ನನಗೆ ಇಷ್ಟ ನನ್ನ ಮಮ್ಮಿ
ಎಲ್ಲ ಕೊಡಿಸುತ್ತಾಳೆ ಮಮ್ಮಿ
ಮುದ್ದುಮಾಡುತ್ತಾಳೆ ಜಾಸ್ತಿ
ನನ್ನ ಪಾಲಿಗೆ ಅವಳೇ ಆಸ್ತಿ
ಎಷ್ಟು ಗೊಳಿ ಕೊಂಡರು
ಸಿಟ್ಟು ಬರದು ಅಂದರು
ನನ್ನ ನಗುತ್ತಾಳೆ ಬಂದು
ಎಲ್ಲ ಚಿಂತೆ ಬಿಟ್ಟು ಬಂದು
ವಿರಹಕೆ ಒಡೆದು ಚೂರಾದ
ಹೂಗಳ ಮೈಸಿರಿ ನಿನ್ನ ಸೇರಿ
ಬಣ್ಣವಾಗಿಹುದು ನನ್ನೆದೆಯ
ಮೀಟಿ ರಂಗೆರಚಿಕೊಳ್ಳಲು.
ಹೃದಗಳ ಮೃದು ಗುದ್ದಾಟಕೆ
ಗುಲಾಬಿ ನಾಚಿ ಕೆಂಪಾಯಿತು,
ಇಳಿಸಂಜೆ ಜಾರುತಿರಳು
ಮುಂಜಾನೆಯ ನಿನ್ನ ನೆನಪು ತುಸು
ಕೋಪಗೊಂಡು ಕಂದಾಯಿತು.
ಕಪ್ಪಾದ ಆಗಸದಲ್ಲಿ ಮೋಡ
ಮುದ್ದಾಡಿ ಕರೆತಂದ ಚಂದಿರನ
ತಂಪು ಬಿಳುಪಾಯಿತು,
ನೀ ಮುಡಿಸಿದ ಸಂಪಿಗೆ ಸರಸದಿ
ಸಾವನಪ್ಪಿ ,ಅಪ್ಪುಗೆಯ ಬಿರುಸಿಗೆ
ನೆಲಕ್ಕೆ ಜಾರಿ ಹಳದಿಯಾಯಿತು.
ಕಣ್ಣ ಸೇರಿ ಪ್ರೀತಿ ಆಳ ತಿಳಿಯುವ
ಕಿಡಿಗೇಡಿ ಮನಕೆ ನಿನ್ನ ಪ್ರೀತಿ
ಅಂತ್ಯವಿಲ್ಲದ ನೀಲಿಯಾಯಿತು,
ಒಳ ಬಂದ ತಪ್ಪಿಗೆ ಹೊರಬಿಡದೆ
ಶಿಕ್ಷೆ ನೀಡಿ,ಅನುನಿತ್ಯ ಕಿತ್ತಾಡಿ ಮತ್ತೆ
ಮುದ್ದಾಡಿ ನಿನ್ನೊಲವಿನ ಬಣ್ಣವೊಂದು ಕಿತ್ತಾಳೆಯಾಯಿತು.
ಹಬ್ಬ ಹಬ್ಬ ಹೋಳಿ ಹಬ್ಬ
ಬಗೆ ಬಗೆ ಬಣ್ಣ ಹಚ್ಚೋ ಹಬ್ಬ..
ಹಬ್ಬ ಹಬ್ಬ ಹೋಳಿ ಹಬ್ಬ
ಬಾಳಿಗೆ ಒಲವಿನ ಬಣ್ಣ ತುಂಬೋ ಹಬ್ಬ..
ಹಾದಿ ಬೀದಿ ಊರೆಲ್ಲ
ಏಳೇಳು ಬಣ್ಣದ ಸವಿಬೆಲ್ಲ..
ಮನೆಮಂದಿ ತನುಮನವೆಲ್ಲ
ಒಲವಿನ ಪಾತರಗಿತ್ತಿ ಆಯ್ತಲ್ಲ..
ರಂಗಿನ ಬಳಗ ಸೇರೋಣ
ಬಣ್ಣದ ಕಡಲಿಗೆ ಧುಮುಕೋಣ..
ನಾಚಿಕೆಯಿಂದ ಓಡೋರ ಹಿಡಿಯೋಣ
ತನುವಿನ ತುಂಬ ಕಾಮನಬಿಲ್ಲನು ಬರೆಯೋಣ..
ಮಳೆಯಲಿ ನೆನೆದಂತೆ
ಓಲವಿನ ಓಕುಳಿಯಲಿ ಕುಣಿಯೋಣ..
ನವಿಲಿನ ಗರಿಗಳಂತೆ
ಶ್ವೇತ ವಸ್ತ್ರಗಳ ಮಾಡೋಣ..
ಬಣ್ಣದ ಸಂಭ್ರಮ ಸಂತಸದ ಸರಿಗಮ
ಬೆರಗಾಗಿ ನಿಂತಿವೆ ರಂಗು ರಂಗಿನ ಕುಸುಮ
ಧರೆಗಿಳಿವೆ ಎಂದನು ಬಾನ ಚಂದ್ರಮ..
ನಮಗಿಲ್ಲಿ ಜಾತಿ ಧರ್ಮದ ಬೇಧವಿಲ್ಲ
ಪ್ರೀತಿ ಸ್ನೇಹದ ಬಣ್ಣ ಹಚ್ಚೋಣ ಬಂದವರಿಗೆಲ್ಲ..
ಆ ಪರಶಿವನಿಂದ ಕಾಮನ ಭಸ್ಮವಾದಂತೆ
ನಾವೆಲ್ಲ ದ್ವೇಷರೋಷವ ದಹನ ಮಾಡೋಣ..
ಮತವೇ ದೇಶದ ಪ್ರಗತಿಗೆ ಮೂಲ
ಮತದಾರರಿಂದಲೇ ಆಗೋದು ಎಲ್ಲ...
ಮತ ನೀಡಿದರೆ ದೇಶ ಪ್ರಬಲ
ಮತ ನೀಡದಿದ್ದರೆ ದೇಶ ದುರ್ಬಲ..
ಇಲ್ಲಿ ಪ್ರಜೆಗಳೇ ಪ್ರಭುಗಳು
ಇಲ್ಲಿ ಜನರೇ ಪರಮಾಧಿಕಾರಿಗಳು..
ಯಾರೇ ಆಳಲಿ ಐದು ವರುಷ
ಅಭಿವೃದ್ಧಿ ಆಗಬೇಕು ನಮ್ಮ ದೇಶ...
ಮತ ನೀಡುವುದು ನಮ್ಮ ಧರ್ಮ
ಹಿತ ಕಾಯುವುದು ಅವರ ಕರ್ಮ...
ನಿಮ್ಮ ಕೆಲಸ ಏನೇ ಇರಲಿ ಆಮೇಲೆ ಮಾಡಿ
ದೇಶಕ್ಕಾಗಿ ಮೊದಲು ಮತದಾನ ಮಾಡಿ...
ಥೂ ! ಹೊಲಸು ರಾಜಕೀಯ ಅನ್ನದಿರಿ
ಹಸನು ಮಾಡೋದು ನಿಮ್ಮ ಕರ್ತವ್ಯ ಮರೆಯದಿರಿ...
ಥೂ ! ಭ್ರಷ್ಟ ರಾಜಕಾರಣ ಅನ್ನದಿರಿ
ರಾಷ್ಟ್ರದ ಮೇಲೆ ಅಭಿಮಾನ ತೋರಿರಿ...
ಹದಿನೆಂಟು ತುಂಬಿದವರೇ ಮತದಾನ ಮಾಡಿ
ನೂರೆಂಟು ತೊಂದರೆ ನಿರ್ಮೂಲನೆ ಮಾಡಿ...
ಮಾರಿಕೊಳ್ಳದಿರಿ ಹಣಕ್ಕೆ ನಿಮ್ಮ ಅಮೂಲ್ಯವಾದ ಮತವನ್ನು
ಮರೆಯದಿರಿ ನಮಗಿಂತ ದೇಶವೇ ಹೆಚ್ಚು ಎಂಬುದನ್ನು...
ತುಳಿಯದಿರಿ ಜಾತಿಧರ್ಮದ ಹಾದಿಯನ್ನು
ಆರಿಸಿ ತನ್ನಿರಿ ದೇಶಪ್ರೇಮದ ಪ್ರತಿನಿಧಿಯನ್ನು..
ಬೆರಳಲಿ ಬೆಳಗಿಸಿ ಇಂದು ಇಂಕನ್ನು
ತೊಲಗಿಸಿ ದೇಶಕೆ ಕವಿದ ಮಂಕನ್ನು...
ಸ್ವಾಗತ ಸುಸ್ವಾಗತ
ಏನೇ ಬರಲಿ ಹೃದಯಪೂರ್ವಕ ಸ್ವಾಗತ...
ಸ್ವಾಗತ ಸುಸ್ವಾಗತ
ನೋವೇ ಆಗಲಿ ನಗುನಗುತ ಸ್ವಾಗತ...
ಗೆಳೆಯರೇ ಓ ಗೆಳೆಯರೇ
ಈ ಲೋಕವೇ ನಮ್ಮ ಸ್ನೇಹಿತ...
ದಿನದಿನವೂ ಅನುಕ್ಷಣವು ಮನವಾಗಲಿ ಜಗ ಎನಿಸಲಿ ಹೊಸ ಸಂತೋಷ ಸಂಗೀತ...
ಸೂರ್ಯ ಮುಳುಗುವ ಹಾಗೆ ಚಂದ್ರ ನಗುವ ಹಾಗೆ ಜೀವನ
ನಿನ್ನೆಯ ಯಾತನೆ ನಾಳೆಯ ಯೋಚನೆ ಯಾಕೆ ಸುಮ್ಮನೆ
ಈ ದಿನವೇ ನಗುತಿರಬೇಕು ನೀನು ಕಿಲಕಿಲನೆ...
ಬಾಳಬಂಡಿ ನಡೆಸು ನೀನು ಜೊತೆಯಾಗಿ ಸಾಗುತ
ನಾನು ನನ್ನದು ಎಲ್ಲ ನಾಶವಾಗೋದು ಖಚಿತ
ಪ್ರೀತಿ ಸ್ನೇಹ ಒಂದೇ ಎಂದೆಂದೂ ಶಾಶ್ವತ...
ಮರುಭೂಮಿ ಇರುವ ಹಾಗೆ ನದಿ ಹರಿವ ಹಾಗೆ ಜೀವನ
ದ್ವೇಷರೋಷ ಏಕೆ ನಿನಗೆ ಧನಕನಕ ಬರದು ಕೊನೆಗೆ
ಒಲವಿನ ಕಡಲಿಗೆ ನೀನು ಧುಮುಕು,ಪರರ ಒಳಿತಿಗಾಗಿ ಬದುಕು...
ನಕ್ಕರೆ ನಿನ್ನ ಬಾಳು ಸುಂದರ ನಗಿಸಿದರೆ ನಿನ್ನ ಹೆಸರು ಅಮರ
ಸುಳ್ಳು ಮೋಸ ಎಲ್ಲ ನಾಶವಾಗೋದು ಖಚಿತ
ದಾನ ಧರ್ಮ ಒಂದೇ ಎಂದೆಂದೂ ಶಾಶ್ವತ...
ಅವಳ ನೆನಪಿನ ಗುಂಗಲಿ ಲೋಕವ ಮರೆತೆನು
ಅವಳ ಕೈಹಿಡಿದು ಅದ್ಭುತವ ನಡೆಸಲು
ನಾ ನಿನ್ನಯ ಭಕ್ತನು ನನ್ನಯ ಪಾಡುನೋಡು
ಓ ದೇವರೇ...ಓ ದೇವರೆ ನೀನೊಮ್ಮೆ ಕಣ್ತೆರೆದು ನೋಡು
ಅವಳ ಕೈ ಹಿಡಿದು ನಡೆಯಲು ನಾ ಯಾರೊ
ನನ್ನ ಬಾಳಲ್ಲಿ ಬರಲು ಅವಳ್ಯಾರೊ?
ನಾ ಸಾಧಿಸುವ ಛಲಕೆ ಸಾರ್ಥಕತೆಯು ಅವಳೆ
ನನ್ನ ಕನಸನ್ನು ನನಸಾಗಲು ಅದೃಷ್ಟವು ಅವಳೆ
ನನ್ನ ಪ್ರೀತಿಯ ದಾರಿಯಲ್ಲಿ ಅವಳೊಂದು ಕನಸಂತೆ
ಈ ಕನಸನ್ನು ನನಸಾಗಲು ಅವಳು ಇರಬೇಕಂತೆ
ನನ್ನ ಪ್ರೀತಿಯು ಸಾಗಲಿ ಕಷ್ಟನಷ್ಟದ ದಾರಿಯಲಿ
ನಂಬಿಕೆಯು ಹುಟ್ಟಲಿ ಅವಳ ನೋಡಿದ ಕ್ಷಣದಿಂದ
ನನ್ನೊಲವಿನ ಬದುಕು ಅವಳು, ಆ ಬದುಕೆ ನನದಾಗಲಿ
ಕಣ್ತುಂಬ ನಿನ್ನ ಬಿಂಬ ತುಂಬುತ ಭಾರವಾಗಿದೆ ಮನಸು
ನೋವು ನುಂಗುತ ಸಹಿಸುತಲಿ ಕೊರಗುತಿರುವೆ
ಮೌನಿಯಾಗಿ, ಅಳಿಸಿ ಬಿಡು ದೇವರೆ ನಿನ್ನ ಹಸ್ತದಲಿ
ಅವಳನ್ನು ಕರುಣಿಸು ದೇವರೆ ಈ ಕ್ಷಣದಲಿ
ಅವಳ ಮನಸಲಿ ಏನಿದೆ ನನಗಂತು ತಿಳಿಯದು
ನನ್ನ ಮನಸಿನ ಮಾತನು ಹೇಳಲು ಆಗದು
ಒಂದಾದರೆ ನಾವಿಬ್ಬರು ನೋಡಲು ಕಣ್ ಸಾಲದು
##ಮೌನಿ##