Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮಲ್ಲಿಗೆ ಮದರಂಗಿಲಿ ಕೆಂಪಾಗಿ ಅರಸಿತು ಸುಗಂಧರಾಜನ,
ಮಿಂಚಿನ ಬೆಳಕಲಿ ಕಣ್ಮುಚ್ಚಿ ಹುಡುಕುವೆ ನಿ ಸಿಗೋ ತನ.
ಸಂಪಿಗೆ ಧಮಲು ಸೆಳೆಯಿತು ಹುಣ್ಣಿಮೆಯಲಿ ಹೊಳೆಯೋ ಸಾಮ್ರಾಟನನ್ನ,
ಬಿರಿದ ನೈದಿಲೆ ನಾಟ್ಯಧಿ ತಬ್ಬಿತು ಮಧುವ ಹೀರೋ ಭ್ರಮರವನ್ನ.
ನಾಗಲೋಕದ ಪುಷ್ಪಗಳ ಪುಟ್ಟಜೋಡಿಗೆ ಪ್ರಕೃತಿ ಬೆಳಗಿತು ಆರತಿ,
ಮುಳ್ಳಲ್ಲಿ ನಗುವ ಗುಲಾಬಿಯಂತೆ ಗೂಡಲ್ಲಿರುವ ಪ್ರೀತಿ.
ಭಾವದೆಲೆಗಳ ಪೋಣಿಸಿ ಅರ್ಪಿಸಿದೆ ಭೀಮನ ಪ್ರಾರ್ಥಿಸಿ,
ನಮ್ರತೆಗೆ ಮನ ಬೆರೆಯಿತು, ಸೋಮರಸವನ್ನು ಲೇಪಿಸಿ.
ಜೇನ ಹನಿಯ ಕಡಲಲ್ಲಿ ಮುಳುಗಿದೆ ಸುಮದ ದಂಡು,
ಬೆಳಕು ಬಯಸದ ರಾತ್ರಿ ರಾಣಿ ಬೆಳದಿಂಗಳೊಂದೆ ಸಾಕೆಂದಿದೆ ಸಿಹಿಯನ್ಉಂಡು.
ಸಪ್ತ ವಾರವು ಜಪಿಸೋ ಮಂತ್ರ,
ಬಿಡದೆ ಶಿವನ ಮೂಡಿ ಸೇರೋ ಅಸ್ತ್ರ.
ತೇಲೋ ಮೋಡದ ಹಾಗೆ ಹೂಗಳ ಮನದಿ ಮೊಧವಿರಲಿ,
ಓಡುವ ಕಾಲದ ನೆನಪುಗಳು ಶ್ರೀಗಂಧದಂತಿರಲಿ.
ಮಾಸದು ಮಮತೆ
ಕರಗೋ ಸಂಜೆಯಂತೆ,
ಶುದ್ಧವಾದ ಸ್ನೇಹ
ನೊರೆ ಹಾಲಂತೆ.
- nagamani Kanaka
05 Apr 2025, 03:56 pm
ಕಿಟಕಿ ಇರದ ಗೂಡಿಗೆ ಕನ್ನಡಿಯಾದವರು,
ಸಫಲತೆಯ ದಾರಿಗೆ ಜ್ಞಾನದ ಬೆಳಕಾದರು.
ಹಿಂಜರಿಕೆ ದುಗುಡವ ದೂರ ಸರಿಸಿದವರೂ,
ಪ್ರತ್ಯಕ್ಷ ನಡೆಗೆ ಧೈರ್ಯ ತುಂಬಿದರು.
ಮೊಗ್ಗಿನ ಮನಸ್ಸಿಗೆ ಮೌಲ್ಯಾಮೃತ ಹರಿಸಿದವರು,
ಸನ್ಮಾರ್ಗವ ಪರಿಪಾಲಿಸೋ
ಶಿಶುವ ಕಂಡು ಖುಷಿ ಪಟ್ಟರು.
ನಿಸ್ವಾರ್ಥ ಸೇವೆಗೆ ಹೆಸರಾದವರು,
ಪ್ರಾಮಾಣಿಕ ಕೃತಿಗೆ ಸ್ಫೂರ್ತಿ ತುಂಬಿದರು.
ಸಂಸಾರದ ನಿರ್ವಹಣೆಗೆ ಮಾರ್ಗದರ್ಶಕರಾದವರು,
ಸಂಬಂಧದ ಸೇತುವೆ ಕಳಚದಂತೆ ಸಹಕರಿಸುತ್ತಿರುವರು.
ಸೋತಾಗ ಬೈಯದೆ ಬುದ್ಧಿ ಹೇಳಿದವರು,
ಗೆದ್ದಾಗ ಹೃದಯ ತುಂಬಿ ಆಶೀರ್ವದಿಸಿದರು.
ಅಂತರಂಗದ ಅಧ್ಯಯನ ಮಾಡಿದವರು,
ಉನ್ನತ ವಿದ್ಯೆಗೆ ಗುರುವಾದರೂ.
ವೇದಿಕೆಯ ಮಾತುಗಳಿಗೆ ಪ್ರೇರಣೆ ನೀಡಿದವರು,
ಎತ್ತರದ ಸ್ಥಾನದಲ್ಲಿ ನೋಡಲು ಬಯಸಿದರು.
ಜಿಗುಪ್ಸೆಯ ಜೋಗಿಯನ್ನು ವಾತ್ಸಲ್ಯದಿ ಪೊರೆದವರು,
ಪ್ರಪಂಚವ ಮರೆವಷ್ಟು ಪ್ರೀತಿಸಿದರು.
ಬಚ್ಚಿಡುವ ಮುತ್ತಂತೆ ಜೊತೆಯಾದವರು,
ನೆತ್ತರ ಕಣ ಕಣದ ಸ್ಮರಣೆಯಲ್ಲಿ ಬೆರೆತರು.
ಧನ್ಯತೆಯ ಜೀವನಕ್ಕೆ ಸಾಕ್ಷಿಯಾದವರು,
ಪುಟಿಯುವ ಭಾವಕೆ ಸಂಜೀವಿನಿಯಾದರೂ.
ನಾಲಿಗೆ ಮಲಗುವ ತನಕ ನುಡಿಯ ಸಾಲಿಗೆ ಸಾಹುಕಾರರು,
ಪ್ರಬುದ್ಧ ಸಮಾಜಕ್ಕೆ ಇವರೇ ಸದೃಶ ದೇವರು.
- nagamani Kanaka
05 Apr 2025, 03:49 pm
ಬರೆಯುವೆ ಮನತೋಚಿದ ಹಾಗೆ
ಸಾಹಿತ್ಯವೋ ಕವನವೋ
ಗೋತ್ತಿಲ್ಲ ನನಗೆ..
ಸಾಹಿತ್ಯವಾದರೆ ನೀನೇ ಅದರ ಗಾಯಕಿ
ಈ ಕವಿಯ ಕವನ ಕೇಳದೆ
ನೀನಾದೆ, ಯಾರಿಗೋ ನಾಯಕಿ
ಇದಕ್ಕೆಲ್ಲಾ ಕಾರಣ ನೀನೇ
ನೀ ಎದುರಾದರೆ ಈಗಲೂ ಮೀಟಿದಂತೆ
ನನ್ನ ಹೃದಯದ ವೀಣೆ....
ಎಮ್.ಎಸ್.ಭೋವಿ...✍️
.
.
- mani_s_bhovi
04 Apr 2025, 06:31 pm
"ಇಲ್ಲಿ ಕೆಲವರ ಮೇಲೆ ಪ್ರೀತಿ
ಕೆಲವರ ಮೇಲೆ ಸಿಟ್ಟು,
ಕೆಲವರ ಮೇಲೆ ಕಾಮ,ಮೋಹ,
ಇತ್ಯಾದಿಗಳೆಲ್ಲ ನಾ ಕಂಡಾಗ
ನನಗೆ ತಿಳಿದಿದ್ದು (ಅನಿಸಿದ್ದು)
ಈ ಪ್ರಪಂಚದಲ್ಲಿ ಇಲ್ಲಾದಕ್ಕಿಂತ
ಅತಿವೇಗವಾಗಿ ಬದಲಾಗುವುದು
ಮನುಷ್ಯನ ಮನಸ್ಸು, ಆಲೋಚನೆಗಳು
ಮಾತ್ರ.. ಇದು ಹುಚ್ಚು ಮನಸಿನ ಹತ್ತು
ಮುಖಗಳು"..!
-ಎ.ಆರ್.ರಾಹುಲ್
- ?.?.?????.
04 Apr 2025, 07:57 am
"ನಾ ಕಾಯುತ್ತಿದೆ ಅವಳಿಗಾಗಿ
ಶಬರಿಯಂತೆ
ನೀ ಸಿಗಬೇಕ್ಕಿತ್ತು ನನಗೆ
ಸೀತೆಯಂತೆ
ಆದರೆ ನಿನ್ನ ಗಂಡ ನಿನ್ನ ಹೊತ್ವೈದ
ರಾವಣನಂತೆ...
ಯುದ್ಧ ಮಾಡಿ ನಿನ್ನ ಪಡೆಯಬೇಕು
ಅಂದ್ರೆ ಇದು
ರಾಮಾಯಣ ಅಲ್ಲ
ನಿಜ ಜೀವನ"....!
-ಎ.ಆರ್.ರಾಹುಲ್..
- ?.?.?????.
04 Apr 2025, 07:56 am
"ಹೆಣ್ಣನ್ನು ಊಹಿಸಿ
ರಾಮಾಯಣ ಬರೆದರೂ
ಹೆಣ್ಣನ್ನು ಬಣ್ಣಿಸಿ
ಮಾಹಾಭಾರತವನ್ನು ಬರೆದರೂ
ಹೆಣ್ಣನ್ನು ಊಹಿಸಿ, ವರ್ಣಿಸಿ, ಬಣ್ಣಿಸಿ.
ಹಲವಾರು ಕವಿಗಳು ಕಥೆ,
ಕಾದಂಬರಿಗಳನ್ನು ಬರೆದರೂ..
ಆದರೆ ಹೆಣ್ಣಿನ ಹಕ್ಕುಗಳ
ಬಗ್ಗೆ ಬರೆದವರು..
ಡಾ//ಬಿ,ಆರ್,ಅಂಬೇಡ್ಕರ್...ಮಾತ್ರ"..!
- ?.?.?????.
04 Apr 2025, 07:55 am
ಶ್ರೇಷ್ಠ -ಕನಿಷ್ಠದ ನೋವು ತಿಂದವರು
ಕನಿಷ್ಠದ ಅನಿಷ್ಟಕೆ "ಕಾವು" ಕೊಟ್ಟವರು
ಮಾನ-ಅಪಮಾನದ ಅಂಚಲ್ಲಿ ಬೆಂದವರು
ಅಪಮಾನದ ಕಂಚಿಗೆ "ಧೈರ್ಯ"ದ ನೀರು ಎರೆದವರು
ಹಸಿವು-ಬಡತನದ ಬ್ಯಾನಿಯ ತಿಂದವರು
ಬಡತನದ ಬ್ಯಾನಿಗೆ "ಅಕ್ಷರ"ದ ಮಾತ್ರೆ ನುಂಗಿದವರು
ಹೊಂಚು-ಸಂಚಿನ ಭಂಡತನಕೆ ಬಳಲಿದವರು
ಸಂಚಿನ ಡೋಂಗಿಗೆ "ಸಾಹಸ"ದ ತೀರ್ಥ ಕುಡಿಸಿದವರು
ಮಣ್ಣು-ಹೆಣ್ಣಿನ ಗೋಳನು ಕಣ್ಣಾರೆ ಕಂಡವರು
ಹೆಣ್ಣಿನ ಬಾಳಿಗೆ ಮಣ್ಣಿನ "ಋಣ"ವ ತೀರಿಸಿದವರು
ಪರಿಸರ-ಪ್ರಕೃತಿಯು ಕೆಲವರಿಗೇ ಯಾಕೆ? ಅಂದವರು
ಪ್ರಕೃತಿಯ ಸಂಸ್ಕೃತಿಯು "ಎಲ್ಲರಿಗೂ" ಎಂದವರು
ರೂಪಾಯಿ-ನೋಟಿನ ವಯ್ಯಾರ ನೋಡಿದವರು
ನೋಟಿನ ಸಿಂಗಾರದ ಪ್ಲೇಟಿಗೆ ಕಪಾಟು ಬಡಿಸಿದವರು
ಛಿದ್ರ -ಭದ್ರತೆಗೆ ಪೆನ್ನಿನ ಇಂಕನು ಸವಸಿದವರು
ಭದ್ರತೆಗೆ ಗೀಚಿದ ಪೆನ್ನಿಗೆ "ಮಸಿ"ಯ ಹಚ್ಚದವರು
ಸುಗ್ಗಿ..
- ಆರ್. ಎಸ್ .ಸುಗ್ಗಿ
03 Apr 2025, 08:45 pm
ಅರ್ಥಯಿಸಿಕ್ಕೊಳ್ಳವವಳು ಬೇಕು,,
ಅರ್ದಕ್ಕೆ ಬಿಟ್ಟು ಹೋಗುವವಳಲ್ಲ...!
ಸಹಿಸಿಕೊಳ್ಳವವಳು ಬೇಕು,,
ಸಮಯ ನೋಡಿ ಸಾಧಿಸುವವಳಲ್ಲ...!
ತನು ಮನ ಸರ್ವಸ್ವವನ್ನು ಕೊಡುವವಳು ಬೇಕು,
ದುರಾಸೆಯ ದರ್ಪದವಳಲ್ಲ...!
ನಂಬಿಕೆ ನೀಡುವವಳು ಬೇಕು,
ನಾಟಕ ಆಡುವವಳಲ್ಲ...!
ತಾಯಿಯಂತೆ ನೋಡಿಕೊಳ್ಳವವಳು ಬೇಕು,,
ಹೆತ್ತವರನ್ನೇ ಹೊರಗಾಕುವಂತೆ ಹೇಳುವವಳಲ್ಲ...!
ಎಮ್.ಎಸ್.ಭೋವಿ...✍️
.
.
- mani_s_bhovi
03 Apr 2025, 04:46 pm
ಬದುಕಿನಲ್ಲಿ ಬರುವರು
ಎಲ್ಲರು ಜೊತೆಗಿರುವವರು
ಕೆಲವರು ಬೆಳವಣಿಗೆ ಕಂಡಾಗ
ಉರಿದುಕೊಳ್ಳುವರು
ಅದನ್ನರಿತು ಬದಲಾಗಬೇಕಿದೆ
ನಾನೀಗ.
ದುಃಖದಲ್ಲಿದ್ದಾಗ ಸಂತೈಸುವವರಿಲ್ಲ
ಬಿದ್ದಾಗ ಮೇಲೇತ್ತುವವರಿಲ್ಲ
ಮುಖವಾಡಗಳ ಕಳಚಿ ಬದುಕುವವರಿಲ್ಲ
ಇದು ಇಂದಿನ ಜನರ ಜೀವನ
ಅದನ್ನರಿತು ಬದಲಾಗಬೇಕಿದೆ
ನಾನೀಗ.
ನನ್ನವರೆಂಬುವವರು
ಹಣದ ವ್ಯಾಮೋಹದಲ್ಲಿ
ಮುಳುಗಿಹರು ನಾವೂ ನಮ್ಮವರೆಂಬ
ಮಾನವೀಯತೆ ತಿಳಿಯದವರು
ನನ್ನ ಏಳ್ಗೆಯನ್ನ ಸಹಿಸದವರು
ಅದನ್ನರಿತು ಬದಲಾಗಬೇಕಿದೆ ನಾನೀಗ.
- ಮೇಘಾ ಬೆಳಧಡಿ
03 Apr 2025, 04:40 pm
ನನ್ನ ನಿನ್ನ ಪ್ರೀತಿಯ ಹಾರ್ಟ್ ಟಿನಲಿ,
ನೆನಪೇ ಒಂದು ಗಿಫ್ಟ್ಟು ನನಗಿಲ್ಲಿ,,
ನಿನ್ನ ಸನಿಹವನ್ನು ನಾನು,
ಬಯಸಿಬಂದೆ ಇನ್ನು,
ದೂರ ಹೋದೆ ಏಕೆ ಕ್ಷಣದಲ್ಲಿ ?,
ನನ್ನ ಬಿಟ್ಟು ಹೋದೆ ಏಕೆ ಬದುಕಲ್ಲಿ ಒಂಟಿ ಮಾಡಿ ಹೋದೆ ಏಕೆ ನನಗಿಲ್ಲಿ...
ನಿನ್ನ ದಾರಿಯ ಕಾಯುತ ಕುಳಿತೆನಾ..
ಬಂದೆ ಬರುವೆ ಎನ್ನುವ ನಿಜವನ್ನ,
ಅರಿತುಕೊಂಡೆ ನಾನು, ನೀ ದೂರವಾದರೇನು
ನಿನ್ನ ಬಿಟ್ಟು ಬದುಕುವೆ ನಾನು ನೆನಪಲ್ಲೇ,
ನಿನ್ನ ನೆನಪಲ್ಲೇ ನಾನು ಬದುಕುವೆ
ನಿನ್ನ ದಾರೀಯಾ ಕಾಯುತ ಕುಳಿತಿರುವೆ... ??
- ಅವಿನಾಶ್ ಎಲ್
03 Apr 2025, 02:08 pm