ಅವ್ವಾ ಕಡಲ ತೀರದಲ್ಲಿ ಕುಳಿತಾಳೆ
ಒಡಲೊಳಗೆ ಕೂಸು ಕಟ್ಟಿಕೊಂಡು
ಹರಿದು ಬರುವ ತೊರೆಗಳೆಲ್ಲವನ್ನು ನೋಡುತ್ತಾ
ಮುಗಿಲೊಳಗೆ ಸುರಿವ ಮಳೆಹನಿಯು ನೋಡುತ್ತಿರುವಳು ಅವ್ವಾ
ಒಡಲೊಳಗಿನ ಕೂಸು ಕೇಳುತ್ತಿದೆ
ಅವ್ವಾ ಮಳೆ ಭರದಿ ಸುರಿವ ಸಾಗರಕ್ಕೆ ಅಪ್ಪಳಿಸಿ ಬರುವುದು ನನಗೆ ಕೇಳುತ್ತಿರುವಾಗ
ನಿನಗೆ ಭಯವಿಲ್ಲದೆ ಕುಳಿತಿರುವೇಕೆ ?
ಮಗಾ ಕೃಷ್ಣಾ ನದಿಯು ಅಪ್ಪಳಿಸಿ ನನ್ನವರನ್ನು ಹೊತ್ತು ತರುತ್ತಿದೆ ತೊರೆಯ ಅಲೆಗಳಲ್ಲಿ ನಿನ್ನಣ್ಣ ನಿನ್ನಕ್ಕಂದಿರು
ಹರಿವ ನೀರಿನ ಸುಳಿಯಲ್ಲಿ ತೊರೆ ಹೊತ್ತು ಬರುತ್ತಿದೆ ಈ ಕಡಲ ತೀರಕ್ಕೆ ಸಾಗಿಸೆ ಬರುವುದ ಕಾಯುತ್ತಿರುವೆ
ತಡಿಮಗುವೆ ನವ ಮಾಸದೊಳಗೆ ಹೆತ್ತು ಹೊತ್ತು ಸಾಕಿ ಸಲಹಿದ ನನ್ನ ಕರುಳಿನ ಕುಡಿಗಳು ಯಮನ ಹಗ್ಗದೊಳಗೆ ಸಿಲುಕಿ ಒದ್ದಾಡುವ ನನ್ನ ಕರುಳಿನ ಬಳ್ಳಿ ಹರಿದು ತುಂಡಾಗಿ ನೀರೊಳಗೆ ಮುಳುಗಿವೆ ಮಗಾ
ಹೇಗೆ ಸಹಿಸಲಿ ಎದೆಯೊಳಗಿನ ದುಃಖ
ಸುರಿಸುತ್ತಿದೆ ರಕ್ತಕಣ್ಣೀರ ಅವ್ವನ ಕಣ್ಣಲ್ಲಿ
ಕರುಣೆ ಇಲ್ಲವೆ ಅವ್ವನ ದುಃಖವ ಕಂಡು
ಮುಗಿಲ ಮಳೆರಾಯ ಯಮನ ಹಗ್ಗದಂತೆ ಬೀಸಿರುವ
ಒಡಲೊಳಗೆ ಉರಿ ಹೊತ್ತಿ ಧರೆಯೊಳಗೆ ಸುರಿದಿದೆ
ಕರುಳು ಬಳ್ಳಿಯ ಕಳೆದುಕೊಂಡು ಹೇಗಿರಲಿ
ನಿನ್ನಪ್ಪನು ಹುಡುಕುತ್ತಿರುವ ಕೃಷ್ಣನದಿಯ ತೊರೆಯಲ್ಲಿ
ಅವ್ವನ ಮನಸ್ಸು ಅದೆಂತಹ ಅದ್ಭುತ ಅನುಭವ
ಹರಿದು ಬರುವ ತೊರೆಗಳೆಲ್ಲ ಕಡಲ ಸೇರಲು ಬರುವುದು ಅದಕ್ಕೆ ಕಾಯುತ್ತಿರುವೆ
ನನ್ನ ಕುಡಿಯ ದೇಹವಾದರು ಸಿಗಬಹುದೆಂದು
ಅಲೆಗಳಿಗೆ ಬಲೆಯಾಕಿ ಕುಳಿತಿರುವೆ ಮಗು
ಮುಸ್ಸಂಜೆಯ ಸೂರ್ಯನ ಮರೆಮಾಡಿ ಎದುರಾ ದಿರಿ ನೀವು ನನ್ನ ಬಳಿಗೆ ಭಯ ತುಂಬಿ ಬಾರದವು ಹೃದಯದೊಳಗಿನ ಮಾತುಗಳು ಹೊರಗೆ ಪ್ರತಿದಿನ ನಿಮ್ಮ ಕಣ್ಣೋಟಕ್ಕೆ ಕರಗಿ ನೀರಾಯಿತು ಮನದ ಬಯಕೆ ಮೊದಲ ನಿಮ್ಮ ಚುಂಬನದಿಂದ ಸೋತು ಶರಣಾಯಿತು ಪ್ರೀತಿ ತುಂಬಿದ ನನ್ನ ಮನ ಎಂದು ಕಾಣದ ಮೊದಲ ನಿಮ್ಮ ಅಪ್ಪುಗೆ ಕರೆದೊಯ್ದಿತು ನನ್ನ ಸ್ವರ್ಗ ಸುಖದೆಡೆಗೆ ಕನಸುಗಳು ಚಿಗುರೊಡೆಯುವ ಮುಗ್ಧ ಮನಸಿನೊಳಗೆ ಸಂತಸದಿ ಹಾರೈಸಿ ದಿರಿ ಜೊತೆಯಾಗಿ ನನಗೆ ನಿಮ್ಮೊಳಗೆ ಮಗುವಾಗಿ ಕಳೆಯುತ್ತಿರುವ ಕ್ಷಣಗಳು ಚಂದ ನನ್ನೊಳಗೆ ನೀವಿರಲು ಅದುವೇ ಮಹದಾನಂದ ಸುಂದರ ಪ್ರೀತಿ ಇದು ಮನತುಂಬಿ ತೆನೆಗೆ ನನ್ನ ಮದುವೆಯ ಸಂಬಂಧ ಕೂಡಿತು ಅವರ ಜೊತೆಗೆ ಸದ್ಗುಣದ ವರ ಮನಸಲ್ಲಿ ನೆಲೆಸಿರಲು ನಾನು ನಮ್ಮಿಬ್ಬರ ಬದುಕು ಪ್ರೀತಿ ತುಂಬಿದ ಹಾಲುಜೇನು
ಬಾಲ್ಯದ ಆರಂಭದ ಈ ಸಂಬಂಧ
ಬೆರೆಯುವ ಗುಣದ ಅನುಬಂಧ
ಅದುವೇ ನಮ್ಮ ಗೆಳೆತನದ
ಸ್ನೇಹ ಸಂಬಂಧ
ಕತ್ತಲೆಯ ಬದುಕಿಗೆ
ಬೆಳಕ ತರುವ ಈ ಸ್ನೇಹ
ಬಿಡಿಸಲಾಗದ ಒಂದು ಬಂಧನ
ಮತಾಂಧತೆಯ ಭೇಧ ಇಲ್ಲಾ ಈ ಭಾವಕ್ಕೆ
ಮನಿಸಿನ ನೋವಿನ
ಒಲವ ತುಂಬುವುದು ಗೆಳೆತನ..
ಭಾವನೆಗೆ ಕನಸುಗಳಿಗೆ
ಜೀವ ತುಂಬುವುದು ಗೆಳೆತನ..
ಏಕಾಂತದ ಒಂಟಿತನಕ್ಕೆ
ಹೊಸತೆ ಈ ಗೆಳೆತನ…
ಸ್ನೇಹದ ಭಾವನೆಗಳಿಗೆ ಬೆಸೆಯಬೇಕು dara
ಬೆಸದರು ದಾರಕ್ಕೆ ಬಾವನೆಗಳ ಹಾರ...
ಬಾವನೆಗಳ ಜೊತೆಗೆ ಪ್ರೀತಿಯ ಪಯಣ,
ಬರೆಯದೆ ಮುಗಿಯಲಿ ಈ ಸ್ನೇಹದ ಕವನ.....
ಚಿರಕಾಲ ಉಳಿಯಲಿ
ಬಂಧನದ ಭಾವನೆ ಗೆಳೆತನ