Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನನ್ನ ನಿನ್ನ ನಡುವಿನಲ್ಲಿ
ಬಿಸಿಲಿನಲೂ ಹೂಮಳೆ ಚೆಲ್ಲುತ್ತಿರಲೂ..
ಮುಳ್ಳಿನಲೂ ಮೃದುವಾದ ಮನಸ್ಸು
ನನ್ನ ನಿನ್ನ ನಡುವಿನಲೂ
ನೆನಪಿನ ಅಂಗಳದಲ್ಲಿ
ಪ್ರೀತಿಯ ಮೆರವಣಿಗೆಯ ಸೊಬಗು ಮೂಡುತ್ತಿರಲೂ
ನಕ್ಷತ್ರಗಳು ಶರಣಾದವು
ನನ್ನ ನಿನ್ನ ನಡುವಿನಲೂ
ಮೌನವೇ ರಾಗವಾಗಿ ರವಾನಿರುತಿರಲೂ
ಕಲ್ಲು ಹೃದಯಗಳ ಹಾಡುಗಾರಿಕೆ
ಮತ್ತೆ ಮತ್ತೆ ಮೆಲುಕು ಹಾಕುತ್ತಿಹವೂ
ನನ್ನ ನಿನ್ನ ನಡುವಿನಲೂ
ಮನಸಿನ ಭಾವನೇ ಒಂದೇ ಆಗಿರಲೂ
ಎಲ್ಲರ ಕಣ್ಣು ನಮ್ಮ ಮೇಲೆ ಬೀಳುತ್ತಿರಲೂ
ನಮ್ಮ ಪ್ರೀತಿ ಅಜರಾಮರ ಆಗಿರಲೂ....
- Prakash Angadi
03 Sep 2018, 12:15 pm
ಮರೆವದೆಂತು..!
ಮರೆಯಲಾರೆ ಮನನೊಂದ ನಿನ್ನ ಪ್ರೀತಿಯ ಕರೆವದಂತು
ಕರೆಯಲಾರೆ ನನ್ನ ಬಾಳಿನ ನಲ್ಮೆಯ
ಸಿರಿಯನೆಂತು..!
ಬೇಡಲಾರೆ ನಿನ್ನನೆಂದೂ ಒಡೆಯ
ಬಾಳಿಗೊಂದು
ಬದುಕನೀಡು ಮರೆಯಲಾರೆ ಈ ಭವಣೆಯ
ಅರ್ಥವೆಂತು..!
ಅರಿಯಲಾರೆ ದೂರದೂರಿನ ದೊರೆಯ
ಸ್ವಾರ್ಥವೊಂದು
ಸಾರುತ್ತಿದೆ ಧರೆಯೊಳಗಿನ ಧಗಧಗೆಯ
ಇಷ್ಟವೆಂತು..!
ಇಷ್ಟ ಪಡಲಾರೆ ನೀ ದೂರವಾಗುವ ಸಮಯ
ಕಷ್ಟವೇನು ಮಹಾ..
ಕಣೀರ್ಹಾಕಿ ಮರೆಯಬೇಕು ನೀ ಕೊಟ್ಟ ಪ್ರೀತಿಯ
- vasu
02 Sep 2018, 08:05 pm
ಎತ್ತುಗಳು ಬೇಕು ಊರಿನ ಹೊಲ ಹೂಡಲು...
ಸ್ವಚ್ಛ ಮನಸ್ಸು -ನಿಸ್ವಾರ್ಥ ಸೇವೆಯ ಹಾಡು ಹಾಡಲು..
ನಕರಾತ್ಮಕ ಚಿಂತನೆಯ 'ಸುಳಿ'ಯಿರದ..
ತುಂಬಿದೋಲಕೆ ಬಿಟ್ಟರೂ 'ಬದು'ವನ್ನಷ್ಟೇ ಮೆಯುವ..
ಮುಟ್ಟಿದರೆ ಬೆದರದ, ತಟ್ಟಿದರೆ ಅದರದ...
ಮನೆಯಷ್ಟು ಮಂದಿ ಹಿಡಿದರು ಹಿರಿಯದ... !
'ಬಂಡಿ'ಗೂ - 'ನೊಗ'ಕ್ಕೂ ಸೈ ಎನ್ನುವ...
ಸೇವೆಯಂಬ 'ಮೇವ'ನಷ್ಟೇ ಹೊಟ್ಟೆತುಂಬ ಮೆಯುವ..
ನಿಂದೆ ಅಪವಾದದ 'ಮುಸುರಿ' ನೀರು ಕುಡಿಯುವ..
ಮೆರವಣಿಗೆಯಲ್ಲೂ ನೆತ್ತಿಮೇಲಿನ 'ಕೊಂಬ'ನು ಬಗ್ಗಿಸುವ...!!
'ಕೂರಿಗೆ '- 'ಕುಂಟೆ'ಗೂ ತಂಟೆ ತಗೆಯದ...
'ಗಳೆವ' ಹೂಡಿದಾಗ ದುಬ್ಬ ಮುಟ್ಟಿಸಿಕೊಳ್ಳದ..
ತುಂಬಿದ ಬಂಡಿಯಲಿ ,ಹ್ಯಾಸಿ,ಎಳೆಯದ..
ಏನೂ ಇಲ್ಲದಿದ್ದರೂ ಅರ್ಧಕ್ಕೆ "ಬಳಗ" ಹೊಗೆಯದ..!!!
ಎತ್ತುಗಳು ಬೇಕು ಊರಿನ ಹೊಲ ಹೂಡಲು...
ಸ್ವಚ್ಛ ಮನಸ್ಸು -ನಿಸ್ವಾರ್ಥ ಸೇವೆಯ ಹಾಡು ಹಾಡಲು..
ಸುಗ್ಗಿ..
- ಆರ್ ಎಸ್ ಸುಗ್ಗಿ.
02 Sep 2018, 02:24 pm
ಕಣ್ಣು ಕಣ್ಣಲ್ಲಿ ಕಣ್ಣಿಟ್ಟು ಕರೆದವನ ಕವಿತೆ ಇದು
ಕಾಡುತ್ತ ಕರೆಯುತ್ತ ಬೆಂಬಿಡದೆ ಹಾಡುತಿದೆ
ಮನದಲ್ಲೇ ನನ್ನಯ ರೇಖೆಗಳ ಬಿಡಿಸಿದ
ಕಣ್ಣಲ್ಲೇ ಬಣ್ಣಗಳ ಜೀವವ ತುಂಬಿದ
ನಾನಂತೂ ಅವನನ್ನು ಈ ಹಿಂದೆ ಕಂಡಿಲ್ಲ
ನನ್ನನ್ನು ಅವನೀಗ ಅತಿಯಾಗಿ ಅರಿತಿರುವ
ಕಲ್ಪನೆಯ ಕವಿಯು ಅವನೇನು ಅಲ್ಲ
ನಿಜವಾದ ನನ್ನನ್ನೇ ಕನ್ನಡಿಗೆ ತೋರಿದ
ಕನ್ನಡದ ಕನ್ನೆಯ ಕವಯತ್ರಿ ಮಾಡಿದ
ಲೇಖನಿಗೆ ವರ್ಣನೆಯ ವರ್ಣ ವ ತುಂಬಿಸಿ
ನಲ್ನುಡಿಯ ಅಕ್ಕರದ ಮಾಲೆಯ ತೊಡಿಸಿದ
ಮಳೆ ಮೋಡ ಕಂಡಂತ ನವಿಲ್ ಆದೆ ನಾನಾಗ
ದಾಂಪತ್ಯ ರಸ ಸವಿಯೇ ಮೊದಲಾದ ಅವನಾಗ
- kempukanda
01 Sep 2018, 11:33 pm
ಪ್ರಿಯೆ!..
ನಿನ್ನ ನಗುವಿನ ಕ್ಷಣಗಳನ್ನು ನನ್ನ ಹೃದಯದಲ್ಲಿ ಶೇಕರಿಸಿದ್ದೆ ,
ಇಂದು ಎಲ್ಲವೂ ಕಣ್ಣೀರಾಗಿ ಹೊರಬರುತ್ತಿದೆ...
ಆ ಕಣ್ಣೀರಿನ ಹನಿಗಳಿಂದ ಮತ್ತಷ್ಟು ಎತ್ತರಕ್ಕೆ ನನ್ನ ಪ್ರೀತಿ ಬೆಳೆಯುತ್ತಿದೆ....
- Murali.T
01 Sep 2018, 05:11 pm
ಇಂದು ನೀ ನನ್ನ ಅಗಲಿ ಹೋದರೂ
ನಿನ್ನ ನೆನಪುಗಳಿಂದ ಮಾಸಿ ಹೋದರೂ
ಎಂದಾದರೂ ನಾ ನಿನ್ನ ನೆನಪುಗಳಲ್ಲಿ ಮೂಡಿದರೆ
ಹುಡುಕದಿರು ನೀ ನನ್ನ ಮತ್ತೆಲ್ಲಿಯೂ ನಾ ನಿನ್ನ ಕಣ್ಣಲ್ಲೇ ಇರುವೆ
ಒಂದು ಹನಿ ಕಣ್ಣೀರಾಗಿ...
- Murali.T
01 Sep 2018, 05:10 pm
ಮನಸು ನಿನ್ನ ಕಂಡೊಡನೆ ನನ್ನ ಮೈಯ ಮರೆತೋಯ್ತು
ನಿನ್ನ ಒಂದು ಮಾತು ಕೇಳದಲೇ ನನ್ನ ಜೀವ ಸೇರೋಯ್ತು
ನಿನ್ನ ಒಂದು ನಗೆಯೊಳಗೆ ನನ್ನ ತನವೇ ಬೆಳಕಾಯ್ತು
ಯಾವ ಸ್ಪರ್ಶ ಇಲ್ಲದಲೇ ಹೃದಯ ಅದಲು ಬದಲಾಯ್ತು
ನೀ ಮಳೆಯ ಹನಿಯೊಳಗೆ ಅವಿತಿದ್ದರು
ಮಿಂಚುಗಳ ಏರಿ ಮಳೆ ಬಿಲ್ಲ ಮೈ ಗೂಡಿಸುವೇ
ಭೂಮಿ ಆಕಾಶದ ಆಚೆಗೂ ನಿನ್ನ ನೆನಪಲ್ಲೇ ನಾ ಬದುಕುವೆ...
- Murali.T
01 Sep 2018, 07:18 am
ನೆಲ- ಜಲದ, ಹಗಲಿರುಳ, ತುಡಿತದಿಂದುದುಸಿ
ದೇಶಾಭಿಮಾನದ ಸ್ರುಜನ ಜನ, ಜನಿಸಿ
ವನ - ಲತೆಗೆ,ಮೃಘ-ಖಗಕೆ,ದಯೆ,ಕರುಣೆ ಇರಿಸಿ
ನಿತ್ಯ ಚೇತನಗೊಳಲಿ ಕನ್ನಡವು ಕಂಪ ಹರಿಸಿ ||2||
ಜೀವ- ಜಲದೊಳಗೆ, ಜುಳು-ಜುಳುನೆ ಹರಿಸಿ
ನರನಾಡಿಯೊಡಲೊಳಗೆ, ನುಡಿಪ್ರೇಮನುಳಿಸಿ
ತಾಯ್ನಡಿಯ ಋಣಸೇವೆ ಗಾನಸುಧೆ ಹರಿಸಿ
ನಿತ್ಯ ಚೇತನಗೊಳಲಿ ಕನ್ನಡವು ಕಂಪ ಹರಿಸಿ ||2||
ಗಿಡ-ಮರದ ತಂಗಾಳಿ ಉಸಿರಾಗಿ ಚಲಿಸಿ
ಸತ್ಯದಿ, ಶಾಂತಿ ಜೊತೆ ತ್ಯಾಗ ಸರಿ ಬೆರಸಿ
ತಾಯ್ನಾಡ ಉಸಿರಾಗಿ, ಮತ್ತದುವೆ ಪುಟಿಸಿ
ನಿತ್ಯ ಚೇತನಗೊಳಲಿ ಕನ್ನಡವು ಕಂಪ ಹರಸಿ ||2||
ರವಿ-ಶಶಿಯ ಹೊಂಗಿರಣ ಬೆಳಕಾಗಿ ತಲುಪಿ
ನಿಸ್ವಾರ್ಥ,ಸಹಬಾಳ್ವೆ ಜನ-ಮನದಿಮೆರೆಸಿ
ಸರತಿಯಲಿ,ಕನ್ನಡತಿ ಅಗ್ರಳೆಂದೆನಿಸಿ
ನಿತ್ಯ ಚೇತನಗೊಳಲಿ ಕನ್ನಡವು ಕಂಪ ಹರಸಿ ||2||
- ಕುಂತೂರು ತ ಸುಬ್ರಹ್ಮಣ್ಯ
9482119447
- KT Subramanya
31 Aug 2018, 06:54 pm
ಕನಸಾಗಿ ಬಂದವಳು ನನಸಾಗುವ ಮುಂಚೆನೇ ಮಾಯವಾದಳು
ಪದೇ ಪದೇ ಕಾಡುವ ಅವಳ ಕಣ್ಣುಗಳು
ನನ್ನ ಹೃದಯ ದೋಚಿತ್ತು
ನಾನು ಮಾಡುವ ಕೆಲಸದಲ್ಲಿ ಅವಳದೇ ಕಾಡುವ ಮುಗುಳ್ನಗೆ....
- Murali.T
31 Aug 2018, 12:45 am
ನಾನಿಂದು ಇವಳ ಕೈಸೆರೆ
ಮೋಹಕ ಮಿನುಗುವ ತಾರೆ
ಸ್ಥಬ್ಧ ನಾನೀಗ ಇವಳು ನಕ್ಕರೆ|ಹುಡುಗ|
ಯಾವುದಿದು ಮಾಯ ತೆರೆ
ಅವನ ಕಣ್ಣಲ್ಲಿ ಕಣ್ಣಿಟ್ಟರೆ
ಮಾಡಿದೆ ನನ್ನಿಂದ ನನ್ನನೇ ಬೇರೆ|ಹುಡುಗಿ|
ನನ್ನೆದುರು ಇವಳು ನಿಂತಿರೆ
ಸ್ವರ್ಗವೇ ಆಗಿದೆ ಈ ಧರೆ
ಇವಳೊಲವಿನಲಿ ನಾನೀಗ ಸೆರೆ|ಹುಡುಗ|
ಇವನ ಕೈ ಹಿಡಿದು ನಡೆದರೆ
ನಾನಾದೆನು ಕಣ್ಣೀರಿಗೂ ಹೊರೆ
ಇದಕ್ಕಿಡಲೆ ಪ್ರೀತಿಯ ಹೆಸರೇ??|ಹುಡುಗಿ|
ಅವಳ ಮಡಿಲ ನಾ ಸೇರೆ
ಜಗಕೆಲ್ಲ ನಾನೇ ದೊರೆ
ಈ ಪ್ರೀತಿಯ ಅಮಲು ಜೋರೆ|ಹುಡುಗ|
ಇವನ ತೋಳ ಆಸರೆ
ನನಗೆಂದೇ ನೀಡಿದ ದೇವರೆ
ನಿನಗಿದು ವಂದನೆ ಮನಸಾರೆ|ಹುಡುಗಿ|
- ಶ್ರೀಕಾವ್ಯ
30 Aug 2018, 11:31 pm