ಕವಿ ಮಾಡುವುದು ಕಲ್ಪನೆ
ಕವಿ ಶಾಶ್ವತ ಅಲ್ಲ
ಕವಿತೆ ಶಾಶ್ವತ..
ಶಿಲ್ಪಿ ಮಾಡುವುದು ಕೆತ್ತನೆ
ಶಿಲ್ಪಿ ಶಾಶ್ವತ ಅಲ್ಲ
ಶಿಲೆ ಶಾಶ್ವತ..
ನಾವು ಮಾಡಬೇಕು ಸಾಧನೆ
ನಾವು ಶಾಶ್ವತ ಅಲ್ಲ
ನಮ್ಮ ಸಾದನೆ ಶಾಶ್ವತ..
ಚೆಲ್ಲಿ ಬಿಡಿ ಅಳಿದುಳಿದ್ದದ್ದನ್ನೆಲ್ಲ
ಮನೆಯಲಿ ತಿನ್ನದೆ ಕೊಳೆತದ್ದು
ಹೆಚ್ಚಾಗಿ ಬೇಯಿಸಿ ಉಳಿದದ್ದು
ಚೆಂದವಿಲ್ಲವೆಂದು ಮೂಲೆಯಲಿ ಬಿದ್ದದ್ದು
ಎಲ್ಲವನ್ನು ಚೆಲ್ಲಿಬಿಡಿ ಹೊರಗೆ
ಹೇಳಿ ತೀರಲಾಗದಂತ ಹಸಿವು
ಪುಟ್ಟ ಹೊಟ್ಟೆ ಬೆನ್ನಿಗಂಟಿದೆ
ಹಿಡಿ ಮಾಂಸವೂ ಇರದೆ ಹೊರಬಂದ
ಎದೆಯೆಲುಬು ಹಾಳು ಜಗವ ನೋಡಿ ನಗುತಿದೆ
ತಾಳಲಾರೆನಿನ್ನು ಚೆಲ್ಲಿಬಿಡಿ ಹಳಸಿದ್ದಿದ್ದರು ಹೊರಗೆ
ಚೆಲ್ಲುವುದ ನಿಲ್ಲಿಸಿ ಬಿಟ್ಟೀರಿ ಕಸದತೊಟ್ಟಿಗೆ
ಈ ಪಾಪಿ ಜನರು ತಿಂದು ಬದುಕಿಬಿಟ್ಟಾರೆಂದು
ತಿರುಗಿ ಮನೆ ಮನೆ ಬೇಡಿ ಬಂದರೂ
ಮುಷ್ಟಿಯಷ್ಟು ತಿನ್ನಲು ಏನು ನೀಡಲಾಗದವರು ನೀವು
ಎಂಜಲು ಹಳಸಿ ಅಳಿದುಳಿದ್ದದ್ದು ಎಲ್ಲವ ಚೆಲ್ಲಿಬಿಡಿ ಹೊರಗೆ
ನೀ ನಡೆದ ದಾರಿಯಲ್ಲಿ
ನೂರಾರು ಬಾರಿ ನಡೆದಿರುವೆ
ನೀ ಹಿಂತಿರುಗಿ ನೋಡುವವರೆಗೂ
ತಿಳಿಯಲೇ ಇಲ್ಲ ನಿನ್ನ ಹೆಜ್ಜೆಗುರುತು
ನನ್ನ ಪಾದವನ್ನು ಮುದ್ದಾಡುತಿರುವುದು
ನಿನ್ನ ಉಸಿರು ನನ್ನನು ನಿನ್ನೆಡೆಗೆ ಸೆಳೆಯುತಿರುವುದು ❤️
ನಿನ್ನ ಬಳಿ ಮಾತಾನಡದ ಪದಗಳನ್ನು
ಕಾಗದದ ಮೇಲೆ ಚೆಲ್ಲಿದೇನೆ
ದಯವಿಟ್ಟು ಓದಿಬಿಡು ,
ಕೆಲವು ಕಡೆ ಪದಗಳಿಲ್ಲ
ನನ್ನ ಕಣ್ಣೀರಿದೆ
ಅದನ್ನ ಅಲ್ಲಿ ಯಾದರು ಮರಿಯದೆ ಒರಸಿಬಿಡು !
ಮುರಳಿಧರ ವಿನಾಯಕ ಟೈಲರ್ ಕೇಸರಹಟ್ಟಿ
ಕಾಯುತ್ತಿರುವೆ ನನ್ನ ಸಾವಿಗಾಗಿ
ಓ ಸಾವೆ ಬಂದು ಸೆರಬಾರದೆ ನನ್ನ..
ಈ ಜನ್ಮವು ಇನ್ನೆಂದೂ ಬೇಡ ನನಗೆ
ಬೇಗ ಬಂದು ಸೆರು ನನ್ನ...
ಓ ಹೃದಯ ವಾಸಿಯೇ...
ನೀ ಇಲ್ಲದ ಜೀವನ ಬೇಕಿಲ್ಲ ನನಗೆ..
ಮುರಳಿಧರ ವಿನಾಯಕ ಟೈಲರ್ ಕೇಸರಹಟ್ಟಿ ...