Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ದೀಪದ ಮಲ್ಲಿ

ಕತ್ತಲ ಅಂಗಳದಲ್ಲಿ ಐದು ಎಸಳಿನ
ಮಿಣುಕು ದೀಪವ ಹಿಡಿದು
ನಿಂತಿರುವಳಿದೋ
ಸಿಂಗಾರಗೊಂಡ ಮನೋಹರಿ,
ಮೆಲ್ಲ ಬೀಸುತ್ತಿದೆ ಗಾಳಿ
ಕೊಂಚ ಕರುಣೆಯನು ತೋರಿ
ತೊಂದರೆಯನೊಡ್ಡದೆ ತರುಣಿಗೆ
ತನ್ನಿರುವಿಕೆಯನು ತೋರದೆ,
ಹಸಿರು ಸೀರೆಯನುಟ್ಟು
ಮುಡಿಗೆ ಮಲ್ಲಿಗೆಯನಿಟ್ಟು
ಗಳಿರು ಹಸಿರು ಬಳೆ
ದೈವ ಭಕ್ತಿಯಲಿ ನವಿರು
ಸಿಂಗಾರಗೊಂಡವಳೇ..
ತುಟಿಯಂಚಲಿ ತುಸು
ನಗುವಿನ ಲೇಪನ,
ಮುಗ್ದ ಮೊಗದಿ ತುಂಬಿದ
ಆಧ್ಯಾತ್ಮ ಪ್ರೇರಣೆಯ ಹೊಳಪು
ಕಿರು ಹಣತೆಯ ಬೆಳಕಿನಲ್ಲಿ
ಮಿರುಗಿಹುದು ಆಕೆಯ
ಶುದ್ಧ ಮನಸಿನ ಮೊಗ.

- ಶ್ರೀಗೋ.

20 Jan 2019, 09:27 pm

ಸಂಕ್ರಾಂತಿ

ಸಂಕ್ರಾಂತಿ ಬಂದಿದೆ ಸಂತೋಷ ತಂದಿದೆ
ಆನಂದ ಇಲ್ಲಿದೆ ಹರುಷ ತಂದಿದೆ

ಎಳ್ಳು ಬೆಲ್ಲ ಹಂಚುತ ಎಲ್ಲರಲೂ ಖುಷಿ ತಂದಿದೆ
ಎಲೆಲ್ಲೂ ಜನರಲ್ಲೂ ಹೋಸದು ತಂದಿದೆ

ಸುಗ್ಗಿ ಸಂಭ್ರಮ ಬಣ್ಣದ ರಂಗೋಲಿ ಸಡಗರ ಎಂದಿದೆ
ಹಬ್ಬ ಆಚರಿಸಿ ಹೋಳಿಗೆ ರುಚಿಯುಣಿಸಿ ಎಂದಿದೆ

ಮಹಿಳೆಯರ ಮುಖದಲ್ಲೂ ನಗು ಚಲ್ಲಿದೆ
ಮಕ್ಕಳ  ಮುಖದ ಕಾಂತಿ ಸಂಕ್ರಾಂತಿಯಲ್ಲಿ ಹೆಚ್ಚಿದೆ

- RAJANI

20 Jan 2019, 05:04 pm

ನೀರಂತೆ ನೀನಾಗು

ನೀರಂತೆ ನೀನಾಗು ಎಗ್ಗು ತಗ್ಗುಗಳಲ್ಲಿ ಹಸನಾಗಿ ಬೆರೆತೊಗು, ಯಾರೂ ನಿನ್ನವರಿಲ್ಲದಿದ್ದರೆ ಎಲ್ಲರೂ ನಿನ್ನವರೆಂದು ತಿಳಿದು ನೀ ಸಾಗು.

ಎಲ್ಲರೂ ನಿಂತ ಸಾಲೆಂದು ದೂರ ನಿಂತರೆ ನೀನು, ದೂರವೇ ನಿಲ್ಲುವೆ ಸಾಲು ಬರಿದಾದರೂನು.

ಬಿಸಿಲಲ್ಲಿ ಬೇಗೆ ಆಗು ಕಡಲು ತನ್ನಲ್ಲಿರಿಸದಿದ್ದಲ್ಲಿ ಮೊಡಕೆ ವಲಸೆ ಹೋಗು, ಮತ್ತೆ ಮಳೆಯಾಗಿ ಭುವಿಯ ಮಡಿಲ ಕೂಸಾಗು.

ಚಳಿಯಲ್ಲಿ ಶೀತವಾಗು ಕರಗದಷ್ಟು ಗಟ್ಟಿಯಾಗು, ಉಸಿರ ಬಿಸಿಗೆ ಕರಗಿಹೋಗು ನಿನ್ನಂತೆ ನೀನಾಗು ನೀರಂತೆ ನೀ ಸಾಗು.

- ಚುಕ್ಕಿ

20 Jan 2019, 04:22 pm

ಗೆಳತಿ

ಸ್ವಲ್ಪ ಕೋಪ, ಜಾಸ್ತಿ ತರಲೆ,
ಮುದ್ದು ಮನಸಿನ ಮುಗ್ದ ಹುಡುಗಿ
ಇವಳ ಕಂಡರೆ ಯಾರಿಗಿಲ್ಲ ಮನಸ್ತಾಪ
ನಗುಮನಸಿನ ಸುಂದರ ಈ ಪುಡುಗಿ

ಮನಸು ಮಗುತರ, ನಿರ್ಮಲ ಹೃದಯ ,
ಯಾರಿಗೂ ನೋಯಿಸಿಲ್ಲ ಹಿಂದೆಂದೂ
ಎಂದೂ ಮರೆಯೋದಿಲ್ಲ ಒಂದು ವಿಷಯ
ಕುಟುಂಬವನ್ನು ಬಿಟ್ಟುಕೊಡಲ್ಲ ಮುಂದೆಂದೂ!

ಸ್ನೇಹಕ್ಕೆ ಬೆಲೆಕೊಡುವಳು,ಪ್ರೀತಿಗೆ ತಲೆಬಾಗುವಳು
ಮಗುವಿನ ಜೊತೆ ಮಗುವಂತೆ ಆಡಬಲ್ಲಳು
ನಗುಮೊಗದಿ ಎಲ್ಲರೊಂದಿಗೆ ಒಂದಾಗುವಳು
ಸುಖ ದುಃಖದಲ್ಲಿ ಸಮಾನ ಭಾಗಿಯಾಗುವಳು!

ನೇರನುಡಿಯಿಂದ ಮನಸ್ಸು ಗೆದ್ದವಳು ನೀನು
ಸತ್ಯದ ಮಾರ್ಗದಲಿ ಗೆಲುವು ಎಂದೂ ನಿನ್ನದಿರಲಿ
ಕನಸುಗಳು ನನಸಾಗಲೆಂದು ಹಾರೈಸುವೆ ನಾನು
ನಮ್ಮಿಬ್ಬರ ಸ್ನೇಹದ ಹೂವು ಎಂದೂ ಬಾಡದಿರಲಿ!

- ಪ್ರಿಯಾಂಕ

20 Jan 2019, 12:59 pm

ಪ್ರಕೃತಿ ಮತ್ತು ಮನುಷ್ಯ.........??

ಕಪಟ ಮೋಸ ವಂಚನೆಯ ಆಸೆಯ ಸುಳಿಯಲ್ಲಿ ಕೆಟ್ಟದ್ದನ್ನು ಮಾಡುತ್ತಿರುವ ಓ ಮನುಷ್ಯನೇ
ಒಂದು ಸಾರಿ ನೀನ್ನ ಕಣ್ಣ ತೆರೆದು ನೋಡು ಮನುಷ್ಯನೇ ಆ ಪ್ರಕೃತಿಗೆ
ಯಾವುದೇ ತರಹದ
ಕಲಾಪ ಗಳಿಲ್ಲದೆ ಪ್ರತಿಬಿಂಬಿಸುತ್ತದೆ.....

"ವಿನೋದ್ ಕುಮಾರ್".........

- ವಿನೋದ್ಕುಮಾರ್

20 Jan 2019, 12:00 am

ಮನಸಿನ ವೇದನೆ......

ಮರೆತರು ಮರೆಯಲಾಗದ ನಿನ್ನ ಪ್ರೀತಿ
ಸುಟ್ಟರು ಸುಡದಿರುವ ಹಳೆ ನೆನಪುಗಳು
ಕೊಂದರೂ ಸಾಯದ ಈ ಹಾಳಾದ ಮನಸ್ಸಿನ ಭಾವನೆಗಳು
ಇದಕ್ಕೆಲ್ಲ ಕಾರಣ ನಿನ್ನ ಪ್ರೀತಿ
ಕೆಲವೊಮ್ಮೆ ಹೇಳದೆ ಕೇಳಿದೆ ಬಂದು ಹೋಗುವ ಪ್ರೀತಿಗೆ ಕಣ್ಣೀರಿನ ಪ್ರೀತಿನೆ ಶಾಶ್ವತ ನಾ.........?

"ವಿನೋದ್ ಕುಮಾರ್".......

- ವಿನೋದ್ಕುಮಾರ್

19 Jan 2019, 11:45 pm

ನೆನಪೆಂಬ ಪುಟದಿಂದ ಮರೆಯಲಿ ಹೇಗೆ ನಿನ್ನ

ಮನಸ್ಸಿನ ದೇವತೆ ನೀನು,ನನ್ನೊಂದಿಗೆ ಇನ್ನಿಲ್ಲ
ಈ ಜೀವಕ್ಕೆ ಸಂಗಾತಿ ನೀ ಇನ್ನೂ ನನಗಿಲ್ಲ
ಈ ಹೃದಯಕ್ಕೆ ಒಡತಿಯೂ ನೀನು ಎಂದೂ ನಂಬಿದೆ ನಾನು
ಈ ಜೀವದ ಭಾವನೆಗಳನ್ನು ತಲ್ಲಿಸಿದವಳು ನೀನು
ಒಬ್ಬಂಟಿ ಆಗಿರಬೇಕು ಜೀವಿಸಲು ಕಲಿಯಬೇಕು
ನೀ ನನ್ನ ಮರೆತಿರುವೆ ಅದನ್ನು ನೆನೆಸಿ ಕೊರಗಬೇಕು
ನೆನಪಿಸೋ ಮಾತೇ
ಇನ್ನಿಲ್ಲ ನಿನ್ನ ನೆನಪಲ್ಲಿ ಕೊರಗುವುದಿಲ್ಲ
ಪ್ರೀತಿ ಮಾಡಿದ ದಿನವ ಯೋಚಿಸಿ ನೀನು ಎಂದೂ ಅಳಬೇಕು
ನಾನು ನೀಡಿದ ಪ್ರೇಮಕ್ಕೆ ಬದಲು ನೋವೇ ನನಗಿನ್ನು ಸಾಕು
ದ್ವೇಷ ನನಗೆ ಇಲ್ಲ ನಿನ್ನಲ್ಲಿ ಕರುಣೆ ಅನ್ನೋದೆ ಇಲ್ಲ
ನಿನ್ನ ಮೋಸಕ್ಕೆ ಬಲಿಯಾದ ಪಾಪಿ ನಾನು ಇನ್ನೊಂದು ನಿನ್ನ ಮುಂದೆಯೇ ಸಾಧಿಸಿ ಬಾಳುವ ಆಸೆ ಇದೆ ಒಂದೂ
ಮರೆಯಬೇಕು ನಿನ್ನ ನಾನು ಮರೆತು ಜೀವನ ಕಳೆಯಬೇಕು ಇನ್ನೂ
ನಿನ್ನ ಕೈ ಹಿಡಿದು ನಡೆಸುವವನು ಭಾಗ್ಯವಂತನಿರಬೇಕು ಜೀವಿಸುವ ಕಾಲ ನೀನಿನ್ನು ಸುಖವಾಗಿ ಇದ್ದರೆ ಸಾಕು ನೋವು ನನಗಿರಲಿ ಖುಷಿಯು ನಿನ್ನ ಜೊತೆಗಿನ್ನು ಬರಲಿ
ನನ್ನೊಂದಿಗೆ ಕಳೆದ ದಿನವನ್ನು ಕನಸು ಎಂದು ನೆನೆಸು ವಿಧಿಯಾಟದಲ್ಲಿ ಬಲಿಯಾದನೆಂಬ ನೋಡಿ ಬದುಕಲೇ ಇನ್ನೂ

- ಎಸ್.ಬಿ

18 Jan 2019, 08:24 pm

ಚಿಗುರಿನ ಗೊಂಬೆ

ಅಮ್ಮನ ಮುದ್ದಿನ
ಚಿನ್ನದ ಗೊಂಬೆ!!
ಅಕ್ಕರೆಯ ಗೂಡಿನ
ಸಕ್ಕರೆ ಗೊಂಬೆ!!

ನಗುವಲ್ಲಿ ಮಲ್ಲಿಗೆಯ
ಅರಳಿಸುವ ಗೊಂಬೆ!!
ಅಳುವಲ್ಲಿ ಚಂದಿರನ
ಕರಗಿಸುವ ಗೊಂಬೆ!!

ಮೇಘ ವರ್ಣದ ಗಿರಿ
ತಾಣವು ಗೊಂಬೆ!!
ಹಂಸ ವರ್ಣದ ಸಿರಿ
ಪ್ರಾಣವು ಗೊಂಬೆ!!

ತಾಯಿಯ ಗರ್ಭದಿ
ಉದಿಸಿದ ಗೊಂಬೆ!!
ವಂಶ ಬಳ್ಳಿಯ ಕುಡಿ
ಚಿಗುರಿನ ಗೊಂಬೆ!!

- ಪಿ.ಜಿ.ಜ್ಯೋತಿ

18 Jan 2019, 04:00 pm

ಮರೆಯುವ ಹಾಗಿಲ್ಲ

ಮರೆಯುವ ಹಾಗಿಲ್ಲ
ನಿನ್ನನು ಮರೆಯುವ ಹಾಗಿಲ್ಲ!!
ನಿನ್ನೊಡನಾಡಿದ ಬಾಲ್ಯದ ಆ ದಿನ
ಮರೆಯುವ ಹಾಗಿಲ್ಲ!!

ಯರದೂ ಹಂಗಿಲ್ಲ
ಸ್ನೇಹಕೆ ಯಾರದೂ ಹಂಗಿಲ್ಲ!!
ಅಂಕೆ ಶಂಕೆಯೇ ಇಲ್ಲದ ಸ್ನೇಹವ
ಮೀರಿಸುವರು ಯಾರಿಲ್ಲ!!

ಕಳೆದಿಹ ನೆನಪಲ್ಲಿ
ಮಿಂದಿಹ ಖುಷಿ ಇಲ್ಲಿ!!
ಇಂದಿಗೂ ಎಂದಿಗೂ ಚಂದವು
ಆ ದಿನ ಮರೆಯುವ ಹಾಗಿಲ್ಲ!!

ಮೂರಕ್ಕೆ ಇಳಿದಿಲ್ಲ
ಆರಕ್ಕೂ ಏರಿಲ್ಲ!!
ಯಾರದೋ ಬೇಲಿ ಹಾರಿ ಓಡಿದ
ನೆನಪೂ ಮಾಸಿಲ್ಲ!!

ನಾಳೆಯ ಕನಸಿಗೂ ಅಂದು
ಸ್ಥಳವನು ಕೊಟ್ಟಿಲ್ಲ!!
ಬೆಟ್ಟ ಬಯಲು ಊರು ಕೇರಿ
ಸುತ್ತದ ಸ್ಥಳವಿಲ್ಲ!!

- ಪಿ.ಜಿ.ಜ್ಯೋತಿ

18 Jan 2019, 03:59 pm

ಸಂಕ್ರಾಂತಿ

ಉದಯ ಪಥ ಬದಲಿಸುವ ದಿನ
ಸಡಗರ- ಸಂಭ್ರಮದ ಕ್ಷಣ
ದನ-ಕರುಗಳೆಲ್ಲ ಹಿಗ್ಗಿ
ತಂದಿವೆ ನಮಗೆಲ್ಲ ಸುಗ್ಗಿ

ಅಂಗಳವ ಸಾರಿಸೋಣ
ತೋರಣವ ಕಟ್ಟೋಣ
ಗೋವುಗಳ ಸಿಂಗರಿಸೋಣ
ಅಗ್ನಿ ಸ್ಪರ್ಶ ಮಾಡಿಸೋಣ

ರಾಸುಗಳಿಗೆ ಈ ಹಬ್ಬ
ರಾಶಿಗಳ ಕಟ್ಟುವ ಹಬ್ಬ
ಬನ್ನಿ ಎಳ್ಳು-ಬೆಲ್ಲ ಮೆಲ್ಲುವ
ಕಬ್ಬಿನ ಜಳವೆ ಸವಿಯುವ
ಎಲ್ಲಾ ಕೂಡಿ ನಲಿಯುವ

ರೈತನೇ ಅನ್ನದ ಮೂಲ
ಗೋವುಗಳೆ ಅವನಿಗೆ ಬಲ
ಅವುಗಳಿಗೆ ವರುಷಕೊಂದೆ ಹಬ್ಬ
ಇದು ನಮ್ಮ ಸಂಸ್ಕ್ರತಿಯ ಪ್ರತಿಬಿಂಬ




ಶಾರದ

- ಶಕುಂತಲಾ

15 Jan 2019, 10:29 am