Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಪ್ರಭಾತ ಕಿರಣಗಳು
ಒಣ ಶಿಖರಗಳ ಚಿತ್ರವ ಬಿಡಿಸಿದಾಗ
ಮರಳ ಹಲಗೆಯಲಿ ನಾ ಕಂಡೆ
ಮೊದಲ ಬಾರಿಗೆ ನಿನ್ನ ಪ್ರತಿರೂಪವ
ಬರಬರುತ್ತಾ ಅಗ್ನಿಯ ತಾಮ್ರ ವರ್ಣಗಳು
ಬೇರುಗಳ ಮೂಲಕ ಗರ್ಭಕ್ಕಿಳಿದು
ಬಾಯಾರಿಕೆ ನೀಗಿಸಿದಾಗ
ಕಂಡೆ ನಾ ಅಸಹಾಯಕತೆಯ ಬಿಂಬವ
ನಿನ್ನೆ ಮೊನ್ನೆಗಳ ಸಂಬಂಧಗಳು
ಒಂದಾನೊಂದು ಕಾಲದ
ಕಥೆಯಂತೆ ವ್ಯಥೆಯಾದಾಗ
ಚಿತ್ರವಾಗಿ ಕಾಡ ತೊಡಗಿತು ವಾಸ್ತವ
ಎಲ್ಲೋ ಕೇಳುತ್ತಿದ್ದ ಸದ್ದು ಗದ್ದಲಗಳು
ಹತ್ತಿರ ಹತ್ತಿರ ಕೇಳಿಸಿ
ಕೊನೆಗೆ ಕಿವಿಯ ಕಚ್ಚಿದಾಗ
ಕಂಡೆ ನಾ ನನ್ನದೇ ಪ್ರತಿಬಿಂಬವ
- basheer
21 Sep 2019, 09:10 am
ಮರುಳ ಮನಗಳ
ದುರುಳ ಆಶೆಗೆ
ಕರುಳ ಬಳ್ಳಿಯು ಉರುಳಿಗೆ
ಮರಣ ನೋವನು
ಒತ್ತಿ ಮನದೊಳು
ಅಬ್ಬೆ ಇತ್ತಳು ಒಪ್ಪಿಗೆ.
ಇರುಳ ಕಾಡಲಿ
ಬಿರಿವ ಹೂವಿಗೂ
ಬೆಳಕ ಕಾಣುವ ಹಂಬಲ
ಯಾರ ನೋವನು
ಯಾರು ಬಲ್ಲರು
ಚರಮ ಗೀತೆಗೂ ಚಂಚಲ.
ವಂಶ ಗೋಪುರ
ಕಟ್ಟಲಾಗದ
ಗತಿಯು ಬರಲಿದೆ ಸನ್ನಿಧಿ
ಹಲ್ಲ ಸೇರುವ
ಭ್ರೂಣ ಬರೆದಿದೆ
ಘೋರ ಕಾಲಕೆ ಮುನ್ನುಡಿ.
- basheer
21 Sep 2019, 09:05 am
ಪುಂಗಿ ಊದುವ
ಹಂಗು ಯಾತಕೆ
ಅಂಗಿ ಕಳಚುವ ದೇಹವೇ
ಜಂಬ ಕರಗಿಸಿ,
ಕೊಬ್ಬು ಜಾರಿಸಿ
ಮನವ ಎಬ್ಬಿಸು ಮೌಢ್ಯವೇ
ಕನಸು ಕಟ್ಟಲು
ನಿನ್ನದೇನಿದೆ
ಯಾರ ಮಣ್ಣಲಿ ಮತ್ಸರ
ಜಗವು ಬೆಳಗುತ,
ಮತ್ತೆ ಬಾಡುತ
ಮಾಯವಾಗುವ ಚಪ್ಪರ
ನಾನು ನನ್ನವ,
ಎಣಿಸಿ ಕೊಂಡವ
ಹಾದಿ ತಪ್ಪಿಸಿ ಬಿಟ್ಟನು
ಗುರಿಯ ತಲುಪದೆ
ಗುಣವ ತಿಳಿಯದೆ
ಕೊನೆಗೆ ತಾನೇ ಕೆಟ್ಟನು
ಹಣತೆ ಉರಿಯಲಿ
ಒರತೆ ಚಿಮ್ಮಲಿ
ಮತ್ತೆ ಚಿಗುರಲಿ ಹೊಮ್ಮತ
ನಿನ್ನೆಯಂತೆಯೆ
ನಾಳೆ ಎಂದರೆ
ಇಂದು ಯಾತಕೆ ಕಮ್ಮಟ
- basheer
20 Sep 2019, 05:47 pm
ನಿನ್ನೆ ಅವಳು
ಮೊಗ್ಗಾಗಿದ್ದವಳು,
ಕಾಣಲೇ ಇಲ್ಲ
ಇಲ್ಲಾರ ಕಣ್ಣಿಗಿವಳು.
ಇಂದು ಮುತೈದೆ
ಆಗ ಹೊರಟಳವಳು,
ಸೇರಲೇ ಇಲ್ಲವಿಲ್ಲಿ
ಯಾರ ಮನದಂಗಳಕ್ಕಿವಳು.
ಸಂಜೆ ಸಡಗರದಿ
ತುಸು ಸೆರಗಿಳಿಸಿ ರಸ್ತೆಗಿಳಿದಳು,
ಮುತ್ತಿದರೆಲ್ಲರಿಲ್ಲಿ
ಹವಳದ ಗೊಂಬೆಯಾದಳು.
ಹೊಟ್ಟೆ ಪಾಡಿನಿಂದಾಗಿ
ಪರಿಸ್ಥಿತಿಗೆ ಸಿಕ್ಕು ಕಲ್ಲಾದಳು,
ನಾಯಿ ಮುಟ್ಟಿದ ಮಡಿಕೆಯಾಗಿ
ಬರೀ ಮಸಣಕ್ಕೆ ಶೃಂಗಾರವಾದಳು.
ನಾಗರಾಜ ಬಿ
ಹಾವೇರಿ
- ನಾಗರಾಜ ಬಾಕೆ೯ರ್
20 Sep 2019, 08:00 am
ಮನೆಯಿಂದ ನಾ ಹೊರಟೆ ಸೈಕಲನ್ನೇರಿ
ಹುಡುಕುತಾ ಅವಳ ಮನೆಯ ದಾರಿ
ನನ್ನ ಹೃದಯದ ಸೈಕಲ್ಲಿಗೆ ಬ್ರೇಕು ಬಿತ್ತು
ಅವಳ ನಗುಮೊಗವ ಕಂಡು.
ಬಂದಳು ನನ್ನ ಮನದಂಗಳದ ಕಸವ ಗುಡಿಸಿ
ಹಳೆಯ ನೆನಪು ಮರೆಸಿ ಪ್ರೀತಿಯ ನೀರನ್ನು ಸಿಡಿಸಿ.
ಕಣ್ಣು ಹೊಡೆದ
ಸೂರ್ಯ ಕುಳಿತು ಅವಳ ಕಣ್ಣ ಹೊಳಪಲಿ
ತಡವಾದರೂ ಮನೆಗೆ ಹೋಗದ ಚಂದ್ರ
ನಗುತಿರುವನು ಅವಳ ದಂತಪಂಕ್ತಿಯಲಿ.
ಸುಳಿದಾಡಿದೆ ಅವಳ ಮನೆಯ ಸುತ್ತ ಬೆಲ್ಲನ್ನು ರಿಂಗಣಿಸಿ
ಹೊರಗೆ ಬರುವಳೇನೋ ಎಂಬ ನಿರೀಕ್ಷೆಯಲಿ.
ಅವಳ ಗೆಜ್ಜೆಯ ಸದ್ದು ನನ್ನ ಹೃದಯದ ಬೆಲ್ ರಿಂಗಣಿಸಿ
ಬಂದಳು ಚುಕ್ಕಿಯ ರಂಗೋಲಿ ಇಡಲು
ಒಂದೊಂದು ಹೆಜ್ಜೆಯನಿಕ್ಕುತಾ ನನ್ನ ಮನದಲಿ.
ಬಳಿ ಹೋಗಿ ನಿಂತೆ ಅವಳ ಮಾತನಾಡಿಸಲು
ಕಳೆದುಹೋಗಿದ್ದೆ ಅವಳ ಕಲ್ಪನೆಯ ಗುಂಗಿನಲಿ.
ರಪ್ಪನೇ ನೀರು ಹೊಡೆದಳು ಮುಖದ ಮೇಲೆ
ನಶೆಯೆಲ್ಲಾ ಇಳಿದು ಹೋಯಿತು ಕಣ್ಣಿಗೆ ಕಂಡದ್ದು ಕಂಡು
ಅರಿವಾಯಿತು ಅದು ಅವಳಲ್ಲ ಅವಳ ಅಜ್ಜಿ ಎಂದು.
- ಉಮೇಶ್ (ಮಣಿ).
- Umesh
19 Sep 2019, 08:09 pm
ಇಬ್ಬನಿ ಸುರಿದು ಹುಲ್ಲಿನ ಮೇಲೆ
ಪೋಣಿಸಿ ಮುತ್ತನು ಹಾಕಿದೆ ಮಾಲೆ!!
ಚುಮು ಚುಮು ಚಳಿ ಕೊರೆವ ವೇಳೆ
ಚಿಲಿಪಿಲಿ ಹಕ್ಕಿಗಳ ಕಲರವದ ಲೀಲೆ..!!
ಅಂಬರದಿ ತೇರ ರವಿ ಏರಿ ಬಂದು
ನಾಚಿ ನೀರಾಗಿ ಇಬ್ಬನಿ ಕರಗಿಹುದು!!
ಮಿರ ಮಿರ ಮಿಂಚಲು ರವಿಯ ಕಿರಣ
ಹುಲ್ಲಿಗೆ ತಾಗಿ ಹೊಮ್ಮಿದೆ ಹೊಂಗಿರಣ..!!
ಗಿರಿ ಪರ್ವತಗಳ ಸಾಲು ಸಹ್ಯಾದ್ರಿಯಲಿ
ನೀಲಾದ್ರಿಯ ಸೊಗಸು ಮುಸ್ಸಂಜೆಯಲಿ!!
ತಲೆದೂಗಿ ಮರಗಳು ಕಾದಿರಲು ಸಾಲಲ್ಲಿ
ವರುಣ ಬರುವನು ಮೇಘಗಳ ಮರೆಯಲ್ಲಿ..!!
ಬೀಸಿ ಬರಲು ತಣ್ಣನೆ ಗಾಳಿ ಸವಿಯಾಗಿ
ಒಮ್ಮೊಮೆ ಹಿತವಾಗಿ ಮತ್ತೊಮ್ಮೆ ಬಿರುಸಾಗಿ!!
ತೇಲಿ ಬರುತಿದೆ ಗಂಧರ್ವರ ಗಾನ ಸೊಗಸಾಗಿ
ಮೈ ಮರೆತು ನಿಂತೆ ಕೇಳುತ್ತಾ ಮೂಕನಾಗಿ..!!
ವನ್ಯಜೀವಿಗಳಿಗೆ ಆಸರೆಯು ಈ ವನ ರಾಣಿ
ನೋಡುಗರ ಮನ ತಣಿಸುವ ಸುಂದರ ಗಣಿ!!
ಬಾನತ್ತ ಮೈ ಚಾಚಿ ಮಲಗಿಹ ಪರ್ವತ ಶ್ರೇಣಿ
ಅದರಂದಕೆ ಸೋತು ಹೊಮ್ಮಿದೆ ಕಾವ್ಯವಾಣಿ..!!
- Tribhuvan
17 Sep 2019, 08:56 pm
ಕರಗಿದೆ ಬಾನು
ಭೂಮಿಯನು ಸೇರಲು ತಾನು!!
ಮುತ್ತಿಡುವ ಮಳೆಹನಿಯೆಲ್ಲ
ಬಿತ್ತಿಹುದು ಹಸಿಹಸಿರನ್ನು!!
ಹುಣ್ಣಿಮೆಯ ಆ ಚಂದ್ರ
ಸಾಗರದ ಹೆಗಲನು ಏರಿ!!
ಅಲೆ ಅಲೆಯ ಹಿಡಿಯಲು ಬಯಸಿ
ಇಳಿದಿಹನು ಬೆಳಕನು ಸುರಿಸಿ!!
ತಂಪಾದ ತಂಗಾಳಿ
ಹೂ ಗಂಧವನು ಆಳಿ!!
ಹರಡಿಹುದು ಎಲ್ಲೆಲ್ಲೂ
ಘಮ ಘಮಸೋ ಪರಿಮಳವ!!
ನನ್ನ ಹೃದಯದ ರಾಗ
ಮಿಡಿದಿಹುದು ಅನುರಾಗ!!
ನುಡಿಯಲದು ಸುಂದರ ಗಾನ
ಅಡಗಿಹುದು ನನ್ನಯ ಪ್ರಾಣ!!
ನೀ ಬಂದು ಸೇರಲು ನನ್ನ
ಬದುಕಿನಲಿ ಸುಂದರ ಬಣ್ಣ!!
ಹೂ ಬನಕೆ ದುಂಬಿಯ ಹಾಗೆ
ನೀ ಬಂದು ಸೇರಿಕೋ ನನ್ನ!!
- ಪಿ.ಜಿ.ಜ್ಯೋತಿ
17 Sep 2019, 10:31 am
ನಾಗರಹಾವಿನ ರಾಮಾಚಾರಿಯಾಗಿ
ತ್ಯಾಗದಲಿ ಕರ್ಣನಾಗಿ
ಊರಿಗೆ ಬಂಗಾರದ ಕಳಶವಾಗಿ
ನ್ಯಾಯಕ್ಕೆ ಸಿಂಹನಾಗಿ
ಗೆಳೆತನಕ್ಕೆ ಬೆಲೆಕೊಡುವ ಹೃದಯವಂತ
ಎಲ್ಲರನ್ನು ಪ್ರೀತಿಯಿಂದ ಕಾಣುವ ಆಪ್ತಮಿತ್ರ
ಕನ್ನಡ ಚಿತ್ರರಂಗಕ್ಕೆ ಸಿಕ್ಕ ಅಮೂಲ್ಯ ರತ್ನ
ಎಂದು ಮರೆಯದ ಮಾಣಿಕ್ಯ
ಕನ್ನಡಿಗರ ಹೃದಯದಲ್ಲಿ ಎಂದೆದೆಂದಿಗೂ ಅಜರಾಮರವಾಗಿ ಉಳಿದಿರುವ ಕರುನಾಡ ಸಿಂಹ.
❤️ಇಂತಿ ನಿಮ್ಮ ಅಭಿಮಾನಿ.✍️✍️✍️
- ಆದರ್ಶಎನ್ಎಸ್
16 Sep 2019, 05:26 pm
ಮೌನದಲೆ ಗುನುಗುವ
ನನ್ನೆದೆಯ ಹಾಡಿಗೆ
ಮಿಡಿದು ಉಸಿರಾಗುವ
ನೀನು ಪ್ರೇಮನುರಾಗ ಬಾಳಿಗೆ
ನಗುವ ಉಣಿಸಿ
ಅಳುವ ಒರೆಸಿ
ನೋವ ಮರೆಸಿ
ಕುಣಿಸುವೆ ಮನವ ತಣಿಸಿ
ಆ ಮೂಗಿನ ತುದಿಯೇ
ಉರಿವ ರವಿಯ ಹಾಗೆ
ಮನವೂ ಒಂದು ನದಿಯೇ
ಹರಿವಳು ಬತ್ತದ ಕರುಣಾಗಂಗೆ
ಮಾತು ಒರತೆ
ಮೌನ ಕೊರತೆ
ಮೌನ ಕೊಲ್ಲುವಾಗ
ನಿನ್ನ ಮಾತೇ ಚೆಲುವಾಗ
ಯಾವ ಪುಣ್ಯವೊ,ಋಣವೊ
ಬಿದ್ದೆ ಬೆನ್ನಿಗೆ ತಂಗಿಯಾಗಿ
ನೋವುನಲಿವಿನಲಿ ಕಾದಾಡಿ ಗುದ್ದಾಡಿ
ಅಳಿಸಿ ರಮಿಸಿ ನಗಿಸಲು ಜೊತೆಯಾಗಿ
ಇಂತಿರುವ ನಿನಗೆ
ಸರಿಯಲಿ ನೋವೆಲ್ಲ ಮರೆಗೆ
ಸಿಗಲಿ ನಗು ಗೆಲುವೆ ಜೊತೆಗೆ
ನೂರಾರು ವರುಷಗಳ ದಾರಿಗೆ
- ಶ್ರೀಕಾವ್ಯ
16 Sep 2019, 04:57 pm
ಕನ್ನಡವೇ ನಮಗೆಲ್ಲ
ಸವಿಯಾದ ಸಿಹಿ ಬೆಲ್ಲ
ಕನ್ನಡಕೆ ಒಂದೇ ಕುಲ
ಕನ್ನಡಿಗರು ನಾವೆಲ್ಲ
ಭಾಷೆ ಹಲವಾರೇ ಇರಲಿ
ಕನ್ನಡವೇ ನಮಗೆ ಮೊದಲಿಲ್ಲಿ
ಸಹ ಬಾಳ್ವೆಯೇ ಧ್ಯೇಯವಿಲ್ಲಿ
ಸಕಲ ಭಾಷಿಗರಿಗೂ ಸಮ ಸ್ಥಾನವಿಲ್ಲಿ
ಸರ್ವಜ್ಞನ ಜ್ಞಾನ, ಬಸವಣ್ಣರ ವಚನ
ಕೇಳವಾ ಕಿವಿಗಿಂಪು ಕನ್ನಡ ಸವಿ ಗಾನ
ದಾಸರ ಪದಗಳು, ಶರೀಫರ ತತ್ವವೆಷ್ಟು ಚೆನ್ನ
ಕಸ್ತೂರಿ ಕನ್ನಡದ ನುಡಿ ನುಡಿವ ನಾಲಗೆಯು ಚಿನ್ನ
ಹಳೆಗನ್ನಡ, ನಡುಗನ್ನಡ, ಹೊಸ ಕನ್ನಡ
ಕಾಲ ಕಾಲಗಳಿಂದ ಬೆಳೆದು ಉಳಿದ ಕನ್ನಡ
ಇಂದು, ಮುಂದು, ಎಂದೆಂದಿಗೂ ಕನ್ನಡ
ಕೆಚ್ಚೆದೆಯ ಕನ್ನಡಿಗನಲ್ಲಿ ಅಚ್ಚಿಳಿದು ಉಳಿದಿದೆ ನೋಡ
ನರಕಕ್ಕೆ ಕಳ್ಸಿ ನಾಲ್ಗೆ ಸೀಳ್ಸಿ ಬಾಯೊಲ್ಸಾಕಿದ್ರೂ
ಮೂಗ್ನಲ್ ಕನ್ನಡ ಪದವಾಡೋರು ನಮ್ ಕನ್ನಡದವ್ರು
ಎಂಥಾ ಸ್ವಾಭಿಮಾನ, ಭಾಷಾಭಿಮಾನಿಗಳು ನಮ್ಮವ್ರು..!
ಕೇಳಲು ಮೈ ನವಿರೇಳುವುದು ಕನ್ನಡವೇ ನಮ್ಮ್ ದೇವ್ರು
- Tribhuvan
15 Sep 2019, 11:07 pm