Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮರಗುವ ಮನ ಮರಗುತಿರುವಾಗ
ನಿನ್ನ ಬರಹಗಳೇ ನನ್ನ ಬದುಕಿನ ಸ್ಫೂರ್ತಿ
ಬದುಕಿರುವೆ ನನ್ನ ಉಳಿವು ಆಗದಿರಲಿ ನಮ್ಮಿಬ್ಬರ ಹೃದಯದ ಅಳಿವು ನನ್ನೆದೆಯ ಬಡಿತವು
ಆಲಿಸಿಹುದು ನಿನ್ನ ತೋಳುಗಳ ಪ್ರೀತಿ
ಎಂದಿಗೂ ಆಗದಿರಲಿ
ನಿನ್ನ ಅಪ್ಪುಗೆ ನನಗೆ ಭೀತಿ
ಮರಗುವ ಮನ ಮರಗುತಿರುವಾಗ
ನಿನ್ನ ಬರಹಗಳೇ ನನ್ನ ಬದುಕಿನ ಸ್ಫೂರ್ತಿ
ಬಾಳೊಂದು ಬಾಯಾರಿಕೆಯ ಧಣಿವು
ನಿನ್ನ ಪ್ರೀತಿಯನ್ನು ಕಾಣಲು ನಾನೇಧೆಯ ಅಳಲು
ಕಾಯುತಿದೆ ನನ್ನ, ನಿನ್ನ ನೆರಳು, ನಾ ಸೇರುವೆ ನಿನ್ನ ಮಡಿಲು
ಮರಗುವ ಮನ ಮರಗುತಿರುವಾಗ
ನಿನ್ನ ಬರಹಗಳೇ ನನ್ನ ಬದುಕಿನ ಸ್ಫೂರ್ತಿ
- Prasad shet
27 Sep 2019, 09:23 am
ಕಾಣದೆ ಕಾಣದೆ ಕಾದಿರುವೆ ಕಣ್ಣ ರೆಪ್ಪೆಯಲ್ಲಿ ಕರಗಬಹುದೇ ನನ್ನ ನೋವು ಕಣ್ಣೀರಿನಲ್ಲಿ
ಕಾಣಲು ಬಹುದೇ ನಿನ್ನೊಡನೆ ಕಳೆದಿರುವ ಕ್ಷಣಗಳ ಮಾಲೆಯಲ್ಲಿ
ಕಂಡರೂ ಕಾಣದೆ ಮರುಗಿಹೆನು ನನ್ನ ಪುಟ್ಟ ಗೂಡಿನಲ್ಲಿ
ಪೂಜಿಸುವೆ, ಸಾದಾ ನೆನೆಯುವೆ, ನೀ ಸಿಗದಿರುವ ಈ ಲೋಕದಲ್ಲಿ ನಾನಾದೆ ಒಂಟಿ
ಬದುಕುತಿರುವೆ ನಿನ್ನ ನೆನಪಲ್ಲೇ ನಾವಿಬ್ಬರು ಜಂಟ್ಟಿ
ಕಾಣದೆ ಕಾಣದೆ ಕಾದಿರುವೆ ಕಣ್ಣ ರೆಪ್ಪೆಯಲ್ಲಿ ಕರಗಬಹುದೇ ನನ್ನ ನೋವು ಕಣ್ಣೀರಿನಲ್ಲಿ.....
ಲವ್ ಯು ಅಪ್ಪ
- Prasad shet
27 Sep 2019, 08:24 am
ನಾನಾರು ನಾನಾರು
ಎಂದು ಹುಡುಕುತ
ಕಳೆಯುತಿಹುದೀ ಕಾಲ
ಕೇಳಿಹೆನು ಪರಶಿವನ
ಎತ್ತಲೀ ಪಯಣ
ಏನ ಮಾಡಿಸೆ ಕೊಟ್ಟೆ
ಈ ನನ್ನ ಜನ್ಮ
ಬಾಲ್ಯದಲಿ ಅನಿಸಿತ್ತು
ಆಟವೇ ಬದುಕೆಂದು
ಯೌವ್ವನದಿ ಪ್ರೇಮವು
ಬೇರೇನು ಬೇಡೆಂದು
ಮಧ್ಯ ವಯಸಸಿನಲಿ
ಐಶ್ವರ್ಯಗಳಿಸೆಂದು
ಇಳಿವಯಸಿನಲ್ಲೀಗ
ತಿಯುತ್ತಲಿದೆಯೆಲ್ಲ
ಶೂನ್ಯವೆಲ್ಲವು ಎಂದು!!
ನೊಂದ ಜೀವಕ್ಕಾಗದೀ
ನಶ್ವರದ ಬದುಕು
ಏಕಿರುವುದೆಂದು
ಬೇಡಿದೆನು ಪರಶಿವನ
ಇಳೆಯೊಳೀ ದೀನರಿರುವನಕ
ಕರುಣಿಸೆನಗೆ ಮರುಜನ್ಮ
ಕೊಡು ನನಗೆ ಶಕ್ತಿಯನು
ದೀನರಾ ಸೇವೆಯನು ಗೈಯೆ
ಅದಲ್ಲವೆ ನನ ಗಮ್ಯ?
- ಜೈಮಿನಿ
27 Sep 2019, 06:43 am
ಯಾರು ಅವನಾರು
ಬಿಗು ಪಂಜರದಿ
ಡವ ಡವ ಗುಬ್ಬಚ್ಚಿಯ
ಬಚ್ಚಿಟ್ಟವನಾರು ?
ಹೇಳು ಅವನ್ಯಾರು
ನೀ ಕಾಣದ ನಿನ್ನೊಳಗೆ
ನವ ರಸ ಭಾವನೆಗಳ
ತುರುಕಿಸಿದ ಅವನಾರು ?
ಯಾರು ಅವನಾರು
ತನಗಾಗಿ ಎಂದೆನುತ
ನಿನಗಾಗಿ ದಂಡಿಸುವವ
ಒಡೆಯನಲ್ಲದೆ ಇನ್ಯಾರು ?
- basheer
26 Sep 2019, 07:06 pm
ಉರಿ ಬಿಸಿಲ ತಾಪದಲಿ
ತಿರುತಿರುಗಿ ನಾ ಅಲೆದೆ!!
ಚೂರು ನೆರಳ ನೀಡಲು
ನನಗೆ ಸೂರು ಇರದೇ!!
ಹಸಿದು ಬಳಲಿದ ನನಗೆ
ತಲೆಯು ತಿರುಗುತಲಿಹುದು!!
ಹಿಡಿಯಷ್ಟು ಉಣ ಬಡಿಸೋ
ಕರವು ಕಾಣದೇ ಇಹುದು!!
ಆರು ಮಕ್ಕಳ ಹಡೆದು
ಹಾಲುಣಿಸಿ ನಾ ದಣಿದೆ!!
ಪಿತನು ಎನಿಸಿದವನು
ತೊರೆದ ಹೊಣೆಯ ಹೊತ್ತೆ!!
ಕಿಳಾಗಿ ಕಾಣುವವರ
ಸೇವೆಯನು ನಾ ಗೈದೆ!!
ಪುಡಿಗಾಸ ಕೂಡಿಡದೇ
ಕರುಳ ಬಳ್ಳಿಗೆ ಸುರಿದೆ!!
ಹರಿದ ಸೀರೆಯ ಹೊಲಿದು
ಯವ್ವನವ ನಾ ಕಳೆದೆ!!
ಮುಪ್ಪಿನಲಿ ಉಪ್ಪೆರೆಯಲು
ಮಕ್ಕಳಿರುವರು ಎಂದು!!
ಹಡೆದಿರುವ ಮಕ್ಕಳಿಗೆ
ಯವ್ವನವು ತುಂಬಿಹುದು!!
ತಡಬಿಡದೇ ಜೊತೆ ನೀಡಿ
ಸಂಭ್ರಮಿಸಿ ನಾ ನಲಿದೆ!!
ಅವರವರ ದಾರಿ ಹಿಡಿದು
ಸಾಗಿದರು ನನ್ನ ತೊರೆದು!!
ಹೆತ್ತವಳಿಗೆ ಆಸರೆಯ
ನೀಡುವುದ ಮರೆತು!!
ಮಡಿಯದಿಹ ಮಮತೆಯ
ಸೆರಗಿನಲಿ ಗಂಟಿಟ್ಟೆ!!
ತಿರುಗಿಯೂ ನೋಡದ
ಮಕ್ಕಳಿಗಾಗಿ ಕಣ್ಣೀರಿಟ್ಟೆ!!
ಹೊದ್ದಿಹರು ಎಲ್ಲರೂ
ಸ್ವಾರ್ಥ ಮೋಹದ ಸೋಗು!!
ಕೇಳುವವರು ಯಾರಿಲ್ಲಿ
ತಾಯ ಅಳಲಿನ ಕೂಗು!!
- ಪಿ.ಜಿ.ಜ್ಯೋತಿ
26 Sep 2019, 05:36 pm
ಪ್ರಾಣ: ತಡೆಯದಿರು ನೀ ನನ್ನನು
ಓ ನನ್ನ ಜೊತೆಗಾರನೇ
ನಿನ್ನಿಂದ ಅಗಲುವ
ಕ್ಷಣವೊಂದು ಬಂದಿದೆ!!
ತನು: ತೊರೆಯದಿರು ನನ್ನನು
ಓ ನನ್ನ ಪ್ರಾಣವೇ
ನೀನಿರದೇ ನಾನಿರಲು
ಅದು ಹೇಗೆ ಸಾಧ್ಯವೇ!!
ಪ್ರಾಣ: ಇಷ್ಟು ದಿನ ನಿನ್ನೊಳಗೆ
ಜೊತೆಯಾಗಿ ನಾನಿದ್ದೆ
ಮರಣದ ಪ್ರೇರಣೆ ಇರಲು
ಹೊರಡಲು ಅಣಿಯಾದೆ!!
ತನು: ಬೆಳಕು ಇರದ ದೀಪಕೆ
ಬೆಲೆ ಇರಲು ಸಾಧ್ಯವೇ
ಪ್ರಾಣ ಇರದ ತನುವಿಗೆ
ನೆಲೆ ಇರಲು ಸಾಧ್ಯವೇ!!
ಪ್ರಾಣ: ಯಾರೋ ಇಟ್ಟ ಸಮ್ಮತಿಯು
ಈ ಜನುಮ ಜೊತೆ ಇದ್ದೆ
ಮತ್ತೆ ಹುಟ್ಟಿ ಬರುವೆ ನಾನು
ನಿನ್ನ ಜೊತೆ ನಡೆಯಲು!!
ತನು: ನೀ ಬರುವ ದಾರಿಯನ್ನು
ಕಾಯುತ ಕುಳಿತರೆ ನಾನು
ಕೊಳೆತು ನಾರಿ ಮಣ್ಣು ಸೇರಿ
ಮರೆ ಆಗುವೆ ಪ್ರಾಣವೇ!!
ಪ್ರಾಣ: ಏನೇ ಇರಲಿ ಹೇಗೇ ಇರಲಿ
ಹೊರಡಬೇಕು ನಾನೀಗ
ತಡೆಯದೇ ಕಳುಹು ನನ್ನ
ಓ ನನ್ನ ಜೊತೆಗಾರ!!
ತನು: ಎದೆಯ ಭಾರ ಸಹಿಸಲದಾದೆ
ಕೊರಳ ನೋವ ದಹಿಸದಾದೆ
ಹೊರಡಲಣಿಯಾಗಿ ನಿಂತ
ನಿನ್ನ ನಾನು ತಡೆಯಲಾರೆ!!
ಪ್ರಾಣ: ಇಷ್ಟು ಕಾಲ ಜೊತೆಗೆ ಬಂದೆ
ಕಷ್ಟ ಸುಖದಿ ಸೇರಿ ಬೆರೆತೆ
ಕ್ಷಮಿಸಿಬಿಡು ನನ್ನ ಇಂದು
ಹೊಗಬೇಕು ನಾನು ನೊಂದು!!
ತನು: ಉಸಿರು ಹೊರಗೆ ಬರದ ಹಾಗೆ
ಉಸಿರ ಕಟ್ಟಿಕೊಳ್ಳುವೆ ನಾನು
ಪ್ರಾಣವೆಂಬ ಚಿಟ್ಟೆ ನೀನು
ಹಾರಿ ಹೋಗು ನನ್ನ ಬಿಟ್ಟು!!
- ಪಿ.ಜಿ.ಜ್ಯೋತಿ
26 Sep 2019, 12:44 pm
ತಿಂಗಳ ಬೆಳಕನ್ನು
ಅಂಗೈಯ ಬೊಗಸೆಯಲಿ
ಹಿಡಿಯಲು ಕಾದು ಕುಳಿತೆ!!
ಕಾಡುತಿಹ ಕನಸೊಂದು
ಅಸ್ಪಷ್ಟ ನೆನಪಿನಲಿ
ಬದುಕಿದೋ ಕುರುಡು ಸಂತೆ!!
ನಿದಿರೆಯಲಿ ಕಂಡಿರುವ
ಕನಸಿನ ಬೆನ್ನು ಹತ್ತಿ
ಓಡಿರಲು ಬರಿಯ ಚಿಂತೆ!!
ಇರುಳ ಕನಸನು ಮರೆತು
ಇರುವ ಬದುಕನು ಅರಿಯೆ
ನಿಜಸುಖವು ದೊರೆತಂತೆ!!
ಒಲೆಯ ಮೇಲೆ ಉಕ್ಕಿ
ಕೊತಕೊತನೆ ಕುದಿಯುತಿಹ
ಬಿಸಿ ಗಂಜಿ ಹಳಸಿದಂತೆ!!
ಮುಗಿಯುವ ಕಾಲದಲಿ
ನಗುವುದ ಮರೆತರೆ
ಮರಳದು ಕಾಲ ಮತ್ತೆ!!
- ಪಿ.ಜಿ.ಜ್ಯೋತಿ
26 Sep 2019, 11:31 am
ಎಂಗಿತ್ತೂ ನನ್ನೂರು
ಎಂಗಾಯ್ತೂ ಈಗ್ನೋಡು
ಗುರ್ತೇನೆ ಸಿಕ್ಕಾಕೆ ಇಲ್ಲಾ....
ಸ್ವರುಗ್ದಂಗೆ ಇದ್ದಿದ್ನ
ನರ್ಕಾನೆ ಮಾಡ್ಬುಟ್ರು
ಮನ್ಸನ್ಗೆ ಕರ್ಣೆನೆ ಇಲ್ವಾ.....
ಬೂಮ್ತಾಯಿ ಹಸ್ರೆಲ್ಲ
ಬರ್ಡಾಗಿ ಓಗ್ಬುಡ್ತು
ಪ್ರಾಣಿಗ್ಳೆ ಕಾಣ್ಸಾಕೇ ಇಲ್ಲಾ.....
ಎಲ್ನೊಡ್ರೂ ಬಿಲ್ಡಿಂಗು
ರೋಡೆಲ್ಲಾ ಟ್ರಾಫಿಕ್ಕು
ಎಲ್ಲೋಗ್ಲಿ ಗೊತ್ತಾಗ್ತಾ ಇಲ್ಲಾ....
ನಾನಾಡ್ತಿದ್ ಜಾರ್ಬಂಡೆ
ನೀನ್ ಹತ್ತಿದ್ ಕಲ್ಲಾನೆ
ಎಲ್ಲೋದ್ವು ಕಾಣ್ತಾನೇ ಇಲ್ಲಾ.....
ಕೆರೆ ದಂಡೆಲ್ ಕೂತ್ಕಂಡು
ಮಿಂಚುಳ್ಳಿಗ್ ಕಲ್ಲೊಡ್ ದು
ನೀರಾಡ್ತಿದ್ ಇಲ್ಲೇನೆ ಅಲ್ವಾ...,
ನಮ್ಕೇರೆ ಕಾಣ್ತಿಲ್ಲ
ಬೆಳ್ಳಕ್ಕಿ ಇನ್ನಿಲ್ಲ
ಕಸ್ಸಾನೇ ತುಂಬ್ಸವ್ರೆ ಎಲ್ಲಾ....
ಅದೇನೂ ಬುಡು ಅಂತ
ಆವಾಗ್ಲೇ ಅನ್ ಕಂಡೆ
ಔರ್ಮನ್ಸಾಗ್ ಕಸ್ ತುಂಬೈತಲ್ವಾ!!
ಇಲ್ಲಿತ್ತೂ ದೇವುಸ್ಥಾನ
ದಿನಾಗ್ಲೂ ಸ್ಕೂಲ್ಗೊಯ್ತ
ನಂಸ್ಕಾರ ಮಾಡ್ತಿದ್ವಿ ಅಲ್ವಾ.....
ದೇವ್ಸ್ಥಾನ ಕೆಡ್ವಾಕಿ
ದೊಡ್ಮಾಲು ಕಟ್ಟವ್ರೆ
ಇವ್ರಿಗೆ ಬುದ್ದೀನೆ ಇಲ್ವಾ....
ಶಾನ್ಬೋಗ್ರ ಮನ್ತಾವ
ಕೆಂಪ್ಡಬ್ಬಿ ಒಂದಿತ್ತು
ಪತ್ರಾಕಕ್ ಓಡ್ತಿದ್ವಿ ಅಲ್ವಾ....
ಆ ಜಾಗ್ದಾಗೀಗಲ್ಲಿ
ಕಸದ್ ಡಬ್ಬಿ ಇಟ್ಟವ್ರೆ
ಕಣ್ಣಾಗೆ ನೀರ್ ಬರಕ್ಕಿಲ್ವಾ.....
ತಿಂಗಳಾಗೆ ಒನ್ದಿವ್ಸ
ಡಬ್ಬಿನಾ ಹೆಗಿಲ್ಗಾಕ್ಕಂಡ್
ಉಸ್ಸೇನಿ ಬರ್ತಿದ್ದ ಗೊತ್ತಾ......
ಐದ್ ಪೈಸಾ ಕೊಟ್ಬಿಟ್ಟು
ಗೊಂಬ್ಯಾಟ ನೊಡ್ಬುಟ್ರೆ
ತಿಂಗ್ಳೆಲ್ಲಾ ಖುಶೀನೆ ಗೊತ್ತಾ.....
ಉಸ್ಸೇನೀ ಅಟ್ಟೀನ
ಉಡಿಕ್ಕಂಡೋಗಿದ್ದೆ
ಇರ್ಬೈದ್ದು ಮಸೀದ್ ತಾವಂತಾ..,
ಅಲ್ನೊಡಿದ್ರೇನೈ ತೆ
ಐನಾಕ್ಸು ಬಂದೈತೆ
ಐನೂರಕ್ಕೊಂದ್ ಟಿಕೆಟ್ಟಂತಾ.....
ಅಂಗೇನೆ ಮುಂದ್ಕೋದೆ
ಇಸ್ಕೂಲೀನ್ ತಾವ್ ಬಂದೆ
ಫ್ರೆಂಡ್ಸಾರಾ ಸಿಕ್ತಾರಾ ಅಂತಾ....
ಆಗ್ಲೇನೆ ಗೊತ್ತಾತು
ಇಸ್ಕೂಲ್ನ ಮಾರ್ ಬುಟ್ಟು
ಕಾಂಪ್ಲಕ್ಸ್ನಾ ಕಟ್ತವ್ರೇ ಅಂತಾ
ರಾಮಜ್ಜನ್ ನಾ ಕೇಳ್ದೆ
ನಾವತ್ತಿದ್ ಗುಡ್ದಾನೂ
ಗುಡ್ದಾಗಿದ್ ಚಿಕ್ಕೋಟೆ
ಕಣ್ಸಾಕೆ ಇಲ್ವಲ್ಲ ಅಂತಾ...
ರಾಮಜ್ಜಾ ಆತ್ಕಂಡ
ಗುಡ್ಡನಾ ಸಿಡ್ಸವ್ರೆ
ರೈಲ್ಪಟ್ರೀ ಆಕಾಕೇ ಅಂತಾ....
ಯಾರನಾ ಹಾಳಾಗ್ಲಿ
ಊರಚೇ ಬಂದಬುಟ್ಟೆ
ಹಣ್ಮಪ್ಪನ್ ನೋಡಾನ ಅಂತಾ....
ಒಟ್ಟೆಲ್ಲಾ ಸಂಕ್ಟಆತು
ಬುಲ್ಡೋಜರ್ ಕೆಳಗ್ ನೋಡಿ
ಹಣ್ಮಪ್ಪಂಗೀಗತಿ ಬಂತಾ?......
ಪ್ರಕೃತಿ ತಾಯ್ ಮ್ಯಾಗೆ
ಆತ್ಯಾಸೆಗ್ ಮನ್ಶಾನೂ
ಅನ್ಯಾಯ ಮಾಡ್ತವ್ನೆ ಅಲ್ವಾ....
ನಾನೂನೂ ಕಾಯ್ತೀವ್ನಿ
ಉಮ್ಮೀದೂ ಮಡಿಕ್ಕಂಡು
ಯಾವಾಗ ನಿಲ್ಸ್ತಾನೆ ಅಂತಾ
ದೇವ್ರೇನೆ ಬಂದ್ ಬುಟ್ಟು
ನನ್ಮುಂದೆ ನಿಂತ್ಕಂಡು
ಕೇಳಿದ್ರೆ ಏನ್ ಬೇಕು ಅಂತಾ....
ಕೇಳ್ತೀನಿ ಅವುನ್ನಾಗ
ನಮ್ಮೂರ್ನ ಮೊದುಲ್ನಂಗೆ
ಮಾಡಾಕೆ ಆಯ್ತೈತಾ ಅಂತಾ.....
ಮಾಡಕೆ ಆಯ್ತ್ತೈತಾ ಅಂತಾ....
- ಜೈಮಿನಿ
24 Sep 2019, 05:29 am
ಒಡೆದ ಹೃದಯ ಮುದುಡಿದ
ಹಾಳೆಯ ಹಾಗೆ,
ಎಷ್ಟೇ ಸರಿ ಮಾಡಿದರೂ
ಮೊದಲಿನ ಹಾಗೆ ಆಗುವುದಿಲ್ಲ.
ಹೃದಯದ ಮೇಲೆ ನೆನಪುಗಳ ಗೆರೆ ಉಳಿಯುವುದು ನಿಶ್ಚಿತ....
....✍ ರಾಮ್
- ರಾಮ್
23 Sep 2019, 09:44 pm
ಎನಿದೆ ನೀ ಇಲ್ಲದೆ
ಮನ ಮುಳ್ಳಿನ ಹಾಸಿಗೆ
ಇರಿದು ಕೊಲ್ಲುತ್ತಿದೆ
ಇರುಳಲ್ಲೂ ಬೇಸಿಗೆ
ಅತ್ತ ಕಣ್ಣು ಕೆಂಪಾಗಿದೆ
ಹೇಳಲಾಗದೆ ಕಾರಣ
ಹೇಳದೇ ಬಾಡಿಹೋಗಿದೆ
ನಮ್ಮ ಮನೆಯ ತೋರಣ
ಪಲ್ಲವಿ ಇಲ್ಲದ ಚರಣ
ಹಾಡದೆ ಅಲ್ಲೆ ಮಲಗಿದೆ
ಪ್ರೀತಿಯ ದನಿ ಕೇಳದೆ
ನನ್ನ ಹೃದಯ ಮರುಗಿದೆ
ಪ್ರೀತಿಯ ತೈಲವು ಸಿಗಲಿ
ದೀಪದಂತೆ ಉರಿಯುವೆ
ಬಾಡಿ ಹೋದ ಬಳ್ಳಿ ನಗಲಿ
ಸಾಕಷ್ಟು ನೀರ ಸುರಿಯುವೆ
ನೀನು ಇಲ್ಲದೇ ಇರುವ ನಾನು
ಆ ರತಿಯು ಇಲ್ಲದ ಮದನ
ನನ್ನ ಮನಸಿನ ನೋವ ಹಾಡನು
ನುಡಿಸಲೊಂದು ಸಾಧನ
✍✍✍ ಚಿನ್ನು
- Chinnu Chinna
23 Sep 2019, 01:27 pm