Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮೌನವಾಗದಿರು ಮುಗುದೆ

ಮೌನವಾಗದಿರು ಮುಗುದೆ
ಮರೆತು ಮಾತುಗಳ ಬೇಗುದಿ
ಮನದ ಆಳಕ್ಕೆ ಇಲ್ಲ ಏಣಿ
ಮುಂದಾಗುವುದಕ್ಕೆ ಹೇಳುವರಿಲ್ಲ ಕಣಿ
ಮನದ ಚಿಂತೆಗಳನು ಇಟ್ಟು
ಸಲಹದಿರು ಮನದೊಳಗೆ,
ಚಿಂತೆಗಳ ಕಸವ ಗುಡಿಸಿ
ಮಾತುಗಳಾಗಿ ಚೆಲ್ಲು ಹೊರಗೆ.
***
ನಡು ಇರುಳಲಿ
ವಿರಹದುರಿಯಲಿ ಬೆಂದು ನಾ ನೊಂದೆ
ಒಂಟಿ ಚಂದ್ರನಿರುವನೇನೋ
ಎಂದುಕೊಂಡು ಹೊರಗೆ ನಾ ಬಂದೆ..
ಅವನೋ ಪ್ರೇಮಗಳ್ಳ,
ಸಿಕ್ಕಳೇನೋ ಅವನಿಗೂ ಚೆಲುವಿ
ಕಾಣೆಯಾಗಿರುವ ಬಾನಿನಿಂದ.
***
ಬೇಸಿಗೆಯ ಈ ನಟ್ಟಿರುಳಲಿ
ನಿದ್ರೆ ಅಳಿದು ಬಸವಳಿದಿರಲು
ಬಿಸಿ ಗಾಳಿ ಸುಡುತಿಹುದು
ಹೊರಮೈಯ್ಯ..
ಒಳಗೂ ತಂಪಿಲ್ಲ,
ಕುದಿವ ನಿನ್ನ ನೆನಪ ಪಾಕ
ಸುಡುತಿಹುದು ಮತ್ತೆ ಮತ್ತೆ ತಿವಿದು
ಒಳ ಹೃದಯ!

- ಶ್ರೀಗೋ.

17 Apr 2019, 12:04 am

ಬದುಕು-ಸಂಘರ್ಷ


ಕೊಡವಿಕೊಂಡು ನಡೆವೆವು
ಕಿವಿಕೇಳಿದ ಮಾತುಗಳನ್ನು
ಮನಸಿನವರೆಗೂ ತಲುಪಬಾರದೆಂದು,
ತಾಳ್ಮೆಯಿಂದ ಕೋಪವ ಕೊಂದು
ನಂಬಿ ನಾಳೆಗೆ ಮತ್ತೆ ಆ ಮಾತುಗಳು
ಕೇಳಬಾರದೆಂದು.

ಹೊಟ್ಟೆಗಿಷ್ಟು ಹಿಟ್ಟು ಹಾಕಿಕೊಂಡು
ಪಾಲಿಗೆ ಬಂದದ್ದೇ ಪಂಚಾಮೃತ ಎಂದು ತಿಳಿದು,
ಪ್ರತಿನಿತ್ಯ ತೃಪ್ತಿಗೊಳ್ಳುವೆವು ಬದುಕಲು
ಸಂಘರ್ಷ ಅನಿವಾರ್ಯವೆಂದು.

ಇಂದು ಗೆದ್ದು ನಿಂತರೆ ನಾಳೆ ಬದುಕೆಂದು
ಅರಿವಿದ್ದರೂನು ಮನಸುಗಳ ಸಂಘರ್ಷಕೆ
ಸಿಲುಕಿ, ಕದಡಿ ಕೂರುವೆವು ಇರುವ
ನೆಮ್ಮದಿಯ ಕೆದಕಿ ತಾರೀಕು ಬದಲಾಗುವ
ಮುನ್ನ ಹೊಸದೊಂದು ಕಷ್ಟ ಹುಡುಕಿ.

- ಚುಕ್ಕಿ

15 Apr 2019, 07:31 am

ಮತದಾನ ಮಾಡೋಣ ಬನ್ನಿರೋ

ಮತದಾನ ಮಾಡೋಣ ಬನ್ನಿರೋ
ಪ್ರಜಾಪ್ರಭುತ್ವದ ದೊಡ್ಡಹಬ್ಬ ಆಚರಿಸೋಣ ಬನ್ನಿರೋ...
ಅಭಿವೃದ್ಧಿಯ ಮತ ಹಾಕೋಣ ಬನ್ನಿರೋ
ಪ್ರಗತಿಯ ರಥ ಕಟ್ಟೋಣ ಬನ್ನಿರೋ...

ಬೆರಳಿಗೆ ಶಾಹಿ ಗುರುತು ಬೆಳಗೋಣ
ನಾಡಿಗೆ ಸದಾ ಒಳಿತು ಮಾಡೋಣ..
ನಮಗಾಗಿ ಹೊಸ ಹೆಜ್ಜೆ ಹಾಕೋಣ
ದೇಶಕ್ಕಾಗಿ ದಿಟ್ಟ ನಿರ್ಧಾರ ಮಾಡೋಣ...

ಸೂಕ್ತ ವ್ಯಕ್ತಿಯ ಆರಿಸೋಣ
ದೇಶದ ಶಕ್ತಿಯ ಮಾಡೋಣ...
ಶಿಷ್ಟ ನಾಯಕನ ಬೆಂಬಲಿಸೋಣ
ಬಲಿಷ್ಟ ರಾಷ್ಟ್ರವ ಬೆಳೆಸೋಣ...

ಜಾತಿಧರ್ಮದ ತಡೆಬೇಲಿ ಸುಟ್ಟುಹಾಕೋಣ
ದೇಶಪ್ರೇಮದ ಸರಪಳಿ ನಿರ್ಮಿಸೋಣ...
ಹಣಕೆ ಮತ ಮಾರದಿರೋಣ
ಜನರ ಹಿತ ಕಾಪಾಡೋಣ...

ಭ್ರಷ್ಟಚಾರ ಬೇರುಸಮೇತ ಕಿತ್ತುಹಾಕೋಣ
ಗಣತಂತ್ರ ವಿಧಾನವ ಗಟ್ಟಿಗೊಳಿಸೋಣ...
ಅವಸ್ಥೆ ದೂರ ಮಾಡೋಣ
ವ್ಯವಸ್ಥೆ ಸರಿ ಮಾಡೋಣ...

- suresh

14 Apr 2019, 12:37 pm

###ಚಂದದ ಚಂದಿರ ###

ಚಂದದ ಚಂದಿರ
ನಗುವ ಹೊತ್ತು
ಸುತ್ತ ಮಿನುಗುತಾ
ನವಿರುವ ಮುತ್ತು
ಚಂದದ ಚಂದಿರ
ಚಲಿಸುತಿರಲಿ
ಅಂದದ ಅಂಬರ
ತೂಗುತಿರಲಿ
ಚಂದದ ಚಂದಿರ
ಬಾನಿಗೆ ಬಾಸುರ
ಅಲ್ಲಿಯೇ ಅಡಗಿಹ
ನನ್ನಯ ಕಸವರ
ಚಂದದ ಚಂದಿರ
ನೋಡಲು ಸುಂದರ
ಮಾಸಿಕವಾಗಿಯೇ
ಪೂರ್ಣ ಚಂದಿರ
ಚಂದದ ಚಂದಿರ
ಕತ್ತಲ ಬೆಳಕು
ಮಿನುಗುವ ಪ್ರಕಾರ
ಬಾಳಿಗೂ ಬೆಳಕು

- Sathish

11 Apr 2019, 07:31 pm

ನಮಗೆ ತಿಳಿಯದ ಬದುಕು

ಮರಣವನ್ನು ಯಾರು ನೋಡಿಲ್ಲ ಬಹುಶ...ಅದು ಅಂದವಾಗಿ ಇರಬಹುದು !

ಏಕೆಂದರೆ ಅದನ್ನು ಒಂದು ಸಲ ಭೇಟಿಯಾದವರು.ಮತ್ತೆ ಜೀವಿಸಲು ಮರೆತುಬಿಡುತ್ತಿದ್ದಾರೆ !

ಪ್ರಕೃತಿಯ ನಿಯಮಗಳು ಕೂಡಾ ತುಂಬ ವಿಚಿತ್ರವಾಗಿದೆ -

ಪ್ರಾಣವಿರುವ ಮನುಷ್ಯ ನೀರಿನಲ್ಲಿ ಮುಳುಗಿ ಹೋಗುತ್ತಾನೆ !
ಸತ್ತವನು ನೀರಿನಲ್ಲಿ ತೇಲುತ್ತಾನೆ !

ಜೀವನವೆಲ್ಲ ಹಣದ ಹಿಂದೆ ಓಡುವವನಿಗೆ ಗೊತ್ತಾ ?
ನಾಳೆ ಸತ್ತ ಮೇಲೆ ಅವನು ಬರೀ ಕೈಯಲ್ಲಿ ಹೋಗುತ್ತಾನೆಂದು !

ಸುಂದರವಾದ ಶರೀರವನ್ನು ನೋಡಿ ಆನಂದಿಸುತ್ತೇವೆ ಆದರೆ...ನೀವಾದರು ನಾನಾದರು ಆಗುವುದು ಬೂದಿನೆ...

ಒಬ್ಬರು ಅತ್ತು ಮನಸು ಹಗುರ ಮಾಡಿಕೊಳ್ಳುತ್ತಾರೆ !
ಇನ್ನೊಬ್ಬರು ನಕ್ಕು ದುಃಖವನ್ನು ಮರೆಮಾಡಿಕೊಳ್ಳುತ್ತಾರೆ

ಈ ಮನುಷ್ಯರ ಐಕ್ಯತೆಯನ್ನು ನೋಡಿದರೆ ನನಗೆ ಆಶ್ಚರ್ಯವಾಗುತ್ತದೆ !

ಬದುಕಿರುವವರೆಗು ಒಬ್ಬರನ್ನು ತುಳಿದು ಮೇಲೆ ಬರಬೇಕೆನ್ನುಕೊಳ್ಳುತ್ತಾನೆ...
ಇರುವಷ್ಟು ದಿನ ಕಿತ್ತಾಡಿಕೊಳ್ಳುತ್ತಾರೆ...
ಸತ್ತ ಮೇಲೆ ತನ್ನ ಹೆಗಲ ಮೇಲೆ ಹೊತ್ತುಕೊಂಡು...
ಮಸಣದ ವರೆಗೆ ಹೋಗುತ್ತಾನೆ...

ಇರುವವರೆಗು ಎಲ್ಲರನ್ನು ಪ್ರೀತಿಸೊಣ...
ಒಳ್ಳೆಯ ಮಾತನ್ನೆ ಆಡೊಣ..
ಒಬ್ಬರಿಗೊಬ್ಬರು ಸಹಾಯ ಮಾಡೊಣ....

ಚೇತನ್ ಜಿಕೆ

ಬಿಂದಾಸ್

- Chethan Gowda

11 Apr 2019, 10:16 am

ಅಮ್ಮ ಎಂದರೆ...

ಭ್ರೂಣ ಹೊತ್ತಳು, ಜೀವಕೆ ಜನ್ಮವಿತ್ತಳು
ಬದುಕು ಕಟ್ಟುವ ಕಲೆಯ ತಿಳಿಸಿ ಕೊಟ್ಟಳು..!
ತುತ್ತು ಕೊಟ್ಟಳು, ಸವಿಯ ಮುತ್ತು ಕೊಟ್ಟಳು
ನಮ್ಮಯ ಗಾಯಕ್ಕೆ ತಾ ಅತ್ತುಬಿಟ್ಟಳು..!
ಪ್ರೀತಿ ಕೊಟ್ಟಳು, ನೀತಿ ಹೇಳಿ ಕೊಟ್ಟಳು
ನಮ್ಮ ಮನದ ಭೀತಿಯನ್ನೇ ದೂರವಿಟ್ಟಳು..!
ಧೈರ್ಯ ಕೊಟ್ಟಳು, ಸಕಲ ಸ್ಥೈರ್ಯ ಇಟ್ಟಳು
ಮನದಿ ಕ್ರೌರ್ಯವನ್ನು ತಾನು ಸುಟ್ಟು ಬಿಟ್ಟಳು..!
ಮಮತೆ ಇತ್ತಳು, ಶ್ರಮತೆ ಕಲಿಸಿ ಕೊಟ್ಟಳು
ಕರುಣೆಯೆಂಬ ಕವಿತೆಯನೇ ಬರೆದು ಕೊಟ್ಟಳು..!
ಹೇಸರನಿಟ್ಟಳು, ಬಸಿರಲಿ ಉಸಿರನಿಟ್ಟಳು
ನಮ್ಮ ಏಳಿಗೆಗಾಗಿ ತನ್ನ ಕನಸ ಕಟ್ಟಿಟ್ಟಳು..!
ಅನುಕ್ಷಣವೂ ನಮಗಾಗಿ ಅಮ್ಮ ಅತ್ತಳು ಸತ್ತಳು...!

~ ಸಿದ್ದು ಗುಂಡ

- - ಸಿದ್ದು ಕನ್ನಡಿಗ

10 Apr 2019, 08:40 pm

ತಳಮಳ ಸಾಕು ತನುವೆ

ತಳಮಳ ಸಾಕು ತನುವೆ ನಾಳೆಗೆಲ್ಲ
ನೀನಾಗೇ ಮರೆಯುವೆ, ಏತಕೆ ನೆನ್ನೆಯನು
ಮತ್ತೆ ಮತ್ತೆ ಕರೆಯುವೆ ಸುಮ್ಮನಿರು ಸಾಲದೆ ನೋವುಂಡು ಕೊರಗಿರುವುದು ನಿನಗಿನ್ನು
ಬುದ್ದಿ ಬಂದಿಲ್ಲವೇ!?

ಯಾರು ನಿನ್ನವರು ನೆನ್ನೆಯಲ್ಲಿ ನಿನ್ನ
ಬಿಟ್ಟವರೇ,ಯಾರು ಪರರು ನಾಳೆಗಳಲ್ಲಿ
ನಿನ್ನ ಕೈ ಹಿಡಿದು ನಡೆಸುವವರೇ?

ತವಕಿಸಿ ನಿನ್ನಲ್ಲೇ ನೀ ಕಳೆದು ಹೋಗದಿರು,
ನಾಳೆಗೆಂದು ಸ್ವಲ್ಪ ಕೂಡಿಟ್ಟಿರು ನಿನ್ನ ನಗುವನು
ಮತ್ತೆ ಹುಡುಕ ಬೇಕಾದಿತು ಇತರರ ತುಟಿಯಲ್ಲಿ
ನಿನ್ನ ಸಂತೋಷಕೆಂದು!!

ಟೀಕಿಸುವವರ್ಯಾರು ತಾಳೆ ಹಾಕಿ ನೋಡರು
ನಿನ್ನ ಮನದಾಳದ ನೋವನ್ನು, ಬಿದ್ದ ಜಾಗದ
ಗುರುತು ಕಾಣರು ಎದ್ದ ನಿನ್ನ ನಗುವ ಹೊರೆತು,
ಹೊತ್ತು ತಿರುಗದಿರು ಭೂಮಿ ತೂಕದ ನೋವು
ನಿನ್ನ ಮನದಲ್ಲಿ ,ಆಗಸವುಂಟು ನಿನ್ನ
ನೋಡುತಲಿ ಕರೆಯುತ್ತಾ ಕಣ್ಣ ಅಂಚಲಿ.

- ಚುಕ್ಕಿ

09 Apr 2019, 10:05 pm

ಕಾಡೋ ಬೆಳಂದಿಗಳು....

ಕಾಡೋ ಬೆಳದಿಂಗಳೆ
ಮಾತು ಮರೆಯಾಗಿದೆ
ಮೌನ ಮಿನುಗುತ್ತಿದೆ......

ಪೀತಿ ಹೊಳೆ ತುಂಬಿದೆ
ಕಣ್ಣ ತುಂಬಿ ಹರಿದಿದೆ......

ಆಸೆ ಮುಗಿಲೆರಿದೆ
ಕತ್ತಲಲ್ಲಿ ಹುಡುಕಾಡಿದೆ......

ಬಾವ ಅತಿಯಾಗಿದೆ
ಬೆಳಕನ್ನೆ ಬಿಗಿದಪ್ಪಿದೆ...........

ಒಲವೊಂದು ಮನತುಂಬಿದೆ
ತನ್ನ ತಾನೆ ಮರಯುತ್ತಿದೆ.....

ಹಕ್ಕಿ ಅಂತೆ ಹಾರಿದೆ
ರೆಕ್ಕೆ ಕಳಚಿ ಬಿದ್ದಿದೆ......

ಮೂಕ ಹಕ್ಕಿ ಹಾಡಿದೆ
ರಾಗಸೇರಿ ನಿದ್ದೆ ಮರೆತೋಗಿದೆ.....

ಕಾಡೋಬೆಳದಿಂಗಳೆ
ಮತ್ತೆ ಹಟಮಾಡಾದೆ ನನ್ನ ಹುಡುಕೆಂದಿದೆ......

- ರಾಗಸಿರಿ....

08 Apr 2019, 10:50 am

ಅವಳೇ ಶೋಭೆ

ಪ್ರೀತಿಗೆ ತಲೆಬಾಗುವವಳು
ಸ್ನೇಹಕ್ಕೆ ಬೆಲೆ ಕೊಡುವವಳು
ಮಗುವಿನ ನಗು ನಗುವವಳು
ನಗು ನಗುತ ನನ್ನ ಬಿಟ್ಟು
ಎಲ್ಲರೊಡನೆ ಬೆರೆಯುವವಳು

ಅವಳೊಂದು ಬಣ್ಣಬಣ್ಣದ ಚಿಟ್ಟೆ
ತೊಟ್ಟಿದ್ದಳು ಗುಲಾಬಿ ಹೂವಿರುವ
ಬಣ್ಣ ಬಣ್ಣದ ಬಟ್ಟೆ, ಬಣ್ಣ ಬಣ್ಣದ ಬಟ್ಟೆ
ಹೆಣ್ಣಿಗೆ ಶೋಭೆ ಅದೆ ಆ ಬಟ್ಟೆ ಇವಳು
ತೊಟ್ಟರೆ ಆ ಬಟ್ಟೆಗೆ ಇವಳೇ ಶೋಭೆ

ಅವಳಿಗೆ ಸೀರೆ ಅಂದ, ಅವಳು ಸೀರೆ
ತೊಟ್ಟರೆ, ಸೀರೆಗೆ ಅವಳೇ ಚೆಂದ
##ಮೌನಿ##

- RajaneeshNandikolmath

28 Mar 2019, 11:55 pm

ಸ್ಪರ್ಧಾಲೋಕ

ಸ್ಪರ್ಧಾ ಸಾಗರದಲ್ಲಿ
ಕುಂಟುತ್ತಾ ಸಾಗುವ
ಕೂರ್ಮನು ನಾನಾದೆನೆ

ಸ್ಪರ್ಧಾಂಗಣದಲ್ಲಿ
ವೀರಾಗ್ರಣಿಗಳ ಹೋರಾಟದಲ್ಲಿ
ಕೂಪ ಮಂಡೂಕನಾನಾಗಿಹೆನೆ

ತಯಾರಿಯ ತೊರೆದು
ತೋರಿಕೆಯ ಮೆರೆದು
ಮಿತ್ಯಲೋಕದಧಿಪತಿನಾನಾದೆನೆ

ಉತ್ತರನ ಪೌರುಷದಿ
ಹಿರಿಮೆಯ ಬಯಸಿ
ಸ್ವಪ್ನಲೋಕದ ಸುಂದರಿನಾನಾದೆನೆ

ಗುರಿಯಿಂದ ಸರಿದು
ಗುಲಾಮಗಿರಿಗೆ ಒಲಿದ
ಬಲಿಪಶುನಾನಾದೆನೆ

ಸಾಧಿಸುವ ಛಲವಿಲ್ಲದೆ
ನಿರ್ಧರಿಸುವ ಬಲವಿಲ್ಲದೆ
ಸವೆಯುತಿಹುದು ಕಾಲ



ಶಾರದ

- ಶಕುಂತಲಾ

27 Mar 2019, 04:44 pm