Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿಯ ಆಟ, ಜೀವನದ ಪಾಠ..

ಪ್ರೀತಿ ಎಂಬ ಸಾಗರದ ಸುಳಿಯಲ್ಲಿ
ಸಿಲುಕಿ ಮುಳುಗುತ್ತಿರುವ ಗೆಳೆಯನೇ
ಪ್ರೀತಿ ಎಂಬ ಆಟಕ್ಕೆ ಮರುಳಾಗಬೇಡ

ಮತ್ತೆ ಹಿಂಬಾಲಿಸು ನಿನ್ನ ಬಚ್ಚಿಟ್ಟ ಕನಸುಳನ್ನು
ಗರಿ ಬಿಚ್ಚಿ ಹಾರೋವಂತೆ ಗುರಿ ಮುಟ್ಟುವ ತನಕ

ಹಳೆಯ ನೆನಪುಗಳು ಕುಕ್ಕತಿರಲು ಹೃದಯದಲ್ಲಿ
ಭಾವನೆಗಳಿಗೆ ಕುಗ್ಗಿಸುವಿಕೆ ಮಾಡುತ್ತವೆ ಈ ಪ್ರೀತಿ

ಒಂಬಟ್ಟಿ ನೀನಲ್ಲ ಕೇಳು ಹೃದಯವೇ
ನಿನ್ನಂತೆ ಸಹಸ್ರಾರು ಹೃದಯಗಳಿವೆ
ಈ ಪ್ರೀತಿ ಎಂಬ ಆಟದಲ್ಲಿ...

ಬದುಕು ಪ್ರೀತಿಸುವ ಕಲೆ ಕರಗತವ ಮಾಡಿಕೋ...
ಮೈ ಕೊಡವಿ ಎದ್ದೇಳು ನೆನಪುಗಳ ಗುಹೆಇಂದ

ಕುಂಟುಂಬದ ಪ್ರೀತಿ ಹುಟ್ಟಿದಾಗಿಂದ ಜೊತೆ ಇರುವಾಗ ಇನ್ನೇಕೆ ಈ ಮಧ್ಯಂತರದ ಪ್ರೀತಿಗೆ ಇಷ್ಟೊಂದು ತವಕ

ಅಳಿದುಳಿದ ಬದುಕಿಗೆ ಬಣ್ಣ ತುಂಬವ
ಕನಸ್ಸನ್ನು ಕಟ್ಟು ಗೆಳೆಯನೇ....

ಗೆಳೆಯ.....A

- yogi

30 Aug 2019, 08:26 am

ಗೆಳತಿ

ನೀನಿಲ್ಲದ ಈ ಹೊತ್ತಿನಲ್ಲಿ
ನಿನ್ನದೇ ಚಿಂತೆಯಲ್ಲಿ
ಈ ನನ್ನ ಆಸೆಯಲ್ಲಿ...
ಹೃದಯಾಳದ ಮಾತು ಕೇಳಿಬರುತ್ತಿದೆ ಗೆಳತಿ

ಆ ಆಗಸ ಭೂಮಿಯ ತಾಗಿದರು
ಈ ಭೂಮಿ ಈಗಲೇ ಸೀಳಿದರು
ಮತ್ತೆ ಆ ಮಳೆ ಪ್ರವಾಹ ಬಂದರು.,
ಮರೆಯಲಾರೆನೇ ಗೆಳತಿ ನಿನ್ನಗಲನೆ...

- yogi

29 Aug 2019, 12:55 pm

ಸೂತಕದ ಮನೆ.....

ಸೂತಕದ ಮನೆಯಲ್ಲೊಂದು
ನೋವಿನ ಚೀಲ ಗಂಟು ಕಟ್ಟಿ
ಇಟ್ಟಿಹರು ಯಾರಿಗೂ ಕಾಣದ ಹಾಗೆ
ಒಂದೊಂದೆ ಅಣಕ ಮಾತುಗಳು ಇಣುಕಿ
ಇಣುಕಿ ನೋಡುತಿವೆ ಹೊರಬಂದು
ಶಾಂತದಿಂದಿರುವ ಮನಸ್ಸನ್ನು
ಕೆಣಕಿ ಎಬ್ಬಿಸಿ ಮನೆಮಂದಿಯನ್ನೆಲ್ಲ
ಕಾಣದೂರಿಗೆ ಸಾಗಿಸಲೆಂದು .............

ಬಚ್ಚಿಟ್ಟು ಕೊಂಡಿದ್ದ ನೋವಿನ ಚೀಲ
ಬಿಚ್ಚಿಟ್ಟು ಕೊಂಡು ಉಸಿರುಗಟ್ಟಿಸುವಂತಾಗಿದೆ
ಮನೆ ಮಂದಿಗೆಲ್ಲ......

ಸಂಬಂದಗಳ ಸೂಳಿಯಲ್ಲಿ ನಿಂತಿರುವಾಗ
ಬೇರೋಂದು ಎದ್ದು ಮರವನ್ನೆ ಮಸಣದೆಡೆಗೆ
ಸಾಗಿಸಿದಂತಾಗಿದೆ ಇಗ.......

ಹುಟ್ಟುವವರಾರು ಸಾಯುವವರಾರು
ಹುಟ್ಟು ಸಾವಿನ ನಡುವೆ ಬದುಕಿ ನರಳುವವರಾರು
ಇಂತವರ ನಡುವೆ ಸತ್ತುಬದುಕುವವರೆ ಹೆಚ್ಚು...

ನಡುವಲ್ಲಿ ಇರುವವರಿಗೆ ಬಂದಿದೆ ಕಂಟಕದ ನಂಟು ಬಿಡಿಸಿಕೊಳ್ಳುವ ಹಾಗಿಲ್ಲ ಉಸಿರುಗಟ್ಟಿ ಸಾಯುವ ಹಾಗು ಇಲ್ಲ ಇದ್ದು ನರಕ ಅನುಭವಿಸಬೇಕಿದೆ ಇಗ.........

ಸೂತಕದ ಮನೆಯಲ್ಲೊಂದು
ನೋವೀನ ಚೀಲ ಬೀಡಿಸಿಟ್ಟರೆ
ಅಳಿವು ಉಳಿವು ಇಲ್ಲ.......

- ರಾಗಸಿರಿ....

29 Aug 2019, 11:44 am

ಹಿನ್ನಡೆ

ಭವ್ಯ ಭಾರತದ ಹೆಮ್ಮೆಯ ಕುವರಿ
ನಮ್ಮೀ ಭುವನೇಶ್ವರಿ
ಸಾಹಿತ್ಯದ ಹಿರಿಮೆ
ಅದೆ ನಮಗೆಲ್ಲ ಹೆಮ್ಮೆ

ಎಲ್ಲಬಲ್ಲೆನೆಂಬ
ಅಹಮಿಕೆ ಇನಿತಿಲ್ಲ
ಅರಿಯಬೇಕೆಂಬ
ಹಂಬಲ ಅವಿತಿರುವುದಲ್ಲ

ನಲವತ್ತೊಂಬತ್ತು ಅಕ್ಷರಗಳ
ನಾಗಾಲೋಟದಿ ಕಲಿತರು
ಆಳು ಆಂಗ್ಲದ ಇಪ್ಪತ್ತಾರು ಅಕ್ಷರಗಳ
ಕಬ್ಬಿಣದ ಕಡಲೆಯ ಜಗಿಯರು

ಕನ್ನಡಿಗರು ವಿಶಾಲಹೃದಯರು
ಏನೇಬಂದರು ಒಂದೇತೆರನಾಗಿಹರು
ಆಂಗ್ಲರು ಇನಿತು ಬಂದರು
ಏನೋಬಂದಂತೆ ಭ್ರಮಿಸುವರು




ಶಾರದ

- ಶಕುಂತಲಾ

27 Aug 2019, 06:04 pm

ಬೇಸರ

ಕಾಡುತಿದೆ ಈ ಬೇಸರ
ತಿಳಿಯದು ಈ ಮನಸ್ಸಿನ ಭಾವ
ಮರೆಯಾಯಿತು ಈ ಸಂತಸ ಸಮಯ
ಕಾಯುತಿರುವೆ ನಾ ಖುಷಿಯ ದಿನವ

ಮನದ ಕನ್ನಡಿಯ ಒಳಗೆ ಆವರಿಸಿತು
ಈ ಬೇಸರದ ಮುಗುಳು ನಗು
ಅರಿಯಿತು ನನಗೀಗ ಕೌತುಕದ ಭಾವ
ನೋವುನಲಿವುಗಳ ಜೊತೆ ಬೆರೆಯಿತು
ಈ ಬೇಸರ.......
ತಿಳಿ ಮೌನದ ಜೊತೆಗೂಡಿತು ಈ ಬೇಸರ
ನನ್ನ ನೆರಳಾಗಿ ಬಂತು ಸಂತೋಷದ ಭಾವನೆಯಲ್ಲಿ ಜೊತೆಗೂಡಿತು
ಬಿಡುಗಡೆಯ ಹಾದಿಯಲ್ಲಿ
ಕೊನೆಗೂ ಒಂದು ದಿನ ಮರೆಯಾಗಲಿ
ಈ ಬೇಸರ........

- An

26 Aug 2019, 08:47 pm

ಗಿಲ್ಲ ಗಿಲ್ಲದ ಗೆಜ್ಜೆ

ಗಿಲ್ಲ ಗಿಲ್ಲದ ಗೆಜ್ಜೆ
ನೀನಿಡಲು ಹೆಜ್ಜೆ
ಝಣ ಝಣ ಎನುತಿದೆ
ಈ ಮನೆಯ ಒಳಹೊರಗೆ!!
ನೀನೊಮ್ಮೆ ನಗಲು
ಕಳೆದಂತಿದೆ ಇರುಳು
ಬಾನಿನ ಚಂದ್ರಿಕೆಯು
ಈ ಮಡಿಲ ತುಂಬಿರಲು!!

ಚಿನ್ನ ರನ್ನ ಎಂದು
ನಾ ಮುದ್ದಿಸಲು ನಿನ್ನ
ಸಂತಸವೇ ನಿನಗೆ
ನನ್ನೊಡನೆ ಆಡಲು!!
ಈ ತಾಯ ಬಾಳಿಗೆ
ನೀನಾದೆ ದೀವಿಗೆ
ಲಾಲಿಸುವೆ ಕಂದಾ
ನೀ ತಂದೆ ಆನಂದ!!

ಆಕಾಶ ಲೋಕದ
ಓ ದೇವ ಕನ್ನಿಕೆಯೇ
ಮಗುವಾಗಿ ಬಂದಿರುವೆ
‌ಅಮ್ಮ ಎನುತಿರುವೆ!!
ನಿನ್ನ ತೊದಲು ನುಡಿ
ನನಗದೇ ಸಿರಿ ನುಡಿ
ಮಾತಾಡು‌ ಓ ನನ್ನಯ
ಮುದ್ದಿನ ಅರಗಿಣಿ!!

ಅಡವಿಯ ಪೊಡವೆಯ
ಸಂಪಿಗೆ ಮರದಲಿ
ಅರಳುವ ಹೂವಿನ
ಹಾಗೆ ನೀ ಘಮಿಸುವೆ!!
ಸಾಗರದ ಆಳದ
ಮುತ್ತನು ತಂದು ನಾ
ಸಿಂಗರಿಸುವೆ ನಿನ್ನ
ಕರುಳಿನ ಕಮಲವೇ!!

- ಪಿ.ಜಿ.ಜ್ಯೋತಿ

25 Aug 2019, 11:25 am

ನಮ್ಮ ತಿರಂಗ

ನಮ್ಮ ತಿರಂಗಾ

ನೋಡು ನಮ್ಮ ತಿರಂಗಾ,
ಜಗದ ತುಂಬ ಸ್ನೇಹ ತರಂಗ...
ಮನದ ತುಂಬ ಪ್ರೇಮಗಂಗ...
ಏರುತಿದೆ,ಹಾರುತಿದೆ ವೀರ ಕೇಸರಿ ಪತಾಂಗ||೧||

ನೋಡು ನಮ್ಮ ತಿರಂಗಾ
ಕೇಸರಿ,ಬಿಳಿ,ಹಸಿರು ನಡುವೆ ನೀಲಿ ಚಕ್ರ ತರಂಗ
ಜಗದ ಪ್ರಗತಿಯು ಒಂದಾದಂಗ...
ಏರುತಿಹುದು ಹಾರುತಿಹುದು ವಕ್ರದಂಗ ||೨||

ನೋಡು ನಮ್ಮ ತಿರಂಗಾ
ಬಣ್ಣಗಳು ತೋರುತಿವೇ ಶೌರ್ಯವು ಹಿಂಗ.....
ಕೇಸರಿಯು ತ್ಯಾಗ ಬಿಳಿಯ ಶುದ್ಧತೆಹಸಿರು ಕ್ರಾಂತಿಯಂಗ...
ಏರುತಿಹುದು ಹಾರುತಿಹುದು ನಾವೆಲ್ಲಾ ಒಂದೇ ಎನ್ನೋ ಹಾಂಗ ||೩||

ನೋಡು ನಮ್ಮ ತಿರಂಗಾ
ಹಿಂದೂ ಮುಸ್ಲಿಂ ಕ್ರೈಸ್ತ ಒಂದೇ ಭಾರತ ಮಂದಿರ......
ಮಹಾಕಾವ್ಯ, ಕುರಾನ್ ಬೈಬಲ್ ಒಂದೇ ಹಂದರ....
ಏರುತಿಹುದು ಹಾರುತಿಹುದು ನಾವೆಲ್ಲಾ ಒಂದೇ ಎನ್ನೋ ಚಂದಿರ ||೪||

- dhakappa kumar

23 Aug 2019, 02:41 pm

ನನ್ನ ಸಂಗಾತಿ

ಯಶಸ್ಸಿನ ಹಾದಿಯಲ್ಲಿ ನಾ
ನಡೆಯಬೇಕೆಂದು ಬಯಸುವವಳು
ನನಗೆ ಕಷ್ಟಗಳೆ ಬಾರದಂತೆ
ನೋಡಿಕೊಳ್ಳಲು ಬಯಸುವವಳು
ನನ್ನ ಪ್ರತಿ ಹೆಜ್ಜೆಯಲ್ಲೂ
ಜೊತೆಯಾಗಿ ಸಾಗುವವಳು
ಸದಾ ನನ್ನ ಧ್ಯಾನದಲ್ಲೆ ಬದುಕವವಳು. ನನ್ನ ಮಗುವಂತೆ ಸಾಕುತಿಹಳು
ಅವಳೆ ನನ್ನ ಸಂಗಾತಿ.

✍ವರದರಾಜ್

- ವರದರಾಜ್

19 Aug 2019, 05:57 pm

ಯಾವ ಬಂಧವಿದು

ಸಾವಿರ ವಜ್ರದಮಣಿಗಳ ಮೌಲ್ಯವನ್ನು
ಮಿರಿಸುವಂಥಹ ಮಣಿಯು ನಿನು
ನಿನ್ನನ್ನು ಮಣ್ಣಿನ ಮಡಿಕೆಯಲ್ಲೀಟ್ಟ
ಹಾಲಿನಂತೆ ಸಂರಕ್ಷಿಸಲೇ ಆದು ಆಗದು
ಎಕೆಂದರೆ ತೆರೆದ ಜಗದಲ್ಲಿ ಹುಳಿ
ಹಿಂಡುವ ಜನಗಳು ಜಾಸ್ತಿ.....

ಮೌಲ್ಯ ಭರಿತ ಕೀರಿಟ ಮಾಡಿಸಿ
ಆದರೋಳು ಅಡಗಿಸಲು ಯೊಚಿಸಿದೆ
ಆದು ಸಾದ್ಯವಾಗಲಿಲ್ಲ ಏಕೆಂದರೇ ನೀನ್ನ
ಇನಿಯನು ಒಂದು ದಿನ ಬಂದು ಮದುವೆಯ
ನೇಪಒಡ್ಡಿ ಹೊತ್ತು ಹೋಗುವ ಭಯ ಎನಗೆ

ನಿನ್ನನ್ನು ಘಡಿಗೆಯಲ್ಲಿ ಮಸರಿನಂತೆ ರಕ್ಷಿಸಲು
ಮುಂದಾದೆ ಆದರೆ ಕಿಡಿಗೇಡಿಗಳ ಕಲ್ಲಿನ
ಏಟಿಗೆ ಹೊಡೆದು ಹೋಗುವ ಭಯ ನಾನ್ನದು
ಹೆಳು ಹೇಗೆ ಸಂರಕ್ಷಿಸಿ ಕೊಳ್ಳಲಿ ನಿಮ್ಮನ್ನ

ಜಾಸ್ತಿಯಾಯಿತು ನೀ ನಾನಗೆ ಕೊಟ್ಟ ಸಲುಗೆ
ಇಗಲಾದರು ಮಠಕು ಗೋಳಿಸಿಕೂ ಎಕೆಂದರೆ
ಮುಂದೆ ನೀನ್ನ ನೆನಪುಗಳು ಬಾಣಗಳಂತೆ
ನಾನ್ನನು ಕಾಡಬಾರದು......

ಯಾಕೆಂದರೆ ಮುಂದೆ ಒಂದು ದಿನ ನೀ
ಕಾಣೆಯಾದಾಗ ಹುಡುಕಲಾಖದೆ ಮುಕನಾಗಿ
ದುಃಖದ ಬಡಬಾಗ್ನಿ ಯಲ್ಲಿ ಬೆಯ್ಯತ್ತಿರುವೆ
ನಾನ್ನ ಮನವಿ ಪಾಲಿಸು ನೀನು ನಾನ್ನರಿತಿ
ಯಾಗಬೆಡ ಯಾವ ಭಂಧನದಲ್ಲಿಯು
ಭಂದಿಸಬೇಡ
......ಇಂತಿ ನಿನ್ನ ನತದೃಷ್ಟ ಸಹೋದರ....

- Vinod Naik Vinod Naik

18 Aug 2019, 02:34 am

ಮಲಗೆನ್ನ ಕಂದ

ಜೋ ಜೋ ಜೋ ಜೋ
ಮಲಗೆನ್ನ ಕಂದ!!
ನಿದಿರೆ ಕನಸಲಿ ಬರುವ
ಚಂದಿರನು ಚೆಂದಾ!!

ಅಳುವ ತುಟಿ ಮೇಲೆ
ಕೆನೆ ಹಾಲ ಹನಿ ಲೀಲೆ!!
ನೀ ನಗಲು ಹೊಳೆದಿಹುದು
ನವರತ್ನದ ಮಾಲೆ!!

ಕಡಲ ಗರ್ಭದಲಿ
ಮಲಗಿರುವ ಭಗವಂತ!!
ಭೂಮಿಗೆ ಬಂದಿಹನು
ಮಗುವಾಗಿ ನನಗಂತ!!

ಇರುಳ ಈ ಬದುಕಲ್ಲಿ
ನೀನಾಗಿ ಬಂದೆ ಹಗಲು!!
ನೀನಿರಲು ಈ ಮನೆಯು
ಆ ಸ್ವರ್ಗಕೂ ಮಿಗಿಲು!!

- ಪಿ.ಜಿ.ಜ್ಯೋತಿ

17 Aug 2019, 10:25 pm