Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಥಾ-ನಾಯಕ 'ಕಟ್ಲಾಯ'ನೀತ

ಗಿಡ್ಡನೆಯ-ದಪ್ಪನೆಯ ದೇಹದ ಆಕಾರ..
ಹೆಗಲಮೇಲೊಂದು ಉದ್ದದ ಸೇಲ್ಯದ ವಿಕಾರ..
ದಣಿವರೆಯದೆ ಬೆವರ ಸುರಿಸುವ ಕೆಲಸಗಾರ..
ಏಟ್ಟಿ-ಗಟ್ಟಿತನಕೆ ನಮ್ಮಪ್ಪನೆ ಕಾವಲುದಾರ..

ವೃತ್ತಿಯಲ್ಲಿ ಮೂಟೆನೋರುವ ಹಮಾಲನಾತ..
ಪ್ರವೃತ್ತಿಯಲ್ಲಿ ಎಂಟೆತ್ತಿನ ಕೊಬ್ಬ ಕುಗ್ಗಿಸುವ ವಕ್ಕಲಿಗನಾತ..
ಉಟ್ಟ-ಬಟ್ಟೆಯಮೇಲೆ ಮನೆಯಿಂದ ನೂಕಿಸಿಕೊಂಡ ನತದೃಷ್ಟನಾಟ..
ಬಾಳೆಯ ಹಣ್ಣಿನ ಸಿಪ್ಪೆಯ ತಿಂದು ಬದುಕಿದಾತ.

ಸಾಲ-ಸೂಲಕೆ ಎದೆಯೋಡೆಯುವ ಗೀರಾಕಿಯಾತ
ಬೀಗರು-ಬಿಜ್ಜರನು ಗುಜ್ಜರಿಗೆ ಹಾಕುವಾತ..
ಮಾನ-ಅವಮಾನಕೆ ಭಯಂಕರ ಹೆದರುವಾತ..
ಅಭಿಮಾನ-ಸ್ವಾಭಿಮಾನಕೆ ಎಡೆಗೊಟ್ಟು ನಿಲ್ಲುವಾತ.

ಅಲ್ಬಳ-ತೋಳ್ಬಲಕೆ ಹೆಸರುವಾಸಿಯಾತ..
ಸಿಟ್ಟು-ಬಂದರು ಪಟ್ಟ ಅಂತ ಬಡಿಯದಾತ..
ಅವಾಗವಾಗ ಅವ್ವನ ಜೊತೆ ಕೋಳಿ ಜಗಳ ಆಡುವಾತ..
ಈತನೇ ನಮ್ಮಪ್ಪ ಏಟ್ಟಿ-ಗಟ್ಟಿ ಕಟ್ಲಾಯ'ನೀತ

- ಆರ್ ಎಸ್ ಸುಗ್ಗಿ.

29 Jun 2019, 07:37 pm

ನೀನೆ ಬಂದು ಹೇಳೂ......

ಬಾನಂಗಳದ ಕಡಲಲೀ ನಿಂತು
ಕೂಗಿದೆ ನಾ ನೂರೆಂಟು ಹೆಸರಿನಲೀ...
ನೀನೆ ಬಂದು ಹೇಳು ನಿನ್ನ ಹೆಸರು ಯಾವುದು

ಕಡಲ ತೀರದಲ್ಲಿ ನಿಂತು
ನಿನ್ನ ಹೆಜ್ಜೆಯ ಗುರುತು ಕಂಡು
ಹಿಂಬಾಲಿಸಿದಾಗಲೆಲ್ಲ.....
ಅಲೆಯು ಬಿಡುತ್ತಿಲ್ಲ
ನೀನೆ ಬಂದು ಹೇಳು ನಿನ್ನ ಮನೆ ದಾರಿಯಾವುದು.....

- ak

29 Jun 2019, 07:33 pm

ನನ್ನ ಬಾಳ ಪುಟದಲಿ

ಹಿಡಿ ಮನಸಿಗೆ ಹಿಡಿಯದಷ್ಟು ಒಲವ ನೀಡಿ
ಒಲ್ಲದ ಮನಸ್ಸಿಂದ ಇಲ್ಲದ ನೆಪ ಮಾಡಿ
ಕಾಣದ ಊರಲಿ ಕಣ್ಮರೆ ಯಾದೆಯಲ್ಲಾ.....
ಅಂದೇ ನಾ ಬರೆದ ಕವನಕ್ಕೆ ನೀನಾದೆ ಮುನ್ನುಡಿ
ಬಿಚ್ಚಿಟ್ಟೇ ಆ ನೋವ ಅಂತರಂಗದಿ ಹಾಡಿ
ಮತ್ತೆ ಮರಳಿ ಮರುಕಳಿಸುವೆಯಾ
ನನ್ನ ಬಾಳ ಪುಟದಲಿ ......


ದಯಮಾಡಿ .....

- dvja

23 Jun 2019, 09:20 am

ಹೇ ದರ್ಪಣ ನೀ..... ನು

ಕನ್ನಡಿಹೊಳಗಿನ ಪ್ರತಿಬಿಂಬ
ಕಾಣದಾಗಿದೆ ಕಣ್ಣಿಗೆ ಕತ್ತಲು ಕವಿದು

ಬದುಕೇ ಮಾಸಿ ಕರೆಗಟ್ಟಿರಲು
ಮುಖದ ಮೇಲಿನ ಕಲೆಗೆ ಪರಿಹಾರವೇಕೆ

ಮಾತುಗಳೆ ಬೆಲೆಕಳೆದು ಮುಕಾಗಿರಲು
ತುಟಿ ಒಣಗಿದ ಪರಿವೆಗಿರಬೇಕು

ದೇಹದ ತುಂಬೆಲ್ಲ ಗೊಂದಲದ ಗೂಡು
ಬಣ್ಣ ಬಣ್ಣದ ಬಟ್ಟೆಯಿಂದ ಅಲಂಕರವಷ್ಟೇ

ಕೇಳುವರಾರಿಲ್ಲ ವ್ಯತೆಯ ಕತೆಯ
ಎಲ್ಲರ ಕಿವಿಯು ಕಿವುದಾಗಿದೆ ತಿಳಿಯದು.

ಆದರೆ

ಹೇ.... ದರ್ಪಣ ನೀನು
ನನ್ನ ಅಣಕಿಸಿ ನಗುತ್ತಿರುವೆಯಲ್ಲ

- ಮಂಜು

22 Jun 2019, 09:23 pm

÷÷÷÷

ಪರದೆ ಸರಿದಾಗಲೇ ತಿಳಿಯುವುದು ಪಾತ್ರ ಯಾವುದೆಂದು.........
ಬಣ್ಣ ಕಳಚಿದಾಗಲೇ ಅರಿವಾಗುವುದು ಪಾತ್ರ ಯಾರದೆಂದು..........
ಸುಖ ಇದ್ದಾಗಲೇ ಲೆಕ್ಕಕ್ಕೆ ಸಿಗುವುದು ಸ್ನೇಹಿತರು ಎಷ್ಟೆಂದು............
ಕಷ್ಟ ಬಂದಾಗಲೇ ಮನವರಿಕೆ ಆಗುವುದು ಯಾರು ನೀಜವಾದ ಸ್ನೇಹಿತರೆಂದು.....

- Shilpa

22 Jun 2019, 05:28 pm

ನಲಿವಿನ ನೋವು

ತಾಯಿ ಜೀವನದ ಆರಂಭವದು
ಜೀವಕ್ಕೆ ಜೀವ ನೀಡೊ ಹೊತ್ತದು
ಕಾಣುವುದು ಕಣ್ಣಿಗೆ ಎಂಥಾ ನೋವದು
ತಾಯಿ ಪದವಿ ಸಿಕ್ಕ ಹೆಣ್ಣು ಮನವದು
ಕರುಳ ಬಳ್ಳಿ ತೋಳಲಿಡಿದು
ನವಿಲ ಹಾಗೆ ನಲಿಯುತಿಹುದು
ತಾಯಿಗೆ ನಲಿವನ ನೋವದು

- dvja

21 Jun 2019, 09:16 pm

ನೀಲಿ ಕುರಿಂಜಿ

ಕೋಲು ದೀಪ ಹಿಡಿದು ನೀಲಿ ಕುರಿಂಜಿ
ಮುಡಿದು,ಮುಂಜಾವು ಮಂಜು ಸರಿಸುತ್ತಾ
ಮಿಂಚು ಕಂಗಳ ಮಡದಿ ಕಂಬಳಿ ಕುಪ್ಪೆ
ಹೊದ್ದು ನಡೆದಿಹಳು ನಾಜೂಕು ಪಾದಕ್ಕೆ
ಕೆಮ್ಮಣ್ಣ ಸವರುತ್ತ.

ಹಗಲಿರುಲೆನ್ನದೆ ಅಡಿಕೆ ಒಲೆಯಡಿಯಲ್ಲಿ
ಮಸಿಯಾಗಿ ದುಡಿವ ಗಂಡನ ಹಬ್ಬದಂದಾದರು
ಮನೆಗೆ ಕರೆತರಲು ಹೊರೆಟಿಹಳು ಯಜಮಾನ್ತಿ
ನೆರಿಗೆ ಬಿಗಿ ಹಿಡಿದು ದಾರಿಹೋಕರಿಗೆಲ್ಲ
ದೂರು ನೀಡುತ್ತಾ.

ಎಲ್ಲಿಹನೋ ನನ್ನವನು ಯುಗ ಕಳೆದು
ಹೋಯ್ತು ಮತ್ತೆ ಯುಗಾದಿ ಬಂದಾಯ್ತು
ಒಮ್ಮೆಯಾದರೂ ಕಂಡುಬಾರೋ
ಮನದೊಡೆಯನೇ ಮನೆಗೆ ಹೋಗುವ
ಎನ್ನುತಲಿ ನಡೆದಿಹಳು ಸರಸತಿ ಹಾಡ ಕಟ್ಟುತ್ತಾ.

ಕೇಸು ಗಂಟಿನ ಪಲ್ಯ, ಕಡ್ಬು ಕೋಳಿತುಂಡು
ಅನ್ನ ಅಪ್ಪೆಕಾಯಿಸಾರು, ಕೋಸಂಬರಿ ಕೊನೆಗೊಂಚೂರು ವಿಳೆದೆಲೆ ಸವಿಯುವಂತೆ
ಒಮ್ಮೆ ಕಂಡುಬಾರೋ ಕಿವಿಹಿಂಡಿ
ಎಳೆದೊಯ್ಯುವೆ ಮಾರು ಮಾತನಾಡದಿರು
ಮತ್ತೆ ಕೋಪಗೊಳ್ಳುವೆನೆಂದು ತನ್ನಲ್ಲೇ
ಅಂದುಳ್ಳುತ್ತಾ.

- ಚುಕ್ಕಿ

15 Jun 2019, 04:12 pm

ಅಪ್ಪ

ಜೀವನದ ಏಣಿ ಸಲೀಸಾಗಿ ಹತ್ತುವ ವೀರ
ಏಣಿಯ ತೊಡಕು ಬಿಡಿಸಿ ಮುನ್ನುಗ್ಗುವ ಧೀರ
ಸವಾಲು ಎದುರಿಸಿ ಜಯಿಸುವ ಮಹಾವೀರ
ಕುಟುಂಬ ಜಗತ್ತಿನ ಕಾವಲುಗಾರ

ತನ್ನ ಮಕ್ಕಳ ಪೋಷಿಸಿ ಮುನ್ನಡೆಸುವ ಗುಣವಂತ
ವಿದ್ಯೆಯ ನೀಡಿ ಸಲುಹಿದ ಹೃದಯವಂತ
ಜಗತ್ತಿನ ಎದುರು ನಿರ್ಭಯವಾಗಿ ಓಡಾಡುವಂತೇ ಮಾಡಿದ ಉಪಕಾರವಂತ
ತನ್ನೊಡಲಲ್ಲಿ ವ್ಯಥೆಯ ತನ್ನಲ್ಲಿ ನೀಗಿಸಿ ನಗುವಿನ ಅಲೇ ಹರಿಸುವ ಉದಾರವಂತ,
ಅಪ್ಪ
ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು.

- Pradeep Malabadi

15 Jun 2019, 01:34 pm

ಮನಕ್ಕೊಂದು ಮನವಿ

ನನ್ನವರನ್ನೆಲ್ಲ
ಇಂದು ನಡೆಸಿಕೊಂಡು
ಹೋಗಲು, ನಾ ನನ್ನ
ಬಲಿ ಕೊಡುತ್ತಲಿರಬೇಕು.

ಅಲ್ಪ ಕಾಲದ ಬುದ್ದಿಗೆ
ಅಧಿಕವಾಡಬೇಡ
ಆತ್ಮ ಗೌರವವೊಂದು ಸಾಕು
ನನ್ನ ನಾ ಉಳಿಸಿಕೊಳ್ಳಲು.

ನನಗಾದ ನೂವು
ನನ್ನವರಿಗೆ ಹೂವಾಗಿ
ಮಾರ್ಪಡುವುದಾದರೆ
ನಾನನುಭವಿಸುವೆ ನೂವುಗಳನ್ನೆಲ್ಲ.

ನನ್ನಲ್ಲಿ ಸಹಿಸಿಕೊಳ್ಳುವ
ಶಕ್ತಿ ಇರುವವರೆಗೂ
ನನ್ನನ್ನ ನನ್ನ ಬಿಟ್ಟು ಬೇರಾರು
ಗೆಲ್ಲಲು ಅಸಾಧ್ಯವಿಲ್ಲಿ !.

- ನಾಗರಾಜ ಬಾಕೆ೯ರ್

15 Jun 2019, 08:03 am

ಊರು-ಉಸಾಬರಿ

ಊರು-ಕೇರೆಂದು ಮೈಮ್ಯಾಲೆ ಹಾಕೋತಿವ್ರಿ.
ಹಾದಿ-ಬೀದ್ಯಾಗ ಬಿದ್ದಿದ್ದು ಅಂಗಳಕ್ಕ ಚಲ್ಲತಿವ್ರಿ.
ಮನೆ-ಮಠದ್ದು ತಲ್ಯಾಗ ಹಾಕೊಂಡು ನಿದ್ದಿಗೆಟ್ಟಿವ್ರಿ.
ಮಕ್ಕಳು-ಮರಿದು ಚಿಂತಿ ಮಾಡಿ ಸ್ವರಗಕತ್ತಿವ್ರಿ!

ಅವನು ಹಂಗ್ ಅದಾನ ಮಂಗ್ಯಾ ಅಂತೆವ್ರಿ.
ಇವನು ಹಿಂಗ್ ಅದಾನ ಸಂಗ್ಯಾ ಅಂತೆವ್ರಿ.
ಒಟ್ಟು ಹೆಂಗ್ ಇದ್ದರೂ ಹಂಗಾ ಅಂತೆವ್ರಿ.
ಮತ್ತೆ ಮ್ಯಾಲ ಮಂದಿದ ನಮಗ್ಯಾಕ ಆಂತಿವ್ರಿ.

ಮುಂದೆ ಇದ್ದಾಗ ಮರ-ಮರ ಮರಗತಿವ್ರಿ.
ಹಿಂದೆ ಇದ್ದಾಗ ಗುಸು-ಗುಸು ಗುರ್ರ್ಗರಿತಿವ್ರಿ.
ಯಾರು ಇಲ್ಲದಾಗ ಪಿಸು-ಪಿಸು ಪಿನ್ ಮಾಡತೆವ್ರಿ
ಹೆಂಗದ್ದಿರು ಊರು-ಉಸಾಬರಿ ಮಾಡತೆವ್ರಿ..

ಸುಗ್ಗಿ..

- ಆರ್ ಎಸ್ ಸುಗ್ಗಿ.

14 Jun 2019, 07:34 pm