Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನ ನಲ್ಮೆಯ ತಂಗಿ

ಎಂಥ ಸುಂದರ ನೊಡಿರೀ ಪರಿವಾರ!
ನನ್ನನುಜೆ ಅಲಮೇಲುವಿನಾ ಸಂಸಾರ!!

ರಮಣನಾ ಕೃಷ್ಣ ಸುಂದರ ಶ್ರೀನಿವಾಸ , ಆರತಿಗೊಬ್ಬಳು ನಾಟ್ಯ ಕಲಾಭಿರುಚಿಯ ಅನುಷ್ಕ,
ಕೀರುತಿಗೊಬ್ಬ ನಚಿಕೇತನಂತಿಹ ಜ್ಞಾನದಾಹಿ ಈ ಅನಿಕೇತ!!

ಬಾಲ್ಯದದಲಿ ಬೇಸರವ ನೀಗಿಸಿದ ಗೆಳತಿ
ಯೌವ್ವನದಿ ಕಂಕಣವ ಬೆಸೆಯೆ ಸಹಕರಿಸಿದೊಡತಿ

ಎಲ್ಲರಿಗೆ ಬೇಕಾದ ನಲ್ಮೆಯ ಯಾ ಪುಟ್ಟಿ
ಕಲ್ಲನ್ನು ಕರಗಿಸುವ ಮಾತಿನಾ ಮಲ್ಲಿ...

ನೆನಪಿದೆಯೆ ಸರಿ ರಾತ್ರಿಗಳವರೆಗೂ ನಾವಾಡುತಿದ್ದ ಮಾತುಗಳು...
ಲೆಕ್ಕಿಸದೆ ಅಮ್ಮನಾ ಪಿರಿಪಿರಿಯ ಬೈಗಳು?

ಪ್ರಾಯ ಮಾಗುತಲಿಹುದು ಮಾಸಿಲ್ಲ ನೆನಪು,
ನಾನಾಕೆಯಾ ಜೊತೆ ಕಳೆದ ಒಂದೊಂದು ಕ್ಷಣವು!!

ನೀನು ಜನಿಸಿದ ಎರಡನೆಯ ದಿವಸ ನೋಡಿದ್ದೆ ಅಮ್ಮನ ಮಡಿಲಿನಾ ಪಕ್ಕ
ಆ ನನ್ನ ನೆನಪು ಅಳಿದಿಲ್ಲವಿಂದೂ, ತನುವೆಲ್ಲ ನಿನ್ನಾ ಗುಲಾಬಿಯ ಕೆಂಪು

ಏಕೆ ಜನಿಸಿದೆ ನೀನಾಗ ಎನಗೆ ವರುಷವೆಂಟ್ ಆಗಿ,
ಎಲ್ಲಾರ ಪ್ರೀತಿಯನು ಮುದ್ದಾಗಿ ಒಮ್ಮೆಗೆಲೆ ಬಾಚಿ!

ದ್ವಂದ್ವದಲಿ ತೊಳಲಿತ್ತೆನ್ನ ಮನ, ಇತ್ತ ತಗಿಯೆಂದಾಸೆ
ಅತ್ತ ಈರ್ಷೆಯಲಿ ಕುದಿಯೆ ನೋಡಿ ನಿನ್ನ ಮೇಲೆಲ್ಲಾರ ಪ್ರೀತಿ!!

ಈಗಲೂ ಮರೆತಿಲ್ಲ ರೋಷದಲಿ ನಿನ್ನಯ ತಲೆಗೆ ನಾ ಕೊಟ್ಟ ಪೆಟ್ಟು...
ಅದ ನೆನೆದು ವರುಷಗಳ ತನಕ ನಾ ಪಶ್ಚಾತಾಪ ಪಟ್ಟು

ನಿನ್ನ ಶಾಲೆಗೆ ಕರೆದೂಯ್ವ ಸಂಭ್ರಮ ನನ್ನ ಮನದಲ್ಲಿನ್ನೂ ಹಸಿರು
ನೀ ಕಾಣದಾದಾಗ ಹೆದರಿ ನಿಂತಿತ್ತು ನನ್ನುಸಿರು

ಮತ್ತೆ ಮತ್ತೆ ಹಂಬಲಿಸಿದೆ ಮನವು, ಬರದಾಹುದೆ ಆ ಬಾಲ್ಯ ಮರುಕಳಿಸಿ ಎಂದು

ಗತಿಸಿದಾ ಕ್ಷಣಗಳನು ಮಗದೊಮ್ಮೆ ಮಿಂದು
ಸೆರೆಹಿಡಿದು ಮನದಲ್ಲಿ ಮತ್ತೆ ಎಂದೆಂದೂ!!

ಮುದೊಂದು ಜನ್ಮವಿರೆ ನೀನಾಗು ನನ್ನಕ್ಕ
ನೀ ಮಾಡಿದಾ ಕೀಟಲೆಯನೆಲ್ಲ ನಾ ಮಾರುಕಳಿಸುವಾ ಹಂಬಲ ನಿನಪಕ್ಕ

ಎಲ್ಲಿರಲಿ ನೀವೆಲ್ಲ ಶ್ರೀಹರಿಯು ಕರುಣಿಸಲಿ ನಿಮಗೆಲ್ಲ ಆಯುರಾರೋಗ್ಯ ಐಶ್ವರ್ಯ!!

- ಜೈಮಿನಿ

09 Sep 2019, 11:17 pm

ಮೂಡಲಿ ಭ್ರಾತೃತ್ವ ಭಾವನೆ

ಏನೀ ಅಟ್ಟಹಾಸ..... ಏನೀ ನರ್ತನ.....
ಮೌಲ್ಯಗಳ ಮೂಲೆಗುಂಪಾಗಿಸುವ
ಕಾಮುಕರ ರುದ್ರ ನರ್ತನ
ಮುಗ್ಧ ಮನಸಿನದು ಆರ್ತನಾದ.

ಹೆಣ್ಣು ಪೂಜಿಸುವ ಪುಣ್ಯಭೂಮಿಯಲಿ
ಅಬಲೆ ಕಂದಮ್ಮನ ಆಕ್ರಂದನ
ನಾಗರೀಕತೆಯ ನಾಡಿನಲಿ
ಕಾಮಾಂಧರ ಪೈಶಾಚಿಕ ಕೃತ್ಯ.

ಹೆಣ್ಣ ಗೌರವಿಸು; ಜೀವಿಸಲು ಬಿಡು
ಹೆಣ್ಣು ಸಮಾಜದ ಕಣ್ಣು
ನಿಲ್ಲಿಸು ಅಮಾನವೀಯ ಕೃತ್ಯಗಳ
ಮೂಡಲಿ ಭ್ರಾತೃತ್ವ ಭಾವನೆಗಳು.

- arb vijay

09 Sep 2019, 03:08 pm

ಮೋಹ ಮೋಹ

ಹಣದ ಮೋಹಕೆ ಸಿಲುಕಿದ ವ್ಯಕ್ತಿ,
ಕಳೆದುಕೊಳ್ಳುವನು ದೇವರ ಮೇಲಿನ ಭಕ್ತಿ,
ಇರುವವರೆಗೂ ಹಣದ ಶಕ್ತಿ
ಇರುವ ವರೆಗೂ ಹಣದ ಶಕ್ತಿ,
ಹೊಂದಲಾರನು ಜೀವನದಲ್ಲಿ ಮುಕ್ತಿ.

:-ವೀಣಾ ಲಿಂಗಣ್ಣ

- Veena

09 Sep 2019, 07:50 am

ಮಡಿ ಮಡಿ

ಮಡಿ ಮಡಿ ಎಂದು
ಮನವ ಮೈಲಿಗೆಯ ಮಾಡಿ
ಮಡಿಯುವ ತನಕ
ಮನವ ಮಡಿಯ
ಮಾಡಲು ಮಜ್ಜನ
ಗಂಗೇಚ ಯಮುನೇಚವೆಂದು
ಅದರಿಂದಾಗುವೆಯಾ ನೀ ಸಜ್ಜನ



- ಭಾವಜೀವಿ ಭಾರ್ಗವ

- arb vijay

09 Sep 2019, 12:56 am

ಮನ ಮಸಣವಾಗಿದೆ

ಮುಡಿದ‌ ಮಲ್ಲಿಗೆ
ಮುದುಡಿ ಮರುಗಿದೆ
ಕೈಯಲಿ ಕುಣಿವ
ಬಳೆ ಮೈಮರೆತು ಮಲಗಿದೆ
ಕಾಲಿಗಿಟ್ಟ ಗೆಜ್ಜೆ ಸದ್ದು
ಮರೆತು ಸತ್ತೇ ಹೋಗಿದೆ
ನಿನ್ನೇ ನಿರೀಕ್ಷಿಸಿ ಕಾದ ಕಣ್ಣ
ಕಾಡಿಗೆಯ ಮುಖ ಕಪ್ಪಿಟ್ಟಿದೆ
ನಿನಗಾಗಿ ಕಾದ ಹಾದಿಯಿಲಿ ಸಿಕ್ಕ
ತಂಗಾಳಿ ಮಾತಿಗಿಳಿದು ಅಣಕಿಸಿದಂತಿದೆ
ಜೊತೆಗೂಡಿ ನಲಿವ ಹಕ್ಕಿಗಳ ಚಿಲಿಪಿಲಿಯೂ
ನಿನ್ನ ನೆನೆಸಿ ಜೀವ ಹಿಂಡುತಿದೆ ಗೆಳೆಯ
ನೀ ಬರಬೇಕಿರುವ ಹಾದಿ
ಕಾದು ಸೋತು ಕುಳಿತ
ನನ್ನ ನೋಡಿ ಸ್ಥಬ್ಧವಾಗಿದೆ
ಮಾತಿಗೆ ಕಾದು ನೀರವತೆಯಲಿ
ಬಿಕ್ಕಿ ಅತ್ತು ಮನ ಮಸಣವಾಗಿದೆ ಗೆಳೆಯ
ನಾನೇ ಸತ್ತು ಮಲಗಿದಂತ ಮಸಣವಾಗಿದೆ

- ಶ್ರೀಕಾವ್ಯ

08 Sep 2019, 07:17 pm

ಹೊಗಳಿಕೆ

ಹೊಗಳಿಕೆ ಎಂಬ ಅಟ್ಟದಮ್ಯಾಗ
ನಿನ್ನ ಏರಿಸುವರು!!
ಅಟ್ಟದ ಮ್ಯಾಲಿನ ಚಟ್ಟದಮ್ಯಾಗ
ಜಾಗ ನೀಡುವರು!!
ನಿನಗೆ ಜಾಗ ನೀಡುವರು!!

ಒಂದು ಮಾತಿಗೆ ನೂರು ಸುಳ್ಳಿನ
ಕಥೆಯ ಹೇಳುವರು!!
ಸತ್ಯದ ಕೋಣೆಯ ದೀಪವ ಆರಿಸಿ
ನಿನ್ನ ನೂಕುವರು!!
ಗೆಳೆಯ ನಿನ್ನ ನೂಕುವರು!!

ಮೋಸದ ಬಲೆಯಲಿ ಸಿಲುಕಿಸಿ ನಿನ್ನ
ದಾಸ ಎನ್ನುವರು!!
ಶ್ವಾಸವಿಲ್ಲದ ದೇಹದ ಹಾಗೆ
ಬದುಕ ಮಾಡುವರು!!
ನಿನ್ನಯ ಬದುಕ ಮಾಡುವರು!!

ಸ್ವಾರ್ಥ ತುಂಬಿದ ಲೋಕವು ಇದು
ನಿಸ್ವಾರ್ಥವು ತಿಳಿದಿಲ್ಲ!!
ಅನ್ಯಾಯ ಮಾಡುವ ಜನರ ನಡುವೆ
ನ್ಯಾಯಕೆ ಬೆಲೆ ಇಲ್ಲ!!
ಮನುಜ ನ್ಯಾಯಕೆ ಬೆಲೆ ಇಲ್ಲ!!

- ಪಿ.ಜಿ.ಜ್ಯೋತಿ

08 Sep 2019, 11:27 am

ಇದಕ್ಕೆಲ್ಲ ಉತ್ತರ

ಸಾಯಬೇಕೆಂದು ಕೊಂಡೆ ಸಾವು
ಸುಳಿಯಲಿಲ್ಲ ನನ್ನ ಹತ್ತಿರ,
ನಡುಗಬೇಕೆಂದುಕೊಂಡೆ ಚಳಿಯು
ಸುಳಿಯಲಿಲ್ಲ ನನ್ನ ಹತ್ತಿರ,
ಅಳಬೇಕೆಂದ್ರು ದುಃಖ
ಸುಳಿಯಲಿಲ್ಲ ನನ್ನ ಹತ್ತಿರ,
ಇದಕ್ಕೆಲ್ಲ ಉತ್ತರ
ಇದಕ್ಕೆಲ್ಲ ಉತ್ತರ
ತಾಯಿ ಇರುವಳು ನನ್ನ ಹತ್ತಿರ.
:-ವೀಣಾ ಲಿಂಗಣ್ಣ

- Veena

08 Sep 2019, 10:14 am

ನನ್ನ ಬದುಕಿಸಿ (ಭ್ರೂಣ )

ಮುಂದುವರೆದಿದೆ ವಿಜ್ಞಾನ,
ಮುಂದುವರಿಯುತ್ತಲೇ ಇದೇ ತಂತ್ರಜ್ಞಾನ,
ಇದರಿಂದಲೇ ಹೆಚ್ಚುತ್ತಲಿದೆ ಭ್ರೂಣ ಹತ್ಯೆ ಪ್ರಕರಣ.

:--ವೀಣಾ ಲಿಂಗಣ್ಣ
ರಾಯಚೂರು.

- Veena

07 Sep 2019, 09:20 pm

ನನ್ನರಸಿ - ನಿನ್ನರಸಿ

ಆಕಾಶಕ್ಕೊಂದಷ್ಟುದ್ದ ಏಣಿ ಹಾಕಿಸಿ
ಸೂರ್ಯನ ಸ್ವಲ್ಪ ಪಶ್ಚಿಮದಲ್ಲಿ ಕೂರಿಸಿ
ರೌರವ ಬಿಸಿಲಿಗೆ ಟಾಟ ಮಾಡಿ ತಣಿಸಿ
ಗಗನದ ತುಂಬೆಲ್ಲ ತಿಳಿ ಕೆಂಪು ಬಣ್ಣ ಬಳಿಸಿ
ತುದಿಗೆಲ್ಲ ಬೆಳ್ಳಿ ಕಪ್ಪು ಮೋಡಗಳ ಜೋಡಿಸಿ

ಮಳೆರಾಯನ ಅಷ್ಟೊತ್ತು‌ ಇಷ್ಟೊತ್ತೆನದೆ ಕರೆಸಿ
ಹಸಿರು ಎಲೆಗಳ ಮೇಲೆ ಕೂತ ಧೂಳ‌ ತೊಳೆಸಿ
ಕನ್ನಡೀಲಿ‌ ಲಕಲಕ ಹೊಳೆಯೋದ ತೋರಿಸಿ
ಅಲ್ಲಲ್ಲಿ ಬಣ್ಣಬಣ್ಣದ ಹೂವಗಳಲಿ ಅಲಂಕರಿಸಿ
ಹಾದಿ ಬೀದಿಯಲ್ಲೆಲ್ಲ ದೀಪವ ಬೆಳಗಿಸಿ

ಹಕ್ಕಿ ಪಿಕ್ಕಿಗಳ ಗಾನ ಬಜಾನ ಹಾಡಿಸಿ
ಎಳೆ ಐಕ್ಳ ಕಾಲಿಗೆ ಗೆಜ್ಜೆ ಕಟ್ಟಿ ಕುಣಿಸಿ
ತಂಗಾಳಿ ತಂದು ದಾರಿ ತುಂಬೆಲ್ಲ ಸೂಸಿ
ಚಂದಮಾಮನ ಊಟಕ್ಕೆ ಆಹ್ವಾನಿಸಿ
ಚುಕ್ಕಿಗಳಿಗೆ ಬೆಳಕಿನ ಅಲಂಕಾರ ವಹಿಸಿ

ಎದೆಯೊಳಗೆ ಪ್ರೇಮ ರಂಗಮಂಟಪ ಕಟ್ಟಿಸಿ
ನಿನ್ನ ಸವಿ ಮಾತಿನ ನಿನಾದ ಬಯಸಿ
ಅನುರಾಗದ ಆಲಿಂಗನದ ನೆನಪ ರಮಿಸಿ
ನೀ ಬರುವ ದಾರಿಯಲೇ ನಿನ್ನ‌ ಹರಸಿ
ಕಾದು ಕುಳಿತಿರುವೆ ನಿನಗಾಗಿ ತಪತಪಿಸಿ ನನ್ನರಸಿ

- ಶ್ರೀಕಾವ್ಯ

07 Sep 2019, 06:20 pm

ಕಂಡೆನಾ ಶ್ಯಾಮನ...

ಕಂಡೆನಾ ಶ್ಯಾಮನ
ಮುರಳಿ ಮೋಹನ
ಮಾಧವ ಮುಕುಂದನ
ಹೃದಯ ಕಾಯುವ ಗೋಪಾಲನ

ಮುಗ್ಧ ಮನವ ಗೆದ್ದು
ಮೃದು ಪ್ರೇಮವ ಮೆದ್ದು
ನಿದಿರೆ ಕನಸುಗಳೆಲ್ಲ ಕದ್ದು
ಏನು ತಿಳಿಯದವನಂತೆ ನಟಿಸುವವನ

ತುಟಿಯಂಚಲಿ ನಗುವ ಹರಿಸಿ
ಕಣ್ಣಂಚಲೆ ಒಲವ ಸ್ಫುರಿಸಿ
ಮಾತಲೆ ಮುರಳಿ ನುಡಿಸಿ
ಮೋಡಿ ಮಾಡಿ ಸೆಳೆಯುವವನ

ಕುಂಟು ನೆಪವ ತೋರಿ
ಬಳಿಗೆ ಬಂದು ಜಾರಿ
ತನುವ ಸೋಕಲು ನಾರಿ
ಅವಳನೇ ಅಪಹರಿಸುವ ತುಂಟನ

ನಲುಮೆಯಲಿ ಕೈ ಹಿಡಿದು
ಹುಸಿಮುನಿಸಲಿ ಮನವ ಮಿಡಿದು
ನೋವುನಲಿವಿನಲಿ ಬಾಳ ಹೊಸೆದು
ಹೆಜ್ಜೆಹೆಜ್ಜೆಗೆ ಜೊತೆಯಾಗಿ ಹೊರಟವನ

ಕಂಡೆನ ಶ್ಯಾಮನ
ಮುರುಳಿ ಮೋಹನ
ಮಾಧವ ಮುಕುಂದನ

- ಶ್ರೀಕಾವ್ಯ

06 Sep 2019, 04:41 pm