Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತಪ್ಪದೇ ಮಾಡು ಇಂದು ಮತದಾನ

ಪ್ರಜಾತಂತ್ರದ ಯಶಸಸ್ಸಿಗೆ ಸೋಪಾನ
ನೀನು ಮಾಡುವ ಮತದಾನ
ಓ ಮಾನ್ಯ.ಮತದಾರ....
ಗಣತಂತ್ರದ ಗೆಲುವಿಗೆ ಮೆಟ್ಟಿಲು
ನೀನು ಬೆಳಗಿಸುವ ಶಾಹಿ ಗುರುತಿನ ಬೆರಳು
ಓ ಅಭಿವೃದ್ಧಿಯ ಹರಿಕಾರ....
"ತಪ್ಪದೇ ಮಾಡು ಇಂದು ಮತದಾನ
ನಿನ್ನಿಂದಲೇ ಆಗಲಿ ಬಲಿಷ್ಟ ರಾಷ್ಟ್ರದ ನಿರ್ಮಾಣ..
ಚಲಾಯಿಸು ನಿನ್ನ ಹೆಮ್ಮೆಯ ಹಕ್ಕನ್ನ
ನನಸಾಗಿಸು ದೇಶದ ಹಿರಿಮೆಯ ಕನಸನ್ನ"....

ನಿನ್ನ ವೋಟಲಿ ಅಡಗಿದೆ
ರಾಷ್ಟ್ರದ ಉದ್ಧಾರ
ನಿನ್ನಿಂದಲೇ ತೊಲಗಬೇಕಿದೆ
ರಾಷ್ಟ್ರದ ಭ್ರಷ್ಟಚಾರ....
ನಿನ್ನ ಒಪ್ಪಿಗೆ ಬೇಕಿದೆ
ಮಾಡೋ ಸೂಕ್ತ ನಿರ್ಧಾರ
ನಿನ್ನ ತೀರ್ಪಿಗೆ ಬೆಲೆಯಿದೆ
ನೀಡೋ ಉತ್ತಮರಿಗೆ ಅಧಿಕಾರ....
ನೂರೆಂಟು ಸಮಸ್ಯೆಗಳನು ಎದುರಿಸಬೇಕಿದೆ
ಅದಕೆ ಹದಿನೆಂಟು ತುಂಬಿದವರ ಮತವಾಗಲಿ ಉತ್ತರ...
ಮತದಾರರಿಂದಲೇ ಸರ್ಕಾರ
ಮತದಾರರಿಗಾಗಿಯೇ ಸರ್ಕಾರ....

ಇಲ್ಲಿ ನಡೆಯೋದು ಪ್ರಜೆಗಳ ಪ್ರಭುತ್ವ
ನೀಡೋ ಪ್ರಾಮಾಣಿಕರಿಗೆ ನಾಯಕತ್ವ...‌.
ಜಾತಿಧರ್ಮದ ಸರಪಳಿಗೆ ಸೋಲದಿರಲಿ ಮನುಷ್ಯತ್ವ
ದೇಶದ ಒಳಿತಿಗೆ ಜನರ ಹಿತಕ್ಕೆ ನೀಡು ಮಹತ್ವ..
ಓ ಮತದಾರನೇ ನೀನೆ ಈ ದೇಶದ ಸಂಪತ್ತು
ಹಣಕ್ಕೆ ವೋಟು ಮಾರಿಕೊಂಡು ಊರಿಗೆ ತರದಿರು ಆಪತ್ತು..
ಮರೆಯದಿರು ಮತದಾರನೇ ಈ ಪವಿತ್ರ ಕರ್ತವ್ಯ
ತಂದುಕೊಡು ದೇಶಕೆ ಸುಂದರ ಭವಿತವ್ಯ...
ನಿನ್ನ ಒಂದೊಂದು ಮತ
ದೇಶಕೆ ಎಂದೆಂದೂ ಹಿತ....

- suresh

13 Mar 2019, 06:58 pm

ಮತದಾನ ಮಾಡೋಕೆ ಅಭಿಮಾನದಿಂದ ಬಾರೋ

ಮತದಾನ ಮಾಡೋಕೆ
ಇಂದು ಅಭಿಮಾನದಿಂದ ಬಾರೋ....
ಷಾಹಿ ಗುರುತಿನ ಬೆರಳನ್ನು
ನೀನು ಹೆಮ್ಮೆಯಿಂದ ತೋರೋ....
ನಮ್ಮ ನಾಡಿನ ಏಳಿಗೆ
ನಿನ್ನ ವೋಟಿನಿಂದ ನೋಡೋ....
ಈ ದೇಶ ಈ ಜನಕೆ
ಸುಂದರ ನಾಳೆಯ ನೀಡೋ....

ಜಾತಿಧರ್ಮದ ಸಂಕೋಲೆಗೆ ವೋಟು ಮುಡಿದು
ಹಾಳು ಮಾಡದಿರು ಸಮಾಜದ ನೆಮ್ಮದಿ....
ಹಣದ ಗುಂಡಿಗೆ ಮತವ ಸುರಿದು
ದೇಶದ ಭವಿಷ್ಯವನ್ನು ಮಾಡದಿರು ಸಮಾಧಿ...‌.
ಆಸೆ ಆಮಿಷಗಳ ಕುತಂತ್ರಕೆ ಸೋತು
ಜನತಂತ್ರ ವ್ಯವಸ್ಥೆಗೆ ತರದಿರು ಕುತ್ತು....
ಮತದಾನ ನಿನ್ನ ಪವಿತ್ರ ಅಧಿಕಾರ
ಎಲ್ಲಾ ಆಗುಹೋಗುಗಳಿಗೆ ನೀನೇ ಜವಾಬ್ದಾರ....

ಭ್ರಷ್ಟರಿಗೆ ಮಣೆ ಹಾಕದಿರು
ರಾಷ್ಟ್ರ ಪ್ರಜ್ಞೆ ಮರೆಯದಿರು....
ಅರ್ಹ ಪ್ರತಿನಿಧಿಯನು ಆರಿಸು
ದೇಶದ ಮಂದಿಯನು ಬೆಳಗಿಸು....
ನೀನಾಗು ನಾಡಿನ ಜೀವನಾಡಿ
ನಿನ್ನ ವೋಟು ಬರೆಯಲಿ
ನಾಡಿನ ಪ್ರಗತಿಗೆ ಮುನ್ನುಡಿ....
ನೀನಾಗು ದೇಶದ ಭದ್ರ ಬುನಾದಿ
ನಿನ್ನ ವೋಟು ಹಾಡಲಿ
ದೇಶದ ಅಭಿವೃದ್ಧಿಗೆ ನಾಂದಿ....

- suresh

13 Mar 2019, 06:26 pm

ಭಾವಗೀತೆ-ಇರಲಿ ಹೀಗೇ

ಇರಲಿ ಹೀಗೇ...

ನನ್ನ ನಿನ್ನ ನಡುವೆ ಇಲ್ಲವು
ಯಾವ ರೀತಿಯ ಕಂದರ..
ತಿಳಿದುಕೊಂಡೇ ನಾವು ಇರುವೆವು
ಜೊತೆ ಜೊತೆಯಲಿ ನಿರಂತರ..

ಭಾವ ಬಳ್ಳಿಯ ಬೇರುಗಳಲೂ
ಮನದ ಮಾತದು ಸುಮಧುರ..
ಬದುಕು ಬಹಳ ಬೇಡ ತಳಮಳ
ಇರದಿರಲಿ ನಮಗೆ ಅವಸರ..

ಸ್ಪರ್ಶ ಮುತ್ತದು ನಮ್ಮ ಒಡವೆಯು
ಬಾಳ ಹಸಿರದು ಅಮರವೂ
ಒಡಲ ಒಳಗಿನ ಕಿಚ್ಚು ದಹಿಸಲು
ಪ್ರೇಮವೊಂದೇ ಸ್ಪೂರ್ತಿಯೂ..

ನಿನ್ನ ಕರೆಗೆ ನನ್ನ ನೋಟವು
ಪುಳಕ ನಖ -ಶಿಖಾಂತದಿ
ಬೆವರ ಹನಿಗಳು ಮೂಡುವಾಗಿನ
ಬೆಚ್ಚನೆಯ ಹಿತವು ಮನದಾಳದಿ ...

ಅರ್ಥಗರ್ಭಿತ ಬದುಕ ತೀರದಿ
ವೇಗ ಓಡುವ ನಾವೆಯೂ
ಮಕ್ಕಳ ಸುಖ ಪಡೆದು ನಡೆಯುತ
ಮೌನವಿಲ್ಲದ ಗಳಿಗೆಯೂ...
@ಪ್ರೇಮ್@
12.03.2019

- PremUdayKumar

12 Mar 2019, 01:14 pm

ಬದುಕು

ಅಲ್ಪ ದಿನದ ಈ ಬದುಕು,
ಚೀರವಾಗಲಿ ಸವಿ ನೆನಪು,
ಬಂಗಾರದ ಈ ಜನುಮ,
ಸಾಗುತಿರಲಿ ಸಾವಿರ ದಿನ!!

ಹುಟ್ಟುವೆವು ಒಬ್ಬಂಟಿಯಾಗಿ,
ಬಾಳುವೆವು ಸಂಘಜೀವಿಯಿಗಿ,
ಕೊನೆಯ ಉಸಿರ ಎಳೆಯುವರೆಗು,
ನಡೆಹುತಿಹುದು ಈ ಬದುಕು!!

ತಿರುಗುತಿಹುದು ಕಿಲಚಕ್ರ,
ಉರುಳುತಿಹುದು ಜೀವನಚಕ್ರ,
ಹರುಷ-ಸಂತಸ ದುಃಖ-ದುಮ್ಮಾನ,
ಸಮ್ಮೀಲನವೆ ಈ ಬದುಕು!!

ಭವಾನಿ ಉಳ್ಮಣ್

- Bhavani Ulman

11 Mar 2019, 08:57 pm

ಹನಿಗವನ-2

2. ಟೋಪಿ

ಅಂದು ಗಾಂಧೀಜಿ, ನೆಹರು ಭಗತ್
ಹಾಕಿದ್ದರು ಬೇರೆ ಬೇರೆ ಟೋಪಿ!
ಇಂದು ಚುನಾವಣೆ ಮುಗಿದ ಕೂಡಲೇ ಜನನಾಯಕರು ಹಾಕುವರು ಜನರಿಗೇ ಟೋಪಿ!!!
@ಪ್ರೇಮ್@

- PremUdayKumar

11 Mar 2019, 06:21 am

ಹನಿಗವನ

ಹನಿಗವನಗಳು

1. ನಲ್ಲೆ

ಅತ್ತಿತ್ತ ಹೋಗಲೆಂದು
ಹೊರಡುವಾಗ ನೆನಪಾಗುವೆಯಲ್ಲೆ..
ಮನೆ ಹೊರಗೆ ಕಾಲಿಡಲು
ನಿನ್ನ ಮರೆವಿನ ನೆನಪು..
ಹೇಳು, ತೆಗೆದುಕೊಂಡ
ನನ್ನ ಹೊಸ ಚಪ್ಪಲಿಗಳನು
ಎಂದು ಹಿಂದಿರುಗಿಸಬಲ್ಲೆ?
@ಪ್ರೇಮ್@

- PremUdayKumar

11 Mar 2019, 06:20 am

ಕವನ-ಬೇರೇನು ಹೆಸರುಂಟು ನಿನಗೆ

ಬೇರೇನು ಹೆಸರುಂಟು ನಿನಗೆ

ಸಂಸಾರದ ಕಣ್ಣು ಬೆಂಗಾವಲ ಬೆನ್ನು
ಎರಡು ಕುಟುಂಬಕ್ಕೆ ಸೇತುವೆಯು
ಬೆಳೆದ ಮನೆಗೆ ಹೊನ್ನು
ಹೋದ ಮನೆಯ ಗೃಹಲಕ್ಷ್ಮಿ
ಬೇರೇನು ಹೆಸರುಂಟು ನಿನಗೆ!

ತಾಳ್ಮೆಯ ಸಿರಿ, ಪ್ರೀತಿಯ ಗರಿ
ನೋವ ನುಂಗಿ ನಗೆ ಚೆಲ್ಲುವ ಪರಿ
ಇತರರಿಗಾಗಿ ಕಷ್ಟ ಸಹಿಸುವ ಧರೆ
ಮಕ್ಕಳು ಮರಿ ಬೆಳೆಸುವ ನಾರಿ..
ಮತ್ತೇನು ಹೆಸರುಂಟು ನಿನಗೆ!!!

ಹೃದಯವದು ವಿಶಾಲ, ಸಹನೆಗೆ ಮೀಸಲು
ಗಹನತೆಯ ಅಂತರಾಳ ತನ್ಮಯತೆಯು ಬಹಳ
ತನ್ನವರ ಬದುಕ ಕಟ್ಟುವ ಮಹಿಳೆ
ಬೇರೇನು ಹೆಸರುಂಟು ನಿನಗೆ!

ಇನಿಯನ ಪ್ರಾಣ, ಸಹೋದರರ ನಯನ
ಅಪ್ಪನ ಮುದ್ದು ಅಮ್ಮನ ಪೆದ್ದು
ಮಧುರ ಸೊಸೆ, ಕತೆ ವ್ಯಥೆಗಳ ಅಜ್ಜಿ
ಮತ್ತೇನು ಹೆಸರುಂಟು ನಿನಗೆ..

ತಾಯಿ ಭಾರತಿ, ಕಾವ ಭುವನೇಶ್ವರಿ
ಶಕ್ತಿ ದೇವತೆ, ಮಾತೃ ವಾತ್ಸಲ್ಯ ದಾತೆ
ದುಷ್ಟ ಸಂಹಾರಿಣಿ, ಶಿಷ್ಟ ರಕ್ಷಿಣಿ
ಸಲಿಲ ವಾಹಿನಿ , ವೀಣಾಪಾಣಿ
ಇನ್ನೇನು ಹೆಸರುಂಟು ನಿನಗೆ!
@ಪ್ರೇಮ್@
10.03.2019

- PremUdayKumar

10 Mar 2019, 02:14 pm

ಹೆಣ್ಣೇ ಸೃಷ್ಟಿಯ ಮೂಲ

ಹೆಣ್ಣೇ ಸೃಷ್ಟಿಯ ಮೂಲ
ಶೋಷಣೆ ಮಾಡ್ಬಾರ್ದಲ್ಲ...
ಹೆಣ್ಣಿಗೆ ನಾವೆಲ್ಲ ಗೌರವ ಕೊಡೋಣ
ಹೆಣ್ಣು ಸಮಾಜದ ಕಣ್ಣು
ಹೆಣ್ಣು ಬಾಳಿನ ಹೊನ್ನು....

ಕೊಲ್ಲಬೇಡ ಹೆಣ್ಣನು
ಮಾರಬೇಡ ಹೆಣ್ಣನು
ಹೆಣ್ಣಿನ ಮಾನ ಹಾನಿ ಮಾಡ ಬ್ಯಾಡ...
ಹೆಣ್ಣಿಗೆ ವಂಚನೆ
ಹೆಣ್ಣಿಗೆ ನಿಂದನೆ
ಹೆಣ್ಣಿಗೆ ಯಾತನೆ ನೀ ಮಾಡ ಬ್ಯಾಡ...

ಮಹಿಳಾ ಸಬಲೀಕರಣ
ಹೆಣ್ಣಿನ ಉನ್ನತೀಕರಣ
ಮಹಿಳಾ ಕಲ್ಯಾಣ ನಾವ್ ಮಾಡಬೇಕು ಬೇಕು ಓ....
ಸಮಾಜದ ಮುಂದೆ
ಹೆಣ್ಣುಗಂಡು ಒಂದೇ
ಅಂದುಕೊಂಡು ನಾವು ಬಾಳಬೇಕು ಬೇಕು ಓ.....

- suresh

07 Mar 2019, 08:36 am

ಮಳೆಯ ಮೋಡವೆ

ಮಳೆಯ ಮೋಡವೆ
ಮುನಿದು ನೀ
ಸರಿಯದಿರು ದೂರ
ನಿನ್ನ ಹನಿ ಸಿಂಚನವೇ
ಕಳೆವುದು ಮನ ಭಾರ
ಒಂದೆರಡು ಹನಿಯಾದರೂ
ಚಿಮುಕಿಸಿ ಎದೆಯ
ಹಸಿರನುಳಿಸು ಬಾರ..
ಬೆಂಗಾಡು ನನ್ನೆದೆಯು
ವಿರಹದಾ ಉರಿ ಬಿಸಿಲಿಗೆ
ತಾನಾಗಿ ಹೊತ್ತಿ
ಉರಿದಿಹುದು ಮೆಲ್ಲಗೆ..
ಬೆಂಕಿ ಆರಿಸುವರಿಲ್ಲ
ಸುಟ್ಟು ಕಮರುತಿಹ
ಮನಸಿಗೆ ಕಿಂಚಿತ್ತು ನೆದರಿಲ್ಲ..
ಬಿರುಗಾಳಿ ನೆವಕೆ ನೀ
ಬಿಟ್ಟು ಓಡಿದೆಯಲ್ಲ
ಸುಳಿಗಾಳಿಯಲಿ ಸಿಲುಕಿ
ನಾ ಸುರುಟಿ ಸೊರಗಿದೆನಲ್ಲ..

- ಶ್ರೀಗೋ.

07 Mar 2019, 05:28 am

ಯೋಧ ಯೋಧ ಯೋಧ

ಯೋಧ ಯೋಧ ಯೋಧ
ನೀನೇ ದೇಶದ ಕೆಚ್ಚೆದೆಯ ಕಂದ...
ನಿನ್ನ ವೀರ ದೇಶಾಭಿಮಾನದಿಂದ
ನಾವೆಲ್ಲರು ಚಿರಕಾಲ ಆನಂದ....
ನಿನ್ನ ತ್ಯಾಗ ಬಲಿದಾನದಿಂದ
ಮೆರೆದಾಡುವುದು ತ್ರಿವರ್ಣ ಧ್ವಜ ಹೆಮ್ಮೆಯಿಂದ...‌‌
ನಿನಗೆ ಕೋಟಿ ಕೋಟಿ ನಮನ
ನಿನ್ನ ಹೆಸರು ಎಂದೆಂದೂ ಮನನ||ಪ||

ನಾನು ನನ್ನದು ಎಂಬ ಮೋಹ ದೂರ
ತನುಮನ ದೇಶಪ್ರೇಮ ಸಾಗರ...
ದೇಶದ ರಕ್ಷಣೆ ಅಂದುಕೊಂಡೆ ತಂದೆ ತಾಯಿ
ರಾಷ್ಟ್ರದ ಐಕ್ಯತೆ ನಿನಗಾಯಿತು ಬಂಧುಬಳಗ...
ಘೋರ ಕದನಕೂ ಸೈ, ವೀರ ಮರಣಕೂ ಸೈ
ಭರತ ಭೂಮಿಗೆ ಬರೆದೆ ನಿನ್ನ ಭವಿಷ್ಯ
ದೇಶಾನೇ ಮುಖ್ಯ ದೇಶಾನೇ ನಿತ್ಯ.....

ಚಳಿ ಬಿಸಿಲು ಎಷ್ಟೇ ಇದ್ದರೇನು
ಛಲ ಬಿಡದ ಎಂಟೆದೆಯ ಬಂಟ ನೀನು...
ಮದ್ದುಗುಂಡು ಸಿಡಿದು ಬಂದರೇನು
ದಂಗು ಬಡಿಸುವ ಧೈರ್ಯಶಾಲಿ ನೀನು..
ದೇಹ ತುಂಡಾದರೂ ನಿನಗಿಲ್ಲ ಲೆಕ್ಕ
ದ್ರೋಹಿಗಳ ದಂಡು ನಾಶವಾಗುವ ತನಕ
ವಿಜಯ ಪತಾಕೆ ಹಾರುವ ತನಕ

- suresh

03 Mar 2019, 10:07 pm