ಹತ್ತರ ಪ್ರೀತಿಯ ಮಕ್ಕಳೇ
ಹತ್ತಿರ ಬಂತು ಪರೀಕ್ಷೆ
ದೂರ ತಳ್ಳಿಬಿಡಿ ಹೆದರಿಕೆ
ಧೈರ್ಯ ತುಂಬಿಕೊಳ್ಳಿ ಹೃದಯಕೆ..
ಹತ್ತರ ಪ್ರೀತಿಯ ಮಕ್ಕಳೇ
ಪರೀಕ್ಷೆ ಒಂದು ಹಬ್ಬದಂತೆ
ಓದುಬರಹವೇ ಪೂಜಿಸುವ ದೇವರುಗಳು
ವಿಷಯಗಳೇ ಹಬ್ಬದ ಸಾಮಾನುಗಳು
ಪ್ರಶ್ನೋತ್ತರಗಳೇ ಹಬ್ಬದ ಅಡುಗೆಗಳು
ಸಂಭ್ರಮದಿಂದ ಸಿದ್ಧಗೊಳ್ಳಿ ನೀವುಗಳು..
ಅನ್ನಬೇಡಿ ಗಣಿತ ಕಷ್ಟ ಅಂತ
ಏಕೆಂದರೆ ಸೊನ್ನೆ ಕಂಡುಹಿಡಿದಿದ್ದೇ ಭಾರತ..
ಹೋಗದಿರಲಿ ಸುತ್ತಮುತ್ತ
ಲೆಕ್ಕ ಮಾಡುವಾಗ ನಿಮ್ಮ ಚಿತ್ತ..
ಆಗ ನೋಡಿ ಗಣಿತ
ಎಲ್ಲಕ್ಕಿಂತ ಸುಲಲಿತ..
ಅಯ್ಯೋ ವಿಜ್ಞಾನ
ಪ್ರಶ್ನೆಗಳು ವಿಭಿನ್ನ
ತಿನ್ನುತ್ತವೆ ತಲೆಯನ್ನ
ಅನ್ನಬೇಡಿ ಮಕ್ಕಳೇ..
ಪುಟಪುಟ ತುಂಬಿಸಿ ಚಿತ್ರಗಳನ್ನ
ಪ್ರಯೋಗ ಮಾಡಿ ದಿನ ದಿನ
ಚರ್ಚೆ ಮಾಡಿ ಅನುಕ್ಷಣ
ಆಗ ನೋಡಿ ವಿಜ್ಞಾನ
ನಿಮ್ಮ ಮನದೊಳಗೆ ಸಂಪೂರ್ಣ ಜೀರ್ಣ....
ಎಲ್ಲರು ಹೇಳುವಂತೆ ಸಮಾಜ
ಅತಿ ಸರಳ ಸುಲಭ ನಿಜ
ಹಾಗಂತ ಸಮಾಜಕ್ಕೆ ಹಾಕಿದರೆ ರಜಾ
ನಿಮಗೆ ಸಿಗೋದಿಲ್ಲ ಡಿಸ್ಟಿಂಕ್ಷನ್ನಿನ ಮಜಾ....
ಪದ್ಯಗದ್ಯ ವ್ಯಾಕರಣ ಪತ್ರಲೇಖನ ಒಳಗೊಂಡ
ಭಾಷೆಗಳಾದ ಹಿಂದಿ ಇಂಗ್ಲೀಷ್ ಕನ್ನಡ
ಕಲಿತರೆ ಸುಲಭವಾಗಿ ಅಂಕಗಳು ನಿಮ್ಮ ಸಂಗಡ...
ಎಷ್ಟು ಓದುತ್ತೀರೋ
ಅಷ್ಟು ಓಳ್ಳೇಯದು
ಎಷ್ಟು ಬರೆಯುತ್ತೀರೋ
ಅಷ್ಟು ಮರೆಯದು....
ಎಷ್ಟು ಲೆಕ್ಕ ಬಿಡಿಸುತ್ತೀರೋ
ಅಷ್ಟು ಪಕ್ಕ ಆಗುತ್ತೀರಾ
ಎಷ್ಟು ಚೊಕ್ಕ ಚಿತ್ರ ರಚಿಸುತ್ತೀರೋ
ಅಷ್ಟು ಅಂಕ ಪೂರ ಗಳಿಸುತ್ತೀರಾ...
ಹೇಳಿದ್ದನ್ನು ಮನೆಯಲಿ ಚೆನ್ನಾಗಿ
ಕಲಿತುಕೊಂಡು ಬನ್ನಿ
ಕಲಿತಿದ್ದನ್ನು ಶಾಲೆಯಲಿ ತುರ್ತಾಗಿ
ಬರೆದುಕೊಂಡು ತನ್ನಿ...
ಪರೀಕ್ಷಾ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ
ಪೌಷ್ಟಿಕ ಆಹಾರ ಸೇವಿಸಿ
ನಿರೀಕ್ಷಾ ಅಂಕ ಗಳಿಸುವುದಕ್ಕೆ ಶಿಕ್ಷಕರು
ಹೇಳಿದ ವೇಳಾಪಟ್ಟಿ ಅನುಸರಿಸಿ.....
ಪರೀಕ್ಷೆ ಮುಗಿಯುವತನಕ
ಟಿವಿ ಮೊಬೈಲ್ ನೋಡಬೇಡಿ..
ಪ್ರಶ್ನೋತ್ತರ ಕಲಿಯುವತನಕ
ಪೆನ್ನು ಪುಸ್ತಕ ಬಿಡಬೇಡಿ...
ನಿತ್ಯ ಆಟದ ಅಂಕಣಕ್ಕೆ ಭೇಟಿಕೊಡಬೇಡಿ
ಆಗ ಓಳ್ಳೇಯ ಅಂಕಪಟ್ಟಿ ನಿಮ್ಮದು ನೋಡಿ..
ಇಷ್ಟದ ಪ್ರಶ್ನೆಗಳಿಗೆ ಮೊದಲು ಆದ್ಯತೆ ನೀಡಿ
ಕಷ್ಟದ ಉತ್ತರಗಳಿಗೆ ಆಮೇಲೂ ಚಿಂತೆ ಮಾಡಿ...
ಎಲ್ಲ ಪ್ರಶ್ನೆಗಳನ್ನು ಅಟೆಂಡ್ ಮಾಡುವುದನ್ನು ಮರೆಯದಿರಿ
ನಿಮ್ಮ ಅಕ್ಷರಗಳನ್ನು ದುಂಡಾಗ್ ಬರೆಯುವುದನ್ನು
ತಪ್ಪದಿರಿ
ಹತ್ತರ ಪ್ರೀತಿಯ ಮಕ್ಕಳೇ
ಸದುಪಯೋಗಪಡಿಸಿಕೊಳ್ಳಿ ಇರುವ ವೇಳೆ
ಆಗ ನಿಮ್ಮದು ನೋಡಿ ಸುಂದರವಾದ ನಾಳೆ...
ಹತ್ತರ ಪ್ರೀತಿಯ ಮಕ್ಕಳೇ
ಎತ್ತರವಾಗಿ ಯೋಚಿಸಿರಿ
ಹೆಮ್ಮರದಂತೆ ಬಾಳಿರಿ.........
"ಜೈ ಜವಾನ್"
ದೇಶಕ್ಕಾಗಿ ದುಡಿವ ಯೋಧ ನಿನಗೆ
ಕೋಟಿ ಕೋಟಿ ವಂದನೆ.
ಭಾರತಾಂಬೆಯ ಉಳಿವಿಗಾಗಿ ಪ್ರಾಣತ್ಯಾಗ ಮಾಡಲೊರಟು ಕೆಚ್ಚೆದೆಯಿಂದ ಹೋರಾಡುವ
ಯೋಧ ನಿನಗೆ ವಂದನೆ
"ಕೋಟಿ ಕೋಟಿ ವಂದನೆ"
ಹೆತ್ತು ಹೊತ್ತು ಬೆಳೆಸಿದವರ ಬಿಟ್ಟು
ಒಡ ಹುಟ್ಟಿದವರಿಗೆ ಎಲ್ಲಾ ಕೊಟ್ಟು
ಹೆಂಡತಿಗೆ ಸ್ವಲ್ಪ ಪ್ರೀತಿ ಕೊಟ್ಟು
ಅಸುಗೂಸನ್ನ ಮಡದಿಯ ಮಡಿಲಿಗೆ ಇಟ್ಟು ದೇಶದ ಉಳಿವಿಗೆ ಪಣವ ತೊಟ್ಟು
ಪ್ರಾಣದ ಹಂಗನ್ನು ಬಿಟ್ಟು ಹೋರಾಡುವ ಯೋಧ ನಿನಗೆ ಕೋಟಿ ಕೋಟಿ ವಂದನೆ.
ಹೆತ್ತವ್ವನ ಕೈ ತುತ್ತ ಬಿಟ್ಟು, ಮಡದಿಯ ಪ್ರೀತಿ ಮಮತೆಯ ಊಟ ಬಿಟ್ಟು ರಾತ್ರಿ ಹಗಲೆನ್ನದೆ ನಿದ್ರೆ ಬಿಟ್ಟು ಶ್ರಮ ಪಟ್ಟು ಭಾರತಾಂಬೆಯ ಕೊಟ್ಯಾಂತರ ಮಕ್ಕಳಿಗೆ ರಕ್ಷಣೆ ಕೊಡುವ ಯೋಧ ನಿನಗೆ
"ಕೋಟಿ ಕೋಟಿ ವಂದನೆ"
ಅವಳ ಮೇಲೆ ಬರೆದರು ಕವನ
ಕೊಡಲಿಲ್ಲ ನನ್ನ ಮೇಲೆ ಗಮನ
ಕಟ್ಟಿಸೋಣ ಅಂತಿದ್ದೆ ಅವಳ ಹೆಸರಲೀ ಉದ್ಯನವನ
ನನಾಗ್ಯಕೋ ಅವಳು ನನ್ನ ಒಪ್ಪುವುದೇ ಅನುಮಾನ
ಯಾವುದಕ್ಕು ನೋಡಿ ಕೊಳ್ತೀನಿ ಬೇರೆ ಹುಡುಗೀನ
ಓ ವೀರ ಯೋಧನೇ
ಓ ಶೂರ ಯೋಧನೇ
ನಿನಗೆ ಕೋಟಿ ವಂದನೆ..
ಓ ವೀರ ಯೋಧನೇ
ಓ ಶೂರ ಯೋಧನೇ
ನಿನಗೆ ಕೋಟಿ ವಂದನೆ..
ನಿನ್ನ ತ್ಯಾಗ ಬಲಿದಾನ
ಮರೆಯದು ಎಂದು ಹಿಂದೂಸ್ಥಾನ..
ನಿನ್ನ ಕೆಚ್ಚೆದೆಯ ದೇಶಾಭಿಮಾನ
ಭಾರತೀಯರಿಗೆ ಎಂದೆಂದು ಸುಖಜೀವನ..||ಪ||
ನಿನ್ನವರನ್ನು ಬಿಟ್ಟು ಹೊರಟೆ ಗಡಿಯತ್ತ
ಜೈಹಿಂದ್ ಎಂಬುದೊಂದೇ ನಿನ್ನ ಎದೆಬಡಿತ..
ಕಟ್ಟಿ ಎಸೆದೆ ನಿನ್ನ ಭವ್ಯ ಭವಿಷ್ಯವನ್ನಾ
ಮೇರಾ ಭಾರತ್ ಮಹಾನ್ ಅಂದೆ ಕ್ಷಣ ಕ್ಷಣ..
ಘೋರ ಕದನಕೆ ನೀನು ಸದಾ ಸನ್ನದ್ಧ
ಹೆಮ್ಮೆಯಿಂದ ಬೀಗುವೆ ವೀರಮರಣದಿಂದ..
ನಿನ್ನ ಉಸಿರು ಭಾರತ
ನಿನ್ನ ಹೆಸರು ಶಾಶ್ವತ..
ದ್ರೋಹಿಗಳ ದಂಡು ಧ್ವಂಸ ಮಾಡುವ ಗಂಡು..
ಬಾಂಬ್ ಸಿಡಿಯಲಿ ಗುಂಡಿಗೆ ಹಾರಲಿ
ರಣರಂಗದಲಿ ನೀನು ಉಕ್ಕಿನ ಮನುಷ..
ನೆತ್ತರು ಸುರಿಯಲಿ ಉಸಿರು ಹೋಗಲಿ
ಮಾಡೆ ತೀರುವೆ ಉಗ್ರರನ್ನು ಸರ್ವನಾಶ..
ತ್ರಿವರ್ಣಧ್ವಜ ಹಾರಿದಾಗಲೇ ನಿನಗೆ ಹರುಷ..
ನಿನ್ನ ಉಸಿರು ಭಾರತ
ನಿನ್ನ ಹೆಸರು ಶಾಶ್ವತ...
ಓ ನನ್ನ ವೀರ ಯೋಧ ಮತ್ತೆ ಹುಟ್ಟಿ ಬಾರೋ
ನೀನೆ ಈ ದೇಶದ ನಿಜವಾದ ಹೀರೋ...
ನೀನೀದ್ದರೇನೆ ದೇಶದ ಜನತೆ ಕ್ಷೇಮಕುಶಲಂ
ನಿನ್ನ ತ್ಯಾಗ ಬಲಿದಾನಕೆ ಕೋಟಿ ಕೋಟಿ ಸಲಾಂ|ಪ|
ಬಿಟ್ಟು ಬಂದೆ ನಿನ್ನ ಕುಟುಂಬ
ಬೆಳೆಸಿಕೊಂಡೆ ದೇಶಭಕ್ತಿ ನರನಾಡಿಯ ತುಂಬ..
ಉಗ್ರರ ಸಂಹಾರ ನಿನಗೊಂದು ಸಮಾರಂಭ
ವೀರಮರಣ ಹೊಂದುವುದು ನಿನಗೆ ಮಹಾನ್ ಹಬ್ಬ..
ತಾಯ್ನಾಡಿಗಾಗಿ ಒತ್ತೆ ಇಟ್ಟೆ ಹಣೆಬರಹ
ಸಹಿಸೋದಿಲ್ಲ ನೀನು ದೇಶದ್ರೋಹ..
ಉಕ್ಕಿನ ಕವಚ ನಿನ್ನ ದೇಹ
ಮಳೆ ಬಿಸಿಲು ಚಳಿಯಲ್ಲೂ ಸೋಲದ ಉತ್ಸಾಹ..
ಘರ್ಜಿಸುವೆ ಮುನ್ನುಗ್ಗುವೆ ಸಿಂಹದ ತರಹ..
ನಿನ್ನ ಆರ್ಭಟಕೆ ನುಚ್ಚುನೂರು ಉಗ್ರರು
ಹೋರಾಡುವೆ ನೆತ್ತರು ಸುರಿದರೂ ದೇಹ ಛಿದ್ರ ಛಿದ್ರವಾದರೂ
ವಿಜಯ ಪತಾಕೆ ಹಾರಿಸಿ ಹೆಮ್ಮೆಯಿಂದ ನಿಲ್ಲಿಸುವೆ ನಿನ್ನ ಉಸಿರು..
ನಮ್ಮೆದೆಯಲ್ಲಿ ಎಂದೆಂದು ಅಮರ ನಿನ್ನ ಹೆಸರು..