Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀ ಕಾಣದಿರೆ

ಬಂದೆನ್ನ ಎದುರಿಗೆ ನಿಲ್ಲು
ನಿನಗಾಗಿ ತೆರೆದಿದೆ ಮನಬಾಗಿಲು
ನೀ ಕಾಣದಿರೆ ನನಗೆ ದಿಗಿಲು
ಅದರಿಂದ ಮನವೆಲ್ಲ ಕತ್ತಲು
ನೀ ಜೊತೆಯಿದ್ದರೆ ನನಗೇನೋ ಅಮಲು
ನಿನ್ನ ಅಂದಕ್ಕೆ ನಾನಾದೆ ಮರುಳು

ಅಮು ಭಾವಜೀವಿ
ಚಿತ್ರದುರ್ಗ

- ಅಮು

13 Sep 2018, 01:05 pm

ನಾನೊಬ್ಬ ಕುಡುಕ

ನಾನೊಬ್ಬ ಕುಡುಕ
ದುಶ್ಚಟಗಗಳಿಂದಲ್ಲ,
ನಿನ್ನ ಭಾವನೆಗಳ
ಅಮಲಿನಲ್ಲಿನ ಕುಡುಕ.
ನಾನೊಬ್ಬ ಕುಡುಕ
ಕೆಟ್ಟಾಲೋಚನೆಗಳಿಂದಲ್ಲ,
ನಿನ್ನಾಂತರ್ಯದ ಸೊಗಸ್ಸಿನ
ತೊಳಲಾಟದಲ್ಲಿನ ಕುಡುಕ.
ನಾನೊಬ್ಬ ಕುಡುಕ
ಆಡಂಬರದ ಜೀವನಕ್ಕಲ್ಲ,
ನಿನ್ನ ಪ್ರೀತಿ-ಪ್ರೇಮಗಳ
ಅಲೆದಾಟದಲ್ಲಿನ ಕುಡುಕ.
ನಾನೊಬ್ಬ ಕುಡುಕ
ಅತಿ ಆಸೆಯಿಂದಲ್ಲ,
ನಿನ್ನ ಸೇರಲೇ ಬೇಕೆಂಬ
ಆಲೋಚನೆಯಲ್ಲಿನ
ಅಪರೂಪದ ಕುಡುಕ.

- vasu

11 Sep 2018, 08:56 pm

ಮದುವೆಯಾದದಿನ

ಎಂಥ ಸುದಿನವಿಂದು ನಾ ನಿನ್ನ ಸಂಗಾತಿಯಾದಂದು
ಎರಡು ಮನಸು ಒಂದಾದಂದು ಎರಡು ಮನೆ ಬೆರೆಯಿತಂದು
ಅನುಭವಗಳು ಅನೇಕ ಆನಂದದ ರಸಗಳಿಗೆಗಳನೇಕ
ಎಂದೆಂದಿಗೂ ಮರೆಯಲಾರದ ಸುದಿನ ನಾ ನಿನ್ನ ಮದುವೆಯಾದ ಈ ದಿನ

- ರಘು

11 Sep 2018, 06:06 pm

ಸ್ಥಿರ ರಹಿತ ನೆಲೆ

ನಿಂತಿದ್ದೇವೆ ನಾವು ಒಂಟಿಕಾಲ ಮೇಲೆ!
ಜನಸಂಖ್ಯಾ ಸ್ಪೋಟದ ಅಲೆಯಲ್ಲಿ ತೇಲುತ್ತಾ
ಬಡವ-ಧನಿಕ, ಜಾತಿ-ಪಂಥವೆಂಬ ಪಾಷಕ್ಕೆ ಸಿಕ್ಕಿ
ಜಿಡ್ಡಾದ ಮನಸ್ಸಿಗೆ ಶಾಂತಿಯ ಹುಡುಕುತ್ತಾ
ನಿಂತಿದ್ದೇವೆ ನಾವು ಒಂಟಿಕಾಲ ಮೇಲೆ!

ದಿನದಿಂದ ದಿನಕ್ಕೆ ಬದಲಾಗುವ ಸಮಾಜದಲಿ
ಬೆಲೆ ಏರಿಕೆಯ ಸುಳಿಯಲಿ ಸಿಲುಕಿ
ಮೂಲಭೂತ ಅಗತ್ಯಗಳಿಂದಲೂ ವಂಚಿತರಾಗಿ
ಅತ್ತ ಸಾಯಲಾರದೆ ಇತ್ತ ಬದುಕಲಾರದೆ
ನಿಂತಿದ್ದೇವೆ ನಾವು ಒಂಟಿಕಾಲ ಮೇಲೆ!

ಬಡತನದ ತಾಯ್ತಂದೆಗಳ ದಣಿಸಿ
ವಿದ್ಯಾರ್ಹತೆಗೆಂದು (ಡೂನೇಷನ್) ಲಂಚವ ತೆತ್ತು
ಪದವಿಗಳಿಸಿ ಉದ್ಯೋಗವಿಲ್ಲದೆ
ನಿರುದ್ಯೋಗಿಯಾಗಿ
ಕೆಲಸ ಹುಡುಕುತ್ತಾ ಬೀದಿ ಬೀದಿ ಅಲೆಯುತ್ತಾ
ನಿಂತಿದ್ದೇವೆ ನಾವು ಒಂಟಿಕಾಲ ಮೇಲೆ!

ಸಿರಿತನ ಬರಲಿಲ್ಲ-ಬಡತನ ಬಿಡಲ್ಲಿಲ್ಲ
ನಡೆದುಹೋದ ಕಹಿನೋವು ಮರೆಯಲು
ಚಂಚಲತೆಯ ಮನವನ್ನು ಬಿಗಿಹಿಡಿದು
ನಮ್ಮ ಭವಿಷ್ಯದ ಹಗಲುಗನಸ್ಸು ಕಾಣುತ್ತಾ
ನಿಂತಿದ್ದೇವೆ ನಾವು ಒಂಟಿಕಾಲ ಮೇಲೆ!

ಕುಂತೂರು ತ ಸುಬ್ರಮಣ್ಯ
9482119447

- KT Subramanya

11 Sep 2018, 12:52 pm

ನಮ್ಮ ಬಾಷೆ

ಕನ್ನಡನಾಡಲಿ ಜನಿಸಿದ ನಾವು
ಕನ್ನಡವನ್ನೆ ಮರೆತಿಹೆವು
ಅಂಕಲ್, ಮಮ್ಮಿ,ಡ್ಯಾಡಿ ಎನ್ನುವ
ಆಂಗ್ಲ ಭಾಷೆಯ ಬಳಸುವೆವು

ಈ ಪರಿ ಉಳಿದರೆ ಎಂದೂ
ಕನ್ನಡ ತಾಯಿಗೆ ಉಳಿವಿಲ್ಲ
ಪರ ಭಾಷೆಯು ನಮ್ಮಲ್ಲಿದ್ದರೆ
ಕನ್ನಾಡಾಂಬೆಯು ಮರುಗುವಳು

ಬನ್ನಿರಿ ಚಿಣ್ಣರೆ ಮಕ್ಕಳೆ ನಾವು
ನವ ಕರ್ನಾಟಕ ರಚಿಸೋಣ
ಇಂದಿನ ಮಕ್ಕಳ ಮನದಲಿ ನಾವು
ಕನ್ನಡ ಕಂಪನು ಹರಡೋಣ

ಕುವೆಂಪು , ಬೇಂದ್ರೆ ನಡೆದ ನಡತೆಯ
ಜೀವನದಲ್ಲುಪಯೋಗಿಸುವ
ಕನ್ನಡ ನಾಡಲಿ ಜನಿಸಿದ ನಾವು
ಮಾತೆಯ ಋಣವ ತೀರಿಸುವ

(ರಾಗ ಲಾವಣಿ)

ಕುಂತೂರು ತ ಸುಬ್ರಮಣ್ಯ
9482119447

- KT Subramanya

10 Sep 2018, 10:47 am

ಹೋಗು ಮನಸ್ಸೇ ಹೋಗು

ಕಾಣದೆ ಮರೆಯಾಗಿ
ಹೋಗುವೆ ಎಲ್ಲಿಗೆ?
ಮನಸನೇ ತೊರೆದು
ಹೋಗುವೆಯಾ ಅಲ್ಲಿಗೆ?

ಸುಮ್ಮನೆ ಕುಳಿತೆ ಹೀಗೆ ಏಕೆ ?
ಮೌನದಲ್ಲೂ ಮಾತಿದೆಯಾ?
ನೋಟವನು ನೆಟ್ಟಿರುವೆ ಎಲ್ಲೊ ಏಕೆ?
ಶೂನ್ಯದಲೂ ಬೆಳಕಿದೆಯ?

ಭಾವನೆಗಳ ಬೇಗುದಿಯಾ?
ಸರಿ ತಪ್ಪುಗಳ ತಾಕಲಾಟವ?
ಒಳಗೊಳಗೇ ಕುದಿಯುತಿದೆಯಾ?
ಹೊರಚೆಲ್ಲಲು ಕಾಯುತಿರುವೆಯಾ?

ಒಮ್ಮೆ ಎಲ್ಲ ಬಿಟ್ಟು ಹೊರಗೆ ನಿಂತು
ಲೋಕವ ಕಣ್ತೆರೆದು ನೋಡು
ಮರೆತೇ ಹೋಗುವೆ ಮನದ ಆವೇಶ
ಕಳೆದು ಬಿಡುವೆ ಎಲ್ಲಾ ಕಲ್ಮಶ

ನಮ್ಮ ಕಷ್ಟವೇ ದೊಡ್ಡದಲ್ಲಾ
ಅನ್ಯರ ಸಂಕಟ ಅರಿತರೆ
ನಮ್ಮದೇನೂ ಅಲ್ಲಾ
ನೋವಿನಲೂ ನಲಿಯುವುದ ಕಲಿ
ಸಾವಿನಲೂ ಸಾರ್ಥಕತೆ ಇರಲಿ....

- RajuKolkar

09 Sep 2018, 02:38 pm

ಪ್ರೀತಿ ನನ್ನ ಹೆಸರು

ಮಡಿಕೆಯ ಮೇಲೆ ಬಿಡುಸುವ
ರಗೋಲಿಯ
ನನ್ನ ಎದೆ ಮೇಲೆ ಬಿಡಿಸುವದು
ಅದ್ಯಾವಾಗ ???

ಬಣ್ಣದ ಲೇಖನಿ ಹಿಡಿದಿರುವ
ಬೆರಳುಗಳು
ನನ್ನ ಜೊತೆ ಕೈಹಿಡಿದು ನಡೆಯುವುದು
ಅದ್ಯಾವಾಗ ???

ಚಂದ್ರನು ನಾಚುವಥ ನಿನ್ನ ನಗೂ
ನನ್ನ ಎದೆಯಾಳದಲ್ಲಿ ಬಚ್ಚಿಯಿಡುವದು
ಅದ್ಯಾವಾಗ ???

ನಕ್ಷತ್ರಗಳೇ ಬೆರಗಾಗುವಂಥ ನಿನ್ನ
ಕಣ್ಣನೋಟ ಕನಸಿನಲ್ಲಿ ನಾ ಕಾಯುವುದು
ಅದ್ಯಾವಾಗ ???

ನನ್ನಾಸೆಯ ಅರಸಿ ಪ್ರೀತಿಯ ಕುವರಿ
ಮನಸ್ಸು ಬಿಚ್ಚಿ ಹೇಳು ನನ್ನ ಪ್ರೀತಿಯ ಸ್ವೀಕರಿಸಿ
ನೀನು ಇರದೇ ನಾನಿಲ್ಲ ನಾ ಇರದೇ ನೀನು ಇಲ್ಲ
ಪ್ರೀತಿ ನನ್ನ ಹೆಸರು......

- Prakash Angadi

07 Sep 2018, 09:36 am

" ಏನೆಂದು ಒಣ್ಣಿಸಲಿ ನಾ ಗುರುಗಳನ್ನು "

ಏನೆಂದು ಒಣ್ಣಿಸಲಿ ನಾ ಗುರುಗಳನ್ನು
ವಣ೯ಗಳೇ ಸಾಲದು ವಣ೯ಮಯವಾಗಿರುವುದು
ಪ್ರತಿ ದಿನವು ಹೂಸ ವಿಷಯವನ್ನು
ತಿಳಿಸುವ ಗುರುಗಳನ್ನು ಒಣ್ಣಿಸಲು ಪದವೇ ಸಾಲದು...

ಅರಿತು ಬಾಳುವನಿಗೆ ದಾರಿ ದೀಪ
ವಿದ್ಯಾಥಿಗಳಿಗೆ ಇವರೇ ಮಾಗ೯ದಶ೯ನ
ಕಲಿಯುವವರಿಗೆ ಇವರೇ ನಿಜ ಸ್ವಗ೯ತಿ
ಅರಿತು ಕಲಿತರೆ ಮುಂದೆ ಸನ್ಮಾಗ೯...

ನೂರಾರು ವಿಷಯವನ್ನು ತಿಳಿಸುವ ದೇವರು
ವಿದ್ಯಾಥಿ೯ ಪ್ರತಿಭೆಯನ್ನು
ಗುರುತಿಸುವ ಶಕ್ತಿ ನಿಮ್ಮಗಿದೆ
ಏನೆಂದು ಒಣ್ಣಿಸಲಿ ನಾ ಗುರುಗಳನ್ನು
ವಣ೯ಗಳೇ ಸಾಲದು ವಣ೯ಮಯವಾಗಿರುವುದು.


ಬಡಮಾರನಹಳ್ಳಿ ಮಂಜುನಾಥ ಬಿ.ಟಿ

- Manjunatha BT

05 Sep 2018, 10:01 pm

ಗುರುಗಳಿಗೆ ನನ್ನ ನಮನಗಳು

ಅಜ್ಞಾನದ ಮನಕ್ಕೆ
ಜ್ಞಾನದ ಸುಧೇ ಸುರಿದು
ಸುಜ್ಞಾನದೆಡೆಗೆನ್ನ ಉಣಬಡಿಸುವ
ಕಲ್ಲುನ್ನು ಶಿಲೆಯಾಗಿರುವ
ಜಾದುಗಾರು ಗುರುಗಳಿಗೆ...
ನನ್ನ ನಮನಗಳು

ಗುರು ಚರಣದಲಿ
ಅಕ್ಷರವೆಂಬ ಅರಿವಿನ ಹಣತೆ ಹಚ್ಚಿ
ಬೆಳಕೆಂಬ ಹಸಿರು ಪಲ್ಲವದ
ಗುಣವ ಬೆಳಸಿ
ಅಂಧಕಾರದ ಲಕ್ಷಣ ಅಳಿಸಿ
ಒಳ್ಳೆಯ ಬದುಕಿನ ನಡೆಗೆ
ಕರೆದೊಯ್ಯುವ ಮಹಾ ಮಾಂತ್ರಿಕ
ಗುರುಗಳಿಗೆ ನನ್ನ ಶರಣಗಳು

ಅಕ್ಷರವೆಂಬ ದಿವ್ಯಜ್ಯೋತಿ ಬೆಳಗಿಸಿದ
ಗುರುವಿನ ನಾವೆಂದೂ ಅವರ ಸತ್ಕಾರ್ಯಕೆ ಋಣಿ
ಅವರಿಂದಲೇ ಬೆಳಗುತಿದೆ ಮನುಕುಲದ ಕೀರುತಿ
ಅವರಿಗೆ ನನ್ನ ವಂದನೆಗಳು
ಅವರಿಂದಲೇ ನಮ್ಮ ಸಾಧನೆಗಳು

ಅಕ್ಷರ ಕಲಿಸಿ ಜೀವನದ ಮೌಲ್ಯಗಳನ್ನು ತಿಳಿಸಿ
ಗಣಿತದ ಗಣಿ ಎಂದು ಮಾಡಿ
ಸತ್ಯದರಿವಿನ ಜ್ಞಾನವ ಕಲಿಸಿ
ನಾವು ಕಲಿಸುವ ನಿಸ್ವಾರ್ಥರಾಗಿ
ಸಧ್ಭಾವದಲಿ ವಂದಿಸೋಣ
ಈ ಪರಿಯಲ್ಲಿ ಗುರುದಕ್ಷಣೆ ಸಮರ್ಪಿಸೋಣ

- Prakash Angadi

05 Sep 2018, 06:27 am

ಬೇಕಾಗಿದ್ದಾರೆ

ಹೃದಯ ದೂರಲಿ‌ ಬಿದ್ದ ಬೆಂಕಿಯ
ನಂದಿಸುವವರು ಬೇಕಾಗಿದ್ದಾರೆ
ಪ್ರೀತಿ, ಸ್ನೇಹ, ವಿಶ್ವಾಸವಂತಹವನೆ
ವೇತನವಾಗಿ ಪಡೆಯುವವರಿದ್ದರೆ

- ಶ್ರೀಕಾವ್ಯ

04 Sep 2018, 08:16 pm