Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ವಿಜಯಪುರದ ಕುವರಿ

ನೋಡು ನೋಡಲ್ಲಿ ಕಣ್ಣಾರೆ ಬರುತಿಹಳು
ನಗು ನಗುತಾ ಹೆಜ್ಜೆ ಹಾಕುತಿಹಳು
ಅವಳ ಮನಸು ಅಂದ
ಅವಳ ಹೃದಯ ಚೆಂದ
ಬಾ ಇಲ್ಲಿ ಓ ಗೆಳೆಯ ಎನುತಿಹಳು
ಕೈಬೀಸಿ ಬಳಿಗೆ ನನ್ನ ಕರೆದಿಹಳು

ವಿಜಯಪುರ ಪೂರದ ಕುವರಿಯು ಅವಳು
ಫಾರ್ಮಸಿ ಕಾಲೇಜಿನ ವಿದ್ಯಾರ್ಥಿನಿ ಅವಳೆ
ಸರಸ್ವತಿ ರೂಪಿಣಿ ಮಾತೃ ಸ್ವರೂಪಿಣಿ
ರಜನೀಶನ ರಾಣಿಗೆ ಹೂಗಳ ಮಾಲೆ

ನಂಬಿರುವ ನನ್ನಯ ಸ್ನೇಹಕ್ಕಾಗಿ
ನಾ ಪ್ರೀತಿಸಿದ ಪ್ರೀತಿಯ ಪ್ರೀತಿಗಾಗಿ
ಕಾಯುತಿಹಳು ನೋಡಲ್ಲಿ ಮನುಜೆಯಾಗಿ
ರಜನೀಶ ನ ಕನಸಿನ ರಾಣಿಯಾಗಿ

ಕಲ್ಮಶವೇ ಕಾಣಿಸದ ಅವಳ ನಗೆ
ಸುತ್ತು ಸುಳೆಯೋ ತಂಗಾಳಿ ಅವಳುಸಿರು
ಅವಳ ಒಳ್ಳೆಯ ನಡತೆಯೆ ಅವಳುಡುಗೆ
ನಮ್ ಹುಡುಗಿಯ ರೂಪವೇ ಚೆಂದದ ಗೊಂಬೆ
##ಮೌನಿ##

- RajaneeshNandikolmath

06 Jun 2019, 10:46 am

ಮಾಯದ ರಂಭೆ

ಆವಳೊಂದು ಮಾಯದ ರಂಭೆ
ಬೀಡುವಳೇ ರಮೀಸದೆ

ಹುಣ್ಣಿಮೆಯ ಬೆಳಕೀಗು ಅಮುವಾಸೆಯ ಕತ್ತಲಿಗು ಮುಂಜಾನೆಯ ರವಿಗು
ತಂಪಿನ ಶಶಿಗು ಆಸೆ ಹುಟ್ಟಿಸಿದ
ಮರದ ರಂಭೆಯೇ ಅವಳು

ಹರನೀಗು ಹರಿಗು ದೇವರೀಗು ದೇವ್ವಾಗು
ಸೋರ್ಯನೀಗು ಶಶಿಗು ಇಂದ್ರನೀಗು
ಚಂದ್ರನೀಗು ಬಿಡದೆ ಕಾಡಿದವಳು
ಮೋಹದ ಮಡದಿ ಅವಳು

ರಾಮನೀಗು ರಹಿಃಮನೀಗು ಏಸುವಿಗು ಶ್ರೀ
ಕೃಷ್ಣನೀಗು ಅರ್ಜುನೀಗು ಬಲರಾಮಗು
ಬೀಡದೇ ಗೇಜ್ಜೆಕಟ್ಟಿ ಆಡೀಸಿದವಳು
ಕ್ಷಣ ಕ್ಷಣವೂ ಕಾಡುವ ರಂಭೆ

ದೇವ್ವಾಗು ದೇವರೀಗು ಆಥಿರಥ ಮಹರಥ
ರೀಗು ಬೀಡದೆ ಕಾಡಿದವಳು ಇನ್ನು
ನರಮಾನವರೀಗು ಬೀಡುವಳೇ
ಆ ಮಾಯಾಂಗೀಣಿಯ ರಂಭೆ

ರಾಜ್ಯಕ್ಕೂ ರಾಜನೀಗು ಭೂಮಿಯ ಮೇಲೆ
ಹುಟ್ಟಿದ ದೈವಾಂಶಸಂಬೂತರನ್ನು ಬೀಡದ
ಈ ಮಾಯಾಂಗೀಣಿಯ ರಂಭೆ ಇನ್ನು
ನಾನ್ನನು ಬೀಡುವಳೇ ಈ ರಂಭೆ

ಇವಳ ಮಾಯದಾಟದ ಬಲೆಯಲ್ಲಿ
ಸಿಲುಕಿರುವ ಇಲಿಯಂತಾದೆ ಆದರು
ಬೀಡದವಳು ಈ ಮಾಯದ ರಂಭೆ

ಆವಳೊಂದು ಮಾಯದ ರಂಭೆ
ಬೀಡುವಳೇ ರಮೀಸದೆ

- Vinod Naik Vinod Naik

05 Jun 2019, 07:24 pm

ಕಾಣಿಸದಿರು ಇನ್ನೆ0ನೆಂದು...

ಕಾಣದ ಆಸೆಯನ್ನುಟಿಸಿ ಮನದಲ್ಲಿ
ಕಣ್ಣಂಚಿಗು ನಿಲುಕದೆ ಮಾಯವಾದೆಯೆಲ್ಲಿ
ಹೃದಯದದಲ್ಲಿ ಕಟ್ಟಿದ ಪ್ರೀತಿಯ
ಅರಮನೆಗೆ ನೋವಿನ ಕಿಚ್ಚು ಹಚ್ಚಿ
ನಾ ಕಂಡ ಸುಂದರ ಕನಸಿನ ಕನ್ನಡಿ
ಮಬ್ಬಾಯಿತು ಇಂದು ನಿನ್ನಿಂದ
ಬೆಳಕಿನ ಪುಂಜದಂತ ಈ ಬದುಕಿಗೆ
ಕತ್ತಲ ಹೊದಿಕೆ ಹೊದಿಸಿ
ಶಾಂತ ಸಾಗರದ ತಿಳಿನೀರಿನಂತ ಮನಸ್ಸಿಗೆ
ಭೂಕಂಪ ಬಂದು ಬಡಿದಿದೆಯಿ0ದು
....... ನಿನ್ನಿಂದ

ಇನ್ನೆಂನೆಂದು ನನ್ನಿ ನಯನದ ದೃಷ್ಟಿಗೆ
ಬೀಳದಿರು ದಯಮಾಡಿ

---- ಮಂಜು

- ಮಂಜು

04 Jun 2019, 03:15 pm

"ಹಕ್ಕಿಯ ತೆರದಲಿ"

ಹಕ್ಕಿ ಹಾರುತಿದೆ ಗಗನದಂಚಿನಲ್ಲಿ
ಗರಿ ಬಿಚ್ಚಿ ಹೊಲಗದ್ದೆಗಳ ಬಯಲಿನಲ್ಲಿ
ರವಿಯ ಸಂಧಿಸುವ ಬಯಕೆಯಲ್ಲಿ
ಬೇಸಗೆಯ ಉರಿ ಬಿಸಿಲ ಧಗೆಯಲ್ಲಿ
ಉಲ್ಕಾಪಾತಗಳ ಆಸುಪಾಸಿನಲ್ಲಿ
ಗಿರಿವನಗಳ ಹಸಿರು ಕೊಂಬೆ ರೆಂಬೆಯಲ್ಲಿ
ಪರ್ವತ ಶ್ರೇಣಿಗಳ ಕಣಿವೆಗಳಲ್ಲಿ
ಹೂದೋಟಗಳ ಕಂಪು ಇಂಪಿನಲ್ಲಿ
ನಿರ್ಜನ ಹಾದಿಯ ಮರಳುಗಾಡಿನಲ್ಲಿ
ಕೆರೆ,ನದಿ, ಸಾಗರಗಳ ದಡದಲ್ಲಿ
ಜಲಪಾತಗಳ ಸಂದುಗೊಂದಿನಲ್ಲಿ
ಗವಿಗಹ್ವರಗಳ ಮಂಕುಬೆಳಕಿನಲ್ಲಿ
ಹಳ್ಲಿದಿಳ್ಳಿಗಳ ರಸ್ತೆಬದಿಯಲ್ಲಿ
ಜನಜಂಗುಳಿಯ ಗದ್ದಲದ ನಡುವಿನಲ್ಲಿ
ಕನಸ ನನಸಾಗಿಸುವ ತವಕದಲ್ಲಿ
ಪ್ರೀತಿ ಹಕ್ಕಿ ಹಾರುತಿದೆ ಜಗದಹೃದಯದಲ್ಲಿ

#ringformpoetry
© ೨೦೧೯ ಬಿ.ಎಸ್.ಸರೋಜ
೦೩/೦೬/೨೦೧೯

- Saroja BS

03 Jun 2019, 05:01 pm

ವೃಕ್ಷ ಮಾತೆ

ನಾ ಭೂತಾಯಿಯನ್ನು ಬಿಗಿದಪ್ಪಿಲು
ಕಾಂಕ್ರೀಟು ರೋಡ್ ಗಳು ಕಟ್ಟಿಯಾಗಿವೆ ಬೇರುಗಳಿಗೆ ನಿಲ್ಲಲು ಶಕ್ತಿ ಇಲ್ಲದೆ
ಬಲಹೀನವಾಗಿ ಧರೆಗೆ ಉರುಳುತ್ತಿರುವೇ
ತುಸು ಗಾಳಿಯ ರಭಸಕ್ಕೆ

ವರುಣನ ಸಿಂಚನದಲ್ಲಿ ಜಳಕವ ಮಾಡಿ
ನಾ ಹೇಗೆ ದಾಹ ತೀರಿಸಿಕೊಂಡು
ಬೆಳೆದು ನಿನಗೆ ಉಸಿರನ್ನು ನೀಡಲಿ
ನೀ ಹೇಳು ನಗರ ಮಾನವ ??

ತುಸು ತಾಪ ಹೆಚ್ಚಾದರೆ ಗೊಣಗುತ್ತಿಯ ಸುಮ್ಮನೆ
ಹನಿ ನೀರು ಸಿಗದಿದ್ದಾಗ ಕುದಿಯುತ್ತಿರುವೇ ಮೆಲ್ಲನೆ

ರೆಂಬೆ ಕೊಂಬೆ ಕಡಿದು ಮನೆ ಕಟ್ಟಿ ಮರೆತುಬಿಟ್ಟೆಯಾ
ನಾ ಮರೆತರೆ ನಿನಗೆ ಉಳಿಗಾಲ ಇದೆಯಾ
ನಿನ್ನ ಸಂಗಡ ಬೆಳೆಸು ನನ್ನ ಸಂಸಾರ..

ಎ ಜಿ ಶರಣ್

- ಎ ಜಿ ಶರಣ್

03 Jun 2019, 10:23 am

ವಿದಾಯ

ಅಂದು ಅದೇ ಮುಸ್ಸಂಜೆ ಹೊತ್ತಿನಲ್ಲಿ
ನದಿಯ ತೀರದಲ್ಲಿ ಸೋಮಾರಿಯಂತೆ
ಏನನ್ನೋ ಯೋಚಿಸುತ್ತ ಅಲೆಯುತ್ತಿರುವಾಗ
ನನಗೆ ಎದುರಾಗಿದ್ದಳು
ನೋಡಲು ಅಷ್ಟೇನು ಆಕಷ೯ಕವಾಗಿಲ್ಲದಿದ್ದರು
ಒಂದು ಕ್ಷಣ ನಿಂತು ನೋಡುವಂತಿದ್ದಳು
ಎಲ್ಲೋ ನೋಡಿದಂತೆ ಯಾವುದೋ ನೆನಪಿನಾಳದಲ್ಲಿ
ಹುದುಗಿ ಹೋಗಿದ್ದವಳು ಒಡಮೂಡಿದOತಿದ್ದಳು

ಧರೆಗೆ ತಂಪೆರೆಯಲೇನೋ ಎಂಬಂತೆ ಮೋಡ ಹೇಗೆ
ತನ್ನೋಡಲನ್ನೆಲ್ಲ ಬರಿದು ಮಾಡಿಕೊಂಡು
ಪ್ರೀತಿಯ ಮಳೆಗೆರೆವುದೋ
ಅದೇ ಭಾವ ಅವಳು ನನ್ನೆಡೆಗೆ ನೋಡಿದಾಗಿನ
ನೋಟದಲ್ಲಿತ್ತು

ಪ್ರೀತಿಯೆಂಬುದು ಅದ್ಭುತವೋ ?
ಅದ್ಭುತವೆಂಬುದೇ ಪ್ರೀತಿಯೋ ?
ಮೊದಲ ಪರಿಚಯದಲ್ಲೆe ಒಲವಿನಸಿರಿ
ಚಿಗರೊಡೆದಿತ್ತು ಸ್ನೇಹ ಸಲುಗೆಗೆ ತಿರುಗಿ
ಒಬ್ಬರನ್ನೋಬ್ಬರು ಪ್ರೀತಿಸತೊಡಗಿದೆವು

ಆನೇಕ ವಿಷಯಗಳಲ್ಲಿ ಸಮಾನ ಆಸಕ್ತಿ
ಸಮಾನ ಮನಸ್ಕರಾಗಿದ್ದೆವು
ಸುಶ್ರಾವ್ಯವಾಗಿ ಹಾಡಲು ಬರುವ ಬಾವಗೀತೆಗಳಂತಿರದೆ
ಸ೦ಗೀತಗುಣ ಲವಶೇಷವೂ ಇರದ
ಪದ್ಯ ರೂಪದ ಗದ್ಯಗಳೋ ಗದ್ಯ ರೂಪದ ಪದ್ಯಗಳೋ
ಓಟ್ಟಾರೆ ಅಸಂಬದ್ಧ ಪದಗುಚ್ಚಗಳಂತೆ ಕಾಣುವ
ನನ್ನ ಕೆಲ ಕವಿತೆಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದಳು

ವಾಸ್ತವದ ವಸ್ತು ಸ್ಥಿತಿ - ಗತಿ ಸಮಸ್ಯೆ ಪರಿಹಾರಗಳನ್ನು ವಿವರಿಸುವ ಕಥೆ ಕವನ ಕವಿತೆಗಳನ್ನು ಬರೆಯುವುದು ಬಿಟ್ಟು
ಬರೀ ಪ್ರೀತಿ ಪ್ರೇಮಗಳ ನೆಲೆಗಟ್ಟುಗಳಲ್ಲಿ ಬರೆಯುವ
ಹುಟ್ಟು ಪಲಾಯಾನವಾದಿಯೆ೦ದು ಜರಿಯುತ್ತಿದ್ದಳು
ನನ್ನ ಸ್ಥಿತಿ ಗತಿ ಇತಿ ಮಿತಿಗಳ ಅರಿವಿದ್ಧಿದರಿಂದ ನಕ್ಕುಸುಮ್ಮನಾಗುತ್ತಿದೆ

ಬದುಕಿನ ವಿವಿಧ ಮಜುಲುಗಳ ಜಿeವನಾನ್ವೇಷನೆಗೆ ಹೊರಟ ನಮ್ಮಪ್ರೇಮ ವಿಸ್ಮಯವೆಂಬ ದಟ್ಟ ಕಾನನದ ಹಸಿರನ್ನು ಆಗಾಗ ಜಡಿ - ಮಳೆ -ಬಿರು-ಮಳೆ ಹನಿ -ಮಳೆ ಸೋನೆ ಮಳೆಗಳು ಸುರಿದು ಕಾಪಿಡುವ ಪ್ರಯತ್ನ ಮಾಡಿದವು
ಬರ ಬರುತ್ತ ಕಾಡು ಬೆಂಗಾಡಾಗಿ ಮರುಭೂಮಿಯಾಗತೊಡಗಿತು

ಇದಕಿದ್ದಂತೆ ಒಂದು ದಿನ ಹಲವು ಕಾರಣಗಳ ಹೇಳಿ
ಹೊರಟು ಹೋದಳು
ನಾನು ಅವಳು ಹೋದ ದಿಕ್ಕನ್ನೇ ನೋಡುತ್ತ ಸುಮ್ಮನೆ ಕುಳಿತುಕೊಂಡೆನು
ಸುತ್ತ ಮೌನ ಆವರಿಸಿ ಅಸಹನೀಯವೆನಿಸಿತು ನೀರವತೆ ಭೀಕರವೆನಿಸತೊಡಗಿತು ಮನಸ್ಸು ವಿಕ್ಷಿಪ್ತಗೊಂಡಿತು

ಅವಳಾಡಿದ ಮಾತುಕತೆ ಚೆರ್ಚೆ ಹಾವ- ಭಾವ ಭಂಗಿ ನೆಡುವಳಿಕೆಗಳಲ್ಲಿ ಮತ್ತೆ ತಿರುಗಿ ಬರುವ ಸುಳಿವುನ್ನೇನಾದರು ಬಿಟ್ಟುಹೋಗಿರಬಹುದೇನೋ ಎಂದು ನೆನಪಿಸಿಕೊಳ್ಳುತ್ತ
ನನ್ನೂರಿನ ಬೆಟ್ಟಗಳ ಮೇಲಿರುವ ಪಾಳು ಕೋಟೆಯ ಕೃತ್ರಿಮ ವತು೯ಲಗಳಲ್ಲಿ ಅಲೆಯತೊಡಗಿದೆ

- ಶಶಿಧರ ಹೆಚ್ ಎನ್

31 May 2019, 10:32 pm

"ಕವಿತೆಯಾದ ಕೋಗಿಲೆ"

ಜೀವನ ಚೈತ್ರದಲ್ಲಿ ವಸಂತನ ಆಗಮನ
ಉರಿಯುವ ಸೂರ್ಯನಿಗೆ ಹೆದರದ
ಪ್ರೀತಿ ಮುಗಿಲ ಮಳೆಬಿಲ್ಲು

ಹರೆಯದ ಕನಸಿಗೆ ಹಗಲೇನು ಇರುಳೇನು
ರಂಗು ರಂಗಿನ ಹೂವಂತ ಸ್ವಪ್ನಗಳು

ಎಲ್ಲೆಲ್ಲು ಚೆಲುವು
ಅರ್ಥವಾಗದ ಭಾವಗಳ ಸ್ವರ ಸಮ್ಮೇಳ

ಮಾಮರದ ಮೇಲೆ ಕುಳಿತ
ಕೋಗಿಲೆಯ ಕರೆಗೆ ಓಗೊಡುವ ಎದೆ
ಬಯಸಿದ್ದು ಏನೆಂದು ಅರಿಯುವುದರೊಳಗೆ
ವಸಂತನೇ ಮಾಯ

ಆಷಾಢದ ಗಾಳಿಗೆ ಹಾರಿಹೋದ ಕೋಗಿಲೆ
ಮತ್ತೆಂದು ಬರುವುದೆಂದು
ಕಾಯುವುದರಲ್ಲಿ ಹೋದ ಹೊತ್ತು
ಹೇಮಂತನ ಚಳಿಗೆ ಸಿಲುಕಿ ನಡುಗಿ ಹೋಯಿತು
ಕೋಗಿಲೆಯ ದನಿಯ ನೆನಪು
ಸುತ್ತ ಸುಳಿದು ಬೇಟೆಯಾಡಿ
ಕವಿತೆಯಾಯಿತು
ಭಾವಗೀತೆಯಾಯಿತು

© ೨೦೧೯ ಬಿ.ಎಸ್.ಸರೋಜ
೨೮/೦೫/೨೦೧೯

- Saroja BS

28 May 2019, 04:31 pm

ನನ್ನಾಕೆ...

ಎರಡು ಮಾಸಗಳಿಂದ ಪರಿತಪಿಸುತ್ತಿದೆ
ಮನಸ್ಸು ಈ ಪ್ರೀತಿ ನಿವೇದನೆಯ
ನಿನ್ನೊಂದಿಗೆ ಹಂಚಿಕೊಳ್ಳಲು!!

ನನ್ನೆದೆಯ ದೈರ್ಯದ ರಥ.....
ನೀ ಎದುರಾದೊಡನೆ ಭಯದಿ ಕೊಂಡಿ
ಕಳಚಿ ನಿಲ್ಲುವುದು ಮುನ್ನಡೆಯದೆ!!

ಎಂದಾದರೂ ನಿನ್ನೆದುರು ಬಂದು
ತೋಡಿಕೊಂಡರೆ ಪ್ರೀತಿಯ
ಈ ಅಭಿಮಾನಿಯ ಮನಸ್ಸು ನೋಯಿಸದೆ!!

ಒಪ್ಪಿಕೊ ಗೆಳತಿ ನನ್ನ
ನಿನ್ನ ಇನಿಯನೆಂದು

..........ಮಂಜು

- ಮಂಜು

24 May 2019, 08:44 pm

ಅರೆಗಪ್ಪು ಬಣ್ಣದ ಹುಡುಗಿ ....

     ೧

ಅರೆಗಪ್ಪು ಬಣ್ಣದ ಹುಡುಗಿ .........

ಅವಳು ಹಾಗಿದ್ದಳು ಸ್ವ‌ಪ್ನಲೋಕದ ಸುಂದರಿಯೇನಲ್ಲ ಆದರೆ ತನ್ನ ಚೆಲುವನ್ನೆಲ್ಲ ಆ ಕಣ್ಣಗಳಲ್ಲೇ ತುಂಬಿಕೊಂಡಿದ್ದಳು

ತನಷ್ಟಕ್ಕೆ ತಾನೇ ಮಾತಾಡಿಕೊಂಡ೦ತೆ
  ತನಗೆ ತಾನೇ ತಾನಾಗಿದ್ದವಳು ಬಾನಲ್ಲಿಯ
ಒಂಟಿ ಹಕ್ಕಿಯಂತೆ.

ನನ್ನ ಅಪ್ರಬುದ್ಧ ಪ್ರೀತಿಗೆ, ಅಸ೦ಖ್ಯ ಕಲ್ಪನೆಗಳಿಗೆ ಕಾರಣಳಾದವಳು ಅದ್ಭುತವಾದೊಂದು
ಬಾವ ಲಹರಿಗೆ ಸ್ಫೂರ್ತಿಯಾಗಿದ್ದಳು

ನನ್ನ ಅತಿರೇಕದ ವತ೯ನೆಗೆ ತುಂಟಾಟಗಳಿಗೆ ಅವಳ ಉತ್ತರ! ..,ನಿರಂತರ ಮೌನದ....ನಿರುತ್ತರ

ಅದು ಯಾವ ಸೃಷ್ಟಿಯ ಮಾಯೆಯೋ?ಸಹಜ ಅನುಭೂತಿಯೋ?
ಕತ್ತಲ ಕೂಪಕ್ಕೆ ತಳ್ಳುವವರ ನಡುವಿನಿಂದ ಕೈ ಹಿಡಿದು ಎಳೆದು ತಂದು ಬದುಕಿನ ಹಲವು ಆಯ್ಕೆಗಳ ಕವಲುದಾರಿಯಲ್ಲಿ ನಿಲ್ಲಿಸಿ ಹೋಗಿದ್ದಳು

ಅಸಾಮಾನ್ಯಳೆeನಲ್ಲ  ಅತೀ ಸಾಧಾರಣ ಹುಡುಗಿ
ಆದರೆ ಅವಳ ಚೆಲುವನ್ನೆಲ್ಲ ಅವಳ ಕಣ್ಣುಗಳಲ್ಲೇ ಕಂಡಿದ್ದೆನು

ಕೆನೆಹಾಲ ಬಣ್ಣದವಳೇನಲ್ಲ  ಅರೆಗಪ್ಪು ಬಣ್ಣದ ಹುಡುಗಿ

ನೆನಪಾದಳಷ್ಟೇ ಮರೆಯುವ ಮುನ್ನ !
       


ಸಿದ್ದಾಥ೯ ...........


ಕಾಠಿಣ್ಯತೆಯ ಪರಮಾವಧಿ ಅನುಸರಿಸಿ
ಮನೋನಿಗ್ರಹಮಾಡಿ ಮೋಕ್ಷ ಪಡೆದವರಲ್ಲಿ ಆನೇಕರು
ಇವನು ಅವರನ್ನು ಅನುಕರಸಿ ಮೋಕ್ಷ ಪಡೆಯಲೆತ್ನಿಸಿ ಸೋತಿದ್ದನು

ಮತ್ತೆ
ಜೀವನ ಸಾಥ೯ಕತೆಯ ರಹಸ್ಯ ಜ್ಞಾನಾನ್ವೇಷಣೆಯ ಹಿಂದೆ ಬಿದ್ದು ಮಧ್ಯೆ ದಾರಿಯಲ್ಲೆಲ್ಲೋ ಏನೂ ಅಥ೯ವಾಗದೆ ಬದುಕು ನಿರಥ೯ಕವೆನಿಸಿ ನಿರಾಸೆಗೊಂಡು ಏನೂ ಸಾಧಿಸದ ಸಾಧಕನ ಮನಃಸ್ಥಿತಿಯಲ್ಲಿದ್ದನು

ಆಗ ಎಲ್ಲರನ್ನು ತೊರೆದು ಎಲ್ಲವನ್ನು ತ್ಯಜಿಸಿ ನಡೆದವನು

ಈಗ ಪ್ರಕೃತಿಯು ನಿಯಮ ಮೀರದೆ
ಮಾನವ ಸಹಜ ಮನೋಭಾವಗಳಿಗೆ ಹಿಂತಿರುಗಿ
ಎಲ್ಲರಲ್ಲಿದ್ದುಕೊಂಡು ಎಲ್ಲರೊಳೊಂದಾಗಿ
ಎಲ್ಲರ ಜೊತೆಯಾಗಿ ಎಲ್ಲರನ್ನೋಳಗೊಂಡ ಸಮಬಾಳ್ವೆಯ‌ ಸಮಸಮಾಜವೊಂದನ್ನು ಸಿೃಷ್ಠಿಸಿ ನಿಜದ ಜ್ಞಾನ ಪಡೆದು ಬದುಕಿನ ಸಾಥ೯ಕತೆಯನ್ನು ಕಂಡುಕೊಂಡನು

ಎಲ್ಲರ ಪ್ರಶಾಂತ ಪ್ರಾಂಜಲ ಮನಸ್ಸಿನ
ಪ್ರತೀಕವಾಗಿರಿವವನು

ತನ್ನ ಆ ನಿಮ೯ಲ ಸ್ನಿಗ್ಧ‌ ಮುಗ‌ಳ್ನ‌ಗೆಯಿಂದ‌ಲೇ ಎಲ್ಲ‌ರ‌ನ್ನು ಗೆದ್ದಿರುವ‌ವನು

ನನ್ನ ಜಗತ್ತು ನ‌ನ್ನೊಂದಿಗೆ ಸಿೃಷ್ಠಿಯಾಗಿ ನ‌ನ್ನೊಂದಿಗೆ ಕೊನೆಯಾಗುವುದೆಂದು ನಂಬಿರುವ ನನ್ನನ್ನು
ತನ್ನ ನಿಗೂಢ ಪ್ರಶ್ನೆಗಳಿಂದ ಚಿಕ್ಕ೦ದಿನಿ೦ದಲೂ ಕಾಡುತ್ತಲೇ ಬಂದಿರುವನು ..........

- ಶಶಿಧರ ಹೆಚ್ ಎನ್

19 May 2019, 06:46 pm

ಗುರು

ಅರ್ಪಿಸುವೆ ನನ್ನ ಗುರುಗಳಿಗೆ ನಮನ
ಅವರ ಮೇಲಿದೆ ನನಗೆ ಪ್ರೀತಿ ಅಭಿಮಾನ
ಅದಕ್ಕೆ ಬರೆದೆ ಒಂದು ಕವನ
ಅವರ ಪಾಠದಲ್ಲಿ ನಾವು ಹರೆಸುವೆವು ಗಮನ
ಹೇಳಿಕೊಡುವಿರಾ ನಮಗೆ ಸಮಯದ ಮಹತ್ವವನ್ನ


ನೀವೆಂದರೆ ನಮಗೆ ಜೀವ
ತಿಳಿಸಿಕೊಡುವಿರಾ ನಮಗೆ ಹಾವ ಭಾವ
ನಿಮ್ಮ ಆ ನಗು ಒಂದು ಹೂವು
ಆ ನಗುವಿಗೆ ನಾವು ಸೋತುಹೋದೆವು


ಸೋಲು ಗೆಲ್ಲುವಲ್ಲಿಯೂ ತುಂಬುವಿರಿ ನಮಗೆ ಹುಮ್ಮಸ್ಸು
ಆ ನಿಮ್ಮ ಮನಸ್ಸಂತು ಮೊಗ್ಗಿನ ಮನಸ್ಸು
ನೀವೊಂದು ಚಿನ್ನದ ಗಣಿ
ಮಯೋಜಿನ ಎಳೆಯ ಮೇಲಿನ ಮುತ್ತಿನ ಹನಿ
ನಿಮ್ಮ ಒಂದೊಂದು ಮಾತು ಜೇನಿನ ಹನಿ
ಕೊಣೀವರೆಗೂ ನಾವು ನಿಮಗೆ ಚಿರಋಣಿ




---- ತ್ರಿಶ

- Trupthi Trupthi

18 May 2019, 05:28 pm