ಮನೆಯ ಕಸವನು ಎಲ್ಲೆಂದರಲ್ಲಿ ಎಸೆಯವ್ನೆ ಗಮಾರ
ಗಲೀಜು ಆಗಿರುವ ಪರಿಸರವನ್ನು ಸ್ವಚ್ಛ ಮಾಡವ್ನೆ ಪೌರ..
ಜಗ ಸ್ವಚ್ಛವಾದರೆ ರೋಗ ಬರದೆಂಬ ಮಾತು ನಿಜವಣ್ಣ
ಈ ಸ್ವಚ್ಛತೆಯೇ ಆರೋಗ್ಯ ತಿಳಿಯೋ ಮಂಕು ತಿಮ್ಮಣ್ಣ..||ಪ||
ಸುತ್ತಮುತ್ತಲಿನ ಕಸವನ್ನೆಲ್ಲ ಗುಡಿಸಬೇಕಣ್ಣ
ಬೀದಿಗೆ ಬರುವ ಕಸದಗಾಡಿಗೆ ಕಸವ ಹಾಕಣ್ಣ..
ಕಸ ಅನ್ನೋದು ನಮ್ಮಗಳಿಗೇನೆ ಹಾನಿ ನೋಡಣ್ಣ
ಗಾಂಧಿ ಕನಸು ನನಸು ಮಾಡೋದು ನೀನೆಕಣಣ್ಣ..
ನೀನಿದ್ದ ನಾಡಿಗೆ ಒಳ್ಳೇದು ಮಾಡಣ್ಣ
ಭೂತಾಯಿ ಒಡಲಿಗೆ ಕಸ ಎಂಬ ವಿಷ ಸುರಿಯಬೇಡಣ್ಣ..
ಜಗ ಸ್ವಚ್ಛವಾದರೆ ರೋಗ ಬರದೆಂಬ ಮಾತು ನಿಜವಣ್ಣ
ಈ ಸ್ವಚ್ಛತೆಯೇ ಆರೋಗ್ಯ ತಿಳಿಯೋ ಮಂಕು ತಿಮ್ಮಣ್ಣ..
ಪ್ಲಾಸ್ಟಿಕ್ ಚೀಲ ಬಳಸೋದಿಲ್ಲ ಎಂದು ಹೇಳಣ್ಣ
ಪರಿಸರವನ್ನು ರಕ್ಷಿಸೋನು ದೇಶಕೆ ಬೇಕಣ್ಣ..
ಕ್ರಿಮಿಕೀಟ ಹರಡೋದಿಲ್ಲ ಸ್ವಚ್ಛತೆ ಮಾಡಣ್ಣ
ಹಣವೇ ಬಾಳಿಗೆ ಮುಖ್ಯವಲ್ಲ ಆರೋಗ್ಯ ಮೇಲಣ್ಣ..
ಮಾಲಿನ್ಯ ತಡೆಯೋಕೆ ಮುನ್ನುಗ್ಗಿ ಬಾರಣ್ಣ
ನಿನ್ನ ದೇಹ ಮಣ್ಣಾದ್ರೂ ನಿನ್ನ ಹೆಸರು ಮರೆಯೋಲ್ಲ..
ಜಗ ಸ್ವಚ್ಛವಾದರೆ ರೋಗ ಬರದೆಂಬ ಮಾತು ನಿಜವಣ್ಣ
ಈ ಸ್ವಚ್ಛತೆಯೇ ಆರೋಗ್ಯ ತಿಳಿಯೋ ಮಂಕು ತಿಮ್ಮಣ್ಣ..
ಜಾರಿಗೆ ಬಂದಿತು ಭಾರತ ದೇಶದ ಸಂವಿಧಾನ
ಅಂದೇ ಕೊಟ್ಟಿತು ಪ್ರಜೆಗೆ ಪ್ರಭುವಿನ ಸ್ಥಾನಮಾನ..
ಜಾರಿಗೆ ಬಂದಿತು ಭಾರತ ದೇಶದ ಸಂವಿಧಾನ
ಪ್ರಜೆಗೆ ನೀಡಿತು ದೇಶದ ಆಡಳಿತ ನಡೆಸುವ ಮಾರ್ಗದರ್ಶನ..
ನನಸಾಯಿತು ಸ್ವಾತಂತ್ರ್ಯ ಹೋರಾಟಗಾರರ ತತ್ವಚಿಂತನ
ಅದಕೆ ಸಲ್ಲಿಸು ನೀನು ಸಂವಿಧಾನಕೆ ನಿತ್ಯನಮನ..||ಪ||
ರಾಜೇಂದ್ರ ಅಂಬೇಡ್ಕರ ಗಣ್ಯರ ಅವಿರತ ಪ್ರಯತ್ನ
ನಮ್ಮ ಸಂವಿಧಾನ ರಚನೆಗೆ ಪ್ರಮುಖ ಕಾರಣ..
ಓದಿದರು ನೂರಾರು ದೇಶಗಳ ಸಂವಿಧಾನ
ದೇಶಕೆ ಅನುಕೂಲವಾಗುವ ಸಂವಿಧಾನ ರಚಿಸುವ ಕಾರಣ..
ನಮ್ಮದು ಪ್ರಜಾಸತ್ತಾತ್ಮಕ ಗಣರಾಜ್ಯ ಎಂದ ಸಂವಿಧಾನ
ಇಲ್ಲಿ ಹಿಂದೂ ಮುಸ್ಲಿಂ ಎಲ್ಲರು ಸಮಾನ..
ಸಂಸದೀಯ ಸರ್ಕಾರ ಸಂವಿಧಾನದ ಪ್ರಮುಖ ಲಕ್ಷಣ
ಇಲ್ಲಿ ದೇಶದ ಮುಖ್ಯಸ್ಥನು ಆಯ್ಕೆಯಾಗಬೇಕು ಚುನಾವಣಾ ಮುಖೇನ..
ಕೇಂದ್ರ ರಾಜ್ಯಗಳಲಿ ಅಧಿಕಾರ ಹಂಚಿದ ನಮ್ಮ ಸಂವಿಧಾನ
ಇಲ್ಲಿ ನಡೆಯುವುದು ಬಹುಪಕ್ಷಗಳ ರಾಜಕಾರಣ..
ಮೂಲಭೂತ ಹಕ್ಕುಗಳ ನೀಡಿದ ನಮ್ಮ ಸಂವಿಧಾನ
ಇಲ್ಲಿ ದೇಶಕ್ಕಾಗಿ ದುಡಿವ ಕರ್ತವ್ಯ ಮಾಡು ಪ್ರತಿದಿನ..
ಕನಸೇ ಕನಸೇ ನನಸಾಗುವೆಯಾ!
ಮನಸೇ ಮನಸೇ ಮನದ
ಮಾತನು ಆಲಿಸೆಯಾ!
ಹೇಳಲು ನೂರಾರೂ
ಮಾತೊಂದಿದೆ
ಹೇಳಲು ಆಗದೆ ಈ ಜೀವ
ನರಳುತ್ತಿದೆ,,,!
ಕಾಡುತ್ತಿರೊ ನೂರಾರು ಪ್ರಶ್ನೆಗೆ
ಉತ್ತರ ನೀ ಹೇಳುವೆಯಾ...!
- ಹರಿಣಿ(ಹನಿ)
ಸ್ವಾರ್ಥಿಗಳು ಇವರು ಸ್ವಾರ್ಥಿಗಳು
ಹುಡುಗ ಹುಡುಗಿಯರಿವರು ಸ್ವಾರ್ಥಿಗಳು
ಹದಿಹರೆಯದ ವಯಸ್ಸಿನವರು
ಪ್ರೀತಿ ಪ್ರೇಮದಲಿ ಬಿದ್ದವರು
ಕುರುಡು ಪ್ರೀತಿಯಲಿ ತಿರುಗುವರು
ಜಗವ ಮರತೆ ನಿಂತವರೊ ಇವರು
ಸ್ವಾರ್ಥಿಗಳೊ ಇವರು ಸ್ವಾರ್ಥಿಗಳು
ಹುಚ್ಚು ಪ್ರೀತಿಯ ನಂಬಿದರು
ಅಪ್ಪ ಅಮ್ಮನ ಪ್ರೀತಿ ಮರೆತರು
ನೆನ್ನೆ ಮೊನ್ನೆ ಬಂದವರ ಕೈ ಹಿಡಿದರು
ಅವರ ಗುಂಗಲಿ ಇವರನ್ನು ಬಿಟ್ಟರು
ಸ್ವಾರ್ಥಿಗಳೊ ಇವರು ಸ್ವಾರ್ಥಿಗಳು
ಪ್ರೀತಿ ಕೈಕೊಟ್ಟಾಗ ಸ್ನೇಹಿತರು ನೆನಪಾದರು
ಅಪ್ಪ ಅಮ್ಮನೇ ಅವರಿಗೆ ದೇವರಾದರು
ಅದೆ ಪ್ರೀತಿ ಮತ್ತೆ ಸಿಕ್ಕಾಗ ಸ್ನೇಹಿತರನು ಮರೆತರು,
ಪ್ರೀತಿ ಒಪ್ಪದಿದ್ದಾಗ ಅಪ್ಪ ಅಮ್ಮನೇ ಶತ್ರುಗಳಾದರು
ಇಂತಹ ಸ್ವಾರ್ಥಿಗಳೊ ಇವರು ಸ್ವಾರ್ಥಿಗಳು
##ರಜನೀಶ##