Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನಯ ಚಿಟ್ಟೆ

ನಿನ್ನನು ನೋಡಿದ ಮೊದ ಮೊದಲು
ಕಂಡೆನು ಮೊಗದಿ ಚಿಟ್ಟೆಯ ಚೆಲುವು
ಹಿಡಿಯಲು ಕಾತುರ ನಾ ನಿನ್ನನ್ನು
ದೂರಕೆ ಸಾಗಿದೆ ನೀ ಇನ್ನಿನ್ನು

ಸಿಕ್ಕಿದೆ ನೀನು ದಿನಗಳಲೆಲ್ಲೊ
ಆಗಲೂ ನಿನ್ನಲಿ ಚಿಟ್ಟೆಯ ಚೆಲುವು
ಆದೆವು ನಾವು ಜೀವದಿ ಒಂದು
ಹತ್ತಿರವಿದ್ದೆ ನೀನೂ ಅಂದು

ಹೀಗೆ ಕಳೆಯಿತು ದಿನಗಳು ಹೇಗೋ
ಅಳಿದಿದೆ ಚಿಟ್ಟೆಯ ಪಕ್ಕಗಳೆರಡು
ಕಂಡೆನು ನಿನ್ನಲಿ ಕೋಪದ ಮೊಗವು
ಹಿಂದಕೆ ಇಟ್ಟೆನು ಹೆಜ್ಜೆಗಳೆರಡು.

ಕೋಪವು ಕೆಲವು ಸಮಯದಿ ಒಂದೆ
ಉಳಿದಿದೆ ಪ್ರೀತಿಯು ಮೊದಲಿನ ಹಂಗೆ

- arun

05 Sep 2019, 08:00 pm

ಶಿಕ್ಷಕ

ನಾ ಕಂಡ ಎರಡನೆ ದೇವರೇ
ಆ ನನ್ನ ಗುರು

ಆ ತಾಯಿ ಜನ್ಮ ನೀಡಿದರೆ
ಗುರು ನೀಡಿದರು ಜೀವನ

ಬದುಕಿನಲ್ಲಿ ನಾ ಕಲಿತ ಪಾಠ
ಆ ಗುರು ನೀಡಿದ ಶಿಕ್ಷಣ
ಎನ್ನುವ ಅಮೂಲ್ಯ ಪಾಠ

ಶಿಕ್ಷಕರು ಜ್ಞಾನದೇಗುಲ ಇದ್ದಂತೆ
ಆ ನಿನ್ನಲ್ಲಿರುವ ಜ್ಞಾನವನ್ನು
ಚಿಣ್ಣರು ಎಂಬ ಶಿಲೆಗೆ ನೀ ಆಸರೆಯಾಗಿ
ಅವರನ್ನು ಹೂವಿನಂತೆ ಅರಳಿಸಿದ
ವಿಶ್ವದ ಮಹಾನ್ ಗುರು ನೀನು

ನಿನಗಿದೋ ನನ್ನ ನಮನ

ಅನಿತಾ ಹರೀಶ್ ಭಂಡಾರಿ ಕುತ್ಪಾಡಿ ✍️✍️

- An

05 Sep 2019, 10:25 am

ಗುರು ಇದು ನಿಮಗೆ ಶರಣುಶರಣಾರ್ಥಿ

ಪುಸ್ತಕದ ಪುಟದಲ್ಲಿನ ಪ್ರತಿ ಸಾಲುಗಳನ್ನು ತಿಳಿಸಿದ...
ಮನದೊಳಗೆ ಜ್ಞಾನದ ಅರಿವನ್ನು ಬೆಳೆಸಿದ...
ಬದುಕಲ್ಲಿ ದಿಟ್ಟವಾಗಿ ನಡೆಯುವಂತೆ ಹರಸಿದ...
ಜೀವನದುದ್ದಕ್ಕೂ ನಡೆ-ನುಡಿಯನ್ನು ಕಲಿಸಿದ...
ನುಡಿಯೊಂದಿಗೆ ಉತ್ತಮ ವಿಚಾರವನ್ನು ತಿಳಿಸಿದ...
ಬೋಧನೆಯ ಮೂಲಕ ಸಾಧನೆಯ ಹಾದಿಯಲ್ಲಿ ನಡೆಸಿದ...
ನನ್ನ ಎಲ್ಲ ಗುರುಗಳಿಗೆ ಸಾವಿರ ಸಾವಿರ ಶರಣು ಶರಣಾರ್ಥಿ

- amar kalashetti

05 Sep 2019, 08:19 am

ಗುರುಗಳು

ಮಕ್ಕಳೆಂಬ ಶಿಲೆಗಳ ಕತ್ತಲೆ ಕಡೆದು ಪ್ರಜ್ವಲಿಸಿ ಪ್ರಕಾಶಿಸುವ ಜ್ಞಾನದ ಮೂರ್ತಿಯನ್ನಾಗಿ ಮಾಡುವಾತ ಗುರೂ. ಮಕ್ಕಳ ಮುಗ್ಧ ಮನಸ್ಸಿನಲ್ಲಿ ಪ್ರೀತಿಯಿಂದ ಅಕ್ಷರದ ಸುಧೆಯ ಉಣಿಸಿ ಎಡವಿದರೆ ತಡೆದು ಸಹನೆ ತಾಳ್ಮೆ ಕರುಣೆ ಎಂತಹ ಮಾನವೀಯ ಮೌಲ್ಯಗಳ ಮಕ್ಕಳ ಹೃದಯದೊಳಗೆ ಬೆಳೆಸಿ ಸ್ನೇಹ ಸೌಹಾರ್ದದ ಜೀವನವ ತಿಳಿಸಿ ದೇಶ ಕಾಯುವ ಶಿಸ್ತಿನ ಸಿಪಾಯಿಯಂತೆ ಹೆತ್ತವರ ಉಸಿರಾಗಿ ಊರಿಗೆ ಹೆಸರಾಗಿ ಭಾರತಾಂಬೆಯ ಸುಸಂಸ್ಕೃತ ಸತ್ಪ್ರಜೆಯಾಗಿ ಬದುಕಲು ನಮ್ಮ ಭವಿಷ್ಯ ರೂಪಿಸಿ ದಾತ ಗುರೂ. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

- nagamani Kanaka

04 Sep 2019, 09:18 pm

ನೀನಾದರೂ ಇರಬೇಕಿತ್ತು

ಒಂಟಿ ಜೀವ ಭಾವ
ತುಂಬಿ ಮನವ
ಕೊಡುವಾಗ ನೋವ
ನೀನಾದರೂ ನೋಡಬೇಕಿತ್ತು

ದಿಕ್ಕು ಕೆಟ್ಟ ಹೆಜ್ಜೆ
ಒಂಟಿಯಾದ ಕೈಗಳ
ಜೊತೆ ಜೊತೆಯಾಗಿ
ನೀನಾದರೂ ಬರಬೇಕಿತ್ತು

ಕಣ್ಣುಮುಚ್ಚಿ ಕಂಬನಿಯಲಿ
ಎದೆಯ ಭಾರವ ಇಳಿಸುವಾಗ
ಕೊನೆಯ ಪಕ್ಕ ಕಣ್ಣೀರ ಒರೆಸಲು
ನೀನಾದರೂ ಸನಿಹವಿರಬೇಕಿತ್ತು

ಮಾತಾಗದ ಭಾವವನ್ನೆಲ್ಲ
ಗಂಟಲೊಳಗೆ ಉದುಗಿಸಿ
ಮೌನದಲಿ ಹುಸಿನಗುವಾಗ ನಿಜವ
ನೀನಾದರೂ ತಿಳಿಯಬೇಕಿತ್ತು

ಮನವ ಬೆತ್ತಲಾಗಿಸಲಾಗದೆ
ಕತ್ತಲಲಿ ನಿಟ್ಟುಸಿರ ಜೊತೆ
ಸರಸವಾಡುವಾಗ ಬೆಳಕಿಡಿಯಲು
ನೀನಾದರೂ ಇರಬೇಕಿತ್ತು

ಕೈಗಳ‌ ಹಿಡಿದು
ಎದೆಗಪ್ಪಿ ಹೂಮುತ್ತಿಟ್ಟು
ನಿನ್ನೊಡನೆ ನಾನಿರುವೆನೆಂದು
ನೀನಾದರೂ ಹೇಳಬೇಕಿತ್ತು
ಚಂದಿರ ನೀನಾದರೂ ಹೇಳಬೇಕಿತ್ತು

- ಶ್ರೀಕಾವ್ಯ

04 Sep 2019, 07:55 pm

ನನ್ನಪ್ಪ (ಅಪ್ಪ )

ಸೂಟು ಬೂಟು ತೊಟ್ಟು ಆಫೀಸಿಗೆ ಹೋಗಲಾರನು ನನ್ನಪ್ಪ,
ಎಲ್ಲರಂತೆ ಮಕ್ಕಳ ಮುದ್ದು
ಮಾಡಲಾರಿಯನು ನನ್ನಪ್ಪ,
ದೇವರ ಕರೆಗೆ ಊss ಗೊಟ್ಟು ನಮ್ಮನ್ನೆಲ್ಲ
ಆಗಲಿದ ಸತ್ಯವಂತ ನನ್ನಪ್ಪ.....

:-ವೀಣಾ ಲಿಂಗಣ್ಣ

- Veena

02 Sep 2019, 10:18 pm

ಪ್ರೀತಿ ಬಾಧೆ

ಪ್ರೀತಿಯೇ ಹೀಗೇಕೆ ನನ್ನ ನೀನು ಸೆಳೆವೆ,
ಬೇಡ ಬೇಡ ಬೇಡ ಅಂದ್ರು ಬಳಿಯಲ್ಲಿಯೇ ಸುಳಿವೆ,
ಹೃದಯದೊಳಗೆ ಕಿಡಿ ಹೊತ್ತಿಸಿ ಹೀಗೇಕೆ ಸುಡುವೆ,
ಇನ್ನು ಎಷ್ಟು ಕಾಯಬೇಕು ಎಂದು ನನ್ನ ಬಿಡುವೆ?
ಪ್ರೀತಿ ಸತ್ಯ ಎಂಬ ಗಾದೆ ಮಾತ ನಂಬದಾದೆ,,
ಸಾಕು ಇನ್ನು ತಾಳಲಾರೆ ಈ ಪ್ರೀತಿ ಬಾಧೆ.

ಅವಳು ನನ್ನ ಮರೆತರೂ ಮರೆತಿಲ್ಲ ನನ್ನ ಮನಸು,
ಈಗಲಾದ್ರೂ ಮಾತು ಕೇಳು ನೆನಪ ದೂರ ಕಳಿಸು,
ಹೃದಯದೊಳಗೆ ಇರುವ ಭಾರ ಬೇಗ ಕೆಳಗೆ ಇಳಿಸು,
ಇಲ್ಲದಿದ್ರೆ ನೋವಿನ ಜೊತೆ ಬದುಕೋ ಪಾಠ ಕಲಿಸು.
ಕ್ಷಣ ಕ್ಷಣ ಪ್ರತಿಕ್ಷಣವು ನಾನು ಅವಳಿಗಾಗಿ ಕಾದೆ,
ಸಾಕು ಇನ್ನು ತಾಳಲಾರೆ ಈ ಪ್ರೀತಿ ಬಾಧೆ.

ನನ್ನ ಹಾಗೆ ಪ್ರೀತಿಯಲ್ಲಿ ನೊಂದ ಹಲವು ಜನ,
ಕವಿಗಳಲ್ಲದಿದ್ರು ಬರೆಯುವರು ಸಾಲು ಕವನ,
ಒಳಗೆ ಎಷ್ಟೇ ನೋವಿದ್ದರೂ ಹೊರಗೆ ನಗುವ ಕಲೆ,
ಕಲಿಯಬೇಕು ಪ್ರೀತಿಯಲ್ಲಿ ಸೋತವರಿಂದಲೇ.
ಪ್ರೀತಿ ಉಕ್ಕಿ ಹರಿಯುತ್ತಿರಲು ಜೀವ ಉರಿಯುತ್ತಿದೆ,
ಸಾಕು ಇನ್ನು ತಾಳಲಾರೆ ಈ ಪ್ರೀತಿ ಬಾಧೆ.

ಗಟಕ್ ಸಿಂಗ್

- gataksingh

02 Sep 2019, 05:58 am

ಕವಿಯಾಗ ಬಯಸಿದವಳು

ಬರೆಯುತ್ತಿದ್ದೆ ಯಾವಾಗಲು ನಾ ಕವಿತೆಯನ್ನ
ಆದರೂ ಗುರಿತಿಸಲಿಲ್ಲ ಯಾರು ನನ್ನ ಪ್ರತಿಭೆಯನ್ನ
ಅದರು ನಿಲ್ಲಿಸಲಿಲ್ಲ ನಾ ಬರೆಯುವುದನ್ನ
ಮುಂದಾದರು ಗುರಿತಿಸಬಹುದೇನೋ ಎಂದುಕೊಂಡಿದ್ದೇನೆ ನನ್ನ ಪ್ರತಿಭೆಯನ್ನ.
ಗುರಿತಿಸಿ ಕೊಡಿ ನನಗೆ ಪ್ರೋತ್ಸಾಹವನ್ನ. ನಿಮಗೆ ಕವಿಯಾಗ ಬಯಸುವ ನನ್ನ ನಮನ.
:-ವೀಣಾ ಲಿಂಗಣ್ಣ (ರಾಯಚೂರು )

- Veena

01 Sep 2019, 09:46 am

ನನ್ನವನು (ನನ್ನ ಕಲ್ಪನೆ )

ಅವನನ್ನು ನೋಡುವ ಆತುರ
ಯಾವಾಗ ಕಾಣುವೆ ಎನ್ನುವ ಕಾತುರ
ಮನಸಲಿ ಬಿಡಿಸಲು ಹೋದೆ ನನ್ನವನ ಚಿತ್ತಾರ
ವರ್ಣಿಸಲಾಗುತ್ತಿಲ್ಲ ನನ್ನವನ ಆಕಾರ
ಯಾಕೆಂದರೆ ನನ್ನವನು ಅಷ್ಟು ಸುಂದರ.
-

- Veena

31 Aug 2019, 10:28 pm

ನಮ್ ಮನೆ ಸಣ್ಣಿ

ಸೀರೆಯ ಸೆರಗನು ಸೊಂಟಕೆ ಸಿಕ್ಕಿಸಿ
ಕಟ್ಟಿಗೆ ಒಲೆಯ ಎದುರಲಿ ಕುಳಿತ
ಮುಂಗುರುಳಂಟಿದ ಬೆವರಿದ ಕೆನ್ನೆಯ
ಸಣ್ಣಿಯ ನೋಡಲು ಬಲು ಸೊಗಸು

ಒಲೆಯ ಬೆಂಕಿಯ ಊದಿಯೆ ಹೊತ್ತಿಸಿ
ಕಂಬನಿ ತುಂಬಿದ ಕಂಗಳ ಧರಿಸಿ
ಅಡುಗೆಯ ಮಾಡಲು ಅಣಿಯಾಗಿರುವ
ಸಣ್ಣಿಯ ನೋಡಲು ಬಲು ಸೊಗಸು

- arun

31 Aug 2019, 08:57 am