Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಲ್ಲು ಹೃದಯದ ಪ್ರೀತಿ

ಕಲ್ಲು ಹೃದಯದ ಮೇಲೆ ಕೆತ್ತನೆಯ ಪ್ರೀತಿ
ಎಂದಿಗು ಅಳಿಸಲಾಗದ ವಿಶ್ವಾಸ ಪುಸ್ತಕದ ನೀತಿ
ಜಗಳ ಮನಸ್ತಾಪದ ನಡುವೆಯೂ ಅರುಳುವದು ಸುವಾಸನೆಯ ರೀತಿ
ಇಬ್ಬರ ನಡುವಿನ ಪ್ರೀತಿ ಕ್ಷಮೆಯಲಿ ನಿಲ್ಲುವದು ಮೂರ್ತಿ.....

ಕೆಲವಮ್ಮೆ ಅನಿಸುವದು ಕಳೆದುಕೊಂಡನೆಂಬ ಭೀತಿ
ಮತ್ತೆ ಮತ್ತೆ ಮನಸು ಗಟ್ಟಿಗೊಳಿಸುವ ಪರಿಯ ರೀತಿ
ಅಳುಕಿದರು ಬಳುಕಿದರು ಮತ್ತೆ ಎದ್ದು ನಿಲ್ಲುವದು ಪ್ರೀತಿ
ಇತಿಹಾಸ ಪುಟಗಳ ತಿರುವಿ ಹಾಕಿದರು ಬರೀ ಕಥೆಗಳ ನೀತಿ.....

✍.....ಈಶ್ವರ ಬಿ

- ishwar

03 Mar 2019, 02:10 am

ಬಿಳಿ ತಾವರೆಗಳು



ಅಮ್ಮ ಎಲ್ಲಿ ಅಪ್ಪ ಎಲ್ಲಿ!
ಬಿಳಿ ತಾವರೆಗಳು ಕೊಲೆ ಆಯಿತೇ ಇಲ್ಲಿ ,ಹೃದಯಗಳು ನುಚ್ಚು ನೂರಾಗಿ ಬಿದ್ದಿವೆ
ರಕ್ತದ ಮಡಿಲಲ್ಲಿ!!

ಯಾರ ಬಂಧುಗಳು ಇವರು, ಯಾರ ಶತ್ರುಗಳು ಅವರು, ಬಂದೂಕುಗಳ ಹಿಡಿದು ತಲೆಗಳ ಕಡಿದು,ಬಿಸಾಡಿಹರು ಮೂಲೆ ಮೂಲೆಗಳಲ್ಲಿ ಯುದ್ಧವೆಂದು ಹೇಳಿ ಪುಟ್ಟ ಕಂದಮ್ಮನ ಬಿಟ್ಟು ಆಕ್ರಂದನದಲ್ಲಿ!!

ಯಾರಿಗಾಗಿ ಹೊಡೆದಾಟ ಯಾರಿಗಾಗಿ ಜೀವ ತೆಗೆಯುವ ಚಟ, ಮಣ್ಣಿಗೋ ಅದರಲ್ಲಿನ ಹೊನ್ನಿಗೋ!!

ಮಣ್ಣಲ್ಲಿ ಮಣ್ಣಾಗಿ ಹೋಗುವ ಜೀವಕೆ ಇನ್ನೊಂದು ಜೀವ ತೆಗೆಯುವ ಪಾಪವೇತಕೆ? ಎಲ್ಲರಂತೆ ಉಸಿರಾಡುವ ಯೋಧರ ಸಾವು ಏತಕೆ?

ಇನ್ನಾದರೂ ಸುಮ್ಮನಾಗಲಿ
ಸ್ವಲ್ಪವಾದರೂ ಶಾಂತವಾಗಲಿ
ಕಟ್ಟುಸಿರು ಕಣ್ಮರೆಯಾಗಲಿ
ನಿಟ್ಟುಸಿರು ನೆಮ್ಮದಿಯಾಗಲಿ
ನೊಂದ ಮನಗಳ ಆಕ್ರಂದನ ಸಡಿಲವಾಗಲಿ.

- ಚುಕ್ಕಿ

01 Mar 2019, 09:17 pm

ಮೂರು ಬಣ್ಣವನು ಎತ್ತಿ ಹಿಡಿಯಲು

ಮೂರು ಬಣ್ಣವನು ಎತ್ತಿ ಹಿಡಿಯಲು
ನೆತ್ತರು ಹರಿಸಿದ ಮಹನಿಯರೇ!!
ಮಡಿದರೂ ಮಿಡಿಯುವ ದೇಶಪ್ರೇಮದ
ಕಿಚ್ಚಿನ ನಡುವಲಿ ನಡೆದವರೇ!!

ನೀಲಿಯ ಬಣ್ಣದ ಶೌರ್ಯ ಚಕ್ರದ
ನಡುವಲಿ ಜನಿಸಿ ಬಂದವರೇ!!
ನಾಲ್ಕು ದಿಕ್ಕಿನಲಿ‌ ಸಿಂಹದಂತೆಯೇ
ಕಾದು ಘರ್ಜಿಸಿಹ ರಕ್ಷಕರೇ!!

ರಾಷ್ಟ್ರಗೀತೆಯಲಿ ದೇಷ ಪ್ರೇಮದ
ಉಸಿರನು ಹೊತ್ತ ನಾಯಕರೇ!!
ಬೇಧ ಭಾವವ ಕಾಣಲಾರದೇ
ಈ ದೇಷವ ಕಾಯುವ ಸಹೋದರರೇ!!

ನಿಮ್ಮ ಶಕ್ತಿಯಲಿ ನಿಮ್ಮ ಯುಕ್ತಿಯಲಿ
ಗೆಲುವದು ನೆಲೆಸಲಿ ಧೀರಜರೇ!!
ಸೋಲನು ದಹಿಸುವ ಕೀರ್ತಿ ಪತಾಕೆ
ಮುಗಿಲನು ಮುಟ್ಟಲಿ ಸೈನಿಕರೇ!!

- ಪಿ.ಜಿ.ಜ್ಯೋತಿ

01 Mar 2019, 12:35 pm

ಅನಿಕೇತನ

ಅನಿಕೇತನ ನೀನಾಗು
ನನ್ನ ಪಾಲಿನ ಚೇತನ
ಬೆಳಗಲಿ ನಿನ್ನಿಂದ ನನ್ನ ಜೀವನ

ಮರೆಯಲಾಗದ
ಅನುಭವ ನೀನಿತ್ತೆ
ತೊರೆಯಲಾಗದ
ಬಾಂದವ್ಯ ನೀ ಬೆಸೆದೆ
ನಾನೆಂದು ನಿನ್ನ ನೆನೆವೆ

ಕಲಿಕೆಗೆ ಸಹಕರಿಸಿ
ತಪ್ಪುಗಳ ಸರಿಪಡಿಸಿ
ಮಮತೆಯಲಿ ಬೆಳೆಸಿ
ಸರಿದಾರಿಯಲಿ ನಡೆಸಿದೆ
ನಾನೆಂದು ನಿನ್ನ ನೆನೆವೆ

ನಿನ್ನಲ್ಲೆ ನಾನಿರುವೆ
ಎಂದೆಂದೂ ಒಂದಾಗಿರುವೆ
ನೀ ಮೌಲ್ಯಗಳ ಬೆಳೆಸಿರುವೆ
ಇದೋ ನಾನಿನಗೆ ನಮಿಸುವೆ
ನಾನೆಂದು ನಿನ್ನ ಮರೆಯೆ






ಶಾರದ

- ಶಕುಂತಲಾ

01 Mar 2019, 09:19 am

ಪರೀಕ್ಷೆ ಬಂತು ಹತ್ತಿರ

ನನ್ನ ನೆಚ್ಚಿನ ಗುರುಗಳೇ
ಪರೀಕ್ಷೆ ಬಂತು ಹತ್ತಿರ
ಓದುವುದಿದೆ ಬೃಹತ್ ಸಾಗರ..
ಪ್ರಶ್ನೆಗಳಿವೆ ನೂರಾರು ಸಾವಿರ
ನೆನಪಿಗೆ ಬರುತ್ತಿಲ್ಲ ಉತ್ತರ..
ನನ್ನ ನೆಚ್ಚಿನ ಗುರುಗಳೇ
ಓದಲು ಪುಸ್ತಕ ತೆರೆದರೆ ತಲೆಯಲಿ ನೂರೆಂಟು ವಿಚಾರ
ಬರೆಯಲು ಪೆನ್ನು ಹಿಡಿದರೆ ಮನದಲಿ ಆಡುವ ಆಸೆ ಅಪಾರ..
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..|ಪ|

ಉತ್ತರಗಳು ನೋಡಿದರೆ ಮಾರುದ್ದ
ಲೆಕ್ಕಗಳೆಂದರೆ ನನಗೆ ವಿರುದ್ಧ..
ವಿಷಯದ ಅರ್ಥ ಅರ್ಧಂಬರ್ದ
ಗುರುಗಳು ಕಲಿಸೋಕೆ ಸದಾಸಿದ್ಧ
ನಾನು ಪಾಸಾಗೋಕೆ ಕಟಿಬದ್ಧ..
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..

ಅನುಸರಿಸು ಮನೆಯಲಿ ಓದುವ ವೇಳಾಪಟ್ಟಿ
ಶಿಕ್ಷಕರು ಹೇಳುವರು ನಾಕೈದು ತಟ್ಟಿ..
ಓದಿದರೆ ನಾವ್ ಇವತ್ತು ಬೇಕಾಬಿಟ್ಟಿ
ನಾಳೆ ಫೇಲಾಗೋದು ಗ್ಯಾರಂಟಿ..
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..

ನೆಂಟರ ಮನೆಕಡೆ ತಿರುಗಿ ನೋಡಬೇಡ
ನೆಟ್ಟಗೆ ಶಾಲೆಗೆ ಬರೋದು ಮರಿಬೇಡ..
ಆಟ ಆಡುವುದಕ್ಕಂತೂ ಹೋಗಲೇ ಬೇಡ
ಹೋಂವರ್ಕ್ ಬರೆಯುವುದನ್ನು ತಪ್ಪಿಸಲೇ ಬೇಡ..
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..

ಟಿವಿ ಮೊಬೈಲ್ ನೋಡುವುದು ಮರೆತು ಬಿಡು
ಉತ್ತರ ಹತ್ತುಸಲ ಬರೆದು ಕಲಿತು ಬಿಡು..
ಆರೋಗ್ಯದ ಕಡೆ ಹೆಚ್ಚು ಒತ್ತು ನೀಡು
ಬೆಳಿಗ್ಗೆ ಬೇಗ ಎದ್ದು ಓದಲು ಕುಂತು ಬಿಡು..
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..

ಓದಲೇಬೇಕು ಇಲ್ಲಾಂದ್ರೆ ಬಿಡಲ್ಲ ಈಜನ
ಬರ್ತಾವೆ ನೂರಾಒಂದು ಬೈಗುಳ ಪ್ರತಿದಿನ..
ಅದಕ್ಕೆ ಪಾಸ್ ಆದ್ರೆ ಸಮಾಧಾನ
ಏನಾದ್ರೂ ಫೇಲಾದ್ರೆ ಅವಮಾನ
ಫಸ್ಟ್ ಬಂದ್ರೆ ಬಹುಮಾನ
ನನಗೂ ಬೇಕು ಒಂದು ಸ್ಥಾನಮಾನ
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..

ಅನುಭವಿಸಿದವರು ಅರಿತು ಹೇಳುವರು
ಕೈಕೆಸರಾದರೆ ಬಾಯಿ ಮೊಸರು..
ವಿವೇಕರು ಸಂದೇಶ ಸಾರುವರು
ಏಳುಎದ್ದೇಳು ಗುರಿ ಮಟ್ಟುವ ತನಕ ನಿಲ್ಲದಿರು..
ಹೆತ್ತವರು ಬುದ್ಧಿಮಾತು ಹೇಳುವರು
ಈಗ ಕಷ್ಟಪಟ್ಟವರು ಮುಂದೆ ಸುಖವಾಗಿರುವರು..
ಶತೃಗಳು ದ್ವೇಷದಿಂದ ಹೇಳುವರು
ನಿನ್ನ ಕೈಯಲ್ಲಿ ಆಗಲ್ಲ ನೋಡ್ತಾ ಇರು..
ಗೆಳೆಯರು ಧೈರ್ಯದಿಂದ ಹೇಳುವರು
ಏನೇ ಆಗಲಿ ನಾವ್ ಇರ್ತಿವಿ ಮಾಡು ಗುರು..

ನಿಲ್ಲೋದಿಲ್ಲ ಎಂದು ಈ ಜಗದ ಕಾಲ ಚಕ್ರ
ಬಿಡೋದಿಲ್ಲ ನಿನ್ನ ಏಳುಬೀಳಿನ ಈ ಜೀವನಚಕ್ರ..
ನಿಲ್ಲದೆ ಅಳುಕದೆ ಈಜು ವಿದ್ಯೆಯ ಸಮುದ್ರ
ತಪ್ಪದೆ ಸೇರುವೆ ನೀನು ಗೆಲುವಿನ ತೀರ..

- ಸುರೇಶ್ ಟಿ ವಿ

28 Feb 2019, 08:58 pm

ನಿನ್ನವಳು


ಯಾವ ಜನ್ಮದ ಪುಣ್ಯದ ಫಲವೋ ನಿನ್ನ ಪ್ರೀತಿಯ
ಆಸರೆ ಹೃದಯಕೆ,ಕಂಬನಿಯ ಉಳಿಸದಷ್ಟು, ನಗುವನ್ನು ಅಳಿಸದಷ್ಟು, ಕನಸುಗಳಿಗೆ ನಿಲುಕದಷ್ಟು, ಕಲ್ಪನೆಗೂ ಅರಿಯದಷ್ಟು ಪ್ರೀತಿಸುವೆ ಹುಡುಗ ನಿನ್ನನು.

ಒಲವಿನ ಓಲೆಗಳ ರಾಶಿ ತುಂಬಿ ಕಣ್ಣಲಿಟ್ಟಿರುವೆ ಸಮಯ ಸಿಕ್ಕಾಗಲೆಲ್ಲ ಓದಿ ಮುಗಿಸು, ಇನ್ನೂ ಉಳಿದಿವೆ ತುಟಿಯ ಅಂಚಲ್ಲಿ ಮಾತುಗಳಂತೆ ಮೌನವಾಗಿ ನಿನ್ನ ಸೇರಲು.

ಅರ್ಧಕ್ಕೆ ನಿಲ್ಲಿಸಿದ ಕವಿತೆಗಳ ಪೂರ್ಣ ರೂಪ ನೀನು,ನೆನ್ನೆಯ ಕನಸುಗಳಿಗೆ ನಾಳೆಯ ನನಸು ನೀನು,ಇರಲಿ ಒಂದಿಷ್ಟು ವಿರಹ ನಿನ್ನೆದೆಯಲಿ ಹುದುಗಿಹೋಗುವ ಮುನ್ನ ಸಿಹಿಯಾದ ನೋವಾಗಿ.

ನಿನ್ನ ತುಂಟ ಕಂಗಳು ಕಲಿಸುತ್ತಿರುವ ಒಲವ ಪಾಠಗಳು,ಬಾಯಿಗಿಡುವ ಮುನ್ನ ದೇವರಿಗಿಟ್ಟ ತುತ್ತುಗಳು,ಸವಿ ಸವಿದು ಕೊಡಬೇಕಿಸುತ್ತಿದೆ
ನಿನಗಾಗಿ ಬಚ್ಚಿಟ್ಟ ಮುತ್ತುಗಳು.

ಹೆಜ್ಜೆಗಳ ಎಣಿಸುತ್ತಾ ಗೆಜ್ಜೆ ಸದ್ದು ಮಾಡುತಿರಲು,
ಲಜ್ಜೆ ಇಲ್ಲದ ಮನಸು ನಿನ್ನ ಮನವ ಕದ್ದು ಮುದ್ದಾಡುತಿರಲು, ಸಿಕ್ಕು ಬಿಡು ಇಂದೊಮ್ಮೆ ಬಿಗಿದಪ್ಪಿಕೊಳ್ಳಲು.
❤️❤️❤️❤️❤️❤️

- ಚುಕ್ಕಿ

28 Feb 2019, 05:19 pm

ಕಾಳ್ಗಿಚ್ಚು ನಂದಿಸಿ ಜೀವಜಂತುಗಳ ಉಳಿಸಿ

ಬಾನಾಡಿಗಳು ನಾಡಿಗೆ ಬರಲು
ಬಿಡನು ಸುಮ್ಮನೆ ಬಾಳಲು...
ಜೀವಜಂತುಗಳು ಆಡವಿಯ ಮಡಿಲಲ್ಲಿರಲು
ಬಿಟ್ಟನು ಧಗಧಗನೇ ಹೊತ್ತಿ ಉರಿಯಲು..
ರೋಧಿಸಲು ಉಸಿರಿಲ್ಲ
ರಕ್ಷಿಸಲು ಯಾರಿಲ್ಲ....

ತನ್ನ ಬೆಳೆ ಬೇಯಿಸಿ ಕೊಳ್ಳಲು
ಬನವ ಮಾಡಿಕೊಂಡ ಉರುವಲು...
ತನ್ನ ದುರಾಸೆಯ ಕೋಟೆ ಕಟ್ಟಲು
ವನವ ಮಾಡಿದ ಬಟಾಬಯಲು..
ಇವನ ಆಸೆಗೆ ಕೊನೆಯಿಲ್ಲ
ಪರಿಸರ ರಕ್ಷಣೆ ಬೇಕಿಲ್ಲ....

ಗಂಟೆಗಟ್ಟಲೇ ಭಾಷಣ ಬಿಗಿದರೆ
ನಿಸರ್ಗ ಬೆಳೆವುದೇ?
ಮಾತಿನಲ್ಲಷ್ಟೇ ಕಾಳಜಿ ಮೆರೆದರೆ
ಪ್ರಕೃತಿ ಉಳಿವುದೇ?
ದಯೆಯಿರಲಿ ಎಂದು ಘೋಷಣೆ ಕೂಗಿದರೆ
ವನ್ಯಮೃಗಗಳು ಬದುಕುತ್ತವೆಯೇ?
ಇವನ ಹೊಟ್ಟೆಕಿಚ್ಚು ಸಾಯಲಿಲ್ಲ
ಕಾಳ್ಗಿಚ್ಚು ಆರಲಿಲ್ಲ...

ಕಾಡು ಹೊತ್ತಿ ಉರಿದರೆ
ನಾಡು ಸುಡುಗಾಡು...
ಕಾನನ ಬರಿದಾದರೆ
ಜೀವನ ನಶ್ವರ....
ಸಸ್ಯಸಂಕುಲ ಸೆಲೆ ರಕ್ಷಿಸಿದರೆ
ಜೀವಸಂಕುಲಕ್ಕೆ ನೆಲೆ...
ಪರಿಸರ ಬೆಳೆಸಿದರೆ
ಸಂಸಾರ ಬಂಗಾರ....

- ಸುರೇಶ್ ಟಿ ವಿ

27 Feb 2019, 09:34 am

ವೋಟು ವೋಟು ಹಾಕಣ್ಣ

ವೋಟು ವೋಟು ಹಾಕಣ್ಣ
ಅದುವೇ ನಿನ್ನ ಹಕ್ಕು ತಿಳಿಯಣ್ಣ..
ವೋಟು ವೋಟು ಹಾಕಣ್ಣ
ಸರ್ಕಾರ ಆರಿಸುವ ಹಕ್ಕು ನಿನ್ನದಣ್ಣ..
ಇಲ್ಲಿ ಪ್ರಜೆಯೇ ಪ್ರಭು ಎಂಬ ನಿಜವನ್ನಾ
ಮತದಾನ ಮಾಡುವ ಮೂಲಕ ತೋರಿಸಣ್ಣ..
ನಿನ್ನ ಬೆರಳಲ್ಲಿ ಬೆಳಗಿಸು ಇಂದು ಶಾಹಿ ಗುರುತನ್ನಾ
ಉತ್ತಮ ಭವಿಷ್ಯದಲಿ ಬಾಳಲಿ ಎಂದೆಂದೂ ಈ ದೇಶ ಈ ಜನ||

ನೋಟು ಗಿಫ್ಟು ಎಂಬ ಆಮಿಷಕೆ ನೀ ಒಳಗಾಗಬೇಡ
ನಾಡಿನ ಏಳಿಗೆ ನಿನ್ನ ಕರ್ತವ್ಯ ಎಂಬುದ ಮರೆಯಬೇಡ..
ಧರ್ಮ ಜಾತಿ ಅಂತ ನೀನು ನೋಡಬೇಡ
ದೇಶದ ಪ್ರಗತಿಗೆ ದುಡಿವ ಶಕ್ತಿಯ ಮರೆಯಬೇಡ..
ಮತದಾರನೇ ಮಾಡು ದೃಢನಿಶ್ಚಯ
ನೀನಾಗಬೇಕು ರಾಷ್ಟ್ರಕೆ ಭದ್ರ ಅಡಿಪಾಯ
ಜಾರಿ ಮಾಡು ನಮ್ಮ ಸಂವಿಧಾನದ ಆಶಯ..

ಭ್ರಷ್ಟಚಾರ ಮುಕ್ತ ಸರ್ಕಾರ ನಮಗೆ ಬೇಕಣ್ಣ
ಜನಸೇವೆ ಮಾಡಲು ಸ್ಪಷ್ಟ ಬಹುಮತ ನೀಡಣ್ಣ
ಜನಹಿತ ಕಾಯುವ ನಾಯಕ ಆರಿಸಿ ಬರಬೇಕಣ್ಣ..
ಪ್ರಜಾತಂತ್ರದ ಯಶಸ್ಸು ವೋಟು ಹಾಕುವ ಪ್ರಜೆಯಿಂದ ನೋಡಣ್ಣ
ಮತದಾರನೇ ನೀನು ಜಾಗೃತನಾಗು
ದೇಶದ ಒಳಿತಿಗೆ ಮುಂದಾಗು
ಬಲಿಷ್ಟ ರಾಷ್ಟ್ರವ ಕಟ್ಟುವವನಾಗು..

- ಸುರೇಶ್ ಟಿ ವಿ

25 Feb 2019, 02:39 pm

ಮೌನರಾಗ

ನನ್ನ ಬಾಳ ಪಯಣಕೆ ನಿನ್ನ ದಾರಿ
ಕಾಯುತಿರುವೆ ನಾ...‌‌
ನೀ ಬರುವೆ ಎಂಬ ಆತ್ಮವಿಶ್ವಾಸದಿಂದ

ನನ್ನ ಕಾಯುವಿಕೆ ನೋಡಿ ಜಾತಕ ಪಕ್ಷಿ ನಗುತಿಹುದು
ನನ್ನ ಕಾಯುವಿಕೆಗೆ ಬೆಲೆಯಿಲ್ಲವೆಂದು
ನನ್ನವರೆ ನನಗೆ ಹಿಯಾಳಿಸುತಿಹರು
ನಿನಗೆ ಸ್ವಾಗತಿಸಲು ನೀ ಬರುವ ದಾರಿಯಲ್ಲಿ
ನನ್ನ ಸಿಹಿಗನಸಿನ ಗುಲಾಬಿ ಬೆಳೆದಿರುವೆ
ಆ ದಾರಿ ಈಗ ನನ್ನ ಬರಡಾಗ ಹೃದಯದಂತಾಗಿದೆ

ಈ ಬರಡಾದ ಹೃದಯಕ್ಕೆ ನಿನ್ನ ಪ್ರೀತಿಯೆಂಬ
ಎರಡನಿ ನೀರನೆರೆದು ಬಿಡು ಗೆಳತಿ
ಒಂದು ಜೀವ ಉಳಿಸಿದ ಪುಣ್ಯ ನಿನಗೆ ತಟ್ಟುವುದು
ಯಾರನ್ನೊ ಕಟ್ಟಿಕೊಂಡು ಅವನ ಗುಲಾಮಳಾಗಿ
ಬಾಳುವ ಬದಲು, ನನ್ನನ್ನೊಮ್ಮೆ ರಾಜನಾಗಿ ಕಾಣು
ಆಗ ನೀನೆ ರಾಣಿಯಾಗಿ ಮೆರೆಯುವೆ.....
##ಮೌನಿ##

- RajaneeshNandikolmath

25 Feb 2019, 01:41 am

ಯಾವ್ದುಕ್ಕೂ ತಲೆಕೆಡುಸ್ಕೋ ಬ್ಯಾಡ

ಯಾವ್ದುಕ್ಕೂ ತಲೆಕೆಡುಸ್ಕೋ ಬ್ಯಾಡ
ಏನ್ ಆಗುತ್ತೋ ಆಗ್ಲಿ ಬಿಡೋ..
ಇಡಿ ಲೋಕನೇ ತಲೆಕೆಳಗಾಗ್ಲಿ
ಇಷ್ಟ ಬಂದಂಗ್ ಇದ್ಬಿಡೋ..
ನಾವ್ ಇದ್ರೆನೇ ಜಗತ್ತು
ಹೊದ್ರೆ ಏನ್ ಬಂತು..
ನಮ್ಗೆ ನಾವೇ ಹೀರೋ ಅನ್ಕೊಬೇಕು
ನಮ್ಮ್ ಜೀವ್ನನಾ ನಾವೇ ಸೂಪರ್ ಮಾಡ್ಕೋಬೇಕು..
ಮನ್ಸಲ್ಲ್ ಪ್ರೀತಿ ಇರ್ಲಿ
ಮುಖ್ದಲ್ಲ್ ನಗು ಇರ್ಲಿ|| ಪ||

ಜೀವ್ನ ಒಂದು ಗಿರ್ಗಿಟ್ಲೆ
ಅವ್ನು ನಿಲ್ಸೋವರೆಗೂ ತಿರುಗ್ಲೇಬೇಕು
ಅವ್ನಿಗೆ ಇಷ್ಟಬಂದಂಗೆ ತಿರ್ಗ್ಸೋದು ಅವ್ನ್ ಕೆಲ್ಸ
ಹೆಂಗೆ ಬರುತ್ತೋ ಹಂಗೆ ಬದುಕೋದು ನಮ್ಮ್ ಸಂತೋಷ.....
ಹುಟ್ದಾಗ ಯಾರೇನು ಕಟ್ಕಂಡ್ ಬರಲ್ಲ
ಸತ್ತಾಗ ಯಾರನ್ನು ಮನೇಲಿ ಇಟ್ಕನಲ್ಲ..
ಹೊಟ್ಟೆ ಕಿಚ್ಚು ನಿನ್ನನ್ನು ಸ್ಮಶಾನಕ್ಕೆ ಸಾಗ್ಸುತ್ತೆ
ಪ್ರೀತಿ ಹಂಚು ನಿನ್ನನ್ನು ಜಮಾನ ನೆನೆಯುತ್ತೆ..

ಈ ಜೀವ್ನನೇ ಹಂಗೆ ನೂರೆಂಟು ರಿವರ್ಸ್ಗೇರು
ಅವ್ನು ಹೇಳ್ದಂಗೆ ಓಡುಸ್ಬೇಕು ನಮ್ಮ ತೇರು..
ಇಟ್ಟವ್ನೇ ಹಳ್ಳ ಗುಂಡಿ ನಮ್ಮ್ಗಳ ಬುದ್ಧಿ ಕಲಿಸೋಕೆ
ಹೋಗುವಾಗ ಅಕ್ಕಪಕ್ಕ ಅಕ್ಕರೆ ನೀಡೋ ಕಾಣಿಕೆ
ನಿಲ್ಲಿಸುವಾಗ ನಿನ್ಗೂ ಬರ್ಲಿ ಸ್ವಲ್ಪ ಪುಣ್ಯ ಲೆಕ್ಕಕ್ಕೆ
ಸುಳ್ಳು ಮೋಸ ಸುಳಿಯದಿರಲಿ ನಿನ್ನ ಪಯಣದಲಿ
ಸ್ನೇಹ ಎಂಬ ನಿಲ್ದಾಣ ಕಟ್ಟು ನಿನ್ನ ದಾರಿಯಲ್ಲಿ

- ಸುರೇಶ್ ಟಿ ವಿ

23 Feb 2019, 03:53 pm