Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಈ ಮಾಯಾಲೋಕದಲ್ಲಿ ಕಂಡ ಕನಸು ನನಸಾಗುವ ಕಲ್ಪನೆ..
ಚಿಂತೆಗಳ ತೊರೆದು ಚಿಂತನೆಗೆ ಮುನ್ನುಡಿ ಬರೆಯುವ ಸೂಚನೆ..
ಹೊಸ ಕನಸ ಬೇಗೆಗಳಿಗೆ ಹೊಸ ಹರುಷ ನೀಡಿದಂತೆ ಯೋಚನೆ..
ಕನಸ್ಸು ನನಸಾಗುವಂತೆ ಮಾಡುವ ಮನಸ್ಸಿನ ಭಾವನೆ..
ಮನಸ್ಸ ಮಡಿಲೊಳಗೆ ಹೊಸ ಆಲೋಚನೆಗಳ ಮೆರವಣಿಗೆ..
ಮನ ಮಂದಿರದಲ್ಲಿ ಹೊಸ ಆಕಷ೯ಣೆಗಳ ನಡಿಗೆ..
ಬದುಕಿನ ಸುಂದರ ಕ್ಷಣಗಳ ಪಯಣದ ಆರಂಭ..
ಜಗದೆತ್ತರಕ್ಕೆ ತಲುಪಲು ಯತ್ನಿಸುವ ಕನಸ್ಸುಗಳು ಪ್ರಾರಂಭ..
ಮೋಡ ಮುಸುಕಿದ ಕಂಗಳಲ್ಲಿ ಏನಾದರೂ ಸಾಧಿಸುವ ತವಕ..
ಭೂಮಿಯ ಮೇಲೆ ಬೆಳಕು ಮೂಡುವುದಿಲ್ಲವೆ ಎಂಬ ಆತಂಕ..
ಸೋಲು ಗೆಲುವಿನ ಹಾದಿಯ ಎದುರಿಸಿ ನಿಲ್ಲೋ ತುಡಿತ..
ಜೀವನದ ನೋವಿನ ದಿನಗಳು ಮನದ ಕನಸಿನ ಮುರಿತ..
ಕನಸು ನನಸಾಗುವ ಭರವಸೆ ಮನದಲ್ಲಿ ಮೂಡಿದೆ..
ನಂಬಿಕೆಯಿಂದ ಗೆಲ್ಲುವ ಹುರುಪಿನಲ್ಲಿ ಮನ ಹಾಡಿದೆ..
ಬೆಳಕು ನೀಡುತ್ತಿದೆ ಕಣ್ಣುಗಳ ಹೊಸ ಕನಸು..
ಕವಿ ಕಂಡ ಈ ಕನಸು,ತಿರುಕನೋವ೯ನ ಕನಸು..
- HarshithaAcchu
15 Sep 2019, 11:17 am
ಇರಲಿ ಗೆಳತಿ ವಿಶ್ವಾಸ
ಮಾಡಬೇಡ ಗೆಳೆತನಕ್ಕೆ ನೀ ಮೋಸ
ಬೇಡ ಗೆಳತಿ ಮನಃಸ್ಥಾಪ
ನಂತರ ಪಡಬೇಡ ನೀ ಪಾಶ್ಚಾತಾಪ.
:- ವೀಣಾ ಲಿಂಗಣ್ಣ
ರಾಯಚೂರು
- Veena
14 Sep 2019, 02:07 pm
ಹಿಂತಿರುಗಿ ನೋಡದೆ ಹೋದೆ
ಮರಳಿ ಎಂದಿಗೂ ಬಾರದೆಡೆ..
ಕಾಯುತ್ತಾ ನಿಂತಲ್ಲೆ ನಾ ನಿಂತೆ
ನೋಡುತ್ತಾ ನೀ ಹೋದೆಡೆ...
ಇಂದಿಗೂ ಕಾಯುತ್ತಲೇ ಇರುವೆ..
ಮರಳಿ ಸೇರುವೆವು ನಾವೆಂದು..
ನೀ ಎಲ್ಲಿರುವೆಯೋ ನಾನರಿಯೆ...
ಆದರೂ ಅನಿಸಿದೆ ಬಳಿ ಇರುವೆ ನೀನೆಂದು
ಸಿಕ್ಕಿತ್ತೇ ಸೂಚನೆ ಚೂರಾದ ಕೈ ಬಳೆಗೆ
ಶವಯಾತ್ರೆ ನಡೆದಿತ್ತು ಕನಸಲ್ಲಿ ಕಂಡ ಹಾಗೆ..
ಮೃಗವೊಂದು ಚೀರುತ್ತಲಿತ್ತು ಮಲಗದ ಹಾಗೆ
ದರ್ಪಣವೆ ಚೂರಾಯಿತು ತಾನೇ ತನಗೆ
ಹಾರಿ ಹೋಯಿತು ನಂದಾ ದೀಪ
ನಂದಿಸಿ ಹೋದವಳು ನೀನಿರಬಹುದೇ..?
ಬೀಸುವಾ ಆ ಗಾಳಿಯಾದರೂ
ನೀ ಹೋದ ದಾರಿಯ ಗುರುತಿಸಬಹುದೇ...?
- Tribhuvan
13 Sep 2019, 10:51 pm
'ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ'
ನಾಣ್ಣುಡಿಯೊಂದು ಹೇಳುವ ಹಾಗೆ
ವಿದೇಶವೆಂಬ ವ್ಯಾಮೋಹ ಕೆಲವರಿಗೆ
ಕನ್ನಡಿಯೊಳಗಿನ ಗಂಟಿನ ಹಾಗೆ
ಹಕ್ಕಿಯೊಂದು ಗೂಡು ಬಿಟ್ಟು
ಮೊದಲ ಬಾರಿ ಹಾರುವಂತೆ ಹೊರಗೆ
ತಾಯಿ, ತಂದೆ, ಬಂದು ಬಳಗವ ಬಿಟ್ಟು
ಹೋಗುವರಿವರು ಹೊರ ದೇಶಗಳಿಗೆ
ಮರೆವರು ತಮ್ಮ ಭಾಷೆ, ನೆಲ
ಮರೆವರು ತಮ್ಮ ಸಂಸ್ಕೃತಿ ಎಲ್ಲಾ
ಗುಲಾಮರಾಗುವರು ಪರರಿಗೆ
ಸುಪ್ಪತ್ತಿಗೆಯ ಸೆರೆವಾಸ ಇವರಿಗೆ
ಏಕಾಂಗಿ ಬದುಕು ಬಳಲಿ ಖಿನ್ನತೆಯಲಿ
ಜೀವನವನ್ನೇ ಕೊಡುವರು ದುಡಿಮೆಗೆ ಬಲಿ
ಮರಳಿ ತಾನು ಬರಲು ಮುಪ್ಪಿನಲಿ
ಮನೆ ಇರಲು ಖಾಲಿ.. ತಾಯಿ, ತಂದೆ ಬರಿ ನೆನಪಲ್ಲಿ
- Tribhuvan
13 Sep 2019, 10:50 pm
ಕಾಲ್ನಡಿಗೆಯಲ್ಲಿ ಪಾದಯಾತ್ರೆ ಮಾಡ್ತೀರಾ ಸಾವಿರಾರು ಮೆಟ್ಟಿಲುಗಳ ಹತ್ತಿರ,
ಕಾಲ್ನಡಿಗೆಯಲ್ಲಿ ಪಾದಯಾತ್ರೆ ಮಾಡ್ತೀರಾ ಸಾವಿರಾರು ಮೆಟ್ಟಿಲುಗಳ ಹತ್ತಿರ,
ದೇವರ ದರ್ಶನಕ್ಕಾಗಿ ಗಂಟೆಗಟ್ಟಲೆ ಕಾದು ಕೊಡ್ತೀರಾ
ದರ್ಶನ ಪಡೆದು ಮನೆಗೆ ಬರ್ತೀರಾ ತಂದೆ-ತಾಯಿಯ ಕಸಕ್ಕಿಂತ ಕೀಳಾಗಿ ನೋಡ್ತಿರಾ,
ತಂದೆ ತಾಯಿಯಲ್ಲಿ ದೇವರನ್ನು ಕಾಣಬೇಕೆ ವಿನಹ ದೇವರಲ್ಲಿ ತಂದೆ-ತಾಯಿಯನ್ನಲ್ಲ.
:- ವೀಣಾ ಲಿಂಗಣ್ಣ
ರಾಯಚೂರು
- Veena
13 Sep 2019, 02:55 pm
ಅಪ್ಪ ಹೇಳಿದ್ದು ನೆನಪುಂಟು
ವಿದ್ಯೆಯೇ ಮೊದಲು
ಕಲಿತು ಒಳ್ಳೆಯವನಾಗು
ಉತ್ತಮ ಭವಿಷ್ಯ ನಿನಗುಂಟು
ಓದಿದ್ದು ಆಯಿತು ಕಲಿತದ್ದು ಆಯಿತು
ಹರಸುತ್ತ ನಾ ಹೊರಟೆ ಭವಿಷ್ಯ
ಎಲ್ಲೆಲ್ಲೋ ಅಲೆದಾಡಿ ಸಾಕಯ್ತು
ಕೊನೆಗೆ ದಕ್ಕಿದ್ದು ಮಾತ್ರ ಶೂನ್ಯ
ಆಟವಾಯಿತು ಬದುಕು
ಇಳಿ ಜಾರು ಬಂಡಿ
ಎಷ್ಟೆತ್ತರಕ್ಕೆ ಏರಿದರೂ..
ಕೊನೆಗೆ ಸೇರಲೇಬೇಕು ಗುಂಡಿ
ನಾ ತಿಳಿದಂತೆ ಜೀವನದ ಪಾಠ,
ನಮ್ಮಂತೇನೂ ನಡೆಯದು, ಎಲ್ಲವೂ ಮಾಟ
ಕೊರಗದಿರು ಮನವೇ ಶೂನ್ಯವಾದಾಗ ಬದುಕು
ಎಲ್ಲವೂ ಶೂನ್ಯದಿಂದಲೇ ಆರಂಭವಾಗಬೇಕು
- Tribhuvan
13 Sep 2019, 11:05 am
ದೇಹವೆಂಬುದು ತೊಗಲು ಬೊಂಬೆ
ಮನುಷ್ಯ ಸಮಯದ ಕೈ ಗೊಂಬೆ
ನಾನ್ಯಾರು? ನೀನ್ಯಾರು? ಇವನ್ಯಾರು?
ಅವನ್ಯಾರು? ನೆಪವಷ್ಟೇ ನಾವೆಲ್ಲರು..
ಹುಟ್ಟಿದಾಗ ಸಿಹಿ, ಸತ್ತರೆ ಹಾಲು ತುಪ್ಪ
ನಾನು, ನನ್ನದು ಭ್ರಮೆ.. ತಿಳಿ ನೀ ಬೆಪ್ಪ
ನಗು, ಅಳು, ಪ್ರೀತಿ, ರೋಷ, ದ್ವೇಷ
ಮಾನವನ ಮುಖಾಡವಿಲ್ಲದ ವೇಷ
ತನ್ನ ಸುತ್ತಲೂ ತಾನೇ ಹೆಣೆದು ಜೇಡರ ಬಲೆಯ
ಕಳೆದೋಯಿತು ಜೀವನ ಹೆಣೆಯಲು ಬಲೆಯ
ಅದರೊಳು ಸಿಕ್ಕು ಹೊರ ಬರಲೆಲ್ಲಿದೆ ಸಮಯ
ಹುಡುಕಾಟದಲ್ಲೇ ಮುಗಿವುದು ಜೀವನದಧ್ಯಾಯ
ಮಾಯಾ ಜಿಂಕೆಯಂತೆ ಹಣವೆಂಬುದು
ಹಿಡಿಯಲು ಹೋದರೆ ಸುಲಭದಿ ಸಿಗದು
ಸಿಕ್ಕವನಿಗಂತೂ ನೆಮ್ಮದಿ ಕೊಡದು
ಸಿಗದವನಿಗಂತೂ ಕಾಡದೆ ಬಿಡದು
ಇರುವಾಗ ನೀ ನಕ್ಕು ಪರರ ನಗಿಸುತಲಿರು
ಪ್ರೀತಿಸಿ, ಗೌರವಿಸೆಲ್ಲರ ಯಾರನ್ನೂ ದ್ವೇಷಿಸದಿರು
ದ್ರೋಹ, ಮೋಸ, ವಂಚನೆಯ ಮಾಡದಿರು
ಪ್ರೀತಿ ಇದ್ದರೆ ಸಾಕು ಬೇಕಿಲ್ಲ ಬೇರಾವ ದೇವರು
- Tribhuvan
13 Sep 2019, 09:52 am
ಜೊತೆಯಲಿ ಸಪ್ತಪದಿ ಹಾಕಿದಳು,
ಸಾಯುವವರೆಗೂ ಜೊತೆಯಲಿರುವೆನೆಂದು
ಮಾಡಿದಳು ಪ್ರಮಾಣ.
ಕಷ್ಟ ಸುಖ ಏನೇ ಇರಲಿ
ನೋವು-ನಲಿವು ಏನೇ ಬರಲಿ
ಜೊತೆಯಲ್ಲೆ ಇರುವೇನು ಎನ್ನುತ್ತಿದ್ದಳು ನನ್ನರಸಿ,
ಬಂಧು ಬಾಂಧವರ ಆಧಾರಿಸಿ
ಗುರು -ಹಿರಿಯರಿಗೆ ಗೌರವಿಸಿ
ಅಥಿತಿಗಳಿಗೆ ಸತ್ಕಾರಿಸಿ
ತಾಯಿ ಪ್ರೀತಿ ಹಂಚಿದಳು ನನ್ನರಸಿ,
ಮಕ್ಕಳ -ಲಾಲನೆ ಪಾಲನೆ
ನನ್ನ ಎಲ್ಲಾ ಜ್ಞಾನಾರ್ಜಜನೆಗೂ
ಅವಳೇ ಪ್ರೇರಣೆ,
ವಜ್ರ- ವೈಡೂರ್ಯ ಎಂದು ಕೇಳಲಿಲ್ಲ,
ನನ್ನ ಎಲ್ಲಾ ನೋವಿನಲ್ಲೂ
ನನ್ನ ಉರಿದುಂಬಿಸಿದಳಲ್ಲ.
:--ವೀಣಾ ಲಿಂಗಣ್ಣ
ರಾಯಚೂರು.
- Veena
11 Sep 2019, 09:41 am
ಯಾಕೆ ಈ ತರ ಶಿಕ್ಷೆ
ಮಾಡಬೇಡಿ ಹೆಣ್ಣಿನ ತಾಳ್ಮೆ ಪರೀಕ್ಷೆ
ಇನ್ನು ಮುಂದಾದರು ನೀಡಿ,
ಅವಳ ಬಾಳಿನಲ್ಲಿ ನೆಮ್ಮದಿಯ ಭಿಕ್ಷೆ.
:-ವೀಣಾ ಲಿಂಗಣ್ಣ
ರಾಯಚೂರು.
- Veena
10 Sep 2019, 04:55 pm
ಯಾವ ದೇವತೆಯರ ನೆನೆಯಲಿ, ಆಗಿರಬಹುದೆ ಗುರುಗಳಲ್ಲದೆ ನನಗೆ ಈ ಮೂವರೂ ಸ್ಪೂರ್ತಿ??
ನನ್ನಾತ್ಮ ತೊಳಲಾಡಿ ಬೇಯುತಿರಲು ಬೇಗೆಯಯಲಿ,
ನವ ಮಾಸಗಳ ಹೊತ್ತು ತಂದಳು ನನ್ನನೀ ಜಗದಲಿ...
ಮೋಕ್ಷದಾ ಪಯಣದಲಿ ಮೊದಲನೆಯ ವನಿತೆ....
ಈ ಜನ್ಮದಾತೆ!
ತನ್ನೊಡಲ ಕುಡಿಯನು ಎನಗೆ ಧಾರೆಯೆರೆದಾ ತಾಯಿ, ತನ್ನಯಾ ಮಗನಂತೆ ತೋರಿದಳು ಮಮತೆ!!
ಸಾಧ್ಯವೇ ಎನಗೆ ತೀರಿಸಲು ಈ ಋಣವ ?
ಮೋಕ್ಷದಾ ಪಯಣದಲಿ ಎರಡನೆಯ ವನಿತೆ......
ಈ ನನ್ನ ವರವತ್ಸಲೆ!!!
ತನ್ನೆಲ್ಲ ಆಸೆಗಳ ನನಗಾಗಿ ತ್ಯಜಿಸಿ, ಜೀವತೆಯ್ದಳು ಈಕೆ, ನನ್ನಾಸೆ ಭರಿಸೆ,
ಭವ ಸಾಗರವ ಈಜಲು ನನ್ನ ಜೊತೆಯಾದ ಸಖಿಯೆ
ಮೋಕ್ಷದಾ ಪಯಣದಲಿ ಮೂರನೆಯ ವನಿತೆ.....
ಈ ನನ್ನ ಪ್ರಾಣ ವಲ್ಲಭೆ!!
ಈ ಮೂವರಲಿ ಇಹುದೊಂದು ಸಾಮರಸ್ಯ
ಅದುವೆ ಪದಬಂಧದಾ ಹವ್ಯಾಸ .....
ಆಗಿತ್ತೇ ಇದು ನನ್ನ ಸ್ಫೂರ್ತಿ?
- ಜೈಮಿನಿ
09 Sep 2019, 11:43 pm