯೋ ಚಳಿಯೇ ಇರಲಿ.. ಸುಡುವ ಬಿಸಿಲೇ ಬರಲಿ..
ಕ್ಷಣ ಕ್ಷಣವೂ ಹೋರಾಡುತಿರುವೆ.. ಅದೇನೆ ಆಗಲಿ..
ಹೆತ್ತವರ ಅಲ್ಲೇ ತೊರೆದು.. ಮರೆತೇ ಬಿಟ್ಟು ನಿನ್ನ ಒಲವ..
ಕಾಯುತಿರುವೆ ನೀನು ಇಂದು.. ಕೋಟಿ ಜನರ ಪ್ರಾಣವ..
ಆಸೆಯಿರದ ನಿನ್ನ ಬದುಕ್ಕೊಂದು ಸಾವಿಲ್ಲದ ತ್ಯಾಗಚರಿತೆ..
ದೇಶದ ಶಾಂತಿಯು ನೀ ರಚಿಸಿದ ನೆತ್ತರ ಕ್ರಾಂತಿಕವಿತೆ..
ಕಣ್ಣಲ್ಲೆರಡು ಹನಿ ಸುರಿಸಲಾರೆವು ನಾವು..
ದೇಶಕ್ಕೋಸ್ಕರ ರಕ್ತ ಸುರಿಸಿ ಮಡಿವಿರಿ ನೀವು..
ಸಾವಿನ ಸುದ್ದಿ ಮನೆಯವರಿಗೆ ತಲುಪಿದರೇ..
ಆಗುವ ದುಃಖಕೆ ಹೊಣೆ ಖಂಡಿತ ಆ ದೇವರೇ..
ಭಯವನು ಮರೆತು ಜಯ ಸಾಧಿಸೋ ಸೈನಿಕ..
ಇವರಿಗೆ ಗೌರವ ಸಲ್ಲಿಸೋದು ನಮ್ಮ ಕಾಯಕ..
ಜಾತಿ ಭೇದ ತೊರೆದು ತೋರಬೇಕು ನಮ್ಮ ಬಂಧ..
ಆಗಬೇಕು ಪ್ರತಿಯೊಬ್ಬ ಪ್ರಜೆಯೂ ದೇಶಕಾಯೋ ಯೋಧ..
ಅಂದು ನಿನಗಾಗಿ ಬರೆದೆನು ಹನಿಗವನಗಳ,,
ಇಂದು ನಿನ್ನಿಂದಾಗಿ ಬರೆಯುತೆಹೆನು ಕಿರುಗವನಗಳ,,
ಅಂದು ನಿನಗಾಗಿ ಬರೆದೆನು ಪ್ರೇಮಗವನಗಳ,,
ಇಂದು ಬರೆಯುತೆಹೆನು ಜೀವನದ ಅನುಭವಗಳ,,
ಅಂದು ನಿನ್ನ ಬಣ್ಣಿಸಲು ಬರೆದೆ ಸುಂದರ ಸಾಲುಗಳ,,
ಇಂದು ಬರೆಯುತಿರುವೆ ಸ್ವಸಾಂತ್ವನದ ಬರಹಗಳ,,
ನಿನಗೆಂದೆ ಬರೆದೆನಂದು ಪ್ರೀತಿಯ ಕವಿತೆಗಳ,,
ಗೀಚುತಿಹೆನಿಂದು ರೋಧನೆಯ ನುಡಿಗಳ,,
ನಿನ್ನ ಪಡೆದ ಖುಷಿಯಲಂದು ಹಾಡಿದೆ ಸ್ವಪ್ನದ ಕಾವ್ಯಗಳ,,
ನಿನ್ನ ಕಳೆದುಕೊಂಡ ನೋವಲಿಂದು ಸಾರುತಿಹೆನು ದುಃಖದ ಸಾರಗಳ,,
✍ನೊಂದ ಪುಂಗವ
ಸುಂದರವಾದ ಮನೆಯ ಕಟ್ಟಿ
ಅದಕೆ ನಿನ್ನೆಸರಿಟ್ಟು
ಬಡವರಿಗೊಂದು ಧರ್ಮಶಾಲೆಯ
ತೆರೆದು ಅದಕೂ ಕೂಡ ನಿನ್ನೆಸರಿಟ್ಟು
ಅನಾಥರಿಗೊಂದು ಆಶ್ರಮ ತೆಗೆದು
ಅದಕೂ ಕೂಡ ನಿನ್ನೆಸರಿಟ್ಟು
ದೊಡ್ಡದಾದ ಆಸ್ಪತ್ರೆಯ ಕಟ್ಟಿಸಿ
ಅದಕೂ ಕೂಡ ನಿನ್ನೆಸರಿಟ್ಟು
ನಿನ್ನ ನೆನಪಿಗೆ ಒಂದು...
ಪ್ರೇಮ ಮಹಲ ಕಟ್ಟಿಸುವೆ
ದುಡಿದು ತಂದ ಸಂಬಳವೆಲ್ಲ
ನಿನ್ನ ಮಡಿಲಿಗೆ ಹಾಕಿ
ಸರ್ವವು ನಿನಗೆ ಅರ್ಪಣೆ ಮಾಡಿ
ನಿನ್ನ ಕೈಯಾಳಾಗುವ ಕನಸು ನನ್ನದು
## ರಜನೀಶ ##
ಪರಿಸರ ಈ ಪರಿಸರ ಸೌಂದರ್ಯದ ಆಗರ
ಹಸಿರು ಉಸಿರಿನ ಪರಿವಾರ
ಜೀವ ಸಂಕುಲದ ಉಳಿವಿಗೆ ಇರಲು
ಮನುಕುಲಕೆ ಮುದವನು ಕೊಡಲು
ಈ ಪ್ರಕೃತಿ ಮಾತೆಯು..." ಪ "
ಪರ್ವತ ಸಾಗರ ತೇಗ ಶ್ರೀಗಂಧವನು
ಹೂವು ಮಾವು ಹುಲಿ ಸಿಂಹವನು
ವಿಸ್ಮಯದಿ ಹರುಷದಲಿ ನೀ ನೋಡಲು
ಬನವಿಲ್ಲದೆ ಬಾಳು ಇಲ್ಲವೆಂಬ ನಿಜವ ನೀ ತಿಳಿದರೆ
ಈ ಪ್ರಕೃತಿ ಮಾತೆಯ ಪೂಜಿಸುವೆ ನೀ
ಆ ಸ್ವರ್ಗ ವೇ ಧರೆಗಿಳಿದಂತೆ ಭಾಸವಾಗುವೆ
ಈ ನಿಸರ್ಗವ ಈ ನಿಸರ್ಗವ....
ಹರಿಯುವ ನದಿಯಲಿ ಹರುಷದಲಿ ಈಜಾಡುತ ನೀ
ಚಿಲಿಪಿಲಿ ಹಕ್ಕಿಗಳ ನಿನಾದವ ಆಲಿಸುತ ನೀ..
ಈ ಪ್ರಕೃತಿ ಮಾತೆಯ ಸೌಂದರ್ಯಕೆ ಕರಗಿಹೋಗವೆ ,ಧನ್ಯನಾಗುವೆ..
ಖಗವೇ ಮೃಗವೇ ಇರಲಿ
ಗಿಡವೇ ಮರವೇ ಇರಲಿ..
ಈ ಪ್ರಕೃತಿ ಮಾತೆಯ ಮಡಿಲಲಿ ಬಾಳಿ ಬೆಳಗಲು
ಕರುಣೆ ತೋರು ನೀ
ಅದುವೇ ಸೃಷ್ಟಿಯ ನಿಯಮ ಎಂಬುದು ನೀ ಅರಿತುಕೋ.....