Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಸಗ್ಗದಿಂದ
ಧರೆಗಿಳಿದ
ಮುತ್ತಿನ ಹನಿಗಳು
ಮೆಲ್ನಗೆ ಅರಳಿಸುವುದು
ಅವಳ ಮೊಗದಲ್ಲಿ
ಅವಳ
ಸುಂದರ ನಗೆ
ನನ್ನ ಮನದೊಳಗೆ
ಹಿಗ್ಗಿಸುವುದು
ಚೈತನ್ಯವನು
ಒಂದು ಕಿರುನಗೆ
ಒಂದು ನಲ್ಮೆಯ ಸ್ಪರ್ಶ
ಒಂದು ಸೌಶೀಲ್ಯದ ನುಡಿ
ಒಂದು ಭರವಸೆ ಸಾಕು
ರಮ್ಯವದು ಜೀವನ
© ೨೦೧೯ ಬಿ.ಎಸ್.ಸರೋಜ
೧೪/೦೬/೨೦೧೯
- Saroja BS
14 Jun 2019, 12:28 pm
ಜ್ಞಾನವೆಂಬ ಬೆಳಕಿನೆಡೆಗೆ
ಅಜ್ಞಾನವೆಂಬ ಕತ್ತಲೆಡೇಗೇ
ಕತ್ತಲಳಿಸುವ ಸುಜ್ಞಾನದೇಡೇಗೇ ನಡೇದು
ವಿಜ್ಞಾನವ ಮುಟ್ಟಿದಂತಾಯಿತು,
ವಿಜ್ಞಾನಿಗಳ ಜೀವವಾಯಿತು
ಸುಜ್ಞಾನದ ಈ ವಿಜ್ಞಾನ ಜೀವಂತವಾಯಿತು
ಅಜ್ಞಾನಿ ಸುಜ್ಞಾನಿಯಾದ
ಸುಜ್ಞಾನಿ ವಿಜ್ಞಾನಿಯಾದ
ಎಲ್ಲರೊಂದಾಗಿ ವಿಜ್ಞಾನವ ಕಾಣುವಂತಾಯಿತು,
ನಿಸರ್ಗವೇ ತಲೆ ಬಾಗಿತು ವಿಜ್ಞಾನಕ್ಕೆ
ಮಾನವನ ಸುಜ್ಞಾನಕೇ
ವಿಜ್ಞಾನದಿಂದರಿಯಿತು ಈ ಮನುಕುಲ
ನಿಸರ್ಗ ದಲ್ಲಿರುವ ಈ ಜೀವಸಂಕುಲವ
ಈ ರೀತಿ ವಿಜ್ಞಾನವ ನೋಡಿದಂತಾಯಿತು,
ವಿಜ್ಞಾನ ಎಂದರೆ ಪರಿಶ್ರಮದ ಫಲ
ಸುಜ್ಞಾನವೇಂದರೇ ಅರಿವಿನ ಫಲ
ವಿಜ್ಞಾನವ ಎಂಬುದು ಅಜ್ಞಾನವೆಂಬ ಕತ್ತಲ ತ್ಯಜಿಸಿ
ಜ್ಞಾನವೆಂಬ ಬೆಳಕು ಚೆಲ್ಲಿಸಿ
ಸುಜ್ಞಾನದ ಬಾಗಿಲು ತೆರೆಸಿದೇ.
- Pradeep Malabadi
13 Jun 2019, 10:42 am
ಎಲ್ಲರನು ಹೊತ್ತ ತಾಯಿ ಭೂ ತಾಯಿ
ಕರುಣೆಯು ಅಪಾರ ಈ ಭೂ ತಾಯಿಗೆ
ಭೂ ತಾಯಿಗಿಂತಲು ಮಿಗಿಲು ಹೆತ್ತ ತಾಯಿ
ನಮ್ಮ ,ನಿಮ್ಮೆಲ್ಲರನು ಹೆತ್ತ ತಾಯಿ,
ಹೆತ್ತ ತಾಯಿಯ ಪ್ರೀತಿ ಸ್ವರ್ಗಕ್ಕಿಂತಲೂ ಮಿಗಿಲು
ಅವಳ ಋಣ ತೀರಿಸಲು ಏಳು ಜನುಮ ಸಾಲದು
ಹೆತ್ತ ತಾಯಿ ದೇವರಿಗೆ ಸಮಾನ
ಈ ತಾಯಿಗೊಂದು ನನ್ನ ನಮನ,
ಹೆತ್ತ ತಾಯಿಯೇ ಮಕ್ಕಳ ಪಾಲಿನ ದೇವರು
ಎಂದೂ ಮೋಸವ ಮಾಡದಿರಿ ಈ ತಾಯಿಗೆ
ಹೆತ್ತ ತಾಯಿಯ ಆಶಿರ್ವಾದ ಮುಕ್ಕೋಟಿ ದೇವರಿಗೆ ಸಮಾನ
ಈ ಆಶಿರ್ವಾದವೇ ಮಕ್ಕಳ ಪಾಲಿನ ಮುಂದಿನ ಆಶಾ ಕಿರಣ,
ಹೆತ್ತ ತಂದೆ-ತಾಯಿಯರನು ಕಡೆಗಣಿಸದಿರಿ
ಕಡೆಗಣಿಸಿ ಮುಂದೆ ಕಷ್ಟವ ಅನುಭವಿಸದಿರಿ
ಹೆತ್ತ ತಂದೆ-ತಾಯಿಯರನು ಪೂಜಿಸಿ
ಅವರ ಜೀವನವನು ಪಾವನಗೊಳಿಸಿ.
- Pradeep Malabadi
12 Jun 2019, 03:54 pm
ಮುನ್ನಡೆಯಬೇಕು;ಏನಾದರೂ ಸಾಧನೆ ಮಾಡಬೇಕು,
ಗಡಿ ಕಾಯಬೇಕು,
ದೇಶದ ಶತ್ರುಗಳನ್ನು ಹೊದೆದುರುಳಿಸಿ ವೀರಯೋಧನಾಗಬೇಕು.
ಕ್ಷಣಕ್ಷಣಕ್ಕೂ ಕಾರ್ಯೋನ್ಮುಖವಾಗಿರುವ ಗಡಿಯಾರದ ಮುಳ್ಳು ನಾನಾಗ ಬೇಕು,
ಲೇಖನವೆಂಬ ಖಡ್ಗ ಹಿಡಿಯಬೇಕು;
ರಾಷ್ಟ್ರ ಕವಿಗಳ ಸಾಲಿನಲಿ ನಾನಿರಬೇಕು,
ಸುತನೂಜನಾಗಬೇಕು;
ಭರತಖಂಡದ ಸಾಧನೆಯ ಜಗತ್ತಿನೆಲ್ಲೆಡೆ ಮೊಳಗಿಸಬೇಕು,
ಭಾರವನ್ನು ಎತ್ತಬೇಕು;
ಸರ್ವಭಾರ ಹೊತ್ತುಕೊಂಡ ಧರಣಿ ನಾನಾಗಬೇಕು,
ವಿವೇಕ ಮಹಾತ್ಮರನ್ನು ಸ್ಮರಿಸಬೇಕು,
ಅವರು ನಡೆದಾಡುವ ಧೂಳಿನ ಕಣ ನಾನಾಗಬೇಕು,
ಒಂದು ದಿನ ಪಯಣ ಮುಗಿಸಬೇಕು,
ಸರ್ವಜನಾಂಗದಲ್ಲಿ ಚಿರಂಜೀವಿಯಾಗಬೇಕು.
- Pradeep Malabadi
12 Jun 2019, 03:37 pm
ಕರ್ನಾಟಕದಿಂದಡಿಗಡಿಗೆ ಕನ್ನಡವೆ ತುತ್ತತುದಿಗೆ ಕನ್ನಡದ ಹಿರಿಮೆ ಸದಾ ಮೇಲು ಮೇಲಕೆ
ಕನ್ನಡವೇ ಎಂದಿಗೂ ನನ್ನ ಮನಕೆ ಎಲ್ಲೆ ಇದ್ದರು ಕನ್ನಡವೇ ನನ್ನ ಬಾಯ ಮೆಲುಕು,
ಕನ್ನಡ ವೆಂದರೆ ಸದಾ ಕಮಲ ಅರಳುವ೦ತೆ ಕನ್ನಡವೆ೦ದರೆ ಸದಾ ನಿರ್ಮಲ ಮನಸ್ಸಿನ೦ತೆ ಕನ್ನಡವಿದ್ದಲಿೢ ಕನ್ನಡಿಗರ ಸದಾ ಗೆಲುವಿದ್ದ೦ತೆ ಯಾರೆ ಆದರೂ ಕನ್ನಡ ನುಡಿಯಲು ಸರಳ ಸಂಜೀವಿನಿಯಿದ್ದ೦ತೆ,
ಕರ್ನಾಟಕದ ನೆಲ ಸದಾ ಕನ್ನಡಮಯ ಕನ್ನಡ ಭಾಷೆ ಸದಾ ಸ್ಮರಣೀಯ ಕನ್ನಡ ನುಡಿಗಳನ್ನಾಡಲು ಬಂಗಾರ ಸುರಿಮಳೆಯು ಏನೆ ಆದರು ಕನ್ನಡನಾಡು ನುಡಿ ನಮ್ಮೆಲೢರ ಕಣ್ಮಣಿಯು,
ಕನ್ನಡವ ಕಲ್ತು,ಸದಾ ಎಲ್ಲರಲ್ಲೂ ಕನ್ನಡವ ಬಿತ್ತು ಕನ್ನಡವೆಂಬುದು ಹಲವು ಕೋಗಿಲೆಯ ಕಂಠದ ರಾಗದ ಗತ್ತು
ಕನ್ನಡವಂಬುದು ಹಲವು ಕವಿಗಳ ಕಾವ್ಯದ ಗಮ್ಮತ್ತು ಕನ್ನಡ ಸದಾ ನಮ್ಮ ಬಾಯಲ್ಲಿ ಹೊಮ್ಮುವ ವಜ್ರದ ಕೀರಿಟಕ್ಕಿರುವ ಕಿಮ್ಮತ್ತು,
ಕನ್ನಡ ನದಿ ಜಲಗಳ ಪ್ರತಿ ಹರಿವಿನಲೢು ಕನ್ನಡ ಸಾಲು ಕರ್ನಾಟಕದ ಪ್ರತಿ ಮಣ್ಣಲೢು ಕನ್ನಡ ಚರಿತ್ರೆಯ ಸಾಲು ಕರ್ನಾಟಕದ ಪ್ರತಿ ಕನ್ನಡಿಗ ಕನ್ನಡದ ಕಾವಲು ಕರ್ನಾಟಕದ ಪ್ರತಿ ಹಸಿರಾದ ಗಿಡ-ಮರಗಳ ಎಲೆಗಳಲೢು ಕನ್ನಡವೇ ಪಿಟೀಲು,
ಕನ್ನಡವೆಂಬುದು ಪ್ರತಿ ಕವಿಗಳ ಲೇಖನ ಶಕ್ತಿ, ಅದುವೇ ನಮ್ಮ ಕವಿಗಳ ಯುಕ್ತಿ, ಕನ್ನಡ ನೆಲದಲ್ಲಿರುವ ನಮಗೆ ಕನ್ನಡವೇ ಮುಕ್ತಿ, ಬೆಳಗಿಸೋಣ ಕನ್ನಡದೀಪ ಹಚ್ಚುವ ಮೂಲಕ ಸಾವಿರ, ಕನ್ನಡ ಭಾಷೆಯೆಂಬ ಪಣತಿ,
ಕನ್ನಡ ನೆಲ,ಜಲ,ಪರಿಸರ ಸದಾ ಶಾಂತಿ ಕನ್ನಡ ಭಾಷೆಯೆಂಬುದು ಸದಾ ಹೊಳೆಯುವ ಕಾಂತಿ ಕನ್ನಡವೆಂಬುದು ಕರ್ನಾಟಕ ನೆಲದ ಒಗ್ಗಟ್ಟಿನ ಪ್ರತೀತಿ ಕನ್ನಡವೆಂಬ ಮ್ರೃದು ಮನಸ್ಸು ಎಂದೂ ಅಳುಕದು ಎಂಬುದೆ ನಮ್ಮ ವದಂತಿ,
ಕನ್ನಡ ಭಾಷೆಯ ಸಾರೋಣ ಎಲೢರ ಕಿವಿಗೆ ಮುಟ್ಟುವ ತನಕ
ಕನ್ನಡ ಭಾಷೆಯ ಸಾರೋಣ ಎಲೢರೂ ಪ್ರೀತಿಸುವ ತನಕ ಕನ್ನಡ ಭಾಷೆಯ ಮೊಳಗಿಸೋಣ ಎಲೢರಿಗಿದು ಬೇಕೆನುವ ತನಕ
ಕನ್ನಡವ ಮುನ್ನಡೆಸೋಣ ಹಿಮಾಲಯ ಗಿರಿಶಿಖರ ತನಕ.
- Pradeep Malabadi
12 Jun 2019, 03:16 pm
ಮತ್ತೆ ಚಿಗುರದ
ಮಾಮರವು ಅಳುತಲಿ
ತಾ ಬಯಸಿದೆ
ಕೋಗಿಲೆಯ ಧನಿಯ!!
ಮಾಮರದಿ ಮೈ ಮರೆತು
ಹಾಡುವ ಕೋಗಿಲೆಯ
ಕೊರಳಲ್ಲೂ
ಯಾವುದೋ ನೋವು!!
ತಾ ಹೆತ್ತ ಕೂಸನು
ಮುದ್ದಿಸುವ ಹಾಗಿಲ್ಲ
ಅಕ್ಕರೆಯ ತುತ್ತಿಕ್ಕಿ
ಅಪ್ಪುವ ಸಲಿಗೆ ಇಲ್ಲಿ!!
ಒಣ ಮರಕೆ ನೀರಿತ್ತು
ಸಲಹುವರು ಯಾರಿಲ್ಲ
ಒಣ ಮರದಿ ಗೂಡು ಕಟ್ಟಿ
ಆಡುವ ಹಕ್ಕಿಗಳೂ ಇಲ್ಲ!!
ಯಾರಿತ್ತ ಶಾಪವೋ
ಪ್ರಕೃತಿಯ ನಿಯಮವೂ
ಬದಲಿಸಿ ಬಾಳಲೂ
ಯಾರಿಂದಲೂ ಆಗಿಲ್ಲ!!
ತನ್ನ ಮನದ ಆ ನೋವ
ಎದೆಯೊಳಗೆ ಬಚ್ಚಿಟ್ಟು
ಇದುವರೆಗೂ ಕೊರಗುತಿದೆ
ನೂರಾರು ಜೀವ!!
- ಪಿ.ಜಿ.ಜ್ಯೋತಿ
12 Jun 2019, 10:23 am
ಅವಳು ಬರೆದ ಕವಿತೆ ಓದಿ
ನಾನು ಬರೆಯಲು ಕಲಿತೆನು!!
ಮೊದಲ ಸಾಲಿನಲ್ಲೇ ಸಾಗಿತು
ಮೊದಲ ಪ್ರೇಮ ಪಯಣವು!!
ಕಣ್ಣ ಭಾಷೆಯ ಅರಿತ ಮೇಲೆ
ಎದೆಯ ಒಳಗೆ ಅವಳ ಲೀಲೆ!!
ಹಗಲು ಇರುಳು ಕಣ್ಣ ಒಳಗೆ
ಅವಳೇ ಬಂದು ಸುಳಿದ ಹಾಗೆ!!
ಬರೆವ ನನ್ನ ಕೈ ನಡುಗುತಿರಲು
ಅವಳೇ ಬಂದು ತಿದ್ದಿಸಿದ ಹಾಗೆ!!
ಅಕ್ಷರವ ಎಣಿಸಿ ಪದವ ಕೂಡಿಸಿ
ಬರೆದೆ ಸಾಲದು ಕವಿತೆಯಾಯ್ತು!!
ಅವಳಿಗಾಗೇ ನಾನು ಬರೆದಿಹ
ಮೊದಲ ಕವಿತೆ ಪ್ರೇಮ ಕವಿತೆ!!
ಅವಳು ಓದುವ ಮುನ್ನ ಹೋಗಿ
ಆ ಪದಗಳಲ್ಲಿ ನಾನು ಬೆರೆತೆ!!
- ಪಿ.ಜಿ.ಜ್ಯೋತಿ
12 Jun 2019, 10:07 am
ಜಾರುವ ಕಣ್ಣೀರಿಗೂ
ಆರುವ ವರವಂತೆ!!
ಕಳೆದಿಹುದು ಆ ನೋವು
ಯಾಕಿನ್ನು ಚಿಂತೆ!!
ಇರುಳು ಕಳೆದ ಮೇಲೆ
ಹಗಲೊಂದು ಮೂಡಿಹುದು!!
ಬೆಳಕಲ್ಲೂ ಭಯವೇಕೆ
ಓ ನನ್ನಯ ಕಾಂತೆ!!
ಬೆರಳ ಬೆಸೆಯಲು ಒಂದು
ಅಂಗೈಯು ದೊರೆತಿಹುದು!!
ನೆರಳ ಜೊತೆ ನೆರಳೊಂದು
ಏಕಾಂತ ಮರೆತಿಹುದು!!
ನೀನಿಲ್ಲಿ ಕುಳಿತಿರಲು
ಸಂಗಾತಿ ದೊರೆತಿಹನು!!
ಒಂಟಿ ನೀನಲ್ಲವೇ ಗೆಳತಿ
ಎಂದು ಅವನು ನುಡಿದಿಹನು!!
ಮನವು ಮುಗಿಲು ಮುಟ್ಟುವ
ಕಾಲವು ಬಂದಿಹುದು!!
ನೀ ಬೇಸರವನು ಮರೆತು
ಆ ನೇಸರನನು ಸೇರು!!
ಶುಭವಾಗುವ ಬದುಕಿಗೆ
ಶುಭಕಾಲವೇ ಎಲ್ಲ!!
ಈ ಶುಭಕ್ಷಣವೇ ಕೊನೆಯಾಗಲಿ
ನಿನ್ನ ಎಲ್ಲ ನೋವು!!
- ಪಿ.ಜಿ.ಜ್ಯೋತಿ
12 Jun 2019, 09:42 am
ಪ್ರೀತಿಗೆ ಕಾರಣವಿಲ್ಲದೆ ಕಾಣುವ ಕನಸುಗಳ ಏರಿ
ಆಸೆಯ ಉತ್ತುಂಗ ದಿಂದ ಜಾರಿದ ಮೇಲೆ
ಖಾಲಿಯಾದ ಮನಸಿನಲ್ಲಿ
ಪದೇ ಪದೇ ನೆನಪಾಗುವ ನೆನಪುಗಳಿಗೆ
ಮೌನವೇ ಆಭರಣ
- ಎ ಜಿ ಶರಣ್
12 Jun 2019, 08:17 am
ನಾನು ಏಕಾಂಗಿ
ಒಬ್ಬಂಟಿ ಯಾನದ ಏಕಾಂಗಿ ಪ್ರಯಾಣಿಕ ನಾನು,....!
ಉತ್ತರ ವಿಲ್ಲದ ಪ್ರಶ್ನೆಗಳಿಗೆ ಮಾಲೀಕ ನಾನು,...!
ಗೊತ್ತು ಗುರಿ ಇಲ್ಲದೆ ಅಲೆಮಾರಿಯಾಗಿರುವವನು ನಾನು,....!
ಬದುಕಿನ ದೋಣಿಯ ದಡ ಸೇರಿಸಲಾಗದ ನಾವಿಕ ನಾನು,....!
ಜೇವನದ ಮುಂದಿನ ದಾರಿ ತಿಳಿಯದ ಅನ್ವೇಷಣೆಗಾರ ನಾನು, ಎಲ್ಲವನ್ನೂ ಮೂಢವಾಗಿ ನಂಬುವ ಅಜ್ಞಾನಿ ನಾನು,....!
ಈ ಜೀವನದ ಪಾಠ ಕಲಿಯಲಾಗದ ವಿದ್ಯಾರ್ಥಿ ನಾನು,.....!
ಎಲ್ಲವನ್ನೂ ಮನಸ್ಸಿಗೆ ಹಚ್ಚಿಕೊಳ್ಳುವ ಹುಚ್ಚ ನಾನು,.....!
ನಿನ್ನ ಸಂಚಿಗೆ ಬಲಿಯಾಗಿ ಶಿಕ್ಷೆ ಅನುಭವಿಸುತ್ತಿರುವವನು ನಾನು,....!
ಯಾವುದನ್ನು ಅರಿಯದೆ ನಿನ್ನಿಂದ ಮೋಸಹೋದವನು ನಾನು,....!
ಏನು ತಪ್ಪು ಮಾಡದಿದ್ದರು ಅಪರಾಧಿ ಸ್ಥಾನದಲ್ಲಿರುವವನು ನಾನು,....!
ಯಾರ ಮನಸ್ಸಿಗೂ ನೋವು ನೀಡದ್ದಿದರು ಕೆಟ್ಟವನು ಎಂಬ ಪಟ್ಟ ಪಡೆದವನು ನಾನು,....!
ಯಾರಿಗೂ ಮೋಸ ಮಾಡದಿದ್ದರು ಮೋಸಗಾರ ನಾನು,....!
ಬಂಧು ಬಳಗದಿಂದ ದೂರವಾಗಿ ಒಬ್ಬಂಟಿಯಾಗಿ ಬದುಕುತ್ತಿರುವವನು ನಾನು,.......!
ನಿನ್ನಿಂದಾಗಿ ಎಲ್ಲವನ್ನು ಕಳೆದುಕೊಂಡು ಅನಾಥನಾಗಿರುವವನು ನಾನು,......!
ಸಮಾಜದಿಂದ ದೂರವಾಗಿ ಏಕಾಂಗಿಯಾಗಿರುವವನು ನಾನು,.....!
ನಾನು ಯಾರೆಂದು ಗುರುತಿಸಿಕೊಳ್ಳಲಾಗದ ಅನಾಮಿಕ ನಾನು,....!
ಏಕಾಂಗಿ ಯಾನದ ಒಬ್ಬಂಟಿ ಪ್ರಯಾಣಿಕ ನಾನು,
ಉತ್ತರ ವಿಲ್ಲದ ಪ್ರಶ್ನೆಗಳಿಗೆ ಮಾಲೀಕ ನಾನು,.....!
- ಹೆಚ್.ಎಸ್.ಶಶಾಂಕ್
- ShashankHS
09 Jun 2019, 01:10 pm