Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬದುಕಿನ ಉದ್ದಕ್ಕೂ ಒಂಟಿ

ಹುಟ್ಟುವಾಗ ಒಂಟಿ
ಸಾಯುವಾಗ ಒಂಟಿ
ಬದುಕಿನ ಉದ್ದಕ್ಕೂ ಒಂಟಿ!!

ಬಂಧು ಬಳಗವೆಲ್ಲ
ದೂರ ಸರಿದ ಮೇಲೆ
ಬದುಕಿನ ಉದ್ದಕ್ಕೂ ಒಂಟಿ!!

ಕಣ್ಣು ಇದ್ದರೂ ಜಗವು
ಕುರುಡಾಗಿ ಇರುವಾಗ
ಬದುಕಿನ ಉದ್ದಕ್ಕೂ ಒಂಟಿ!!

ನಾನು ನನ್ನದು ಎಂಬ
ಮೋಹವನು ತೊರೆದಾಗ
ಬದುಕಿನ ಉದ್ದಕ್ಕೂ ಒಂಟಿ!!

ಹುಟ್ಟು ಪುಣ್ಯ ಸಾವು ಧನ್ಯ
ಎಂದು‌ ಅರಿತ ಮೇಲೆ
ಬದುಕಿನ ಉದ್ದಕ್ಕೂ ಒಂಟಿ!!

- ಪಿ.ಜಿ.ಜ್ಯೋತಿ

15 Nov 2018, 05:03 pm

ನಾ ನಿನಗ ಪ್ರಿಯವೆ

ನಾನೊಬ್ಬ ಮರುಳ
ನೆಚ್ಚಿಕೊಂಡೆನು ಕನಸ
ನನಸಾಗದನುದಿವಸ

ಪ್ರಾಸಗಳ ಸಾಲುಗಳ
ಗೀಚಿದೆನು ಹಾಳೆಯಲಿ
ಇದುವರೆಗೂ ಓದಿಲ್ಲ
ಮನಸಾರೆ ಯಾರೂ
ಓದಿದರು ನನ್ನಠದ
ಕೋರಿಕೆಗೆ ಕೆಲವರೂ

ಬೇಕು, ಬೇಡದ ಭಾವ
ಮೂಡಲವು ಪುಗಸಟ್ಟೆ
ಅವುಗಳಾ ಸಹವಾಸ
ಮಾಡಿನಾ ಅತಿ ಕೆಟ್ಟೆ

ನಾ ಕೆಡದ ಒರೆತಾಗಿ
ನಿಮಗೂ ಸಹ ಥೋ ಹೋಗಿ
ನನ್ನ ಮರುಳಿನ ಕವನ
ಹೇಳಿದೆನು ಬಹುವಾಗಿ

ಉದ್ಯೋಗ ಕೆಡಿಸುತಿದೆ
ಉದ್ದೇಶ ಏನಿದಕೆ
ಈಗೇಕೆ ಮೈದುಂಬಿ
ಪೀಡಿಸಿದೆ ದಿನೆದಿನಕೆ

ಬರೆಸುವುದು ನನ್ನಿಂದ
ಓದುವವರಾರಿಲ್ಲ
ಹಾಡಿಸುವುದೆನ್ನಿಂದ
ಕೇಳುವವರಾರಿಲ್ಲ

ನನಗೇಕೆ ನೀ ಒಲಿದೆ
*ನಾನಿನಗೆ ಪ್ರಿಯವೇ*
ಹೋಗ್ಲಿ ಬಿಡು ಏನ್ ಮಾಡ್ಲಿ
ನನ್ ಕರ್ಮ ಇದುವೇ

ಮಧುಕೇಶವ್.ಎಂ.ಗಡೀಹಳ್ಳಿ
9686617840

- Rapper Boy Madhukeshav

15 Nov 2018, 04:31 am

ಮೊದಲ ನೋಟಕ್ಕೆ

ನಿನ್ನ ಮೊದಲ ನೋಟಕ್ಕೆ ಬಿದ್ದೆ ನಾ ಪ್ರೀತಿಗೆ,
ನಿನ್ನ ಮುಗಳ್ನಗೆ ಗೆ ಮರೆತೇ ನಾ ಅರೆಗಳಿಗೆ,
ನಿನ್ನ ಮುಂಗುರುಲಿಗೆ ನಾ ಸೋತು ಹೋದೆ,,,,
ಅಂಟಿಸಿದೆಯಾ ನನಗೆ ಪ್ರೀತೀಬಾದೆ
ತುಸು ಇರಿಸಿ ಈ ಒಲವ ಹೊಸ ವ್ಯಾದೆ

- ಇಂತೀ
ಪ್ರಿಯ ಗೆಳೆಯ

- Preetam

14 Nov 2018, 11:48 pm

ತವಕ

ನೋಡಲು ತುಡಿವುದು ಮನ
ನಿನ್ನ ಅನುಪಸ್ಥಿತಿಯಲಿ,
ಒಳ ಹೃದಯದ ಪಟಲದಲಿ ಅಚ್ಚುಕಟ್ಟಾಗಿ
ಕುಂತಿಹುದು ನಿನ್ನ ಮುಖಪಟ
ಅಳಿಸಲಾಗದ ಎರಕ ಹುಯ್ದಂತೆ
ಲೋಹದ ಗಟ್ಟಿ ಹಲಗೆಯ ಮೇಲೆ!

ಬೆಟ್ಟದಾ ತುದಿಯ ನೆಲ್ಲಿಮರ
ಬಾಡಿಹುದು ಗೆಳತಿ
ನಿನ್ನ ನಲ್ನುಡಿಯ ಸೊಲ್ಲಿಲ್ಲದೆ,
ಬಿಸುವಾಗಿ ಬಿಸುತಿಹ ತಂಗಾಳಿ
ತಂದೊಡ್ಡಿಹುದು ನಿನ್ನೊಲುಮೆ
ಸಿಹಿ ನೆನಪುಗಳ ಮೂಟೆಯನ್ನು,
ಬಿಚ್ಚಿ ಸವಿಯಲೆನೋ ಅಳುಕು
ಮನಸು ಮತ್ತೆ ರಚ್ಚೆ ಹಿಡಿದು ಬಿಡುವುದೇನೋ
ನಿನ್ನ ಹೊಸ ದನಿಯ ಕೇಳಲೆಂದು!

ನೇಸರನು ಉದಯಿಸಿ
ಕಾಯುತಿರುವನು,
ಸೂರ್ಯಕಾಂತಿಯ ಹೂವು
ಯಾಕಿನ್ನೂ ಅರಳಿಲ್ಲವೆಂದು..
ಹೂವ ಕಾಣದೆ ನಲಿಯದು ದುಂಬಿ,
ಯಾವಾಗ ನಲಿವ ಹೂವು ಮೈದುಂಬಿ
ನಗೆ ಬಿರುವುದೋ!

- ಶ್ರೀಗೋ.

13 Nov 2018, 07:40 am

ಸ್ವಾರ್ಥಿ

ಅಕ್ಕಿ ಒಂದಗುಳಾಕೆ
ಹಕ್ಕಿ ತಾ ಕೆರಯುವುದು
ತನ್ನಕ್ಕ ಪಕ್ಕದಿಹ ಹಕ್ಕಿ ಬಳಗವನು
ಏನವುಗಳಾ ಬಂಧ
ಮನುಕುಲದೊಳದು ಇಲ್ಲ
"ಸ್ವಾರ್ಥಿ" ತಾ ಮಾನವನು
ಪೂರ್ತಿ ತನಗಿರಲೆಂಬ
ನೀತಿ ಸ್ಥಿರ ಲೋಕದೊಳು
ಅಂಥೆಂದು ನುಡಿವ
""ಶ್ರೀ ಕಂಚಿ ಕಾಳಿಯ ದಾಸ ಮಧುಕೇಶವ""

- Rapper Boy Madhukeshav

12 Nov 2018, 10:29 pm

ಅಗಲಿದ ಮಗು

ನವಮಾಸಗಳೊತ್ತು ತನ್ನಲ್ಲಿ ಕರುಳ ಕುಡಿಯ ಕಾಣದೇನೆ ಭೂತಾಯಿ ಕಸಿದುಕೊಂಡಳು ತನ್ನ ಮಗುವನ್ನು ಮುದ್ದಾಡುವ ಆಸೆಯಾಗಿ.

ಹಸಿಮೈಯ ಬಿಸಿ ಇನ್ನು ಆರಿಲ್ಲ ತನ್ನ ಒಡಲು ತಾನಿನ್ನೂ ಒಪ್ಪಿಲ್ಲ ಒಂದೇ ಜೀವ ತಾನೆಂದು, ಮಗುವು ತನ್ನಲ್ಲಿನ ಭಾಗ ಅಲ್ಲವೆಂದು, ಅಷ್ಟರಲ್ಲೇ ಕಳುವಾಯಿತೆ ಅವಳ ಪ್ರತಿರೂಪದ ಛಾಯೆಯೊಂದು ಸಾವು ಕವಿದ ಕತ್ತಲಲ್ಲಿ!

ಹೊಟ್ಟೆಯೊಳಗೆ ಮಗು ಒದ್ದ ಕ್ಷಣ ನೋವಿನಲ್ಲೂ ನಗುವು ಕಂಡಳು ತನ್ನ ಕೈಯಿಂದ ತಾಕುತಿರಲು ಅವನ ಪಾದ ಸ್ಪರ್ಶವ.

ತೊಳಲಾಟಕೆ ನಕ್ಕು ಬೈದಳು ತುಂಟ ನೀನು ಅಪ್ಪನಂತೆ ಸುಮ್ಮನಿರು ಸದ್ದು ಮಾಡದೆ ಒಪ್ಪೋತ್ತು ತಾಳಲಾರೆ ಹಸಿವಿಗೆ ಎಂದು.

ಉಸಿರಲ್ಲೇ ಬಚ್ಚಿಟ್ಟಳು ಮನ ಹೇಳಿದ ನೂರು ಹೆಸರು ಮಗುವಿಗಿಡಲು ನಾಮಕರಣದಲ್ಲಿ ಸಂಭ್ರಮದಲ್ಲಿ ಅಕ್ಷರಗಳು ಬರೆಸಲು ಅಕ್ಷರಾಭ್ಯಾಸದಲ್ಲಿ.

ಸಂಭಾಷಣೆ ಇಲ್ಲದೆ ತಾಯಿಯರಿತ ತನ್ನ ಮಗುವಿನ ನೋವು ನಲಿವು ಅರಿಯದಾದನು ಆ ಭಗವಂತ ಅವಳ ಒಡಲಿನಿಂದ ಮಡಿಲು ಸೇರುವಷ್ಟರಲ್ಲಿ ಕಿತ್ತುಕೊಂಡನು ಅವಳ ಆಸೆಗಳ ಇತ್ತ.

ಯಾವ ತೀರಿಸದ ಅರಕೆ ನಿನ್ನ ಕಸಿದುಕೊಂಡಿತು ಒಂದು ಮಾತು ಹೇಳದೇನೆ ದೂರಮಾಡಿತು, ದೂರದೂರಿನವನಲ್ಲ ನೀನು ನನ್ನ ರಕ್ತ ಮಾಂಸಗಳ ಮುದ್ದೆ ನೀನು, ತುತ್ತನಿಟ್ಟೆ ನನಗಸಿವಿಲ್ಲದಿದ್ದರೂ ಮುತ್ತನಿಡುವ ವೇಳೆಯಲ್ಲಿ ಮಾಯವಾದೆಯಾ ನನ್ನ ಋಣವ ತೀರಿಸದೆ ನನ್ನ ತೊರೆದೆಯಾ..!

- ಚುಕ್ಕಿ

12 Nov 2018, 08:42 pm

ನಿರಾಸೆ

ಈ ನಗರದ ಸೀಮೆಂಟು ಮಹಡಿಗಳ ಮೇಲಿಂದ
ಹನಿಯಿಕ್ಕುತಿದೆ ತೊಟ್ಟಿಕಂಕುತಿದೆ.
ಮೇಲೆ ನಭದಲ್ಲಿ ಕರಿ ಮೋಡಗಳ ಸಾಲು
ಇರುವೆಗಳ ಸಾಲಂತೆ, ಗಡಿ ಇಲ್ಲದಂತೆ.
ಸಾಗುತಿದೆ ಎತ್ತಲೋ ಗೊತ್ತಿಲ್ಲ ಗುರಿ ಇಲ್ಲದೆಡೆಗೆ.
ಅಂತೂ ಹನಿ ಇಕ್ಕುತಿದೆ,ತೊಟ್ತಿಕುದೆ
ಅಂತೂ ಇದೂ.............
ಸಿಮೆಂಟು ಮಹಡಿಗಳ ಮೇಲಿಂದಿಳಿಯುವ ಮಳೆ
ಇದು ಮಳೆಯೇ ?

- ಹಂಸ

- Eranna.HHamsa

12 Nov 2018, 06:07 pm

ಅಪ್ಪಾ..

ಕಿರು ಬೆರಳ ತುದಿ ನನ್ನ ಕೈ ತುಂಬಿ ಮುನ್ನಡೆಸಿದ ಕ್ಷಣ ಮರೆಯುವುದು ಹೇಗೆ ನಾ ಚಿರಋಣಿ ಅದರ ಅಕ್ಕರೆಗೆ ಅಪ್ಪ.

ನನ್ನ ಪುಟ್ಟ ಪಾದ ನಡೆದಾಡಿದ ನಿನ್ನ ಎದೆಯ ಅಂಗಳಕೆ ಅನಿವಾಸಿ ಇಂದು ನಾನು, ನಿನ್ನ ಎದೆ ಬಡಿತ ಇನ್ನೂ ಮುನ್ನಡೆಸುತಿದೆ ಪ್ರತಿ ಹೆಜ್ಜೆಗೂ ಮುನ್ನೆಚ್ಚರಿಕೆ ನೀಡಿ ನಿಧಾನಿಸು ಮಗಳೇ ಹೆಜ್ಜೆ ಹಾಕುವ ಮುನ್ನ ಯೋಚಿಸು ಎಂದು.

ಅಂಜಿಕೆಯು ನೀನು ಅಭಯವೂ ನೀನು ಆರೈಕೆ ನೀನು ಧೈರ್ಯವೂ ನೀನೇ ಅಪ್ಪ ಒಂಟಿಯಲ್ಲ ನಾನೆಂದೂ ನೀ ನನ್ನ ನೆರಳಾಗಿ ಕಾಯುತ್ತಿರುವವರೆಗೂ.

ಜಗವಿಡೀ ನನ್ನ ತೊರೆದರೂ ನಿನ್ನೆಡೆಗೆ ಕೈ ತೋರುವೆ ನನಗಾಗಿ ನೀನಿರುವೆಯೆಂದು ನೀ ನನ್ನ ಜಗವೆಂದು ಬೇರ್ಯಾರ ಪ್ರೀತಿ ಬೇಡವೆಂದು ಬೇಕೆಂದು ನಾ ಬೇಡೆನೆಂದು.

- ಚುಕ್ಕಿ

10 Nov 2018, 10:40 am

ಮೌನ

ಏನೋ ಚಿಂತೆ
ಏನೋ ವ್ಯತೆ
ಏನನ್ನೊ ಬೇಡುತಿದೆ
ಹೇಳಿಕೊಳ್ಳಲಾಗದಂತಿದೆ
ಮೌನವೆ ಮದ್ದಾಗಿದೆ

ಕದಡಿದ ನೀರ್ಗೊಳದಂತೆ
ಮುದುಡಿದ ಮಲ್ಲಿಗೆಯಂತೆ
ಸಿಹಿಯು ಕಹಿಯಾದಂತಿದೆ
ಏಕಾಂತವ ಬಯಸಿದೆ
ಮೌನವೆ ಮದ್ದಾಗಿದೆ

ಸಂಗಾತಿಯೊಡನೆ
ಮೂಡಿದ ವಿರಸ
ಬೆಂಗಾವಲಿನಂತೆ
ಬರುತಿದೆ ದಿವ-ದಿವಸ
ಬಿಡಿಸಲಾಗದ ನಂಟು
ಸಡಿಲಿಸದ ಮೊಂಡು
ಮೌನವೆ ಮದ್ದಾಗಿದೆ


ಅತೃಪ್ತತೆ ಅಧಿಕವಾಗಿ
ಸಂತೃಪ್ತಿ ಮರೆಯಾಗಿ
ಮೌನವೆ ಮರವಾಗಿದೆ


ಶಾರಧ

- ಶಕುಂತಲಾ

09 Nov 2018, 10:03 pm

ನಂದಾದೀಪ

ಕೊನೆಯುಸಿರ ಬಿಗಿ ಹಿಡಿದು ಕೊರಗುತ್ತಿದೆ
ನಂದಾದೀಪ ನಾಂದಿ ಹಾಡಲೆಂದು ತನ್ನ ಈ ಪುಟ್ಟ ಜೀವನಕೆ.

ಎಲ್ಲಿಂದ ಆಯ್ದು ತಂದ ಮಣ್ಣೊ ಯಾವ ಮೇಘ ಹಿಡಿದಿಟ್ಟ ಹನಿಯೋ ಯಾರ ಕೈಯಲ್ಲಿ ಕೇಸರಾಗಿ ಆಕೃತಿ ಪಡೆದಿದೆಯೋ ಸುಟ್ಟು ಬೆಂಕಿಯಲ್ಲಿದ್ದು ಗಟ್ಟಿಯಾಗಿ ಈ ಮಣ್ಣಿನ ದೀಪ.

ತಾ ಬಿತ್ತದ ಬೀಜ ಹತ್ತಿಯಾಯಿತು ಬಿಡದೆ ಬಿಟ್ಟು ಗಿಡವ ಬತ್ತಿಯಾಯಿತು, ನೀರೆರೆಯದೆ ಬೆಳೆದ ತೆಂಗು ಎಣ್ಣೆ ನೀಡಿತು ಯಾರದೋ ಅರಕೆಗೆ ತಾ ಆರತಿಯಾಯಿತು.

ಗಾಳಿಯ ಬೇಡಿ ಎಣ್ಣೆ ಮುಗಿದರೂ ಇನ್ನು ಸ್ವಲ್ಪ ಹೊತ್ತು ಉಸಿರಾಡುವ ಆಸೆ ಸಿಗಬಹುದೇ ಅವಕಾಶ ಮತ್ತೆ ಜೀವ ಪಡೆಯಲು ಈ ನಂದಾದೀಪಕೆ!!

- ಚುಕ್ಕಿ

09 Nov 2018, 05:04 pm