ಮತ್ತೆ ಹುಟ್ಟಿ ಬನ್ನಿ ಓ ನನ್ನ ವೀರ ಯೋಧರೇ
ನಿಮ್ಮ ತ್ಯಾಗ ಬಲಿದಾನಕೆ ಕೋಟಿ ವಂದನೆ..
ಭರತಮಾತೆಯ ರಕ್ಷಣೆಗೆ ನೀವು ಇದ್ದರೆ
ಮಾತೆಯ ಮಕ್ಕಳಿಗೆ ಆಗ ನೆಮ್ಮದಿಯ ನಿದಿರೆ.|ಪ|
ನಾನು ನನ್ನದು ಎಂಬ ಆಸೆ ಸುಟ್ಟು ಹಾಕಿದೆ
ನನ್ನ ದೇಶ ನನ್ನ ಜನ ಎಂದು ಇಷ್ಟಪಟ್ಟು ಹೋರಾಡಿದೆ..
ದೇಶದ್ರೋಹಿಗಳ ಹುಟ್ಟಡಗಿಸಲು ದೇಹ ಚೂರಾದರೂ ಮುನ್ನುಗ್ಗಿದೆ
ರಾಷ್ಟ್ರಧ್ವಜವ ನೆಟ್ಟು ಜೈಹಿಂದ್ ಎನ್ನುತ ಮೆರೆದಾಡಿದೆ..
ಅನುಕ್ಷಣ ಹರುಷದಿಂದ ದೇಶ ಕಾಯುವೆ
ನರನಾಡಿಯಲ್ಲಿ ದೇಶಪ್ರೇಮ ಉಕ್ಕಿ ಹರಿಸುವೆ..
ಉಗ್ರಗಾಮಿ ಗಡಿ ದಾಟಿದರೆ ಸಮರ ಸಾರುವೆ..
ಮಾತೃಭೂಮಿಗಾಗಿ ಹೋರಾಡಿ ವೀರ ಮರಣ ಹೊಂದುವೆ..
ಭಾರತೀಯರ ಎದೆಯಲ್ಲಿ ಎಂದೆಂದು ಅಮರನಾಗುವೆ ಅಮರನಾಗುವೆ...
ಎದೆಗೆ ಎದೆಯೊಡ್ಡಿ
ವೈರಿಯ ರಕ್ತವ ಕುಡಿದ,
ಭಾರತಾಂಬೆಯ ಹೆಮ್ಮೆಯ
ಪುತ್ರರು ನಮ್ಮ ಸೈನಿಕರು.
ಕಾಶ್ಮೀರದ ಕಾದಾಟದಲ್ಲಿ
ಪ್ರಾಣ ಬಿಟ್ಟರು ನೆಲ ಬಿಡೇವು.
ಗುಂಡಿಗೆಯ ಗೂಡಿನಲ್ಲಿ
ಭಾರತಮಾತೆಯ ಸ್ಮರಿಸುವರು.
ಲೆಕ್ಕಕ್ಕೆ ಲೆಕ್ಕ ಚುಕ್ತಾ ಮಾಡಿ
ವೈರಿಯ ರುಂಡ ಚಂಡಾಡಿ,
ಉತ್ತರಕ್ಕೆ ಉತ್ತರವನಿಟ್ಟು
ಆರ್ಭಟಿಸುವ ನಮ್ಮ ಯೋಧರು.
ಪ್ರೀತಿಯಿಂದ ಬಂದರೆ
ಪ್ರಾಣ ಕೊಡುವರು.
ಬಂದು ನಕರಾ ಮಾಡಿದರೆ
ನಿಂಪ್ರಾಣನ ತುತ್ತಾಗಿ ಉಣ್ಣುವರು.
ಎರೆಡು ಕೆನ್ನಗೆ ಹೊಡಿಸಿಕೊಳ್ಳಲು
ಇದು ಗಾಂಧಿ ಕಾಲವೇನಲ್ಲ.
ಪ್ರಾಣಕ್ಕೆ ಲೆಕ್ಕ ಪ್ರಾಣವೇ ಬೇಕೆನ್ನುವ
ಕ್ರಾಂತಿಕಾರಿ ಪಡೆಯಂತೆ ನಮ್ಮ ಸೈನಿಕರು.
ಎಷ್ಟೋಂದು ಬ್ಯೂಟಿಫುಲ್ ನನ್ನ ಬುಲ್ ಬುಲ್
ನಿನ್ನ ಮುಂದೆ ಎಲ್ಲಾ ಹುಡುಗಿರೂ ನಿಲ್..
ನೀನು ನಕ್ಕರೆ ಮೂಡುತ್ತೆ ಕೆನ್ನೆಲಿ ಬೆಳದಿಂಗಳಂಥ ಡಿಂಪಲ್
ನಿನ್ನ ಅಕ್ಕರೆ ತರುತ್ತೆ ನನ್ನ ಬದುಕಲ್ಲಿ ಪವರ್ ಫುಲ್..
ನೀನು ನನಗಾಗಿ ಧರೆಗಿಳಿದ ಲವ್ಲೀ ಲವ್ಲೀ ಏಂಜಲ್
ನೀನಿದ್ರೆ ಯಾವಾಗ್ಲೂ ಈ ಲೈಫು ವಂಡರ್ಫುಲ್.|ಪ|
ನೀನೊಂದು ಸ್ನೇಹದ ಕಡಲು
ತುಂಬಿದೆ ಈ ಹೃದಯದಲ್ಲಿ ಒಲುಮೆಯ ಅಮಲು..
ನೀನೇ ನನ್ನ ಬಾಳಿಗೆ ಎಲ್ಲದಕ್ಕೂ ಮೊದಲು
ನಿನ್ನ ಬಿಟ್ಟು ಬೇರೆ ಇಲ್ಲ ನನಗೆ ಬಾಳಲು..
ಎಂದೆಂದೂ ನೀನು ಜೊತೆಯಾಗಿ ಇರಲು
ಎದುರಾರೇನು ಎಂಥ ಸವಾಲು..
ಈ ಬಾಳಿಗೆ ನೀನಾದೆ ಸುಂದರ ಪ್ರೇಮ ಕವನ
ನಿನಗಾಗಿ ಬರೆಯುವೆನು ಪುಟಪುಟದಲಿ ನಗುವನ್ನ..
ಜೋಡಿಹಕ್ಕಿಯಾಗಿ ನಾವು ಒಲವಿನ ಲೋಕಕೆ ಹಾರೋಣ
ಅಲ್ಲಿ ನಾನೇ ರಾಜ ನೀನೇ ರಾಣಿ ಆಗೋಣ..
ನೀನಿದ್ದರೆ ಅನುದಿನ ಅನುಕ್ಷಣ ಈ ಜೀವನ
ಮಧುರ ಮಧುರ ಮಂಜುಳಾ ಗಾನ..
ನೋವಲ್ಲೂ ನಲಿವಲ್ಲೂ ಇಡೀ ದಿನ
ಹಂಬಲಿಸಿದೆ ಮನ
ಕಾಡುತಿಹ ನೋವಿಗೆ ನೆನಪೆಂಬ
ಪ್ರಶ್ನೆಗಳ ಸಮಾಗಮ!
ನಿನ್ನೊಲವ ಬಯಸುವ ಮನಸ್ಸಿಂದು
ನಿನ್ನನ್ನೆ ನೆನೆದು ಕುಳಿತಿದೆಯಿಂದು
ಮನಸ್ಸಿನಾ ಕನಸೆಲ್ಲವು
ಕಣ್ಣಲ್ಲೆ ನೀರಾಯಿತು ಇಂದು
ಒರೆಸುವಾ ಸಂತೈಸುವಾ ಮನಸ್ಸು
ದೂರವಾಯಿತು...
ಜೊತೆಯಿದ್ದರು, ಇರದಂತೆ ನಟಿಸಿದರು
ಕಾಣುವಾ ಕಲ್ಪನೆ ನಿನದೊಂದೆನೆ
ಒಪ್ಪುಗೆಯಾ ಅಪ್ಪುಗೆಯಾ ಕನಸ್ಸೆಲ್ಲಾ
ಹೇಳಲು ಆಗದ ವೇದನೆ
ಜೊತೆಯಾಗುವುದು,ಒಂದಾಗುವುದು
ಮನಸ್ಸಿನ ಎಲ್ಲಾ ಕಲ್ಪನೆ...