Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮೌನ ಮಾತಾಯಿತು............

ಒಲವರಳಿತು
ಮನದಾಸೆಯ ಕಂಡು.......
ತನು ಕುಣಿಯಿತು
ಮಿಡಿವ ಮಿಡಿತವ ಕಂಡು.........
ಕನಸು ಚಿಗುರೊಡೆಯಿತು
ಹೊಸ ಬಾವವ ಕಂಡು.........
ಮೌನ ಮಾತಾಡಿತು
ಮುಗ್ದ ಬಾಷೆಯ ಕಂಡು.......
ಚೆಲುವು ನಾಚಿತು
ಅಂತರಾಳವ ಕಂಡು.........
ನಗುವು ಸೋತು
ಸೆರೆಯಾಯಿತು ಮನವ ಕಂಡು.......
ಮನವೆ ಬೆಚ್ಚಿ ಬೇರಗಾಯಿತು
ಪ್ರೀತಿಯ ಸೋಬಗ ಕಂಡು..........
ಒಲವರಳಿತು ಇನಿಯನಾಸೆಯ ಕಂಡು.........
ನನ್ನೊಳಗಿನ ಮೌನವ ಮುರಿದು ಬಾಷೆಯೋಂದು ಶುರುವಾಯಿತು..‌‌‌‌‌‌.............

- Asha Rani

24 Sep 2018, 10:29 am

ಅಪರೂಪದ ಮಾತುಗಾತಿ

ಅಪರೂಪಕ್ಕೊಮ್ಮೆ ಮಾತನಾಡುವ ಗಿಳಿಯೇ,
ಅರಳಿಸಿ ಮನದಿ ಕೆಂದಾವರೆಯ
ಮರಳಿ ಮರೆಯಾಗಿ ಬಿಡುವೆಯಲ್ಲ,
ನಗುವಿನ ಹೂ ಗಿಡಕೆ ನೀರೆರೆವವರು ಯಾರಿಲ್ಲದೇ
ಮತ್ತೆ ಬಾಡುವುದೆಂಬುದನು ಮರೆತು...

ನಿನ್ನ ನಗುವಿನೊಳಗೆ ಹುದುಗಿಹುದೇನೋ
ನನ್ನ ಮನದೊಳಗಣ ಸಿಹಿಯ ಗುಟ್ಟು
ನಿನ್ನ ಮಾತಿನ ಮೋಡಿಯೊಳಗೆ ಬಂದಿಯಾಗಿ
ಮರೆತೇನೆ ನಾನು ಎಲ್ಲಾ ಕಹಿಯ ಒಟ್ಟು.

ಗೆಳತಿ ನೀನು ಆಗಿರುವೆಯ ಅಮಂತ್ರಣವಿಲ್ಲದೆ
ನನಗೆ ಮಮತೆಯ ಕೇಡಿ
ಅರಿವ ಮುನ್ನವೇ ಗೆಳೆತನದ ಅನಿಸುಗಳ
ಬಾವಿಗೆ ಮೆಲ್ಲಗೆ ದೂಡಿ..

ನಗುತಿರು ಹೂವೆ ಕಾಲ ಬದಲಾದರೂ
ಅರಳುತಿರಲಿ ದಿನವೂ ನಿನ್ನ ತುಟಿಯಲ್ಲಿ
ಸದಾ ಮುಗುಳ್ನಗೆಯ ಮೊಗ್ಗು.
ಬಿಕ್ಕಳಿಕೆ ಬಂದಾಗಲಾದರೂ ನೆನೆಸಿಕೊ ನನ್ನ
ಕೆಲಸವಿಲ್ಲದ ಬಡಗಿ ನೆನೆಯುತಿರುವನೆಂದು ನಿನ್ನ !

- ಶ್ರೀಗೋ.

22 Sep 2018, 10:06 pm

ಮುದ್ದು ಮಡದಿ

ಕಂಗಳಂಚಿಗೆ ನಿದ್ದೆ ಬಂದಿದ್ದೆ ಮುದ್ದು ಮಡದಿ ಮಲಗೆ ಕೊಂಚ ಮರೆತು ಎಲ್ಲ ನೋವನ್ನೂ ನನ್ನ ಮಡಿಲಲ್ಲಿ.

ನಿನ್ನ ಮನಕೆ ತಿಳಿಯಲಿಲ್ಲವೇ ನಮ್ಮ ಪುಟ್ಟ ಕಂದಮ್ಮನ ಕೂಗು ಅಳುತಿಹುದು ಮಲಗಮ್ಮ ನಿದ್ದೆ ಬಂದಿದೆ ನನಗೆ ಎಂದು ಇನ್ನು ಕಾಯಿಸದೆ ಅದರ ಕಂಗಳ ನಿದ್ದೆ ನೀ ವಿಶ್ರಮಿಸಿ ಈ ಸಂಗಾತಿ ಹಾಡಿಗಿಂದು.

ಅಲ್ಲೆಲ್ಲೋ ಮೋಡಗಳ ಮರೆಯಲ್ಲಿ ಕದ್ದು ಮುಚ್ಚಿ ನಿನ್ನ ನೋಡುವ ಚಂದಿರನ ತಂದು ನಿನಗಿಂದು ಕೊಡದಿದ್ದರೂ ಪ್ರೀತಿಯಿಂದ ತಲೆಯ ಸವರಿ ಹಣೆಗೊಂದು ಮುತ್ತನಿಡುವೆ ಅಪ್ಪನ ಹಾಗೆ ಅಕ್ಕರೆಯಿಂದ.

ಹೆಜ್ಜೆಯ ಭಾರಕ್ಕೆ ಪಾದ ಸವೆದಿಹುದು ಗೆಜ್ಜೆಗಳು ಹೇಳುತ್ತಿವೆ ಕಿರುಬೆರಳಿಗೆ ನೋವಾಗಿದೆ ಎಂದು. ಎದೆಯ ಮೇಲಿಟ್ಟು ಒಮ್ಮೆ ಬಿಸಿಯ ತಾಗಿಸುವೆ ಕಡಿಮೆ ಆಗಬಹುದೇನೋ ನಿನ್ನ ನೋವು.

ನನ್ನ ಉಸಿರು ನೀನಾಗದಿದ್ದರೂ ಅದಕೆ ಅರ್ಥ ನೀನು, ಮೊದಲ ಒಲವು ಬಿಡದ ಚೆಲುವು ಮನಸ ನೆಲವು ನೀನೇ ನನ್ನ ಮನದರಸಿ.

ನಿನ್ನ ನೋವು ಹಂಚಿಕೊಳ್ಳಲು ನನ್ನಿಂದ ಆಗದಿರಬಹುದು ಕಂಡ ಕಣ್ಣ ಹನಿಯಲ್ಲಿ ಪಾಲು ಪಡೆದುಕೊಳ್ಳುವೆ ನಿನ್ನವನಾಗಿ ನಾನಿರುವರೆಗೂ.
ನಿನ್ನ ನಗುವಿಗಾಗಿ ನನ್ನ ಸರ್ವಸ್ವ ಮಾತಿಲ್ಲದೆ ಮೂಡುಪಾಗಿರಿಸುವೆ ಸಂಗಾತಿ ಚೆಲುವಿನ ಜೊತೆಗಾರ್ತಿ.

- ಚುಕ್ಕಿ

22 Sep 2018, 06:10 am

ಕಳ್ಳತನ

ಯಾರಿಗುಂಟು ಯಾರಿಗಿಲ್ಲ
ಬಲ್ಲವರಾರು ಇದರ ಮೂಲ
ಎಲ್ಲ ತಿಳಿದವ ಕುಂತಿಹನು ಮೇಲೆ
ನಿರ್ಧರಿಸುತ್ತ ಎಲ್ಲರ ಕಾಲ

ನೂರಾರು ವಿಷಯ
ತಿಳಿಯುತ್ತಿದ್ದೆ
ನೂರಾರು ಭಾಷೆಯ
ಕಲಿಯುತ್ತಿದ್ದೆ
ಕೈಗನ್ನಡಿಯಂತಿದ್ದೆ
ನೀನು ನನ್ನ ಅಂಗೈಲಿ
ಎಲ್ಲಿ ಮರೆಯಾದೆ
ಎವೆತೆರೆದಿಕ್ಕುವೇಳೆಯಲಿ

ಕದ್ದವರ ಕಣ್ಣಲ್ಲಿ
ಸಂತಸದ ಸಲ್ಲಾಪ
ಕಳಕೊಂಡವರ ಕಣ್ಣಲ್ಲಿ
ಹೊಮ್ಮುತ್ತಿದೆ ಹಿಡಿ ಶಾಪ
ಇಂದಲ್ಲ ನಾಳೆ ಕದ್ದವರು
ಉಣ್ಣರೆ ಪಶ್ವಾತ್ತಾಪ




ಶಾರದ

- seenu

21 Sep 2018, 10:10 pm

ಕನಸಿನ ಹುಡುಗಿ....

ಬಹಳ ಸುಂದರ ನಂದು ನಿಂದು ಜೋಡಿಯ ಸಂಗಮ,
ಅದನ್ನ ನೋಡಿ ನಾಚುವರು ಆ ಚುಕ್ಕಿ ಚಂದ್ರಮ,
ನೀ ಹೂಂ ಅಂದರೆ ಸಾಕು ನಮ್ಮ ಊರ ತುಂಬೆಲ್ಲ ಸಂಭ್ರಮ,
ಇವಳನ್ನ ನನಗಾಗಿಯೇ ಮೀಸಲಿಡು ಓ ಚಂದಮಾಮ,,,,

- shridhartalawar

19 Sep 2018, 01:16 pm

ಕನಸ ಕೊಂದರೆಲ್ಲ

*ಕನಸ ಕೊಂದರೆಲ್ಲ*

ಮೋರಿ ನೀರಿಗೂ ಮೋಹ ಬಂದಿದೆ
ತನ್ನೊಳಗೂ ತಾವರೆ ಅರಳಲಿ ಎಂದು
ಆದರೇಕೋ ಒಂದು ಜೀವವೂ
ಬಯಸದು ನನ್ನ ಸ್ನೇಹ ಬೇಕೆಂದು

ಊರಿನ ಎಲ್ಲಾ ಕೊಳೆಯ ಹೊತ್ತು
ಬಂದುದೇ ನನಗೆ ಬಾರಿ ಕುತ್ತು
ಹಿಂದೆ ನಾನು ಕೂಡ ಚಂದವಿದ್ದೆ
ಬಳಸಿ ಬಳಸಿ ನಾನು ಕೊಚ್ಚೆಯಾದೆ

ನನ್ನ ಬದುಕನೇ ನಾಶ ಮಾಡಿ
ಮೂಗು ಮುಚ್ಚಿಕೊಂಡು ನಡೆವರು
ಹಂದಿಗೊಂದೇ ನಾನು ಇಷ್ಟ
ಇನ್ಯಾರೂ ಕೇಳರು ನನ್ನ ಕಷ್ಟ

ಕಪ್ಪು ಬಣ್ಣವ ಮೈಗೆ ಮೆತ್ತಿಕೊಂಡು
ಎಲ್ಲೋ ಹರಿದು ಹೋಗಿ ನಿಂತು
ಸುತ್ತಲೆಲ್ಲ ಗಬ್ಬು ನಾತ ಬೀರುವೆನೆಂಬ
ಅಪಕೀರ್ತಿ ಮಾತ್ರ ನನಗಂಟಿದೆ

ನನ್ನ ಕನಸ ಕೊಂದರೆಲ್ಲ
ನಾಗರೀಕರೆನಿಸಿಕೊಂಡವರು
ನನ್ನ ಗುಣವ ಅವಗುಣವಾಗಿಸಿ
ಆ ಸೇವೆಯನ್ನು ಗೌಣವಾಗಿಸಿದರು

ನನಗೂ ಕೂಡ ನ್ಯಾಯ ಕೊಡಿಸಿ
ಎಲ್ಲರೊಂದಿಗೂ ನಾನಿರಬೇಕು
ನನಗೆ ಈ ನರಕ ಬೇಡ
ನನ್ನ ದೂರುವವರ ನಾ ಸೇರಬೇಕು


0858ಎಎಂ19092018
*ಅಮು ಭಾವಜೀವಿ*
ಚಿತ್ರದುರ್ಗ

- ಅಮು

19 Sep 2018, 11:53 am

ನಿನ್ನ ಬೆರಳ ತುದಿಯಲ್ಲಿ



ಸಾಗರದ ಸಮತಲದ ಮೇಲೆ
ಮೂಡಿದೆ ವರ್ಣ ಚಿತ್ತಾರ
ಬಾನ ಬೀದಿಯ ತುಂಬಾ
ಹೊಂಬಣ್ಣದಿ ನಗುವ ನೇಸರ

ಹಕ್ಕಿಗಳ ಕಲರವ ಸದ್ದು
ಕೇಳಲು ಆಹಾ ಎಷ್ಟೊಂದು ಮುದ್ದು
ತೆರೆಗಳ ಏರಿಳಿತದ ವೈಯಾರ
ನಿಸರ್ಗದ ಮಡಿಲ ಶೃಂಗಾರ

ಮೂಡಣದ ಕಡಲಿದು
ಪ್ರಕೃತಿಯ ಸೊಬಗು
ಕಣ್ಣು ಹಾಯಿಸಿದಷ್ಟು
ವಿಶಾಲ ಭಾವದ ಮೆರುಗು

ಹಸಿರಿಲ್ಲ ಸುಮವಿಲ್ಲ
ದುಂಬಿ ಝೇಂಕಾರ ಮೊದಲಿಲ್ಲ
ಬರೀ ಕಡಲ ಭೋರ್ಗರೆತ
ದಡ ಸೇರುವ ಧಾವಂತ

ಮುಂಜಾನೆಯಿದು ನಿತ್ಯ
ಮೈ ನವಿರೇಳಿಸುವ ಸತ್ಯವು
ಮನದ ಭಾವಕೆ ರೆಕ್ಕೆ ಹಚ್ಚಿ
ನಭಕೆ ಚಿಮ್ಮಿಸುವ ವಿಶ್ವಾಸವು

ಸವಿಯಬೇಕು ಈ ನಿಸರ್ಗ ವೈಭವ
ಕಾಣಬೇಕು ಸಮಚಿತ್ತ ಭಾವ
ಮಗುವಾಗಿ ನಗುವ ಸಮಯ
ಪ್ರಕೃತಿಯಿದು ಒಂದು ವಿಸ್ಮಯ


*ಅಮು ಭಾವಜೀವಿ*
ಚಿತ್ರದುರ್ಗ

- ಅಮು

18 Sep 2018, 07:02 pm

ಒಲವನ್ನು ನೀ ನೀಡಿರುವಾಗ

ಒಲವನ್ನು ನೀ ನೀಡಿರುವಾಗ
ಮನದಲ್ಲಿ ನಿನಗೆ ಮನೆಯ ಕಟ್ಟೀವೇ, ಹೇಹೇಹೇ

ಉಸಿರಿನಲ್ಲಿ ನೀ ಬೆರತಿರುವಾಗ
ಹೃದಯನೇ ನಿನಗೆ ಮೀಸಲಿಡುವೇ, ಹೇಹೇಹೇ

ಕಣ್ಣು ಮುಂದೆ ಬರುಲು ನೀನು
ಕನಸಲ್ಲೂ ನಿನ್ನ ಅಂದ ಚೆಂದ ಹೊಗಳಿವೇ, ಹೇಹೇಹೇ


ಹೋದಲ್ಲಿ ಬದಲ್ಲಿ ಎಲ್ಲಾ ನಿನದೇ
ಚಿಂತೆ ನನಗೆ ದಯವಿಟ್ಟು ನೀನು ನನಗಾಗಿವೇ, ಹೇಹೇಹೇ

ಬಿಸುವ ಗಾಳಿಯು ಇಂದು
ನಿನಗಾಗಿ ನಿಂತು ಕೊಂಡು ಮನಬಂದಂತೆ ನಿನಗೆ
ಸ್ವಾಗತ ಮಾಡುವೇ, ಹೇಹೇಹೇ

ಬೀದಿ ದೀಪಗಳ ನಡುವೆ
ಏನೋ ಸಂಭ್ರಮ ಇಂದು
ನಿನ್ನ ಹೆಜ್ಜೆ ಗುರುತುಗಳ ಕಂಡು ಚಿಟ್ಟೆಗಳು ಹಾಡುತ್ತ ನಲಿದಿವೇ, ಹೇಹೇಹೇ

ಇದು ನನ್ನ ಕಲ್ಪನೆಯ ಸಾಲು
ಮನಸ್ಸಿಗೆ ಬಂದು ಬೇಗ ಸೇರು
ನಿನಗಾಗಿ ಕಾದಿರುವೇ, ಹೇಹೇಹೇ

- Prakash Angadi

16 Sep 2018, 08:43 pm

ಓ ಗುಲಾಬಿ

ಓ ಗುಲಾಬಿ,
ಬಗೆ ಬಗೆಯ ಬಣ್ಣಗಳ ಭಂಡಾರವೇ ನೀನು.
ಸುಮಧುರ ಸುವಾಸನೆಯ ಸಂಪತ್ತು ನೀನು.
ಸಿರಿ ಸೌಂದರ್ಯದ ಶಿಖರವೇ ನೀನು.

ನಿನ್ನ ಮುಡಿದ ನನ್ನವಳ ಬಗೆ ಏನೆಂದು ಬಣ್ಣಿಸಲಿ ನಾನು?
ಅದನು ನೋಡಿ ನನಗಾದ ಆನಂದದ ಪರಿ
ಏನೆಂದು ಬರಿಯಲಿ ನಾನು?

ನಿನ್ನೀ ಸೌಂದರ್ಯದ ಶಿಖರವನೇರಿ,
ಸುವಾಸನೆಯ ಬುಗ್ಗೆಯ ಬರಿದು ಮಾಡಿದೆ,
ಬಣ್ಣಗಳ ಭಂಡಾರವ ಬಳಿಸಿದೆ.
ನನ್ನವಳನು ಬಣ್ಣಿಸಲು ಶಬ್ಧಗಳು ಸಿಗದೆ ಬಸವಳಿದೆ.

ನಿನ್ನ ಅಂದಚಂದಗಳ ಅರಿವು
ಜೀವನದ ಜಂಜಾಟಗಳ ಮರಿವು.
ನಿನ್ನ ಮುಳ್ಳುಗಳ ಮೈಮಾಟ
ಮನುಜ ಜನ್ಮದ ದುಖ್ಹ ದುಮ್ಮಾನಗಳ ಪರಿಪಾಠ

ಓ ಗುಲಾಬಿ,
ಅರಿತೆ ನಿನ್ನ ಅಂದವ, ಕಲಿತೆ ನಿನ್ನ ಪಾಠವ.
ಬೇರೂರಿ ನೀ ನಿಂತರು ಒಂದೆಡೆ
ಪಸರಿಸಿದೆ ಸುವಾಸನೆ ಎಲ್ಲೆಡೆ

- as

16 Sep 2018, 10:56 am

ಸಾಕು

ಬಂದು ಬಿಡು ನನ್ನ
ಬದುಕಿದು ನಂದನವಾಗಲು
ಇದ್ದು ಬಿಡು ನನ್ನ
ಮನದೊಳಗೆ ನೆನಪಾಗಲು
ನಾಳೆಗಳ ಹಂಗೇಕೆ
ನೀ ಜೊತೆ ಇರಲು
ಇಂದೇ ನನಗೆ ಸಾಕು
ನಿನ್ನೊಲವು ಸಿಗಲು

ಅಮು ಭಾವಜೀವಿ
ಚಿತ್ರದುರ್ಗ

- ಅಮು

14 Sep 2018, 03:57 pm